Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: 1948ರ ಒಲಂಪಿಕ್ಸ್‌ನಲ್ಲಿ ಭಾರತ ತಂಡ ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದು ಏತಕ್ಕೆ ಗೊತ್ತೆ?

ಫ್ಯಾಕ್ಟ್‌ಚೆಕ್‌: 1948ರ ಒಲಂಪಿಕ್ಸ್‌ನಲ್ಲಿ ಭಾರತ ತಂಡ ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದು ಏತಕ್ಕೆ ಗೊತ್ತೆ?

‘ಈ ಚಿತ್ರವನ್ನು ನೋಡಿ ಆಲೋಚಿಸಿದ ನಂತರ ನೀವು ಗಾಂಧಿ ಮತ್ತು ನೆಹರೂ ಅವರನ್ನು ದ್ವೇಷಿಸುತ್ತೀರಿ’ ಎಂಬ ಸಂದೇಶವನ್ನು ಬಿಜೆಪಿ ಬೆಂಬಲಿತ ಬಲಪಂಥೀಯರು ಹರಡುತ್ತಿದ್ದಾರೆ

- Advertisement -
- Advertisement -

‘1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡವು ಶೂಗಳನ್ನು ಖರೀದಿಸಲು ಸಾಧ್ಯವಾಗದೆ ಬರಿಗಾಲಿನಲ್ಲಿ ಪಂದ್ಯಗಳನ್ನು ಆಡಿದ್ದಾರೆ’ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರಹವೊಂದು ವೈರಲ್ ಮಾಡಲಾಗಿದೆ. ಮುಖ್ಯವಾಗಿ ಈ ಬರಹವನ್ನು ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿದ್ದು, ಫುಟ್‌ಬಾಲ್ ಆಟಗಾರರ ಅಂದಿನ ಪರಿಸ್ಥಿತಿಗೆ ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್ ನೆಹರೂ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೆ ಕಾರಣ ಎಂಬಂತೆ ಪ್ರತಿಪಾದಿಸಲಾಗಿದೆ.

ವೈರಲ್ ಪೋಸ್ಟ್‌ ಈ ಕೆಳಗಿನಂತಿದೆ.

“ಈ ಚಿತ್ರವನ್ನು ನೋಡಿದ ನಂತರ ಮತ್ತು ಆಲೋಚಿಸಿದ ನಂತರ ನೀವು ಗಾಂಧಿಯನ್ನು ದ್ವೇಷಿಸುತ್ತೀರಿ… ಮತ್ತು ಹೌದು ಈ ಚಿತ್ರವು ನೆಹರೂ ಅವರ ಬಟ್ಟೆ ಮತ್ತು ಬೂಟುಗಳು ವಿಶೇಷ ವಿಮಾನದಲ್ಲಿ ಬರುತ್ತಿದ್ದಾಗ… ಇದು ಲಂಡನ್‌ನಲ್ಲಿ ನಡೆದ 1948ರ ಒಲಿಂಪಿಕ್ಸ್‌ನ ಚಿತ್ರ”

“ನಮ್ಮ ಫುಟ್ಬಾಲ್ ತಂಡ ಫ್ರಾನ್ಸ್ ಜೊತೆಗಿನ ಪಂದ್ಯವನ್ನು 1-1 ಗೋಲುಗಳಿಂದ ಟೈ ಮಾಡಿಕೊಂಡಿತು. ನಮ್ಮ ಆಟಗಾರರಿಗೆ ಶೂ ಇಲ್ಲದ ಕಾರಣ ಗೆಲ್ಲಲು ಸಾಧ್ಯವಾಗಲಿಲ್ಲ. ಮತ್ತು ಅವರು ಇಡೀ ಪಂದ್ಯವನ್ನು ಬರಿಗಾಲಿನಲ್ಲಿ ಆಡಿದರು. ಇದರಿಂದಾಗಿ ಇತರ ತಂಡದ ಆಟಗಾರರ ಶೂಗಳು ಇಲ್ಲದೆ ಹಲವು ಆಟಗಾರರು ಗಾಯಗೊಂಡಿದ್ದಾರೆ. ಆದರೂ ಪಂದ್ಯ ಸಮಬಲವಾಗಿತ್ತು. ಶೈಲೇಂದ್ರ ನಾಥ್ ಮನ್ನಾ ಈ ತಂಡದ ನಾಯಕರಾಗಿದ್ದರು. ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು”

