Homeಮುಖಪುಟವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

ವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

- Advertisement -
- Advertisement -

ಎಲ್ಲಾ ಆರಾಮು

ಪಾಮರರಿಗೆ: ಈ ಹಾಡನ್ನು ಬರೆದ ಕಾಲದ ಬಗ್ಗೆ ಕಾಳಿದಾಸನ ಕಾಲದೇಶದ ಬಗ್ಗೆಯಿರುವಷ್ಟೇ ಗೊಂದಲಗಳಿವೆ. ಮೂಲದ ಬಗ್ಗೆ ನದಿಮೂಲದಷ್ಟೆ ಕುತೂಹಲವಿದೆ. ಇದನ್ನು ಬರೆದವರು ಯಾರು ಎಂಬುದು ಇದರ ಕತೃಗಳ ಜಗಳಾನಂತರವೂ ನಿರ್ಧಾರವಾಗಲಿಲ್ಲ. ೧೮೯೩ ಡಿಸೆಂಬರ್ ೧೬ ರಂದು ಆಡಲ್ಪಟ್ಟ “ಲಾಟ್ರೆಕ್ ನ ಎಚ್” ಎಂಬ ಒಂದು ಇಂಗ್ಲೀಷ್ ಕಾಮಿಡಿಯಲ್ಲಿದ್ದ ಒಂದು ಸಂಭಾಷಣೆಯ ತುಣುಕನ್ನಿಟ್ಟುಕೊಂಡು ೧೯೩೬ ರಲ್ಲಿ ಪೌಲ್ ಮಿಸ್’ರಕಿ ಎಂಬುವವನು ಈ ಹಾಡು ಬರೆದನಂತೆ ಎಂಬ ಇನ್ನೊಂದು ಉಹಾಪೋಹವೂ ಇದೆ.  ಇದೆಲ್ಲದರ ನಂತರ ರೇ ವೆಂಟ್ಯುರಾ ಎಂಬ ಫ್ರೆಂಚ್ ಸಂಗೀತದ ಅಪೂರ್ವನೂ, ಜಾಝ್‌ಅನ್ನು ಫ್ರಾನ್ಸಿನಲ್ಲಿ ಸಮೃದ್ಧವಾಗಿ ಬೆಳೆಸಿದವನೂ ಈ ಹಾಡಿಗೆ ಸಂಗೀತ ನೀಡಿದ. ಫ್ರೆಂಚ್ ಗೀತೆಗಳಲ್ಲಿ ಅಬ್ಬರವೆನ್ನುವುದು ಇಲ್ಲವೇ ಇಲ್ಲ. ಬಾಯಿಯಿಂಬ ಹೊರಟ ಹೊಗೆ ಸುರುಳಿಗಳನ್ನು ವರ್ಣಿಸುತ್ತ ಮಗುವನ್ನು ಮಲಗಿಸುವ ಜೋಗುಳದಂಥ ಹಾಡುಗಳಿವೆ ಅಲ್ಲಿ. ತೀರಾ ಸರಳ. ಈ ಕೆಳಗಿನ ಹಾಡಿನಲ್ಲಿ ಬಹುತೇಕ ಸಾಲುಗಳು ಪುನರಾವರ್ತಿತ. ನಿಜವಾಗಿ ಇರುವುದು ನಾಲ್ಕೋ ಐದೋ ಸಾಲುಗಳಷ್ಟೇ. ಬಿಡುಗಡೆಗೊಂಡಾಗ ಈ ಹಾಡು ಯೂರೋಪಿನ ತುಂಬ ಎಷ್ಟು ಪ್ರಿಯವಾದ ಗೀತೆಯಾಗಿ ಹೋಯಿತೆಂದರೆ ರೇ ವೆಂಟ್ಯುರಾ ಮತ್ತು ಪೌಲ್ ಮಿಸ್’ರಕಿ “ಎಲ್ಲಾ ಆರಾಮು” ನ ಕತೃಗಳಾಗಿಯೇ ಇವತ್ತಿಗೂ ಉಳಿದಿದ್ದಾರೆ.

