Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಉರಿವ ಧರೆ ಮತ್ತು ಸುರಿವ ಮಳೆ

ಉರಿವ ಧರೆ ಮತ್ತು ಸುರಿವ ಮಳೆ

- Advertisement -
- Advertisement -

ಉರಿವ ಧರೆ ಮತ್ತು ಸುರಿವ ಮಳೆ
ಈ ಇಳೆ ಈ ಮಳೆ
ಮುಂದೊಂದು ಭರಣಿಗೆ ಉರಿವ ಈ ಧರೆಗೆ
ಭೋರ್ಗರೆದು ಮಳೆಯು ಸುರಿಯುವುದು
ಆ ನಾಳೆಯು ಬಂದೇ ಬರುವುದು
ಉರಿವ ಧರೆಯಲ್ಲಿ ಬದುಕಿರುವ ಎಲ್ಲರೂ ಮುಂದೊಂದು ಭರಣಿಯಲ್ಲಿ ಸುರಿವ ಮಳೆಯ ಮೇಲೆ ವಿಶ್ವಾಸವಿಟ್ಟು ಜೀವ ಹಿಡಿದಿಟ್ಟುಕೊಳ್ಳಿ ಎಂದು ಜನಾರ್ಧನ್ ಕೆಸರಗದ್ದೆ ಬರೆದಿದ್ದಾರೆ. ಉರಿವ ಧರೆಯು ಈ ಭೂಮಿ ಮಾತ್ರವಲ್ಲ; ಈ ಪದ್ಯದ ನಂತರದ ಸಾಲುಗಳೂ ಸಹಾ ನಿಸರ್ಗದ ಹಲವು ಪಕ್ಷಿ, ನದಿಗಳು, ಸೂರ್ಯ ಕಿರಣಗಳು, ಚಿಗುರಬೇಕಾದ ಬೀಜ ಮಾತ್ರವಲ್ಲದೇ ಕುರಿತೇ ಮಾತನಾಡುತ್ತವೆ. ಆದರೂ, ಕಡು ಕಷ್ಟಕಾಲದಲ್ಲಿ ಬದುಕುತ್ತಿರುವ ಎಲ್ಲರನ್ನೂ ಉದ್ದೇಶಿಸಿ ಕವಿ ಹಾಡುತ್ತಿದ್ದಾರೆಂದು, ಕಷ್ಟಕಾಲದಲ್ಲಿರುವ ಎಲ್ಲರಿಗೂ ಗೊತ್ತಾಗುತ್ತದೆ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಮಳೆಯೇ ರೂಪಕವಾಗುವುದು ಏಕೆ? ಉರಿ, ಸುಡು ಬಿಸಿಲು, ಧಗೆ ಇವನ್ನೇ ಸಂಕಷ್ಟಗಳಿಗೆ ರೂಪಕವಾಗಿ ಬಳಸುವುದರಿಂದ. ಹಾಗಾದರೆ ‘ತಣ್ಣನೆಯ ಕ್ರೌರ್ಯ’, ‘ಒಂದೇ ಸಾರಿಗೆ ನನ್ನಿಡೀ ದೇಹ ಮರಗಟ್ಟಿ ಹೋಯಿತು; ಮೈಯ್ಯೆಲ್ಲಾ ತಣ್ಣಗಾಗುತ್ತಿರುವುದರ ಅನುಭವವಾಯಿತು’ ಎಂದು ಹೇಳುವಾಗ ಕಾಣುವ ತಣ್ಣನೆಯ ಅಂಶ ಏನು? ಬಹುಶಃ ಇನ್ನೇನೂ ಮಾಡಲು ಸಾಧ್ಯವಾಗದೇ, ಕುಸಿದೇ ಹೋಗುವುದು ಅಥವಾ ಸಾವಿಗೆ ಹತ್ತಿರ ಹೋಗುವ ಸಂದರ್ಭವನ್ನು ವಿವರಿಸಲು ಮಾತ್ರ ಈ ತಣ್ಣನೆ ಪದ ಬಳಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೆಚ್ಚನೆಯ ಅಪ್ಪುಗೆ, ಹಿತವಾದ ಕಾವಿನ ಮೂಲಕ ಮೇಲೆತ್ತಬೇಕಾಗಬಹುದು.
