Homeಮುಖಪುಟವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

ವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

- Advertisement -
- Advertisement -

ಎಲ್ಲಾ ಆರಾಮು

ಪಾಮರರಿಗೆ: ಈ ಹಾಡನ್ನು ಬರೆದ ಕಾಲದ ಬಗ್ಗೆ ಕಾಳಿದಾಸನ ಕಾಲದೇಶದ ಬಗ್ಗೆಯಿರುವಷ್ಟೇ ಗೊಂದಲಗಳಿವೆ. ಮೂಲದ ಬಗ್ಗೆ ನದಿಮೂಲದಷ್ಟೆ ಕುತೂಹಲವಿದೆ. ಇದನ್ನು ಬರೆದವರು ಯಾರು ಎಂಬುದು ಇದರ ಕತೃಗಳ ಜಗಳಾನಂತರವೂ ನಿರ್ಧಾರವಾಗಲಿಲ್ಲ. ೧೮೯೩ ಡಿಸೆಂಬರ್ ೧೬ ರಂದು ಆಡಲ್ಪಟ್ಟ “ಲಾಟ್ರೆಕ್ ನ ಎಚ್” ಎಂಬ ಒಂದು ಇಂಗ್ಲೀಷ್ ಕಾಮಿಡಿಯಲ್ಲಿದ್ದ ಒಂದು ಸಂಭಾಷಣೆಯ ತುಣುಕನ್ನಿಟ್ಟುಕೊಂಡು ೧೯೩೬ ರಲ್ಲಿ ಪೌಲ್ ಮಿಸ್’ರಕಿ ಎಂಬುವವನು ಈ ಹಾಡು ಬರೆದನಂತೆ ಎಂಬ ಇನ್ನೊಂದು ಉಹಾಪೋಹವೂ ಇದೆ.  ಇದೆಲ್ಲದರ ನಂತರ ರೇ ವೆಂಟ್ಯುರಾ ಎಂಬ ಫ್ರೆಂಚ್ ಸಂಗೀತದ ಅಪೂರ್ವನೂ, ಜಾಝ್‌ಅನ್ನು ಫ್ರಾನ್ಸಿನಲ್ಲಿ ಸಮೃದ್ಧವಾಗಿ ಬೆಳೆಸಿದವನೂ ಈ ಹಾಡಿಗೆ ಸಂಗೀತ ನೀಡಿದ. ಫ್ರೆಂಚ್ ಗೀತೆಗಳಲ್ಲಿ ಅಬ್ಬರವೆನ್ನುವುದು ಇಲ್ಲವೇ ಇಲ್ಲ. ಬಾಯಿಯಿಂಬ ಹೊರಟ ಹೊಗೆ ಸುರುಳಿಗಳನ್ನು ವರ್ಣಿಸುತ್ತ ಮಗುವನ್ನು ಮಲಗಿಸುವ ಜೋಗುಳದಂಥ ಹಾಡುಗಳಿವೆ ಅಲ್ಲಿ. ತೀರಾ ಸರಳ. ಈ ಕೆಳಗಿನ ಹಾಡಿನಲ್ಲಿ ಬಹುತೇಕ ಸಾಲುಗಳು ಪುನರಾವರ್ತಿತ. ನಿಜವಾಗಿ ಇರುವುದು ನಾಲ್ಕೋ ಐದೋ ಸಾಲುಗಳಷ್ಟೇ. ಬಿಡುಗಡೆಗೊಂಡಾಗ ಈ ಹಾಡು ಯೂರೋಪಿನ ತುಂಬ ಎಷ್ಟು ಪ್ರಿಯವಾದ ಗೀತೆಯಾಗಿ ಹೋಯಿತೆಂದರೆ ರೇ ವೆಂಟ್ಯುರಾ ಮತ್ತು ಪೌಲ್ ಮಿಸ್’ರಕಿ “ಎಲ್ಲಾ ಆರಾಮು” ನ ಕತೃಗಳಾಗಿಯೇ ಇವತ್ತಿಗೂ ಉಳಿದಿದ್ದಾರೆ.

