Homeಮುಖಪುಟಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್

ಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೌಟುಂಬಿಕೆ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಅವರು ಮಾತನಾಡಿದರು.

- Advertisement -
- Advertisement -

ಮೂಢನಂಬಿಕೆಗೆ ಬಲಿಯಾಗಬೇಡಿ. ಪಿತೃಪ್ರಾಧ್ಯನತೆಯ ಎಲ್ಲಾ ಮೌಲ್ಯಗಳನ್ನು ನಮ್ಮ ತಲೆಯಲ್ಲಿ ತುಂಬುತ್ತಿರುವುದೇ ಮೂಢನಂಬಿಕೆಗಳ ಮೂಲಕ. ಇದರಿಂದ ತಾವು ಮಾಡಬೇಕೆನ್ನುವ ಕೆಟ್ಟ ಕೆಲಸಗಳನ್ನು ಮಹಿಳೆಯರ ಮೂಲಕ ಮಾಡಿಸಲಾಗುತ್ತದೆ. ಇದರಿಂದ ನಮ್ಮನ್ನು ನೂರು-ಐನೂರು ವರ್ಷಕ್ಕೆ ಹಿಂದಕ್ಕೆ ತಳ್ಳಲ್ಲಿಕ್ಕೆ ಇದನ್ನು ಬಳಸುತ್ತಿದ್ದಾರೆ. ಹಾಗಾಗಿ ಮೂಡನಂಬಿಕೆಗಳಿAದ ದೂರ ಇರಬೇಕೆಂದು ಹಿರಿಯ ವಕೀಲೆ ಮತ್ತು ಲೇಖಕಿಯಾದ ಬಾನು ಮುಷ್ತಕ್ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೌಟುಂಬಿಕೆ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಅವರು ಮಾತನಾಡಿದರು.

ಕುಟುಂಬದ ಒಳಗೆ ಯಾರು ದೌರ್ಜನ್ಯ ನಡೆಸುತ್ತಾರೆ? ಎಂಬ ಪ್ರಶ್ನೆಗಳು ಬಹಳ ಬರುತ್ತವೆ. ಅಪ್ಪನೇ ತನ್ನ ಮಗಳನ್ನು ಅತ್ಯಾಚಾರ ಮಾಡಿರುವ ಹಲವು ಪ್ರಕರಣಗಳು ನನ್ನ ಮುಂದಿವೆ. ಇಂದು ಹಲವು ಸಾವಿರ ಪಟ್ಟು ಕೌಟುಂಬಿಕ ಹಿಂಸೆ ಜಾಸ್ತಿಯಾಗಿದೆ. ಮಗು ಹುಟ್ಟುವುದಕ್ಕೆ ಮುಂಚಿತವಾಗಿಯೇ ಹತ್ಯೆ ಮಾಡುವುದು ಇಂದು ಒಂದು ಸಾವಿರ ಕೋಟಿ ಮೌಲ್ಯದ ದಂಧೆಯಾಗಿದೆ. ಒಬ್ಬ ಹೆಣ್ಣು ಮಗಳನ್ನು ಹುಟ್ಟುವುದಕ್ಕೆ ಅವಕಾಶ ಕೊಡದ ಸಂದರ್ಭದಲ್ಲಿ ಇನ್ನು ಹುಟ್ಟಿದ ಮೇಲೆ ಯಾವ ಯಾವ ರೀತಿ ಹಿಂಸೆ ಕೊಡುತ್ತಾರೆ ನೀವೆ ಯೋಚಿಸಿ? ಎಂದು ಅಭಿಪ್ರಾಯಪಟ್ಟರು.

ಈ ವಿಭಿನ್ನವಾದ ಹಿಂಸೆಗಳಲ್ಲಿ ಮಹಿಳೆಯರನ್ನು ದ್ವಿತಿಯ ದರ್ಜೆಯ ಪ್ರಜೆಯನ್ನಾಗಿ ಮಾಡಿ ಹತ್ತಿಕ್ಕುವ ವ್ಯವಸ್ಥೆ ಇಂದಿಗೂ ಕೂಡ ಜಾರಿಯಲಿದೆ. ನಮ್ಮ ಸಮಾಜ ಆಧುನಿಕವಾದಷ್ಟು ಕೂಡ ಮತೀಯವಾಗಿ ನರಳುತ್ತಿದೆ ಎಂದರು.

