Homeಅಂಕಣಗಳುಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ತಾವು ಎದುರು ಹಾಕಿಕೊಂಡಿರುವುದು ಪಂಜಾಬಿಗಳನ್ನು, ಅದರಲ್ಲಿಯೂ ಸಿಖ್ಖರನ್ನು ಎಂಬ ಪರಿವೆ ಮೋದಿ-ಶಾ ಜೋಡಿಗೆ ಇದ್ದಂತಿಲ್ಲ. ಪ್ರತಿರೋಧ ಮತ್ತು ತಿರುಗೇಟು ಸಿಖ್ ಸಮುದಾಯದ ರಕ್ತಗತ ಗುಣ.

- Advertisement -
- Advertisement -

ದೆಹಲಿ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತಸೇನೆ ದಿನಕಳೆದಂತೆ ಹಿಗ್ಗಲಿದೆಯೇ ವಿನಾ ಕುಗ್ಗುವ ಮಾತಿಲ್ಲ…
ಉತ್ತರ ಭಾರತ ಮೈ ನಡುಗಿಸುವ ಚಳಿಯ ಕಂಬಳಿಯನ್ನು ಹೊದೆಯತೊಡಗಿದೆ. ಶೀತ ಮಾರುತಗಳೆದ್ದು ಎಲುಬು ಕೊರೆಯುವಂತೆ ಕಾಡುವ ಚಳಿ ಇನ್ನೂ ಇಳಿದಿಲ್ಲ ಹೌದು. ಆದರೆ ಅದು ಸನಿಹದಲ್ಲೇ ಠಳಾಯಿಸಿದೆ. ಕ್ರಿಸ್ಮಸ್ ಮುಗಿದು ಡಿಸೆಂಬರ್ ಕಳೆದು ಜನವರಿ ಕಾಲಿಡುತ್ತಿದ್ದಂತೆ ಶೀತಮಾರುತಗಳು ಹೊಟ್ಟೆ ಬಟ್ಟೆಗಿಲ್ಲದ ನಿರ್ಗತಿಕ ಜನಕೋಟಿಯನ್ನು ಇನ್ನಿಲ್ಲದಂತೆ ಕಾಡಿ ಹಿಂಡಿ ಹಿಪ್ಪೆ ಮಾಡಲಿವೆ. ಬೇಸಿಗೆಯಲ್ಲಿ ಉಗ್ರ ಉಷ್ಣತೆಯ ಮಾರುತಗಳು ಬೀಸಿ ನಿರ್ಗತಿಕರು ಸಾಯುವುದುಂಟು. ಚಳಿಗಾಲದಲ್ಲಿ ಸಾವನ್ನು ಕರೆತಂದು ಕಾಡುವುದು ಶೀತಮಾರುತಗಳ ಸರದಿ.

PC : Gaon Connection, (ಮಹೇಂದ್ರಸಿಂಗ್ ಟಿಕಾಯತ್)

ಇಂತಹ ಥರಗುಡುವ ಥಂಡಿಯಲ್ಲಿ ದೇಶದ ರಾಜಧಾನಿ ದೆಹಲಿಗೆ ರೈತರು ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಹಾಕಿದ್ದಾರೆ. ದಶಕಗಳ ಹಿಂದೆ 1988ರಲ್ಲಿ ಮಹೇಂದ್ರಸಿಂಗ್ ಟಿಕಾಯತ್ ನೇತೃತ್ವದಲ್ಲಿ ಉತ್ತರಪ್ರದೇಶದ ರೈತರು ದೆಹಲಿಗೆ ನುಗ್ಗಿ ಸಂಸತ್ತಿಗೆ ಕೂಗಳತೆಯ ದೂರದ ಬೋಟ್ ಕ್ಲಬ್‌ನಲ್ಲಿ ಬಾವುಟ ನೆಟ್ಟು ಕುಳಿತಿದ್ದರು. ಆನಂತರದ ಐತಿಹಾಸಿಕ ಮುತ್ತಿಗೆ ಎಂದರೆ ಇದೇ, ಈಗಿನದು, ಪಂಜಾಬ್ ಮತ್ತು ಹರಿಯಾಣದ ರೈತರದು. ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕೋವಿಡ್ ದಾಳಿಯ ದಿನಗಳ ನಟ್ಟನಡುವೆ ತರಾತುರಿಯಿಂದ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ಸಿಡಿದೆದ್ದಿದ್ದರು. ಮೋದಿ ಸರ್ಕಾರ ಸೊಪ್ಪು ಹಾಕಲಿಲ್ಲ. ಪರಿಣಾಮವಾಗಿ ದೆಹಲಿಯ ಗಡಿಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಹಂತ ಹಂತವಾಗಿ ದೇಶದ ರಾಜಧಾನಿಗೆ ಸರಕು ಸೇವೆಗಳು ದೊರೆಯದಂತೆ ಗಡಿಗಳಲ್ಲೇ ತಡೆದು, ಸಂಚಾರವನ್ನು ನಿಲ್ಲಿಸಿ ದೆಹಲಿಯ ’ಉಸಿರು ಕಟ್ಟಿಸಿ’ ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವುದು ರೈತರ ಕಾರ್ಯತಂತ್ರ.

