Homeಚಳವಳಿಕೃಷಿ ಕಾಯ್ದೆಗಳು: ರೈತರಿಗಷ್ಟೇ ಮಾರಕವಲ್ಲ, ನಮ್ಮ ನಿಮ್ಮ ಬದುಕಿಗೂ ಅಪಾಯಕಾರಿ

ಕೃಷಿ ಕಾಯ್ದೆಗಳು: ರೈತರಿಗಷ್ಟೇ ಮಾರಕವಲ್ಲ, ನಮ್ಮ ನಿಮ್ಮ ಬದುಕಿಗೂ ಅಪಾಯಕಾರಿ

ಗ್ರಾಹಕರಾಗಿ ನಾವು ಪ್ರತಿಭಟಿಸುತ್ತಿರುವ ರೈತರಿಗೆ ಕೃತಜ್ಞರಾಗಿರಬೇಕು ಮತ್ತು ತುಂಬು ಹೃದಯದಿಂದ ಅವರ ಹೋರಾಟವನ್ನು ಬೆಂಬಲಿಸಬೇಕು.

- Advertisement -
- Advertisement -

ನೀವು ಮೋದಿ ಸರ್ಕಾರ ಪಾಸು ಮಾಡಿರುವ ಮೂರು ಕೃಷಿ ಮಸೂದೆಗಳನ್ನು ಓದಿದರೆ ಅರ್ಥವಾಗುತ್ತದೆ: ಈ ಕಾಯ್ದೆಗಳು ಕೇವಲ ರೈತರಿಗಷ್ಟೇ ಮಾರಕವಲ್ಲ, ಬದಲಿಗೆ ನಮ್ಮ ನಿಮ್ಮಂತಹ ಸಾಮಾನ್ಯ ಜನರ ಬದುಕಿಗೂ ಕೊಳ್ಳಿ ಇಡಲಿವೆ ಎಂಬ ಸತ್ಯ. ಮಾರುಕಟ್ಟೆಗಳು ಬೃಹತ್ ಕಾರ್ಪೋರೇಟ್ ತಿಮಿಂಗಲುಗಳ ವಶವಾಗಲಿದ್ದು, ಈ ಮಾರುಕಟ್ಟೆಗಳು ಅವರ ಬಿಗಿ ಹಿಡಿತಕ್ಕೆ ಒಳಗಾಗಲಿವೆ. ಏಕೆಂದರೆ ಈ ಕಾಯ್ದೆಗಳ ಪರಿಣಾಮವಾಗಿ ಕಾರ್ಪೊರೇಟ್‌ಗಳು ಆಹಾರ ಪದಾರ್ಥಗಳನ್ನು ಅನಿಯಮಿತವಾಗಿ ಸಂಗ್ರಹಿಸಬಹುದು, ಅದೂ ಕಾನೂನಾತ್ಮಕ ಬೆಂಬಲದಿಂದ ಸಂಗ್ರಹಿಸಬಹುದು. ಈ ದೊಡ್ಡ ಕಾರ್ಪೊರೇಟ್‌ಗಳ ಕುತ್ತಿಗೆ ಹಿಸುಕುವ ಬೆಲೆ ಸ್ಪರ್ಧೆಯಿಂದಾಗಿ ರೈತರು ಕೃಷಿಯನ್ನೇ ತೊರೆಯಬಹುದು.

