ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನಿನ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ ಎಂಟನೆ ದಿನಕ್ಕೆ ಕಾಲಿಟ್ಟಿದೆ. ತಮ್ಮನ್ನು ದೆಹಲಿಗೆ ಪ್ರವೇಶಿಸಲು ಬಿಡದ ಕೇಂದ್ರ ಸರ್ಕಾರದ ವಿರುದ್ದ ತೊಡೆ ತಟ್ಟಿರುವ ರೈತರು ದೆಹಲಿಯ ಪ್ರಮುಖ ಗಡಿಯಲ್ಲಿ ಜಮಾಯಿಸಿ ಇದೀಗ ಗಡಿಗಳನ್ನೇ ನಿರ್ಬಂಧಿಸಿದ್ದಾರೆ.
ಇದೀಗ ಕೇಂದ್ರ ಸರ್ಕಾರದ ಪ್ರೊಪಗಾಂಡಾಕ್ಕೆ ಮಣಿದು ತಮ್ಮ ಪ್ರತಿಭಟನೆಯ ವಿಶ್ವಾಸಾರ್ಹತೆಯನ್ನು ಕುಂದಿಸಲು ಪ್ರಯತ್ನಿಸುತ್ತಿರುವ ಮಾಧ್ಯಮ ಸಂಸ್ಥೆಗಳ ವಿರುದ್ದ ಕೂಡಾ ರೈತರು ತಿರುಗಿ ಬಿದ್ದಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಆಂದೋಲನವನ್ನು ದೂಷಿಸುವ ಚಾನೆಲ್ಗಳನ್ನು ಚಳುವಳಿಗಳಲ್ಲಿ ಒಳಗೊಳ್ಳಲು ಅನುಮತಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ರೈತರು ಮಾಧ್ಯಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಕೂಡ ಹೊರಬಿದ್ದಿದೆ.
ಇದನ್ನೂ ಓದಿ: ಸುಪ್ರೀಂ ಹೊರಗೆ ಪ್ರತಿಭಟನೆ: ರೈತರ ಹೋರಾಟಕ್ಕೆ ಸಾಥ್ ನೀಡಿದ ದೆಹಲಿ ವಕೀಲರು!
ರೈತರು ಪ್ರದರ್ಶಿಸುತ್ತಿರುವ ಪ್ಲಕಾರ್ಡ್ಗಳಲ್ಲಿ ಝೀ ನ್ಯೂಸ್, ರಿಪಬ್ಲಿಕ್ ಟಿವಿ ಮತ್ತು ಆಜ್ತಕ್ ಹೆಸರುಗಳ ಜೊತೆಗೆ ‘ಗೋದಿ ಮೀಡಿಯಾ’ ಎಂದು ಬರೆದು ಬರೆಯಲಾಗಿದೆ. ಅಲ್ಲದೆ, ಈ ಚಾನೆಲ್ಗಳು ಆಂದೋಲನವನ್ನು ಒಳಗೊಳ್ಳದಂತೆ ಹೇಳಿದ್ದು, ಇದು ನಕಲಿ ಮಾಧ್ಯಮ ಎಂದು ಹೇಳಿದೆ. ಈ ಮೂರು ಚಾನೆಲ್ಗಳು ತಮ್ಮ ಚಳವಳಿಯನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿವೆ ಎಂದು ರೈತನೊಬ್ಬರು ವೀಡಿಯೊದಲ್ಲಿ ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ: ನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