Homeಅಂಕಣಗಳುಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

ಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

- Advertisement -
- Advertisement -

ಜಗತ್ತಿನ ಅತಿ ಬಡರಾಷ್ಟ್ರಗಳಲ್ಲಿ ಸೋಮಾಲಿಯಾ ಒಂದು. ಆಫ್ರಿಕಾ ಖಂಡದ ಪೂರ್ವಭಾಗದಲ್ಲಿ ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಸೋಮಾಲಿಯಾ ಬಡತನ, ಅನಕ್ಷರತೆ, ಅಂತರ್ಯುದ್ಧ ಮತ್ತು ದಂಗೆಗಳಿಂದ ತತ್ತರಿಸಿರುವ ದೇಶ.

ಸೋಮಾಲಿಯಾ ಜನರನ್ನು ಒಗ್ಗೂಡಿಸುವುದು ಅವರ ಧರ್ಮ (ಇಸ್ಲಾಂ) ಮತ್ತು ಭಾಷೆ. ಆದರೆ ತಮ್ಮ ಸಾಂಸ್ಕೃತಿಕ ಒಗ್ಗಟ್ಟಿನ ಬಗ್ಗೆ ಹೆಮ್ಮೆ ಪಡುವ ಸೋಮಾಲಿಗಳು ಅವಕಾಶ ಸಿಕ್ಕಾಗಲೆಲ್ಲಾ ತಮ್ಮವರೇ ಆದ ನೆರೆಯ ಬುಡಕಟ್ಟಿನವರೊಂದಿಗೆ ಕಾಳಗಕ್ಕೆ ಇಳಿಯುವುದೇ ಒಂದು ವೈಚಿತ್ರ್ಯ.

ಶೇ.76ರಷ್ಟು ಸೋಮಾಲಿಗಳು ಇವತ್ತಿಗೂ ಅಲೆಮಾರಿ ಗೊಲ್ಲರು. ತಮ್ಮ ಕುರಿ, ಮೇಕೆ, ಒಂಟೆ ಮತ್ತು ಜಾನುವಾರುಗಳೊಂದಿಗೆ ಅಲೆಮಾರಿ ಜೀವನ ಸಾಗಿಸುವ ಸೋಮಾಲಿಗಳು ಇವತ್ತಿಗೂ ಅವಲಂಬಿಸಿರುವುದು ತಮ್ಮ ಸಾಕುಪ್ರಾಣಿಗಳನ್ನೇ. ಅಷ್ಟೇ ಏಕೆ, ಸೋಮಾಲಿಯಾ ದೇಶದ ಆರ್ಥಿಕತೆ ಕೂಡ ಅವಲಂಬಿತವಾಗಿರುವುದು ತನ್ನ ಅಲೆಮಾರಿ ಜನರ ಜೀವನಾಧಾರಗಳನ್ನೇ. ತನ್ನ ಗೊಲ್ಲರ ಸಾಕುಪ್ರಾಣಿಗಳ ಮಾಂಸ, ಚರ್ಮ ಇತ್ಯಾದಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಲ್ಲಿಯೇ ಸೋಮಾಲಿಯಾ ದೇಶ ತನ್ನ ವಿದೇಶ ವಿನಿಮಯದ ಶೇ.90ರಷ್ಟನ್ನು ಗಳಿಸುತ್ತದೆ. ಸೋಮಾಲಿಯಾದ ಜೀವನೋತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿದ್ದದ್ದು ತನ್ನ ನೆರೆಯಲ್ಲಿರುವ ಸೌದಿ ಅರೇಬಿಯಾಕ್ಕೆ.

ಅಲೆಮಾರಿ ಗೊಲ್ಲರ ಸರಳ ಜೀವನ ಮತ್ತು ಅವರ ಉತ್ಪನ್ನವನ್ನೇ ನಂಬಿದ್ದ ಸೋಮಾಲಿಯಾ ದೇಶ ಸಂಕಷ್ಟದ ದಿನಗಳಿಗೆ ಸಿಲುಕಿದ್ದು 90ರ ದಶಕದಲ್ಲಿ ಅಂತರ್ಯುದ್ಧ ಶುರುವಾದಾಗ. ಆ ಯುದ್ಧದ ಪರಿಣಾಮವಾಗಿ ಮೂರು ಲಕ್ಷ ಜನ ಸಾವನ್ನಪ್ಪಿದರಲ್ಲದೆ, 45 ಲಕ್ಷ ಜನ ಕಾಯಿಲೆ ಹಾಗೂ ಉಪವಾಸದಿಂದ ನರಳಿದರು.

