Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಪ್ರತಾಪ್ 'ಡ್ರೋನ್' ತಯಾರಿಸಿದ್ದು ನಿಜವೇ? ಜಪಾನ್‌ನ ಬುಲೆಟ್ ಟ್ರೈನ್ ಕಥೆಯೇನು?

ಫ್ಯಾಕ್ಟ್‌ಚೆಕ್: ಪ್ರತಾಪ್ ‘ಡ್ರೋನ್’ ತಯಾರಿಸಿದ್ದು ನಿಜವೇ? ಜಪಾನ್‌ನ ಬುಲೆಟ್ ಟ್ರೈನ್ ಕಥೆಯೇನು?

- Advertisement -
- Advertisement -

ಕಳೆದೊಂದು ವಾರದಿಂದ ಇದುವರೆಗೂ ಡ್ರೋನ್ ಬಾಯ್ ಎಂದು ಕರೆಸಿಕೊಳ್ಳುತ್ತಿದ್ದ ಪ್ರತಾಪ್ ಮೇಲೆ ಹಲವಾರು ಆರೋಪಗಳು ಕೇಳಿಬಂದಿದ್ದು ಆತ ಡ್ರೋನ್ ತಯಾರಿಸಿಲ್ಲ. ಹಲವು ಸುಳ್ಳುಗಳನ್ನು ಹೇಳಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಈ ಫ್ಯಾಕ್ಟ್ ಚೆಕ್.

ತಮ್ಮ ಬಗ್ಗೆ ಬಂದ ಪ್ರಶ್ನೆಗಳು ಮತ್ತು ಟ್ರೋಲ್‌ಗಳ ಕುರಿತು ಉತ್ತರಿಸಲು ಜುಲೈ 16, 2020 ರಂದು  ಪ್ರತಾಪ್ ‘ಬಿಟಿವಿ ನ್ಯೂಸ್ ಕನ್ನಡ’ ಚಾನೆಲ್‌ನಲ್ಲಿ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ, ಅವರು ತಮ್ಮ ಪ್ರಮಾಣಪತ್ರಗಳನ್ನು ತೋರಿಸಿದರು ಮತ್ತು ಅವು ಅಧಿಕೃತವೆಂದು ಹೇಳಿಕೊಂಡರು. ಅದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಯಾವುದೇ ಹೆಚ್ಚುವರಿ ಪುರಾವೆಗಳನ್ನು ಅವರು ಒದಗಿಸಲಿಲ್ಲ. ಎಲ್ಲಿಯೂ ನಿಮ್ಮ ಡ್ರೋನ್‌ಗಳು ಕಾಣುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರವಾಗಿ ಪ್ರತಾಪ್, ತನ್ನ ಮೊಬೈಲ್‌ನಲ್ಲಿ ಡ್ರೋನ್ ಫೋಟೋವನ್ನು ತೋರಿಸಿ, ಇದನ್ನು ನಾನೇ ನಿರ್ಮಿಸಿದ್ದು ಹೇಳಿಕೊಂಡರು. ಇದೇ ಡ್ರೋನ್‌ಗಾಗಿ ಪ್ರಶಸ್ತಿ ಗೆದ್ದಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಆದರೆ ಅದೇ ಫೋಟೋ ಈಗಾಗಲೇ ಸಾರ್ವಜನಿಕ ವಲಯದಲ್ಲಿದೆ. 2020 ರ ಜನವರಿಯಲ್ಲಿ ಪ್ರತಾಪ್ ಕುರಿತು ‘ದಿ ಬೆಟರ್ ಇಂಡಿಯಾ’ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋವನ್ನು ಕಾಣಬಹುದು.

