Homeಸಿನಿಮಾಕ್ರೀಡೆಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

ಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

- Advertisement -
- Advertisement -

23 ವರ್ಷ ವಯಸ್ಸಿನ ಕಿಲಿಯಾನ್ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಪಡೆದ ಫ್ರಾನ್ಸ್ ಆಟಗಾರ. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೋತರೂ ಫುಟ್ಬಾಲ್‌ ಪ್ರೇಮಿಗಳ ಮನಗೆದ್ದವರು ಎಂಬಾಪೆ.

2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವರ್ಡ್‌ಕಪ್‌ನಲ್ಲಿ ‘ಬೆಸ್ಟ್ ಯಂಗ್ ಪ್ಲೇಯರ್‌ ಅವಾರ್ಡ್’ ಪಡೆದಿದ್ದ ಎಂಬಾಪೆ ಈ ಸಲದ ಕತಾರ್‌ ವರ್ಡ್‌ಕಪ್‌ನಲ್ಲಿ ಅತಿ ಹೆಚ್ಚು ಗೋಲ್‌ ಭಾರಿಸುವ ಮೂಲಕ ‘ಗೋಲ್ಡನ್ ಬೂಟ್ ಅವಾರ್ಡ್’ ತಮ್ಮದಾಗಿಸಿಕೊಂಡರು.

ವರ್ಡ್‌ಕಪ್‌ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲ್ ಗಳಿಸಿದ ಎರಡನೇ ಆಟಗಾರರಾಗಿ ಎಂಬಾಪೆ ಹೊಮ್ಮಿದರು. 1966ರಲ್ಲಿ ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್ ಈ ಸಾಧನೆ ಮಾಡಿದ್ದರು.

2022ರ ವರ್ಡ್ ಕಪ್‌ ಫೈನಲ್ ಭಾರೀ ಪೈಪೋಟಿಯಿಂದ ಕೂಡಿತ್ತು. ಅರ್ಜೆಂಟೀನಾ ಪರವಾಗಿ ಡಿ ಮಾರಿಯ ಒಂದು ಗೋಲ್‌, ಲಿಯೋನಲ್ ಮೆಸ್ಸಿ ಎರಡು ಗೋಲ್ ಭಾರಿಸಿದರೆ, ಫ್ರಾನ್ಸ್‌ ಪರವಾಗಿ ಮೂರು ಗೋಲ್‌ಗಳನ್ನೂ ಎಂಬಾಪೆ ಒಬ್ಬರೇ ಗಳಿಸುವ ಮೂಲಕ ಪೆನಾಲ್ಟಿ ಶೂಟ್‌ಗೆ ಪಂದ್ಯ ಕಾಲಿಡಲು ಕಾರಣವಾದರು.

ತೊಂಬತ್ತು ನಿಮಿಷಗಳ ಆಟದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಒಂದು ಪ್ಯಾನಲ್ಟಿ ಸೇರಿದಂತೆ ಎಂಬಾಪೆ ಬಾರಿಸಿದ ಎರಡು ಗೋಲುಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಮತ್ತೆ ಹೆಚ್ಚುವರಿ ಅರ್ಧ ಗಂಟೆಯಲ್ಲಿ ಮೆಸ್ಸಿ ಒಂದು ಗೋಲು ಗಳಿಸಿದರು. ಪ್ಯಾನಲ್ಟಿ ಗೋಲಿನ ಅದೃಷ್ಟ ಪಡೆದ ಎಂಬಾಪೆ ಮತ್ತೊಂದು ಗೋಲು ತಮ್ಮದಾಗಿಸಿಕೊಂಡರು. ಹೀಗೆ ಸಮಬಲ ಸಾಧಿಸಿದ ಪಂದ್ಯ ಪ್ಯಾನಲ್ಟಿ ಶೂಟೌಟ್‌ಗೆ ಕಾಲಿಟ್ಟಿದ್ದು ರೋಮಾಂಚನಕಾರಿಯಾಗಿತ್ತು. ಫೈನಲ್‌ನಲ್ಲಿ ನಾಲ್ಕು ಗೋಲು ಗಳಿಸಿದ ಖ್ಯಾತಿಗೂ ಎಂಬಾಪೆ ಪಾತ್ರರಾಗಿದ್ದಾರೆ. 2018ರ ವರ್ಡ್‌ಕಪ್‌ ಫೈನಲ್‌ನಲ್ಲಿ ಕ್ರೊಯೇಷಿಯ ವಿರುದ್ಧ ಒಂದು ಗೋಲನ್ನು ಎಂಬಾಪೆ ಗಳಿಸಿದ್ದರು.

ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್‌ ಯಾರಿಗೆ ದೊರಕುತ್ತದೆ ಎಂಬ ಕುತೂಹಲ ಉಂಟಾಗಿತ್ತು. ಪಂದ್ಯದ ಏರಿಳಿತದಲ್ಲಿ ಒಮ್ಮೆ ಮೆಸ್ಸಿ ಕಡೆಗೂ ಮತ್ತೊಂದು ಸಲ ಎಂಬಾಪೆ ಕಡೆಗೂ ಗೋಲ್ಡನ್‌ ಬೂಟ್‌ ಅವಕಾಶ ಹರಿದಾಡುತ್ತಿತ್ತು. ಅಂತಿಮವಾಗಿ ಏಳು ಗೋಲನ್ನು ಮೆಸ್ಸಿ ಗಳಿಸಿದರೆ, ಎಂಬಾಪೆ ಎಂಟು ಗೋಲು ಭಾರಿಸಿದರು.

