Homeಮುಖಪುಟರೈತ ಉತ್ಪನ್ನಗಳ ಬೆಂಬಲ ಬೆಲೆಗೆ ಲಿಖಿತ ವಾಗ್ದಾನ ಬೇಕು

ರೈತ ಉತ್ಪನ್ನಗಳ ಬೆಂಬಲ ಬೆಲೆಗೆ ಲಿಖಿತ ವಾಗ್ದಾನ ಬೇಕು

ಹೊಗಳಿಕೆಯ ಮೂಲಕ ಕಾಗೆಯ ಬಾಯಿ ಮಾಂಸದ ತುಂಡನ್ನು ಕಸಿಯುವ ಗುಳ್ಳೆ ನರಿಯಂತ ರಾಜಕಾರಣಿಗಳ ಮಸಲತ್ತು ಏನೆಂಬುದನ್ನು ರೈತರು ಚೆನ್ನಾಗಿ ಬಲ್ಲರು.

- Advertisement -
- Advertisement -

ಈ ದೇಶದ ದುರಂತವೆಂದರೆ ಇಡೀ ಜಗತ್ತು ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸಿ ಬಾಯಿಗೆ ಮಾಸ್ಕ್ ಹಾಕಿ ಮೂಕವಾಗಿದ್ದಾಗ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿ ತರಾತುರಿಯಲ್ಲಿ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ಬೆಳೆ ಬೆಲೆ ಖಾತರಿ ಒಪ್ಪಂದ ಮಸೂದೆ, ಹಾಗೂ ತೋಟಗಾರಿಕಾ ಸೇವೆಗಳ ಜೀವನಾವಶ್ಯಕ ಮಸೂದೆ – ಎಂಬೀ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಸಾವಧಾನವಾಗಿ ಚರ್ಚಿಸದೆ, ತೀವ್ರ ವಿರೋಧದ ನಡುವೆಯೂ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಅವಶ್ಯಕತೆ, ಅವಸರ ಏನಿತ್ತು?

ಇದು ಕೇವಲ ಕಾರ್ಪೊರೆಟ್ ವಲಯವನ್ನು ಸಂಪ್ರೀತೀತಗೊಳಿಸುವುದಕ್ಕಾಗಿ ಎಂಬುದು ಶಾಲಾಮಕ್ಕಳಿಗೂ ತಿಳಿದ ವಿಚಾರ. ದೂರಗಾಮಿ ಚಿಂತನೆ ಇಲ್ಲದ ಈ ಮಸೂದೆಗಳು ಕ್ರಮೇಣ ರೈತಾಪಿ ವರ್ಗದ ಸ್ವಾತಂತ್ರ್ಯವನ್ನು ಕಸಿದುಕೊಂಡು ಕಾರ್ಪೊರೆಟರ ಗುಲಾಮರನ್ನಾಗಿ ಮಾಡುತ್ತವೆಯಲ್ಲವೆ? ಬೆಂಬಲ ಬೆಲೆ ನೀಡುವ ಮಾರುಕಟ್ಟೆ ವ್ಯವಹಾರವನ್ನು ನಿಭಾಯಿಸುವ ಜವಾಬ್ದಾರಿಯಿಂದ ಸರ್ಕಾರ ತಪ್ಪಿಸಿಕೊಳ್ಳುವ ಹುನ್ನಾರವಲ್ಲದೆ ಇದು ಬೇರೆ ಅಲ್ಲ. ಈ ಮಸೂದೆಗಳು ಮೇಲುನೋಟಕ್ಕೆ ಆಕರ್ಷಕವಾಗಿ ಕಂಡುಬಂದರೂ ಕ್ರಮೇಣ ರೈತರನ್ನು ದಿವಾಳಿ ಎಬ್ಬಿಸಿ ವಲಸಿಗರನ್ನಾಗಿ ಮಾಡುತ್ತವೆಯಲ್ಲವೆ?