ಈ ಕಾಯ್ದೆಯ ಉಪ-ವಿಭಾಗ 1-ಎ ನ ಕ್ಲಾಜ್ ‘ಬಿ’ ಅನ್ನು ಒಮ್ಮೆ ಓದಿ ನೋಡಿ. ಸಂಗ್ರಹಣಾ ಮಿತಿಯನ್ನು ನಿಯಂತ್ರಿಸುವ ಆದೇಶವು ಯಾವುದೇ ಕೃಷಿ ಉತ್ಪನ್ನಗಳ ನಿರ್ವಹಣೆ ಅಥವಾ ಮೌಲ್ಯ ವರ್ಧನೆಯಲ್ಲಿ ಭಾಗಿಯಾಗುವವರಿಗೆ ಅನ್ವಯಿಸುವುದಿಲ್ಲ. ಅಂತಹ ವ್ಯಕ್ತಿಯ ಸಂಗ್ರಹಣಾ (ಸ್ಟಾಕ್) ಮಿತಿಯು ಸಂಸ್ಕರಿಸಿದ ಸಾಮರ್ಥ್ಯದ ಒಟ್ಟಾರೆ ಸೀಲಿಂಗ್ ಅನ್ನು ಮೀರದಿದ್ದರೆ ಅಥವಾ ರಫ್ತುದಾರನಾಗಿದ್ದಲ್ಲಿ ರಫ್ತು ಬೇಡಿಕೆಯನ್ನು ಮೀರದಿದ್ದಲ್ಲಿ ಆತ ಸುರಕ್ಷಿತ.

ಮೌಲ್ಯ ಸರಪಳಿಯಲ್ಲಿ (ವ್ಯಾಲ್ಯೂ ಚೈನ್) ಭಾಗಿಯಾಗುವವರನ್ನು ಕಾಯ್ದೆಯಲ್ಲಿ ಹೀಗೆ ವ್ಯಾಖ್ಯಾನಿಸಲಾಗಿದೆ: ಯಾವುದೇ ಕೃಷಿ ಉತ್ಪನ್ನಕ್ಕೆ ಸಂಬಂಧಿಸಿದಂತೆ “ಮೌಲ್ಯ ಸರಪಳಿ ಭಾಗಿದಾರರರು” ಎಂಬ ಅಭಿವ್ಯಕ್ತಿ, ಯಾವುದೇ ಉತ್ಪಾದನೆಯಿಂದ ಭಾಗವಹಿಸುವವರ ಗುಂಪನ್ನು ಅರ್ಥೈಸುತ್ತದೆ ಮತ್ತು ಅವರನ್ನು ಒಳಗೊಂಡಿದೆ. ಅದು ಕೃಷಿ ಕ್ಷೇತ್ರದಲ್ಲಿ ಕೃಷಿ ಉತ್ಪನ್ನಗಳ ಅಂತಿಮ ಬಳಕೆಯವರೆಗೂ ವ್ಯಾಪಿಸಿದೆ. ಸಂಸ್ಕರಣೆ, ಪ್ಯಾಕೇಜಿಂಗ್, ಸಂಗ್ರಹಣೆ, ಸಾರಿಗೆ ಮತ್ತು ವಿತರಣೆಯನ್ನು ಒಳಗೊಂಡಿರುತ್ತದೆ, ಅಲ್ಲಿ ಪ್ರತಿ ಹಂತದಲ್ಲೂ ಉತ್ಪನ್ನಕ್ಕೆ ಮೌಲ್ಯವನ್ನು ಸೇರಿಸಲಾಗುತ್ತದೆ “.

ಇತರ ರೈತರಿಗೆ ಕೆಲವು ನಿರ್ಬಂಧ ಹೇರಲಾಗಿದೆ. ಯಾಕೀ ತಾರತಮ್ಯ? ರೈತರು ಮತ್ತು ಗ್ರಾಹಕರು ಈ ಕಾರ್ಪೊರೇಟ್‌ಗಳ ಮರ್ಜಿಗೆ ಬಿದ್ದು, ಬಿಗ್ ಕಾರ್ಪೊರೇಟ್‌ಗಳಿಗೆ ಕೃಷಿಯ ಮೇಲೆ ನಿಯಂತ್ರಣ ಸಾಧಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ.

