Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಉರಿವ ಧರೆ ಮತ್ತು ಸುರಿವ ಮಳೆ

ಉರಿವ ಧರೆ ಮತ್ತು ಸುರಿವ ಮಳೆ

- Advertisement -
- Advertisement -

ಉರಿವ ಧರೆ ಮತ್ತು ಸುರಿವ ಮಳೆ
ಈ ಇಳೆ ಈ ಮಳೆ
ಮುಂದೊಂದು ಭರಣಿಗೆ ಉರಿವ ಈ ಧರೆಗೆ
ಭೋರ್ಗರೆದು ಮಳೆಯು ಸುರಿಯುವುದು
ಆ ನಾಳೆಯು ಬಂದೇ ಬರುವುದು
ಉರಿವ ಧರೆಯಲ್ಲಿ ಬದುಕಿರುವ ಎಲ್ಲರೂ ಮುಂದೊಂದು ಭರಣಿಯಲ್ಲಿ ಸುರಿವ ಮಳೆಯ ಮೇಲೆ ವಿಶ್ವಾಸವಿಟ್ಟು ಜೀವ ಹಿಡಿದಿಟ್ಟುಕೊಳ್ಳಿ ಎಂದು ಜನಾರ್ಧನ್ ಕೆಸರಗದ್ದೆ ಬರೆದಿದ್ದಾರೆ. ಉರಿವ ಧರೆಯು ಈ ಭೂಮಿ ಮಾತ್ರವಲ್ಲ; ಈ ಪದ್ಯದ ನಂತರದ ಸಾಲುಗಳೂ ಸಹಾ ನಿಸರ್ಗದ ಹಲವು ಪಕ್ಷಿ, ನದಿಗಳು, ಸೂರ್ಯ ಕಿರಣಗಳು, ಚಿಗುರಬೇಕಾದ ಬೀಜ ಮಾತ್ರವಲ್ಲದೇ ಕುರಿತೇ ಮಾತನಾಡುತ್ತವೆ. ಆದರೂ, ಕಡು ಕಷ್ಟಕಾಲದಲ್ಲಿ ಬದುಕುತ್ತಿರುವ ಎಲ್ಲರನ್ನೂ ಉದ್ದೇಶಿಸಿ ಕವಿ ಹಾಡುತ್ತಿದ್ದಾರೆಂದು, ಕಷ್ಟಕಾಲದಲ್ಲಿರುವ ಎಲ್ಲರಿಗೂ ಗೊತ್ತಾಗುತ್ತದೆ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಮಳೆಯೇ ರೂಪಕವಾಗುವುದು ಏಕೆ? ಉರಿ, ಸುಡು ಬಿಸಿಲು, ಧಗೆ ಇವನ್ನೇ ಸಂಕಷ್ಟಗಳಿಗೆ ರೂಪಕವಾಗಿ ಬಳಸುವುದರಿಂದ. ಹಾಗಾದರೆ ‘ತಣ್ಣನೆಯ ಕ್ರೌರ್ಯ’, ‘ಒಂದೇ ಸಾರಿಗೆ ನನ್ನಿಡೀ ದೇಹ ಮರಗಟ್ಟಿ ಹೋಯಿತು; ಮೈಯ್ಯೆಲ್ಲಾ ತಣ್ಣಗಾಗುತ್ತಿರುವುದರ ಅನುಭವವಾಯಿತು’ ಎಂದು ಹೇಳುವಾಗ ಕಾಣುವ ತಣ್ಣನೆಯ ಅಂಶ ಏನು? ಬಹುಶಃ ಇನ್ನೇನೂ ಮಾಡಲು ಸಾಧ್ಯವಾಗದೇ, ಕುಸಿದೇ ಹೋಗುವುದು ಅಥವಾ ಸಾವಿಗೆ ಹತ್ತಿರ ಹೋಗುವ ಸಂದರ್ಭವನ್ನು ವಿವರಿಸಲು ಮಾತ್ರ ಈ ತಣ್ಣನೆ ಪದ ಬಳಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೆಚ್ಚನೆಯ ಅಪ್ಪುಗೆ, ಹಿತವಾದ ಕಾವಿನ ಮೂಲಕ ಮೇಲೆತ್ತಬೇಕಾಗಬಹುದು.
