Homeಮುಖಪುಟಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ...

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ…

- Advertisement -
- Advertisement -

ಜೀವನ ಕಲೆಗಳು : ಅಂಕಣ – 13

ಸಮರ್ಪಕ ಸಂವಹನ ಕಲೆ –2 ಮಾತನಾಡುವುದು,  ಓದುವುದು ಮತ್ತು ಬರೆಯುವುದು.

ಸಂವಹನ ಪ್ರಕ್ರಿಯೆಯಲ್ಲಿ ನಾವು ಸುಮಾರು 45% ಸಮಯ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿರುತ್ತೇವೆ, ಕೇವಲ 30% ಸಮಯ ಮಾತನಾಡುತ್ತಿರುತ್ತೇವೆ, 16% ಸಮಯ ಓದುತ್ತಿರುತ್ತೇವೆ ಮತ್ತು 9% ಸಮಯ ಬರೆಯುತ್ತೇವೆ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಅದೇ ರೀತಿ ಸಕ್ರಿಯ ಕೇಳಿಸಿಕೊಳ್ಳುವಿಕೆಯ ಬಗ್ಗೆಯೂ ತಿಳಿಸಿದ್ದೆ.

ಮಾತನಾಡುವ ಸಮಯದಲ್ಲಿ ನಾವು ಮೂರು ಮಾಧ್ಯಮಗಳನ್ನು ಬಳಸುತ್ತೇವೆ. ಅವೆಂದರೆ ಬ್ಯಾಷ್ಯಾತೀತ ದೈಹಿಕಭಾಷೆ ಅಥವಾ ಬಾಡಿಲಾಂಗ್ವೇಜ್, ಎರಡನೆಯದು ಸ್ವರಬೇಧ/ಶಬ್ದಾಧರಿತ ಧ್ವನಿಗಳ ಏರಿಳಿತ (ಇನ್ಟೊನೇಶನ್). ಮೂರನೆಯದು ಸಂಪೂರ್ಣ ಭಾಷೆಯನ್ನು ಆಧರಿಸಿದ ಮಾತುಕತೆ, ಅದನ್ನು ನಾವು ಓದುವ/ಬರೆಯುವ ಕಲೆ ಎನ್ನಲೂಬಹುದು. ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಬಗ್ಗೆ ಪ್ರತ್ಯೇಕವಾಗಿ ಮುಂದೆತಿಳಿಸುತ್ತೇನೆ.

ಟೋನ್ ಅಥವಾ ನಾದವನ್ನು ಆಧರಿಸಿದ ಧ್ವನಿಯ ಸಮರ್ಪಕ ಏರಿಳಿತದಿಂದ ಸಂವಹನದಲ್ಲಿ ಸಮಯಕ್ಕೆ/ಸಂದರ್ಭಕ್ಕೆ ತಕ್ಕ ಪರಿಣಾಮವನ್ನು ಸೃಷ್ಟಿಸಬಹುದು. ಇದನ್ನು ಸಣ್ಣ ಮಕ್ಕಳು ತಮ್ಮ ಸುತ್ತಮುತ್ತ ಇರುವವರ ಜೊತೆ ಸಂವಹನಕ್ಕೆ ಬಳಕೆ ಮಾಡುವುದನ್ನು ನೋಡಿರಬಹುದು. ಮೂಕ ಪ್ರಾಣಿಗಳು ಸಹ ತಮ್ಮ ವಿವಿಧ ಸದ್ದಿನಿಂದ ತಮ್ಮ ಭಾವನಾತ್ಮಕ ಸಂದೇಶ ರವಾನಿಸುತ್ತವೆ. ಧ್ವನಿಯ ಏರಿಳಿತ, ಉಚ್ಚಾರಣೆಯ ವಿಧಾನ ಮತ್ತು ಕಂಪನಗಳ ನಿಯಂತ್ರಣದಿಂದ ಸಂದೇಶಕ್ಕೆ ಹೆಚ್ಚಿನ ಬಲ ಸಿಕ್ಕು, ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ. ಇದನ್ನು ಭಾವನಾತ್ಮಕ ವಾಚನ ಎಂದೂ ಕರೆಯಬಹುದು. ಗಾಯನ ಸಹ ಇದೇ ಗುಂಪಿಗೆ ಸೇರುತ್ತದೆ. ಧ್ವನಿಯ ಏರಿಳಿತ, ಕಂಪನ ನಿಯಂತ್ರಣವಿಲ್ಲದಿದ್ದರೆ ಭಾಷೆ ನೀರಸ ಮತ್ತು ಏಕತಾನೀಯವಾಗುತ್ತದೆ.

