Homeಮುಖಪುಟಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ...

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ…

- Advertisement -
- Advertisement -

ಜೀವನ ಕಲೆಗಳು : ಅಂಕಣ – 13

ಸಮರ್ಪಕ ಸಂವಹನ ಕಲೆ –2 ಮಾತನಾಡುವುದು,  ಓದುವುದು ಮತ್ತು ಬರೆಯುವುದು.

ಸಂವಹನ ಪ್ರಕ್ರಿಯೆಯಲ್ಲಿ ನಾವು ಸುಮಾರು 45% ಸಮಯ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿರುತ್ತೇವೆ, ಕೇವಲ 30% ಸಮಯ ಮಾತನಾಡುತ್ತಿರುತ್ತೇವೆ, 16% ಸಮಯ ಓದುತ್ತಿರುತ್ತೇವೆ ಮತ್ತು 9% ಸಮಯ ಬರೆಯುತ್ತೇವೆ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಅದೇ ರೀತಿ ಸಕ್ರಿಯ ಕೇಳಿಸಿಕೊಳ್ಳುವಿಕೆಯ ಬಗ್ಗೆಯೂ ತಿಳಿಸಿದ್ದೆ.

ಮಾತನಾಡುವ ಸಮಯದಲ್ಲಿ ನಾವು ಮೂರು ಮಾಧ್ಯಮಗಳನ್ನು ಬಳಸುತ್ತೇವೆ. ಅವೆಂದರೆ ಬ್ಯಾಷ್ಯಾತೀತ ದೈಹಿಕಭಾಷೆ ಅಥವಾ ಬಾಡಿಲಾಂಗ್ವೇಜ್, ಎರಡನೆಯದು ಸ್ವರಬೇಧ/ಶಬ್ದಾಧರಿತ ಧ್ವನಿಗಳ ಏರಿಳಿತ (ಇನ್ಟೊನೇಶನ್). ಮೂರನೆಯದು ಸಂಪೂರ್ಣ ಭಾಷೆಯನ್ನು ಆಧರಿಸಿದ ಮಾತುಕತೆ, ಅದನ್ನು ನಾವು ಓದುವ/ಬರೆಯುವ ಕಲೆ ಎನ್ನಲೂಬಹುದು. ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಬಗ್ಗೆ ಪ್ರತ್ಯೇಕವಾಗಿ ಮುಂದೆತಿಳಿಸುತ್ತೇನೆ.

ಟೋನ್ ಅಥವಾ ನಾದವನ್ನು ಆಧರಿಸಿದ ಧ್ವನಿಯ ಸಮರ್ಪಕ ಏರಿಳಿತದಿಂದ ಸಂವಹನದಲ್ಲಿ ಸಮಯಕ್ಕೆ/ಸಂದರ್ಭಕ್ಕೆ ತಕ್ಕ ಪರಿಣಾಮವನ್ನು ಸೃಷ್ಟಿಸಬಹುದು. ಇದನ್ನು ಸಣ್ಣ ಮಕ್ಕಳು ತಮ್ಮ ಸುತ್ತಮುತ್ತ ಇರುವವರ ಜೊತೆ ಸಂವಹನಕ್ಕೆ ಬಳಕೆ ಮಾಡುವುದನ್ನು ನೋಡಿರಬಹುದು. ಮೂಕ ಪ್ರಾಣಿಗಳು ಸಹ ತಮ್ಮ ವಿವಿಧ ಸದ್ದಿನಿಂದ ತಮ್ಮ ಭಾವನಾತ್ಮಕ ಸಂದೇಶ ರವಾನಿಸುತ್ತವೆ. ಧ್ವನಿಯ ಏರಿಳಿತ, ಉಚ್ಚಾರಣೆಯ ವಿಧಾನ ಮತ್ತು ಕಂಪನಗಳ ನಿಯಂತ್ರಣದಿಂದ ಸಂದೇಶಕ್ಕೆ ಹೆಚ್ಚಿನ ಬಲ ಸಿಕ್ಕು, ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ. ಇದನ್ನು ಭಾವನಾತ್ಮಕ ವಾಚನ ಎಂದೂ ಕರೆಯಬಹುದು. ಗಾಯನ ಸಹ ಇದೇ ಗುಂಪಿಗೆ ಸೇರುತ್ತದೆ. ಧ್ವನಿಯ ಏರಿಳಿತ, ಕಂಪನ ನಿಯಂತ್ರಣವಿಲ್ಲದಿದ್ದರೆ ಭಾಷೆ ನೀರಸ ಮತ್ತು ಏಕತಾನೀಯವಾಗುತ್ತದೆ.

