Homeಅಂಕಣಗಳುಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

ಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

- Advertisement -
- Advertisement -

ಜಗತ್ತಿನ ಅತಿ ಬಡರಾಷ್ಟ್ರಗಳಲ್ಲಿ ಸೋಮಾಲಿಯಾ ಒಂದು. ಆಫ್ರಿಕಾ ಖಂಡದ ಪೂರ್ವಭಾಗದಲ್ಲಿ ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಸೋಮಾಲಿಯಾ ಬಡತನ, ಅನಕ್ಷರತೆ, ಅಂತರ್ಯುದ್ಧ ಮತ್ತು ದಂಗೆಗಳಿಂದ ತತ್ತರಿಸಿರುವ ದೇಶ.

ಸೋಮಾಲಿಯಾ ಜನರನ್ನು ಒಗ್ಗೂಡಿಸುವುದು ಅವರ ಧರ್ಮ (ಇಸ್ಲಾಂ) ಮತ್ತು ಭಾಷೆ. ಆದರೆ ತಮ್ಮ ಸಾಂಸ್ಕೃತಿಕ ಒಗ್ಗಟ್ಟಿನ ಬಗ್ಗೆ ಹೆಮ್ಮೆ ಪಡುವ ಸೋಮಾಲಿಗಳು ಅವಕಾಶ ಸಿಕ್ಕಾಗಲೆಲ್ಲಾ ತಮ್ಮವರೇ ಆದ ನೆರೆಯ ಬುಡಕಟ್ಟಿನವರೊಂದಿಗೆ ಕಾಳಗಕ್ಕೆ ಇಳಿಯುವುದೇ ಒಂದು ವೈಚಿತ್ರ್ಯ.

ಶೇ.76ರಷ್ಟು ಸೋಮಾಲಿಗಳು ಇವತ್ತಿಗೂ ಅಲೆಮಾರಿ ಗೊಲ್ಲರು. ತಮ್ಮ ಕುರಿ, ಮೇಕೆ, ಒಂಟೆ ಮತ್ತು ಜಾನುವಾರುಗಳೊಂದಿಗೆ ಅಲೆಮಾರಿ ಜೀವನ ಸಾಗಿಸುವ ಸೋಮಾಲಿಗಳು ಇವತ್ತಿಗೂ ಅವಲಂಬಿಸಿರುವುದು ತಮ್ಮ ಸಾಕುಪ್ರಾಣಿಗಳನ್ನೇ. ಅಷ್ಟೇ ಏಕೆ, ಸೋಮಾಲಿಯಾ ದೇಶದ ಆರ್ಥಿಕತೆ ಕೂಡ ಅವಲಂಬಿತವಾಗಿರುವುದು ತನ್ನ ಅಲೆಮಾರಿ ಜನರ ಜೀವನಾಧಾರಗಳನ್ನೇ. ತನ್ನ ಗೊಲ್ಲರ ಸಾಕುಪ್ರಾಣಿಗಳ ಮಾಂಸ, ಚರ್ಮ ಇತ್ಯಾದಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಲ್ಲಿಯೇ ಸೋಮಾಲಿಯಾ ದೇಶ ತನ್ನ ವಿದೇಶ ವಿನಿಮಯದ ಶೇ.90ರಷ್ಟನ್ನು ಗಳಿಸುತ್ತದೆ. ಸೋಮಾಲಿಯಾದ ಜೀವನೋತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿದ್ದದ್ದು ತನ್ನ ನೆರೆಯಲ್ಲಿರುವ ಸೌದಿ ಅರೇಬಿಯಾಕ್ಕೆ.

ಅಲೆಮಾರಿ ಗೊಲ್ಲರ ಸರಳ ಜೀವನ ಮತ್ತು ಅವರ ಉತ್ಪನ್ನವನ್ನೇ ನಂಬಿದ್ದ ಸೋಮಾಲಿಯಾ ದೇಶ ಸಂಕಷ್ಟದ ದಿನಗಳಿಗೆ ಸಿಲುಕಿದ್ದು 90ರ ದಶಕದಲ್ಲಿ ಅಂತರ್ಯುದ್ಧ ಶುರುವಾದಾಗ. ಆ ಯುದ್ಧದ ಪರಿಣಾಮವಾಗಿ ಮೂರು ಲಕ್ಷ ಜನ ಸಾವನ್ನಪ್ಪಿದರಲ್ಲದೆ, 45 ಲಕ್ಷ ಜನ ಕಾಯಿಲೆ ಹಾಗೂ ಉಪವಾಸದಿಂದ ನರಳಿದರು.