ಪ್ರತಾಪ್ ಫೋಟೊದಲ್ಲಿರುವ ಡ್ರೋಣ್‌ ಮೇಲೆ ‘ಬಿಲ್ಜ್ ಐ’ ಎಂದು ಬರೆದಿದೆ. ಆ ಕುರಿತು ಹುಡುಕಿದಾಗ, ‘ಬಿಲ್ಜ್ ಐ’ಜರ್ಮನ್ ಕಂಪನಿಯಾಗಿದ್ದು ಅದು ಮಲ್ಟಿಕಾಪ್ಟರ್ ತಯಾರಿಕೆಯಲ್ಲಿ ಪರಿಣಿತಿ ಪಡೆದಿದೆ.

‘ಬಿಲ್ಜ್ ಐ’ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ತನ್ನ ಡ್ರೋನ್‌ಗಳ ಫೋಟೊಗಳನ್ನು ಅದರಲ್ಲಿ ತೋರಿಸಿದೆ. ವಿಡಿಯೋ ವಿವರಣೆಯಲ್ಲಿ ಫೋಟೊಗಳು ಹ್ಯಾನೋವರ್ (ಜರ್ಮನಿ) ನಲ್ಲಿ ನಡೆದ ‘ಸಿಬಿಟ್’ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ಬರೆದಿದೆ.  ಅದೇ ಡ್ರೋಣ್ ಫೋಟೊವನ್ನು ಪ್ರತಾಪ್ ಕೂಡ ನಾನೇ ತಯಾರು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಆ ಡ್ರೋನ್‌ಗಾಗಿಯೇ 2018 ರಲ್ಲಿ ಜರ್ಮನಿಯಲ್ಲಿ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ ಗೆದ್ದಿದ್ದೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದಾರೆ. ಆದರೆ ‘ಬಿಲ್ಜ್ ಐ’ ಈ ಡ್ರೋನ್‌ಗೆ ಮೆಡಲ್ ಬಂದಿದೆಯೆಂದಾಗಲಿ, ಇದಕ್ಕೂ ಪ್ರತಾಪ್‌ಗೂ ಸಂಬಂಧವಿದೆಯೆಂದಾಗಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇದೇ ಚಿತ್ರವನ್ನು ಹಲವಾರು ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅದೇ ಕೆಂಪು ಡ್ರೋನ್‌ನ ಇತರ ಚಿತ್ರಗಳನ್ನು ಮತ್ತು ಪ್ರತಾಪ್ ಫೋಟೋದಲ್ಲಿ ಕಾಣುವ ಮೇಜಿನ ಮೇಲೆ ಇರಿಸಲಾಗಿರುವ ಕೆಲವು ಇತರ ಉಪಕರಣಗಳನ್ನು ‘ಬಿಲ್ಜ್ ಐ’ ವೆಬ್‌ಸೈಟ್‌ನಲ್ಲಿ ಸಹ ಕಾಣಬಹುದು. ಡ್ರೋನ್‌ನ ಹೆಸರನ್ನು ವೆಬ್‌ಸೈಟ್‌ನಲ್ಲಿ ‘ಥರ್ಮೋಗ್ರಾಫಿಕ್ ಕಾಪ್ಟರ್ ಬೆಥ್ -001’ ಎಂದು ಉಲ್ಲೇಖಿಸಲಾಗಿದೆ. ಮೇಜಿನ ಮೇಲಿರುವ ಹೆಡ್‌ಸೆಟ್‌ನಲ್ಲಿ ‘ಫ್ಯಾಟ್ ಶಾರ್ಕ್’ ಹೆಸರು ಇದೆ. ‘ಫ್ಯಾಟ್ ಶಾರ್ಕ್’ಕಂಪನಿಯು ಡ್ರೋನ್ ಪೈಲಟ್‌ಗಳಿಗಾಗಿ ‘ಎಫ್‌ಪಿವಿ’(ಫಸ್ಟ್-ಪರ್ಸನ್ ವ್ಯೂ) ಕನ್ನಡಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ.

