Homeಮುಖಪುಟವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

ವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

- Advertisement -
- Advertisement -

ಜೀವನ ಕಲೆಗಳು: ಅಂಕಣ-3

| ಜಿ. ಆರ್. ವಿದ್ಯಾರಣ್ಯ |

ತನ್ನ ಸ್ವಂತ ಶಕ್ತಿ/ದೌರ್ಬಲ್ಯವನ್ನು ಅರಿತುಕೊಳ್ಳುವ ಕಲೆಗೆ “ಸ್ವೊಟ್ ಎನಾಲಿಸಿಸ್” (SWOT ANALYSIS) ಎನ್ನುತ್ತಾರೆ. ಇದನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೂಡ ಬಳಸಬಹುದು. ಇದರಿಂದ ವ್ಯಕ್ತಿಯ/ಸಂಸ್ಥೆಯ ಶಕ್ತಿ (Strength), ದೌರ್ಬಲ್ಯ (Weakness), ಅವಕಾಶ (Opportunity) ಮತ್ತು ಭೀತಿ (Threat) ಗಳನ್ನು ಅರಿತುಕೊಳ್ಳಬಹುದು.ಈ ವಿಶ್ಲೇಷಣೆಯನ್ನು ವ್ಯಕ್ತಿಯ ಪರವಾಗಿ ಬಳಸಿದಲ್ಲಿ ವ್ಯಕ್ತಿಯ ಸಹಜ ಶಕ್ತಿ-ಸಾಮರ್ಥ್ಯಗಳನ್ನು ಅರಿತು ಅದಕ್ಕೆ ತಕ್ಕ ಅವಕಾಶಗಳನ್ನು ಹುಡುಕಲು ನೆರವಾಗುತ್ತದೆ. ಸಂಸ್ಥೆಯ ಪರವಾಗಿ ಉಪಯೋಗಿಸಿದಲ್ಲಿ ಅದರ ಮಾರುಕಟ್ಟೆಯ ಹಿಡಿತ ಬಲಪಡಿಸುವುದಕ್ಕೆ ಅಥವಾ ಹೊಸ ಆವಿಶ್ಕಾರವನ್ನು ಹೊರಬಿಡಲು ಸಹಕಾರಿಯಾಗುತ್ತದೆ.

ಸ್ವೊಟ್ ಎನಾಲಿಸಿಸ್ (SWOT ANALYSIS)ಮಾಡುವುದರಿಂದ ನಮ್ಮ ಶಕ್ತಿ ಏನು ಮತ್ತು ದೌರ್ಬಲ್ಯ ಏನು ಎಂಬುದನ್ನು ತಿಳಿಯಬಹುದು. ಉದಾಹರಣೆಗೆ ನಿಮ್ಮ ಇತ್ತೀಚಿನ ಶಾಲಾ/ಕಾಲೇಜು ತರಗತಿಯ ಅಂಕ ಪಟ್ಟಿ ನೋಡಿದಾಕ್ಷಣ ಯಾವ ವಿಷಯದಲ್ಲಿ ನೀವು ಗಟ್ಟಿಗರು, ಯಾವುದರಲ್ಲಿ ನಿಮಗೆ ಶಕ್ತಿ ಸಾಲದು ಎಂಬುದು ಕೂಡಲೇ ತಿಳಿಯುತ್ತದೆ. ಯಾವ ವಿಷಯದಲ್ಲಿ ನೀವು ಹೆಚ್ಚು ಅಂಕ ಗಳಿಸಿದ್ದೀರೋ, ಅದು ನಿಮ್ಮ ಸಹಜ ಶಕ್ತಿ. ಯಾವ ವಿಷಯ ಎಷ್ಟೇ ಪರಿಶ್ರಮ ಪಟ್ಟರೂ, ನಿಮ್ಮ ತಲೆಗೆ ಹತ್ತುವುದಿಲ್ಲವೋ ಅದು ನಿಮ್ಮ ದೌರ್ಬಲ್ಯ, ಆದರೆ ಎರಡೂ, ಶಕ್ತಿ ಮತ್ತು ದೌರ್ಬಲ್ಯ, ತಾತ್ಕಾಲಿಕ. ಇದಕ್ಕೆ ಕಾರಣ ನೀವು ಕಂಡುಕೊಳ್ಳಬೇಕು. ಬಹುಶಃ ನಿಮ್ಮ ಕಲಿಯುವ ರೀತಿ ಸರಿಯಾಗಿಲ್ಲದಿರಬಹುದು ಅಥವಾ ಶಾಲೆಯಲ್ಲಿ ಕಲಿಸುವ ವಿಧಾನದಲ್ಲಿ ತೊಂದರೆ ಇರಬಹುದು. ಸರಿಯಾದ ಕಾರಣ ತಿಳಿದು ಸಮಸ್ಯೆ ಪರಿಹರಿಸಿದಲ್ಲಿ ದೌರ್ಬಲ್ಯವನ್ನು ಶಕ್ತಿಯಾಗಿ ಬದಲಾಯಿಸಿಕೊಳ್ಳಲು ಸಾಧ್ಯ.

