Homeಮುಖಪುಟರೈತ ಹೋರಾಟ: ಸಿಂಘು ಗಡಿಯಲ್ಲೀಗ ರೈತಾಪಿ ಮಹಿಳೆಯರ ದಂಡು

ರೈತ ಹೋರಾಟ: ಸಿಂಘು ಗಡಿಯಲ್ಲೀಗ ರೈತಾಪಿ ಮಹಿಳೆಯರ ದಂಡು

ಕಳೆದ 3 ದಿನಗಳಿಂದ ಸಾವಿರಾರು ರೈತಾಪಿ ಮಹಿಳೆಯರು ಸಿಂಘು ರೈತ ಪ್ರತಿಭಟನೆಗೆ ಸೇರಿಕೊಂಡು ಹೊಸ ಸಂಚಲನ ಮೂಡಿಸಿದ್ದಾರೆ. ಅತ್ತ ಗಾಜಿಪುರ ಗಡಿಯಲ್ಲಿ ಯುವಕರ ದೊಡ್ಡ ದಂಡೇ ಜಮಾವಣೆಯಾಗುತ್ತಿದೆ.

- Advertisement -
- Advertisement -

ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಇಲ್ಲಿವರೆಗೂ ಪುರುಷರು ಮುಂಚೂಣಿಯಲ್ಲಿದ್ದರು. ಆದರೆ ತಮ್ಮ ಪ್ರೀತಿಪಾತ್ರರನ್ನು ಬಂಧಿಸಲಾಗುವುದು ಎಂಬ ಆತಂಕ, ಬೆಂಬಲವನ್ನು ತೋರಿಸುವ ದೃಢ ನಿಶ್ಚಯ ಮತ್ತು ಯುಪಿಯ ಗಾಜಿಪುರ ಗಡಿಯಿಂದ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಮನವಿ-ಈ ಮೂರು ಕಾರಣಗಳಿಂದ ಕಳೆದ ಮೂರು ದಿನಗಳಲ್ಲಿ ನೂರಾರು ಮಹಿಳಾ ರೈತರು ಪ್ರತಿಭಟನೆಯನ್ನು ಸೇರಿಕೊಂಡಿದ್ದಾರೆ. ಬಹುಪಾಲು ಮಹಿಳೆಯರಿಗೆ ಇಂಥದ್ದು ಮೊದಲ ಅನುಭವ.

ರವಿವಾರ ಸಿಂಘು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ರೈತಾಪಿ ಮಹಿಳೆಯರ ಗುಂಪೊಂದು ಪ್ರತಿಭಟನಾ ಸ್ಥಳದ ಸುತ್ತಲೂ ಮಿನಿರ‍್ಯಾಲಿಗಳನ್ನು ನಡೆಸಿತು. ಮುಖ್ಯ ವೇದಿಕೆಯ ಬಳಿ ಘೋಷಣೆಗಳನ್ನು ಕೂಗಿದರು. ಸ್ವಯಂಸೇವಕರಿಗೆ ಭದ್ರತೆಯಲ್ಲಿ ಸಹಾಯ ಮಾಡುವಾಗ ತಾವೇ ಕೈಗೆ ಲಾಠಿಗಳನ್ನು ತೆಗೆದುಕೊಂಡರು. ಊಟದ ಮನೆಯಲ್ಲಿ ಕುಳಿತು ತಮ್ಮ ಆತಂಕಗಳನ್ನು ಚರ್ಚಿಸಿದರು.

ಹಲವಾರು ಮಹಿಳಾ ಪ್ರತಿಭಟನಾಕಾರರು ಸಿಂಘು ತಲುಪಲು ತಾವು 10 ಕಿ.ಮೀ.ವರೆಗೆ ನಡೆಯಬೇಕಾಯಿತು ಎಂದು ಹೇಳಿದರು. ಚಳುವಳಿಯಲ್ಲಿ ಸೇರಲು ಹೊಲಗಳನ್ನು ಬಿಟ್ಟು ಬಂದಿದ್ದೇವೆ ಎಂದು ಕೆಲವರು ತಿಳಿಸಿದರು.

