Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌‌ಚೆಕ್‌: ‘ಡಿಸೆಂಬರ್‌ 13 ರಂದು ಸೂರ್ಯ ಉದಯಸುವುದಿಲ್ಲ’ ಎಂಬುದು ನಿಜವೇ?

ಫ್ಯಾಕ್ಟ್‌‌ಚೆಕ್‌: ‘ಡಿಸೆಂಬರ್‌ 13 ರಂದು ಸೂರ್ಯ ಉದಯಸುವುದಿಲ್ಲ’ ಎಂಬುದು ನಿಜವೇ?

- Advertisement -
- Advertisement -

ಪ್ರತಿವರ್ಷ ಡಿಸೆಂಬರ್‌ ತಿಂಗಳು ಬಂದರೆ ಸಾಕು, ‘ಜಗತ್ತೇ ನಾಶ’, ‘ಭೂಮಿಯ ಅಂತ್ಯ’ ‘ಪ್ರಳಯ’ ಎಂದೆಲ್ಲಾ ಸುದ್ದಿಗಳು ಓಡಾಡುತ್ತವೆ. ಮಾಧ್ಯಮಗಳು ಕೂಡಾ ಇಂತಹದ್ದೇ ವಿಷಯಗಳನ್ನು ಇಟ್ಟುಕೊಂಡು ದಿನಗಟ್ಟಲೆ ಚರ್ಚಿಸುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ಸಂದೇಶ ಹಾಗೂ ವಿಡಿಯೊ ಹರಿದಾಡಲು ಪ್ರಾರಂಭವಾಗಿದೆ. ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ನಲ್ಲಿ ಇದು ಹರಿದಾಡುತ್ತಿದೆ.

ವೈರಲ್‌ ಸಂದೇಶ

ಮಲಯಾಳಂ ಭಾಷೆಯ ಈ ವಿಡಿಯೊದಲ್ಲಿ ನಿರೂಪಕನೊಬ್ಬ, “ಡಿಸೆಂಬರ್ 13 ರಂದು ಸೂರ್ಯೋದಯ ಆಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. 13 ರಂದು ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದಿಲ್ಲ ಎಂದು ನಾಸಾ ಕಂಡುಹಿಡಿದಿದೆ. ಈ ಅಪೂರ್ವ ಘಟನೆಗೆ ತಯಾರಾಗಿರಲು ತನ್ನ ತಂಡಕ್ಕೆ ಅದು ಹೇಳಿದೆ ಎಂದು ವರದಿ ಬರುತ್ತಿದೆ….” ಎಂದು ಅವರು ಹೇಳುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವಿಡಿಯೊ ಜೊತೆಗೆ ಕನ್ನಡ ಶೀರ್ಷಿಕೆಯು ಹರಿದಾಡುತ್ತಿದ್ದು, “ಡಿಸೆಂಬರ್ 13 ರಂದು ಸೂರ್ಯ ಉದಯಿಸಲ್ಲ ಎಂದು ನಾಸಾ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದೆ” ಎಂದು ಅದು ಪ್ರತಿಪಾದಿಸುತ್ತದೆ. ಇದನ್ನು ಫೇಸ್‌ಬುಕ್‌ನಲ್ಲಿ ಕೂಡಾ ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಅದನ್ನು ನೀವು ಇಲ್ಲಿ ನೋಡಬಹುದು.

ಮೊದಲೇ ಹೇಳಿದಂತೆ ಈ ರೀತಿಯ ಸುದ್ದಿಗಳು ಪ್ರತಿವರ್ಷ ಡಿಸೆಂಬರ್‌ ತಿಂಗಳಲ್ಲಿ ಓಡಾಡುತ್ತವೆ. ಮಾಧ್ಯಮಗಳಂತೂ ಇಂತಹ ವಿಷಯಗಳನ್ನು ಇಟ್ಟುಕೊಂಡು ಚರ್ಚೆ ಮತ್ತು ಕಾರ್ಯಕ್ರಮ ನಡೆಸಿ ತಮ್ಮ ಟಿಆರ್‌ಪಿ ರೇಟ್‌ ಹೆಚ್ಚಿಸಿಕೊಂಡು ಲಕ್ಷಾಂತರ ದುಡ್ಡನ್ನು ಎಣಿಸಿಕೊಳ್ಳುತ್ತವೆ. ಜನರು ಗಾಬರಿ ಬೀಳುತ್ತಾರೆ. ಆದರೆ ನಮ್ಮ ಭೂಮಿ ಮಾತ್ರ ಈ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಎಂಐಎಂಗೆ ಶಾರುಖ್‌ ಬೆಂಬಲವೆಂದು ಫೋಟೋ ತಿರುಚಿ ಅಪಪ್ರಚಾರ