ಆದರೆ ಬಿಸಿ ಹಾಗಲ್ಲ. ಅಲ್ಲಿ ಇನ್ನೂ ಜೀವ ಚೈತನ್ಯವಿದೆ. ಅದಕ್ಕೂ ಹೊರಗಿನ ತಂಪು ಬೇಕು. ಅದು ಸಿಗುತ್ತದೆಂಬ ಭರವಸೆಯೂ ಸಾಕು. ಅಂತಹ ಭರವಸೆಯನ್ನೇ ಜನಾರ್ಧನ್ ಹುಟ್ಟಿಸಲು ಯತ್ನಿಸಿದ್ದಾರೆ. ಕೆಲವು ಯುವಕ ಯುವತಿಯರು ಮೈದುಂಬಿ ಈ ಸಾಲುಗಳನ್ನು ಹಾಡಿದಾಗ ಕೇಳಲು ಚೆಂದ; ನಮ್ಮೊಳಗೂ ಭರವಸೆ ಹುಟ್ಟಿಯೇ ಹುಟ್ಟುತ್ತದೆ, ಚಣಕಾಲವಾದರೂ. ಲಗಾನ್ ಹಿಂದಿ ಸಿನೆಮಾದ ಮೊದ ಮೊದಲ ಭಾಗ ನೋಡಿದರೆ, ಕ್ಷೀಣ ಆಸೆಯೊಂದಿಗೆ ಕಾಯುವ ಬರಪೀಡಿತ ಜನರ ಚಿತ್ರಣ ನಮ್ಮ ಮನಮುಟ್ಟುತ್ತದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರವಿತ್ತು. ಕೇಂದ್ರ ಸರ್ಕಾರದ ತಂಡ ಭೇಟಿಗೆ ಬಂದಾಗ, ಕಳೆದ 16 ವರ್ಷಗಳಲ್ಲಿ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು 11 ವರ್ಷಗಳ ಕಾಲ ಬರ ಎದುರಿಸುತ್ತಿತ್ತು ಎಂದು ರಾಜ್ಯ ಸರ್ಕಾರವು ಹೇಳಿತ್ತು. ಇನ್ನುಳಿದ 5 ವರ್ಷಗಳ ಪೈಕಿ ಎರಡು ವರ್ಷ ಪ್ರವಾಹ ಬಂದಿತ್ತು. ಒಂದು ವರ್ಷವಂತೂ ಮನೆ ಮಾರು ಕೊಚ್ಚಿ ಹೋಗಿತ್ತು. ಕೇಂದ್ರ ತಂಡ ಬಂದ ವರ್ಷವೇ ಕರ್ನಾಟಕದಲ್ಲಿ ಬರ ಮತ್ತು ನೆರೆ ಎರಡೂ ಕಂಡಿದ್ದವು.
ಹಿಂದಿನ ವರ್ಷದ ಬರದ ಸಂದರ್ಭದಲ್ಲಿ ಮಲೆನಾಡಿನ ಜನ ಹೇಳಿದ್ದು ‘ಇಂತಹ ಬರ ಮಲೆನಾಡಿಗೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು, ಇನ್ನು ಕಷ್ಟವಿದೆ’. ನಂತರ ಹವಾಮಾನ ತಜ್ಞರ ಅಂಕಿ-ಅಂಶವೂ ಇದನ್ನು ಸಮರ್ಥಿಸಿತ್ತು. ಈ ವರ್ಷ ಇಬ್ಬರೂ ಹೇಳುತ್ತಿದ್ದಾರೆ ‘ಇಂತಹ ಮಳೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು’. ಹಾಗಾದರೆ ಕಳೆದ ವರ್ಷದ ಧಗೆ, ಉರಿ, ಬಾಯಾರಿಕೆಯನ್ನು ಈ ವರ್ಷದ ಮಳೆ ಸರಿದೂಗಿಸಿ ತಂಪು ಮಾಡುತ್ತದೆಯೇ?