ಈ ದುರಂತದಿಂದ ಸೋಮಾಲಿಯಾ ಚೇತರಿಸಿಕೊಳ್ಳುತ್ತಿರುವಾಗಲೇ, ಸೋಮಾಲಿಯಾದ ಗೊಲ್ಲರ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸುತ್ತಿದ್ದ ಸೌದಿ ಅರೇಬಿಯಾ ಒಂದು ಶಾಕ್ ನೀಡಿತು. ಸೋಮಾಲಿಯಾದ ಪ್ರಾಣಿಗಳು ’ಕಣಿವೆ ಜ್ವರ’ದಿಂದ (Rift valley fever) ಬಳಲುತ್ತಿವೆಯೆಂದು ಅವುಗಳ ರಫ್ತನ್ನು ನಿಷೇಧಿಸಿತು. ಅಷ್ಟೇ ಅಲ್ಲದೆ, ಸೋಮಾಲಿಯಾದ ಪ್ರಾಣಿಗಳಿಗೆ ಬದಲಾಗಿ, ಅಲ್ಲಿನ ಮರಮಟ್ಟುಗಳತ್ತ ಸೌದಿ ಅರೇಬಿಯಾ ಕಣ್ಣುಗಳನ್ನಿಟ್ಟಿತು. ಇದ್ದಲಿನ (ಚಾರ್ಕೋಲ್) ಮುಖ್ಯ ಆಧಾರ ಈ ಮರಗಳು. ಅಷ್ಟು ಹೊತ್ತಿಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸೋಮಾಲಿಗಳು ಕಂಡಕಂಡಲ್ಲಿ ಮರಮಟ್ಟುಗಳನ್ನು ಕೆಡವಲಾರಂಭಿಸಿದ್ದರು. ನಿಧಾನವಾಗಿ ಸೋಮಾಲಿಯಾದ ಅರಣ್ಯಗಳು ನಾಶವಾಗಲಾರಂಭಿಸಿದವು.

ಆಗ, ತನ್ನ ದೇಶದ ಜನರಿಗೆ ಬುದ್ದಿ ಹೇಳಿದವಳು ಫಾತಿಮಾ ಜಿಬ್ರೆಲ್. ಈಕೆ ಸೋಮಾಲಿಯಾದ ಅಲೆಮಾರಿ ಗೊಲ್ಲರ ಕುಟುಂಬವೊಂದರಲ್ಲಿ ಜನಿಸಿದಾಕೆ. ಆದರೆ ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವಳು. ಸಹಸ್ರಾರು ವರ್ಷಗಳಿಂದ ಪರಿಸರವನ್ನೇ ನಂಬಿ ಬದುಕಿದ್ದ ತನ್ನ ಜನ ಹೀಗೆ ಪರಿಸರಕ್ಕೇ ಕೊಡಲಿ ಹಾಕಿದ್ದನ್ನು ಕಂಡ ಫಾತಿಮಾ ತಕ್ಷಣವೇ ಕ್ರಿಯಾಶೀಲವಾದಳು.

ಮರಗಳನ್ನು ಕೆಡವಿದರೆ, ಕಾಡುಗಳನ್ನು ನಾಶಮಾಡಿದರೆ, ಪರಿಸರಕ್ಕೆ ಧಕ್ಕೆ ತಂದರೆ, ಐತಿಹಾಸಿಕವಾಗಿ ಸೋಮಾಲಿಗಳು ನಂಬಿರುವ ಸಾಕುಪ್ರಾಣಿಗಳಿಗೂ ಮತ್ತು ತಮ್ಮ ಅಲೆಮಾರಿ ಜೀವನಶೈಲಿಗೂ ಹಾನಿ ತಂದುಕೊಂಡಂತೆ ಎಂದು ಭಾವಿಸಿದಳು ಫಾತಿಮಾ. “ನಾವು ಅವಲಂಬಿಸಿರುವ ಪರಿಸರವನ್ನು ಒಮ್ಮೆ ನಾಶ ಮಾಡಿದರೆ ಮತ್ತೆ ಲಕ್ಷಾಂತರ ವರ್ಷಗಳಾದರೂ ಅದನ್ನು ಸರಿಪಡಿಸಲಾರೆವು” ಎಂದ ಫಾತಿಮಾ, “ತನಗೆ ಬೇಕಾಗಿರುವ ಇದ್ದಲಿಗಾಗಿ ಸೌದಿ ಅರೇಬಿಯಾ ಸೋಮಾಲಿಯಾಕ್ಕೆ ಮಾಡುತ್ತಿರುವ ಹಾನಿಯನ್ನು ಅರ್ಥೈಸಿಕೊಂಡು ನಮ್ಮ ಬಡದೇಶಕ್ಕೆ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸಲಿ.” ಎಂದು ಘೋಷಿಸಿದಳು.