ಅದೇ ರೀತಿಯಲ್ಲಿ ನಿಮ್ಮ ಶಕ್ತಿಯಿಂದ ನಿಮಗೆ ಈಗಿರುವ ಅಥವಾ ಸಿಗಬಹುದಾದ ಅವಕಾಶಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದಲ್ಲಿ ಅತಿ ಹೆಚ್ಚಿನ ಆಸಕ್ತಿ/ಉತ್ಸಾಹವಿದ್ದಲ್ಲಿ ಅದಕ್ಕೆ ಸಿಗಬಹುದಾದ ಪಾರಿತೋಷಕ, ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮುಂತಾದವುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಅದಕ್ಕೆ ಪೂರಕವಾದ ಲೇಖನ ರಚಿಸಿ ಲಗತ್ತಿಸಬೇಕಾಗಬಹುದು. ಅದೇ ವಿಷಯದಲ್ಲಿ ಉನ್ನತ ಅಭ್ಯಾಸಕ್ಕೆ ಇರುವ ಬೇರೆ ಬೇರೆ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು.

ವಿಜ್ಞಾನ ಸಂಬಂಧಿ ವಿಷಯಗಳಲ್ಲಿ ನಿಮಗೆ ಹೆಚ್ಚು ಅಂಕಗಳು ಬರುತ್ತಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಕಷ್ಟವಾಗಿದ್ದರೆ ನೀವು ಎಸ್.ಎಸ್.ಎಲ್.ಸಿ. ನಂತರ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಸಿ. ಅಥವಾ ಪಿ.ಸಿ.ಎಂ.ಇ. ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ವಿಜ್ಞಾನ ಸಂಬಂಧಿ ವಿಷಯಗಳುನಿಮಗೆ ಕಷ್ಟಕರ ಎನಿಸುತ್ತಿದ್ದು, ಭಾಷೆ, ಇತಿಹಾಸ, ಭೂಗೋಳ ಮುಂತಾದವು ಸುಲಭವಾಗಿದ್ದರೆ ನೀವು ಹ್ಯುಮಾನಿಟೀಸ್ ಶಾಖೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ನೀವು ಲೆಕ್ಕದಲ್ಲಿ ಗಟ್ಟಿಗರು ಮತ್ತು ಭಾಷೆಯೂ ಸುಲಭ ಎನಿಸಿದರೆ ಕಾಮರ್ಸ್ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇ ಬೇಕೆಂಬ ನಿಯಮವೂ ಇಲ್ಲ, ಅಗತ್ಯವೂ ಇಲ್ಲ. ಯಾವುದೇ ಮಾರ್ಗವನ್ನು ನೀವು ನಿಮ್ಮ ಸಹಜ ಶಕ್ತಿ ಗುಣವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ, ಹೆಚ್ಚು ಪರಿಶ್ರಮವಿಲ್ಲದೇ ಉನ್ನತ ಸಾಧನೆ ಮಾಡಲು ಬಹಳಷ್ಟು ಅವಕಾಶವಿರುತ್ತದೆ.