ಮಾತನಾಡುತ್ತಿರುವವರು ನಮ್ಮ ಕಣ್ಮುಂದೆ ಇಲ್ಲದಿದ್ದರೂ ಸ್ವರಬೇಧದಿಂದ ನಾವು ಅವರ ಭಾವನೆಗಳನ್ನು ಅರಿಯಬಹುದು. ಧ್ವನಿಯು ಗದ್ಗದಿತವಾಗಿದ್ದಲ್ಲಿ ಅವರು ದುಃಖದಲ್ಲಿರಬಹುದೆಂತಲೂ, ಮೌನವಾಗಿದ್ದರೆ ಅತೀವ ಸಂತೋಷವಾದಾಗ ಮಾತು ಹೊರಡಲಿಲ್ಲವೇನೋ ಎಂದುಕೊಳ್ಳಬಹುದು. ಭಾವನೆಗಳ ಜೊತೆಗೆ, ವಾಕ್ಯ ಕೇವಲ ಹೇಳಿಕೆಯೋ ಅಥವಾ ಪ್ರಶ್ನಾರ್ಥಕವೋ ಎಂಬುದನ್ನೂ ಸ್ವರಭೇದ ಸೂಚಿಸುತ್ತದೆ. ಆಸಕ್ತಿ, ಉತ್ಸಾಹ ಮುಂತಾದ ಭಾವನೆಗಳನ್ನೂ ಸ್ವರಬೇಧ ಹೊರತರುತ್ತದೆ. ಪದದ ಅರ್ಥ ಪದದಲ್ಲಿ ಅಡಗಿರುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ನಾಮಪದ, ಕ್ರಿಯಾಪದ, ಗುಣವಾಚಕ ಅಥವಾ ಕ್ರಿಯಾ ವಿಶೇಷಣ, ಸಂಧಿ, ಉಪಸರ್ಗ ಮುಂತಾದ ಪದಗಳಿರುತ್ತವೆ. ಯಾವ ಪದದ ಮೇಲೆ ಹೆಚ್ಚು ಒತ್ತು ಬೀಳುತ್ತದೋ ಅದೇ ರೀತಿಯಲ್ಲಿ ವಾಕ್ಯದ ಅರ್ಥ ಬದಲಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಅರ್ಥ ಹೇಳುವವರ ಅಥವಾ/ಮತ್ತು ಕೇಳುವವರ ಮನಸ್ಸಿನಲ್ಲಿ ಅಡಗಿರುತ್ತದೆ. ಮನಃಸ್ಥಿತಿಯ ವ್ಯತ್ಯಾಸದಿಂದ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ತಪ್ಪಾಗಿ ಅರ್ಥೈಸಬಹುದು. ಕೆಲವೊಮ್ಮೆ ಕೇವಲ ಒಂದು ಪದದಲ್ಲಿ ಅನೇಕ ಅರ್ಥಗಳು ಗೂಢೈಸಿರಬಹುದು. ಅದೇ ರೀತಿ ಕಿರುಚುವಿಕೆ ಅಥವಾ ದ್ವನಿಯ ಗಡಸುತನವೂ ಶಕ್ತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಮಾತನಾಡುವ ವೇಗದಿಂದಲೂ ನಮ್ಮ ಉದ್ವೇಗ, ನಿರಾಸಕ್ತಿಯನ್ನು ತೋರಿಸಬಹುದು.