ಅಂದಿನಿಂದ ಸೋಮಾಲಿಯಾದ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಫಾತಿಮಾ. ಈಗ ಮುದುಕಿಯಾಗಿರುವ ಫಾತಿಮಾ ಚಿಕ್ಕಪುಟ್ಟ ಗ್ರಾಮಗಳಲ್ಲೂ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾಳೆ. ಇನ್ನು ಸೋಮಾಲಿಯಾದಲ್ಲಿ ಕಾಡುಗಳು ಸುರಕ್ಷಿತವಾಗಿದ್ದರೆ, ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆ ಆಗುತ್ತಿದ್ದರೆ ಅದಕ್ಕೆ ಫಾತಿಮಾ ಕಾರಣ. ಆದರೆ ಇದು ಫಾತಿಮಾ ಸುಲಭವಾಗಿ ಗಳಿಸಿದ ಸಾಧನೆಯಲ್ಲ.

ಒಂದು ದಶಕದಿಂದ ಅಂತರ್ಯುದ್ಧವನ್ನು ಎದುರಿಸುತ್ತಿರುವ ಸೋಮಾಲಿಯಾ ಈಗ ಬರಗಾಲದಿಂದ ತತ್ತರಿಸುತ್ತಿದೆ. ಈಗ ಅದು ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಕೂಡ ಆಗಿದೆ. ಈ ಎಲ್ಲದರ ಮಧ್ಯೆ ಫಾತಿಮಾ ಪರಿಸರವನ್ನು ರಕ್ಷಿಸುವುದಕ್ಕಾಗಿ, ಮಹಿಳೆಯರನ್ನು ಒಗ್ಗೂಡಿಸುತ್ತಿರುವುದಕ್ಕಾಗಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ಆದರೂ, ಈ ಎಲ್ಲಾ ತೊಂದರೆಗಳ ನಡುವೆಯೂ ಇತ್ತೀಚೆಗೆ ಸೋಮಾಲಿಯಾದ ಒಂದು ರಾಜ್ಯವಾದ ಪುಂಟ್‌ಲ್ಯಾಂಡ್‌ನಿಂದ ಇದ್ದಿಲು ರಫ್ತನ್ನು ನಿಷೇಧ ಮಾಡುವುದರಲ್ಲಿ ಯಶಸ್ವಿಯಾಗಿದ್ದಾಳೆ.

ತನ್ನ ಜನರ ಜೀವನಶೈಲಿಯನ್ನು ಮತ್ತು ಪರಿಸರವನ್ನು ಸಂರಕ್ಷಿಸುವುದರಲ್ಲಿ ಫಾತಿಮಾಳದ್ದು ಏಕಾಂಗಿ ಹೋರಾಟ. ಕಳೆದ ವಾರ ಈ ದಿಟ್ಟ ಮಹಿಳೆಯ ಕೊಡುಗೆಯನ್ನು ಪರಿಗಣಿಸಿ ಪರಿಸರ ಸಂರಕ್ಷಣೆಗಾಗಿ ’ಗೋಲ್ಡ್ ಮ್ಯಾನ್ ಎನ್‌ವೈರ್ನಮೆಂಟ್ ಪ್ರೈಜ’ನ್ನು ಈಕೆಗೆ ನೀಡಲಾಗಿದೆ. ಈ ಪ್ರಶಸ್ತಿ ಬರುವವರೆಗೂ ಫಾತಿಮಾ ಜಿಬ್ರೆಲ್ ಬಗ್ಗೆ ಸೋಮಾಲಿಯಾ ಹೊರತುಪಡಿಸಿ ಹೊರಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಕಾಳಜಿ ಮತ್ತು ಅರ್ಪಣಾಭಾವ ಇದ್ದರೆ ಯಾರಾದರೂ ತಮ್ಮ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಫಾತಿಮಾ ಜಿಬ್ರೆಲ್ ಒಂದು ಉದಾಹರಣೆ.

(ಇದು ಗೌರಿಯವರ ಕಂಡಹಾಗೆ ಅಂಕಣ ಬರಹವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀಗೆ ಉತ್ತಮ ಬರಹಗಳನ್ನು ಮರು ಪ್ರಕಟಣೆ ಮಾಡುತ್ತಿರಿ. ಧನ್ಯವಾದ. ‌

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...