Homeಮುಖಪುಟಹಿಂದೂಗಳಿಗೆ ಜಾಗ ಮಾಡಿಕೊಡಲು ಮುಸ್ಲಿಂ ವ್ಯಾಪಾರಿಗಳ ಎತ್ತಂಗಡಿ: ಮೂರು ದಶಕ ಬಳಿಕ ಬದುಕು ಅತಂತ್ರ

ಹಿಂದೂಗಳಿಗೆ ಜಾಗ ಮಾಡಿಕೊಡಲು ಮುಸ್ಲಿಂ ವ್ಯಾಪಾರಿಗಳ ಎತ್ತಂಗಡಿ: ಮೂರು ದಶಕ ಬಳಿಕ ಬದುಕು ಅತಂತ್ರ

- Advertisement -
- Advertisement -

ಉತ್ತರ ಪ್ರದೇಶ ರಾಜ್ಯದ ರಾಂಪುರನಗರದ ಜ್ವಾಲಾನಗರ ಪ್ರದೇಶದಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಸುಮಾರು ಮೂರು ದಶಕಗಳಿಂದ ಜೀವನ ಸಾಗಿಸುತ್ತಿದ್ದ ಬೀದಿ ಬದಿ ಮುಸ್ಲಿಂ ವ್ಯಾಪಾರಿಗಳನ್ನು ಒತ್ತಾಯಪೂರ್ವಕವಾಗಿ ಖಾಲಿ ಮಾಡಿಸಲಾಗಿದ್ದು, ಆ ಜಾಗದಲ್ಲಿ ಹಿಂದೂಗಳು ವ್ಯವಹರಿಸಲು ಈ ಕ್ರಮವನ್ನು ಆಡಳಿತ ವರ್ಗ ಜರುಗಿಸಿದೆ ಎಂದು ಹೇಳಿದ್ದಾರೆ. ಇದನ್ನು ಸ್ಥಳೀಯ ಶಾಸಕರು ನಿರಾಕರಿಸಿದ್ದಾರೆ.

“1984ರಿಂದಲೂ ನಾವು ಇಲ್ಲಿ ಬಟ್ಟೆಗಳನ್ನು ಮಾರಾಟ ಮಾಡಿದ್ದೇವೆ. ಈ ಅಂಗಡಿಗಳು ನಮ್ಮ ಜೀವನಾಧಾರವಾಗಿದೆ. ಈಗ ಅದೂ ಇಲ್ಲವಾಗಿದೆ” ಎಂದು ರಶೀದ್ (ಹೆಸರು ಬದಲಿಸಲಾಗಿದೆ) ‘ದಿ ವೈರ್‌’ ಜಾಲತಾಣಕ್ಕೆ ತಿಳಿಸಿದ್ದಾರೆ.

ರಶೀದ್ ಅವರಂತಹ ಮಾರಾಟಗಾರರು ಗೃಹೋಪಯೋಗಿ ವಸ್ತುಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.

“ರಾಮ್-ರಹೀಮ್ ಸೇತು ಪ್ರದೇಶದಲ್ಲಿ ವ್ಯಾಪಾರ ಮಾಡುವ ನನಗೆ ಮತ್ತು ಇತರ ಬೀದಿ ಬದಿ ವ್ಯಾಪಾರಿಗಳಿಗೆ ಜನವರಿ 13ರಂದು ಪುರಸಭೆ ನೋಟಿಸ್ ಕಳಿಸಿದ್ದು, ನಿಮ್ಮ ಅಂಗಡಿಗಳನ್ನು ಮುಚ್ಚಬೇಕು. ಎರಡು ದಿನ ಅವಕಾಶವಿದೆ” ಎಂದು ತಿಳಿಸಿದ್ದಾಗಿ ರಶೀದ್ ಹೇಳುತ್ತಾರೆ.

ಎರಡು ದಿನಗಳ ನಂತರ ಕೆಲವರು ನೋಟಿಸ್ ಅನ್ವಯ ಜಾಗ ತೆರವು ಮಾಡಿದ್ದರು. ಆದರೆ ಜನವರಿ 15 ರಂದು ನಗರಸಭೆಯ 12 ಅಧಿಕಾರಿಗಳು ಮತ್ತು ಎಂಟು ಜನ ಪೊಲೀಸರು ಆಗಮಿಸಿ ಉಳಿದಿದ್ದ ಅಂಗಡಿಗಳನ್ನು ನಾಶಪಡಿಸಿದರು ಎಂದು ರಶೀದ್ ಮತ್ತು ಇತರ ಮಾರಾಟಗಾರರು ಹೇಳುತ್ತಾರೆ.