ತಮ್ಮ ವೆಬ್‌ಸೈಟ್ ಮತ್ತು ಫೇಸ್‌ಬುಕ್ ಪುಟದಲ್ಲಿ, ‘ಬಿಲ್ಜ್ ಐ’ ಅವರು ‘ಬಿವಿಸಿಪಿ’ (ಬುಂಡೆಸ್‌ವರ್‌ಬ್ಯಾಂಡ್ ಕಾಪ್ಟರ್ ಪೈಲೊಟೆನ್ ಇ.ವಿ.) ಯ ಅಧಿಕೃತ ಸದಸ್ಯರು ಎಂದು ಉಲ್ಲೇಖಿಸಿದ್ದಾರೆ. ಫೋಟೋದಲ್ಲಿ ಪ್ರತಾಪ್ ಅವರ ಹಿಂದಿನ ಗೋಡೆಯ ಮೇಲೆ ಅದೇ ಹೆಸರು ಮತ್ತು ಲೋಗೊವನ್ನು ಕಾಣಬಹುದು.

ಅದು ‘ಸಿಬಿಐಟಿ 2018’ ನಲ್ಲಿರುವ ‘ಬಿವಿಸಿಪಿ’ ಸ್ಟಾಲ್‌ನಲ್ಲಿದ್ದು, ಅಲ್ಲಿ ‘ಬಿಲ್ಜ್ ಐ’ ಡ್ರೋನ್ ಅನ್ನು ಪ್ರದರ್ಶಿಸಿತು. ‘ಬಿವಿಸಿಪಿ’ ವೆಬ್‌ಸೈಟ್‌ನಲ್ಲಿ, ‘ಸಿಬಿಟ್ 2018 ರ ಅನಿಸಿಕೆಗಳು’ (ಜರ್ಮನ್ ಭಾಷೆಯಿಂದ ಗೂಗಲ್ ಅನುವಾದಿಸಿದೆ) ಶೀರ್ಷಿಕೆಯೊಂದಿಗೆ ಲೇಖನವನ್ನು ಕಾಣಬಹುದು. ಲೇಖನದಲ್ಲಿ ‘ಬಿಲ್ಜ್ ಐ’ಮಾಲೀಕ ಬಿಲ್ ಗುಟ್ಬಿಯರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಆದರೆ ಪ್ರತಾಪ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆ ಡ್ರೋನ್ ಪ್ರಶಸ್ತಿ ಗೆದ್ದ ಬಗ್ಗೆಯೂ ಯಾವುದೇ ವಿವರಗಳಿಲ್ಲ. ಲೇಖನದಲ್ಲಿ ಪೋಸ್ಟ್ ಮಾಡಿದ ಯಾವುದೇ ಫೋಟೋಗಳಲ್ಲಿ ಪ್ರತಾಪ್ ಕಂಡುಬಂದಿಲ್ಲ.

ಒಂದು ವೇಳೆ ಈ ಡ್ರೋನ್‌ಗಾಗಿ ಪ್ರತಾಪ್ ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ಗೆದ್ದಿದ್ದೆ ಆದರೆ (ಇನ್ನ ದೃಢವಾಗಿಲ್ಲ) ಕಂಪನಿ ಕೊಟ್ಟ ಪ್ರಮಾಣ ಪತ್ರದಲ್ಲಿ ಪ್ರತಾಪ್ ಹೆಸರಿರಬೇಕಿತ್ತು. ಆದರೆ ಅಲ್ಲಿ ಕಾಲೇಜಿನ ಹೆಸರನ್ನು ನಮೂದಿಸಲಾಗಿದೆ. ಅಲ್ಲದೇ ಪ್ರಶಸ್ತಿ ಪತ್ರದಲ್ಲಿ ಬಿಲ್ಜ್ ಐ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

 

 

 

