ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿದ್ದು, ಅದಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕೂಡ ದನಿಗೂಡಿಸಿದ್ದಾರೆ. ಒಂದು ಕಡೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಯಡಿಯೂರಪ್ಪನವರೆ ಮುಂದಿನ ಎರಡು ವರ್ಷಗಳವರೆಗೆ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕೆಲ ಶಾಸಕರು ಪ್ರಯತ್ನ ಮುಂದುವರೆಸಿದ್ದಾರೆ. ಇಂದು ಅರುಣ್ ಸಿಂಗ್ರವರನ್ನು ಭೇಟಿಯಾದ ವಿಶ್ವನಾಥ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬೇರೊಬ್ಬರು ಸಿಎಂ ಆಗಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಮತ್ತು ಬಿಜೆಪಿ ಪಕ್ಷದ ಬಗ್ಗೆ ಜನರು ನಕರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಇದು ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ. ಯಡಿಯೂರಪ್ಪನವರ ವಯಸ್ಸು ಮತ್ತು ಆರೋಗ್ಯದಿಂದಾಗಿ ಅವರು ಸಿಎಂ ಆಗಿ ಮುಂದುವರೆಯುವ ಉತ್ಸಾಹ ಉಳಿಸಿಕೊಂಡಿಲ್ಲ. ಅವರ ಮಾರ್ಗದರ್ಶನದಲ್ಲಿ ಬೇರೊಬ್ಬರು ಸಿಎಂ ಆದರೆ ಒಳ್ಳೆಯದು ಎಂದು ಎಚ್. ವಿಶ್ವನಾಥ್ ಅರುಣ್ ಸಿಂಗ್ರವರ ಬಳಿ ಹೇಳಿದ್ದಾಗಿ ತಿಳಿಸಿದ್ದಾರೆ.
Public opinion about Govt & party is negative. It's not good. Mr Yediyurappa's age, health; he's not in spirit to run govt as CM. Under his guidance, accommodate someone else in that place. Family intervention in admn becoming worst, I spoke to Arun Singh: BJP MLC AH Vishwanath pic.twitter.com/LIC6QWvTKZ
— ANI (@ANI) June 17, 2021
ಅಧಿಕಾರದಲ್ಲಿ ಕುಟುಂಬದ ಹಸ್ತಕ್ಷೇಪ ಸರಿಯಲ್ಲ. ಬಿ.ವೈ.ವಿಜಯೇಂದ್ರ ಮತ್ತು ಅವರ ಸ್ನೇಹಿತರು ನಾವು ಹಣವನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅದು ದೆಹಲಿಗೆ ಹೋಗುತ್ತದೆ ಎಂದು ಹೇಳುತ್ತಿದ್ದರು. ಪಕ್ಷದ ಕುರಿತು ಕೆಟ್ಟ ಪ್ರಚಾರವೂ ನಡೆಯುತ್ತಿದೆ ಎಂದು ಅರುಣ್ ಸಿಂಗ್ರವರ ಬಳಿ ಹೇಳಿದ್ದಾರೆ ಅವರು ತಿಳಿಸಿದ್ದಾರೆ.
BY Vijayendra & his friends were saying that we collecting money & it goes to Delhi. Bad propaganda is also here. I told the General Secy (Arun Singh) too. In Irrigation Dept, tender of Rs 20,000 cr is set without clearance or resolution of Irrigation Board: BJP MLC AH Vishwanath
— ANI (@ANI) June 17, 2021
ನೀರಾವರಿ ಇಲಾಖೆಯಲ್ಲಿ, ನೀರಾವರಿ ಮಂಡಳಿಯ ಅನುಮತಿ ಅಥವಾ ನಿರ್ಣಯವಿಲ್ಲದೆ 20,000 ಕೋಟಿ ರೂ.ಗಳ ಟೆಂಡರ್ ನಿಗದಿಪಡಿಸಲಾಗಿದೆ ಎಂದು ಸಹ ಎಚ್ ವಿಶ್ವನಾಥ್ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ದಿನೇ ದಿನೇ ಋಜುವಾತಾಗುತ್ತಿದೆ. ಇನ್ನು ಎಚ್ ವಿಶ್ವನಾಥ್ರವರು ಯಡಿಯೂರಪ್ಪನವರ ಮಗ ಹಣ ಸಂಗ್ರಹಿಸಿ ಹೈಕಮಾಂಡ್ಗೆ ಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಪ್ರಸ್ತಾಪ ಮಾಡಿದ್ದಾರೆ. ಪಕ್ಷದ ಶಾಸಕರೆ ಸರ್ಕಾರದ ವಿರುದ್ಧ ಈ ಆರೋಪಗಳನ್ನು ಮಾಡುತ್ತಿರುವುದು ಗಂಭೀರ ವಿಷಯವಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಇದನ್ನೂ ಓದಿ; ಕೇರಳ ಬಿಜೆಪಿ ರಾಜ್ಯಾಧ್ಯಕ್ಷನ ಮೇಲೆ ಲಂಚ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