Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌‌ಚೆಕ್‌: ‘ಡಿಸೆಂಬರ್‌ 13 ರಂದು ಸೂರ್ಯ ಉದಯಸುವುದಿಲ್ಲ’ ಎಂಬುದು ನಿಜವೇ?

ಫ್ಯಾಕ್ಟ್‌‌ಚೆಕ್‌: ‘ಡಿಸೆಂಬರ್‌ 13 ರಂದು ಸೂರ್ಯ ಉದಯಸುವುದಿಲ್ಲ’ ಎಂಬುದು ನಿಜವೇ?

- Advertisement -
- Advertisement -

ಪ್ರತಿವರ್ಷ ಡಿಸೆಂಬರ್‌ ತಿಂಗಳು ಬಂದರೆ ಸಾಕು, ‘ಜಗತ್ತೇ ನಾಶ’, ‘ಭೂಮಿಯ ಅಂತ್ಯ’ ‘ಪ್ರಳಯ’ ಎಂದೆಲ್ಲಾ ಸುದ್ದಿಗಳು ಓಡಾಡುತ್ತವೆ. ಮಾಧ್ಯಮಗಳು ಕೂಡಾ ಇಂತಹದ್ದೇ ವಿಷಯಗಳನ್ನು ಇಟ್ಟುಕೊಂಡು ದಿನಗಟ್ಟಲೆ ಚರ್ಚಿಸುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ಸಂದೇಶ ಹಾಗೂ ವಿಡಿಯೊ ಹರಿದಾಡಲು ಪ್ರಾರಂಭವಾಗಿದೆ. ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ನಲ್ಲಿ ಇದು ಹರಿದಾಡುತ್ತಿದೆ.

ವೈರಲ್‌ ಸಂದೇಶ

ಮಲಯಾಳಂ ಭಾಷೆಯ ಈ ವಿಡಿಯೊದಲ್ಲಿ ನಿರೂಪಕನೊಬ್ಬ, “ಡಿಸೆಂಬರ್ 13 ರಂದು ಸೂರ್ಯೋದಯ ಆಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. 13 ರಂದು ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದಿಲ್ಲ ಎಂದು ನಾಸಾ ಕಂಡುಹಿಡಿದಿದೆ. ಈ ಅಪೂರ್ವ ಘಟನೆಗೆ ತಯಾರಾಗಿರಲು ತನ್ನ ತಂಡಕ್ಕೆ ಅದು ಹೇಳಿದೆ ಎಂದು ವರದಿ ಬರುತ್ತಿದೆ….” ಎಂದು ಅವರು ಹೇಳುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವಿಡಿಯೊ ಜೊತೆಗೆ ಕನ್ನಡ ಶೀರ್ಷಿಕೆಯು ಹರಿದಾಡುತ್ತಿದ್ದು, “ಡಿಸೆಂಬರ್ 13 ರಂದು ಸೂರ್ಯ ಉದಯಿಸಲ್ಲ ಎಂದು ನಾಸಾ ವಿಜ್ಞಾನಿಗಳು ಮುನ್ನೆಚ್ಚರಿಕೆ ನೀಡಿದೆ” ಎಂದು ಅದು ಪ್ರತಿಪಾದಿಸುತ್ತದೆ. ಇದನ್ನು ಫೇಸ್‌ಬುಕ್‌ನಲ್ಲಿ ಕೂಡಾ ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಅದನ್ನು ನೀವು ಇಲ್ಲಿ ನೋಡಬಹುದು.

ಮೊದಲೇ ಹೇಳಿದಂತೆ ಈ ರೀತಿಯ ಸುದ್ದಿಗಳು ಪ್ರತಿವರ್ಷ ಡಿಸೆಂಬರ್‌ ತಿಂಗಳಲ್ಲಿ ಓಡಾಡುತ್ತವೆ. ಮಾಧ್ಯಮಗಳಂತೂ ಇಂತಹ ವಿಷಯಗಳನ್ನು ಇಟ್ಟುಕೊಂಡು ಚರ್ಚೆ ಮತ್ತು ಕಾರ್ಯಕ್ರಮ ನಡೆಸಿ ತಮ್ಮ ಟಿಆರ್‌ಪಿ ರೇಟ್‌ ಹೆಚ್ಚಿಸಿಕೊಂಡು ಲಕ್ಷಾಂತರ ದುಡ್ಡನ್ನು ಎಣಿಸಿಕೊಳ್ಳುತ್ತವೆ. ಜನರು ಗಾಬರಿ ಬೀಳುತ್ತಾರೆ. ಆದರೆ ನಮ್ಮ ಭೂಮಿ ಮಾತ್ರ ಈ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಎಂಐಎಂಗೆ ಶಾರುಖ್‌ ಬೆಂಬಲವೆಂದು ಫೋಟೋ ತಿರುಚಿ ಅಪಪ್ರಚಾರ