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧದ ಆಂದೋಲನ ಮುಂದುವರಿಯುತ್ತದೆ ಎಂದು ಘೋಷಿಸುತ್ತ ಟಿಕಾಯತ್ ಅಳುವ ವೀಡಿಯೊವನ್ನು ನೋಡಿದ ನಂತರ ನಾನು ಮತ್ತು ನನ್ನ ಸ್ನೇಹಿತರು ಶನಿವಾರ ಸಿಂಘುಗೆ ಬಂದಿದ್ದೇವೆ ಎಂದು ಪಂಜಾಬ್‌ನ ಸಂಗ್ರೂರ್‌ನ ಕೃಷಿ ಕಾರ್ಮಿಕರಾದ ಬಬ್ಲಿ (40) ಹೇಳಿದ್ದಾರೆ.

“ಪೊಲೀಸರು ನಮ್ಮನ್ನು ಪ್ರಾಣಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ನನ್ನ ಪತಿ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಮೆರವಣಿಗೆಯ ಭಾಗವಾಗಿದ್ದರು. ಸಿಂಘು ಗಡಿಯ ಹೊರಗೆ ಪೊಲೀಸರು ನನ್ನ ಪತಿಯನ್ನು ಥಳಿಸಿದರು. ಅವರು ದೆಹಲಿಗೆ ಹೋಗಲಾಗಲಿಲ್ಲ. ಅವರು ಧ್ವಜವನ್ನು ಹಾರಿಸಿದ ಗುಂಪಿನ ಭಾಗವಾಗಿರಲಿಲ್ಲ” ಎಂದು ಬಬ್ಲಿ ತಿಳಿಸಿದರು.

‘ಗಾಜಿಪುರದಲ್ಲಿ ಪೊಲೀಸರು ಟಿಕಾಯತ್ ಅವರಿಗೆ ಕಿರುಕುಳ ನೀಡಿದರು. ನಮಗೆ ಅವಮಾನವಾಗಿದೆ. ನಮ್ಮನ್ನು ಗುರಿಯಾಗಿಸಲಾಗಿದೆ. ನಾನು ನನ್ನ ಸ್ನೇಹಿತರೊಂದಿಗೆ ಇಲ್ಲಿಯೇ ಇರುತ್ತೇನೆ. ನನ್ನ ತಾಯಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ನಾವು ಪ್ರತಿಭಟನಾಕಾರರಿಗೆ ಅಡುಗೆ ಸಿದ್ಧ ಮಾಡಿ ಕೊಡುತ್ತಲೇ ಪ್ರತಿಭಟನೆಯಲ್ಲಿ ಹಾಜರಾಗುತ್ತೇವೆ ಎಂದು ಬಬ್ಲಿ ಮತ್ತು ಗೆಳತಿಯರು ತಿಳಿಸಿದರು.

ಪಟಿಯಾಲ ಮೂಲದ ರೈತ ಮಹಿಳೆ ದಲ್ಬೀರ್ ಕೌರ್ (47) ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಶನಿವಾರ ಸಂಜೆ ಸಿಂಘು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದಾರೆ. ‘ಬಿಕೆಯುನ ರೈತ ಮುಖಂಡರು ಮತ್ತು ಇತರ ಒಕ್ಕೂಟಗಳ ಮುಖಂಡರ ಭಾಷಣಗಳನ್ನು ಕೇಳಿದ ನಂತರ ಸಿಂಘುಗೆ ಬಂದೆವು. ನನ್ನ ಪತಿ ಸುಮಾರು ಎರಡು ತಿಂಗಳಿಂದ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎನ್ನುತ್ತಾರೆ ದಲ್ಬೀರ್ ಕೌರ್.