ಈ ದುರಂತದಿಂದ ಸೋಮಾಲಿಯಾ ಚೇತರಿಸಿಕೊಳ್ಳುತ್ತಿರುವಾಗಲೇ, ಸೋಮಾಲಿಯಾದ ಗೊಲ್ಲರ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸುತ್ತಿದ್ದ ಸೌದಿ ಅರೇಬಿಯಾ ಒಂದು ಶಾಕ್ ನೀಡಿತು. ಸೋಮಾಲಿಯಾದ ಪ್ರಾಣಿಗಳು ’ಕಣಿವೆ ಜ್ವರ’ದಿಂದ (Rift valley fever) ಬಳಲುತ್ತಿವೆಯೆಂದು ಅವುಗಳ ರಫ್ತನ್ನು ನಿಷೇಧಿಸಿತು. ಅಷ್ಟೇ ಅಲ್ಲದೆ, ಸೋಮಾಲಿಯಾದ ಪ್ರಾಣಿಗಳಿಗೆ ಬದಲಾಗಿ, ಅಲ್ಲಿನ ಮರಮಟ್ಟುಗಳತ್ತ ಸೌದಿ ಅರೇಬಿಯಾ ಕಣ್ಣುಗಳನ್ನಿಟ್ಟಿತು. ಇದ್ದಲಿನ (ಚಾರ್ಕೋಲ್) ಮುಖ್ಯ ಆಧಾರ ಈ ಮರಗಳು. ಅಷ್ಟು ಹೊತ್ತಿಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸೋಮಾಲಿಗಳು ಕಂಡಕಂಡಲ್ಲಿ ಮರಮಟ್ಟುಗಳನ್ನು ಕೆಡವಲಾರಂಭಿಸಿದ್ದರು. ನಿಧಾನವಾಗಿ ಸೋಮಾಲಿಯಾದ ಅರಣ್ಯಗಳು ನಾಶವಾಗಲಾರಂಭಿಸಿದವು.

ಆಗ, ತನ್ನ ದೇಶದ ಜನರಿಗೆ ಬುದ್ದಿ ಹೇಳಿದವಳು ಫಾತಿಮಾ ಜಿಬ್ರೆಲ್. ಈಕೆ ಸೋಮಾಲಿಯಾದ ಅಲೆಮಾರಿ ಗೊಲ್ಲರ ಕುಟುಂಬವೊಂದರಲ್ಲಿ ಜನಿಸಿದಾಕೆ. ಆದರೆ ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವಳು. ಸಹಸ್ರಾರು ವರ್ಷಗಳಿಂದ ಪರಿಸರವನ್ನೇ ನಂಬಿ ಬದುಕಿದ್ದ ತನ್ನ ಜನ ಹೀಗೆ ಪರಿಸರಕ್ಕೇ ಕೊಡಲಿ ಹಾಕಿದ್ದನ್ನು ಕಂಡ ಫಾತಿಮಾ ತಕ್ಷಣವೇ ಕ್ರಿಯಾಶೀಲವಾದಳು.

ಮರಗಳನ್ನು ಕೆಡವಿದರೆ, ಕಾಡುಗಳನ್ನು ನಾಶಮಾಡಿದರೆ, ಪರಿಸರಕ್ಕೆ ಧಕ್ಕೆ ತಂದರೆ, ಐತಿಹಾಸಿಕವಾಗಿ ಸೋಮಾಲಿಗಳು ನಂಬಿರುವ ಸಾಕುಪ್ರಾಣಿಗಳಿಗೂ ಮತ್ತು ತಮ್ಮ ಅಲೆಮಾರಿ ಜೀವನಶೈಲಿಗೂ ಹಾನಿ ತಂದುಕೊಂಡಂತೆ ಎಂದು ಭಾವಿಸಿದಳು ಫಾತಿಮಾ. “ನಾವು ಅವಲಂಬಿಸಿರುವ ಪರಿಸರವನ್ನು ಒಮ್ಮೆ ನಾಶ ಮಾಡಿದರೆ ಮತ್ತೆ ಲಕ್ಷಾಂತರ ವರ್ಷಗಳಾದರೂ ಅದನ್ನು ಸರಿಪಡಿಸಲಾರೆವು” ಎಂದ ಫಾತಿಮಾ, “ತನಗೆ ಬೇಕಾಗಿರುವ ಇದ್ದಲಿಗಾಗಿ ಸೌದಿ ಅರೇಬಿಯಾ ಸೋಮಾಲಿಯಾಕ್ಕೆ ಮಾಡುತ್ತಿರುವ ಹಾನಿಯನ್ನು ಅರ್ಥೈಸಿಕೊಂಡು ನಮ್ಮ ಬಡದೇಶಕ್ಕೆ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸಲಿ.” ಎಂದು ಘೋಷಿಸಿದಳು.