ದೆಹಲಿಯನ್ನು ಪ್ರವೇಶಿಸದಂತೆ ರೈತರನ್ನು ತಡೆಯಲು ಹರಿಯಾಣದ ಬಿಜೆಪಿ ಸರ್ಕಾರ ರಸ್ತೆಗಳನ್ನು ಅಗೆದು ಭಾರೀ ಕಂದಕಗಳನ್ನು ನಿರ್ಮಿಸಿತು. ಬೃಹತ್ ಕಂಟೈನರುಗಳನ್ನು, ಕಾಂಕ್ರೀಟ್ ನಿರ್ಮಿತ ತಡೆಗೋಡೆಗಳನ್ನು ಎಬ್ಬಿಸಿತು. ಅವರು ಮುನ್ನುಗ್ಗದಂತೆ, ಚಳಿಗಾಲವೆಂದೂ ಲೆಕ್ಕಿಸದೆ ಜಲಫಿರಂಗಿ ಪ್ರಯೋಗಿಸಿ ಕ್ರೌರ್ಯ ಮೆರೆಯಿತು. ಎಲ್ಲೆಲ್ಲೆಂದಲೋ ನೂರಾರು ಟ್ರಕ್ಕುಗಳಲ್ಲಿ ಮಣ್ಣು ಹೊತ್ತು ತಂದು ಹೆದ್ದಾರಿಗಳಲ್ಲಿ ಮಣ್ಣಿನ ಬೃಹತ್ ದಿಣ್ಣೆಗಳನ್ನು ಎಬ್ಬಿಸಿತು. ಅಶ್ರುವಾಯು ಷೆಲ್‌ಗಳನ್ನು ಧಾರಾಳವಾಗಿ ಸಿಡಿಸಿತು. ಗುಂಡು ಹಾರಿಸುವುದು, ಬಾಂಬು ಸಿಡಿಸುವುದರ ವಿನಾ ಶತ್ರುದೇಶದ ಸೈನಿಕರನ್ನು ಹಿಮ್ಮೆಟ್ಟಿಸಲು ಹೂಡಲಾಗುವ ಉಳಿದೆಲ್ಲ ತಂತ್ರಗಳನ್ನು ಹೂಡಿತು. ಹೆದ್ದಾರಿಗಳನ್ನು ಅಗೆದು ಭಾರಿ ಕಂದಕ ತೋಡುವುದು ವಿಧ್ವಂಸಕ ಕೃತ್ಯವೇ ಹೌದು. ಅಂತಹ ಶಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಸರ್ಕಾರವೇ ಮುಂದೆ ನಿಂತು ಇಂತಹ ಕೃತ್ಯ ಎಸಗಿದರೆ ಅದರ ವಿರುದ್ಧ ಎಫ್‌ಐಆರ್ ದಾಖಲಿಸುವವರು ಯಾರು?