‘ನಮ್ಮದು ಕಬ್ಬಿನ ಗದ್ದೆ ಇದೆ ಮತ್ತು ತರಕಾರಿಗಳನ್ನು ಸಹ ಬೆಳೆಯುತ್ತೇವೆ. ನಿನ್ನೆ, ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬಂದೆ. ಭಿತ್ತಿಪತ್ರಗಳನ್ನು ಹಿಡಿದು ವೇದಿಕೆಯ ಬಳಿ ಮೆರವಣಿಗೆ ನಡೆಸಿದೆವು. ನಾನು ನಾಳೆ ಹೊರಡಬೇಕಾಗುತ್ತದೆ, ಆದರೆ ನನ್ನನ್ನು ಲೆಕ್ಕಿಸಬೇಡಿ. ಈ ಆಂದೋಲನಕ್ಕಾಗಿ ನನ್ನ ಪ್ರಾಣ ತ್ಯಾಗ ಮಾಡಲು ನಾನು ಸಿದ್ಧ. ಪೊಲೀಸರು ಮತ್ತು ಸರ್ಕಾರವು ನಮಗೆ ಕಿರುಕುಳ ನೀಡಬಹುದು, ಆದರೆ ನಾವು ಜಯ ಸಿಗುವವರೆಗೂ ವಿಶ್ರಮಿಸುವುದಿಲ್ಲ”ಎಂದು ದಲ್ಬೀರ್ ಹೇಳಿದರು.

ದಲ್ಬೀರ್ ಕೌರ್ ಮತ್ತು 8-10 ಮಹಿಳೆಯರ ಗುಂಪು ಪೊಲೀಸ್ ದೌರ್ಜನ್ಯ ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗಿತು.

ಗಣರಾಜ್ಯೋತ್ಸವದ ಘರ್ಷಣೆಯಲ್ಲಿ ಗಾಯಗೊಂಡ ರೈತರಿಗೆ ಸಹಾಯ ಮಾಡಲು ತಾನು ಬಂದಿದ್ದೇನೆ ಎಂದು ಮತ್ತೊಬ್ಬ ರೈತ ಮಹಿಳೆ ಮಂದೀಪ್ (50) ಹೇಳಿದ್ದಾರೆ. “ನಾನು ಎರಡು ಪಾತ್ರೆಗಳು ಮತ್ತು ಒಣ ಹಣ್ಣುಗಳನ್ನು ಖರೀದಿಸಿದ್ದೇನೆ. ಕಪುರ್ಥಾಲಾದ ನನ್ನ ಅನೇಕ ರೈತ ಸಹೋದರರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದಾಗ ನನಗೆ ಆಘಾತವಾಯಿತು. ನಾವಿಬ್ಬರೂ ರೈತರಿಗೆ ಸಹಾಯ ಮಾಡಲು ಬಯಸಿದ್ದರಿಂದ ನಾನು ನನ್ನ ಗಂಡನೊಂದಿಗೆ ಬಂದಿದ್ದೇನೆ. ನಾವು ಟಿಕಾಯತ್‌ಜಿ ಅವರನ್ನು ಗೌರವಿಸುತ್ತೇವೆ. ಹೊಸ ಕಾನೂನುಗಳನ್ನು ರದ್ದುಗೊಳಿಸುವವರೆಗೆ ಇಲ್ಲಿ ಪ್ರತಿಭಟಿಸುತ್ತೇವೆ. ಪೊಲೀಸರು ಪ್ರಕರಣಗಳನ್ನು ದಾಖಲಿಸಬಹುದು ಮತ್ತು ನಮ್ಮನ್ನು ಭಯೋತ್ಪಾದಕರು ಎಂದು ಕರೆಯಬಹುದು. ನಾವು ಅವರೊಂದಿಗೆ ಹೋರಾಡುತ್ತೇವೆ. ನಾವು ಬಿಡುವುದಿಲ್ಲ” ಎಂದು ಅವರು ಹೇಳಿದರು.


ಇದನ್ನೂ ಓದಿ; ಮಥುರಾ, ಬಾಗ್‌ಪತ್‌ನಲ್ಲಿ ಬೃಹತ್ ಮಹಾಪಂಚಾಯತ್‌: ಬಿಜೆಪಿಗೆ ಸಾಮಾಜಿಕ ಬಹಿಷ್ಕಾರ ನಿರ್ಣಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...