“ಆ ಜಾಗದಲ್ಲಿ ಅಂಗಡಿ ಮುಂಗಟ್ಟು ಮಾಡಿಕೊಂಡಿದ್ದ ನಾನು ಹಾಗೂ ಇತರರು ಬೀದಿಬದಿ ಅಂಗಡಿಗಳನ್ನು ನಡೆಸಲು ನಗರಸಭೆಗೆ ಶುಲ್ಕ ಪಾವತಿಸಿದ್ದರೂ ಈ ಹಠಾತ್ ಕ್ರಮ ಜರುಗಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ಕ್ರಮದಿಂದಾಗಿ 69 ಮಂದಿ ಬೀದಿಬದಿ ವ್ಯಾಪಾರಿಗಳು ತೊಂದರೆಗೀಡಾಗಿದ್ದಾರೆ” ಎಂದು ಅಮರ್ ಉಜಾಲಾ ಪತ್ರಿಕೆಯ ವರದಿ ತಿಳಿಸಿದೆ.

ಹೊರಹಾಕಲ್ಪಟ್ಟವರಲ್ಲಿ ಒಬ್ಬರಾದ ಹಸ್ಮತ್‌ (ಹೆಸರು ಬದಲಿಸಲಾಗಿದೆ) ಪ್ರತಿಕ್ರಿಯಿಸಿದ್ದು, “ಟ್ರಾಲಿಗಳಲ್ಲಿ ಸರಕುಗಳನ್ನು ಮಾರಾಟ ಮಾಡಲು ಹಿಂದೂ ಮಾರಾಟಗಾರರಿಗೆ ಅಂತಿಮವಾಗಿ ಅದೇ ಪ್ರದೇಶದಲ್ಲಿ ಅವಕಾಶ ನೀಡಲಾಯಿತು. ಮುಸ್ಲಿಮರ ಜಾಗವನ್ನು ಹೊಸ ಹಿಂದೂ ಮಾರಾಟಗಾರರಿಗೆ ಹಂಚಲಾಗಿದೆ” ಎಂದು ದೂರಲಾಗಿದೆ.

“ನಮ್ಮ ಜಾಗಗಳನ್ನು ಬೇರೆಯವರಿಗೆ ನೀಡಲಾಗಿದೆ” ಎನ್ನುವ ಹಸ್ಮತ್‌, “ನಮ್ಮ ಅಂಗಡಿಗಳು ಇದ್ದ ಜಾಗದಲ್ಲಿ ಬಜರಂಗದಳದವರು ಟ್ರಾಲಿಗಳನ್ನು ತಂದಿದಟ್ಟಿದ್ದಾರೆ” ಎನ್ನುತ್ತಾರೆ.

“ಕವಾರ್ ಯಾತ್ರೆಯ ಸಮಯದಲ್ಲಿ ನಾವು ನಮ್ಮ ಅಂಗಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದೆವು, ನಾವು ಅವರಿಗಾಗಿ ಬಟ್ಟೆ ಮತ್ತು ಧ್ವಜಗಳನ್ನು ಸಹ ತಯಾರಿಸುತ್ತೇವೆ. ಆದರೆ ನಮ್ಮನ್ನು ಏಕೆ ಹೀಗೆ ಹೊರದೂಡಲಾಯಿತು” ಎಂದು ಪ್ರಶ್ನಿಸುತ್ತಾರೆ.

ಮುಸ್ಲಿಂ ಮಾರಾಟಗಾರರು ಮತ್ತೆ ಈ ಸ್ಥಳಕ್ಕೆ ಹಿಂತಿರುಗದಂತೆ ನೋಡಿಕೊಳ್ಳಲು ಈ ಪ್ರದೇಶಕ್ಕೆ ಬಜರಂಗದಳದವರ ಕಾರುಗಳು ವಾಡಿಕೆಯಂತೆ ಭೇಟಿ ನೀಡುತ್ತಿವೆ ಎಂದು ಹಸ್ಮತ್ ಆತಂಕ ವ್ಯಕ್ತಪಡಿಸಿದ್ದಾರೆ.