ಇತ್ತೀಚೆಗೆ ಏಪ್ರಿಲ್/ಮೇ ತಿಂಗಳಲ್ಲಿ ಕಾಲೇಜುಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳು ನಗರದಾದ್ಯಂತ ಮಾರಾಟ ಮೇಳಗಳನ್ನು ಆಯೋಜಿಸುತ್ತಾರೆ. ಇದರಲ್ಲಿ, ಶಿಕ್ಷಣ ತಜ್ಞರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಅವರಿಗೆ ಇರುವ ಹೊಸ ಹೊಸ ವೃತ್ತಿಪರ ಕೋರ್ಸುಗಳ ಬಗ್ಗೆ ತಿಳಿಸಿಕೊಡುತ್ತಾರೆ. ಇಂತಹ ಮೇಳಗಳಲ್ಲಿ ಮಕ್ಕಳು ಮತ್ತು ಪೋಷಕರು ಭಾಗವಹಿಸಬೇಕು. ಒಳ್ಳೆಯ ವರಮಾನ/ಬಡ್ತಿ ಅವಕಾಶವಿರುವ ಹುದ್ದೆಗಳ ದೃಷ್ಟಿಯಿಂದ ಯಾವ ಯಾವ ಕ್ಷೇತ್ರದಲ್ಲಿ, ಮುಂಬರುವ ಎಷ್ಟು ವರ್ಷದಲ್ಲಿ, ಎಷ್ಟು ಹುದ್ದೆಗಳು ಸೃಷ್ಟಿಯಾಗಲಿವೆ ಎಂಬ ಖಚಿತ ಮಾಹಿತಿ ದುರದೃಷ್ಟವಶಾತ್ ಎಲ್ಲೂ ಸಿಗುವುದಿಲ್ಲ. ಈಗ ಕಂಪ್ಯೂಟರ್ ಕ್ಷೇತ್ರದಲ್ಲಿ ಎ.ಐ. (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಶಕ್ತಿ) ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದೆ ಎಂದು ಕೇಳಿಬಂದರೂ ಸಹ ಮುಂಬರುವ ಐದು ವರ್ಷದಲ್ಲಿ ಏನಾಗಬಹುದು ಎಂದು ಯಾರಿಗೂ ಗೊತ್ತಿಲ್ಲ ಆದ್ದರಿಂದ ಈಗ ಆ ಕೋರ್ಸಿಗೆ ಸೇರುವ ಮಕ್ಕಳಿಗೆ ತಮ್ಮ ಭವಿಷ್ಯ ಹೇಗಿರುತ್ತದೆ ಎಂದು ಖಚಿತಗೊಳಿಸಿಕೊಳ್ಳಲು ಸಾಧ್ಯವಿಲ್ಲ.

ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳು ಆನ್-ಲೈನ್ ಉಚಿತ ಪರೀಕ್ಷೆ ಮಾಡಿಕೊಂಡಲ್ಲಿ ಅವರ ವ್ಯಕ್ತಿತ್ವ ಮಾದರಿ ಯಾವುದು ಎಂಬುದು ತಿಳಿಯುತ್ತದೆ. ಈ ಸ್ವ-ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ವ್ಯಕ್ತಿತ್ವದ ಇಂಡಿಕೇಟರ್ ಪ್ರಕಾರ ಯಾವ ಜೀವನೋಪಾಯ/ವೃತ್ತಿ ಅವರಿಗೆ ಸಹಜ ಮತ್ತು ಸರಳ ಎಂಬುದನ್ನು ನಿರ್ಧರಿಸಬಹುದು. ಅದೇ ರೀತಿ ಅವರ ಮುಂದಿನ ಉನ್ನತ ಶೈಕ್ಷಣಿಕ ಆಯ್ಕೆಯನ್ನೂ ಸಹ ಅವರು ಅಥವಾ ಪೋಷಕರು ನಿರ್ಧರಿಸಬಹುದು.