ಆದರೆ ಬಿಸಿ ಹಾಗಲ್ಲ. ಅಲ್ಲಿ ಇನ್ನೂ ಜೀವ ಚೈತನ್ಯವಿದೆ. ಅದಕ್ಕೂ ಹೊರಗಿನ ತಂಪು ಬೇಕು. ಅದು ಸಿಗುತ್ತದೆಂಬ ಭರವಸೆಯೂ ಸಾಕು. ಅಂತಹ ಭರವಸೆಯನ್ನೇ ಜನಾರ್ಧನ್ ಹುಟ್ಟಿಸಲು ಯತ್ನಿಸಿದ್ದಾರೆ. ಕೆಲವು ಯುವಕ ಯುವತಿಯರು ಮೈದುಂಬಿ ಈ ಸಾಲುಗಳನ್ನು ಹಾಡಿದಾಗ ಕೇಳಲು ಚೆಂದ; ನಮ್ಮೊಳಗೂ ಭರವಸೆ ಹುಟ್ಟಿಯೇ ಹುಟ್ಟುತ್ತದೆ, ಚಣಕಾಲವಾದರೂ. ಲಗಾನ್ ಹಿಂದಿ ಸಿನೆಮಾದ ಮೊದ ಮೊದಲ ಭಾಗ ನೋಡಿದರೆ, ಕ್ಷೀಣ ಆಸೆಯೊಂದಿಗೆ ಕಾಯುವ ಬರಪೀಡಿತ ಜನರ ಚಿತ್ರಣ ನಮ್ಮ ಮನಮುಟ್ಟುತ್ತದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರವಿತ್ತು. ಕೇಂದ್ರ ಸರ್ಕಾರದ ತಂಡ ಭೇಟಿಗೆ ಬಂದಾಗ, ಕಳೆದ 16 ವರ್ಷಗಳಲ್ಲಿ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು 11 ವರ್ಷಗಳ ಕಾಲ ಬರ ಎದುರಿಸುತ್ತಿತ್ತು ಎಂದು ರಾಜ್ಯ ಸರ್ಕಾರವು ಹೇಳಿತ್ತು. ಇನ್ನುಳಿದ 5 ವರ್ಷಗಳ ಪೈಕಿ ಎರಡು ವರ್ಷ ಪ್ರವಾಹ ಬಂದಿತ್ತು. ಒಂದು ವರ್ಷವಂತೂ ಮನೆ ಮಾರು ಕೊಚ್ಚಿ ಹೋಗಿತ್ತು. ಕೇಂದ್ರ ತಂಡ ಬಂದ ವರ್ಷವೇ ಕರ್ನಾಟಕದಲ್ಲಿ ಬರ ಮತ್ತು ನೆರೆ ಎರಡೂ ಕಂಡಿದ್ದವು.
ಹಿಂದಿನ ವರ್ಷದ ಬರದ ಸಂದರ್ಭದಲ್ಲಿ ಮಲೆನಾಡಿನ ಜನ ಹೇಳಿದ್ದು ‘ಇಂತಹ ಬರ ಮಲೆನಾಡಿಗೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು, ಇನ್ನು ಕಷ್ಟವಿದೆ’. ನಂತರ ಹವಾಮಾನ ತಜ್ಞರ ಅಂಕಿ-ಅಂಶವೂ ಇದನ್ನು ಸಮರ್ಥಿಸಿತ್ತು. ಈ ವರ್ಷ ಇಬ್ಬರೂ ಹೇಳುತ್ತಿದ್ದಾರೆ ‘ಇಂತಹ ಮಳೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು’. ಹಾಗಾದರೆ ಕಳೆದ ವರ್ಷದ ಧಗೆ, ಉರಿ, ಬಾಯಾರಿಕೆಯನ್ನು ಈ ವರ್ಷದ ಮಳೆ ಸರಿದೂಗಿಸಿ ತಂಪು ಮಾಡುತ್ತದೆಯೇ?
