Homeಅಂಕಣಗಳುಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ತಾವು ಎದುರು ಹಾಕಿಕೊಂಡಿರುವುದು ಪಂಜಾಬಿಗಳನ್ನು, ಅದರಲ್ಲಿಯೂ ಸಿಖ್ಖರನ್ನು ಎಂಬ ಪರಿವೆ ಮೋದಿ-ಶಾ ಜೋಡಿಗೆ ಇದ್ದಂತಿಲ್ಲ. ಪ್ರತಿರೋಧ ಮತ್ತು ತಿರುಗೇಟು ಸಿಖ್ ಸಮುದಾಯದ ರಕ್ತಗತ ಗುಣ.

- Advertisement -
- Advertisement -

ದೆಹಲಿ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತಸೇನೆ ದಿನಕಳೆದಂತೆ ಹಿಗ್ಗಲಿದೆಯೇ ವಿನಾ ಕುಗ್ಗುವ ಮಾತಿಲ್ಲ…
ಉತ್ತರ ಭಾರತ ಮೈ ನಡುಗಿಸುವ ಚಳಿಯ ಕಂಬಳಿಯನ್ನು ಹೊದೆಯತೊಡಗಿದೆ. ಶೀತ ಮಾರುತಗಳೆದ್ದು ಎಲುಬು ಕೊರೆಯುವಂತೆ ಕಾಡುವ ಚಳಿ ಇನ್ನೂ ಇಳಿದಿಲ್ಲ ಹೌದು. ಆದರೆ ಅದು ಸನಿಹದಲ್ಲೇ ಠಳಾಯಿಸಿದೆ. ಕ್ರಿಸ್ಮಸ್ ಮುಗಿದು ಡಿಸೆಂಬರ್ ಕಳೆದು ಜನವರಿ ಕಾಲಿಡುತ್ತಿದ್ದಂತೆ ಶೀತಮಾರುತಗಳು ಹೊಟ್ಟೆ ಬಟ್ಟೆಗಿಲ್ಲದ ನಿರ್ಗತಿಕ ಜನಕೋಟಿಯನ್ನು ಇನ್ನಿಲ್ಲದಂತೆ ಕಾಡಿ ಹಿಂಡಿ ಹಿಪ್ಪೆ ಮಾಡಲಿವೆ. ಬೇಸಿಗೆಯಲ್ಲಿ ಉಗ್ರ ಉಷ್ಣತೆಯ ಮಾರುತಗಳು ಬೀಸಿ ನಿರ್ಗತಿಕರು ಸಾಯುವುದುಂಟು. ಚಳಿಗಾಲದಲ್ಲಿ ಸಾವನ್ನು ಕರೆತಂದು ಕಾಡುವುದು ಶೀತಮಾರುತಗಳ ಸರದಿ.

PC : Gaon Connection, (ಮಹೇಂದ್ರಸಿಂಗ್ ಟಿಕಾಯತ್)

ಇಂತಹ ಥರಗುಡುವ ಥಂಡಿಯಲ್ಲಿ ದೇಶದ ರಾಜಧಾನಿ ದೆಹಲಿಗೆ ರೈತರು ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಹಾಕಿದ್ದಾರೆ. ದಶಕಗಳ ಹಿಂದೆ 1988ರಲ್ಲಿ ಮಹೇಂದ್ರಸಿಂಗ್ ಟಿಕಾಯತ್ ನೇತೃತ್ವದಲ್ಲಿ ಉತ್ತರಪ್ರದೇಶದ ರೈತರು ದೆಹಲಿಗೆ ನುಗ್ಗಿ ಸಂಸತ್ತಿಗೆ ಕೂಗಳತೆಯ ದೂರದ ಬೋಟ್ ಕ್ಲಬ್‌ನಲ್ಲಿ ಬಾವುಟ ನೆಟ್ಟು ಕುಳಿತಿದ್ದರು. ಆನಂತರದ ಐತಿಹಾಸಿಕ ಮುತ್ತಿಗೆ ಎಂದರೆ ಇದೇ, ಈಗಿನದು, ಪಂಜಾಬ್ ಮತ್ತು ಹರಿಯಾಣದ ರೈತರದು. ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಕೋವಿಡ್ ದಾಳಿಯ ದಿನಗಳ ನಟ್ಟನಡುವೆ ತರಾತುರಿಯಿಂದ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ಸಿಡಿದೆದ್ದಿದ್ದರು. ಮೋದಿ ಸರ್ಕಾರ ಸೊಪ್ಪು ಹಾಕಲಿಲ್ಲ. ಪರಿಣಾಮವಾಗಿ ದೆಹಲಿಯ ಗಡಿಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಹಂತ ಹಂತವಾಗಿ ದೇಶದ ರಾಜಧಾನಿಗೆ ಸರಕು ಸೇವೆಗಳು ದೊರೆಯದಂತೆ ಗಡಿಗಳಲ್ಲೇ ತಡೆದು, ಸಂಚಾರವನ್ನು ನಿಲ್ಲಿಸಿ ದೆಹಲಿಯ ’ಉಸಿರು ಕಟ್ಟಿಸಿ’ ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವುದು ರೈತರ ಕಾರ್ಯತಂತ್ರ.

