ಮಾನವೀಯತೆಯ ಅಸಾಧಾರಣ ಕಾರ್ಯವೊಂದರಲ್ಲಿ 27 ವರ್ಷದ ಮುಸ್ಲಿಂ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ತೀವ್ರ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಹಿಂದೂ ಮಹಿಳೆ ಸಂಗೀತಾ ಘೋಷ್ಗಾಗಿ ರಂಜಾನ್ ಉಪವಾಸ ಆಚರಿಸುವಾಗ ರಕ್ತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕಲ್ಯಾಣಿ ನಗರದ ಜವಾಹರಲಾಲ್ ನೆಹರು ಆಸ್ಪತ್ರೆಯಲ್ಲಿ ನಡೆದ ಈ ಘಟನೆಯು ಕೋಮು ವಿಭಜನೆಗಳು ಆಳವಾಗುತ್ತಿರುವ ಸಮಯದಲ್ಲಿ ಭರವಸೆಯ ಸಂಕೇತವಾಗಿದೆ.
ನಾಡಿಯಾ ಜಿಲ್ಲೆಯ ಮಜ್ದಿಯಾದ ಸಂಗೀತಾ ಘೋಷ್ 8 ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಾರ್ಚ್ 16ರಂದು ಅವರ ಆರೋಗ್ಯವು ಗಂಭೀರ ತಿರುವು ಪಡೆದುಕೊಂಡಿತು ಮತ್ತು ವೈದ್ಯರು ತುರ್ತಾಗಿ ರಕ್ತದಾನ ಮಾಡುವವರು ಬೇಕೆಂದು ಕೋರಿದರು. ಅವರ ಮಗ ಸಂಜು ಘೋಷ್ ಸಹಾಯಕ್ಕಾಗಿ ಸ್ಥಳೀಯ ಸ್ವಯಂಸೇವಕ ಗುಂಪು ತುರ್ತು ರಕ್ತ ಸೇವೆಯನ್ನು ಶೀಘ್ರವೇ ತಲುಪಿದರು. ನಿಯಮಿತ ದಾನಿ ನಸೀಮ್ ಮಲಿತಾ ಹಿಂಜರಿಕೆಯಿಲ್ಲದೆ ಕರೆಗೆ ಉತ್ತರಿಸಿದರು.
ಅವರ ಸ್ಥಿತಿಯ ಬಗ್ಗೆ ಕೇಳಿದಾಗ ನಾನು ಉಪವಾಸ ಮಾಡುತ್ತಿದ್ದೆ. ಆದರೆ ಒಂದು ಜೀವ ಉಳಿಸುವುದು ನನ್ನ ಮೊದಲ ಆದ್ಯತೆಯಾಗಿತ್ತು. ತಕ್ಷಣವೇ ನಾನು ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿದೆ ಎಂದು ನಸೀಮ್ ಹೇಳುತ್ತಾರೆ.
ನಸೀಮ್ಗೆ ಇದು ಒಂದು ದೊಡ್ಡ ಕಾರ್ಯವಾಗಿರಲಿಲ್ಲ. ವರ್ಷಗಳಲ್ಲಿ ಹಲವು ಭಾರೀ ಇತರರಿಗೆ ಸಹಾಯ ಮಾಡುವ ಅವರ ಕಾರ್ಯಗಳಲ್ಲಿ ಇದು ಒಂದು. “ನಾನು ಹಲವು ಬಾರಿ ರಕ್ತದಾನ ಮಾಡಿದ್ದೇನೆ. ಇದು ದೊಡ್ಡ ವಿಷಯವಲ್ಲ; ಇದು ನನ್ನ ಬಯಕೆ” ಎಂದು ನಸೀಮ್ ಹೇಳಿದ್ದಾರೆ.
ಘೋಷ್ ಕುಟುಂಬವು ನಸೀಮ್ ಅವರ ನಿಸ್ವಾರ್ಥತೆಯಿಂದ ಭಾವುಕವಾಯಿತು. “ನಾವು ಹತಾಶರಾಗಿದ್ದೆವು. ರಕ್ತ ಬ್ಯಾಂಕಿನಲ್ಲಿ ಯಾವುದೇ ದಾಸ್ತಾನು ಇರಲಿಲ್ಲ” ಎಂದು ಸಂಜು ಹೇಳಿದರು. “ನಸೀಮ್ ಹಿಂಜರಿಯಲಿಲ್ಲ. ಅವರು ತಕ್ಷಣ ತಮ್ಮ ಸ್ನೇಹಿತರೊಂದಿಗೆ ಬಂದರು. ನನಗೆ ಯಾವುದೇ ಜೀವಗಳನ್ನು ಉಳಿಸುವುದೇ ಒಬ್ಬ ವ್ಯಕ್ತಿಗೆ ಶ್ರೇಷ್ಠ ಧರ್ಮ” ಎಂದು ಸಂಜು ಅಭಿಪ್ರಾಯಿಸಿದ್ದಾರೆ.
ಈ ಕಥೆ ತ್ವರಿತವಾಗಿ ಆನ್ಲೈನ್ನಲ್ಲಿ ಹರಡಿತು. ರಾಜಕಾರಣಿಗಳು ಮತ್ತು ನಾಗರಿಕರಿಂದ ಪ್ರಶಂಸೆ ಗಳಿಸಿತು. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಸರ್ನಾಟೆ ಟ್ವೀಟ್ ಮಾಡಿದ್ದಾರೆ, “ಈ ಧಾರ್ಮಿಕ ದ್ವೇಷದ ವಾತಾವರಣದಲ್ಲಿ ನಸೀಮ್ ಪ್ರೀತಿಯ ಶಕ್ತಿಯನ್ನು ತೋರಿಸಿದ್ದಾರೆ. ಇದು ನಾನು ನಂಬುವ ಭಾರತ.” ಎಂಬ ಸುಪ್ರಿಯಾ ಅವರ ಪ್ರತಿಕ್ರಿಯೆಯಿಂದ ವಿನಮ್ರರಾದ ನಸೀಮ್ ಫೇಸ್ಬುಕ್ನಲ್ಲಿ ಬೆಂಬಲದ ಸಂದೇಶಗಳನ್ನು ಹಂಚಿಕೊಂಡರು, “ಇತರರಿಗೆ ಸಹಾಯ ಮಾಡುವುದು ದೇವರಿಗೆ ಮಾಡುವ ಶ್ರೇಷ್ಠ ಸೇವೆ” ಎಂದು ಬರೆದುಕೊಂಡರು.
ಕಲ್ಯಾಣಿಯಲ್ಲಿ ಈಗ ಕಲಿಯುತ್ತಿರುವ ಮುರ್ಷಿದಾಬಾದ್ ನಿವಾಸಿ ನಸೀಮ್, ತಮ್ಮ ಇಂತಹ ಕೆಲಸವು ಇತರರಿಗೆ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತಿದ್ದಾರೆ. “ಜೀವಗಳು ಅಪಾಯದಲ್ಲಿರುವಾಗ ನಾವು ಅಡೆತಡೆಗಳನ್ನು ಮುರಿಯಬೇಕು” ಎಂದು ಅವರು ಹೇಳಿದ್ದಾರೆ.