“ಸರ್ಕಾರದ ಬಳಿ ಅಷ್ಟು ಹಣವೂ ಇದ್ದರು ಸರ್ಕಾರ ಏಕೆ ಶೂ ನೀಡಲಿಲ್ಲ. ಪ್ಯಾರಿಸ್‌ನಿಂದ ನೆಹರೂ ಅವರ ಬಟ್ಟೆಗಳು ಡ್ರೈ-ಕ್ಲೀನ್ ಆಗುತ್ತಿದ್ದ ಸಮಯ ಮತ್ತು ನೆಹರು ಅವರು ತಮ್ಮ ನಾಯಿಯೊಂದಿಗೆ ಖಾಸಗಿ ಜೆಟ್‌ನಲ್ಲಿ ತಿರುಗಾಡುತ್ತಿದ್ದರು. ಇದರ ಪರಿಣಾಮವೆಂದರೆ 1950 ರ ವಿಶ್ವಕಪ್‌ನಲ್ಲಿ ಭಾರತವನ್ನು ಫಿಫಾ ನಿಷೇಧಿಸಿತು. ಏಕೆಂದರೆ ಯಾವುದೇ ತಂಡವು ಶೂಗಳಿಲ್ಲದೆ ಪಂದ್ಯವನ್ನು ಆಡುವುದಿಲ್ಲ. ಮತ್ತೆಂದೂ ಭಾರತ ತಂಡ ಫಿಫಾ ವಿಶ್ವಕಪ್‌ಗೆ ಹೋಗಲಿಲ್ಲ. ಆದರೆ ಇಂದು ದೇಶದ ಹಲವು ಕ್ರೀಡಾಂಗಣಗಳಿಗೆ ನೆಹರೂ ಗಾಂಧಿ ಕುಟುಂಬದ ಹೆಸರಿಡಲಾಗಿದೆ” 

ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕಟ್ಟುಕತೆಯನ್ನು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಚಿತ್ರದೊಂದಿಗೆ ಕೂಡಾ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಇಲ್ಲಿ ನೋಡಬಹುದಾಗಿದೆ. ಇದೇ ಸಂದೇಶವನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಬರಹವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕೂಡ ಹರಿದಾಡುತ್ತಿದೆ. ಮಾಜಿ ಪ್ರಧಾನಿ ನೆಹರೂ ಅವರನ್ನು ನಿಂದಿಸಿ ಒಂದೇ ರೀತಿಯ ಚಿತ್ರಗಳನ್ನು ಹೊಂದಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಆರ್ಕೈವ್‌‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಮಾಜಿಕ ಮಾಧ್ಯಮದಾದ್ಯಂತ ಇದೇ ರೀತಿಯ ಪ್ರತಿಪಾದನೆಯನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.

ಆದರೆ, 1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡಿದ ಭಾರತೀಯ ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ಶೂಗಳನ್ನು ಖರೀದಿಸಲು ಯಾವುದೇ ಸಮಸ್ಯೆ ಇರಲಿಲ್ಲ. ಲಂಡನ್‌ನಲ್ಲಿ ಆಡಿದ ತಂಡದ ಸಮಸ್ಯರಿಗೆ ಶೂ ಇತ್ತಾದರೂ, ಆಟಗಾರರು ಶೂ ಇಲ್ಲದೆ ಆಡಲು ಆದ್ಯತೆ ನೀಡಿದ್ದರು. ಆಡುವ ಮೈದಾನದಲ್ಲಿ ತೇವ ಅಥವಾ ಕೆಸರು ಇದ್ದಾಗ ಮಾತ್ರ ಆಟಗಾರರು ಅಂದು ಶೂಗಳನ್ನು ಧರಿಸುತ್ತಿದ್ದರು.

ಫ್ಯಾಕ್ಟ್‌ಚೆಕ್‌

ವೈರಲ್ ಸಂದೇಶವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, “ದಿ ಕ್ವಿಂಟ್” ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದೆ. ಗೂಗಲ್‌ನಲ್ಲಿ ‘1948 ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡ’ವನ್ನು ಹುಡುಕಿ, ಪಂದ್ಯಕ್ಕೆ ಸಂಬಂಧಿಸಿದ ಸುದ್ದಿ ವರದಿಗಳನ್ನು ಕಂಡು ಹಿಡಿಯಲಾಗಿದೆ.