ದೆಹಲಿಯನ್ನು ಪ್ರವೇಶಿಸದಂತೆ ರೈತರನ್ನು ತಡೆಯಲು ಹರಿಯಾಣದ ಬಿಜೆಪಿ ಸರ್ಕಾರ ರಸ್ತೆಗಳನ್ನು ಅಗೆದು ಭಾರೀ ಕಂದಕಗಳನ್ನು ನಿರ್ಮಿಸಿತು. ಬೃಹತ್ ಕಂಟೈನರುಗಳನ್ನು, ಕಾಂಕ್ರೀಟ್ ನಿರ್ಮಿತ ತಡೆಗೋಡೆಗಳನ್ನು ಎಬ್ಬಿಸಿತು. ಅವರು ಮುನ್ನುಗ್ಗದಂತೆ, ಚಳಿಗಾಲವೆಂದೂ ಲೆಕ್ಕಿಸದೆ ಜಲಫಿರಂಗಿ ಪ್ರಯೋಗಿಸಿ ಕ್ರೌರ್ಯ ಮೆರೆಯಿತು. ಎಲ್ಲೆಲ್ಲೆಂದಲೋ ನೂರಾರು ಟ್ರಕ್ಕುಗಳಲ್ಲಿ ಮಣ್ಣು ಹೊತ್ತು ತಂದು ಹೆದ್ದಾರಿಗಳಲ್ಲಿ ಮಣ್ಣಿನ ಬೃಹತ್ ದಿಣ್ಣೆಗಳನ್ನು ಎಬ್ಬಿಸಿತು. ಅಶ್ರುವಾಯು ಷೆಲ್‌ಗಳನ್ನು ಧಾರಾಳವಾಗಿ ಸಿಡಿಸಿತು. ಗುಂಡು ಹಾರಿಸುವುದು, ಬಾಂಬು ಸಿಡಿಸುವುದರ ವಿನಾ ಶತ್ರುದೇಶದ ಸೈನಿಕರನ್ನು ಹಿಮ್ಮೆಟ್ಟಿಸಲು ಹೂಡಲಾಗುವ ಉಳಿದೆಲ್ಲ ತಂತ್ರಗಳನ್ನು ಹೂಡಿತು. ಹೆದ್ದಾರಿಗಳನ್ನು ಅಗೆದು ಭಾರಿ ಕಂದಕ ತೋಡುವುದು ವಿಧ್ವಂಸಕ ಕೃತ್ಯವೇ ಹೌದು. ಅಂತಹ ಶಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಸರ್ಕಾರವೇ ಮುಂದೆ ನಿಂತು ಇಂತಹ ಕೃತ್ಯ ಎಸಗಿದರೆ ಅದರ ವಿರುದ್ಧ ಎಫ್‌ಐಆರ್ ದಾಖಲಿಸುವವರು ಯಾರು?