ಗೋಲ್ಡನ್ ಬೂಟ್‌ನ ಸಮರ ಹೇಗಿತ್ತು?

ಕತಾರ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಎಂಟು ಗೋಲ್‌ಗಳನ್ನು ಎಂಬಾಪೆ ಗಳಿಸಿದ್ದಾರೆ. ಜೊತೆಗೆ ಎರಡು ಗೋಲ್‌ಗಳಿಗೆ ಅಸಿಸ್ಟ್‌ (ನೆರವು) ಮಾಡಿದ್ದಾರೆ. ಫ್ರಾನ್ಸ್‌ ತಂಡವು ಟೂರ್ನಿಯಲ್ಲಿ ಫೈನಲ್‌ ತಲುಪಿ, ಪ್ರಬಲ ಪೈಪೋಟಿ ನೀಡಲು ಕಾರಣವಾದ ಎಂಬಾಪೆಯ ಗೋಲ್‌ಗಳು ಹೀಗಿದ್ದವು:

(ಆವರಣದಲ್ಲಿ ನೀಡಿರುವುದು ಎಂಬಾಪೆ ಗಳಿಸಿದ ಗೋಲ್‌ಗಳ ಸಂಖ್ಯೆ)

ಡಿ ಗುಂಪು: ಫ್ರಾನ್ಸ್ 4-1 ಆಸ್ಟ್ರೇಲಿಯಾ (1 ಗೋಲು, 1 ಅಸಿಸ್ಟ್‌)

ಡಿ ಗುಂಪು: ಫ್ರಾನ್ಸ್ 2-1 ಡೆನ್ಮಾರ್ಕ್ (2 ಗೋಲು)

ಡಿ ಗುಂಪು: ಟುನೀಶಿಯಾ 1-0 ಫ್ರಾನ್ಸ್ (0 ಗೋಲುಗಳು)

16ರ ಸುತ್ತು: ಫ್ರಾನ್ಸ್ 3-1 ಪೋಲೆಂಡ್ (2 ಗೋಲುಗಳು, 1 ಅಸಿಸ್ಟ್)

ಕ್ವಾರ್ಟರ್-ಫೈನಲ್: ಇಂಗ್ಲೆಂಡ್ 1-2 ಫ್ರಾನ್ಸ್ (0 ಗೋಲು)

ಸೆಮಿಫೈನಲ್: ಫ್ರಾನ್ಸ್ 2-0 ಮೊರಾಕೊ (0 ಗೋಲು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (3 ಗೋಲುಗಳು)

ಮೆಸ್ಸಿ ಮ್ಯಾಜಿಕ್‌

ಅರ್ಜೆಂಟೀನಾದ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ, ಅರ್ಜೇಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೊಂದು ಗೋಲ್ ಗಳಿಸಿದ್ದರೂ ಅವರು ಎಂಬಾಪೆ ಅವರೊಂದಿಗೆ ಸಮಬಲ ಸಾಧಿಸಿ ಗೋಲ್ಡನ್‌ ಬೂಟ್‌ ಪಡೆಯುತ್ತಿದ್ದರು. ಯಾಕೆಂದರೆ ಒಂದು ಹೆಚ್ಚುವರಿ ಅಸಿಸ್ಟ್ ಮಾಡಿದ ದಾಖಲೆ ಮೆಸ್ಸಿ ಅವರ ಪಾಲಿಗಿತ್ತು. ಅಂತಿಮವಾಗಿ ಮೆಸ್ಸಿ ಈ ಟೂರ್ನಿಯಲ್ಲಿ 7 ಗೋಲು ಹಾಗೂ 3 ಅಸಿಸ್ಟ್‌ ಮಾಡಿದ್ದಾರೆ.

ಮೆಸ್ಸಿ ಗೋಲ್‌ ಭಾರಿಸಿದ ಪಂದ್ಯಗಳು ಹೀಗಿವೆ:

(ಆವರಣದಲ್ಲಿ ನೀಡಿರುವುದು ಮೆಸ್ಸಿ ಗಳಿಸಿದ ಗೋಲ್‌ಗಳ ಸಂಖ್ಯೆ)

ಗುಂಪು ಸಿ: ಅರ್ಜೆಂಟೀನಾ 1-2 ಸೌದಿ ಅರೇಬಿಯಾ (1 ಗೋಲು)

ಗುಂಪು ಸಿ: ಅರ್ಜೆಂಟೀನಾ 2-1 ಮೆಕ್ಸಿಕೋ (1 ಗೋಲು, 1 ಅಸಿಸ್ಟ್‌)

ಗುಂಪು ಸಿ: ಪೋಲೆಂಡ್ 0-2 ಅರ್ಜೆಂಟೀನಾ (0 ಗೋಲುಗಳು)

16ರ ಸುತ್ತು: ಅರ್ಜೆಂಟೀನಾ 2-1 ಆಸ್ಟ್ರೇಲಿಯಾ (1 ಗೋಲು)

ಕ್ವಾರ್ಟರ್-ಫೈನಲ್: ನೆದರ್ಲ್ಯಾಂಡ್ಸ್ 2-2 ಅರ್ಜೆಂಟೀನಾ (1 ಗೋಲು, 1 ಅಸಿಸ್ಟ್‌)

ಸೆಮಿಫೈನಲ್: ಅರ್ಜೆಂಟೀನಾ 3-0 ಕ್ರೊಯೇಷಿಯಾ (1 ಗೋಲು, 1 ನೆರವು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (2 ಗೋಲು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...