ಆಗ ಗತ್ಯಂತರವಿಲ್ಲದೆ ಈ ಕೃಷಿಕ ಕಾರ್ಮಿಕ ವರ್ಗವು ಪಟ್ಟಣಗಳತ್ತ ಪಯಣಿಸುತ್ತಾರೆ. ಇಲ್ಲಿ ಕೂಲಿ ಕಂಟ್ರಾಕ್ಟ್‌ದಾರರ ಮೌಸ್‌ಟ್ರ್ಯಾಪ್‌ಗೆ (ಇಲಿಬೋನು) ಅನಿವಾರ್ಯವಾಗಿ ಸಿಕ್ಕಿ ಬೀಳುತ್ತಾರೆ. ಇಲ್ಲಿಗೆ ಮುಗಿಯಿತು – ’ಸರ್ವರಿಗೆ ಸಮಬಾಳು; ಸರ್ವರಿಗೆ ಸಮಪಾಲು’ ಎಂಬ ಸಮಾಜವಾದ ಹಾಗೂ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು. ಇಂಥ ಸಂಘರ್ಷಾತ್ಮಕ ಮಸೂದೆಗಳನ್ನು ಜಾರಿಗೊಳಿಸುವ ಮುನ್ನ ಅದರ ಕರಡು ಪ್ರತಿಗಳನ್ನು ಸಾರ್ವಜನಿಕ ವಲಯಕ್ಕೆ ಬಿಟ್ಟು ಚರ್ಚಿಸುವುದು, ರೈತ ನಾಯಕರನ್ನು ಕರೆದು ಮಾತುಕತೆ ಆಡುವುದು ಇತ್ಯಾದಿ ಏನೂ ನಡೆಯಲಿಲ್ಲ. ’ಜಗವೆಲ್ಲ ಮೌನವಾಗಿರುವಾಗ ಇವನೊಬ್ಬನೆದ್ದ’ ಎಂಬಂತೆ ಕೇಂದ್ರ ಸರ್ಕಾರ ಏಕಾಏಕಿ ಈ ಮಸೂದೆಗಳನ್ನು ಜಾರಿಗೊಳಿಸಿ ರೈತ ವರ್ಗವನ್ನು ರೊಚ್ಚಿಗೇಳಿಸಿತು.

ಇದರ ಪರಿಣಾಮವಾಗಿ ಅಖಿಲ ಭಾರತ ರೈತಸಂಘಟನೆಗಳು ಈಗ ಒಟ್ಟಾಗಿ ನವೆಂಬರ್ 26ರಿಂದ ಸುರಿವ ಹಿಮದಲ್ಲಿ ಕೊರೆವ ಚಳಿಯಲ್ಲಿ ದೇಶದ ನಾನಾ ಭಾಗಗಳಿಂದ ಬಂದು ಸರ್ಕಾರದ ಅಡೆತಡೆ ಅಡ್ಡಿ ಆತಂಕ ಪೊಲೀಸರ ಲಾಠಿ ಏಟು ಯಾವುದಕ್ಕೂ ಜಗ್ಗದೆ ಕುಗ್ಗದೆ ನುಗ್ಗಿ ದಿಲ್ಲಿ ದರ್ಬಾರಿನ ದಿಡ್ಡಿ ಬಾಗಿಲ ಬಳಿ 15 ದಿನಗಳಿಂದ ಬೀಡುಬಿಟ್ಟಿದ್ದಾರೆ. ಒಂದಿಬ್ಬರ ಬಲಿದಾನವೂ ಆಗಿದೆ. ಇದಾಗಿ ವಾರಗಳು ಕಳೆಯುತ್ತ ಬಂದರೂ ಕೂಡ ಅನ್ನದಾತರನ್ನು ತಕ್ಷಣ ಕರೆದು ಅವರ ಅಹವಾಲನ್ನು ಆಲಿಸುವ ಸೌಜನ್ಯವಾಗಲಿ ವ್ಯವಧಾನವಾಗಲಿ ಸರ್ಕಾರಕ್ಕಿಲ್ಲವಾಗಿದೆ. ಈ ರೈತ ಪ್ರತಿಭಟನೆಯು ವಿರೋಧ ಪಕ್ಷಗಳ ಪಿತೂರಿ, ದೇಶದ್ರೋಹಿಗಳ ಕೈವಾಡ, ಇದರಲ್ಲಿ ನಕ್ಸಲರು, ಖಲಿಸ್ತಾನರು ಸೇರಿಕೊಂಡಿದ್ದಾರೆ ಎಂದು ಮುಂತಾಗಿ ಕೇಂದ್ರ ನಾಯಕರು ಲಘುವಾಗಿ ಮಾತಾಡಿದ್ದಾರೆ. ಈ ಧೋರಣೆ ನಿಜಕ್ಕೂ ಅಕ್ಷಮ್ಯ. ಯಾಕೆಂದರೆ ಪ್ರತಿಭಟನಾ ನಿರತ ರೈತರು ಈ ಸಂಚಿನ ನುಡಿಗಳನ್ನು ಮುಂಚಿತವಾಗಿಯೇ ಊಹಿಸಿದವರಾಗಿದ್ದಾರೆ. ಅವರ ಪ್ರತಿಭಟನೆಯಲ್ಲಿ ಕೇಂದ್ರಸರ್ಕಾರ ಆರೋಪಿಸಿರುವ ಯಾವ ವಿರೋಧ ಪಕ್ಷದವರಾಗಲಿ, ಯಾವ ದೇಶವಿರೋಧಿ ದುಷ್ಕರ್ಮಿಗಳಾಗಲಿ ತೂರಿ ಬರದಂತೆ ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ.