ಮೋದಿ ಸರ್ಕಾರ ಮತ್ತು ಕ್ರೋಧಿತ ರೈತರ ನಡುವೆ ಈ ಮುಖಾಮುಖಿ ಸದ್ಯಕ್ಕೆ ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ತಮ್ಮ ಬೇಡಿಕೆಗಳು ಈಡೇರುವ ತನಕ ಇಲ್ಲಿಂದ ಕದಲುವುದಿಲ್ಲ ಎಂಬ ದೃಢನಿಶ್ಚಯ ಅವರದು. ಮೂರರಿಂದ ಆರು ತಿಂಗಳಿಗಾಗುವಷ್ಟು ದವಸ ಧಾನ್ಯ ಮತ್ತಿತರೆ ಅವಶ್ಯಕ ವಸ್ತುಗಳನ್ನು ತಮ್ಮ ಟ್ರ್ಯಾಕ್ಟರುಗಳಲ್ಲಿ ಪೇರಿಸಿ ಇಟ್ಟುಕೊಂಡಿದ್ದಾರೆ. ಸಿಂಘು ಗಡಿಯ ರಾಷ್ಟ್ರೀಯ ಹೆದ್ದಾರಿಯೊಂದರಲ್ಲೇ ಕಿ.ಮೀ.ಗಳ ಉದ್ದಕ್ಕೆ ಇಂತಹ 96 ಸಾವಿರ ಟ್ರ್ಯಾಕ್ಟರುಗಳು ನಿಂತಿವೆ. ಪ್ರತಿ ಟ್ರ್ಯಾಕ್ಟರಿನಲ್ಲೂ ಆಹಾರ ದಿನಸಿಗಳ ಸಂಗ್ರಹವಿದೆ. ಎಂಟು ದಿನಗಳು ಕಳೆದರೂ ಈ ಸಂಗ್ರಹವನ್ನು ಮುಟ್ಟಬೇಕಾದ ಪರಿಸ್ಥಿತಿ ರೈತರಿಗೆ ಒದಗಿಲ್ಲ. ರೈತರ ಹೋರಾಟವನ್ನು ಬೆಂಬಲಿಸುವ ಜನರು-ಸಂಘ ಸಂಸ್ಥೆಗಳಿಂದ ಈ ಸಾಮಗ್ರಿಗಳು ನದಿಯಂತೆ ಹರಿದುಬರತೊಡಗಿವೆ. ರೈತರು ಬೀಡುಬಿಟ್ಟಿರುವ ದೆಹಲಿ ಹೊರವಲಯದ ಯಾವುದೇ ಗಡಿ ಭಾಗಗಳಿಗೆ ಹೋದರೂ ಅಲ್ಲಿ ಹತ್ತು ಹಲವೆಡೆ ವ್ಯವಸ್ಥಿತ ಅನ್ನ ಸಂತರ್ಪಣೆಗಳನ್ನು ಕಾಣಬಲ್ಲಿರಿ. ಅಲ್ಲಿ ಯಾರು ಬಂದರೂ ಕಡೆಗೆ ತಮ್ಮ ವೈರಿ ಬಂದರೂ ಕೈ ಹಿಡಿದು ಪ್ರೀತಿಯಿಂದ ಕುಳ್ಳಿರಿಸಿ ಊಟ ಮಾಡಿಸಿ ಕಳಿಸುತ್ತಾರೆ ರೈತರು.

