Homeಮುಖಪುಟಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!

- Advertisement -
- Advertisement -

ಇದನ್ನು ನೀವು ಓದುವ ಹೊತ್ತಿಗಾಗಲೇ ಎಕ್ಸಿಟ್ ಪೋಲ್ ಅಂದರೆ ಚುನಾವಣೆ ನಂತರದ ಸಮೀಕ್ಷೆಗಳು ಹೊರಬೀಳಲು ಶುರು ಮಾಡಿರುತ್ತವೆ. ಭಾರತದಲ್ಲಿ ಇವತ್ತು ಹಲವಾರು ಸಂಸ್ಥೆಗಳು ಹಲವು ಚಾನೆಲ್‍ಗಳ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ಮಾಡುತ್ತಿವೆ. ಇದರಲ್ಲಿ ಯಾರು ಹೆಚ್ಚು ವಿಶ್ವಾಸಾರ್ಹರು? ಅವುಗಳ ಹಿಂದಿನ ಸಾಧನೆಯನ್ನು ನೋಡಿದರೆ, ಒಂದು ನಿಖರ ಉತ್ತರ ಸಿಗಬಹುದು. ಆ ಪ್ರಯತ್ನ ಇಲ್ಲಿದೆ…

ಈ ಮೊದಲ ವಾಕ್ಯ ಓದಿ: ‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!
ಇದು ಒಟ್ಟಾಗಿ ಎಲ್ಲ ಎಕ್ಸಿಟ್ ಪೋಲ್‍ಗಳನ್ನು ಸಮೀಕರಿಸಿ ನೀಡಿದ ತೀರ್ಮಾನ. ಆದರೂ ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಈ ಚುನಾವಣೋತ್ತರ ಸಮೀಕ್ಷೆಗಳೇ ( ಎಕ್ಸಿಟ್ ಪೋಲ್ಸ್) ಆದಷ್ಟು ಹತ್ತಿರ ಹತ್ತಿರದ ಸಂಖ್ಯೆಗಳನ್ನು ಕೊಡುತ್ತ ಬಂದಿವೆ.

ಎಕ್ಸಿಟ್ ಪೋಲ್ ನಡೆಸುವ ಬಹುಪಾಲು ಸಂಸ್ಥೆಗಳು ತಮ್ಮದು ನಿಖರ, ವಿಶ್ವಾಸಾರ್ಹ ಎನ್ನುತ್ತವೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಮೀಕ್ಷಾ ಸಂಸ್ಥೆಗಳ ಟ್ರ್ಯಾಕ್ ರೆಕಾರ್ಡ್ ಏನು ಎಂದುದನ್ನು ನೋಡೋಣ…

• ಭಾರತದಲ್ಲಿ ಎಕ್ಸಿಟ್ ಪೋಲ್ ವಿಷಯಕ್ಕೆ ಬಂದರೆ 1996 ಮಹತ್ವದ ವರ್ಷ. ಆಗ ದೂರದರ್ಶನವು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವೆಲಪಿಂಗ್ ಸೊಸೈಟೀಸ್ ( ಸಿಎಸ್‍ಡಿಎಸ್)ಗೆ ಚುನಾವಣಾ ಸಮೀಕ್ಷೆ ಮಾಡಿಕೊಡಲು ಕೇಳಿತು. ( ಇದು ಯೋಗೇಂದ್ರ ಯಾದವ್ ಮತ್ತು ಸ್ನೇಹಿತರು ಹುಟ್ಟು ಹಾಕಿದ ಸಂಸ್ಥೆ). ಅದು ಅನೌಪಚಾರಿಕ ಸಮೀಕ್ಷೆಯಾಗಿದ್ದು, ಸಂಪೂರ್ಣ ಬಹುಮತದ ಕೊರತೆ, ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಇಲ್ಲದ ಒಮ್ಮತದ ಕಾರಣದಿಂದಾಗಿ 1999ರವರೆಗೆ ದೇಶವು ಹಲವು ಚುನಾವಣೆಗಳನ್ನು ಕಾಣಲಿದೆ ಎಂದು ಈ ಸಮೀಕ್ಷೆ ಹೇಳಿತ್ತು.
ಆಗ ಸಿಎಸ್‍ಡಿಎಸ್ ಸಮೀಕ್ಷೆ ಸಾರಾಂಶದಲ್ಲಿ ನಿಜವಾಗಿತ್ತು. ಅತಂತ್ರ ಫಲಿತಾಂಶ ಬಂದು, ಆಗ ಲೋಕಸಭೆಯಲ್ಲಿ ದೊಡ್ಡ ಪಾರ್ಟಿಯಾದ ಬಿಜೆಪಿ ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ರಚಿಸಿತ್ತು, ಅದರ ಆಯುಷ್ಯ 13 ದಿನವಾಗಿತ್ತು.