ಅಣೆಕಟ್ಟುಗಳಿಂದ ಗೇಟುಗಳನ್ನು ತೆರೆದು ನೀರು ಧುಮ್ಮಿಕ್ಕುತ್ತಿರುವ ಫೋಟೋಗಳನ್ನು ಪತ್ರಿಕಾ ಛಾಯಾಗ್ರಾಹಕರು ವಿವಿಧ ಕೋನಗಳಲ್ಲಿ ತೆಗೆದು ಕಳಿಸುತ್ತಿದ್ದಾರೆ. ಜಲಪಾತಗಳೂ ರುದ್ರರಮಣೀಯವಾಗಿ ಕಾಣುತ್ತಿವೆ. ಎಷ್ಟೋ ಕಡೆ ಹುಡುಗ ಹುಡುಗಿಯರು ಈ ಮಳೆಯಲ್ಲಿ, ಜಲಪಾತದ ಧಾರೆಯಡಿಯಲ್ಲಿ ನೆನೆದು ಫೇಸ್‍ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಕೆಆರ್‍ಎಸ್ ಹಿಡಿದಿಟ್ಟುಕೊಳ್ಳಲಾಗದಷ್ಟು ನೀರು ಬಂದು, ಗೇಟು ತೆಗೆದಾಗ ಪಾಂಡವಪುರದ ಹತ್ತಿರ ಅಂತಹುದೇ ಒಂದು ಫೋಟೋ ತೆಗೆದ ಯುವಕನೊಬ್ಬ ತಮಾಷೆಯ ಅಡಿ ಬರಹ ಕೊಟ್ಟು ಎಲ್ಲೆಡೆ ಷೇರ್ ಮಾಡಿದ್ದ. ‘ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ಅಸಹಾಯಕರಾಗಿ ನೋಡುತ್ತಿರುವ ಎಣ್ಣೆಹೊಳೆ ಕೊಪ್ಪಲಿನ ರೈತಯುವಕರು’. ಇದರಲ್ಲಿ ಅರ್ಧ ನೀರು ಕಳೆದ ವರ್ಷ ಹರಿದಿದ್ದರೆ, ನಿಜಕ್ಕೂ ಮಂಡ್ಯದವರು ಅಸಹಾಯಕರಾಗಿಯೇ ನೋಡುತ್ತಿರುತ್ತಿದ್ದರು. ಆದರೆ, ಈ ಸಾರಿ ಇದು ತಮಾಷೆ.
ದೇವಸ್ಥಾನ, ಮಸೀದಿ ಮತ್ತು ಚರ್ಚು ಮೂರೂ ಮುಳುಗಿರುವ ಫೋಟೋಗಳನ್ನು ಒಟ್ಟಿಗೆ ಷೇರ್ ಮಾಡಿ, ‘ದೇವರೂ ಮುಳುಗಿದ’ ಎಂತಲೋ, ‘ನಿಸರ್ಗ ಸಮಾನತೆ ಕಾಪಾಡಿಕೊಂಡಿದೆ’ ಎಂತಲೋ ಹೇಳುವ ಫೋಟೋಗಳೂ ಕಂಡು ಬಂದವು. ಆದರೆ, ವಾಸ್ತವದಲ್ಲಿ ನಿಸರ್ಗದ ವೈಪರೀತ್ಯಗಳು ಹೆಚ್ಚಾಗಿ ಬಡವರನ್ನೇ ಕಾಡುತ್ತವೆ. ದಕ್ಷಿಣ ಭಾರತದ ಹೆಚ್ಚಿನ ಭಾಗ ಬ್ರಾಹ್ಮಣರ ಜಾಗೀರುಗಳಾಗಿದ್ದವು. ಬ್ರಾಹ್ಮಣರ ಜಮೀನುಗಳು ‘ಸೂಕ್ತವಾದ’ ಜಾಗದಲ್ಲೂ, ಉಳಿದವರ ಜಮೀನುಗಳು ‘ಐoತಿ ಟಥಿiಟಿg’ ಆಗಿಯೂ ಇರುತ್ತವೆ. ಹಾಗೆಯೇ ನಗರಗಳಲ್ಲೂ ಐoತಿ ಟಥಿiಟಿg ಆಗಿರುವ ಜಾಗಗಳಲ್ಲೇ ಸ್ಲಂಗಳು ಹೆಚ್ಚಿರುತ್ತವೆಂದು ಸ್ಲಂ ಕಾಯ್ದೆಯೂ ಸೂಚಿಸುತ್ತದೆ.
