Homeಮುಖಪುಟಸ್ವಂತ ಉದ್ಯಮ ಪ್ರಾರಂಭಿಸಬೇಕೆಂದಿದ್ದೀರಾ? ಹಾಗಾದರೆ ಈ ಅಂಶಗಳನ್ನೊಮ್ಮೆ ಓದಿ

ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದಿದ್ದೀರಾ? ಹಾಗಾದರೆ ಈ ಅಂಶಗಳನ್ನೊಮ್ಮೆ ಓದಿ

ಮೊದಲಿಗೆ ನಿಮಗೆ ಬೇಕಾಗಿರುವುದು ಮನಃಸ್ಥಿತಿಯ ಪರಿವರ್ತನೆ. ನಾನೂ ಸಹ ಏನಾದರೂ ಆಗಬೇಕೆಂಬ ಛಲ. ಆಗುತ್ತೇನೆ ಎಂಬ ಆತ್ಮವಿಶ್ವಾಸ. ನಿಮ್ಮನ್ನು ನೀವೇ ಮುಂದಕ್ಕೆ ಕೊಂಡೊಯ್ಯುವ ಉತ್ಸಾಹ. ಅದಕ್ಕೆ ಬೇಕಾದ ಕಲೆಗಳನ್ನು ಕಲಿಯುತ್ತೇನೆ, ಪ್ರಯತ್ನ ಪಡುತ್ತೇನೆ, ಯಾವುದೇ ಕಷ್ಟ ಬರಲಿ, ಎದುರಿಸುತ್ತೇನೆ ಎನ್ನುವ ಧೈರ್ಯ

- Advertisement -
- Advertisement -

ಜೀವನ ಕಲೆಗಳು: ಅಂಕಣ-20

ಸ್ವ-ಉದ್ಯೋಗ ಪ್ರಾರಂಬಿಸುವ ಮನೋವೃತ್ತಿ

ಇಂದಿನ ಪರಿಸ್ಥಿತಿಯಲ್ಲಿ ಓದು ಮುಗಿಸಿದ ನಂತರ ಎಲ್ಲರಿಗೂ ನೌಕರಿ ಸಿಕ್ಕೇ ಸಿಗುತ್ತದೆ ಎನ್ನುವ ಖಾತರಿ ಇಲ್ಲ. ಅದರಲ್ಲೂ ಕೇವಲ 10ನೆಯ, 12ನೆಯ ತರಗತಿವರೆಗೆ ಓದಿದ್ದರೆ ಇನ್ನೂ ಕಷ್ಟ. ಖಾಸಗಿ ಮತ್ತು ಸರಕಾರಿ ಕ್ಷೇತ್ರದಲ್ಲಿ ಕೆಲಸಗಳು ಕಡಿಮೆಯಾಗುತ್ತಿದೆ. ಹೂಡಿಕೆಯ ಅಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ನೌಕರಿ ನೀಡಬಹುದಾದಂತಹ ಬೃಹತ್ ಉದ್ದಿಮೆಗಳು ಪ್ರಾರಂಭವಾಗುತ್ತಿಲ್ಲ. ಆದ್ದರಿಂದ ಯುವಕರು ತಮ್ಮ ಉದ್ಯೋಗ ತಾವೇ ಸೃಷ್ಟಿಸಿಕೊಳ್ಳುವ ಅವಶ್ಯಕತೆ ಇದೆ. ಅಷ್ಟೇ ಅಲ್ಲ, ನಮ್ಮ ಯುವಜನ ನೌಕರಿ ಕೇಳುವವರಾಗುವ ಬದಲಿಗೆ ನೌಕರಿ ನೀಡುವ ಉದ್ದಿಮೆಶೀಲರಾಗಬೇಕಾಗಿದೆ. “ನಮ್ಮ ಹತ್ತಿರ ಹಣ ಇಲ್ಲ, ಯಾವುದೇ ಅನುಭವವಿಲ್ಲ, ಹಾಗಾದರೆ ನಾವೇನು ಉದ್ಯೋಗ ಪ್ರಾರಂಭಿಸಲು ಸಾಧ್ಯ?” ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು.

ಮೊಟ್ಟಮೊದಲಿಗೆ ನಿಮ್ಮ ಯೋಚನಾ ಲಹರಿ, ಮನಃಸ್ಥಿತಿ ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ.

ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್, ಆåಪಲ್ ಕಂಪನಿಯ ಸ್ಟೀವ್ ಜಾಬ್ಸ್, ಇಬ್ಬರೂ ಕಾಲೇಜು ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು, ತಮ್ಮ ಸ್ವಂತ ಕಂಪನಿ ಪ್ರಾರಂಬಿಸಿದರು. ಅವರ ಹತ್ತಿರವೂ ಹಣವಾಗಲೀ, ಅನುಭವವಾಗಲೀ ಇರಲಿಲ್ಲ. ಆ ಕಾಲದಲ್ಲಿ ಅಂತಹ ಕಂಪ್ಯೂಟರ್ ಸಾಫ್ಟ್-ವೇರ್ ಕಂಪನಿಗಳೇ ಇರಲಿಲ್ಲ. ಏನು ಮಾಡಬೇಕು, ಹೇಗೆ ಮಾಡಬೇಕು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಇವತ್ತು ಅವರ ಕಂಪನಿಗಳು ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಕೆಲಸ ನೀಡಿದೆ. ದೂರದ ಅಮೇರಿಕ ದೇಶದವರ ಕತೆ ಬೇಡ, ಹತ್ತಿರದ ಉದಾಹರಣೆ ತೆಗೆದುಕೊಳ್ಳೋಣ.

ತಮಿಳುನಾಡಿನ ಪ್ರೇಮ್ ಗಣಪತಿ ಓದಿದ್ದು ಹತ್ತನೆಯ ತರಗತಿಯವರೆಗೆ. 1990ರಲ್ಲಿ, ತನ್ನ ಹದಿನೇಳನೆಯ ವಯಸ್ಸಿನಲ್ಲಿ, ಚೆನ್ನೈಗೆ ಹೋಗಿ ರಸ್ತೆ ಬದಿಯ ಟೀ-ಕಾಫಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವನ ಅಂಗಡಿಯ ಮಾಲೀಕನ ತಮ್ಮ ಮುಂಬಯಿನಿಂದ ಬಂದಿದ್ದ. ಅವನ ಜೊತೆ, ಹೇಳದೆ-ಕೇಳದೆ, ಮುಂಬಯಿಗೆ ಬಂದ. ಯಾರನ್ನು ನಂಬಿಕೊಂಡು ಬಂದಿದ್ದನೋ, ಅವನು ಕೈ ಕೊಟ್ಟಿದ್ದ.

ಕಿಸೆಯಲ್ಲಿ ಹಣವಿಲ್ಲ, ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಯಾವ ಕೆಲಸದ ಅನುಭವವೂ ಇಲ್ಲ. ರಸ್ತೆ ಬದಿಯಲ್ಲಿ ಅಳುತ್ತಾ ಕುಳಿತಿದ್ದ. ಅವನ ಅವಸ್ಥೆಯನ್ನು ನೋಡಿ ಕನಿಕರಪಟ್ಟು ಯಾರೋ ತಮಿಳರು ಅವನಿಗೋಸ್ಕರ ರೈಲು ಟಿಕೇಟಿಗೆ ಆಗುವಷ್ಟು ಹಣ ಸಂಗ್ರಹಿಸಿ ನೀಡಲು ಮುಂದಾದರು. ಅದನ್ನು ಸ್ವೀಕರಿಸದೆ, ಇಲ್ಲೇ ಏನಾದರೂ ಕೆಲಸ ಮಾಡುತ್ತೇನೆ ಎಂದ. ಒಂದು ಬೇಕರಿಯಲ್ಲಿ ಟ್ರೇ ತೊಳೆಯುವ ಕೆಲಸ ಸಿಕ್ಕಿತು, ಮಲಗಲು ಸ್ಥಳ, ತಿನ್ನಲು ಬ್ರೆಡ್ ಸಿಗುತ್ತಿತ್ತು.

ಅಲ್ಲಿಂದ ಮುಂದಕ್ಕೆ, 20 ವರ್ಷದಲ್ಲಿ ತನ್ನ ಸ್ವಂತ ಪರಿಶ್ರಮದಿಂದ ದುಡಿದು ಅವನು ಪ್ರಾರಂಭಿಸಿದ ಹೋಟೆಲ್ “ದೋಸಾ ಪ್ಲಾಜಾ” ಇವತ್ತು 26 ನಗರಗಳಲ್ಲಿ, ಹಲವಾರು ದೇಶಗಳಲ್ಲಿ ಸುಪ್ರಸಿದ್ಧವಾಗಿದೆ. ತಾನು ಕೋಟ್ಯಾಧೀಶ್ವರ ಆಗುವುದರ ಜೊತೆಗೆ ನೂರಾರು ಜನರಿಗೆ ನೌಕರಿ ನೀಡಿದ್ದಾನೆ, ಲಕ್ಷಾಂತರ ಜನಕ್ಕೆ ಮಾದರಿ ವ್ಯಕ್ತಿಯಾಗಿದ್ದಾನೆ. ಇಂತಹ ಅನೇಕ ಉದಾಹರಣೆ ನಮ್ಮ ನಗರಗಳಲ್ಲೇ ಇದೆ. ಆದ್ದರಿಂದ ನೀವೂ ಏಕೆ ಸ್ವ-ಉದ್ದಿಮೆದಾರರಾಗಬಾರದು?