• 1998ರಲ್ಲಿ ದೇಶ ಮತ್ತೆ ಚುನಾವಣೆ ಎದುರಿಸಿದಾಗ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ/ಸಿಎಸ್‍ಡಿಎಸ್, ಡಿಆರ್‍ಎಸ್, ಔಟ್‍ಲುಕ್/ ಎ.ಸಿ. ನೆಲ್ಸನ್ ಮತ್ತು ಫ್ರಂಟ್‍ಲೈನ್/ಸಿಎಂಎಸ್- ಈ ನಾಲ್ಕೂ ಪ್ರಮುಖ ಸಮೀಕ್ಷಾ ಕೂಟಗಳು ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರಳ ಬಹುಮತ ದಾಟಿ ಆರಾಮಾಗಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದವು. ಆದರೆ, ವಾಜಪೇಯಿ ನೇತೃತ್ವದ ಕೂಟ 252 ಸೀಟು ಪಡೆದು ಬಹುಮತದ ಕೊರತೆ ಎದುರಿಸಿದರೆ, ಕಾಂಗ್ರೆಸ್ 166 ಸೀಟು ಪಡೆದಿತ್ತು.

• 1999ರಲ್ಲಿ ಕಾರ್ಗಿಲ್ ‘ಯುದ್ಧ’ದ ನಂತರ ಭಾರತ ಮತ್ತೆ ಹೊಸ ಪ್ರಧಾನಿಯ ಆಯ್ಕೆಗೆ ಹೋಗಿತ್ತು. ಆ ಚುನಾವಣೆಯಲ್ಲಿ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎಗೆ ಸ್ಪಷ್ಟ ಬಹುಮತ, 300ಕ್ಕೂ ಹೆಚ್ಚು ಸೀಟು ಎಂದಿದ್ದವು. ಕೊನೆಗೆ ಎನ್‍ಡಿಎಗೆ 296 ಸೀಟು ಸಿಕ್ಕಿದ್ದವು. ಕಾಂಗ್ರೆಸ್ಸೇತರ ಪಕ್ಷಗಳಿಗೆ 113 ಸೀಟು ಸಿಕ್ಕಿದ್ದವು.

• 2004ರ ಚುನಾವಣೆಯಲ್ಲಿ ವಾಜಪೇಯಿ ‘ಸಾಧನೆ’ ಇಟ್ಟಕೊಂಡು ‘ಇಂಡಿಯಾ ಶೈನಿಂಗ್’ ಪ್ರಚಾರ ಶುರುವಾಗಿತ್ತು. ಮತ್ತೆ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಎಂದು ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದ್ದವು. ಆದರೆ, ಇದರಲ್ಲಿ ಫಲಿತಾಂಶ ಉಲ್ಟಾ ಹೊಡೆದಿತ್ತು, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ದೊಡ್ಡ ಪಾರ್ಟಿಯಾಗಿ, ಯುಪಿಎ ಅಧಿಕಾರಕ್ಕೆ ಬಂದಿತ್ತು.

