Homeಅಂಕಣಗಳುಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!

ಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯ ಸ್ಪೀಕರ್ ಅವರಿಂದ ಶಿಕ್ಷೆಗೊಳಗಾದ 15 ಶಾಸಕರು ಉಪಚುನಾವಣೆಗೆ ನಿಲ್ಲಬಹುದೆಂದು ತೀರ್ಪು ನೀಡಿದೆ. ಸ್ಪೀಕರ್ ಅವರು ನೀಡಿದ್ದ ತೀರ್ಪನ್ನು ನ್ಯಾಯಾಧೀಶರು ಅಂಗೀಕರಿಸಿದರಾದರೂ ಶಿಕ್ಷೆಯ ಅವಧಿಯನ್ನು ತೀರ್ಮಾನಿಸುವ ಹಕ್ಕು ಅವರಿಗಿಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಶಾಸಕರು ಶಿಕ್ಷಾರ್ಹರು ಆದರೆ Technical ground ಮೇಲೆ ಉಪಚುನಾವಣೆಗೆ ನಿಲ್ಲಲು ಅರ್ಹರು ಎಂದು ಹೇಳಿದ ಹಾಗಾಯಿತು. ಅನೇಕ ಸಾರಿ ಕಾನೂನಿಗನುಸಾರ ಸರಿ ಎನಿಸಿದ್ದು ನೈತಿಕವಾಗಿ ತಪ್ಪಾಗಿರುತ್ತದೆ. ಈಗ ಆಗಿರುವುದೂ ಅದೇ. ನ್ಯಾಯಾಧೀಶರು ತೀರ್ಪು ನೀಡುವ ಸಮಯದಲ್ಲಿ `ನೈತಿಕತೆ ಇಲ್ಲದವರನ್ನು ರಾಜಕೀಯ ಪಕ್ಷಗಳು ಪ್ರೋತ್ಸಾಹಿಸುತ್ತಿವೆ, ಅದರ ಫಲವನ್ನು ಅನುಭವಿಸುತ್ತವೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಈ 15 ಶಾಸಕರು ಸಮಯಸಾಧಕರು. ಮಂತ್ರಿ ಪದವಿ ಸಿಗಲಿಲ್ಲವೆಂದು ಗುಂಪುಗಾರಿಕೆ ಮಾಡುವವರು. ಪಿತೂರಿ ಮಾಡುವವರು. ಇವರನ್ನು ಬಳಸಿಕೊಂಡು ಸಮ್ಮಿಶ್ರ ಸರಕಾರವನ್ನು ಕೆಡವಿ ತಾವು ಅಧಿಕಾರಕ್ಕೆ ಬರುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ಹೇಳಿದರೆನ್ನಲಾದ ಮಾತುಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದವರನ್ನು ಬಿಜೆಪಿ ಶಾಸಕರಾದ ಡಾ. ಅಶ್ವತ್‍ನಾರಾಯಣ್ ಅವರ ಉಸ್ತುವಾರಿಯಲ್ಲಿ ಮುಂಬೈನ ಒಂದು ಹೊಟೇಲ್‍ಗೆ ಕರೆದುಕೊಂಡು ಹೋಗಿ ರೆಸಾರ್ಟ್ ರಾಜಕೀಯ ಮಾಡಿಸಿದ್ದು, ಅವರನ್ನು ಪಕ್ಷಾಂತರ ಮಾಡುವಂತೆ ಪ್ರೇರಣೆ ನೀಡಿದ್ದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‍ಷಾರವರು, ಹಾಗಾಗಿ ನಾವು ಅನರ್ಹ ಶಾಸಕರ ತ್ಯಾಗವನ್ನು ಸ್ಮರಿಸಬೇಕು ಎಂಬುದು ಅವರ ಮಾತಿನ ತಾತ್ಪರ್ಯ.

ಯಡಿಯೂರಪ್ಪನವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿತ್ತು. ಈ ಅಶಿಸ್ತಿನ ಶಾಸಕರು ಶಾಸನಸಭೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಶಾಸಕರ ಸಂಖ್ಯಾಬಲ ಹೆಚ್ಚಾಯಿತು. ಈ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಗುವುದು ಅನಿವಾರ್ಯವಾಯ್ತು. ಬಿಜೆಪಿ ಅಧಿಕಾರಕ್ಕೆ ಬಂತು.