2014 ರಲ್ಲಿ ಪ್ರಕಟವಾದ ದಿ ಹಿಂದೂ ಪತ್ರಿಕೆಯ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಅಂದು ಭಾರತೀಯ ಫುಟ್‌ಬಾಲ್ ಆಟಗಾರರು ಬೂಟುಗಳಿಲ್ಲದೆ ಆಡುವುದನ್ನು “ಇಷ್ಟಪಟ್ಟಿದ್ದರು” ಎಂದು ತಂಡದ ತರಬೇತುದಾರ ಬಿಡಿ ಚಟರ್ಜಿ ಹೇಳಿದ್ದಾಗಿ ಅದು ಹೇಳಿದೆ. ಲಂಡನ್‌ನಲ್ಲಿ ಇದ್ದ ತಂಡದ ಸದಸ್ಯರ ಬಳಿ ಶೂಗಳು ಇತ್ತು ಲೇಖನವು ಹೇಳುತ್ತದೆ.

1 ಆಗಸ್ಟ್ 1948 ರ ದಿನಾಂಕದ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೂಡಾ ಈ ಬಗ್ಗೆ ಬರೆಯಲಾಗಿದೆ. ಈ ಲೇಖನವು ಭಾರತೀಯ ತಂಡ ಫ್ರೆಂಚ್ ಪ್ರತಿಸ್ಪರ್ಧಿಗಳ ವಿರುದ್ಧ ಸೋತಿರುವುದರ ಹೇಳಿದೆ. ಭಾರತದ ಹನ್ನೊಂದು ಆಟಗಾರರಲ್ಲಿ ಎಂಟು ಮಂದಿ ಬರಿಗಾಲಿನಲ್ಲೇ ಆಡಿದ್ದಾರೆ ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಫೀಫಾದ ಅಧಿಕೃತ ಖಾತೆ 2018 ರಲ್ಲಿ ಮಾಡಿರುವ ಟ್ವೀಟ್‌ ಕೂಡ ಇದನ್ನೇ ಉಲ್ಲೇಖಿಸಿದೆ. ಅದು ತನ್ನ ಟ್ವೀಟ್‌ನಲ್ಲಿ, “ಹೆಚ್ಚಿನ ಭಾರತೀಯ ಆಟಗಾರರು ಬರಿಗಾಲಿನಲ್ಲಿದ್ದಾರೆ’’ ಎಂದು ಹೇಳಿದೆ. ಟ್ವೀಟ್ ಜೊತೆಗೆ ಫೋಟೋವನ್ನು ಕೂಡಾ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಒಬ್ಬ ಭಾರತೀಯ ಫುಟ್ಬಾಲ್ ಆಟಗಾರ ಶೂಗಳೊಂದಿಗೆ ಇದ್ದು, ಮೂವರು ಶೂ ಇಲ್ಲದೆ ಇರುವುದು ಕಾಣುತ್ತದೆ.

ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಮೊದಲ ಫುಟ್‌ಬಾಲ್ ಪಂದ್ಯದ 73 ವರ್ಷಗಳ ನೆನಪಿಗಾಗಿ ಇದೇ ಚಿತ್ರವನ್ನು ಭಾರತೀಯ ಫುಟ್‌ಬಾಲ್ ತಂಡದ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪಂದ್ಯದ ಬಗ್ಗೆ ಪತ್ರಕರ್ತ ಮತ್ತು ‘ಬೇರ್‌ಫೂಟ್ ಟು ಬೂಟ್ಸ್: ದಿ ಮೆನಿ ಲೈವ್ಸ್ ಆಫ್ ಇಂಡಿಯನ್ ಫುಟ್‌ಬಾಲ್’ ಪುಸ್ತಕದ ಲೇಖಕ ನೋವಿ ಕಪಾಡಿಯಾ ಅವರನ್ನು ದಿ ಕ್ವಿಂಟ್ ಮಾತನಾಡಿಸಿದೆ.