ನಮ್ಮಲ್ಲೂ ಈ ಹಾಡಿನ ಲಾಜಿಕ್ಕಿನ ಥರದವುಗಳು ಇಲ್ಲವೆಂದಲ್ಲ. ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಆಸ್ಟ್ರಿಯನ್ ಗಳಲ್ಲಿ ಇದೇ ರೀತಿಯ ಸಂಭಾಷಣೆಗಳು ತುಂಬ ಸಿಗುತ್ತವೆ. ಆದರೆ ಈ ಹಾಡಿನ ವ್ಯಂಗ್ಯ ಮತ್ತು ತಿಳಿ ಹಾಸ್ಯಗಳು ಆಗಿನ ಭಯಗ್ರಸ್ಥ ಯೂರೋಪಿನಲ್ಲಿ ಶೀಘ್ರವಾಗಿ ಹರಡಿತೆಂದರೆ ೧೯೩೬ ರಲ್ಲಿ ಇದೇ ಹೆಸರಿನ ಒಂದು ಸಿನೆಮಾ ಕೂಡ ತೆರೆಕಂಡಿತು.  ನನ್ನ ಅನುವಾದದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದೇನೆ ನಾನು. ಮೂಲದಲ್ಲಿ ಕುದುರೆ ಸಾಯುತ್ತದೆ; ಇಲ್ಲಿ ಎಮ್ಮೆ. ಮತ್ತು ಅಲ್ಲಿ ಮನೆ ಕುಸಿದ ಮೇಲೆ ಗಂಡ ಸಾಯುತ್ತಾನೆ. ಇಲ್ಲಿ ಅದನ್ನು ಉಲ್ಟಾ ಮಾಡಿಕೊಂಡೆ- ಫ್ರೆಂಚಿನ ಮತ್ತು ಕನ್ನಡದ ವಾಕ್ಯರಚನೆಗಳ ಭಿನ್ನತೆಯ ಕಾರಣದಿಂದ. ಹಾಡಿನ ಮೂಲ ಲಯ ಮತ್ತು ತಾಳದಲ್ಲಿಯೇ ಈ ಅನುವಾದವೂ ಇದೆ. ಹಾಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಹಾಡು ಕೇಳಿ ಅದೇ ರಿದಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹಾಡನ್ನು ಕನ್ನಡದಲ್ಲಿ ಹಾಡಿಕೊಳ್ಳಬಹುದು. ಇದೊಂದು “ಗೀತೆ” ಎನ್ನುವುದು ಮನಸ್ಸಿನಲ್ಲಿರಲಿ ಎಂದು ಕೋರಿಕೆ.

ವಿಡಿಯೊ ನೋಡಿ.