‘ಕ್ಲಾಜ್ ‘ಬಿ’ ಅನ್ವಯ, ಸಂಗ್ರಹಣಾ ಮಿತಿಯನ್ನು ಹೇರುವ ಯಾವುದೇ ಕ್ರಮವು ಬೆಲೆ ಏರಿಕೆಯನ್ನು ಆಧರಿಸುತ್ತದೆ. ಯಾವುದೇ ಕೃಷಿ ಉತ್ಪನ್ನಗಳ ಸಂಗ್ರಹಣೆಯ ಮಿತಿ ಮೇಲೆ ನಿರ್ಬಂಧ ಹೇರುವುದು ಈ ಕೆಳಗಿನ ಅಂಶಗಳನ್ನು ಅವಲಂಭಿಸಿದೆ:
1. ತೋಟಗಾರಿಕಾ ಉತ್ಪನ್ನಗಳ ಚಿಲ್ಲರೆ ಮಾರಾಟ ದರದಲ್ಲಿ ಶೇ. 100ರಷ್ಟು ಏರಿಕೆಯಾದ ಸಂದರ್ಭದಲ್ಲಿ. ಅಥವಾ
2. ನಾಶವಾಗದ ಕೃಷಿ ಆಹಾರ ಪದಾರ್ಥಗಳ ಚಿಲ್ಲರೆ ಬೆಲೆಯಲ್ಲಿ ಶೇ. 50ರಷ್ಟು ಏರಿಕೆಯಾದ ಸಂದರ್ಭದಲ್ಲಿ.
ಈ ಎರಡು ಸಂದರ್ಭಗಳಲ್ಲಿ. ಹನ್ನೆರಡು ತಿಂಗಳುಗಳ ಹಿಂದಿನ ಚಾಲ್ತಿಯಲ್ಲಿರುವ ಬೆಲೆ ಅಥವಾ ಕಳೆದ ಐದು ವರ್ಷಗಳ ಸರಾಸರಿ ಚಿಲ್ಲರೆ ಬೆಲೆ, ಯಾವುದು ಕಡಿಮೆ ಇರುತ್ತದೋ ಅದು ಲಾಗೂ ಆಗುತ್ತದೆ.

1955ರ ಅಗತ್ಯ ವಸ್ತುಗಳ ಕಾಯ್ದೆಗೆ ತಂದ ತಿದ್ದುಪಡಿಯ ಪ್ರಕಾರ,
ಎ.) ಅಸಾಧಾರಣ ಸಂದರ್ಭಗಳಲ್ಲಿ (ಯುದ್ಧ, ಕ್ಷಾಮ, ಅಸಾಧಾರಣ ಬೆಲೆ ಏರಿಕೆ ಮತ್ತು ನೈಸರ್ಗಿಕ ವೈಪರೀತ್ಯ) ಮಾತ್ರ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆಕಾಳುಗಳು ಮತ್ತು ತೈಲಗಳು ಸೇರಿದಂತೆ ಅಂತಹ ಆಹಾರ ಪದಾರ್ಥಗಳ ಪೂರೈಕೆಯನ್ನು ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ನಿರ್ದಿಷ್ಟಪಡಿಸಿ, ಅಧಿಸೂಚನೆಯ ಮೂಲಕ ಮಾತ್ರ ನಿಯಂತ್ರಿಸಬಹುದು.

ವಿವರಣೆ: ಕೃಷಿಗೆ ಸಂಬಂಧಿಸಿದಂತೆ ‘ಮೌಲ್ಯ ಸರಪಳಿಯ ಭಾಗಿದಾರರು’ : ಜಮೀನಿನಲ್ಲಿ ಉತ್ಪನ್ನವಾಗುವುದರಿಂದ ಹಿಡಿದು ಕೊನೆಯ ಗ್ರಾಹಕರು ಇದರ ವ್ಯಾಪ್ತಿಗೆ ಬರುತ್ತಾರೆ. ಇದರಲ್ಲಿ ಸಂಸ್ಕರಣೆ, ಪ್ಯಾಕೇಜಿಂಗ್, ಸಂಗ್ರಹಣೆ, ಸಾಗಾಣಿಕೆ ಮತ್ತು ವಿತರಣೆಯ ಹಂತಗಳಿವೆ. ಪ್ರತಿ ಹಂತದಲ್ಲೂ ಮೌಲ್ಯ ವರ್ಧನೆ ಆಗುತ್ತದೆ.