ಪಂಜಾಬ್ ಮತ್ತು ಹರಿಯಾಣದ ರೈತರು ದೇಶದ ಇತರೆ ಭಾಗಗಳ ತಮ್ಮ ಸೋದರರಿಗಿಂತ ಹೆಚ್ಚು ಅನುಕೂಲವಂತರು. ದೇಶದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವವರು. ಹಸಿರು ಕ್ರಾಂತಿಯ ಮುಂಚೂಣಿಯಲ್ಲಿದ್ದವರು. ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯ ಪ್ರಕಾರ ಗರಿಷ್ಠ ಪ್ರಮಾಣದ ಆಹಾರ ಧಾನ್ಯಗಳ ಖರೀದಿ ನಡೆಯುವುದು ಈ ರಾಜ್ಯಗಳಲ್ಲಿಯೇ. ಹೀಗಾಗಿ ಈ ರಾಜ್ಯಗಳ ರೈತರು ಬಹಳ ವರ್ಷಗಳಿಂದಲೂ ಕನಿಷ್ಠ ಬೆಂಬಲ ಬೆಲೆಯ ಗರಿಷ್ಠ ಫಲಾನುಭವಿಗಳು. ಪಂಜಾಬಿನಲ್ಲಿ ಬೆಳೆಯಲಾಗುವ ಶೇ.85ಕ್ಕಿಂತ ಹೆಚ್ಚು ಭತ್ತ-ಗೋಧಿ ಮತ್ತು ಹರಿಯಾಣದಲ್ಲಿ ಬೆಳೆಯುವ ಶೇ.75ರಷ್ಟು ಗೋಧಿ- ಭತ್ತವನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಬೆಂಬಲ ಬೆಲೆ ಇಲ್ಲದೆ ಹೋದರೆ ದರಗಳು ಕುಸಿಯಲಿವೆ. ರಾಜ್ಯ ಸರ್ಕಾರಗಳೂ, ಕೃಷಿ ಮಾರುಕಟ್ಟೆ ಜಾಲವನ್ನೂ ಮತ್ತು ಅವುಗಳ ವ್ಯವಸ್ಥೆಯನ್ನೂ ಬಲಪಡಿಸಿವೆ. ಧಾನ್ಯ ಸಾಗಾಟಕ್ಕೆ ಬಹುತೇಕ ಗ್ರಾಮಗಳಿಂದ ಈ ಮಾರುಕಟ್ಟೆಗಳಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ರೈತರಿಗೆ ಅಳಿವು ಉಳಿವಿನ ಪ್ರಶ್ನೆಯಿದು. ಬೆಂಬಲ ಬೆಲೆಯ ರಕ್ಷಣೆಗಾಗಿ ಉಳಿದ ಯಾವುದೇ ರಾಜ್ಯದ ರೈತರಿಗಿಂತ ಮಿಗಿಲಾಗಿ ಕತ್ತಿ ಹಿಡಿದು ನಿಂತಿದ್ದಾರೆ.

PC : Twitter, (ಸರ್ದಾರ್ ಅಜಿತ್ ಸಿಂಗ್)

ತಾವು ಎದುರು ಹಾಕಿಕೊಂಡಿರುವುದು ಪಂಜಾಬಿಗಳನ್ನು, ಅದರಲ್ಲಿಯೂ ಸಿಖ್ಖರನ್ನು ಎಂಬ ಪರಿವೆ ಮೋದಿ-ಶಾ ಜೋಡಿಗೆ ಇದ್ದಂತಿಲ್ಲ. ಪ್ರತಿರೋಧ ಮತ್ತು ತಿರುಗೇಟು ಸಿಖ್ ಸಮುದಾಯದ ರಕ್ತಗತ ಗುಣ. ಜಾಟ್ ಸಿಖ್ಖರೆಂಬ ಸಿಖ್ ರೈತರು ಆಂದೋಲನಪ್ರಿಯರು. 20ನೆಯ ಶತಮಾನದ ಆರಂಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ’ಪಗಡಿ ಸಂಭಾಲ್ ಜಟ್ಟಾ’ ಎಂಬ ಹೆಸರಿನ ರೈತ ಆಂದೋಲನವನ್ನು ಸಿಡಿಸಿದವರು ಸರ್ದಾರ್ ಅಜಿತ್ ಸಿಂಗ್. ಬ್ರಿಟಿಷ್ ಸರ್ಕಾರ ಅಜಿತ್ ಸಿಂಗ್ ಅವರಿಗೆ 40 ವರ್ಷಗಳ ಕಾಲ ದೇಶ ತೊರೆಯಬೇಕೆಂಬ ಶಿಕ್ಷೆ ವಿಧಿಸಿತ್ತು. ಅವರು ಹುತಾತ್ಮ ಭಗತ್ ಸಿಂಗ್ ಅವರ ಚಿಕ್ಕಪ್ಪ. ’ಪಗಡಿ ಸಂಭಾಲ್ ಜಟ್ಟಾ’ ಘೋಷಣೆಯನ್ನು ಭಗತ್ ಸಿಂಗ್ ತಮ್ಮ ಕ್ರಾಂತಿಗೀತೆಯನ್ನಾಗಿ ಬಳಸಿಕೊಂಡಿದ್ದರು. ಈಗ ಅವರನ್ನು ಒಲಿಸಿಕೊಳ್ಳುವ ದಾರಿಯನ್ನು ಬಿಟ್ಟು ಬಲವಂತ ಹೇರಿಕೆಯ ದಾರಿ ಫಲ ನೀಡುವುದಿಲ್ಲ.