ನಗರಗಳು ನಿಜಕ್ಕೂ ಉರಿವ ಧರೆಗಳು. ಈ ವರ್ಷ ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯ ಅರ್ಧದಷ್ಟು ಯಾವುದೇ ಬಯಲುಸೀಮೆಯ ನಗರದ ಮೇಲೆ ಸುರಿದಿದ್ದರೂ, ನಗರಗಳು ಮುಳುಗಿಯೇ ಹೋಗಿರುತ್ತಿದ್ದವು. ಹಿಂದೊಮ್ಮೆ ಬಯಲುಸೀಮೆಯಲ್ಲಿ ಹಲವಾರು ದಿನಗಳ ಕಾಲ ಜಡಿಮಳೆ ಸುರಿದಾಗ ಕುಸಿದ ಮಣ್ಣಿನ ಮನೆಗಳಿಗೆ ಲೆಕ್ಕವಿಲ್ಲ. ಅದೃಷ್ಟವಶಾತ್ ಈಗ ಮಣ್ಣಿನ ಮನೆಗಳು ಕಡಿಮೆಯಾಗುತ್ತಿವೆ. ಆದರೆ, ಬೀದಿಗೆ ಬೀಳುತ್ತಿರುವ ಕಾಂಕ್ರೀಟ್ ಮಣ್ಣಿನೊಳಗೆ ನೀರಿಂಗದಂತೆ ಮಾಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಈ ನಗರಗಳೆಂಬ ಉರಿವ ಧರೆಯನ್ನು ಯಾವ ಬಗೆಯ ಭರಣಿ ಮಳೆ ಕಾಪಾಡಬಲ್ಲುದು ಎಂಬುದೇ ಪ್ರಶ್ನೆ.
ಮಳೆಯು ಲಕ್ಷಾಂತರ ಜನರ ಬದುಕನ್ನು ಹೈರಾಣಾಗಿಸಿರುವ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಇದೇ ವರ್ಷದಲ್ಲಿ ಕರ್ನಾಟಕದ ಸುಮಾರು ಮೂರನೇ ಒಂದು ಭಾಗವನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಗೆರೆ ಎಳೆದ ರೀತಿಯಲ್ಲಿ ಮಲೆನಾಡು ಮತ್ತು ಕರಾವಳಿಗಳಲ್ಲಿ ಸುರಿಯುತ್ತಿರುವ ಮಳೆಯು ನದಿಗಳು ಮೈ ತುಂಬಿ ಹರಿಯುವಂತೆ ಮಾಡಿದೆ, ಅಣೆಕಟ್ಟುಗಳನ್ನು ಭರ್ತಿ ಮಾಡಿದೆ. ಈ ರೀತಿ ಹೆಚ್ಚಾಗಿ ಮಳೆ ಬಂದಾಗ ಹಿಡಿದಿಟ್ಟುಕೊಳ್ಳಲು ದೊಡ್ಡ ಅಣೆಕಟ್ಟು ಕಟ್ಟುವುದು ಬಿಟ್ಟು ಬೇರೆ ಉಪಾಯಗಳನ್ನು ಹುಡುಕಲು ಸಾಧ್ಯವೇ? ಮಳೆ ಬಾರದಾಗಲೂ ತೇವ ಉಳಿಸಿಕೊಳ್ಳಲು ಸಾಧ್ಯವಿರುವ ನೈಸರ್ಗಿಕ ಕೃಷಿಯ ವಿಧಾನವನ್ನು ಎಲ್ಲೆಡೆ ವ್ಯಾಪಕಗೊಳಿಸಲು ಸಾಧ್ಯವೇ ಎಂಬ ಚಿಂತನೆ ನಡೆಸದಿದ್ದರೆ, ಅತಿವೃಷ್ಟಿ ಅನಾವೃಷ್ಟಿಯ ಸಂಕಟಗಳನ್ನು ಕಡಿಮೆ ಮಾಡಲಾಗದು.