ದೃಶ್ಯ ಮಾಧ್ಯಮದ ಬಳಕೆಯಿಲ್ಲದೇ ಭಾವನೆಗಳ ನವರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ) ಧ್ವನಿಯಲ್ಲಿ ಮೂಡಿಸಬಹುದು. ಅಷ್ಟೇ ಅಲ್ಲ, ಯಾರು ತಮ್ಮ ಧ್ವನಿಯ ಕಂಪನವನ್ನು, ನಿಯಂತ್ರಣದಲ್ಲಿ, ಮೇಲೆ-ಕೆಳಗೆ ಸಮರ್ಪಕವಾಗಿ ಮಾಡಬಲ್ಲರೋ ಅವರು ಇನ್ನೋರ್ವ ವ್ಯಕ್ತಿಯ ಧ್ವನಿಯನ್ನೂ ಪ್ರತಿರೂಪಿಸಬಲ್ಲರು. ಸಿನಿಮಾ/ಟಿವಿ ಯಲ್ಲಿ ಇದನ್ನು “ವಾಯ್ಸ್ ಆರ್ಟಿಸ್ಟ್” ಗಳು ಸಮರ್ಪಕವಾಗಿ ಬಳಸುತ್ತಾರೆ. ಕೀರಲು-ಗಡಸು ಧ್ವನಿಯಿಂದ ಅವರು ಹೆಂಗಸು ಮತ್ತು ಗಂಡಸಿನ ಧ್ವನಿಯಲ್ಲಿ ಹಾಡಲೂ ಬಲ್ಲರು. ಈ ನಿಯಂತ್ರಣ ಅವರಿಗೆ ಸಾಕಷ್ಟು ಪರಿಶ್ರಮದಿಂದ ಬಂದಿರುತ್ತದೆ, ಹಾಗಾಗಿ ಈ ಕಲೆಯನ್ನು ಎಲ್ಲರೂ ಕಲಿಯಬಹುದು.

ಕೆಲವು ಭಾಷೆಗಳಲ್ಲಿ ಹೆಚ್ಚಿನ ನಾದಗಳ (ಟೋನ್) ಬಳಕೆ ಇರುತ್ತದೆ, ಉದಾ: ಚೈನೀಸ್ ಭಾಷೆಯಲ್ಲಿ ಸಾಧಾರಣವಾಗಿ ನಾಲ್ಕು ನಾದಗಳಿದ್ದರೆ, ಲಾಓಸ್, ಥಾಯ್ಲೆಂಡ್, ವಿಯಟ್ನಾಮ್, ಚೈನಾ ಪ್ರದೇಶದಲ್ಲಿ ಮಾತನಾಡುವ ಹಮೊಂಗ್ (ಚೈನೀಸ್) ಭಾಷೆಯಲ್ಲಿ ಉನ್ನತ, ಮಧ್ಯಮ, ಕೆಳಮಟ್ಟದ, ಏರುತ್ತಿರುವ, ಇಳಿಯುತ್ತಿರುವ  ನಾದಗಳ ಸಂಯೋಗದಿಂದ ಒಂದೇ ಪದಕ್ಕೆ ಎಂಟು ಅರ್ಥ ಕಲ್ಪಿಸಬಹುದು. ಆದ್ದರಿಂದ ಧ್ವನಿಯ  ಏರಿಳಿತಗಳನ್ನು ಸರಿಯಾಗಿ ತಿಳಿದಿರಬೇಕು. ಚೈನೀಸ್ ಭಾಷೆಗೆ ಹೋಲಿಸಿದರೆ ಇಂಗ್ಲಿಷ್ ಭಾಷೆಯನ್ನು ನಾದರಹಿತ ಭಾಷೆ ಎಂದೇ ಕರೆಯಬಹುದು. ಆದ್ದರಿಂದ ಇಂಗ್ಲಿಷ್ ಭಾಷಾ ಮೂಲದ ಜನರಿಗೆ ಚೈನೀಸ್ ಭಾಷೆ ಕಲಿಯುವುದು ಕಷ್ಟಕರ ಎನಿಸಬಹುದು. ಒಂದು ಭಾಷೆ ಕರತಲಾಮಲಕವಾಗಿರುವವರಿಗೆ ಇನ್ನೊಂದು ವಿಭಿನ್ನ ಭಾಷೆಯ ಪದಗಳನ್ನು ಉಚ್ಚಾರ ಮಾಡುವುದೂ ಕಷ್ಟವೆನಿಸಬಹುದು. ಉತ್ತರ ಭಾರತದವರು ದಕ್ಷಿಣದ ರಾಜ್ಯಗಳನ್ನು ಕರ್ನಾಟಕ್, ಕೇರಳ್, ಎನ್ನುವುದನ್ನು ನೀವು ಕೇಳಿರಬಹುದು.

