Homeಅಂಕಣಗಳುಸರ್ವೋದಯ ಸಮಾಜದ ರಚನೆ

ಸರ್ವೋದಯ ಸಮಾಜದ ರಚನೆ

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |
ಸ್ವಾತಂತ್ರ್ಯಾ ನಂತರ ಭಾರತ ಎರಡು ಬಗೆಯ ಆರ್ಥಿಕ ವ್ಯವಸ್ಥೆಯನ್ನು ಕಂಡಿದೆ. ಒಂದು ನಿಯಂತ್ರಿತ ಆರ್ಥಿಕ ವ್ಯವಸ್ಥೆ. ಎರಡನೆಯದು ಮುಕ್ತ ಆರ್ಥಿಕ ವ್ಯವಸ್ಥೆ. ನಿಯಂತ್ರಿತ ಆರ್ಥಿಕ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಸರ್ಕಾರದ ಅಧಿಕಾರಿಗಳು ಜನರನ್ನು ಶೋಷಣೆಗೊಳಪಡಿಸಿದರೆ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳು ಜನರನ್ನು ಶೋಷಿಸುತ್ತಾರೆ. ಈ ಎರಡೂ ಬಗೆಯ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಬೇಕಾದರೆ ಇರುವ ಏಕೈಕ ದಾರಿ ಕೇಂದ್ರಿತ ಆರ್ಥಿಕ ವ್ಯವಸ್ಥೆ ಅಂದರೆ ಅದು ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯ ಪರಿಕಲ್ಪನೆ. ಹಿಂದೆ ಪ್ರತಿಯೊಂದು ಗ್ರಾಮವೂ ಸ್ವಸಂಪೂರ್ಣವಾಗಿತ್ತು. ಸ್ವಾವಲಂಬಿ ಗ್ರಾಮವಾಗಿತ್ತು. ಆಯಾ ಗ್ರಾಮದ ಅವಶ್ಯಕತೆಗಳನ್ನು ಅದೇ ಪೂರೈಸುತ್ತಿತ್ತು. ಇಂದು ಕೇಂದ್ರೀಕೃತ ಉತ್ಪಾದನಾ ಪದ್ಧತಿಯಿಂದಾಗಿ ಗ್ರಾಮಗಳು ಪರಾವಲಂಬಿಗಳಾಗಿವೆ. ಗ್ರಾಮಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಗ್ರಾಮಕೇಂದ್ರಿತ ಆರ್ಥಿಕ ವ್ಯವಸ್ಥೆಯನ್ನು ಜಾರಿಗೊಳಸಬೇಕಾಗಿದೆ. ಗ್ರಾಮಗಳು ಆಡಳಿತದ ಮೂಲ ಘಟಕಗಳಾಗಬೇಕು. ಗ್ರಾಮಸಭೆಯೇ ಗ್ರಾಮದ ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕು. ಗ್ರಾಮದ ಬೇಕು, ಬೇಡಗಳನ್ನು ನಿರ್ಧರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ರೂಪಿಸಿದ ಯೋಜನೆಗಳನ್ನು ಗ್ರಾಮಗಳ ಮೇಲೆ ಹೇರಬಾರದು. ಪ್ರತಿ ಗ್ರಾಮದಲ್ಲಿ ಒಂದು ಗ್ರಾಮಕೋಕ ಇರಬೇಕು. ಪ್ರತಿ ಗ್ರಾಮದಲ್ಲಿ ಪದಾರ್ಥಗಳ ಸಂಸ್ಕರಣ ಕೇಂದ್ರಗಳು ಸ್ಥಾಪನೆಯಾಗಬೇಕು. ರೇಷ್ಮೆಗೂಡನ್ನು ರೇಷ್ಮೆ ನೂಲನ್ನಾಗಿ ಪರಿಷ್ಕರಿಸುವ ಘಟಕಗಳು ಸ್ಥಾಪನೆಯಾಗಬೇಕು. ಹಣ್ಣುಗಳನ್ನು ಸಂಸ್ಕರಣೆ ಮಾಡಿ, ಹಣ್ಣಿನ ರಸ, ಇತ್ಯಾದಿಗಳನ್ನು ತಯಾರಿಸುವ ಘಟಕಗಳು ಆರಂಭವಾಗಬೇಕು. ಎರಡು ಮೂರು ಗ್ರಾಮಗಳ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ನೀಡುವ ಸಣ್ಣ ಕೈಗಾರಿಕಾ ಕೇಂದ್ರ ಸ್ಥಾಪನೆಯಾಗಬೇಕು. ಇಲ್ಲಿ ಉತ್ಪತ್ತಿಯಾಗುವ ಪದಾರ್ಥಗಳನ್ನು ಬೃಹತ್ ಕೈಗಾರಿಕೆಗಳು ಉತ್ಪಾದಿಸದಂತೆ ರೈತರೇ ಮಾರಿಕೊಳ್ಳುವ ಸ್ವಾತಂತ್ರ್ಯವನ್ನು ಹರಣ ಮಾಡಬಾರದು. ಬೀಜೋತ್ಪನ್ನ ಕಂಪನಿಗಳ ಅಡಿಯಾಳಾಗಲು ರೈತರನ್ನು ಬಿಡಬಾರದು.