ವಾತಾವರಣವನ್ನು ನಮ್ಮ ಕೈಯ್ಯಲ್ಲಿ ಸಾಧ್ಯವಿರುವಷ್ಟು ನಾರ್ಮಲೈಸ್ ಮಾಡುವುದಕ್ಕೆ ಈಗಲೂ ಕಾಲ ಮಿಂಚಿಲ್ಲ. ಲಾಭಕೋರತನ ಮತ್ತು ತನ್ನಿಷ್ಟ ಹಾಗೂ ಬಯಕೆಗಳೇ ಪ್ರಧಾನ ಎಂದು ಭಾವಿಸುವ ಮನುಷ್ಯರೇ ಇದಕ್ಕೆ ಅಡ್ಡಿಯಾಗಿದ್ದಾರೆ. ಒಂದು ಉದಾಹರಣೆ ಕೊಡಬಹುದಾದರೆ, ಅತ್ಯಂತ ಎತ್ತರದಲ್ಲಿ ಬೆಳೆಯುವ ಟೀ ಸೊಪ್ಪಿನಿಂದಲೇ ಅತ್ಯಂತ ಉತ್ಕøಷ್ಟವಾದ ಟೀ ಮಾಡಬಹುದು. ಆ ಎತ್ತರದಲ್ಲಿ ಟೀ ತೋಟಕ್ಕಿಂತ ಮುಂಚೆ ಏನಿತ್ತು ಎಂಬುದನ್ನು ನೋಡಿದರೆ, ನಿಸರ್ಗದ ಮೇಲೆ ನಾವು ನಡೆಸುತ್ತಿರುವ ದಾಳಿಯ ಅರಿವಾಗುತ್ತದೆ. ಇಂತಹ ದಾಳಿಯು ಮುಂದುವರೆದರೆ, ಈ ಉರಿವ ಧರೆಗೆ ಭರಣಿ ಮಳೆಯೂ ಶಾಪವಾಗಿಯೇ ಒದಗಿ ಬರುತ್ತದೆ.
ಇದಕ್ಕಾಗಿ ರಾಜಕೀಯ ಕಾರ್ಯಕರ್ತರು ಕಾರ್ಪೋರೇಟ್ ಅಭಿವೃದ್ಧಿಯ ಮಾದರಿಯನ್ನು ದೂರುತ್ತಾರೆ. ಮಾಕ್ರ್ಸಿಸ್ಟರು ಬಂಡವಾಳಶಾಹಿಯನ್ನು ದೂರುತ್ತಾರೆ. ತಪ್ಪೇನಿಲ್ಲ; ಸರಿಯೇ. ಜನಸಾಮಾನ್ಯರಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೂ, ಲಾಭಕೋರ ಆರ್ಥಿಕ ವ್ಯವಸ್ಥೆಯಿಂದ ಆಗುತ್ತಿರುವ ಹಾನಿಗೂ ಹೋಲಿಕೆಯೇ ಇಲ್ಲ. ಆದರೂ, ಇದು ಕೇವಲ ಪರಿಸರದ ಉಳಿವಿನ ವಿಚಾರ ಮಾತ್ರ ಅಲ್ಲ. ಇದು ಬದುಕಿನ ಮೌಲ್ಯದ ಪ್ರಶ್ನೆ ಸಹಾ ಆಗಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮೊಳಗೆ ನೋಡಿಕೊಳ್ಳಬೇಕಾದ ಸಮಸ್ಯೆ ಇದು. ಆ ರೀತಿ ಜನಸಾಮಾನ್ಯರಷ್ಟೇ ನೋಡಿಕೊಂಡರೂ ಸಾಕು; ಕೊಳ್ಳುಬÁಕ ಮನೋಭಾವವನ್ನು ತೊಡೆದು ಹಾಕಿ, ಪರಿಸರಕ್ಕೆ ಪೂರಕವಾಗಿ ಬದುಕುತ್ತೇನೆ ಎಂದು ಒಂದು ತಿಂಗಳು ಮನಸ್ಸು ಮಾಡಿದರೆ ಸಾಕು. ಅವರಿವರ ಜೇಬಿಗೆ ಮತ್ತು ಮಾಂಸದ ಕಸುವಿಗೆ ಕನ್ನ ಹಾಕಿ ಹೊಟ್ಟೆ ಹಿಗ್ಗಿಸಿಕೊಳ್ಳುವ ಬಂಡವಾಳದಾರರು ಥರಗುಟ್ಟಿ ಹೋಗುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...