ಮೊದಲಿಗೆ ನಿಮಗೆ ಬೇಕಾಗಿರುವುದು ಮನಃಸ್ಥಿತಿಯ ಪರಿವರ್ತನೆ. ನಾನೂ ಸಹ ಏನಾದರೂ ಆಗಬೇಕೆಂಬ ಛಲ. ಆಗುತ್ತೇನೆ ಎಂಬ ಆತ್ಮವಿಶ್ವಾಸ. ನಿಮ್ಮನ್ನು ನೀವೇ ಮುಂದಕ್ಕೆ ಕೊಂಡೊಯ್ಯುವ ಉತ್ಸಾಹ. ಅದಕ್ಕೆ ಬೇಕಾದ ಕಲೆಗಳನ್ನು ಕಲಿಯುತ್ತೇನೆ, ಪ್ರಯತ್ನ ಪಡುತ್ತೇನೆ, ಯಾವುದೇ ಕಷ್ಟ ಬರಲಿ, ಎದುರಿಸುತ್ತೇನೆ ಎನ್ನುವ ಧೈರ್ಯ. ಒಮ್ಮೆ ನೀವು ಮನಸ್ಸಿನಲ್ಲಿ ದೃಢನಿಶ್ಚಯ ಮಾಡಿಕೊಂಡರೆ ಸಾಕು, ಮುಂದಿನ ಬಾಗಿಲು-ಕಿಟಕಿಗಳು ತಾವಾಗಿಯೇ ತೆರೆದುಕೊಳ್ಳಲು ಪ್ರಾರಂಭಿಸುತ್ತವೆ.

ಏಕೆ ಸ್ವ-ಉದ್ದಿಮೆದಾರರಾಗಬೇಕು?

·         ನಿಮ್ಮ ಅಂತರ್ದೃಷ್ಟಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು.

·         ನಿಮ್ಮ ಸಮಯ, ನಿಮ್ಮ ಸ್ವಂತ ಯೋಚನೆಯನ್ನು, ನಿಮ್ಮ ಪರಿಶ್ರಮದಿಂದ ಅಭಿವೃದ್ಧಿಗೊಳಿಸಿ, ಅದನ್ನು ದೊಡ್ಡ ಉದ್ದಿಮೆಯನ್ನಾಗಿ ಬೆಳೆಸಬಹುದು.

·         ನಿಮ್ಮ ಸ್ವಂತ ಸಸಿ ಮರವಾಗುವುದನ್ನು ನೋಡುವ ಆನಂದವೇ ಬೇರೆ.

·         ಇನ್ನೊಬ್ಬರ ಗುಲಾಮರಾಗಬೇಕಿಲ್ಲ.

ಇದಕ್ಕೆ ಬೇಕಾದ ಈ ಕಲೆಗಳು ನಿಮ್ಮಲ್ಲಿ ಈಗಾಗಲೇ ಇಲ್ಲದಿದ್ದರೆ, ನೀವು ಕಲಿಯಬೇಕಾಗಿರುವ ಕಲೆಗಳು:

ಸ್ವ-ಅರಿವು: ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವ ಕಲೆ –ಇದರ ಬಗ್ಗೆ ನಾನು ವಿಸ್ತಾರವಾಗಿ ಬರೆದಿದ್ದೇನೆ. ತನ್ನಸ್ವಂತಶಕ್ತಿ/ದೌರ್ಬಲ್ಯ/ಅವಕಾಶ/ಭೀತಿಯನ್ನುಅರಿತುಕೊಳ್ಳುವಕಲೆಗೆ “ಸ್ವೊಟ್ಎನಾಲಿಸಿಸ್” (SWOT ANALYSIS) ಎನ್ನುತ್ತಾರೆ. ಲಿಂಕ್ ಕ್ಲಿಕ್ಕಿಸಿ ವ್ಯಕ್ತಿತ್ವ-ವಿಕಸನ-2 .