• 2004ರಿಂದ 2009ರವರೆಗೆ ಮನಮೋಹನಸಿಂಗ್ ಸರ್ಕಾರ. 2009ರಲ್ಲಿ ಮತ್ತೆ ಚುನಾವಣೆ. 2004ರಲ್ಲಿ ಮಾಡಿದ್ದ ತಪ್ಪು ನೆನಪಿಸಿಕೊಂಡ ಸಮೀಕ್ಷಾ ಕಂಪನಿಗಳು, ಆ ಸಲ ಯುಪಿಎ ಮತ್ತು ಎನ್‍ಡಿಎ ನಡುವೆ ನೆಕ್-ಟು-ನೆಕ್ ಸ್ಪರ್ಧೆ ಎಂದು ಹೇಳಿದ್ದವು. ಆದರೆ ಫಲಿತಾಂಶ ಅವುಗಳ ಪಾಲಿಗೆ ಮತ್ತೆ ಉಲ್ಟಾ ಹೊಡೆದಿತ್ತು. ಎ.ಸಿ. ನೆಲ್ಸನ್ ಸಮೀಕ್ಷೆ ಎನ್‍ಡಿಎಗೆ 197, ಯುಪಿಎಗೆ 199 ಸೀಟು ಎಂದು ಹೇಳಿತ್ತು. ಆದರೆ ಫಲಿತಾಂಶದಲ್ಲಿ ಯುಪಿಎಗೆ 262 ಸೀಟು, ಎನ್‍ಡಿಎಗೆ 159 ಸೀಟು ದಕ್ಕಿದ್ದವು. ಕಾಂಗ್ರೆಸ್ 2004ರಲ್ಲಿ ಗೆದ್ದಿದ್ದಕ್ಕಿಂತ 80 ಸೀಟು ಹೆಚ್ಚು ಗೆದ್ದಿದ್ದರೆ, ಎನ್‍ಡಿಎ 30 ಸೀಟು ಕಡಿಮೆ ಗೆದ್ದಿತ್ತು.

• 2014ರಲ್ಲಿ ಯುಪಿಎ ಭ್ರಷ್ಟಾಚಾರ ಮತ್ತು ಮೋದಿ ಹವಾ ಮುಖ್ಯ ವಸ್ತು ಆಗಿದ್ದವು. ಆಗ ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಆಗ ಎರಡು ಸರ್ವೆ ಮಾತ್ರ ಬಿಜೆಪಿಗೆ 280ರಷ್ಟು ಸೀಟು ಬರುವುದನ್ನು ಹೇಳಿದ್ದವು. ಹಾಗೆಯೇ ಕಾಂಗ್ರೆಸ್ 50ರ ಕೆಳಗೆ ಕುಸಿಯಬಹುದು ಎಂಬುದನ್ನು ಯಾವ ಸರ್ವೆಯೂ ಹೇಳಿರಲಿಲ್ಲ.

• ಒಟ್ಟಿನಲ್ಲಿ ಎಕ್ಸಿಟ್ ಪೋಲ್‍ಗಳು ಪಕ್ಕಾ ನಿಖರ ಫಲಿತಾಂಶ ಕೊಟ್ಟಿದ್ದು ಕಡಿಮೆ. ವಿವಿಧ ರಾಜ್ಯಗಳ ಚುನಾವಣಾ ಸಮೀಕ್ಷೆಗಳಲ್ಲೂ ಇದು ವ್ಯಕ್ತವಾಗಿದೆ. ಹಾಗಾಗಿ, ಈ ಎಕ್ಸಿಟ್ ಪೋಲ್‍ಗಳು ಫೈನಲ್ ಅಲ್ಲ, ಅವು ಅಪರೂಪಕ್ಕೊಮ್ಮೆ ನಿಖರ ಆಗಿವೆ. ಆದರೆ ಟ್ರೆಂಡ್ ಗುರುತಿಸಲು ಕೆಲವೊಮ್ಮೆ ಸಹಾಯವಾಗಿರಬಹುದು.

ಜನಪ್ರಿಯ ಅನಿಸಿಕೆ ಅಥವಾ ಪಾಪುಲರ್ ಮೂಡ್ ಆಧಾರದಲ್ಲಿ ಈ ಸಮೀಕ್ಷೆಗಳು ತಮ್ಮ ಸಂಖ್ಯೆಗಳನ್ನು ನೀಡುತ್ತ ಬಂದಿವೆಯಾ? ಹಾಗಿದ್ದಲ್ಲಿ ಇವತ್ತೂ ಅದನ್ನೇ ಹೇಳಿವೆಯಾ? ಯಾವುದಕ್ಕೂ ಮೇ 23ರ ಫಲಿತಾಂಶವೇ ಫೈನಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...