ಅಣೆಕಟ್ಟುಗಳಿಂದ ಗೇಟುಗಳನ್ನು ತೆರೆದು ನೀರು ಧುಮ್ಮಿಕ್ಕುತ್ತಿರುವ ಫೋಟೋಗಳನ್ನು ಪತ್ರಿಕಾ ಛಾಯಾಗ್ರಾಹಕರು ವಿವಿಧ ಕೋನಗಳಲ್ಲಿ ತೆಗೆದು ಕಳಿಸುತ್ತಿದ್ದಾರೆ. ಜಲಪಾತಗಳೂ ರುದ್ರರಮಣೀಯವಾಗಿ ಕಾಣುತ್ತಿವೆ. ಎಷ್ಟೋ ಕಡೆ ಹುಡುಗ ಹುಡುಗಿಯರು ಈ ಮಳೆಯಲ್ಲಿ, ಜಲಪಾತದ ಧಾರೆಯಡಿಯಲ್ಲಿ ನೆನೆದು ಫೇಸ್‍ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಕೆಆರ್‍ಎಸ್ ಹಿಡಿದಿಟ್ಟುಕೊಳ್ಳಲಾಗದಷ್ಟು ನೀರು ಬಂದು, ಗೇಟು ತೆಗೆದಾಗ ಪಾಂಡವಪುರದ ಹತ್ತಿರ ಅಂತಹುದೇ ಒಂದು ಫೋಟೋ ತೆಗೆದ ಯುವಕನೊಬ್ಬ ತಮಾಷೆಯ ಅಡಿ ಬರಹ ಕೊಟ್ಟು ಎಲ್ಲೆಡೆ ಷೇರ್ ಮಾಡಿದ್ದ. ‘ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ಅಸಹಾಯಕರಾಗಿ ನೋಡುತ್ತಿರುವ ಎಣ್ಣೆಹೊಳೆ ಕೊಪ್ಪಲಿನ ರೈತಯುವಕರು’. ಇದರಲ್ಲಿ ಅರ್ಧ ನೀರು ಕಳೆದ ವರ್ಷ ಹರಿದಿದ್ದರೆ, ನಿಜಕ್ಕೂ ಮಂಡ್ಯದವರು ಅಸಹಾಯಕರಾಗಿಯೇ ನೋಡುತ್ತಿರುತ್ತಿದ್ದರು. ಆದರೆ, ಈ ಸಾರಿ ಇದು ತಮಾಷೆ.
ದೇವಸ್ಥಾನ, ಮಸೀದಿ ಮತ್ತು ಚರ್ಚು ಮೂರೂ ಮುಳುಗಿರುವ ಫೋಟೋಗಳನ್ನು ಒಟ್ಟಿಗೆ ಷೇರ್ ಮಾಡಿ, ‘ದೇವರೂ ಮುಳುಗಿದ’ ಎಂತಲೋ, ‘ನಿಸರ್ಗ ಸಮಾನತೆ ಕಾಪಾಡಿಕೊಂಡಿದೆ’ ಎಂತಲೋ ಹೇಳುವ ಫೋಟೋಗಳೂ ಕಂಡು ಬಂದವು. ಆದರೆ, ವಾಸ್ತವದಲ್ಲಿ ನಿಸರ್ಗದ ವೈಪರೀತ್ಯಗಳು ಹೆಚ್ಚಾಗಿ ಬಡವರನ್ನೇ ಕಾಡುತ್ತವೆ. ದಕ್ಷಿಣ ಭಾರತದ ಹೆಚ್ಚಿನ ಭಾಗ ಬ್ರಾಹ್ಮಣರ ಜಾಗೀರುಗಳಾಗಿದ್ದವು. ಬ್ರಾಹ್ಮಣರ ಜಮೀನುಗಳು ‘ಸೂಕ್ತವಾದ’ ಜಾಗದಲ್ಲೂ, ಉಳಿದವರ ಜಮೀನುಗಳು ‘ಐoತಿ ಟಥಿiಟಿg’ ಆಗಿಯೂ ಇರುತ್ತವೆ. ಹಾಗೆಯೇ ನಗರಗಳಲ್ಲೂ ಐoತಿ ಟಥಿiಟಿg ಆಗಿರುವ ಜಾಗಗಳಲ್ಲೇ ಸ್ಲಂಗಳು ಹೆಚ್ಚಿರುತ್ತವೆಂದು ಸ್ಲಂ ಕಾಯ್ದೆಯೂ ಸೂಚಿಸುತ್ತದೆ.