ಈ 15 ಶಾಸಕರು ತಮ್ಮ ಅನರ್ಹತೆ ತೆಗೆದುಹಾಕಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು. ಅವರಿಗೆಲ್ಲ ಈಗ ಉಪಚುನಾವಣೆಗೆ ನಿಲ್ಲಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಅವರೆಲ್ಲ ಪಿತೂರಿ ನಡೆಸಿದಾಗಲೇ ತೀರ್ಮಾನವಾಗಿದ್ದಂತೆ ಈಗ ಬಿಜೆಪಿ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 13 ಮಂದಿಗೆ ಬಿಜೆಪಿ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ.

ಈ 13 ಮಂದಿಯ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಈಗ ಮತದಾರರ ಕೋರ್ಟಿಗೆ ವರ್ಗಾವಣೆಯಾಗಿದೆ.
ಅನೇಕ ಚುನಾವಣೆಗಳನ್ನು ಅರಿತಿರುವ ನನಗೆ ಹೀಗೆನಿಸುತ್ತಿದೆ: ಮತದಾರರನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಮಾಡಿಕೊಳ್ಳುತ್ತವೆ. ಹಣ ಹೆಂಡಕೊಟ್ಟು ಅವರ ಮತವನ್ನು ಕೊಳ್ಳುತ್ತವೆ. 5, 10ರೂ.ಗಳಿಂದ ಆರಂಭವಾದ ಮತದಾರರ ಕೊಳ್ಳುವಿಕೆ ಈಗ ಒಂದು ಮತಕ್ಕೆ 500, 1000ಕ್ಕೆ ಏರಿದೆ. ಇಷ್ಟೆಲ್ಲ ಚುನಾವಣಾ ಭ್ರಷ್ಟಾಚಾರ ಇದ್ದಾಗ್ಯೂ ಕೆಲವೊಮ್ಮೆ ಅನಿರೀಕ್ಷಿತ ಫಲಿತಾಂಶ ಹೊರಬರುವುದನ್ನು ನಾನು ಕಂಡಿದ್ದೇನೆ. ಮತದಾರರೆಲ್ಲ ಮಾತನಾಡಿಕೊಂಡಂತೆ ಕಾಣುವ ಈ ಫಲಿತಾಂಶ ನೋಡಿದಾಗ ಮತದಾರರೆಲ್ಲರೂ ಸಾರಾಸಗಟಾಗಿ ಭ್ರಷ್ಟರು ಎಂದು ಹೇಳಲು ಬರುವುದಿಲ್ಲ.

