Homeಮುಖಪುಟಸಿನಿಮಾಗಳಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ: ವೆಟ್ರಿಮಾರನ್‌ ಆತಂಕ

ಸಿನಿಮಾಗಳಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ: ವೆಟ್ರಿಮಾರನ್‌ ಆತಂಕ

ತಿರುವಳ್ಳುವರ್‌ಗೆ ಕೇಸರಿ ಹೊದಿಸಿ, ರಾಜರಾಜ ಚೋಳನ್‌ಗೆ ಹಿಂದೂ ಎಂದು ನಮ್ಮ ಅಸ್ಮಿತೆಗಳನ್ನು ಸಿನಿಮಾಗಳಲ್ಲಿ ಅಳಿಸಲಾಗುತ್ತಿದೆ ಎಂದು ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಹೇಳಿದ್ದಾರೆ.

- Advertisement -
- Advertisement -

ರಾಜಕೀಯ ಜ್ಞಾನವನ್ನು ಪ್ರಸಾರ ಮಾಡುವ ಸಾಧನವಾಗಿ ಸಿನಿಮಾ ಕಲೆಯನ್ನು ರೂಪಿಸುವ ಮಹತ್ವವನ್ನು ತಮಿಳು ಚಲನಚಿತ್ರದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಇತ್ತೀಚೆಗೆ ಒತ್ತಿ ಹೇಳಿದ್ದಾರೆ.

“ಸಿನಿಮಾದಲ್ಲಿ ನಮ್ಮ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ” ಎಂದು ಪ್ರಸ್ತಾಪಿಸಿರುವ ಅವರು, “ತಿರುವಳ್ಳುವರ್‌ಗೆ ಕೇಸರಿ ಹೊದಿಸುತ್ತಿರುವುದು, ರಾಜರಾಜ ಚೋಳನ್‌ರನ್ನು ಹಿಂದೂ ಎಂದು ಬಿಂಬಿಸುವುದು ನಡೆಯುತ್ತಲೇ ಇದೆ” ಎಂದಿದ್ದಾರೆ.

ಸಂಸದ ಹಾಗೂ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದ ನಾಯಕ ತೊಲ್ ತಿರುಮಾವಲವನ್ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಸುರನ್ (2019) ಚಿತ್ರ ಮಾಡಲು ಬಯಸಿದಾಗ, ರಾಜಕೀಯವಾಗಿ ತಮ್ಮ ಚಿತ್ರವು ತಪ್ಪಾಗದಂತೆ ನೋಡಿಕೊಳ್ಳಲು ಸಲಹೆಗಳನ್ನು ಪಡೆಯಲು ತಿರುಮಾವಳವನ್ ಅವರನ್ನು ಮೊದಲು ಭೇಟಿಯಾಗಿದ್ದೆ ಎಂದು ವೆಟ್ರಿಮಾರನ್‌ ತಿಳಿಸಿದ್ದಾರೆ.

“ಸಿನಿಮಾದಲ್ಲಿ ನಾವು ಅಂತಹ ವಿಷಯವನ್ನು ತರುವಾಗ ಆದ್ಯತೆ ಏನು ಎಂದು ನಾನು ಕೇಳಿದಾಗ, ಒಬ್ಬ ವ್ಯಕ್ತಿ ಸಮಾಜದಲ್ಲಿ ಬದಲಾವಣೆಗಳನ್ನು ತರಬಹುದು ಎಂದು ಹೇಳುವ ತಪ್ಪು ಮಾಡಬೇಡಿ ಎಂದಿದಿದ್ದರು. ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಬದಲಾವಣೆಗಳು ಆಂದೋಲನದ ಮೂಲಕ ಘಟಿಸುತ್ತವೆ ಎಂಬುದನ್ನು ತೋರಿಸಿ ಎಂದಿದ್ದರು” ಎಂದು ವೆಟ್ರಿಮಾರನ್ ನೆನೆದಿದ್ದಾರೆ.