“ಸಹಾಯಕ್ಕಾಗಿ ರಾಂಪುರ ಶಾಸಕ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಇಬ್ಬರನ್ನೂ ಸಂಪರ್ಕಿಸಿದ್ದೇವೆ, ಆದರೆ ಇಲ್ಲಿಯವರೆಗೆ ಮನವಿಯನ್ನು ನಿರ್ಲಕ್ಷಿಸಲಾಗಿದೆ” ಎಂದು ಮಾರಾಟಗಾರರು ದೂರಿದ್ದಾರೆ.

ಭಾರತೀಯ ಜನತಾ ಪಕ್ಷದ ಶಾಸಕ ಆಕಾಶ್ ಸಕ್ಸೇನಾ ಅವರು ಮುಸ್ಲಿಂ ಮಾರಾಟಗಾರರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಹಿಂದೂ ಮಾರಾಟಗಾರರಿಗೆ ಮಾತ್ರ ಅವರ ಜಾಗಗಳನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಕೆಲವು ಮುಸ್ಲಿಂ ಮಾರಾಟಗಾರರು ತಿಳಿಸಿದ್ದಾರೆ.

ತನ್ನ ಸ್ಥಳಕ್ಕೆ ಹಿಂತಿರುಗಲು ಸಾಧ್ಯವಾದ ಮಾರಾಟಗಾರ ದಿಲೀಪ್ ಸಕ್ಸೇನಾ, “ಹಿಂದಿರುಗಿದ ನಂತರ ತಾನು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ಶಾಸಕರು ಶಾಂತಿಯ ಭರವಸೆ ನೀಡಿದ್ದಾರೆ” ಎಂದು ‘ದಿ ವೈರ್‌’ಗೆ ಮಾಹಿತಿ ನೀಡಿದ್ದಾರೆ.

“ಶಾಸಕ ಸಕ್ಸೇನಾ ಅವರು ಆ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ” ಎಂದು ಮುಸ್ಲಿಂ ಮಾರಾಟಗಾರರ ಒಂದು ವಿಭಾಗವು ಆರೋಪಿಸಿದೆ. “ಶುಚಿಗೊಳಿಸುವ ಸಮಯ ಬಂದಿದೆ” ಎಂದು ಶಾಸಕರು ಹೇಳಿರುವುದಾಗಿ ದೂರಲಾಗುತ್ತಿದೆ. ಆದರೆ ಸ್ವತಃ ಶಾಸಕರೇ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲರ ಪರವಾಗಿ ತಾವು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

“ನಾನು ನಗರವನ್ನು ಸುಂದರಗೊಳಿಸಲು ಕೆಲಸ ಮಾಡುತ್ತಿದ್ದೇನೆ ಮತ್ತು ಯಾರನ್ನೂ ಅವರ ಸ್ಥಳದಿಂದ ಸ್ಥಳಾಂತರಿಸುವುದಿಲ್ಲ. ಹೇಗಾದರೂ, ಯಾರಾದರೂ ಹಾಗೆ ಭಾವಿಸಿದರೆ, ಸಹಾಯಕ್ಕಾಗಿ ನನ್ನ ಬಳಿಗೆ ಬರಲು ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ. ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡುತ್ತೇನೆ. ರಾಂಪುರದಲ್ಲಿ ರಾಮ್ ಮತ್ತು ರಹೀಮ್ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ ಮತ್ತು ನಾನು ಎಲ್ಲರ ಸಮುದಾಯದ ನಾಯಕನಾಗಲು ಬಯಸುತ್ತೇನೆ” ಎಂದಿದ್ದಾರೆ ಸಕ್ಸೇನಾ.

“ನಮ್ಮ ಕ್ಷೇತ್ರದಲ್ಲಿರುವ ಸುಮಾರು 250 ಬೀದಿಬದಿ ವ್ಯಾಪಾರಿಗಳಲ್ಲಿ ಸುಮಾರು 100 ಮಂದಿ ಮುಸ್ಲಿಮರು ಮತ್ತು 150 ಮಂದಿ ಹಿಂದೂಗಳು ಇದ್ದಾರೆ” ಎಂದು ಅವರು ಸಮಜಾಯಿಸಿ ನೀಡಿದ್ದಾರೆ.

ವರದಿ ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...