ಇದರ ಒಟ್ಟು ತಾತ್ಪರ್ಯವೆಂದರೆ, ಯಾವುದನ್ನೂ ಕುರುಡಾಗಿ ನಂಬಬೇಡಿ, ನಿಮ್ಮ ಶಿಕ್ಷಣ ಮತ್ತು ಬುದ್ಧಿಯನ್ನು ಬಳಸಿ ಒಂದು ಮಾಹಿತಿಯುಕ್ತ ಅಭಿಪ್ರಾಯವನ್ನು ಸೃಷ್ಟಿಸಿ.

ಗ್ರಾಹಕರಾಗಿ ನಾವು ಪ್ರತಿಭಟಿಸುತ್ತಿರುವ ರೈತರಿಗೆ ಕೃತಜ್ಞರಾಗಿರಬೇಕು ಮತ್ತು ತುಂಬು ಹೃದಯದಿಂದ ಅವರ ಹೋರಾಟವನ್ನು ಬೆಂಬಲಿಸಬೇಕು.

ಈ ಮೂರು ಕಾಯ್ದೆಗಳು ಕೇವಲ ರೈತರಿಗಷ್ಟೇ ಅಲ್ಲ, ನಮ್ಮ-ನಿಮ್ಮಂತಹ ಗ್ರಾಹಕರಿಗೂ ಮಾರಕವಾಗಿವೆ. ಏಕೆಂದರೆ, ‘ಮೌಲ್ಯ ಸರಪಳಿ ಭಾಗಿದಾರರು” ಎಂದು ಕರೆಯಲ್ಪಡುವ ಈ ದೊಡ್ಡ ಕಂಪನಿಗಳು ಯಾವುದೇ ಮಿತಿಗಳಿಲ್ಲದೆ ಸಂಗ್ರಹಿಸಬಹುದು. ಆದರೆ ಮಿತಿಗಳು ರೈತರಿಗೆ ಮಾತ್ರ ಅನ್ವಯಿಸುತ್ತವೆ. ಇದು ಹೊಸ ತಿದುಪಡಿಯ ಅಂಶ.

ಅಂತಿಮವಾಗಿ, ಈ ದೊಡ್ಡ ಕಾರ್ಪೋರೇಟ್‌ಗಳು ಬೃಹತ್ತಾಗಿ ಸಂಗ್ರಹಿಸಿಡುತ್ತವೆ ಮತ್ತು ರೈತರಿಗೆ ಕಡಿಮೆ ಬೆಲೆಯನ್ನು ನೀಡುವ ಮೂಲಕ ಪೂರೈಕೆಯನ್ನು ನಿಯಂತ್ರಿಸುತ್ತವೆ. ಇನ್ನೊಂದು ಕಡೆ ಅನಿಯಮಿತ ಸಂಗ್ರಹಣೆ ಮೂಲಕ ಕೊರತೆಯನ್ನು ಉಂಟು ಮಾಡಿ ಗ್ರಾಹಕರ ಬೇಡಿಕೆಯ ಮೇಲೆ ನಿಯಂತ್ರಣ ಹೊಂದುತ್ತವೆ.

  • ಆದರ್ಶ್ ಆರ್ ಅಯ್ಯರ್

(ಆದರ್ಶ್ ಆರ್ ಅಯ್ಯರ್ ರವರು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರು)


ಇದನ್ನೂ ಓದಿ: ಸರ್ಕಾರದ ಮಾತುಕತೆ ನಾಟಕ: ರೈತರಿಂದ ಹೊಸ ‘ಅಸಹಕಾರ’ ಚಳವಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...