ಪಂಡಿತರಿಗೆ: ’ರಾಜಕೀಯ ಮತ್ತು ಸಾಮಾಜಿಕವಾಗಿ’ ಈ ಹಾಡು ಹೊರಗೆ ಬಂದು, ಮೆಡಿಟರೇನಿಯನ್ ದೇಶಗಳಾದ್ಯಂತ ಪ್ರಸಿದ್ಧವಾದ ಕಾಲ ನಾಝೀಸಂ ನ ಬರ್ಭರತೆ ಯೂರೋಪಿನ ಮನಸ್ಸನ್ನು ಕೊರೆಯತೊಡಗಿದಂತದ್ದು- ಎಂಬುದಾಗಿ ಯೂಟ್ಯೂಬಿನಲ್ಲಿ ಫ್ರೆಂಚ್ ಗೀತೆಗಳ ಬಗ್ಗೆ ಆಳವಾದ ಗ್ರಹಿಕೆಗಳನ್ನು ದಾಖಲಿಸುವವಳೊಬ್ಬಳು ಬರೆಯುತ್ತಾಳೆ. ಮುಖ್ಯವಾದ್ದನ್ನು ನಿರ್ಲಕ್ಷಿಸುವ ಅಥವಾ ಲಕ್ಷಿಸಲು ಭಯಪಡುವ ಕಾಲವನ್ನು ಗೇಲಿ ಮಾಡಲು ರೇ ವೆಂಟ್ಯುರಾ ಇದನ್ನು ಅಳವಡಿಸಿಕೊಂಡನಂತೆ. ವಾಸ್ತವದಲ್ಲಿ ಫ್ರೆಂಚ್ ಕಾವ್ಯದಷ್ಟೇ ತೀವ್ರವಾಗಿ ರಾಜಕೀಯವನ್ನು ವಿಮರ್ಶಿಸಿದವು ಈ ಫ್ರೆಂಚ್ ಗೀತೆಗಳು. ಈ ಸರಳ ಹಾಡು ಎಷ್ಟು ಚೂಪಾದ ಒಂದು ರಾಜಕೀಯ ಹಾಡೂ ಆಯಿತೆಂದರೆ- ಯೂರೋಪಿನ ಪತ್ರಿಕೆಗಳು “ಎಲ್ಲಾ ಅರಾಮು ಮುಸಲೋನಿ ಮಹಾಶಯ” ಎಂದು ಇಟಲಿ-ಇಥಿಯೋಪಿಯನ್ ಯುದ್ಧದ ಸಮಯದಲ್ಲಿಯೂ, “ಎಲ್ಲಾ ಅರಾಮು ಸ್ಟಾಲಿನ್ ಮಹಾಶಯ” ಎಂದು ಸ್ಪಾನಿಷ್ ಅಂತರ್ಯುದ್ಧದ. ಸಮಯದಲ್ಲೂ ತಮಾಷೆ ಮಾಡಲು ಶುರುಮಾಡಿದ್ದವು. ತಣ್ಣನೆಯ ರಾಜಕೀಯ ಫ್ರೆಂಚ್ ಗೀತೆಗಳಿಗೆ ಇನ್ನೊಂದು ದೊಡ್ಡ ಉದಾಹಾರಣೆಯೆಂದರೆ ಬೋರಿಸ್ ವಿಯಾಂ ಎಂಬಾತ ಬರೆದು ಹಾಡಿದ “ಲ್ ಡೆಸರ್ಟರ್” ಎಂಬ ರಚನೆ. ಸರ್ವಾಧಿಕಾರದ ವಿರುದ್ಧ ದುಃಖ ಮತ್ತು ಸ್ಪಷ್ಟತೆಯಲ್ಲಿ ದನಿಯೆತ್ತುವ ಈ ಹಾಡನ್ನು ಅಪಾರ ವಿನಯ ಹಾಗೂ ದೃಢತೆಯಲ್ಲಿ ಹಾಡುತಾನೆ ಬೋರಿಸ್. ಹಾಡಿದು ಕೇವಲ ಫ್ರೆಂಚ್ ಭಾಷೆಯೊಂದರಲ್ಲೇ ಮೂವತ್ತಕ್ಕಿಂತ ಹೆಚ್ಚಿನ ರೂಪಗಳಲ್ಲಿ ಅಫ್ರಿಕಾದ ಅನೇಕ ಸರ್ವಾಧಿಕಾರೀ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಸಾಹಿತ್ಯ ಬೇರೆಯಾದರೂ ಧ್ವನಿ, ದೃಢತೆ ಮತ್ತು ವಿನಯಗಳು ಈ ಹಾಡಿನ ಎಲ್ಲ ರೂಪಗಳಲ್ಲೂ ಹಾಗೆಯೇ ಇದ್ದವು ಎಂಬುದು ಈ ಗೀತೆಗಳ ವ್ಯಾಪಕತೆಯನ್ನು ತೊರಿಸುತ್ತವೆ ಅಂದುಕೊಂಡಿದ್ದೇನೆ.

