Homeಮುಖಪುಟಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!

- Advertisement -
- Advertisement -

ಇದನ್ನು ನೀವು ಓದುವ ಹೊತ್ತಿಗಾಗಲೇ ಎಕ್ಸಿಟ್ ಪೋಲ್ ಅಂದರೆ ಚುನಾವಣೆ ನಂತರದ ಸಮೀಕ್ಷೆಗಳು ಹೊರಬೀಳಲು ಶುರು ಮಾಡಿರುತ್ತವೆ. ಭಾರತದಲ್ಲಿ ಇವತ್ತು ಹಲವಾರು ಸಂಸ್ಥೆಗಳು ಹಲವು ಚಾನೆಲ್‍ಗಳ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ಮಾಡುತ್ತಿವೆ. ಇದರಲ್ಲಿ ಯಾರು ಹೆಚ್ಚು ವಿಶ್ವಾಸಾರ್ಹರು? ಅವುಗಳ ಹಿಂದಿನ ಸಾಧನೆಯನ್ನು ನೋಡಿದರೆ, ಒಂದು ನಿಖರ ಉತ್ತರ ಸಿಗಬಹುದು. ಆ ಪ್ರಯತ್ನ ಇಲ್ಲಿದೆ…

ಈ ಮೊದಲ ವಾಕ್ಯ ಓದಿ: ‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!
ಇದು ಒಟ್ಟಾಗಿ ಎಲ್ಲ ಎಕ್ಸಿಟ್ ಪೋಲ್‍ಗಳನ್ನು ಸಮೀಕರಿಸಿ ನೀಡಿದ ತೀರ್ಮಾನ. ಆದರೂ ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಈ ಚುನಾವಣೋತ್ತರ ಸಮೀಕ್ಷೆಗಳೇ ( ಎಕ್ಸಿಟ್ ಪೋಲ್ಸ್) ಆದಷ್ಟು ಹತ್ತಿರ ಹತ್ತಿರದ ಸಂಖ್ಯೆಗಳನ್ನು ಕೊಡುತ್ತ ಬಂದಿವೆ.

ಎಕ್ಸಿಟ್ ಪೋಲ್ ನಡೆಸುವ ಬಹುಪಾಲು ಸಂಸ್ಥೆಗಳು ತಮ್ಮದು ನಿಖರ, ವಿಶ್ವಾಸಾರ್ಹ ಎನ್ನುತ್ತವೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಮೀಕ್ಷಾ ಸಂಸ್ಥೆಗಳ ಟ್ರ್ಯಾಕ್ ರೆಕಾರ್ಡ್ ಏನು ಎಂದುದನ್ನು ನೋಡೋಣ…

• ಭಾರತದಲ್ಲಿ ಎಕ್ಸಿಟ್ ಪೋಲ್ ವಿಷಯಕ್ಕೆ ಬಂದರೆ 1996 ಮಹತ್ವದ ವರ್ಷ. ಆಗ ದೂರದರ್ಶನವು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವೆಲಪಿಂಗ್ ಸೊಸೈಟೀಸ್ ( ಸಿಎಸ್‍ಡಿಎಸ್)ಗೆ ಚುನಾವಣಾ ಸಮೀಕ್ಷೆ ಮಾಡಿಕೊಡಲು ಕೇಳಿತು. ( ಇದು ಯೋಗೇಂದ್ರ ಯಾದವ್ ಮತ್ತು ಸ್ನೇಹಿತರು ಹುಟ್ಟು ಹಾಕಿದ ಸಂಸ್ಥೆ). ಅದು ಅನೌಪಚಾರಿಕ ಸಮೀಕ್ಷೆಯಾಗಿದ್ದು, ಸಂಪೂರ್ಣ ಬಹುಮತದ ಕೊರತೆ, ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಇಲ್ಲದ ಒಮ್ಮತದ ಕಾರಣದಿಂದಾಗಿ 1999ರವರೆಗೆ ದೇಶವು ಹಲವು ಚುನಾವಣೆಗಳನ್ನು ಕಾಣಲಿದೆ ಎಂದು ಈ ಸಮೀಕ್ಷೆ ಹೇಳಿತ್ತು.
ಆಗ ಸಿಎಸ್‍ಡಿಎಸ್ ಸಮೀಕ್ಷೆ ಸಾರಾಂಶದಲ್ಲಿ ನಿಜವಾಗಿತ್ತು. ಅತಂತ್ರ ಫಲಿತಾಂಶ ಬಂದು, ಆಗ ಲೋಕಸಭೆಯಲ್ಲಿ ದೊಡ್ಡ ಪಾರ್ಟಿಯಾದ ಬಿಜೆಪಿ ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ರಚಿಸಿತ್ತು, ಅದರ ಆಯುಷ್ಯ 13 ದಿನವಾಗಿತ್ತು.

