Homeಮುಖಪುಟಹಿಂದೂಗಳಿಗೆ ಜಾಗ ಮಾಡಿಕೊಡಲು ಮುಸ್ಲಿಂ ವ್ಯಾಪಾರಿಗಳ ಎತ್ತಂಗಡಿ: ಮೂರು ದಶಕ ಬಳಿಕ ಬದುಕು ಅತಂತ್ರ

ಹಿಂದೂಗಳಿಗೆ ಜಾಗ ಮಾಡಿಕೊಡಲು ಮುಸ್ಲಿಂ ವ್ಯಾಪಾರಿಗಳ ಎತ್ತಂಗಡಿ: ಮೂರು ದಶಕ ಬಳಿಕ ಬದುಕು ಅತಂತ್ರ

- Advertisement -
- Advertisement -

ಉತ್ತರ ಪ್ರದೇಶ ರಾಜ್ಯದ ರಾಂಪುರನಗರದ ಜ್ವಾಲಾನಗರ ಪ್ರದೇಶದಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಸುಮಾರು ಮೂರು ದಶಕಗಳಿಂದ ಜೀವನ ಸಾಗಿಸುತ್ತಿದ್ದ ಬೀದಿ ಬದಿ ಮುಸ್ಲಿಂ ವ್ಯಾಪಾರಿಗಳನ್ನು ಒತ್ತಾಯಪೂರ್ವಕವಾಗಿ ಖಾಲಿ ಮಾಡಿಸಲಾಗಿದ್ದು, ಆ ಜಾಗದಲ್ಲಿ ಹಿಂದೂಗಳು ವ್ಯವಹರಿಸಲು ಈ ಕ್ರಮವನ್ನು ಆಡಳಿತ ವರ್ಗ ಜರುಗಿಸಿದೆ ಎಂದು ಹೇಳಿದ್ದಾರೆ. ಇದನ್ನು ಸ್ಥಳೀಯ ಶಾಸಕರು ನಿರಾಕರಿಸಿದ್ದಾರೆ.

“1984ರಿಂದಲೂ ನಾವು ಇಲ್ಲಿ ಬಟ್ಟೆಗಳನ್ನು ಮಾರಾಟ ಮಾಡಿದ್ದೇವೆ. ಈ ಅಂಗಡಿಗಳು ನಮ್ಮ ಜೀವನಾಧಾರವಾಗಿದೆ. ಈಗ ಅದೂ ಇಲ್ಲವಾಗಿದೆ” ಎಂದು ರಶೀದ್ (ಹೆಸರು ಬದಲಿಸಲಾಗಿದೆ) ‘ದಿ ವೈರ್‌’ ಜಾಲತಾಣಕ್ಕೆ ತಿಳಿಸಿದ್ದಾರೆ.

ರಶೀದ್ ಅವರಂತಹ ಮಾರಾಟಗಾರರು ಗೃಹೋಪಯೋಗಿ ವಸ್ತುಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.

“ರಾಮ್-ರಹೀಮ್ ಸೇತು ಪ್ರದೇಶದಲ್ಲಿ ವ್ಯಾಪಾರ ಮಾಡುವ ನನಗೆ ಮತ್ತು ಇತರ ಬೀದಿ ಬದಿ ವ್ಯಾಪಾರಿಗಳಿಗೆ ಜನವರಿ 13ರಂದು ಪುರಸಭೆ ನೋಟಿಸ್ ಕಳಿಸಿದ್ದು, ನಿಮ್ಮ ಅಂಗಡಿಗಳನ್ನು ಮುಚ್ಚಬೇಕು. ಎರಡು ದಿನ ಅವಕಾಶವಿದೆ” ಎಂದು ತಿಳಿಸಿದ್ದಾಗಿ ರಶೀದ್ ಹೇಳುತ್ತಾರೆ.

ಎರಡು ದಿನಗಳ ನಂತರ ಕೆಲವರು ನೋಟಿಸ್ ಅನ್ವಯ ಜಾಗ ತೆರವು ಮಾಡಿದ್ದರು. ಆದರೆ ಜನವರಿ 15 ರಂದು ನಗರಸಭೆಯ 12 ಅಧಿಕಾರಿಗಳು ಮತ್ತು ಎಂಟು ಜನ ಪೊಲೀಸರು ಆಗಮಿಸಿ ಉಳಿದಿದ್ದ ಅಂಗಡಿಗಳನ್ನು ನಾಶಪಡಿಸಿದರು ಎಂದು ರಶೀದ್ ಮತ್ತು ಇತರ ಮಾರಾಟಗಾರರು ಹೇಳುತ್ತಾರೆ.