ಪ್ರಸ್ತುತ ವಾಟ್ಸಪ್‌‌ನಲ್ಲಿ ಹರಿದಾಡುತ್ತಿರುವ ಈ ಸಂದೇಶದ ಮೂಲ ಕೆಲವು ವರ್ಷಗಳ ಹಿಂದಿನ ಮಲಯಾಳಂ ಯೂಟ್ಯೂಬ್‌ ಚಾನೆಲ್‌ನಿಂದ ಬಂದಿದೆ. ಇದರ ಮೂಲ ಚಾನೆಲ್‌ ಮಲಬಾರ್‌ ಆನ್‌ಲೈನ್‌ ಆಗಿದ್ದು ನಾನುಗೌರಿ.ಕಾಂ ಗೆ ಈ ಚಾನೆಲ್‌ ಲಭ್ಯವಾಗಿಲ್ಲ.

ಆದರೆ 2018 ರ ಡಿಸೆಂಬರ್‌ ಮೂರರಂದು Shadshan Chrlary ಎಂಬವರು ಈ ವಿಡಿಯೊವನ್ನು ತಮ್ಮ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದರೆ ಇದನ್ನು ಈ ಚಾನೆಲ್‌ನಿಂದ ಹೆಚ್ಚು ಜನರು ವೀಕ್ಷಣೆ ಮಾಡಿರಲಿಲ್ಲ. ಜೊತೆಗೆ ಅದೇ ವರ್ಷ ನವೆಂಬರ್‌ ತಿಂಗಳಲ್ಲಿ ಇದೇ ರೀತಿಯ ಸುದ್ದಿಗಳನ್ನು ಮಲಯಾಳಂನ ಇನ್ನೂ ಕೆಲವು ಯೂಟ್ಯೂಬ್‌ ಚಾನೆಲ್‌ಗಳು ವರದಿ ಮಾಡಿದ್ದವು. ಅದನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನಾಸಾ ಡಿಸೆಂಬರ್‌ ತಿಂಗಳಲ್ಲಿ ಹೀಗೆ ನಡೆಯುತ್ತದೆ ಎಂದು ಹೇಳಿದೆಯ?

ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯಾದ ‘ನಾಸಾ’ ಡಿಸೆಂಬರ್‌ ತಿಂಗಳ ಯಾವುದಾದರು ದಿನದಂದು ಸೂರ್ಯ ಉದಯಿಸುವುದಿಲ್ಲ ಎಂದು ಹೇಳಿಲ್ಲ. ನಾಸಾ ಈ ರೀತಿಯ ಹೇಳಿಕೆ ನೀಡಿದ್ದರೆ ಜಗತ್ತಿನ ವಿಶ್ವಾಸಾರ್ಹ ಪತ್ರಿಕೆಗಳು ವರದಿ ಮಾಡಿರುತ್ತಿದ್ದವು. ಆದರೆ ಈ ರೀತಿಯಾಗಿ ಯಾವುದೆ ಸುದ್ದಿಗಳು ನಮಗೆ ಸಿಕ್ಕಿಲ್ಲ.

ಫ್ಯಾಕ್ಟ್‌ಚೆಕ್‌

ವಾಸ್ತವದಲ್ಲಿ ಈ ವರದಿಯು ವಿಜ್ಞಾನದ ಬಗ್ಗೆ ಸಾಮಾನ್ಯ ಜ್ಞಾನ ಕೂಡಾ ತಿಳಿಯದ ವ್ಯಕ್ತಿಗಳು ಮಾಡಿದ್ದಾರೆ. ಅವರು ವಿಡಿಯೊದಲ್ಲಿ, “ಭೂಮಿ ಸೂರ್ಯನ ಸುತ್ತ ತಿರುಗಲು 24 ಗಂಟೆಗಳು ಬೇಕಾಗುತ್ತದೆ” ಎಂದು ಹೇಳುತ್ತಾರೆ. ಆದರೆ ನಿಜವಾಗಿಯು ಭೂಮಿ ಸೂರ್ಯನ ಸುತ್ತಲು ತಿರುಗಲು ಒಂದು ವರ್ಷ (365 ದಿನಗಳು) ಬೇಕಾಗುತ್ತದೆ.

