Homeಮುಖಪುಟಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್

ಹೆಣ್ಣು ಭ್ರೂಣ ಹತ್ಯೆ ಎಂಬುದು ಸಾವಿರ ಕೋಟಿ ದಂಧೆಯಾಗಿದೆ: ಭಾನು ಮುಷ್ತಾಕ್

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೌಟುಂಬಿಕೆ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಅವರು ಮಾತನಾಡಿದರು.

- Advertisement -
- Advertisement -

ಮೂಢನಂಬಿಕೆಗೆ ಬಲಿಯಾಗಬೇಡಿ. ಪಿತೃಪ್ರಾಧ್ಯನತೆಯ ಎಲ್ಲಾ ಮೌಲ್ಯಗಳನ್ನು ನಮ್ಮ ತಲೆಯಲ್ಲಿ ತುಂಬುತ್ತಿರುವುದೇ ಮೂಢನಂಬಿಕೆಗಳ ಮೂಲಕ. ಇದರಿಂದ ತಾವು ಮಾಡಬೇಕೆನ್ನುವ ಕೆಟ್ಟ ಕೆಲಸಗಳನ್ನು ಮಹಿಳೆಯರ ಮೂಲಕ ಮಾಡಿಸಲಾಗುತ್ತದೆ. ಇದರಿಂದ ನಮ್ಮನ್ನು ನೂರು-ಐನೂರು ವರ್ಷಕ್ಕೆ ಹಿಂದಕ್ಕೆ ತಳ್ಳಲ್ಲಿಕ್ಕೆ ಇದನ್ನು ಬಳಸುತ್ತಿದ್ದಾರೆ. ಹಾಗಾಗಿ ಮೂಡನಂಬಿಕೆಗಳಿAದ ದೂರ ಇರಬೇಕೆಂದು ಹಿರಿಯ ವಕೀಲೆ ಮತ್ತು ಲೇಖಕಿಯಾದ ಬಾನು ಮುಷ್ತಕ್ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೌಟುಂಬಿಕೆ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಅವರು ಮಾತನಾಡಿದರು.

ಕುಟುಂಬದ ಒಳಗೆ ಯಾರು ದೌರ್ಜನ್ಯ ನಡೆಸುತ್ತಾರೆ? ಎಂಬ ಪ್ರಶ್ನೆಗಳು ಬಹಳ ಬರುತ್ತವೆ. ಅಪ್ಪನೇ ತನ್ನ ಮಗಳನ್ನು ಅತ್ಯಾಚಾರ ಮಾಡಿರುವ ಹಲವು ಪ್ರಕರಣಗಳು ನನ್ನ ಮುಂದಿವೆ. ಇಂದು ಹಲವು ಸಾವಿರ ಪಟ್ಟು ಕೌಟುಂಬಿಕ ಹಿಂಸೆ ಜಾಸ್ತಿಯಾಗಿದೆ. ಮಗು ಹುಟ್ಟುವುದಕ್ಕೆ ಮುಂಚಿತವಾಗಿಯೇ ಹತ್ಯೆ ಮಾಡುವುದು ಇಂದು ಒಂದು ಸಾವಿರ ಕೋಟಿ ಮೌಲ್ಯದ ದಂಧೆಯಾಗಿದೆ. ಒಬ್ಬ ಹೆಣ್ಣು ಮಗಳನ್ನು ಹುಟ್ಟುವುದಕ್ಕೆ ಅವಕಾಶ ಕೊಡದ ಸಂದರ್ಭದಲ್ಲಿ ಇನ್ನು ಹುಟ್ಟಿದ ಮೇಲೆ ಯಾವ ಯಾವ ರೀತಿ ಹಿಂಸೆ ಕೊಡುತ್ತಾರೆ ನೀವೆ ಯೋಚಿಸಿ? ಎಂದು ಅಭಿಪ್ರಾಯಪಟ್ಟರು.

ಈ ವಿಭಿನ್ನವಾದ ಹಿಂಸೆಗಳಲ್ಲಿ ಮಹಿಳೆಯರನ್ನು ದ್ವಿತಿಯ ದರ್ಜೆಯ ಪ್ರಜೆಯನ್ನಾಗಿ ಮಾಡಿ ಹತ್ತಿಕ್ಕುವ ವ್ಯವಸ್ಥೆ ಇಂದಿಗೂ ಕೂಡ ಜಾರಿಯಲಿದೆ. ನಮ್ಮ ಸಮಾಜ ಆಧುನಿಕವಾದಷ್ಟು ಕೂಡ ಮತೀಯವಾಗಿ ನರಳುತ್ತಿದೆ ಎಂದರು.