• 1998ರಲ್ಲಿ ದೇಶ ಮತ್ತೆ ಚುನಾವಣೆ ಎದುರಿಸಿದಾಗ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ/ಸಿಎಸ್‍ಡಿಎಸ್, ಡಿಆರ್‍ಎಸ್, ಔಟ್‍ಲುಕ್/ ಎ.ಸಿ. ನೆಲ್ಸನ್ ಮತ್ತು ಫ್ರಂಟ್‍ಲೈನ್/ಸಿಎಂಎಸ್- ಈ ನಾಲ್ಕೂ ಪ್ರಮುಖ ಸಮೀಕ್ಷಾ ಕೂಟಗಳು ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರಳ ಬಹುಮತ ದಾಟಿ ಆರಾಮಾಗಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದವು. ಆದರೆ, ವಾಜಪೇಯಿ ನೇತೃತ್ವದ ಕೂಟ 252 ಸೀಟು ಪಡೆದು ಬಹುಮತದ ಕೊರತೆ ಎದುರಿಸಿದರೆ, ಕಾಂಗ್ರೆಸ್ 166 ಸೀಟು ಪಡೆದಿತ್ತು.

• 1999ರಲ್ಲಿ ಕಾರ್ಗಿಲ್ ‘ಯುದ್ಧ’ದ ನಂತರ ಭಾರತ ಮತ್ತೆ ಹೊಸ ಪ್ರಧಾನಿಯ ಆಯ್ಕೆಗೆ ಹೋಗಿತ್ತು. ಆ ಚುನಾವಣೆಯಲ್ಲಿ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎಗೆ ಸ್ಪಷ್ಟ ಬಹುಮತ, 300ಕ್ಕೂ ಹೆಚ್ಚು ಸೀಟು ಎಂದಿದ್ದವು. ಕೊನೆಗೆ ಎನ್‍ಡಿಎಗೆ 296 ಸೀಟು ಸಿಕ್ಕಿದ್ದವು. ಕಾಂಗ್ರೆಸ್ಸೇತರ ಪಕ್ಷಗಳಿಗೆ 113 ಸೀಟು ಸಿಕ್ಕಿದ್ದವು.

• 2004ರ ಚುನಾವಣೆಯಲ್ಲಿ ವಾಜಪೇಯಿ ‘ಸಾಧನೆ’ ಇಟ್ಟಕೊಂಡು ‘ಇಂಡಿಯಾ ಶೈನಿಂಗ್’ ಪ್ರಚಾರ ಶುರುವಾಗಿತ್ತು. ಮತ್ತೆ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಎಂದು ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದ್ದವು. ಆದರೆ, ಇದರಲ್ಲಿ ಫಲಿತಾಂಶ ಉಲ್ಟಾ ಹೊಡೆದಿತ್ತು, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ದೊಡ್ಡ ಪಾರ್ಟಿಯಾಗಿ, ಯುಪಿಎ ಅಧಿಕಾರಕ್ಕೆ ಬಂದಿತ್ತು.