ಉದಾಹರಣೆಗೆ ಮತದಾತ ಒಂದೇ ಪಕ್ಷಕ್ಕೆ ಪದೇಪದೇ ಮತಹಾಕಿ ನೋಡುತ್ತಾನೆ. ಆ ಪಕ್ಷ ತನ್ನ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಆ ಪಕ್ಷದ ಶಾಸಕರು ಅನೀತಿವಂತರು, ಭ್ರಷ್ಟರು, ಸ್ವಾರ್ಥಿಗಳು ಎಂದು ಕಂಡುಬಂದಾಗ ಮತದಾರರೆಲ್ಲ ಮಾತನಾಡಿಕೊಂಡಂತೆ ಆ ಪಕ್ಷಕ್ಕೆ ಸೋಲುಣಿಸುತ್ತಾರೆ. ಮತದಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದವರಲ್ಲೇ ಯಾರೋ ಒಬ್ಬರಿಗೆ ಮಾತ್ರ ಮತ ನೀಡುವ ಅನಿವಾರ್ಯತೆ ಇರುವುದರಿಂದ ಮತದಾರ ಇನ್ನೊಂದು ಭ್ರಷ್ಟ ಪಕ್ಷದ ಅಭ್ಯರ್ಥಿಗೆ ಮತಹಾಕಿ ಗೆಲ್ಲಿಸುತ್ತಾರೆ. ಕಾಂಗ್ರೆಸ್ 50 ವರ್ಷಕ್ಕೆ ಮೇಲ್ಪಟ್ಟು ಸಕ್ರಿಯ ಚುನಾವಣೆಯಲ್ಲಿ ಗೆದ್ದುಬರುತ್ತಿತ್ತು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ನಿಜ ಜನಸೇವಕರು ಹೆಚ್ಚಾಗಿದ್ದರು. ಅವರು ಚಾರಿತ್ರ್ಯವಂತರಾಗಿದ್ದರು, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತವರಾಗಿದ್ದರು. ಹಣವಿಲ್ಲದಿದ್ದರೂ ಗುಣವಂತರಾಗಿದ್ದರು. ಎಂತಹ ಲಕ್ಷಾಧಿಪತಿ ಇವರ ವಿರುದ್ಧವಾಗಿ ನಿಂತರೂ ಮತದಾತರು ಈ ಸ್ವಾತಂತ್ರ್ಯ ಹೋರಾಟಗಾರನಿಗೇ ತಮ್ಮ ಮತಹಾಕಿ ಗೆಲ್ಲಿಸತ್ತಿದ್ದರು. ಕಾಲಕ್ರಮದಲ್ಲಿ ಹೊಸ ತಲೆಮಾರಿನ ಜನ ಚುನಾವಣೆಗಳಲ್ಲಿ ಸ್ಪರ್ಧಿಸಲು ತೊಡಗಿದರು. ಅವರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಗೊತ್ತಿಲ್ಲ, ತ್ಯಾಗ-ಬಲಿದಾನಗಳ ಪರಿಚಯವಿಲ್ಲ. ಅಪ್ಪನ ಆಸ್ತಿ ದೊರಕಿದೆ ಅದನ್ನು ಉಡಾಯಿಸುವುದು ನನ್ನ ಹಕ್ಕು ಎಂದು ಭಾವಿಸಿಕೊಂಡವರು. ಇವರ ಜೊತೆಗೆ ಅಧಿಕಾರದ ಅಮಲು ಅವರನ್ನು ಮತ್ತಷ್ಟು ಕೆಡಿಸಿತು. ಈ ಸ್ವಾರ್ಥಿಗಳು ಅಧಿಕಾರದ ಲಾಲಸೆಯಿಂದ ಪಕ್ಷಾಂತರ ಮಾಡುವ ಹವ್ಯಾಸ ಬೆಳೆಸಿಕೊಂಡರು. ಈಗ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ಸ್ವಾರ್ಥಿಗಳದೇ ಪಾರುಪತ್ಯ. ಪ್ರಾಮಾಣಿಕರೂ, ನಿಸ್ವಾರ್ಥಿಗಳೂ, ಸಮಾಜಮುಖಿಗಳೂ ಆದ ಸದಸ್ಯರ ಸಂಖ್ಯೆ ಇಳಿಯುತ್ತಾ ಬಂದಿದೆ.

ಈಗ ಕೋಟ್ಯಧಿಪತಿಗಳು ನಮ್ಮ ಪ್ರತಿನಿಧಿಗಳು. ಹಣದ ಮೂಲಕ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿರುವ, ಜಾತಿಯ ಬಲ ಉಳ್ಳ ಇವರು ಮಾತ್ರ ಚುನಾವಣೆಗಳಲ್ಲಿ ಈಗ ಗೆಲ್ಲುವವರು.