ನಗರಗಳು ನಿಜಕ್ಕೂ ಉರಿವ ಧರೆಗಳು. ಈ ವರ್ಷ ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯ ಅರ್ಧದಷ್ಟು ಯಾವುದೇ ಬಯಲುಸೀಮೆಯ ನಗರದ ಮೇಲೆ ಸುರಿದಿದ್ದರೂ, ನಗರಗಳು ಮುಳುಗಿಯೇ ಹೋಗಿರುತ್ತಿದ್ದವು. ಹಿಂದೊಮ್ಮೆ ಬಯಲುಸೀಮೆಯಲ್ಲಿ ಹಲವಾರು ದಿನಗಳ ಕಾಲ ಜಡಿಮಳೆ ಸುರಿದಾಗ ಕುಸಿದ ಮಣ್ಣಿನ ಮನೆಗಳಿಗೆ ಲೆಕ್ಕವಿಲ್ಲ. ಅದೃಷ್ಟವಶಾತ್ ಈಗ ಮಣ್ಣಿನ ಮನೆಗಳು ಕಡಿಮೆಯಾಗುತ್ತಿವೆ. ಆದರೆ, ಬೀದಿಗೆ ಬೀಳುತ್ತಿರುವ ಕಾಂಕ್ರೀಟ್ ಮಣ್ಣಿನೊಳಗೆ ನೀರಿಂಗದಂತೆ ಮಾಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಈ ನಗರಗಳೆಂಬ ಉರಿವ ಧರೆಯನ್ನು ಯಾವ ಬಗೆಯ ಭರಣಿ ಮಳೆ ಕಾಪಾಡಬಲ್ಲುದು ಎಂಬುದೇ ಪ್ರಶ್ನೆ.
ಮಳೆಯು ಲಕ್ಷಾಂತರ ಜನರ ಬದುಕನ್ನು ಹೈರಾಣಾಗಿಸಿರುವ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಇದೇ ವರ್ಷದಲ್ಲಿ ಕರ್ನಾಟಕದ ಸುಮಾರು ಮೂರನೇ ಒಂದು ಭಾಗವನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಗೆರೆ ಎಳೆದ ರೀತಿಯಲ್ಲಿ ಮಲೆನಾಡು ಮತ್ತು ಕರಾವಳಿಗಳಲ್ಲಿ ಸುರಿಯುತ್ತಿರುವ ಮಳೆಯು ನದಿಗಳು ಮೈ ತುಂಬಿ ಹರಿಯುವಂತೆ ಮಾಡಿದೆ, ಅಣೆಕಟ್ಟುಗಳನ್ನು ಭರ್ತಿ ಮಾಡಿದೆ. ಈ ರೀತಿ ಹೆಚ್ಚಾಗಿ ಮಳೆ ಬಂದಾಗ ಹಿಡಿದಿಟ್ಟುಕೊಳ್ಳಲು ದೊಡ್ಡ ಅಣೆಕಟ್ಟು ಕಟ್ಟುವುದು ಬಿಟ್ಟು ಬೇರೆ ಉಪಾಯಗಳನ್ನು ಹುಡುಕಲು ಸಾಧ್ಯವೇ? ಮಳೆ ಬಾರದಾಗಲೂ ತೇವ ಉಳಿಸಿಕೊಳ್ಳಲು ಸಾಧ್ಯವಿರುವ ನೈಸರ್ಗಿಕ ಕೃಷಿಯ ವಿಧಾನವನ್ನು ಎಲ್ಲೆಡೆ ವ್ಯಾಪಕಗೊಳಿಸಲು ಸಾಧ್ಯವೇ ಎಂಬ ಚಿಂತನೆ ನಡೆಸದಿದ್ದರೆ, ಅತಿವೃಷ್ಟಿ ಅನಾವೃಷ್ಟಿಯ ಸಂಕಟಗಳನ್ನು ಕಡಿಮೆ ಮಾಡಲಾಗದು.