ಮೋದಿ ಸರ್ಕಾರ ಮತ್ತು ಕ್ರೋಧಿತ ರೈತರ ನಡುವೆ ಈ ಮುಖಾಮುಖಿ ಸದ್ಯಕ್ಕೆ ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ತಮ್ಮ ಬೇಡಿಕೆಗಳು ಈಡೇರುವ ತನಕ ಇಲ್ಲಿಂದ ಕದಲುವುದಿಲ್ಲ ಎಂಬ ದೃಢನಿಶ್ಚಯ ಅವರದು. ಮೂರರಿಂದ ಆರು ತಿಂಗಳಿಗಾಗುವಷ್ಟು ದವಸ ಧಾನ್ಯ ಮತ್ತಿತರೆ ಅವಶ್ಯಕ ವಸ್ತುಗಳನ್ನು ತಮ್ಮ ಟ್ರ್ಯಾಕ್ಟರುಗಳಲ್ಲಿ ಪೇರಿಸಿ ಇಟ್ಟುಕೊಂಡಿದ್ದಾರೆ. ಸಿಂಘು ಗಡಿಯ ರಾಷ್ಟ್ರೀಯ ಹೆದ್ದಾರಿಯೊಂದರಲ್ಲೇ ಕಿ.ಮೀ.ಗಳ ಉದ್ದಕ್ಕೆ ಇಂತಹ 96 ಸಾವಿರ ಟ್ರ್ಯಾಕ್ಟರುಗಳು ನಿಂತಿವೆ. ಪ್ರತಿ ಟ್ರ್ಯಾಕ್ಟರಿನಲ್ಲೂ ಆಹಾರ ದಿನಸಿಗಳ ಸಂಗ್ರಹವಿದೆ. ಎಂಟು ದಿನಗಳು ಕಳೆದರೂ ಈ ಸಂಗ್ರಹವನ್ನು ಮುಟ್ಟಬೇಕಾದ ಪರಿಸ್ಥಿತಿ ರೈತರಿಗೆ ಒದಗಿಲ್ಲ. ರೈತರ ಹೋರಾಟವನ್ನು ಬೆಂಬಲಿಸುವ ಜನರು-ಸಂಘ ಸಂಸ್ಥೆಗಳಿಂದ ಈ ಸಾಮಗ್ರಿಗಳು ನದಿಯಂತೆ ಹರಿದುಬರತೊಡಗಿವೆ. ರೈತರು ಬೀಡುಬಿಟ್ಟಿರುವ ದೆಹಲಿ ಹೊರವಲಯದ ಯಾವುದೇ ಗಡಿ ಭಾಗಗಳಿಗೆ ಹೋದರೂ ಅಲ್ಲಿ ಹತ್ತು ಹಲವೆಡೆ ವ್ಯವಸ್ಥಿತ ಅನ್ನ ಸಂತರ್ಪಣೆಗಳನ್ನು ಕಾಣಬಲ್ಲಿರಿ. ಅಲ್ಲಿ ಯಾರು ಬಂದರೂ ಕಡೆಗೆ ತಮ್ಮ ವೈರಿ ಬಂದರೂ ಕೈ ಹಿಡಿದು ಪ್ರೀತಿಯಿಂದ ಕುಳ್ಳಿರಿಸಿ ಊಟ ಮಾಡಿಸಿ ಕಳಿಸುತ್ತಾರೆ ರೈತರು.