ಈಗ ಈ ಉಪಚುನಾವಣೆಗೆ ನಿಂತಿರುವ ಬಿಜೆಪಿಯ 13 ಉಮೇದುದಾರರೂ ಈ ಕಲ್ಯಾಣ ಗುಣಗಳನ್ನು ಹೊಂದಿದವರು! ನಾಲ್ಕಾರು ತಿಂಗಳಿಂದ ಈ ನೀತಿಗೆಟ್ಟ ಶಾಸಕರ ಹುಚ್ಚಾಟವನ್ನು ಮತದಾತರು ನೋಡುತ್ತಿದ್ದಾರೆ. ಇವರು ಪ್ರಜಾಪ್ರತಿನಿಧಿಗಳಾಗಲು ಯೋಗ್ಯರಲ್ಲ ಎಂಬುದನ್ನು ಗಮನಿಸುತ್ತಾ ಬಂದಿದ್ದಾರೆ. ಈ 13 ಕ್ಷೇತ್ರಗಳ ಮತದಾರ ಅವರಿಗೆಲ್ಲ ಪಾಠ ಕಲಿಸುವರೆಂಬ ನಂಬಿಕೆ ನನ್ನದು.
ಮುಖ್ಯಮಂತ್ರಿ ಯಡಿಯೂರಪ್ಪನವರು ನೇರವಾಗಿ ಒಬ್ಬ ಶಾಸಕರನ್ನು ಕೊಳ್ಳುವ ಪ್ರಯತ್ನ ಮಾಡಿದ ಸಿಡಿಯೊಂದಿದೆ. ಅವರ ವಿರುದ್ಧ ಒಂದು ಕಟ್ಳೆಯನ್ನು ಹೂಡಲಾಗಿದೆ.

ಈ 13 ಮಂದಿ ಭ್ರಷ್ಟ ಸ್ವಾರ್ಥಿ ಶಾಸಕರನ್ನು ಬಿಜೆಪಿಗೆ ಎಳೆಯಲು ಅವರನ್ನು ಮುಂಬಯಿನ ಹೊಟೇಲ್ ಒಂದರಲ್ಲಿ ವಾಸ್ತವ್ಯ ಮಾಡಿಸಿದ ಅಮಿತ್ ಷಾ ಅವರ ಗೇಮ್ ಕುರಿತು ಯಡಿಯೂರಪ್ಪನವರು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರೆನ್ನಲಾದ ಧ್ವನಿಮುದ್ರಣವನ್ನು ಲಗತ್ತಿಸಿ ನ್ಯಾಯಾಲಯದಲ್ಲಿ ದೂರನ್ನಿತ್ತಿರುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರು ಮೋದಿ ಮಂತ್ರಿಮಂಡಲದಲ್ಲಿ ಗೃಹಮಂತ್ರಿಯಾಗಿರುವವರು. ಈಗ ಅವರ ಮೇಲೆ 17 ಪ್ರಜಾಪ್ರತಿನಿಧಿಗಳನ್ನು ಭ್ರಷ್ಟರಾಗಿಸಿದ ಆರೋಪ ಕೇಳಿಬಂದಿದೆ. ಮೋದಿಯವರು ಅವರ ಮೇಲೆ ಕ್ರಮಕೈಗೊಳ್ಳುತ್ತಾರಾ? ಅಷ್ಟೊಂದು ಪಾರದರ್ಶಕತೆ, ಪ್ರಾಮಾಣಿಕತೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆರೆಸೆಸ್‍ಗಿದೆಯಾ? ಎಲ್ಲವೂ ಈ ಉಪಚುನಾವಣೆಯಲ್ಲಿ ಮತದಾರ ಕೊಡುವ ತೀರ್ಪನ್ನು ಅವಲಂಬಿಸಿದೆ. ಈಗ ನಾವು ಜಾಗೃತಗೊಳ್ಳದಿದ್ದರೆ ಭವಿಷ್ಯದಲ್ಲಿ ಇದಕ್ಕಿಂತಲೂ ಕೆಟ್ಟ ರಾಜಕೀಯ ಪ್ರಹಸನಗಳಿಗೆ ನಾವೇ ಕಾರಣೀಭೂತರಾಗುತ್ತೇವೆ. ಅಷ್ಟೇ ಅಲ್ಲ ಅಂತಹ ಪ್ರಹಸನಗಳ ಹೊರೆ ನಮ್ಮ ಮಕ್ಕಳ ಹೆಗಲೇರಲಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಂದಷ್ಟು ನೈತಿಕ ರಾಜಕಾರಣವನ್ನು ಉಳಿಸುವ ಗುರುತರವಾದ ಜವಾಬ್ಧಾರಿ ನಮ್ಮೆದುರಿಗಿದೆ. ಮತದಾರನ ತೀರ್ಪಿಗಾಗಿ ನಾನು ಆಶಾವಾದಿಯಾಗಿ ಕಾಯುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...