ಮಾತನಾಡುತ್ತಿರುವವರು ನಮ್ಮ ಕಣ್ಮುಂದೆ ಇಲ್ಲದಿದ್ದರೂ ಸ್ವರಬೇಧದಿಂದ ನಾವು ಅವರ ಭಾವನೆಗಳನ್ನು ಅರಿಯಬಹುದು. ಧ್ವನಿಯು ಗದ್ಗದಿತವಾಗಿದ್ದಲ್ಲಿ ಅವರು ದುಃಖದಲ್ಲಿರಬಹುದೆಂತಲೂ, ಮೌನವಾಗಿದ್ದರೆ ಅತೀವ ಸಂತೋಷವಾದಾಗ ಮಾತು ಹೊರಡಲಿಲ್ಲವೇನೋ ಎಂದುಕೊಳ್ಳಬಹುದು. ಭಾವನೆಗಳ ಜೊತೆಗೆ, ವಾಕ್ಯ ಕೇವಲ ಹೇಳಿಕೆಯೋ ಅಥವಾ ಪ್ರಶ್ನಾರ್ಥಕವೋ ಎಂಬುದನ್ನೂ ಸ್ವರಭೇದ ಸೂಚಿಸುತ್ತದೆ. ಆಸಕ್ತಿ, ಉತ್ಸಾಹ ಮುಂತಾದ ಭಾವನೆಗಳನ್ನೂ ಸ್ವರಬೇಧ ಹೊರತರುತ್ತದೆ. ಪದದ ಅರ್ಥ ಪದದಲ್ಲಿ ಅಡಗಿರುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ನಾಮಪದ, ಕ್ರಿಯಾಪದ, ಗುಣವಾಚಕ ಅಥವಾ ಕ್ರಿಯಾ ವಿಶೇಷಣ, ಸಂಧಿ, ಉಪಸರ್ಗ ಮುಂತಾದ ಪದಗಳಿರುತ್ತವೆ. ಯಾವ ಪದದ ಮೇಲೆ ಹೆಚ್ಚು ಒತ್ತು ಬೀಳುತ್ತದೋ ಅದೇ ರೀತಿಯಲ್ಲಿ ವಾಕ್ಯದ ಅರ್ಥ ಬದಲಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಅರ್ಥ ಹೇಳುವವರ ಅಥವಾ/ಮತ್ತು ಕೇಳುವವರ ಮನಸ್ಸಿನಲ್ಲಿ ಅಡಗಿರುತ್ತದೆ. ಮನಃಸ್ಥಿತಿಯ ವ್ಯತ್ಯಾಸದಿಂದ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ತಪ್ಪಾಗಿ ಅರ್ಥೈಸಬಹುದು. ಕೆಲವೊಮ್ಮೆ ಕೇವಲ ಒಂದು ಪದದಲ್ಲಿ ಅನೇಕ ಅರ್ಥಗಳು ಗೂಢೈಸಿರಬಹುದು. ಅದೇ ರೀತಿ ಕಿರುಚುವಿಕೆ ಅಥವಾ ದ್ವನಿಯ ಗಡಸುತನವೂ ಶಕ್ತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಮಾತನಾಡುವ ವೇಗದಿಂದಲೂ ನಮ್ಮ ಉದ್ವೇಗ, ನಿರಾಸಕ್ತಿಯನ್ನು ತೋರಿಸಬಹುದು.