ವಿಡಿಯೊದಲ್ಲಿ ಹೇಳುವ ಪ್ರಕಾರ, ಸೂರ್ಯೋದಯ ಆಗದೇ ಇರುವುದು ಎಂದರೆ ಭೂಮಿ ತನ್ನ ಚಲನೆ 24 ಗಂಟೆಗಳ ಕಾಲ ನಿಲ್ಲಿಸುವುದಾಗಿದೆ. ಆದರೆ ಇದು ಅಸಾಧ್ಯವಾದ ವಿಷಯವಾಗಿದೆ. ಪ್ರಸ್ತುತ ಭೂಮಿಯು ಪ್ರತಿ ಸೆಕೆಂಡಿಗೆ 30 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತದೆ. ಈ ವೇಗದಲ್ಲಿ ಚಲಿಸುತ್ತಿರುವ ಭೂಮಿ ಸಡನ್ನಾಗಿ ನಿಂತರೆ ಏನಾಗಬಹುದು? ನೀವೇ ಊಹಿಸಿ. ಆದ್ದರಿಂದ ಭೂಮಿ ಹೀಗೆ ಸಡನ್ನಾಗಿ ತನ್ನ ಚಲನೆಯನ್ನು ನಿಲ್ಲಿಸುವುದಿಲ್ಲ.

ಭೂಮಿಯ ಚಲನೆ ನಿಧಾನವಾಗುತ್ತಿದೆಯೇ?

ಹೌದು, ವಿಜ್ಞಾನಿಗಳು ಭೂಮಿಯ ಚಲನೆ ನಿಧಾನವಾಗುತ್ತದೆ ಎಂದು ಹೇಳುತ್ತಾರೆ. ಭೂಮಿ ಹುಟ್ಟಿದ ಸುಮಾರು 4.5 ಶತಕೋಟಿ ವರ್ಷಗಳ ಹಿಂದಿನಿಂದ, ಇಂದಿನವರೆಗೂ ಭೂಮಿಯ ತಿರುಗುವಿಕೆ ಕ್ರಮೇಣ ನಿಧಾನವಾಗುತ್ತಿದೆ. ಇದು ಇಂದಿಗೂ ಮುಂದುವರೆದಿರುವ ಪ್ರಕ್ರಿಯೆಯಾಗಿದೆ. ಅಂದಾಜಿನಂತೆ ಭೂಮಿ ತನ್ನ ತಿರುಗುವಿಕೆಯಲ್ಲಿ ಒಂದು ಸೆಕೆಂಡ್‌ ನಿಧಾನ ಆಗಬೇಕೆಂದರೆ ಸುಮಾರು 60 ಸಾವಿರ ವರ್ಷಗಳು ಬೇಕಾಗುತ್ತದೆ.

ನೂರಾರು ಮಿಲಿಯನ್ ವರ್ಷಗಳ ಹಿಂದೆ ಹೋದರೆ, ಅಂದು ಭೂಮಿಯ ಒಂದು ದಿನ ಅಂದರೆ ಕೇವಲ 22 ಗಂಟೆಗಳು ಮಾತ್ರವಾಗಿತ್ತು!. ಈಗ ಅದು 24 ಗಂಟೆಗೆ ಬಂದು ತಲುಪಿದೆ.

ಒಟ್ಟಿನಲ್ಲಿ ಭೂಮಿಯು ತನ್ನ ಚಲನೆಯನ್ನು ತೀರಾ ನಿಧಾನವಾಗಿ ಕಡಿಮೆ ಮಾಡುತ್ತಿದೆ. ಮೇಲೆ ಹೇಳಿದರೆ ಒಂದು ಸೆಕೆಂಡ್ ನಿಧಾನವಾಗಲು 60 ಸಾವಿರ ವರ್ಷಗಳು ಬೇಕು. ಹಾಗಿರುವಾಗ ಭೂಮಿ, ಸೂರ್ಯನ ಸುತ್ತ ಸುತ್ತುವುದನ್ನು ನಿಲ್ಲಿಸುವುದು ಸಾಧ್ಯವೇ ಇಲ್ಲ ಮಾತು. ಹಾಗಾಗಿ ಮೇಲಿನ ‘ಸೂರ್ಯ ಉದಯಿಸುವುದಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರತಿಪಾದನೆ ಸಂಪೂರ್ಣ ತಪ್ಪಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌‌: ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ಪದವಿ ರದ್ದು ಮಾಡಲಾಗಿದೆಯೇ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಭೂಮಿಯ ಚಲನೆ ನಿಲ್ಲದ ಹಾಗೆ ಏನಾದರೂ ಒಂದು ಹೊಸ ತರಹದ ಹೋಮ ಇರಬಹುದೋ…ಏನೋ….

  2. ಬೆಳಕಾಗಿ ಇರುತ್ತದೆ ಎಲ್ಲೋ ಒಂದು ಕಡೆ ಸೈಕ್ಲೋನ್ ಮಳೆ ಬಾರ ಬಹುದು ಹಾಗ ಬಿಸಿಲೂ ಭೂಮಿ ಗೆ ತಕುವುದಿಲ್ಲಾದ ಕಾರಣ ಈ ವದಂತ್ತಿ ಹಬ್ಬಿರ ಬಹುದು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...