ಪ್ರಸ್ತುತ ವಾಟ್ಸಪ್‌‌ನಲ್ಲಿ ಹರಿದಾಡುತ್ತಿರುವ ಈ ಸಂದೇಶದ ಮೂಲ ಕೆಲವು ವರ್ಷಗಳ ಹಿಂದಿನ ಮಲಯಾಳಂ ಯೂಟ್ಯೂಬ್‌ ಚಾನೆಲ್‌ನಿಂದ ಬಂದಿದೆ. ಇದರ ಮೂಲ ಚಾನೆಲ್‌ ಮಲಬಾರ್‌ ಆನ್‌ಲೈನ್‌ ಆಗಿದ್ದು ನಾನುಗೌರಿ.ಕಾಂ ಗೆ ಈ ಚಾನೆಲ್‌ ಲಭ್ಯವಾಗಿಲ್ಲ.

ಆದರೆ 2018 ರ ಡಿಸೆಂಬರ್‌ ಮೂರರಂದು Shadshan Chrlary ಎಂಬವರು ಈ ವಿಡಿಯೊವನ್ನು ತಮ್ಮ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದರೆ ಇದನ್ನು ಈ ಚಾನೆಲ್‌ನಿಂದ ಹೆಚ್ಚು ಜನರು ವೀಕ್ಷಣೆ ಮಾಡಿರಲಿಲ್ಲ. ಜೊತೆಗೆ ಅದೇ ವರ್ಷ ನವೆಂಬರ್‌ ತಿಂಗಳಲ್ಲಿ ಇದೇ ರೀತಿಯ ಸುದ್ದಿಗಳನ್ನು ಮಲಯಾಳಂನ ಇನ್ನೂ ಕೆಲವು ಯೂಟ್ಯೂಬ್‌ ಚಾನೆಲ್‌ಗಳು ವರದಿ ಮಾಡಿದ್ದವು. ಅದನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನಾಸಾ ಡಿಸೆಂಬರ್‌ ತಿಂಗಳಲ್ಲಿ ಹೀಗೆ ನಡೆಯುತ್ತದೆ ಎಂದು ಹೇಳಿದೆಯ?

ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯಾದ ‘ನಾಸಾ’ ಡಿಸೆಂಬರ್‌ ತಿಂಗಳ ಯಾವುದಾದರು ದಿನದಂದು ಸೂರ್ಯ ಉದಯಿಸುವುದಿಲ್ಲ ಎಂದು ಹೇಳಿಲ್ಲ. ನಾಸಾ ಈ ರೀತಿಯ ಹೇಳಿಕೆ ನೀಡಿದ್ದರೆ ಜಗತ್ತಿನ ವಿಶ್ವಾಸಾರ್ಹ ಪತ್ರಿಕೆಗಳು ವರದಿ ಮಾಡಿರುತ್ತಿದ್ದವು. ಆದರೆ ಈ ರೀತಿಯಾಗಿ ಯಾವುದೆ ಸುದ್ದಿಗಳು ನಮಗೆ ಸಿಕ್ಕಿಲ್ಲ.

ಫ್ಯಾಕ್ಟ್‌ಚೆಕ್‌

ವಾಸ್ತವದಲ್ಲಿ ಈ ವರದಿಯು ವಿಜ್ಞಾನದ ಬಗ್ಗೆ ಸಾಮಾನ್ಯ ಜ್ಞಾನ ಕೂಡಾ ತಿಳಿಯದ ವ್ಯಕ್ತಿಗಳು ಮಾಡಿದ್ದಾರೆ. ಅವರು ವಿಡಿಯೊದಲ್ಲಿ, “ಭೂಮಿ ಸೂರ್ಯನ ಸುತ್ತ ತಿರುಗಲು 24 ಗಂಟೆಗಳು ಬೇಕಾಗುತ್ತದೆ” ಎಂದು ಹೇಳುತ್ತಾರೆ. ಆದರೆ ನಿಜವಾಗಿಯು ಭೂಮಿ ಸೂರ್ಯನ ಸುತ್ತಲು ತಿರುಗಲು ಒಂದು ವರ್ಷ (365 ದಿನಗಳು) ಬೇಕಾಗುತ್ತದೆ.