ಈಗ ರೈತರು ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಅವರ ಆಗುಹೋಗುಗಳನ್ನು ಅವರೇ ಕುಳಿತು ಚರ್ಚಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮರ್ಥರವರು. ಹೊಗಳಿಕೆಯ ಮೂಲಕ ಕಾಗೆಯ ಬಾಯಿ ಮಾಂಸದ ತುಂಡನ್ನು ಕಸಿಯುವ ಗುಳ್ಳೆ ನರಿಯಂತ ರಾಜಕಾರಣಿಗಳ ಮಸಲತ್ತು ಏನೆಂಬುದನ್ನು ಅವರು ಚೆನ್ನಾಗಿ ಬಲ್ಲರು. ಇದು ಶತಮಾನಗಳ ಅನುಭವದಿಂದ ಬಂದ ಪಾಠ. ಅವರಿಗೀಗ ಬೇರೆಯವರ ನೆರವು ಬೇಕಾಗಿಲ್ಲ. ಯಾವ ದೇಶದಲ್ಲಿ ರೈತರು, ದಲಿತ ಮಹಿಳೆಯರು, ಮಕ್ಕಳು ಶಾಂತಿ ಸಮಾಧಾನ ನೆಮ್ಮದಿಯಿಂದ ಬದುಕು ಸಾಗಿಸುತ್ತಾರೋ ಆ ದೇಶ ಸುಭಿಕ್ಷವಾಗಿರುತ್ತದೆ ಎಂಬುದು ನಮ್ಮ ಪೂರ್ವಿಕರ ಅನುಭವದ ನುಡಿ. ಆದರೆ ಅದಕ್ಕೀಗ ಭಂಗ ಬರುತ್ತಿದೆ.

ಆದ್ದರಿಂದ ಪ್ರಸ್ತುತ ಪ್ರಧಾನಿ ಮೋದಿ ಅವರ ಬಿಜೆಪಿ ಸರ್ಕಾರವು ತನ್ನ ಹಮ್ಮು-ಬಿಮ್ಮುಗಳನ್ನು ಬದಿಗಿಟ್ಟು ರೈತ ನಾಯಕರನ್ನು ಆಹ್ವಾನಿಸಿ ತಾವು ಕೈಗೊಂಡ ರೈತ ವಿರೋಧಿ ಮಸೂದೆಗಳನ್ನು ಬೇಷರತ್ತಾಗಿ ಹಿಂದೆ ತೆಗೆದುಕೊಳ್ಳಬೇಕು. ಬಾಯಿ ಮಾತಿಗೆ ಬದಲಾಗಿ ಬೆಂಬಲ ಬೆಲೆಗೆ ಲಿಖಿತ ವಾಗ್ದಾನ ನೀಡಬೇಕು. ಹಾಗೂ ಇದುವರೆಗೂ ತಮಗೆ ನೀಡಿದ ತೊಂದರೆಗೆ ಕ್ಷಮೆ ಇರಲಿ ಎಂದೂ ತನ್ನ ದೊಡ್ಡತನವನ್ನು ಮೆರೆಯಬೇಕು.

  • ಪ್ರೊ. ಶಿವರಾಮಯ್ಯ

ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ. ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು.


ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...