ಅಪಾಯದ ಎಚ್ಚರಿಕೆ: ಎಂಬಿಟಿಐ ಅಥವಾ ಬಿಗ್-ಫೈವ್ ಆಗಲೀ ಸಂಪೂರ್ಣ ವೈಜ್ಞಾನಿಕ ತತ್ವವಾದ ಅಲ್ಲ, ಆದ್ದರಿಂದ ಮಕ್ಕಳ ಭವಿಷ್ಯ ರೂಪಿಸುವ ಮುನ್ನ, ಪರಿಣಿತರ, ವೃತ್ತಿಪರರ ಸಲಹೆ ಪಡೆಯುವುದು ಅತ್ಯಂತ ಅವಶ್ಯಕ. ಕೇವಲ ಅಂತರ್ಜಾಲದ ಮಾಹಿತಿ ನಂಬಿ, ಅಥವಾ ಒಂದು ಲೇಖನ ಓದಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಹು ದೊಡ್ಡ ನಿರ್ಧಾರಕ್ಕೆ ಬರಬೇಡಿ.

ಎಸ್.ಎಸ್.ಎಲ್.ಸಿ. ನಂತರ ದ್ವಿತೀಯ ಪಿಯುಸಿ ಸಾಕು (ಅಥವಾ ಯಾವುದೋ ಒಂದು ಪದವಿ ಗಿಟ್ಟಿಸಿದರೆ ಸಾಕು) ಎಂದು ಓದನ್ನು ಅಲ್ಲಿಗೇ ನಿಲ್ಲಿಸಿ, ಯಾವ ಕೆಲಸಕ್ಕೆ ಸೇರಬೇಕು ಎಂಬುದನ್ನು ನಿರ್ಧರಿಸಲಾಗದೇ ಇರುವ ಯುವಕ/ಯುವತಿಯರಿಗೆ ಇಲ್ಲಿದೆ ಒಂದು ಸರಳ ದಾರಿ. ಮೊದಲು ಮೇಲೆ ತಿಳಿಸಿದಂತೆ, ನಿಮ್ಮ ಸ್ವೊಟ್ ಎನಾಲಿಸಿಸ್ ನೀವೇ ಮಾಡಿಕೊಳ್ಳಿ. ನೀವು ಎಂತಹ ವ್ಯಕ್ತಿ ಎಂದು ನೀವೇ ನಿರ್ಧರಿಸಿಕೊಳ್ಳಿ. ನಂತರ ಶಾಲೆ/ಕಾಲೇಜಿನಲ್ಲಿ ನೀವು ಸುಲಭವಾಗಿ ಕಲಿತ ವಿಷಯ, ನೀವು ಸ್ವ-ಇಚ್ಛೆಯಿಂದ, ಸ್ವಯಂಸೇವಕರಾಗಿ, ಇಷ್ಟ ಪಟ್ಟು ಮಾಡಿದ ಕೆಲಸಗಳು (ಸ್ಕೌಟ್/ಗೈಡ್, ಎನ್.ಎಸ್.ಎಸ್., ಗ್ರಾಹಕ ಕ್ಲಬ್, ವಿಜ್ಞಾನ ಕ್ಲಬ್, ಬರವಣಿಗೆ/ಚಿತ್ರಕಲೆ, ಸಾಮಾಜಿಕ/ಧಾರ್ಮಿಕ ಚಟುವಟಿಕೆ, ಅಥವಾ ಧನಸಂಗ್ರಹ ಇತ್ಯಾದಿ), ಇಷ್ಟವಾದ/ಭಾಗವಹಿಸಿದ ಕ್ರೀಡೆಗಳು ಯಾವುದು ಎಂದು ಒಂದನ್ನೂ ಬಿಡದೆ, ಹಾಳೆಯಲ್ಲಿ ಗುರುತು ಹಾಕಿಕೊಳ್ಳಿ. ಇವನ್ನೆಲ್ಲಾ ಒಂದೊಂದು ಮಣಿಗಳು ಎಂದು ಭಾವಿಸಿ, ಅವನ್ನು ಪೋಣಿಸಿ ಹಾರವನ್ನಾಗಿ ಮಾಡಬಹುದೇ ಯೋಚಿಸಿ. ಹಾರಕ್ಕೆ ಒಂದೆರಡು ಮಣಿಗಳು ಕಡಿಮೆ ಎಂದೆನಿಸಿದರೆ ಅವನ್ನು ಪಡೆಯಲು ನಿಮ್ಮ ಪ್ರಯತ್ನ ಹೇಗಿರಬೇಕು ಎಂದು ಯೋಚಿಸಿ. ನಿಮ್ಮ ಮುಂದಿನ ದಾರಿ ತಾನಾಗಿಯೇ ಗೋಚರಿಸುತ್ತದೆ.