ದೃಶ್ಯ ಮಾಧ್ಯಮದ ಬಳಕೆಯಿಲ್ಲದೇ ಭಾವನೆಗಳ ನವರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ) ಧ್ವನಿಯಲ್ಲಿ ಮೂಡಿಸಬಹುದು. ಅಷ್ಟೇ ಅಲ್ಲ, ಯಾರು ತಮ್ಮ ಧ್ವನಿಯ ಕಂಪನವನ್ನು, ನಿಯಂತ್ರಣದಲ್ಲಿ, ಮೇಲೆ-ಕೆಳಗೆ ಸಮರ್ಪಕವಾಗಿ ಮಾಡಬಲ್ಲರೋ ಅವರು ಇನ್ನೋರ್ವ ವ್ಯಕ್ತಿಯ ಧ್ವನಿಯನ್ನೂ ಪ್ರತಿರೂಪಿಸಬಲ್ಲರು. ಸಿನಿಮಾ/ಟಿವಿ ಯಲ್ಲಿ ಇದನ್ನು “ವಾಯ್ಸ್ ಆರ್ಟಿಸ್ಟ್” ಗಳು ಸಮರ್ಪಕವಾಗಿ ಬಳಸುತ್ತಾರೆ. ಕೀರಲು-ಗಡಸು ಧ್ವನಿಯಿಂದ ಅವರು ಹೆಂಗಸು ಮತ್ತು ಗಂಡಸಿನ ಧ್ವನಿಯಲ್ಲಿ ಹಾಡಲೂ ಬಲ್ಲರು. ಈ ನಿಯಂತ್ರಣ ಅವರಿಗೆ ಸಾಕಷ್ಟು ಪರಿಶ್ರಮದಿಂದ ಬಂದಿರುತ್ತದೆ, ಹಾಗಾಗಿ ಈ ಕಲೆಯನ್ನು ಎಲ್ಲರೂ ಕಲಿಯಬಹುದು.

ಕೆಲವು ಭಾಷೆಗಳಲ್ಲಿ ಹೆಚ್ಚಿನ ನಾದಗಳ (ಟೋನ್) ಬಳಕೆ ಇರುತ್ತದೆ, ಉದಾ: ಚೈನೀಸ್ ಭಾಷೆಯಲ್ಲಿ ಸಾಧಾರಣವಾಗಿ ನಾಲ್ಕು ನಾದಗಳಿದ್ದರೆ, ಲಾಓಸ್, ಥಾಯ್ಲೆಂಡ್, ವಿಯಟ್ನಾಮ್, ಚೈನಾ ಪ್ರದೇಶದಲ್ಲಿ ಮಾತನಾಡುವ ಹಮೊಂಗ್ (ಚೈನೀಸ್) ಭಾಷೆಯಲ್ಲಿ ಉನ್ನತ, ಮಧ್ಯಮ, ಕೆಳಮಟ್ಟದ, ಏರುತ್ತಿರುವ, ಇಳಿಯುತ್ತಿರುವ  ನಾದಗಳ ಸಂಯೋಗದಿಂದ ಒಂದೇ ಪದಕ್ಕೆ ಎಂಟು ಅರ್ಥ ಕಲ್ಪಿಸಬಹುದು. ಆದ್ದರಿಂದ ಧ್ವನಿಯ  ಏರಿಳಿತಗಳನ್ನು ಸರಿಯಾಗಿ ತಿಳಿದಿರಬೇಕು. ಚೈನೀಸ್ ಭಾಷೆಗೆ ಹೋಲಿಸಿದರೆ ಇಂಗ್ಲಿಷ್ ಭಾಷೆಯನ್ನು ನಾದರಹಿತ ಭಾಷೆ ಎಂದೇ ಕರೆಯಬಹುದು. ಆದ್ದರಿಂದ ಇಂಗ್ಲಿಷ್ ಭಾಷಾ ಮೂಲದ ಜನರಿಗೆ ಚೈನೀಸ್ ಭಾಷೆ ಕಲಿಯುವುದು ಕಷ್ಟಕರ ಎನಿಸಬಹುದು. ಒಂದು ಭಾಷೆ ಕರತಲಾಮಲಕವಾಗಿರುವವರಿಗೆ ಇನ್ನೊಂದು ವಿಭಿನ್ನ ಭಾಷೆಯ ಪದಗಳನ್ನು ಉಚ್ಚಾರ ಮಾಡುವುದೂ ಕಷ್ಟವೆನಿಸಬಹುದು. ಉತ್ತರ ಭಾರತದವರು ದಕ್ಷಿಣದ ರಾಜ್ಯಗಳನ್ನು ಕರ್ನಾಟಕ್, ಕೇರಳ್, ಎನ್ನುವುದನ್ನು ನೀವು ಕೇಳಿರಬಹುದು.