ಸ್ತ್ರೀ ಶಿಕ್ಷಣ ನಿರಾಕರಣೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ವಿವಾಹ ಸಂಬಂಧಿತ ನೋಂದಣಿಗೆ ವಿರೋಧ, ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನಕ್ಕೆ ವಿರೋಧ, ಆಸ್ತಿ ಹಕ್ಕು, ಅತ್ಯಾಚಾರ.. ಮರ್ಯಾದೆಹೀನ ಹತ್ಯೆ.. ಇವೆಲ್ಲವೂ ಕೌಟುಂಬಿಕ ಹಿಂಸೆ ಕೆಳಗೆ ಬರುತ್ತವೆ ಆದರೆ ಆಧುನಿಕ ಸಮಾಜ ಇದೆಲ್ಲವನ್ನು ಗಮನಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಇದೇ ಮಂಡ್ಯ ಜಿಲ್ಲೆಯ ಸ್ಮೃತಿ ಎಂಬ ಹೆಣ್ಣು ಮಗಳು ನನ್ನ ಬರಹಗಳ ಕುರಿತು ಸಂಶೋಧನೆ ನಡೆಸಿದ್ದಳು. ಬಹಳ ಪ್ರತಿಭಾವಂತಳಾದ ಆಕೆ ದಲಿತ ಯುವಕನ ಜೊತೆ ಮದುವೆಯಾಗಿದ್ದಕ್ಕೆ ಕೊಲೆ ಮಾಡಲಾಗಿದೆ. ಅಂದರೆ ಮರ್ಯಾದೇಹೀನ ಹತ್ಯೆ ಇಂದಿಗೂ ಚಾಲ್ತಿಯಲ್ಲಿರುವುದು ದುರಂತ ಎಂದರು.

2005 ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂತು. ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಒಡಂಬಡಿಕೆಗಳ ಅಂಗವಾಗಿ ಕಾನೂನಾಗಿದೆ. ಇಂದಿರಾ ಜೈಸಿಂಗ್ ಎಂಬ ಹಿರಿಯ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಈ ಕಾಯ್ದೆಯನ್ನು ಬೆಂಬಲಿಸಿದ್ದಕ್ಕೆ ಆಕೆಯನ್ನು ಟ್ರೋಲ್ ಮಾಡಲಾಯಿತು.. ಇದು ನಮ್ಮ ಸಮಾಜ ಮಹಿಳೆಯರ ಕುರಿತು ವರ್ತಿಸುವ ಪರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾನುಪಾತದಲ್ಲಿ ಈಗ ಬಹಳ ತಾರತಮ್ಯವುಂಟಾಗುತ್ತಿದ್ದು, ದಿನೇ ದಿನೇ ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿಯುತ್ತಿದೆ. 498ಎ ಕಾಯ್ದೆಯ ಆಧಾರದಲ್ಲಿ ಸುಳ್ಳು ಕೇಸುಗಳು ದಾಖಲಾಗುತ್ತಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅದರಂಗತೆ ಡಿವೈಎಸ್ಪಿ ಒಪ್ಪಿಗೆ ನೀಡಿದ ನಂತರವೇ ಕೇಸು ದಾಖಲಿಸಬೇಕೆಂಬ ನಿಯಮ ಬಂದಿತು. ಬಹಳಷ್ಟು ಹೋರಾಟಗಳ ನಂತರ ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಅಂದರೆ ಈ ಕಾನೂನುಗಳು ದುರುಪಯೋಗವಾಗುತ್ತಿವೆ ಎಂಬ ಆರೋಪಗಳಿವೆ. ಈ ಕಾನೂನುಗಳ ಅಡಿಯಲ್ಲಿ ಸುಳ್ಳು ಕೇಸು ಹಾಕಿದರೆ ಕಾನೂನು ಉಲ್ಟಾ ಹೊಡೆದು ನೈಜ ಹಿಂಸೆ ಅನುಭವಿಸದವರಿಗೂ ನ್ಯಾಯ ಸಿಗುವುದು ದುಸ್ತರವಾಗುತ್ತದೆ. ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿದರು.