ಪಂಜಾಬ್ ಮತ್ತು ಹರಿಯಾಣದ ರೈತರು ದೇಶದ ಇತರೆ ಭಾಗಗಳ ತಮ್ಮ ಸೋದರರಿಗಿಂತ ಹೆಚ್ಚು ಅನುಕೂಲವಂತರು. ದೇಶದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವವರು. ಹಸಿರು ಕ್ರಾಂತಿಯ ಮುಂಚೂಣಿಯಲ್ಲಿದ್ದವರು. ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯ ಪ್ರಕಾರ ಗರಿಷ್ಠ ಪ್ರಮಾಣದ ಆಹಾರ ಧಾನ್ಯಗಳ ಖರೀದಿ ನಡೆಯುವುದು ಈ ರಾಜ್ಯಗಳಲ್ಲಿಯೇ. ಹೀಗಾಗಿ ಈ ರಾಜ್ಯಗಳ ರೈತರು ಬಹಳ ವರ್ಷಗಳಿಂದಲೂ ಕನಿಷ್ಠ ಬೆಂಬಲ ಬೆಲೆಯ ಗರಿಷ್ಠ ಫಲಾನುಭವಿಗಳು. ಪಂಜಾಬಿನಲ್ಲಿ ಬೆಳೆಯಲಾಗುವ ಶೇ.85ಕ್ಕಿಂತ ಹೆಚ್ಚು ಭತ್ತ-ಗೋಧಿ ಮತ್ತು ಹರಿಯಾಣದಲ್ಲಿ ಬೆಳೆಯುವ ಶೇ.75ರಷ್ಟು ಗೋಧಿ- ಭತ್ತವನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಬೆಂಬಲ ಬೆಲೆ ಇಲ್ಲದೆ ಹೋದರೆ ದರಗಳು ಕುಸಿಯಲಿವೆ. ರಾಜ್ಯ ಸರ್ಕಾರಗಳೂ, ಕೃಷಿ ಮಾರುಕಟ್ಟೆ ಜಾಲವನ್ನೂ ಮತ್ತು ಅವುಗಳ ವ್ಯವಸ್ಥೆಯನ್ನೂ ಬಲಪಡಿಸಿವೆ. ಧಾನ್ಯ ಸಾಗಾಟಕ್ಕೆ ಬಹುತೇಕ ಗ್ರಾಮಗಳಿಂದ ಈ ಮಾರುಕಟ್ಟೆಗಳಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ರೈತರಿಗೆ ಅಳಿವು ಉಳಿವಿನ ಪ್ರಶ್ನೆಯಿದು. ಬೆಂಬಲ ಬೆಲೆಯ ರಕ್ಷಣೆಗಾಗಿ ಉಳಿದ ಯಾವುದೇ ರಾಜ್ಯದ ರೈತರಿಗಿಂತ ಮಿಗಿಲಾಗಿ ಕತ್ತಿ ಹಿಡಿದು ನಿಂತಿದ್ದಾರೆ.

PC : Twitter, (ಸರ್ದಾರ್ ಅಜಿತ್ ಸಿಂಗ್)

ತಾವು ಎದುರು ಹಾಕಿಕೊಂಡಿರುವುದು ಪಂಜಾಬಿಗಳನ್ನು, ಅದರಲ್ಲಿಯೂ ಸಿಖ್ಖರನ್ನು ಎಂಬ ಪರಿವೆ ಮೋದಿ-ಶಾ ಜೋಡಿಗೆ ಇದ್ದಂತಿಲ್ಲ. ಪ್ರತಿರೋಧ ಮತ್ತು ತಿರುಗೇಟು ಸಿಖ್ ಸಮುದಾಯದ ರಕ್ತಗತ ಗುಣ. ಜಾಟ್ ಸಿಖ್ಖರೆಂಬ ಸಿಖ್ ರೈತರು ಆಂದೋಲನಪ್ರಿಯರು. 20ನೆಯ ಶತಮಾನದ ಆರಂಭದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ’ಪಗಡಿ ಸಂಭಾಲ್ ಜಟ್ಟಾ’ ಎಂಬ ಹೆಸರಿನ ರೈತ ಆಂದೋಲನವನ್ನು ಸಿಡಿಸಿದವರು ಸರ್ದಾರ್ ಅಜಿತ್ ಸಿಂಗ್. ಬ್ರಿಟಿಷ್ ಸರ್ಕಾರ ಅಜಿತ್ ಸಿಂಗ್ ಅವರಿಗೆ 40 ವರ್ಷಗಳ ಕಾಲ ದೇಶ ತೊರೆಯಬೇಕೆಂಬ ಶಿಕ್ಷೆ ವಿಧಿಸಿತ್ತು. ಅವರು ಹುತಾತ್ಮ ಭಗತ್ ಸಿಂಗ್ ಅವರ ಚಿಕ್ಕಪ್ಪ. ’ಪಗಡಿ ಸಂಭಾಲ್ ಜಟ್ಟಾ’ ಘೋಷಣೆಯನ್ನು ಭಗತ್ ಸಿಂಗ್ ತಮ್ಮ ಕ್ರಾಂತಿಗೀತೆಯನ್ನಾಗಿ ಬಳಸಿಕೊಂಡಿದ್ದರು. ಈಗ ಅವರನ್ನು ಒಲಿಸಿಕೊಳ್ಳುವ ದಾರಿಯನ್ನು ಬಿಟ್ಟು ಬಲವಂತ ಹೇರಿಕೆಯ ದಾರಿ ಫಲ ನೀಡುವುದಿಲ್ಲ.