ಅಂದಿನಿಂದ ಸೋಮಾಲಿಯಾದ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಫಾತಿಮಾ. ಈಗ ಮುದುಕಿಯಾಗಿರುವ ಫಾತಿಮಾ ಚಿಕ್ಕಪುಟ್ಟ ಗ್ರಾಮಗಳಲ್ಲೂ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾಳೆ. ಇನ್ನು ಸೋಮಾಲಿಯಾದಲ್ಲಿ ಕಾಡುಗಳು ಸುರಕ್ಷಿತವಾಗಿದ್ದರೆ, ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆ ಆಗುತ್ತಿದ್ದರೆ ಅದಕ್ಕೆ ಫಾತಿಮಾ ಕಾರಣ. ಆದರೆ ಇದು ಫಾತಿಮಾ ಸುಲಭವಾಗಿ ಗಳಿಸಿದ ಸಾಧನೆಯಲ್ಲ.

ಒಂದು ದಶಕದಿಂದ ಅಂತರ್ಯುದ್ಧವನ್ನು ಎದುರಿಸುತ್ತಿರುವ ಸೋಮಾಲಿಯಾ ಈಗ ಬರಗಾಲದಿಂದ ತತ್ತರಿಸುತ್ತಿದೆ. ಈಗ ಅದು ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಕೂಡ ಆಗಿದೆ. ಈ ಎಲ್ಲದರ ಮಧ್ಯೆ ಫಾತಿಮಾ ಪರಿಸರವನ್ನು ರಕ್ಷಿಸುವುದಕ್ಕಾಗಿ, ಮಹಿಳೆಯರನ್ನು ಒಗ್ಗೂಡಿಸುತ್ತಿರುವುದಕ್ಕಾಗಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ಆದರೂ, ಈ ಎಲ್ಲಾ ತೊಂದರೆಗಳ ನಡುವೆಯೂ ಇತ್ತೀಚೆಗೆ ಸೋಮಾಲಿಯಾದ ಒಂದು ರಾಜ್ಯವಾದ ಪುಂಟ್‌ಲ್ಯಾಂಡ್‌ನಿಂದ ಇದ್ದಿಲು ರಫ್ತನ್ನು ನಿಷೇಧ ಮಾಡುವುದರಲ್ಲಿ ಯಶಸ್ವಿಯಾಗಿದ್ದಾಳೆ.

ತನ್ನ ಜನರ ಜೀವನಶೈಲಿಯನ್ನು ಮತ್ತು ಪರಿಸರವನ್ನು ಸಂರಕ್ಷಿಸುವುದರಲ್ಲಿ ಫಾತಿಮಾಳದ್ದು ಏಕಾಂಗಿ ಹೋರಾಟ. ಕಳೆದ ವಾರ ಈ ದಿಟ್ಟ ಮಹಿಳೆಯ ಕೊಡುಗೆಯನ್ನು ಪರಿಗಣಿಸಿ ಪರಿಸರ ಸಂರಕ್ಷಣೆಗಾಗಿ ’ಗೋಲ್ಡ್ ಮ್ಯಾನ್ ಎನ್‌ವೈರ್ನಮೆಂಟ್ ಪ್ರೈಜ’ನ್ನು ಈಕೆಗೆ ನೀಡಲಾಗಿದೆ. ಈ ಪ್ರಶಸ್ತಿ ಬರುವವರೆಗೂ ಫಾತಿಮಾ ಜಿಬ್ರೆಲ್ ಬಗ್ಗೆ ಸೋಮಾಲಿಯಾ ಹೊರತುಪಡಿಸಿ ಹೊರಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಕಾಳಜಿ ಮತ್ತು ಅರ್ಪಣಾಭಾವ ಇದ್ದರೆ ಯಾರಾದರೂ ತಮ್ಮ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಫಾತಿಮಾ ಜಿಬ್ರೆಲ್ ಒಂದು ಉದಾಹರಣೆ.

(ಇದು ಗೌರಿಯವರ ಕಂಡಹಾಗೆ ಅಂಕಣ ಬರಹವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀಗೆ ಉತ್ತಮ ಬರಹಗಳನ್ನು ಮರು ಪ್ರಕಟಣೆ ಮಾಡುತ್ತಿರಿ. ಧನ್ಯವಾದ. ‌

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....