ಓದುವುದೂ ಸಹ ಒಂದು ಕಲೆ. ಭಾವನಾತ್ಮಕವಾಗಿ ಬರೆದ ವಾಕ್ಯವನ್ನು ನಿರ್ಜೀವವಾಗಿಸಿ ಓದುವ ಸುದ್ದಿವಾಚಕರೂ ಇದ್ದಾರೆ, ಅದೇ ರೀತಿ ಏನೂ ಇಲ್ಲದ ಸುದ್ದಿಯನ್ನು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಎಂದು ಅರಚುವವರೂ ಇದ್ದಾರೆ. ಆದ್ದರಿಂದ ಗಟ್ಟಿಯಾಗಿ ಓದುವ ಮುಂಚೆ, ಬರೆದಿರುವ ವಾಕ್ಯವನ್ನಷ್ಟೇ ಅಲ್ಲ, ಸಂಪೂರ್ಣ ಪರಿಚ್ಛೇದವನ್ನು ಮನಸ್ಸಿನಲ್ಲಿ ಒಮ್ಮೆ ಓದಿಕೊಂಡು, ಅದರ ಭಾವಾರ್ಥ ಅರಗಿಸಿಕೊಂಡು, ಯಾವ ಪದಗಳಿಗೆ ಎಷ್ಟು ಒತ್ತು ನೀಡಿ, ಯಾವ ಭಾವನೆ ವ್ಯಕ್ತ ಪಡಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಷ್ಟು ಭಾಷಾಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ಲೇಖಕರು ಭಾಷೆಯನ್ನು ಹೇಗೆ ಶಕ್ತಿಶಾಲಿಯಾಗಿ ಬಳಸುತ್ತಾರೆ ಎಂಬುದನ್ನು ಕಲಿಯಬಹುದು.

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ ಬರೆಯಬೇಕೆಂದಿರುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಸಾಕಷ್ಟು ಸಂಶೋಧನೆ ಇಲ್ಲದ ಬರವಣಿಗೆಯಲ್ಲಿ ಶಕ್ತಿ ಇರುವುದಿಲ್ಲ. ಹತ್ತು ಪುಟಗಳಷ್ಟು ಓದಿದರೆ ಒಂದು ಪುಟದಷ್ಟು ಸಾರಾಂಶ ಮಾಡಿಕೊಳ್ಳಬಹುದು. ಹತ್ತು ಪುಟದ ಸಾರಾಂಶವನ್ನು ಬರೆಯಲು ಪ್ರಾರಂಬಿಸಿದರೆ ಒಂದು ಪುಟದ ಲೇಖನವಾಗುತ್ತದೆ. ಅಂದರೆ ಒಂದು ಪುಟ ಬರೆಯಲು ನೂರು ಪುಟ ಓದಬೇಕು. ಆದ್ದರಿಂದ ನಾವು ಬರೆಯುವುದಕ್ಕಿಂತ ಹೆಚ್ಚು ಏಕೆ ಓದುತ್ತೇವೆ ಅಥವಾ ಹೆಚ್ಚು ಮಾತನಾಡುತ್ತೇವೆ ಎಂಬುದು ಸ್ಪಷ್ಟವಾಗಿರಬಹುದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...