ಓದುವುದೂ ಸಹ ಒಂದು ಕಲೆ. ಭಾವನಾತ್ಮಕವಾಗಿ ಬರೆದ ವಾಕ್ಯವನ್ನು ನಿರ್ಜೀವವಾಗಿಸಿ ಓದುವ ಸುದ್ದಿವಾಚಕರೂ ಇದ್ದಾರೆ, ಅದೇ ರೀತಿ ಏನೂ ಇಲ್ಲದ ಸುದ್ದಿಯನ್ನು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಎಂದು ಅರಚುವವರೂ ಇದ್ದಾರೆ. ಆದ್ದರಿಂದ ಗಟ್ಟಿಯಾಗಿ ಓದುವ ಮುಂಚೆ, ಬರೆದಿರುವ ವಾಕ್ಯವನ್ನಷ್ಟೇ ಅಲ್ಲ, ಸಂಪೂರ್ಣ ಪರಿಚ್ಛೇದವನ್ನು ಮನಸ್ಸಿನಲ್ಲಿ ಒಮ್ಮೆ ಓದಿಕೊಂಡು, ಅದರ ಭಾವಾರ್ಥ ಅರಗಿಸಿಕೊಂಡು, ಯಾವ ಪದಗಳಿಗೆ ಎಷ್ಟು ಒತ್ತು ನೀಡಿ, ಯಾವ ಭಾವನೆ ವ್ಯಕ್ತ ಪಡಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಷ್ಟು ಭಾಷಾಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ಲೇಖಕರು ಭಾಷೆಯನ್ನು ಹೇಗೆ ಶಕ್ತಿಶಾಲಿಯಾಗಿ ಬಳಸುತ್ತಾರೆ ಎಂಬುದನ್ನು ಕಲಿಯಬಹುದು.

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ ಬರೆಯಬೇಕೆಂದಿರುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಸಾಕಷ್ಟು ಸಂಶೋಧನೆ ಇಲ್ಲದ ಬರವಣಿಗೆಯಲ್ಲಿ ಶಕ್ತಿ ಇರುವುದಿಲ್ಲ. ಹತ್ತು ಪುಟಗಳಷ್ಟು ಓದಿದರೆ ಒಂದು ಪುಟದಷ್ಟು ಸಾರಾಂಶ ಮಾಡಿಕೊಳ್ಳಬಹುದು. ಹತ್ತು ಪುಟದ ಸಾರಾಂಶವನ್ನು ಬರೆಯಲು ಪ್ರಾರಂಬಿಸಿದರೆ ಒಂದು ಪುಟದ ಲೇಖನವಾಗುತ್ತದೆ. ಅಂದರೆ ಒಂದು ಪುಟ ಬರೆಯಲು ನೂರು ಪುಟ ಓದಬೇಕು. ಆದ್ದರಿಂದ ನಾವು ಬರೆಯುವುದಕ್ಕಿಂತ ಹೆಚ್ಚು ಏಕೆ ಓದುತ್ತೇವೆ ಅಥವಾ ಹೆಚ್ಚು ಮಾತನಾಡುತ್ತೇವೆ ಎಂಬುದು ಸ್ಪಷ್ಟವಾಗಿರಬಹುದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....