ಪ್ರಮಾಣಪತ್ರದ ಮೇಲ್ಭಾಗದಲ್ಲಿ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಮೆಡಲ್’ಎಂದು ಬರೆಯಲಾಗಿದೆ. ಆದರೆ ಅದೇ ಪ್ರಮಾಣ ಪತ್ರದ ಕೆಳಗೆ ‘ಆಲ್ಬರ್ಟ್ ಐನ್‌ಸ್ಟೈನ್ ಇನ್ನೋವೇಶನ್ ಅವಾರ್ಡ್’ಎಂದು ಬರೆಯಲಾಗಿದೆ. ಅಲ್ಲದೆ, ಪ್ರಮಾಣಪತ್ರದಲ್ಲಿ, ‘ಡಾಯ್ಚ ಮೆಸ್ಸೆ’ ಕಂಪನಿಯ ಸಿಇಒ ಹೆಸರನ್ನು ‘ವೊಲ್ಫ್ರಾಮ್ ವಾನ್ ಫ್ರಿಟ್ಸ್’ಎಂದು ಬರೆಯಲಾಗಿದೆ. ಆದರೆ, ವೊಲ್ಫ್ರಾಮ್ ವಾನ್ ಫ್ರಿಟ್ಸ್ಚ್ ಅವರು ತಮ್ಮ ಸಿಇಓ ಜವಾಬ್ದಾರಿಯನ್ನು ಡಾ. ಜೋಚೆನ್ ಕೊಕ್ಲರ್ ಅವರಿಗೆ 2017 ರಲ್ಲಿಯೇ ಹಸ್ತಾಂತರಿಸಿದ್ದಾರೆ. ಇನ್ನೂ, 2018 ರಲ್ಲಿ ಪ್ರತಾಪ್ ಅವರಿಗೆ ನೀಡಲಾದ ಪ್ರಮಾಣಪತ್ರವು ಸಿಇಒ ಆಗಿ ವೊಲ್ಫ್ರಾಮ್ ವಾನ್ ಫ್ರಿಟ್ಸ್ ಅವರ ಹೆಸರನ್ನು ಹೊಂದಿದೆ. ಅಲ್ಲದೆ, ‘ದಿ ಬೆಟರ್ ಇಂಡಿಯಾ’ಕ್ಕೆ ಪ್ರತಿಕ್ರಿಯಿಸಿದ ಜರ್ಮನಿಯ ಕಾರ್ಯಕ್ರಮಗಳ ಸಂಘಟಕರು ತಾವು ಅಂತಹ ಯಾವುದೇ ಪ್ರಶಸ್ತಿಯನ್ನು ಆಯೋಜಿಸಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಹಲವಾರು ಮನವಿಗಳು ಬಂದ ನಂತರ ‘ಬಿಲ್ಜ್ ಐ’ಈ ಕುರಿತು ಹೇಳಿಕೆ ನೀಡಿದೆ. ಪ್ರತಾಪ್ ತಾನು ತಯಾರಿಸಿದ್ದೇನೆಂದು ಹೇಳಿಕೊಂಡ ‘ಮಲ್ಟಿಕಾಪ್ಟರ್ ಸಿಸ್ಟಂ’ ತನ್ನ ಆಸ್ತಿಯೆಂದು ಬಿಲ್ಜ್ ಐ ಸ್ಪಷ್ಟಪಡಿಸಿದೆ. ಆ ಡ್ರೋನ್‌ನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಅಥವಾ ವಿತರಣೆ ಸೇರಿದಂತೆ ಯಾವುದರಲ್ಲಿಯೂ ಪ್ರತಾಪ್‌ಗೆ ಯಾವುದೇ ಸಂಬಂಧವಿಲ್ಲ ‘ಮಿಸ್ಟರ್ ಪ್ರತಾಪ್ ಹ್ಯಾನೋವರ್‌ನಲ್ಲಿರುವ ಸಿಇಬಿಐಟಿ 2018 ನಲ್ಲಿ ಈ ಡ್ರೋನ್‌ನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಅಷ್ಟೇ. ಅದು ಬಿಟ್ಟು ಬೇರೆ ಏನೂ ಹೇಳಿದರೂ ಅದು ಸುಳ್ಳು’ ಎಂದು ಬಿಲ್ಜ್ ಐ ಜರ್ಮನ್ ಭಾಷೆಯಲ್ಲಿ ತಿಳಿಸಿದೆ.