“ಆ ಜಾಗದಲ್ಲಿ ಅಂಗಡಿ ಮುಂಗಟ್ಟು ಮಾಡಿಕೊಂಡಿದ್ದ ನಾನು ಹಾಗೂ ಇತರರು ಬೀದಿಬದಿ ಅಂಗಡಿಗಳನ್ನು ನಡೆಸಲು ನಗರಸಭೆಗೆ ಶುಲ್ಕ ಪಾವತಿಸಿದ್ದರೂ ಈ ಹಠಾತ್ ಕ್ರಮ ಜರುಗಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ಕ್ರಮದಿಂದಾಗಿ 69 ಮಂದಿ ಬೀದಿಬದಿ ವ್ಯಾಪಾರಿಗಳು ತೊಂದರೆಗೀಡಾಗಿದ್ದಾರೆ” ಎಂದು ಅಮರ್ ಉಜಾಲಾ ಪತ್ರಿಕೆಯ ವರದಿ ತಿಳಿಸಿದೆ.

ಹೊರಹಾಕಲ್ಪಟ್ಟವರಲ್ಲಿ ಒಬ್ಬರಾದ ಹಸ್ಮತ್‌ (ಹೆಸರು ಬದಲಿಸಲಾಗಿದೆ) ಪ್ರತಿಕ್ರಿಯಿಸಿದ್ದು, “ಟ್ರಾಲಿಗಳಲ್ಲಿ ಸರಕುಗಳನ್ನು ಮಾರಾಟ ಮಾಡಲು ಹಿಂದೂ ಮಾರಾಟಗಾರರಿಗೆ ಅಂತಿಮವಾಗಿ ಅದೇ ಪ್ರದೇಶದಲ್ಲಿ ಅವಕಾಶ ನೀಡಲಾಯಿತು. ಮುಸ್ಲಿಮರ ಜಾಗವನ್ನು ಹೊಸ ಹಿಂದೂ ಮಾರಾಟಗಾರರಿಗೆ ಹಂಚಲಾಗಿದೆ” ಎಂದು ದೂರಲಾಗಿದೆ.

“ನಮ್ಮ ಜಾಗಗಳನ್ನು ಬೇರೆಯವರಿಗೆ ನೀಡಲಾಗಿದೆ” ಎನ್ನುವ ಹಸ್ಮತ್‌, “ನಮ್ಮ ಅಂಗಡಿಗಳು ಇದ್ದ ಜಾಗದಲ್ಲಿ ಬಜರಂಗದಳದವರು ಟ್ರಾಲಿಗಳನ್ನು ತಂದಿದಟ್ಟಿದ್ದಾರೆ” ಎನ್ನುತ್ತಾರೆ.

“ಕವಾರ್ ಯಾತ್ರೆಯ ಸಮಯದಲ್ಲಿ ನಾವು ನಮ್ಮ ಅಂಗಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದೆವು, ನಾವು ಅವರಿಗಾಗಿ ಬಟ್ಟೆ ಮತ್ತು ಧ್ವಜಗಳನ್ನು ಸಹ ತಯಾರಿಸುತ್ತೇವೆ. ಆದರೆ ನಮ್ಮನ್ನು ಏಕೆ ಹೀಗೆ ಹೊರದೂಡಲಾಯಿತು” ಎಂದು ಪ್ರಶ್ನಿಸುತ್ತಾರೆ.

ಮುಸ್ಲಿಂ ಮಾರಾಟಗಾರರು ಮತ್ತೆ ಈ ಸ್ಥಳಕ್ಕೆ ಹಿಂತಿರುಗದಂತೆ ನೋಡಿಕೊಳ್ಳಲು ಈ ಪ್ರದೇಶಕ್ಕೆ ಬಜರಂಗದಳದವರ ಕಾರುಗಳು ವಾಡಿಕೆಯಂತೆ ಭೇಟಿ ನೀಡುತ್ತಿವೆ ಎಂದು ಹಸ್ಮತ್ ಆತಂಕ ವ್ಯಕ್ತಪಡಿಸಿದ್ದಾರೆ.