ನಮ್ಮಲ್ಲೂ ಈ ಹಾಡಿನ ಲಾಜಿಕ್ಕಿನ ಥರದವುಗಳು ಇಲ್ಲವೆಂದಲ್ಲ. ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಆಸ್ಟ್ರಿಯನ್ ಗಳಲ್ಲಿ ಇದೇ ರೀತಿಯ ಸಂಭಾಷಣೆಗಳು ತುಂಬ ಸಿಗುತ್ತವೆ. ಆದರೆ ಈ ಹಾಡಿನ ವ್ಯಂಗ್ಯ ಮತ್ತು ತಿಳಿ ಹಾಸ್ಯಗಳು ಆಗಿನ ಭಯಗ್ರಸ್ಥ ಯೂರೋಪಿನಲ್ಲಿ ಶೀಘ್ರವಾಗಿ ಹರಡಿತೆಂದರೆ ೧೯೩೬ ರಲ್ಲಿ ಇದೇ ಹೆಸರಿನ ಒಂದು ಸಿನೆಮಾ ಕೂಡ ತೆರೆಕಂಡಿತು.  ನನ್ನ ಅನುವಾದದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದೇನೆ ನಾನು. ಮೂಲದಲ್ಲಿ ಕುದುರೆ ಸಾಯುತ್ತದೆ; ಇಲ್ಲಿ ಎಮ್ಮೆ. ಮತ್ತು ಅಲ್ಲಿ ಮನೆ ಕುಸಿದ ಮೇಲೆ ಗಂಡ ಸಾಯುತ್ತಾನೆ. ಇಲ್ಲಿ ಅದನ್ನು ಉಲ್ಟಾ ಮಾಡಿಕೊಂಡೆ- ಫ್ರೆಂಚಿನ ಮತ್ತು ಕನ್ನಡದ ವಾಕ್ಯರಚನೆಗಳ ಭಿನ್ನತೆಯ ಕಾರಣದಿಂದ. ಹಾಡಿನ ಮೂಲ ಲಯ ಮತ್ತು ತಾಳದಲ್ಲಿಯೇ ಈ ಅನುವಾದವೂ ಇದೆ. ಹಾಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಹಾಡು ಕೇಳಿ ಅದೇ ರಿದಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹಾಡನ್ನು ಕನ್ನಡದಲ್ಲಿ ಹಾಡಿಕೊಳ್ಳಬಹುದು. ಇದೊಂದು “ಗೀತೆ” ಎನ್ನುವುದು ಮನಸ್ಸಿನಲ್ಲಿರಲಿ ಎಂದು ಕೋರಿಕೆ.

ವಿಡಿಯೊ ನೋಡಿ.