ಆದ್ದರಿಂದ, ತಾನು ತೆಗೆಸಿಕೊಂಡಿದ್ದ ಫೋಟೊವನ್ನು ತೋರಿಸಿ ಅದನ್ನು ತಾನೇ ತಯಾರಿಸಿದ್ದು ಮತ್ತು ಅದಕ್ಕೆ ಪ್ರಶಸ್ತಿ ಬಂದಿದೆ ಎಂದು ಬಿಟಿವಿ ಕನ್ನಡ ವಾಹಿನಿಯಲ್ಲಿ ಪ್ರತಾಪ್  ಹೇಳಿದ್ದು ಸುಳ್ಳು ಎಂದು ಸಾಬೀತಾಗಿದೆ.

ಮಾಧ್ಯಮ ಮತ್ತು ಸೆಲೆಬ್ರೆಟಿಗಳು:

ಪ್ರತಾಪ್‌ಗೆ ಸಂಬಂಧಿಸಿದಂತೆ ಮೇಲಿನ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಇತರ ವಿಷಯಗಳ ಬಗ್ಗೆ ಹುಡುಕಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅವರ ಸಾಧನೆಗಳಿಗೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ಹಿಂದೆ ಅವರ ಸಾಧನೆಗಳಿಗಾಗಿ ‘ಡಿಡಿ ಚಂದನ’ (ವಿಡಿಯೋ ಈಗ ಲಭ್ಯವಿಲ್ಲ) ಸೇರಿದಂತೆ ವಿವಿಧ ಕನ್ನಡ ಚಾನೆಲ್‌ಗಳು ಪ್ರತಾಪ್‌ರವರ ಸಂದರ್ಶನ ಮಾಡಿದ್ದವು. ಅಲ್ಲದೆ, ‘ದಿಗ್ವಿಜಯ 24X7 ನ್ಯೂಸ್’ಚಾನೆಲ್‌ನ ವಿಡಿಯೋದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೆಚ್. ಡಿ. ಕುಮಾರಸ್ವಾಮಿ (ಆಗ ಕರ್ನಾಟಕದ ಸಿಎಂ) ಮತ್ತು ಇತರ ಗಣ್ಯರು ಪ್ರತಾಪ್ ಅವರ ಸಾಧನೆಗಳ ಬಗ್ಗೆ ಶುಭ ಹಾರೈಸಿದ್ದಾರೆ. ಮಲ್ಟಿ-ಡ್ರೋನ್ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದಕ್ಕಾಗಿ ಅವರು ‘ಟಿವಿ 9 ಕನ್ನಡ ಚಾನೆಲ್‌ನಿಂದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿವಿಧ ರಾಜಕೀಯ ಮುಖಂಡರು ಮತ್ತು ಸೆಲೆಬ್ರಿಟಿಗಳೊಂದಿಗಿನ ಪ್ರತಾಪ್ ಇರುವ ಅನೇಕ ಫೋಟೋಗಳನ್ನು ‘droneprathap’ ಹೆಸರಿನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕಾಣಬಹುದಾಗಿದೆ. (ಪ್ರೊಫೈಲ್ ಮತ್ತು ಫೋಟೋಗಳ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲಿಸಲು ಸಾಧ್ಯವಾಗಿಲ್ಲ.)