ಸ್ತ್ರೀ ಶಿಕ್ಷಣ ನಿರಾಕರಣೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ವಿವಾಹ ಸಂಬಂಧಿತ ನೋಂದಣಿಗೆ ವಿರೋಧ, ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನಕ್ಕೆ ವಿರೋಧ, ಆಸ್ತಿ ಹಕ್ಕು, ಅತ್ಯಾಚಾರ.. ಮರ್ಯಾದೆಹೀನ ಹತ್ಯೆ.. ಇವೆಲ್ಲವೂ ಕೌಟುಂಬಿಕ ಹಿಂಸೆ ಕೆಳಗೆ ಬರುತ್ತವೆ ಆದರೆ ಆಧುನಿಕ ಸಮಾಜ ಇದೆಲ್ಲವನ್ನು ಗಮನಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಇದೇ ಮಂಡ್ಯ ಜಿಲ್ಲೆಯ ಸ್ಮೃತಿ ಎಂಬ ಹೆಣ್ಣು ಮಗಳು ನನ್ನ ಬರಹಗಳ ಕುರಿತು ಸಂಶೋಧನೆ ನಡೆಸಿದ್ದಳು. ಬಹಳ ಪ್ರತಿಭಾವಂತಳಾದ ಆಕೆ ದಲಿತ ಯುವಕನ ಜೊತೆ ಮದುವೆಯಾಗಿದ್ದಕ್ಕೆ ಕೊಲೆ ಮಾಡಲಾಗಿದೆ. ಅಂದರೆ ಮರ್ಯಾದೇಹೀನ ಹತ್ಯೆ ಇಂದಿಗೂ ಚಾಲ್ತಿಯಲ್ಲಿರುವುದು ದುರಂತ ಎಂದರು.

2005 ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂತು. ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಒಡಂಬಡಿಕೆಗಳ ಅಂಗವಾಗಿ ಕಾನೂನಾಗಿದೆ. ಇಂದಿರಾ ಜೈಸಿಂಗ್ ಎಂಬ ಹಿರಿಯ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಈ ಕಾಯ್ದೆಯನ್ನು ಬೆಂಬಲಿಸಿದ್ದಕ್ಕೆ ಆಕೆಯನ್ನು ಟ್ರೋಲ್ ಮಾಡಲಾಯಿತು.. ಇದು ನಮ್ಮ ಸಮಾಜ ಮಹಿಳೆಯರ ಕುರಿತು ವರ್ತಿಸುವ ಪರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾನುಪಾತದಲ್ಲಿ ಈಗ ಬಹಳ ತಾರತಮ್ಯವುಂಟಾಗುತ್ತಿದ್ದು, ದಿನೇ ದಿನೇ ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿಯುತ್ತಿದೆ. 498ಎ ಕಾಯ್ದೆಯ ಆಧಾರದಲ್ಲಿ ಸುಳ್ಳು ಕೇಸುಗಳು ದಾಖಲಾಗುತ್ತಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅದರಂಗತೆ ಡಿವೈಎಸ್ಪಿ ಒಪ್ಪಿಗೆ ನೀಡಿದ ನಂತರವೇ ಕೇಸು ದಾಖಲಿಸಬೇಕೆಂಬ ನಿಯಮ ಬಂದಿತು. ಬಹಳಷ್ಟು ಹೋರಾಟಗಳ ನಂತರ ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಅಂದರೆ ಈ ಕಾನೂನುಗಳು ದುರುಪಯೋಗವಾಗುತ್ತಿವೆ ಎಂಬ ಆರೋಪಗಳಿವೆ. ಈ ಕಾನೂನುಗಳ ಅಡಿಯಲ್ಲಿ ಸುಳ್ಳು ಕೇಸು ಹಾಕಿದರೆ ಕಾನೂನು ಉಲ್ಟಾ ಹೊಡೆದು ನೈಜ ಹಿಂಸೆ ಅನುಭವಿಸದವರಿಗೂ ನ್ಯಾಯ ಸಿಗುವುದು ದುಸ್ತರವಾಗುತ್ತದೆ. ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿದರು.