“ಸಹಾಯಕ್ಕಾಗಿ ರಾಂಪುರ ಶಾಸಕ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಇಬ್ಬರನ್ನೂ ಸಂಪರ್ಕಿಸಿದ್ದೇವೆ, ಆದರೆ ಇಲ್ಲಿಯವರೆಗೆ ಮನವಿಯನ್ನು ನಿರ್ಲಕ್ಷಿಸಲಾಗಿದೆ” ಎಂದು ಮಾರಾಟಗಾರರು ದೂರಿದ್ದಾರೆ.

ಭಾರತೀಯ ಜನತಾ ಪಕ್ಷದ ಶಾಸಕ ಆಕಾಶ್ ಸಕ್ಸೇನಾ ಅವರು ಮುಸ್ಲಿಂ ಮಾರಾಟಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಹಿಂದೂ ಮಾರಾಟಗಾರರಿಗೆ ಮಾತ್ರ ಅವರ ಜಾಗಗಳನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಕೆಲವು ಮುಸ್ಲಿಂ ಮಾರಾಟಗಾರರು ತಿಳಿಸಿದ್ದಾರೆ.

ತನ್ನ ಸ್ಥಳಕ್ಕೆ ಹಿಂತಿರುಗಲು ಸಾಧ್ಯವಾದ ಮಾರಾಟಗಾರ ದಿಲೀಪ್ ಸಕ್ಸೇನಾ, “ಹಿಂದಿರುಗಿದ ನಂತರ ತಾನು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ಶಾಸಕರು ಶಾಂತಿಯ ಭರವಸೆ ನೀಡಿದ್ದಾರೆ” ಎಂದು ‘ದಿ ವೈರ್‌’ಗೆ ಮಾಹಿತಿ ನೀಡಿದ್ದಾರೆ.

“ಶಾಸಕ ಸಕ್ಸೇನಾ ಅವರು ಆ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ” ಎಂದು ಮುಸ್ಲಿಂ ಮಾರಾಟಗಾರರ ಒಂದು ವಿಭಾಗವು ಆರೋಪಿಸಿದೆ. “ಶುಚಿಗೊಳಿಸುವ ಸಮಯ ಬಂದಿದೆ” ಎಂದು ಶಾಸಕರು ಹೇಳಿರುವುದಾಗಿ ದೂರಲಾಗುತ್ತಿದೆ. ಆದರೆ ಸ್ವತಃ ಶಾಸಕರೇ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲರ ಪರವಾಗಿ ತಾವು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

“ನಾನು ನಗರವನ್ನು ಸುಂದರಗೊಳಿಸಲು ಕೆಲಸ ಮಾಡುತ್ತಿದ್ದೇನೆ ಮತ್ತು ಯಾರನ್ನೂ ಅವರ ಸ್ಥಳದಿಂದ ಸ್ಥಳಾಂತರಿಸುವುದಿಲ್ಲ. ಹೇಗಾದರೂ, ಯಾರಾದರೂ ಹಾಗೆ ಭಾವಿಸಿದರೆ, ಸಹಾಯಕ್ಕಾಗಿ ನನ್ನ ಬಳಿಗೆ ಬರಲು ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ. ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡುತ್ತೇನೆ. ರಾಂಪುರದಲ್ಲಿ ರಾಮ್ ಮತ್ತು ರಹೀಮ್ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ ಮತ್ತು ನಾನು ಎಲ್ಲರ ಸಮುದಾಯದ ನಾಯಕನಾಗಲು ಬಯಸುತ್ತೇನೆ” ಎಂದಿದ್ದಾರೆ ಸಕ್ಸೇನಾ.

“ನಮ್ಮ ಕ್ಷೇತ್ರದಲ್ಲಿರುವ ಸುಮಾರು 250 ಬೀದಿಬದಿ ವ್ಯಾಪಾರಿಗಳಲ್ಲಿ ಸುಮಾರು 100 ಮಂದಿ ಮುಸ್ಲಿಮರು ಮತ್ತು 150 ಮಂದಿ ಹಿಂದೂಗಳು ಇದ್ದಾರೆ” ಎಂದು ಅವರು ಸಮಜಾಯಿಸಿ ನೀಡಿದ್ದಾರೆ.

ವರದಿ ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...