“ವಿಶೇಷವಾಗಿ ಬೆಂಗಳೂರು ಮತ್ತು ಕಲ್ಕತ್ತಾದ ಆಟಗಾರಿಗೆ ಬರಿಗಾಲಿನಲ್ಲಿ ಆಟವಾಡಿ ಅಭ್ಯಾಸವಾಗಿತ್ತು. ಆದ್ದರಿಂದ ಅವರಿಗೆ ಶೂ ಜೊತೆಗೆ ಆಟವಾಡುವುದು ಆರಾಮದಾಯಕವಾಗಿರಲಿಲ್ಲ. ಪಂದ್ಯಾಟದಲ್ಲಿ ಶೂಗಳನ್ನು ಕಡ್ಡಾಯ ಮಾಡಿದಾಗ, ಅಹ್ಮದ್ ಖಾನ್ ಅವರಂತಹ ಅಗ್ರ ಆಟಗಾರರನ್ನು ಭಾರತ ತಂಡದಿಂದ ಕೈಬಿಡಬೇಕಾಯಿತು. ಯಾಕೆಂದರೆ ಅವರಿಗೆ ಶೂ ಧರಿಸಿ ಆಡಲು ಸಾಧ್ಯವಾಗಲಿಲ್ಲ” ಎಂದು ಲೇಖಕ ಮತ್ತು ಫುಟ್ಬಾಲ್ ತಜ್ಞ ನೋವಿ ಕಪಾಡಿಯಾ ಹೇಳಿದ್ದಾರೆ.

ಶೂ ಧರಿಸಿ ಆಟವಾಡಬೇಕೆ ಅಥವಾ ಅವುಗಳು ಇಲ್ಲದೆ ಆಟವಾಡಬೇಕೆ ಎಂಬ ಆಯ್ಕೆಯನ್ನು ತಂಡಕ್ಕೆ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

“ಆಯ್ಕೆ ಅವರದಾಗಿತ್ತು. ಗೋಲು ಗಳಿಸಿದ ಎಸ್. ರಾಮನ್ ಅತ್ಯುತ್ತಮ ಡ್ರಿಬ್ಲರ್ ಆಗಿದ್ದರು. ಆದರೆ ಅವರು ಬರಿಗಾಲಿನಲ್ಲಿ ಮಾತ್ರ ಆಡಬಲ್ಲವರಾಗಿದ್ದರು” ಎಂದು ಕಪಾಡಿಯಾ ಹೇಳಿದ್ದಾರೆ.

“ಆಟಗಾರರಿಗೆ ಆರಾಮದಾಯಕವಾಗಿರುವುದರಿಂದ ಬರಿಗಾಲಿನಲ್ಲಿ ಆಡಿದ್ದು ಅವರ ಇಚ್ಛೆಯಿಂದಾಗಿದೆ. ಆಗಿನ ನಾಯಕ ಟಿ.ಓವೋ ಅವರು, ‘ಇದು ಫುಟ್‌ಬಾಲ್ ಆಗಿದ್ದು, ಬೂಟ್‌ಬಾಲ್ ಅಲ್ಲ’ ಎಂದು ಬಹಿರಂಗವಾಗಿ ಹೇಳಿದ್ದರು” ಎಂದು ಕಪಾಡಿಯಾ ಹೇಳಿದ್ದಾರೆ.

ಈ ಎಲ್ಲಾ ಮಾಹಿತಿಯ ಮೂಲಕ ತಿಳಿದು ಬರುವುದೇನೆಂದರೆ, 1948 ರ ಒಲಿಂಪಿಕ್ಸ್‌ನಲ್ಲಿ ಆಡಿದ ಸ್ವತಂತ್ರ ಭಾರತದ ಮೊದಲ ಫುಟ್‌ಬಾಲ್ ತಂಡವು ಹಣದ ಕೊರತೆಯಿಂದಾಗಿ ಬರಿಗಾಲಿನಲ್ಲಿ ಆಟ ಆಡುವಂತೆ ಆಗಿರಲಿಲ್ಲ. ಬದಲಿಗೆ ಅವರು ಬರಿಗಾಲಿನಲ್ಲಿ ಅವರ ಇಚ್ಛೆಯಿಂದಾಗಿಯೆ ಆಟವಾಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...