ಗ್ರಾಮಗಳ ನಿರ್ವಹಿಸಲಾಗದ ಜವಾಬ್ದಾರಿಗಳನ್ನು ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಹಿಸಿಕೊಳ್ಳಬೇಕು. ಉದಾಹರಣೆಗೆ ನೋಟು ಮುದ್ರಣ, ವಿದೇಶಾಂಗ ನೀತಿ ನಿರ್ವಹಣೆ, ಅಣೆಕಟ್ಟಗಳ ನಿರ್ಮಾಣ ದೇಶ ರಕ್ಷಣೆ ಮುಂತಾದ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರ ಹೊರಬೇಕು. ಸಾರಿಗೆ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ರಸ್ತೆ ಕಾಮಗಾರಿ, ಶಿಕ್ಷಣ ನೀತಿ ನಿರೂಪಣೆ ಮುಂತಾದ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು. ಗ್ರಾಮಸ್ವರಾಜ್ಯ ಸ್ಥಾಪನೆ ಮಾಡುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದ ಹೊರೆ ಕಡಿಮೆಯಾಗುತ್ತದೆ. ನೌಕರಶಾಹಿಯ ದುರಾಡಳಿತ ಲಂಚರಾಷ್ಟ್ರ ಮತ್ತು ದಬ್ಬಾಳಿಕೆ ಕಡಿಮೆಯಾಗುತ್ತದೆ. ಹಳ್ಳಿಗಳಲ್ಲಿ ಲವಲವಿಕೆ ಉಂಟಾಗುತ್ತದೆ. ಹಳ್ಳಿಗರು ಜವಾಬ್ದಾರಿ ಜನರಾಗುತ್ತಾರೆ. ಗ್ರಾಮಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಗ್ರಾಮೀಣ ಯುವಕರು, ಕಸುಬುದಾರರು ಹಳ್ಳಿಗಳನ್ನು ತೊರೆದು ಪಟ್ಟಣಗಳಿಗೆ ವಲಸೆ ಹೋಗುವ ಪಿಡುಗು ತಪ್ಪುತ್ತದೆ. ಗ್ರಾಮದ ಕೆರೆಗಳ ರಕ್ಷಣೆ, ಜಲ ಸಂಪನ್ಮೂಲಗಳ ರಕ್ಷಣೆ, ಹಳ್ಳಿಗರ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.

ರಾಜಕೀಯ ಪಕ್ಷಗಳ ಹಾವಳಿ ಹಳ್ಳಿಗಳಲ್ಲಿ ತಪ್ಪುತ್ತದೆ. ಪಂಚಾಯ್ತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಭಾಗವಹಿಸುವಂತಿಲ್ಲ, ಮೂಗು ತೂರಿಸುವಂತಿಲ್ಲ ಎಂಬ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಆದರೂ ರಾಜಕೀಯ ಪಕ್ಷಗಳು ಪ್ರಚ್ಛನ್ನವಾಗಿ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಭಾಗವಹಿಸುತ್ತಿವೆ. ಗ್ರಾಮ ಸ್ವರಾಜ್ಯ ಸ್ಥಾಪನೆಯಾದ ಮೇಲೆ ರಾಜಕೀಯ ಪಕ್ಷಗಳು ಗ್ರಾಮಗಳಿಗೆ ನುಸುಳದಂತೆ ಮಾಡುವ ಕಾನೂನನ್ನು ಗ್ರಾಮ ಪಂಚಾಯ್ತಿ ಕೈಗೊಳ್ಳಬಹುದು. ಆರೋಗ್ಯ ಕೇಂದ್ರಗಳನ್ನು, ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನೂ ಈಗ ಸರ್ಕಾರ ಖಾಸಗಿ ಯುವಕರಿಗೆ ವಹಿಸುತ್ತಿವೆ. ಗ್ರಾಮ ಸ್ವರಾಜ್ಯದಲ್ಲಿ ಇವೆರಡರ ನಿರ್ವಹಣೆಯ ಹೊಣೆಗಾರಿಕೆಯನ್ನು ಪಂಚಾಯ್ತಿಗಳು ನಿರ್ವಹಿಸುತ್ತಿವೆ. ಖಾಸಗಿಯವರ ಶೋಷಣೆಯಿಂದ ಗ್ರಾಮಗಳು ಮುಕ್ತವಾಗುತ್ತವೆ. ಪರದೇಶಗಳ ಕಂಪನಿಗಳು ತಯಾರಿಸುವ ಫೇಸ್ ಪೌಡರ್, ಕುಂಕುಮ, ಸೋಪು, ಟೂತ್‍ಪೇಸ್ಟ್, ಕಾಡಿಗೆ, ಕೃತಕ ನೂಲಿನ ಬಟ್ಟೆಗಳು, ಸಿದ್ಧ ಪಡಿಸಿದ ಉಡುಪುಗಳು, ಪೆಪ್ಸಿ ಕೋಲಾ, ಫ್ರೂಟಿ ಗ್ರಾಮಗಳಿಗೆ ನುಗ್ಗಿಬರುತ್ತಿವೆ ಗ್ರಾಮಸಭೆಯತ್ತ ಗ್ರಾಮ ಪಂಚಾಯ್ತಿಗಳು ಈ ಬಗೆಯ ಶೋಷಣೆಗೆ ಅವಕಾಶ ಕೊಡುವುದಿಲ್ಲ.