ವಾತಾವರಣವನ್ನು ನಮ್ಮ ಕೈಯ್ಯಲ್ಲಿ ಸಾಧ್ಯವಿರುವಷ್ಟು ನಾರ್ಮಲೈಸ್ ಮಾಡುವುದಕ್ಕೆ ಈಗಲೂ ಕಾಲ ಮಿಂಚಿಲ್ಲ. ಲಾಭಕೋರತನ ಮತ್ತು ತನ್ನಿಷ್ಟ ಹಾಗೂ ಬಯಕೆಗಳೇ ಪ್ರಧಾನ ಎಂದು ಭಾವಿಸುವ ಮನುಷ್ಯರೇ ಇದಕ್ಕೆ ಅಡ್ಡಿಯಾಗಿದ್ದಾರೆ. ಒಂದು ಉದಾಹರಣೆ ಕೊಡಬಹುದಾದರೆ, ಅತ್ಯಂತ ಎತ್ತರದಲ್ಲಿ ಬೆಳೆಯುವ ಟೀ ಸೊಪ್ಪಿನಿಂದಲೇ ಅತ್ಯಂತ ಉತ್ಕøಷ್ಟವಾದ ಟೀ ಮಾಡಬಹುದು. ಆ ಎತ್ತರದಲ್ಲಿ ಟೀ ತೋಟಕ್ಕಿಂತ ಮುಂಚೆ ಏನಿತ್ತು ಎಂಬುದನ್ನು ನೋಡಿದರೆ, ನಿಸರ್ಗದ ಮೇಲೆ ನಾವು ನಡೆಸುತ್ತಿರುವ ದಾಳಿಯ ಅರಿವಾಗುತ್ತದೆ. ಇಂತಹ ದಾಳಿಯು ಮುಂದುವರೆದರೆ, ಈ ಉರಿವ ಧರೆಗೆ ಭರಣಿ ಮಳೆಯೂ ಶಾಪವಾಗಿಯೇ ಒದಗಿ ಬರುತ್ತದೆ.
ಇದಕ್ಕಾಗಿ ರಾಜಕೀಯ ಕಾರ್ಯಕರ್ತರು ಕಾರ್ಪೋರೇಟ್ ಅಭಿವೃದ್ಧಿಯ ಮಾದರಿಯನ್ನು ದೂರುತ್ತಾರೆ. ಮಾಕ್ರ್ಸಿಸ್ಟರು ಬಂಡವಾಳಶಾಹಿಯನ್ನು ದೂರುತ್ತಾರೆ. ತಪ್ಪೇನಿಲ್ಲ; ಸರಿಯೇ. ಜನಸಾಮಾನ್ಯರಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೂ, ಲಾಭಕೋರ ಆರ್ಥಿಕ ವ್ಯವಸ್ಥೆಯಿಂದ ಆಗುತ್ತಿರುವ ಹಾನಿಗೂ ಹೋಲಿಕೆಯೇ ಇಲ್ಲ. ಆದರೂ, ಇದು ಕೇವಲ ಪರಿಸರದ ಉಳಿವಿನ ವಿಚಾರ ಮಾತ್ರ ಅಲ್ಲ. ಇದು ಬದುಕಿನ ಮೌಲ್ಯದ ಪ್ರಶ್ನೆ ಸಹಾ ಆಗಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮೊಳಗೆ ನೋಡಿಕೊಳ್ಳಬೇಕಾದ ಸಮಸ್ಯೆ ಇದು. ಆ ರೀತಿ ಜನಸಾಮಾನ್ಯರಷ್ಟೇ ನೋಡಿಕೊಂಡರೂ ಸಾಕು; ಕೊಳ್ಳುಬÁಕ ಮನೋಭಾವವನ್ನು ತೊಡೆದು ಹಾಕಿ, ಪರಿಸರಕ್ಕೆ ಪೂರಕವಾಗಿ ಬದುಕುತ್ತೇನೆ ಎಂದು ಒಂದು ತಿಂಗಳು ಮನಸ್ಸು ಮಾಡಿದರೆ ಸಾಕು. ಅವರಿವರ ಜೇಬಿಗೆ ಮತ್ತು ಮಾಂಸದ ಕಸುವಿಗೆ ಕನ್ನ ಹಾಕಿ ಹೊಟ್ಟೆ ಹಿಗ್ಗಿಸಿಕೊಳ್ಳುವ ಬಂಡವಾಳದಾರರು ಥರಗುಟ್ಟಿ ಹೋಗುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...