೨೦೧೦ರಲ್ಲಿ ಕೆಂಡಸಂಪಿಗೆ ಗೆ ಮಾಡಿದ್ದ ಮೂಲ ಹಾಡಿನ ನಿಷ್ಟ ಅನುವಾದ ಇಲ್ಲಿದೆ. ಈಗಿನ ವೀಡಿಯೋ ಹಾಡು ಸಧ್ಯದ ಪರಿಸ್ಥಿತಿಗೆ ಬದಲಿಸಿ ಬರೆದದ್ದು.

“ಹಲೋ ಹಲೋ ಕಿಟ್ಟಿ

ಎನಪ್ಪಾ ವಿಶೇಷ?

ಇರಲಿಲ್ಲ ಊರಲ್ಲಿ; ಹದಿನೈದು ದಿನದಿಂದ

ನಾ ಮರಳಿ ಬಂದಾಗ

ಏನೇನು ಕಂಡೇನು?

ಏನಾಯಿತಲ್ಲಿ; ಹದಿನೈದು ದಿನದಿಂದ?”

“ಅಂಥಾದ್ದೇನಿಲ್ಲ; ಏನಿಲ್ಲ ಪದ್ಮಕ್ಕ

ಎಲ್ಲ ಆರಾಮು; ಎಲ್ಲಾ ಅರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಮುದ್ದು ಎಮ್ಮೆ-ಬೆಳ್ಳಿ ಇತ್ತಲ್ಲ?

ಅದೊಂದು ಸತ್ತೋಯ್ತು. ಅದು ಬಿಟ್ರೆ ಪದ್ಮಕ್ಕ

ಇನ್ನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ನೆಮ್ಮೆ ಸತ್ತೋಯ್ತಾ

ಓ ನನ್ನ ಬಂಗಾರ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಕೊಟ್ಗೇಗ್’ ಮೊನ್ನೆ

ಬೆಂಕಿ ಬಿತ್ತಲ್ಲ?- ಅದ್ರಲ್ಲಿ ಬೆಳ್ಳಿ

ಸಿಕ್ಕೊಂಡಳಲ್ಲ? ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ ಕೊಟ್ಗೆ ಸುಟ್ಟೋಯ್ತಾ

ಓ ಹಾಳು ದೇವ್ರೆ!

ಹೇಳಪ್ಪಾ ನಂಗೆ-

ಇದಾಗಿದ್ ಹೇಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ಮನೆಗ್’ ಮೊನ್ನೆ ಬೆಂಕಿ ಬಿತ್ತಲ್ಲ?

ಅದೊಂಚೂರ್ ಕೊಟ್ಗೆಗೆ

ಹತ್ಕೊಂಡಿತ್ತಷ್ಟೇ! ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನಮ್ಮನೆ ಬಿದ್ದೋಯ್ತಾ?

ಓ ನನ್ನ ಗೋಳೇ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅದಿಷ್ಟೇ ಪದ್ಮಕ್ಕಾ; ಹೆಚ್ಚೇನು ಇಲ್ಲ.

ನಿನ್ ಗಂಡ ರಾಮಣ್ಣ

ಕುಡ್ಕೊಂಡು ಬಂದ್’ನಲ್ಲಾ.

ಏನ್ ಬೇಜಾರೋ ಏನೋ; ನೇಣಾಕ್ಕೊಂಡ್’ಬಿಟ್ನಲ್ಲ.

ಆಗವ್ನ ಕಾಲಿಗೆ ತಾಗಿತು ಚಿಮಣಿ

ಹತ್ಗೊಂತು ಬೆಂಕಿ- ಸುಟ್ಟೋಯ್ತು ನಿಮ್ಮನೆ.

ಆಗಂತೂ ಏನ್ ಗಾಳಿ, ತುಂಬಾನೇ ಪದ್ಮಕ್ಕಾ!

ಅಂಟಿತು ಬೆಂಕಿ-ಉರಿದೋಯ್ತು ಕೊಟ್ಟಿಗೆ.

ನಿಮ್ಮನೆ ಎಮ್ಮೆ ಸತ್ತಿದ್ದು ಹಿಂಗೆ. ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...