ತಮಿಳು ಚಿತ್ರರಂಗ ಕೆಲಕಾಲ ರಾಜಕೀಯ ಸಂಬಂಧಿತ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸಿದೆ ಎಂದಿರುವ ಅವರು, ರಾಜಕೀಯ ಚಿಂತನೆಗಳನ್ನು ಸಿನಿಮಾಗಳಲ್ಲಿ ತರುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

“ಕಲೆಯು ಅಂತರ್ಗತವಾಗಿ ರಾಜಕೀಯವನ್ನು ಹೊಂದಿದೆ. ಆದರೆ, ತಿರುಮಾವಳವನ್ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಅಸ್ತಿತ್ವವೇ ರಾಜಕೀಯ ಎಂದಿದ್ದರು. ತಿಳಿದೋ ತಿಳಿಯದೆಯೋ ನಾವು ಒಂದು ನಿರ್ದಿಷ್ಟ ರಾಜಕೀಯ ಜಾಗವನ್ನು ಆಕ್ರಮಿಸಿಕೊಳ್ಳುತ್ತೇವೆ. ನಾವು ಧರಿಸುವ, ಮಾತನಾಡುವ ಮತ್ತು ನಮ್ಮ ಬಗೆಗಿನ ಎಲ್ಲವೂ ನಾವು ಅಳವಡಿಸಿಕೊಂಡಿರುವ ರಾಜಕೀಯ ಸಿದ್ಧಾಂತದ ಪ್ರತಿಬಿಂಬವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ದ್ರಾವಿಡ ಚಳವಳಿಯು ತಮಿಳು ಚಿತ್ರರಂಗವನ್ನು ಒಳಗೊಂಡ ಕಾರಣ, ತಮಿಳುನಾಡು ಜಾತ್ಯತೀತ ರಾಜ್ಯವಾಗಿ ಉಳಿದಿದೆ. ವಿವಿಧ ಬಾಹ್ಯ ಅಂಶಗಳ ಪ್ರಭಾವವನ್ನು ವಿರೋಧಿಸುವ ಪ್ರಬುದ್ಧತೆಯನ್ನು ನಮಗೆ ನೀಡಿದೆ. ಸಿನಿಮಾ ಎನ್ನುವುದು ಸಾಮಾನ್ಯ ಜನರನ್ನು ಸುಲಭವಾಗಿ ತಲುಪುವ ಒಂದು ಕಲಾ ಪ್ರಕಾರವಾಗಿದೆ. ಅದನ್ನು ರಾಜಕೀಯಗೊಳಿಸುವುದು ಮುಖ್ಯವಾಗಿದೆ” ಎಂದು ಆಶಿಸಿದ್ದಾರೆ.

ವೆಟ್ರಿಮಾರನ್ ಅವರು ತಮ್ಮ ಸಿನಿಮಾಗಳಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಅವರ ಎಲ್ಲಾ ಚಲನಚಿತ್ರಗಳು ಒಂದು ಪ್ರಮುಖ ಸಾಮಾಜಿಕ ಸಮಸ್ಯೆಯೊಂದಿಗೆ ಬೆಸೆದುಕೊಂಡಿರುತ್ತದೆ. ವಿಸಾರಣೈನಲ್ಲಿ ಪೋಲೀಸ್ ದೌರ್ಜನ್ಯ ಮತ್ತು ಕಸ್ಟಡಿ ಚಿತ್ರಹಿಂಸೆಯ ಭಯಾನಕತೆ ಕುರಿತು ತೋರಿಸಲಾಯಿತು. ಅಸುರನ್‌ನಲ್ಲಿನ ಜಾತಿವಾದಿ ಸಮಾಜ ಹಾಗೂ ದಲಿತ ಪ್ರತಿರೋಧವನ್ನು ದಾಖಲಿಸಲಾಯಿತು. ತಮ್ಮ ಸಿನಿಮಾಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