ಹಿಂದು-ಮುಸ್ಲಿಮ್ ದ್ರುವೀಕರಣ ಪಂಜಾಬಿನಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಮುಸ್ಲಿಮರ ಸಂಖ್ಯೆ ತೀರಾ ನಗಣ್ಯ. ಸಿಖ್ಖರು ಮತ್ತು ಹಿಂದೂಗಳನ್ನು ಪರಸ್ಪರರ ವಿರುದ್ಧ ಹೂಡುವುದು ಅಪಾಯಕಾರಿ ಆಟವಾದೀತು. ಅಕಾಲಿದಳದಂತಹ ಸಿಖ್ ರಾಜಕೀಯ ಪಕ್ಷವನ್ನು ಜೊತೆಗಿಟ್ಟುಕೊಂಡೂ ಸಿಖ್ಖರನ್ನು ಒಲಿಸಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗಿಲ್ಲ. 2014 ಮತ್ತು 2019ರ ಎರಡೂ ಚುನಾವಣೆಗಳಲ್ಲಿ ಮೋದಿ ಮಂತ್ರ ಪಂಜಾಬಿನಲ್ಲಿ ಫಲಿಸಿಲ್ಲ.

ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿಗಳು, ಪಾಕಿಸ್ತಾನಿಗಳು, ಬಿರಿಯಾನಿ ಬಯಸುವವರು, ದೇಶದ್ರೋಹಿಗಳು ಎಂದೆಲ್ಲ ಜರಿದು, ಅವರ ಹೆಸರಿಗೆ ಮಸಿ ಬಳಿಯುವ ನೀಚ ಪ್ರಯತ್ನಗಳು ನಡೆದಿವೆ. ’ಮೋದಿ-ಗೋದಿ ಮೀಡಿಯಾ’ (ಜನತೆಗೆ ನಿಷ್ಠರಾಗಿರದೆ ಆಳುವವರ ಮಡಿಲಲ್ಲಿ ಆಡುವ ಮುದ್ದಿನ ಮೀಡಿಯಾ) ಇಂತಹ ಪ್ರಯತ್ನಗಳಿಗೆ ಗಾಳಿ ಹೊಡೆದು ಹಿಗ್ಗಿಸಿ ತೋರಿಸತೊಡಗಿರುವುದು ಕೀಳು ಕೃತ್ಯ.

ನೋಟು ರದ್ದಿನಂತಹ ವಿನಾಶಕಾರಿ ಕ್ರಮ ಮತ್ತು ಲಾಕ್ ಡೌನ್- ಶ್ರಮಿಕರ ಮಹಾವಲಸೆಯಂತಹ ಭಾರೀ ಬಿಕ್ಕಟ್ಟುಗಳನ್ನೇ ಜೀರ್ಣಿಸಿಕೊಂಡಿರುವ ಅಹಂಕಾರದ ಅಮಲು ಮೋದಿ-ಶಾ ಬಿಜೆಪಿಯ ತಲೆಯಿಂದ ಇನ್ನೂ ಇಳಿದಂತಿಲ್ಲ. ಹೀಗಾಗಿಯೇ ರೈತರ ಪ್ರತಿಭಟನೆಯನ್ನೂ ಜೀರ್ಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಂತಿದೆ.

ಆದರೆ ವರ್ತಮಾನ ಮಗ್ಗುಲು ತಿರುಗುವುದೇ ಇಲ್ಲ, ಗಾಲಿ ಉರುಳುವುದೇ ಇಲ್ಲ ಎಂದು ನಂಬಿ ನಡೆದುಕೊಳ್ಳುವುದು ಅವಿವೇಕವಾದೀತು.


ಇದನ್ನೂ ಓದಿ: ಭಾರತದ ರೈತರ ಬೆಂಬಲಕ್ಕೆ ನಿಂತ ಸಿಖ್-ಅಮೆರಿಕನ್ನರಿಂದ ಪ್ರತಿಭಟನಾ ರ್‍ಯಾಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...