ವಿಡಿಯೊದಲ್ಲಿ ಹೇಳುವ ಪ್ರಕಾರ, ಸೂರ್ಯೋದಯ ಆಗದೇ ಇರುವುದು ಎಂದರೆ ಭೂಮಿ ತನ್ನ ಚಲನೆ 24 ಗಂಟೆಗಳ ಕಾಲ ನಿಲ್ಲಿಸುವುದಾಗಿದೆ. ಆದರೆ ಇದು ಅಸಾಧ್ಯವಾದ ವಿಷಯವಾಗಿದೆ. ಪ್ರಸ್ತುತ ಭೂಮಿಯು ಪ್ರತಿ ಸೆಕೆಂಡಿಗೆ 30 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತದೆ. ಈ ವೇಗದಲ್ಲಿ ಚಲಿಸುತ್ತಿರುವ ಭೂಮಿ ಸಡನ್ನಾಗಿ ನಿಂತರೆ ಏನಾಗಬಹುದು? ನೀವೇ ಊಹಿಸಿ. ಆದ್ದರಿಂದ ಭೂಮಿ ಹೀಗೆ ಸಡನ್ನಾಗಿ ತನ್ನ ಚಲನೆಯನ್ನು ನಿಲ್ಲಿಸುವುದಿಲ್ಲ.

ಭೂಮಿಯ ಚಲನೆ ನಿಧಾನವಾಗುತ್ತಿದೆಯೇ?

ಹೌದು, ವಿಜ್ಞಾನಿಗಳು ಭೂಮಿಯ ಚಲನೆ ನಿಧಾನವಾಗುತ್ತದೆ ಎಂದು ಹೇಳುತ್ತಾರೆ. ಭೂಮಿ ಹುಟ್ಟಿದ ಸುಮಾರು 4.5 ಶತಕೋಟಿ ವರ್ಷಗಳ ಹಿಂದಿನಿಂದ, ಇಂದಿನವರೆಗೂ ಭೂಮಿಯ ತಿರುಗುವಿಕೆ ಕ್ರಮೇಣ ನಿಧಾನವಾಗುತ್ತಿದೆ. ಇದು ಇಂದಿಗೂ ಮುಂದುವರೆದಿರುವ ಪ್ರಕ್ರಿಯೆಯಾಗಿದೆ. ಅಂದಾಜಿನಂತೆ ಭೂಮಿ ತನ್ನ ತಿರುಗುವಿಕೆಯಲ್ಲಿ ಒಂದು ಸೆಕೆಂಡ್‌ ನಿಧಾನ ಆಗಬೇಕೆಂದರೆ ಸುಮಾರು 60 ಸಾವಿರ ವರ್ಷಗಳು ಬೇಕಾಗುತ್ತದೆ.

ನೂರಾರು ಮಿಲಿಯನ್ ವರ್ಷಗಳ ಹಿಂದೆ ಹೋದರೆ, ಅಂದು ಭೂಮಿಯ ಒಂದು ದಿನ ಅಂದರೆ ಕೇವಲ 22 ಗಂಟೆಗಳು ಮಾತ್ರವಾಗಿತ್ತು!. ಈಗ ಅದು 24 ಗಂಟೆಗೆ ಬಂದು ತಲುಪಿದೆ.

ಒಟ್ಟಿನಲ್ಲಿ ಭೂಮಿಯು ತನ್ನ ಚಲನೆಯನ್ನು ತೀರಾ ನಿಧಾನವಾಗಿ ಕಡಿಮೆ ಮಾಡುತ್ತಿದೆ. ಮೇಲೆ ಹೇಳಿದರೆ ಒಂದು ಸೆಕೆಂಡ್ ನಿಧಾನವಾಗಲು 60 ಸಾವಿರ ವರ್ಷಗಳು ಬೇಕು. ಹಾಗಿರುವಾಗ ಭೂಮಿ, ಸೂರ್ಯನ ಸುತ್ತ ಸುತ್ತುವುದನ್ನು ನಿಲ್ಲಿಸುವುದು ಸಾಧ್ಯವೇ ಇಲ್ಲ ಮಾತು. ಹಾಗಾಗಿ ಮೇಲಿನ ‘ಸೂರ್ಯ ಉದಯಿಸುವುದಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರತಿಪಾದನೆ ಸಂಪೂರ್ಣ ತಪ್ಪಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌‌: ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ಪದವಿ ರದ್ದು ಮಾಡಲಾಗಿದೆಯೇ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಭೂಮಿಯ ಚಲನೆ ನಿಲ್ಲದ ಹಾಗೆ ಏನಾದರೂ ಒಂದು ಹೊಸ ತರಹದ ಹೋಮ ಇರಬಹುದೋ…ಏನೋ….

  2. ಬೆಳಕಾಗಿ ಇರುತ್ತದೆ ಎಲ್ಲೋ ಒಂದು ಕಡೆ ಸೈಕ್ಲೋನ್ ಮಳೆ ಬಾರ ಬಹುದು ಹಾಗ ಬಿಸಿಲೂ ಭೂಮಿ ಗೆ ತಕುವುದಿಲ್ಲಾದ ಕಾರಣ ಈ ವದಂತ್ತಿ ಹಬ್ಬಿರ ಬಹುದು

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...