“ದ್ರಾವಿಡ ಚಳವಳಿಯು ಸಿನಿಮಾವನ್ನು ಕೈಗೆತ್ತಿಕೊಂಡಾಗ, ಕಲೆಗಾಗಿ ಕಲೆ ಇರಬೇಕು ಜನಸಾಮಾನ್ಯರಿಗಾಗಿ ಅಲ್ಲ ಎಂಬ ವಾದಗಳು ಇದ್ದವು. ಅವರು ಸಿನಿಮಾ ಸೌಂದರ್ಯದ ಬಗ್ಗೆ ಸಾಕಷ್ಟು ಮಾತನಾಡಿದರು. ಹೌದು, ಅದು ಕೂಡ ಮುಖ್ಯ, ಆದರೆ ಯಾವುದೇ ಕಲೆಯು ಜನರ ಜೀವನವನ್ನು ಮುಟ್ಟದಿದ್ದರೆ ಅದು ಪೂರ್ಣಗೊಳ್ಳುವುದಿಲ್ಲ ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವರುಣನ ನಡುವೆಯೇ ರಾಹುಲ್ ಭಾಷಣ; ‘ಮೆಚ್ಚುಗೆಯ ಮಳೆ’ ಸುರಿಸಿದ ಜನತೆ

ಚಿತ್ರರಂಗದಿಂದ ಅನೇಕ ಅಸ್ಮಿತೆಗಳನ್ನು ಅಳಿಸಲಾಗುತ್ತಿದೆ ಎಂದು ವೆಟ್ರಿಮಾರನ್ ಆರೋಪಿಸಿದ್ದಾರೆ. “ಕಲೆ ಜನರಿಗಾಗಿ, ಮತ್ತು ಜನರನ್ನು ಪ್ರತಿಬಿಂಬಿಸುವುದು ಕಲೆ. ಆದ್ದರಿಂದ ನಾವು ಈ ಕಲಾ ಪ್ರಕಾರವನ್ನು ಸರಿಯಾಗಿ ನಿರ್ವಹಿಸದಿದ್ದರೆ… ಈಗಾಗಲೇ ನಮ್ಮ ಅನೇಕ ಗುರುತುಗಳನ್ನು ಅಳಿಸಲಾಗುತ್ತಿದೆ. ತಿರುವಳ್ಳುವರ್‌ಗೆ ಕೇಸರಿ ಹೊದಿಸುವುದಿರಲಿ, ಅಥವಾ ರಾಜರಾಜ ಚೋಳನ್‌ನನ್ನು ಹಿಂದೂ ರಾಜನೆಂದು ಬಿಂಬಿಸುವುದಿರಲಿ, ಇಂತಹ ಸಂಗತಿಗಳು (ನಮ್ಮ ಸಮಾಜದಲ್ಲಿ) ನಡೆಯುತ್ತಲೇ ಇರುತ್ತವೆ. ಇದು ಸಿನಿಮಾದಲ್ಲಿ ಘಟಿಸುತ್ತಿದೆ ಮತ್ತು ಸಿನಿಮಾದಿಂದ (ಈಗಾಗಲೇ) ಅನೇಕ ಗುರುತುಗಳನ್ನು ತೆಗೆದುಹಾಕಲಾಗಿದೆ. ನಾವು ನಮ್ಮ ಗುರುತನ್ನು ರಕ್ಷಿಸಿಕೊಳ್ಳಬೇಕು” ಎಂದು ಎಚ್ಚರಿಸಿದ್ದಾರೆ.

ರಾಜರಾಜ ಚೋಳನ್‌ನಿಂದ ಸ್ಫೂರ್ತಿ ಪಡೆದ ಕಲ್ಕಿಯವರ ಕಾಲ್ಪನಿಕ ಕಾದಂಬರಿಯನ್ನು ಆಧರಿಸಿದ ಪೊನ್ನಿಯಿನ್ ಸೆಲ್ವನ್: 1 ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಈ ಸಿನಿಮಾ ಬಿಡುಗಡೆಯಾಗಿರುವ ಹೊತ್ತಿನಲ್ಲಿ ವೆಟ್ರಿಮಾರನ್‌ ಅವರ ಈ ಅಭಿಪ್ರಾಯಗಳು ಹೊರಬಿದ್ದಿರುವುದು ಕುತೂಹಲ ಹುಟ್ಟಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...