ಹಿಂದು-ಮುಸ್ಲಿಮ್ ದ್ರುವೀಕರಣ ಪಂಜಾಬಿನಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಮುಸ್ಲಿಮರ ಸಂಖ್ಯೆ ತೀರಾ ನಗಣ್ಯ. ಸಿಖ್ಖರು ಮತ್ತು ಹಿಂದೂಗಳನ್ನು ಪರಸ್ಪರರ ವಿರುದ್ಧ ಹೂಡುವುದು ಅಪಾಯಕಾರಿ ಆಟವಾದೀತು. ಅಕಾಲಿದಳದಂತಹ ಸಿಖ್ ರಾಜಕೀಯ ಪಕ್ಷವನ್ನು ಜೊತೆಗಿಟ್ಟುಕೊಂಡೂ ಸಿಖ್ಖರನ್ನು ಒಲಿಸಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗಿಲ್ಲ. 2014 ಮತ್ತು 2019ರ ಎರಡೂ ಚುನಾವಣೆಗಳಲ್ಲಿ ಮೋದಿ ಮಂತ್ರ ಪಂಜಾಬಿನಲ್ಲಿ ಫಲಿಸಿಲ್ಲ.

ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿಗಳು, ಪಾಕಿಸ್ತಾನಿಗಳು, ಬಿರಿಯಾನಿ ಬಯಸುವವರು, ದೇಶದ್ರೋಹಿಗಳು ಎಂದೆಲ್ಲ ಜರಿದು, ಅವರ ಹೆಸರಿಗೆ ಮಸಿ ಬಳಿಯುವ ನೀಚ ಪ್ರಯತ್ನಗಳು ನಡೆದಿವೆ. ’ಮೋದಿ-ಗೋದಿ ಮೀಡಿಯಾ’ (ಜನತೆಗೆ ನಿಷ್ಠರಾಗಿರದೆ ಆಳುವವರ ಮಡಿಲಲ್ಲಿ ಆಡುವ ಮುದ್ದಿನ ಮೀಡಿಯಾ) ಇಂತಹ ಪ್ರಯತ್ನಗಳಿಗೆ ಗಾಳಿ ಹೊಡೆದು ಹಿಗ್ಗಿಸಿ ತೋರಿಸತೊಡಗಿರುವುದು ಕೀಳು ಕೃತ್ಯ.

ನೋಟು ರದ್ದಿನಂತಹ ವಿನಾಶಕಾರಿ ಕ್ರಮ ಮತ್ತು ಲಾಕ್ ಡೌನ್- ಶ್ರಮಿಕರ ಮಹಾವಲಸೆಯಂತಹ ಭಾರೀ ಬಿಕ್ಕಟ್ಟುಗಳನ್ನೇ ಜೀರ್ಣಿಸಿಕೊಂಡಿರುವ ಅಹಂಕಾರದ ಅಮಲು ಮೋದಿ-ಶಾ ಬಿಜೆಪಿಯ ತಲೆಯಿಂದ ಇನ್ನೂ ಇಳಿದಂತಿಲ್ಲ. ಹೀಗಾಗಿಯೇ ರೈತರ ಪ್ರತಿಭಟನೆಯನ್ನೂ ಜೀರ್ಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಂತಿದೆ.

ಆದರೆ ವರ್ತಮಾನ ಮಗ್ಗುಲು ತಿರುಗುವುದೇ ಇಲ್ಲ, ಗಾಲಿ ಉರುಳುವುದೇ ಇಲ್ಲ ಎಂದು ನಂಬಿ ನಡೆದುಕೊಳ್ಳುವುದು ಅವಿವೇಕವಾದೀತು.


ಇದನ್ನೂ ಓದಿ: ಭಾರತದ ರೈತರ ಬೆಂಬಲಕ್ಕೆ ನಿಂತ ಸಿಖ್-ಅಮೆರಿಕನ್ನರಿಂದ ಪ್ರತಿಭಟನಾ ರ್‍ಯಾಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....