ಪಂಡಿತರಿಗೆ: ’ರಾಜಕೀಯ ಮತ್ತು ಸಾಮಾಜಿಕವಾಗಿ’ ಈ ಹಾಡು ಹೊರಗೆ ಬಂದು, ಮೆಡಿಟರೇನಿಯನ್ ದೇಶಗಳಾದ್ಯಂತ ಪ್ರಸಿದ್ಧವಾದ ಕಾಲ ನಾಝೀಸಂ ನ ಬರ್ಭರತೆ ಯೂರೋಪಿನ ಮನಸ್ಸನ್ನು ಕೊರೆಯತೊಡಗಿದಂತದ್ದು- ಎಂಬುದಾಗಿ ಯೂಟ್ಯೂಬಿನಲ್ಲಿ ಫ್ರೆಂಚ್ ಗೀತೆಗಳ ಬಗ್ಗೆ ಆಳವಾದ ಗ್ರಹಿಕೆಗಳನ್ನು ದಾಖಲಿಸುವವಳೊಬ್ಬಳು ಬರೆಯುತ್ತಾಳೆ. ಮುಖ್ಯವಾದ್ದನ್ನು ನಿರ್ಲಕ್ಷಿಸುವ ಅಥವಾ ಲಕ್ಷಿಸಲು ಭಯಪಡುವ ಕಾಲವನ್ನು ಗೇಲಿ ಮಾಡಲು ರೇ ವೆಂಟ್ಯುರಾ ಇದನ್ನು ಅಳವಡಿಸಿಕೊಂಡನಂತೆ. ವಾಸ್ತವದಲ್ಲಿ ಫ್ರೆಂಚ್ ಕಾವ್ಯದಷ್ಟೇ ತೀವ್ರವಾಗಿ ರಾಜಕೀಯವನ್ನು ವಿಮರ್ಶಿಸಿದವು ಈ ಫ್ರೆಂಚ್ ಗೀತೆಗಳು. ಈ ಸರಳ ಹಾಡು ಎಷ್ಟು ಚೂಪಾದ ಒಂದು ರಾಜಕೀಯ ಹಾಡೂ ಆಯಿತೆಂದರೆ- ಯೂರೋಪಿನ ಪತ್ರಿಕೆಗಳು “ಎಲ್ಲಾ ಅರಾಮು ಮುಸಲೋನಿ ಮಹಾಶಯ” ಎಂದು ಇಟಲಿ-ಇಥಿಯೋಪಿಯನ್ ಯುದ್ಧದ ಸಮಯದಲ್ಲಿಯೂ, “ಎಲ್ಲಾ ಅರಾಮು ಸ್ಟಾಲಿನ್ ಮಹಾಶಯ” ಎಂದು ಸ್ಪಾನಿಷ್ ಅಂತರ್ಯುದ್ಧದ. ಸಮಯದಲ್ಲೂ ತಮಾಷೆ ಮಾಡಲು ಶುರುಮಾಡಿದ್ದವು. ತಣ್ಣನೆಯ ರಾಜಕೀಯ ಫ್ರೆಂಚ್ ಗೀತೆಗಳಿಗೆ ಇನ್ನೊಂದು ದೊಡ್ಡ ಉದಾಹಾರಣೆಯೆಂದರೆ ಬೋರಿಸ್ ವಿಯಾಂ ಎಂಬಾತ ಬರೆದು ಹಾಡಿದ “ಲ್ ಡೆಸರ್ಟರ್” ಎಂಬ ರಚನೆ. ಸರ್ವಾಧಿಕಾರದ ವಿರುದ್ಧ ದುಃಖ ಮತ್ತು ಸ್ಪಷ್ಟತೆಯಲ್ಲಿ ದನಿಯೆತ್ತುವ ಈ ಹಾಡನ್ನು ಅಪಾರ ವಿನಯ ಹಾಗೂ ದೃಢತೆಯಲ್ಲಿ ಹಾಡುತಾನೆ ಬೋರಿಸ್. ಹಾಡಿದು ಕೇವಲ ಫ್ರೆಂಚ್ ಭಾಷೆಯೊಂದರಲ್ಲೇ ಮೂವತ್ತಕ್ಕಿಂತ ಹೆಚ್ಚಿನ ರೂಪಗಳಲ್ಲಿ ಅಫ್ರಿಕಾದ ಅನೇಕ ಸರ್ವಾಧಿಕಾರೀ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಸಾಹಿತ್ಯ ಬೇರೆಯಾದರೂ ಧ್ವನಿ, ದೃಢತೆ ಮತ್ತು ವಿನಯಗಳು ಈ ಹಾಡಿನ ಎಲ್ಲ ರೂಪಗಳಲ್ಲೂ ಹಾಗೆಯೇ ಇದ್ದವು ಎಂಬುದು ಈ ಗೀತೆಗಳ ವ್ಯಾಪಕತೆಯನ್ನು ತೊರಿಸುತ್ತವೆ ಅಂದುಕೊಂಡಿದ್ದೇನೆ.