ಡ್ರೋನ್‌ಗಳೊಂದಿಗಿನ ಫೋಟೋಗಳು:

ಪ್ರತಾಪ್ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ಯಾವುದೇ ಚಿತ್ರಗಳು ಅಥವಾ ವಿಡಿಯೋಗಳು ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಕೆಲವು ಡ್ರೋನ್‌ಗಳ ಪಕ್ಕದಲ್ಲಿ ಪ್ರತಾಪ್ ನಿಂತಿರುವ ಕೆಲವು ಫೋಟೋಗಳಿವೆಯಾದರೂ ಅವು ಆತನ ನಿರ್ಮಿಸಿದ್ದಲ್ಲ. ಬದಲಿಗೆ ಅವು ಹೆಸರಾಂತ ಡ್ರೋನ್ ಕಂಪನಿಗಳಿಗೆ ಸೇರಿವೆ. ಪೋಸ್ಟ್‌ನಲ್ಲಿ ಹಾಕಿರುವ ಫೋಟೋದಲ್ಲಿ ಪ್ರತಾಪ್ ‘ಎಸಿಎಸ್ಎಲ್’ (Autonomous Control Systems Laboratory Ltd) ಎಂಬ ಕಂಪನಿಗೆ ಸೇರಿದ ಡ್ರೋನ್ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ರೆಡ್ಡಿಟ್ ಬಳಕೆದಾರರು ಆ ಡ್ರೋನ್‌ ಮತ್ತು ಪ್ರತಾಪ್‌ನೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ “ಪ್ರತಾಪ್‌ಗೆ ಕಂಪನಿ ಅಥವಾ ಡ್ರೋನ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಎಸಿಎಸ್ಎಲ್ ಇಮೇಲ್ ಮೂಲಕ ಸ್ಪಷ್ಟಪಡಿಸಿದೆ.

ಅಲ್ಲದೆ, ಕರ್ನಾಟಕ ಪ್ರವಾಹದ ಸಂದರ್ಭದಲ್ಲಿ ಪ್ರತಾಪ್ ಬಳಸಿದ ಡ್ರೋನ್‌ನ ರಿಮೋಟ್ ‘ಯುನೆಕ್ ಟೈಫೂನ್ ಎಚ್ +’ ಡ್ರೋನ್ ರಿಮೋಟ್‌ಗೆ ಹೋಲುತ್ತದೆ.

ಯುವ ವಿಜ್ಞಾನಿ ಪ್ರಶಸ್ತಿ – ‘ಐರೆಕ್ಸ್ 2017’ – ಜಪಾನ್:

ಟೋಕಿಯೊದಲ್ಲಿ ನಡೆದ ಎಕ್ಸ್‌ಪೋವೊಂದರಲ್ಲಿ ಅವರು ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆ ಬಹುಮಾನಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಅನೇಕ ಸುದ್ದಿ ಬ್ಲಾಗ್ ವೆಬ್‌ಸೈಟ್‌ಗಳಲ್ಲಿ ಕಾಣಬಹುದು. ಪ್ರಮಾಣಪತ್ರದಲ್ಲಿ, ‘ಐರೆಕ್ಸ್ 2017’ ಪ್ರದರ್ಶನದಲ್ಲಿ ಪ್ರಶಸ್ತಿ ಗೆದ್ದಿದೆ ಎಂದು ಬರೆಯಲಾಗಿದೆ. ಆದರೆ, ‘ಐರೆಕ್ಸ್ 2017’ ಟ್ರೇಡ್ ಎಕ್ಸ್‌ಪೋ ಆಗಿದ್ದು, ಅಲ್ಲಿ ವಿವಿಧ ಕಂಪನಿಗಳು ತಮ್ಮ ರೋಬೋಟ್‌ಗಳನ್ನು ಪ್ರದರ್ಶಿಸುತ್ತವೆ. ಅಲ್ಲಿ ಯಾವುದೇ ಸ್ಪರ್ಧೆ ನಡೆದ ಮತ್ತು ಪ್ರತಾಪ್ ಬಹುಮಾನ ಗೆದ್ದ ಯಾವುದೇ ವರದಿಗಳು ಲಭ್ಯವಿಲ್ಲ. ಎಕ್ಸ್‌ಪೋ ಸಂಘಟಕರು 2017 ರ ಕಾರ್ಯಕ್ರಮದ ನಂತರ ‘ಪ್ರದರ್ಶನ ನಂತರದ ವರದಿ’ ಬಿಡುಗಡೆ ಮಾಡಿದ್ದಾರೆ. ಆದರೆ ವರದಿಯಲ್ಲಿ ಸ್ಪರ್ಧೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲದೆ, ಪ್ರತಾಪ್ ಪ್ರಮಾಣಪತ್ರದಲ್ಲಿ ಕಾಣುವ ‘ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಕಂಪನಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಜಪಾನ್ ಭೇಟಿ ಮತ್ತು ಬುಲೆಟ್ ರೈಲು:

ಪೋಸ್ಟ್‌ನಲ್ಲಿ, ‘ಐರೆಕ್ಸ್ 2017’ ನಲ್ಲಿ ಭಾಗವಹಿಸಲು ಪ್ರತಾಪ್ ಟೋಕಿಯೊಗೆ ಬಹಳ ಕಷ್ಟಪಟ್ಟು ತಲುಪಿದರು ಎಂದು ಬರೆದಿದೆ. ಪ್ರತಾಪ್ ಮೊದಲ ಬಾರಿಗೆ ವಿಮಾನದಲ್ಲಿ ಟೋಕಿಯೊವನ್ನು ತಲುಪಿದರು ಎಂದು ಉಲ್ಲೇಖಿಸಲಾಗಿದೆ. ಪ್ರತಾಪ್ ಅಲ್ಲಿ ಇಳಿಯುವಾಗ ಆತನ ಬಳಿ ಕೇವಲ 1400 ರೂ. ಇತ್ತು. ಬುಲೆಟ್ ರೈಲು ಪ್ರಯಾಣ ತುಂಬಾ ದುಬಾರಿಯಾಗಿದ್ದರಿಂದ ಅವನು ಲೋಕಲ್ ಟ್ರೈನ್‌ಗಳಲ್ಲಿ 16 ವಿವಿಧ ನಿಲ್ದಾಣಗಳನ್ನು ಬದಲಿಸಿ ತನ್ನ ಸಾಮಾನುಗಳೊಂದಿಗೆ ತನ್ನ ಕೊನೆಯ ನಿಲ್ದಾಣವನ್ನು ತಲುಪಿದನು. ಅಲ್ಲದೇ ತನ್ನ ಸಾಮಾನುಗಳನ್ನು ಹೊತ್ತುಕೊಂಡು ಇನ್ನು 8 ಕಿ.ಮೀ ನಡೆದನು ಎಂದು ತಿಳಿಸಲಾಗಿದೆ. ಆದರೆ, ಗೂಗಲ್ ನಕ್ಷೆಯ ಪ್ರಕಾರ, ಪ್ರದರ್ಶನದ ಸ್ಥಳ ಟೋಕಿಯೊ ಬಿಗ್ ಸೈಟ್‌ಗೆ ಹನೆಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿ.ಮೀ ದೂರವಿದೆ. ಮತ್ತು ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 65 ಕಿ.ಮೀ ದೂರವಿದೆ.  ಪ್ರದರ್ಶನದ ಸ್ಥಳ ತಲುಪಲು ಬುಲೆಟ್ ರೈಲು ಹತ್ತಬೇಕಾದ ಅಗತ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಬುಲೆಟ್ ರೈಲು ಇಂಟರ್ಸಿಟಿ (ಬೇರೆ-ಬೇರೆ ನಗರಗಳಿಗೆ) ಸೇವೆಯಾಗಿದೆ. ಅಂದರೆ ಅದು ಟೋಕಿಯೊ ಒಳಗೆ ಚಲಿಸುವುದಿಲ್ಲ. ಟೋಕಿಯೋದಿಂದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮೋದಿಯ ಶಿಫಾರಸ್ಸಿನಂತೆ ಈ ಯುವ ವಿಜ್ಞಾನಿಯನ್ನು ಡಿಆರ್‌‌ಡಿಒಗೆ ಸೇರಿಸಲಾಗಿದೆಯೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...