ಔದ್ಯೋಗಿಕ ನೆಲೆಯಲ್ಲಿ ಮಹಿಳಾ ಬದುಕಿನ ಪಲ್ಲಟಗಳು ವಿಷಯದ ಕುರಿತು ಸಾಮಾಜಿಕ ಕಾರ್ಯಕರ್ತೆ ಎಸ್.ಸತ್ಯಾರವರು ಮಾತನಾಡಿ “ಸ್ವಾತಂತ್ರ್ಯವೇ ಅಭಿವೃದ್ದಿ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯಸೆನ್ ಹೇಳಿದ್ದಾರೆ. ವಿಶ್ವಸಂಸ್ಥೆಯು ನಾನು ಸಮಾನತೆಯ ತಲೆಮಾರಿನವಳು ಎಂಬ ಘೋಷಣೆ ನೀಡಿದೆ. ಎಲ್ಲರೂ ಸಮಾನರು ವಿಶ್ವ ಆರ್ಥಿಕ ವೇದಿಕೆ ನೀಡಿದೆ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಔದ್ಯೋಗಿಕ ಕ್ಷೇತ್ರದಲ್ಲಿ ಸಮಾನತೆ ಬರಬೇಕಾದರೆ 108 ವರ್ಷಗಳು ಬೇಕು ಸಂಶೋಧನಾ ವರದಿಗಳು ಹೇಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
187 ರಾಷ್ಟ್ರಗಳು ಲಿಂಗತಾರತಮ್ಯವನ್ನು ನಿಯಂತ್ರಿಸಲು ಕಾಯ್ದೆ ಕಾನೂನುಗಳನ್ನು ರೂಪಿಸಿವೆ. ಲಿಂಗ ತಾರತಮ್ಯದ ವಿಚಾರದಲ್ಲಿ ಭಾರತ ಕೇವಲ 25% ಮಾತ್ರ ಶ್ರಮಿಸಿದೆ. ಸಮಾನ ವೇತನ ಎಂಬದು ಇನ್ನು ಮಹಿಳೆಯರ ಪಾಲಿಗೆ ಕನಸಿನ ಮಾತಾಗಿದೆ. ಕೆಲಸದ ಸ್ಥಳದಲ್ಲಿ ಹಿಂಸೆ ಮುಂದುವರೆದಿದೆ.

ವೇತನಸಹಿತ ಕೆಲಸ ಮತ್ತು ವೇತನ ರಹಿತ ಕೆಲಸ ಎಂಬ ಎರಡು ವಿಭಾಗಗಳಿವೆ.. ಪಾಲನೆ ಮತ್ತು ಪೋಷಣೆ ಮಾಡುವ ಕೆಲಸ ಅನುತ್ಪಾದಕ ಕ್ಷೇತ್ರ ಎನ್ನಲಾಗುತ್ತಿದೆ. ಅಂಗನವಾಡಿಯಿಂದ ಹಿಡಿದು ಐಟಿ ಕಂಪನಿಗಳನ್ನು ಮಕ್ಕಳನ್ನು ನೋಡಿಕೊಳ್ಳುವ, ರೋಗಿಗಳನ್ನು, ವಿಕಲಚೇತನರನ್ನು ನೋಡಿಕೊಳ್ಳುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ. ಇದನ್ನು ಮಾನವೀಯ ಕೆಲಸವಾಗಿದ್ದರೆ ಉತ್ಪಾದನಾ ಕ್ಷೇತ್ರವಲ್ಲವೇ? ಇದಕ್ಕೆ ಏಕೆ ಮೌಲ್ಯವನ್ನು ನಿಗಧಿಪಡಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಇಂದು ಉದ್ಯೋಗಗಳು ಮಹಿಳೆಯರಿಗೆ ಆಯ್ಕೆಯಾಗಿಲ್ಲ ಬದಲಿಗೆ ಹೇರಿಕೆಯಾಗಿವೆ. ತಂತ್ರಜ್ಞಾನ ಸ್ಪಲ್ಪ ಮಟ್ಟಿಕೆ ಮಹಿಳೆಯರನ್ನು ಸುಧಾರಿಸಿದರೂ ಸಹ ಅವರನ್ನು ಮತ್ತೆ ಅವರನ್ನು ಕೆಲವೇ ಕ್ಷೇತ್ರಗಳಿಗೆ ಸೀಮಿತಗೊಳಿಸಿತು. ಖಾಸಗೀಕರಣ ಮತ್ತು ಜಾಗತೀಕರಣದ ಜೊತೆಗೆ ಕೋಮುವಾದ ಮತ್ತು ದೌರ್ಜನ್ಯಗಳು ಮಹಿಳೆಯನ್ನು ಮುಂದೆ ಹೋಗದಂತೆ ತಡೆಹಿಡಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಮತ್ತು ಸಾಮಾಜಿಕ ನೆಲೆಯಿಂದ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತು ಸಬಿತಾ ಬನ್ನಾಡಿಯವರು ಮಾತನಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...