೨೦೧೦ರಲ್ಲಿ ಕೆಂಡಸಂಪಿಗೆ ಗೆ ಮಾಡಿದ್ದ ಮೂಲ ಹಾಡಿನ ನಿಷ್ಟ ಅನುವಾದ ಇಲ್ಲಿದೆ. ಈಗಿನ ವೀಡಿಯೋ ಹಾಡು ಸಧ್ಯದ ಪರಿಸ್ಥಿತಿಗೆ ಬದಲಿಸಿ ಬರೆದದ್ದು.

“ಹಲೋ ಹಲೋ ಕಿಟ್ಟಿ

ಎನಪ್ಪಾ ವಿಶೇಷ?

ಇರಲಿಲ್ಲ ಊರಲ್ಲಿ; ಹದಿನೈದು ದಿನದಿಂದ

ನಾ ಮರಳಿ ಬಂದಾಗ

ಏನೇನು ಕಂಡೇನು?

ಏನಾಯಿತಲ್ಲಿ; ಹದಿನೈದು ದಿನದಿಂದ?”

“ಅಂಥಾದ್ದೇನಿಲ್ಲ; ಏನಿಲ್ಲ ಪದ್ಮಕ್ಕ

ಎಲ್ಲ ಆರಾಮು; ಎಲ್ಲಾ ಅರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಮುದ್ದು ಎಮ್ಮೆ-ಬೆಳ್ಳಿ ಇತ್ತಲ್ಲ?

ಅದೊಂದು ಸತ್ತೋಯ್ತು. ಅದು ಬಿಟ್ರೆ ಪದ್ಮಕ್ಕ

ಇನ್ನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ನೆಮ್ಮೆ ಸತ್ತೋಯ್ತಾ

ಓ ನನ್ನ ಬಂಗಾರ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಕೊಟ್ಗೇಗ್’ ಮೊನ್ನೆ

ಬೆಂಕಿ ಬಿತ್ತಲ್ಲ?- ಅದ್ರಲ್ಲಿ ಬೆಳ್ಳಿ

ಸಿಕ್ಕೊಂಡಳಲ್ಲ? ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ ಕೊಟ್ಗೆ ಸುಟ್ಟೋಯ್ತಾ

ಓ ಹಾಳು ದೇವ್ರೆ!

ಹೇಳಪ್ಪಾ ನಂಗೆ-

ಇದಾಗಿದ್ ಹೇಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ಮನೆಗ್’ ಮೊನ್ನೆ ಬೆಂಕಿ ಬಿತ್ತಲ್ಲ?

ಅದೊಂಚೂರ್ ಕೊಟ್ಗೆಗೆ

ಹತ್ಕೊಂಡಿತ್ತಷ್ಟೇ! ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನಮ್ಮನೆ ಬಿದ್ದೋಯ್ತಾ?

ಓ ನನ್ನ ಗೋಳೇ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅದಿಷ್ಟೇ ಪದ್ಮಕ್ಕಾ; ಹೆಚ್ಚೇನು ಇಲ್ಲ.

ನಿನ್ ಗಂಡ ರಾಮಣ್ಣ

ಕುಡ್ಕೊಂಡು ಬಂದ್’ನಲ್ಲಾ.

ಏನ್ ಬೇಜಾರೋ ಏನೋ; ನೇಣಾಕ್ಕೊಂಡ್’ಬಿಟ್ನಲ್ಲ.

ಆಗವ್ನ ಕಾಲಿಗೆ ತಾಗಿತು ಚಿಮಣಿ

ಹತ್ಗೊಂತು ಬೆಂಕಿ- ಸುಟ್ಟೋಯ್ತು ನಿಮ್ಮನೆ.

ಆಗಂತೂ ಏನ್ ಗಾಳಿ, ತುಂಬಾನೇ ಪದ್ಮಕ್ಕಾ!

ಅಂಟಿತು ಬೆಂಕಿ-ಉರಿದೋಯ್ತು ಕೊಟ್ಟಿಗೆ.

ನಿಮ್ಮನೆ ಎಮ್ಮೆ ಸತ್ತಿದ್ದು ಹಿಂಗೆ. ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...