• 2004ರಿಂದ 2009ರವರೆಗೆ ಮನಮೋಹನಸಿಂಗ್ ಸರ್ಕಾರ. 2009ರಲ್ಲಿ ಮತ್ತೆ ಚುನಾವಣೆ. 2004ರಲ್ಲಿ ಮಾಡಿದ್ದ ತಪ್ಪು ನೆನಪಿಸಿಕೊಂಡ ಸಮೀಕ್ಷಾ ಕಂಪನಿಗಳು, ಆ ಸಲ ಯುಪಿಎ ಮತ್ತು ಎನ್‍ಡಿಎ ನಡುವೆ ನೆಕ್-ಟು-ನೆಕ್ ಸ್ಪರ್ಧೆ ಎಂದು ಹೇಳಿದ್ದವು. ಆದರೆ ಫಲಿತಾಂಶ ಅವುಗಳ ಪಾಲಿಗೆ ಮತ್ತೆ ಉಲ್ಟಾ ಹೊಡೆದಿತ್ತು. ಎ.ಸಿ. ನೆಲ್ಸನ್ ಸಮೀಕ್ಷೆ ಎನ್‍ಡಿಎಗೆ 197, ಯುಪಿಎಗೆ 199 ಸೀಟು ಎಂದು ಹೇಳಿತ್ತು. ಆದರೆ ಫಲಿತಾಂಶದಲ್ಲಿ ಯುಪಿಎಗೆ 262 ಸೀಟು, ಎನ್‍ಡಿಎಗೆ 159 ಸೀಟು ದಕ್ಕಿದ್ದವು. ಕಾಂಗ್ರೆಸ್ 2004ರಲ್ಲಿ ಗೆದ್ದಿದ್ದಕ್ಕಿಂತ 80 ಸೀಟು ಹೆಚ್ಚು ಗೆದ್ದಿದ್ದರೆ, ಎನ್‍ಡಿಎ 30 ಸೀಟು ಕಡಿಮೆ ಗೆದ್ದಿತ್ತು.

• 2014ರಲ್ಲಿ ಯುಪಿಎ ಭ್ರಷ್ಟಾಚಾರ ಮತ್ತು ಮೋದಿ ಹವಾ ಮುಖ್ಯ ವಸ್ತು ಆಗಿದ್ದವು. ಆಗ ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಆಗ ಎರಡು ಸರ್ವೆ ಮಾತ್ರ ಬಿಜೆಪಿಗೆ 280ರಷ್ಟು ಸೀಟು ಬರುವುದನ್ನು ಹೇಳಿದ್ದವು. ಹಾಗೆಯೇ ಕಾಂಗ್ರೆಸ್ 50ರ ಕೆಳಗೆ ಕುಸಿಯಬಹುದು ಎಂಬುದನ್ನು ಯಾವ ಸರ್ವೆಯೂ ಹೇಳಿರಲಿಲ್ಲ.

• ಒಟ್ಟಿನಲ್ಲಿ ಎಕ್ಸಿಟ್ ಪೋಲ್‍ಗಳು ಪಕ್ಕಾ ನಿಖರ ಫಲಿತಾಂಶ ಕೊಟ್ಟಿದ್ದು ಕಡಿಮೆ. ವಿವಿಧ ರಾಜ್ಯಗಳ ಚುನಾವಣಾ ಸಮೀಕ್ಷೆಗಳಲ್ಲೂ ಇದು ವ್ಯಕ್ತವಾಗಿದೆ. ಹಾಗಾಗಿ, ಈ ಎಕ್ಸಿಟ್ ಪೋಲ್‍ಗಳು ಫೈನಲ್ ಅಲ್ಲ, ಅವು ಅಪರೂಪಕ್ಕೊಮ್ಮೆ ನಿಖರ ಆಗಿವೆ. ಆದರೆ ಟ್ರೆಂಡ್ ಗುರುತಿಸಲು ಕೆಲವೊಮ್ಮೆ ಸಹಾಯವಾಗಿರಬಹುದು.

ಜನಪ್ರಿಯ ಅನಿಸಿಕೆ ಅಥವಾ ಪಾಪುಲರ್ ಮೂಡ್ ಆಧಾರದಲ್ಲಿ ಈ ಸಮೀಕ್ಷೆಗಳು ತಮ್ಮ ಸಂಖ್ಯೆಗಳನ್ನು ನೀಡುತ್ತ ಬಂದಿವೆಯಾ? ಹಾಗಿದ್ದಲ್ಲಿ ಇವತ್ತೂ ಅದನ್ನೇ ಹೇಳಿವೆಯಾ? ಯಾವುದಕ್ಕೂ ಮೇ 23ರ ಫಲಿತಾಂಶವೇ ಫೈನಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...