ಔದ್ಯೋಗಿಕ ನೆಲೆಯಲ್ಲಿ ಮಹಿಳಾ ಬದುಕಿನ ಪಲ್ಲಟಗಳು ವಿಷಯದ ಕುರಿತು ಸಾಮಾಜಿಕ ಕಾರ್ಯಕರ್ತೆ ಎಸ್.ಸತ್ಯಾರವರು ಮಾತನಾಡಿ “ಸ್ವಾತಂತ್ರ್ಯವೇ ಅಭಿವೃದ್ದಿ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯಸೆನ್ ಹೇಳಿದ್ದಾರೆ. ವಿಶ್ವಸಂಸ್ಥೆಯು ನಾನು ಸಮಾನತೆಯ ತಲೆಮಾರಿನವಳು ಎಂಬ ಘೋಷಣೆ ನೀಡಿದೆ. ಎಲ್ಲರೂ ಸಮಾನರು ವಿಶ್ವ ಆರ್ಥಿಕ ವೇದಿಕೆ ನೀಡಿದೆ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಔದ್ಯೋಗಿಕ ಕ್ಷೇತ್ರದಲ್ಲಿ ಸಮಾನತೆ ಬರಬೇಕಾದರೆ 108 ವರ್ಷಗಳು ಬೇಕು ಸಂಶೋಧನಾ ವರದಿಗಳು ಹೇಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
187 ರಾಷ್ಟ್ರಗಳು ಲಿಂಗತಾರತಮ್ಯವನ್ನು ನಿಯಂತ್ರಿಸಲು ಕಾಯ್ದೆ ಕಾನೂನುಗಳನ್ನು ರೂಪಿಸಿವೆ. ಲಿಂಗ ತಾರತಮ್ಯದ ವಿಚಾರದಲ್ಲಿ ಭಾರತ ಕೇವಲ 25% ಮಾತ್ರ ಶ್ರಮಿಸಿದೆ. ಸಮಾನ ವೇತನ ಎಂಬದು ಇನ್ನು ಮಹಿಳೆಯರ ಪಾಲಿಗೆ ಕನಸಿನ ಮಾತಾಗಿದೆ. ಕೆಲಸದ ಸ್ಥಳದಲ್ಲಿ ಹಿಂಸೆ ಮುಂದುವರೆದಿದೆ.

ವೇತನಸಹಿತ ಕೆಲಸ ಮತ್ತು ವೇತನ ರಹಿತ ಕೆಲಸ ಎಂಬ ಎರಡು ವಿಭಾಗಗಳಿವೆ.. ಪಾಲನೆ ಮತ್ತು ಪೋಷಣೆ ಮಾಡುವ ಕೆಲಸ ಅನುತ್ಪಾದಕ ಕ್ಷೇತ್ರ ಎನ್ನಲಾಗುತ್ತಿದೆ. ಅಂಗನವಾಡಿಯಿಂದ ಹಿಡಿದು ಐಟಿ ಕಂಪನಿಗಳನ್ನು ಮಕ್ಕಳನ್ನು ನೋಡಿಕೊಳ್ಳುವ, ರೋಗಿಗಳನ್ನು, ವಿಕಲಚೇತನರನ್ನು ನೋಡಿಕೊಳ್ಳುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ. ಇದನ್ನು ಮಾನವೀಯ ಕೆಲಸವಾಗಿದ್ದರೆ ಉತ್ಪಾದನಾ ಕ್ಷೇತ್ರವಲ್ಲವೇ? ಇದಕ್ಕೆ ಏಕೆ ಮೌಲ್ಯವನ್ನು ನಿಗಧಿಪಡಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಇಂದು ಉದ್ಯೋಗಗಳು ಮಹಿಳೆಯರಿಗೆ ಆಯ್ಕೆಯಾಗಿಲ್ಲ ಬದಲಿಗೆ ಹೇರಿಕೆಯಾಗಿವೆ. ತಂತ್ರಜ್ಞಾನ ಸ್ಪಲ್ಪ ಮಟ್ಟಿಕೆ ಮಹಿಳೆಯರನ್ನು ಸುಧಾರಿಸಿದರೂ ಸಹ ಅವರನ್ನು ಮತ್ತೆ ಅವರನ್ನು ಕೆಲವೇ ಕ್ಷೇತ್ರಗಳಿಗೆ ಸೀಮಿತಗೊಳಿಸಿತು. ಖಾಸಗೀಕರಣ ಮತ್ತು ಜಾಗತೀಕರಣದ ಜೊತೆಗೆ ಕೋಮುವಾದ ಮತ್ತು ದೌರ್ಜನ್ಯಗಳು ಮಹಿಳೆಯನ್ನು ಮುಂದೆ ಹೋಗದಂತೆ ತಡೆಹಿಡಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಮತ್ತು ಸಾಮಾಜಿಕ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಸಬಿತಾ ಬನ್ನಾಡಿಯವರು ಮಾತನಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...