·         ಸ್ವಯಂ-ಪ್ರೇರಿತರಾಗಿದ್ದು, ಅನುಶಾಸನವುಳ್ಳ ವ್ಯಕ್ತಿ ನೀವಾಗಿರಬೇಕು.

·         ವ್ಯವಸ್ಥಾಪನಾ ಕಲೆ: ಸ್ವಂತ ಸಮಯಮತ್ತು ಇತರ ಸಹೋದ್ಯೋಗಿ/ಕೆಲಸಗಾರರನ್ನು ನಿರ್ವಹಿಸುವ ಕಲೆ.

·         ಸಂವಹನಾ ಕಲೆ: ನಿಮ್ಮಲ್ಲಿರುವ ಯೋಚನೆಯನ್ನು ಇತರರು ಖರೀದಿಸು/ಒಪ್ಪುವಂತೆ ಮಾಡುವ ಕಲೆ.

·         ಏಕಾಂಗಿಯಾಗಿ ಮತ್ತು ತಂಡದೊಡನೆ ಕೆಲಸಮಾಡುವ ಕಲೆ.

·         ಆರ್ಥಿಕ ಅಕ್ಷರ ಜ್ಞಾನ ಇರಬೇಕು. ಹಣಕಾಸಿನ ವ್ಯವಹಾರದ ಕನಿಷ್ಠ ಜ್ಞಾನ ಅತ್ಯಂತ ಅವಶ್ಯಕ.

·         ಮಾರುಕಟ್ಟೆ ಸಂಶೋಧನೆ ಮಾಡಿ, ಬೇಕಾದ ಮಾಹಿತಿ ಸಂಗ್ರಹಿಸುವ ಕಲೆ.

·         ಅವಕಾಶಗಳನ್ನು ಹುಡುಕುವ ಕಲೆ.

·         ಯೋಜನೆ ಹಾಕಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಸಮರ್ಪಕ ವ್ಯವಸ್ಥೆ ಮಾಡುವ ಕಲೆ.

·         ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ತನ್ನನ್ನು ತಾನು ಹೊಂದಿಸಿಕೊಳ್ಳುವ ಕಲೆ.

·         ಸೃಜನಶೀಲತೆ ಮತ್ತು ಹೊಸದನ್ನು ಹುಡುಕುವ ಕಲೆ.

·         ಏಕಕಾಲಕ್ಕೆ ಅನೇಕ ಕೆಲಸ/ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಕಲೆ.

·         ಜವಾಬ್ದಾರಿ ವಹಿಸಿಕೊಂಡು, ಸಮಯೋಚಿತವಾಗಿ, ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ.

·         ಒತ್ತಡದಲ್ಲೂ ಕೆಲಸಮಾಡುವ ಕಲೆ.

·         ಸತತ ಪ್ರಯತ್ನ ಮಾಡುವ ಛಲಗಾರ ನೀವಾಗಿರಬೇಕು.

·         ಯಾವುದೇ ರೀತಿಯ ಸ್ಪರ್ಧೆಗೆ ಸಿದ್ಧವಾಗಿರಬೇಕು.

·         ಅಪಾಯ ಸಂಭವ (ರಿಸ್ಕ್) ಎದುರಿಸುವ ಕಲೆ.

·         ಜನರನ್ನು ಸಂಪರ್ಕಿಸಿ ತನ್ನ ಸಂಪರ್ಕ-ಜಾಲ ನಿರ್ಮಿಸಿಕೊಳ್ಳುವ ಕಲೆ.

ಈ ಎಲ್ಲಾ ಕಲೆಗಳು ಬಹಳ ಸುಲಭವಾಗಿ ಕಲಿಯಬಹುದಾದ ಕಲೆಗಳು.

ಭಾರತ ಸರಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳ ಮಂತ್ರಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಜಾಲತಾಣದಲ್ಲಿ ಈ ರೀತಿಯ ಸ್ವಯಂ ಉದ್ದಿಮೆದಾರರಿಗೆ ಬೇಕಾದ ತರಬೇತಿ ನೀಡುವ ಸಂಸ್ಥೆಗಳ ವಿವರ ಲಭ್ಯವಿದೆ. ಈ ಲಿಂಕ್ ಕ್ಲಿಕ್ಕಿಸಿ (ಕರ್ನಾಟಕ ಅಥವಾಬೇರೆ ರಾಜ್ಯ ಹುಡುಕಿ):

ಇದೇ ರೀತಿಯ ಹಲವಾರು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ನಿಮಗೆ ಬೇಕಾದ ತರಬೇತಿ ನೀಡಲು ಲಭ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...