ಅವು ಗ್ರಾಮಗಳಿಗೆ ಪ್ರವೇಶಿಸದಂತೆ ಕಾನೂನು ಕಟ್ಟಳೆ ಮಾಡಲಾಗುತ್ತದೆ. ಊರಿನಲ್ಲಿ ನಡೆಯುವ ಕಳ್ಳತನ, ಹಾದರ, ಮೋಸ, ದಾಂಧಲೆ ಇವುಗಳನ್ನೆಲ್ಲ ತಡೆಯಲು ಸ್ವತಂತ್ರ ಪೊಲೀಸ್ ವ್ಯವಸ್ಥೆ ಗ್ರಾಮಮಟ್ಟದ ನ್ಯಾಯಾಲಯಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಭಾರಿ ಕೊಲೆ, ವಂಚನೆ ಮುಂತಾದ ಅಪರಾಧಗಳನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತದೆ. ಗ್ರಾಮಸಭೆ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಹಳ್ಳಿಯ ಅಸೆಂಬ್ಲಿ ಅದಾಗಬೇಕು. ಗ್ರಾಮಸಭೆ ಎರಡು ದಿನ ನಡೆಯಬೇಕು. ಮೊದಲನೆಯ ದಿನ ವರದಿ ಮಂಡನೆ ಅದರ ಮೇಲೆ ಚರ್ಚೆ ನಡೆಯಬೇಕು. ನಡೆದಿರುವ ದುವ್ರ್ಯವಹಾರಗಳ ಕೂಲಂಕಶ ಚರ್ಚೆಯಾಗಿ ಅದನ್ನೇ ನಡೆಸಿದವರ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಿರ್ಣಯ ರೂಪದಲ್ಲಿ ಮಂಡಿಸಿ ಸಭೆಯ ಸಮ್ಮತಿ ಪಡೆದುಕೊಳ್ಳಬೇಕು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಬರುವ ಹಣ ಮನೆಗಂದಾಯ, ಭೂ ಕಂದಾಯದಿಂದ ಬಂದ ಹಣ ಕಾರ್ಖಾನೆಗಳು, ಹೋಟೆಲ್ ಮುಂತಾದ ಉದ್ಯಮಗಳು ಬಸ್‍ಸ್ಟಾಂಡಿನ ನಿರ್ವಹಣೆ ತೆರಿಗೆ ಟೋಲ್, ನೀರಿನ ಸೆಸ್ ಮುಂತಾದ ಬಾಬತ್ತುಗಳಿಂದ ಬರುವ ವರಮಾನ ನಾನಾ ಬಾಬುಗಳಿಂದ ಸಂಗ್ರಹವಾಗುವ ಹಣ ಗ್ರಾಮದ ಸಂಪನ್ಮೂಳ ಇದನ್ನು ಪಾರದರ್ಶಕವಾಗಿ ನಿರ್ವಹಿಸುವ ಜವಾಬ್ದಾರಿ ಪಂಚಾಯ್ತಿಯದು. ಆದ್ಯತೆಯ ಮೇಲೆ ಬಡತನ ನಿವಾರಣೆ ಯೋಜನೆಗಳನ್ನು ರೂಪಿಸಬೇಕು. ಈ ಕೆಲಸ ಅಂತ್ಯೋದಯದಿಂದ ಆರಂಭ ಆಗಬೇಕು. ಮೊದಲ ಆದ್ಯತೆ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯನ್ನು ಬಡತನದಿಂದ ಪಾರು ಮಾಡುವುದು ಹೀಗೆ ಗ್ರಾಮದ ಎಲ್ಲರಿಗೂ ಊಟ, ಉದ್ಯೋಗ, ವಿದ್ಯೆ ಇರಲು ಮನೆ ಒದಗಿಸುವುದು ಸರ್ವೋದಯದ ಗುರಿ.

ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಪಂಚಾಯ್ತಿಯ ಆದ್ಯ ಕರ್ತವ್ಯವಾಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...