ಇದನ್ನೂ ಒದಿ: ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ಇದನ್ನೂ ಓದಿ: ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....

ವೈಜಾಗ್ ಸ್ಟೀಲ್ ಅಪಘಾತಕ್ಕೆ 8 ಮಂದಿ ಬಲಿ: ಸಿಬ್ಬಂದಿ ಕೊರತೆಯ ಬಗ್ಗೆ ಕಾರ್ಮಿಕ ಸಂಘಗಳ ಆರೋಪ: ಸಾವಿನ ಅಂಚಿನಲ್ಲೂ ಕುಟುಂಬಕ್ಕಾಗಿ ಮಿಡಿದ ಕಾರ್ಮಿಕ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸೋಮವಾರ (ಜೂನ್ 8, 2026) ಸಂಜೆ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ಸ್ಥಾವರದ ಸ್ಟೀಲ್ ಮೆಲ್ಟ್ ಶಾಪ್-1 (SMS-1)...

ಅಂದು ಪಿಣರಾಯಿ ಮನೆ ಮೇಲೆ ದಾಳಿ; ಈಗ ವೀಣಾ ವಿಜಯನ್‌ಗೆ ಸಮನ್ಸ್‌: ಹಿರಿಯ ಕಮ್ಯುನಿಸ್ಟ್‌ ನಾಯಕನ ಕುಟುಂಬದ ಮೇಲೆ ಇಡಿ ಕಣ್ಣು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಕೊನೆಗೆ ಅಲ್ಲಿ ಏನೂ ಸಿಗದೆ ಬರಿಗೈನಲ್ಲಿ ಅಧಿಕಾರಿಗಳು...

ಮೋದಿ ಸರ್ಕಾರಕ್ಕೆ 12 ವರ್ಷ : 12 ರಿಂದ 4ಕ್ಕೆ ಇಳಿದ ಉಜ್ವಲ ಯೋಜನೆ ಸಿಲಿಂಡರ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ 12 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ ಅಥವಾ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ 2026ರ ಜೂನ್ 9ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ....

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...

ಆಪರೇಷನ್ ಕಮಲ ಭೀತಿ: ರಾಜ್ಯಸಭಾ ಚುನಾವಣೆಗೂ ಮುನ್ನ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಶಿಫ್ಟ್‌?

ಜೂನ್ 18 ರ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಡ್ಡ ಮತದಾನ ತಡೆಗಟ್ಟುವ ಜೊತೆಗೆ ತನ್ನ ಶಿಬಿರದ ಒಗ್ಗಟ್ಟು...

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ...

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...