Homeಮುಖಪುಟಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

- Advertisement -
- Advertisement -

ನಾವು ಪ್ರಪಂಚದ ಅತಿ ಪ್ರಾಮಾಣಿಕ ವ್ಯಕ್ತಿಯ ಫೋಟೊನಾ ಅತ್ಯಂತ ಭ್ರಷ್ಟ ವಸ್ತುವಿನ ಮೇಲೆ ಹಾಕಿದ್ದೀವಿ. ದುಡ್ಡನ್ನು ಉಳಿಸಿ ಯಾರಾದ್ರೂ ಶ್ರೀಮಂತರಾಗಿದ್ದಾರ? ಮರ್ಯಾದೆ ಅನ್ನುವುದು ಮಿಡಲ್ ಕ್ಲಾಸ್ ಜನರ ಕೈಗೆಟುಕದ ವಸ್ತು. ಅವರು ಇಡೀ ಜೀವನ ಸಾಲದಲ್ಲಿಯೇ ಮುಳುಗಿ ಸಾಲದಲ್ಲಿಯೇ ಸತ್ತು ಹೋಗುತ್ತದೆ. ಎಜುಕೇಶನ್ ಲೋನ್, ಕೆಲಸ ಸಿಕ್ಕರೆ ಬೈಕ್ ಲೋನ್, ಪ್ರಮೋಷನ್ ಸಿಕ್ಕರೆ ಕಾರ್ ಲೋನ್, ಮದುವೆ ಆದರೆ ಅದಕ್ಕೂ ಲೋನ್, ಆನಂತರ ಮಕ್ಕಳ ಎಜುಕೇಶನ್ ಲೋನ್, ಹೋಮ್ ಲೋನ್ ಹೀಗೆ… ಮದುವೆ ಮುರಿದು ಹೋದ್ರು ಲೋನ್ ಮಾತ್ರ ಮುಂದುವರೆಯುತ್ತಿರುತ್ತದೆ… ಒಟ್ನಲ್ಲಿ ನಾವು ಮಿಡಲ್ ಕ್ಲಾಸ್ ಅಲ್ಲ, ಬದಲಿಗೆ ಮಿಡಲ್ ಫಿಂಗರ್ ಕ್ಲಾಸ್…

ಹೀಗೆ ಬಹುತೇಕ ಜನರಿಗೆ ಅಪೀಲ್ ಆಗುವ ಡೈಲಾಗ್‌ಗಳ ಮೂಲಕ ಗಮನ ಸೆಳೆದ ವೆಬ್ ಸೀರಿಸ್ ಫರ್ಜಿ. ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್ ಇದಾಗಿದ್ದು, ಈ ಮೂಲಕ ವಿಜಯ್ ಸೇತುಪತಿ ಮತ್ತು ಶಾಹಿದ್ ಕಪೂರ್ ಭರ್ಜರಿಯಾಗಿ ಓಟಿಟಿ ಪ್ರವೇಶಿಸಿದ್ದಾರೆ. Raj & DK ಜೋಡಿ ಫ್ಯಾಮಿಲಿ ಮ್ಯಾನ್-1 ರಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಕಥಹಂದರ ಹೊಂದಿತ್ತು. ಫ್ಯಾಮಿಲಿ ಮ್ಯಾನ್ -2ರಲ್ಲಿ ಎಲ್‌ಟಿಟಿಇ ಸಂಘಟನೆಯ ಕುರಿತು ಚಿತ್ರಿಸಲಾಗಿತ್ತು. ಈಗ ಫರ್ಜಿಯಲ್ಲಿ ಖೋಟಾ ನೋಟುಗಳ ಕರಾಳ ಲೋಕ ತೆರೆದಿಡಲು ರಾಜ್ ಮತ್ತು ಡಿಕೆ ಜೋಡಿ ಯತ್ನಿಸಿದೆ.

ಅತ್ಯುತ್ತಮ ಚಿತ್ರ ಕಲಾವಿದ್ ಸನ್ನಿ (ಶಾಹಿದ್ ಕಪೂರ್) ಅವರ ಸ್ನೇಹಿತ ಕಂ ಸಹೋದರ ಫಿರೋಜ್ (ಭುವನ್ ಅರೋರಾ) ಜೊತೆ ಸೇರಿ ತನ್ನ ತಾತ ಮಾಧವ್‌ (ಅಮೋಲ್ ಪಾಲೇಕರ್) ರವರ ‘ಕ್ರಾಂತಿ ಪತ್ರಿಕೆ’ ಮತ್ತು ಪ್ರಿಂಟಿಂಗ್ ಪ್ರೆಸ್ ಅನ್ನು ಉಳಿಸಿಕೊಳ್ಳಲು ದಾರಿ ಕಾಣದಿದ್ದಾಗ ತನ್ನ ಪ್ರತಿಭೆ ಬಳಸಿ ಖೋಟಾ ನೋಟು ಮುದ್ರಿಸಲು ಮುಂದಾಗುತ್ತಾನೆ. ಮೊದಲು ಪ್ರೆಸ್ ಉಳಿಸಲು ಸಾಲ ತೀರಿಸುವುದಕ್ಕಾಗಿ, ಆನಂತರ ಮನೆ – ಕಾರು ಕೊಳ್ಳುವುದಕ್ಕಾಗಿ, ಆನಂತರ ಇದೇ ಕೊನೆ ಸಲ ಎಂದುಕೊಂಡು, ಆಮೇಲೆ ಸಂದರ್ಭದ ಒತ್ತಡಗಳಿಗೆ ಒಳಗಾಗಿ ಸನ್ನಿ ಮತ್ತು ಆತನ ಸ್ನೇಹಿತ ಅಂತಾರಾಷ್ಟ್ರೀಯ ಖೋಟಾ ನೋಟು ಜಾಲದ ಭಾಗವಾಗುವುದು, ಈ ಜಾಲ ಬೇಧಿಸಲು ಮೈಖಲ್ (ವಿಜಯ್ ಸೇತುಪತಿ) ಮತ್ತು ಅವರ ಸಹೋದ್ಯೋಗಿ ಮೇಘಾ (ರಾಶಿ ಖನ್ನಾ) ಮುಂದಾಗುವುದು ಇಡೀ 8 ಎಪಿಸೋಡ್‌ಗಳ ವೆಬ್‌ ಸಿರೀಸ್‌ನ ಎಳೆ. ಆದರೆ ಮನುಷ್ಯ ಕೇವಲ ಆಹಾರ-ಮೈಥುನಗಳಿಗಷ್ಟೇ ಬದುಕುವುದಿಲ್ಲವಲ್ಲ. ಹಾಗಾಗಿ ಪ್ರತಿಯೊಂದು ಪಾತ್ರಗಳಿಗೂ ಅವರದೇ ಆದ ಪ್ಯಾಷನ್‌ಗಳಿವೆ. ಮೈಖಲ್‌ಗೆ ಖೋಟಾ ನೋಟಿನ ಕಿಂಗ್ ಪಿನ್ ಮನ್ಸೂರ್ ದಲಾಲ್‌ (ಕೆ.ಕೆ ಮೆನನ್) ಮೇಲಿನ ವಯಕ್ತಿಕ ಹಗೆತನ, ಮೇಘಾಳಿಗೆ ತಾನೊಬ್ಬ ಪ್ರೊಫೆಷನಲ್ ಕೆಲಸಗಾರ್ತಿ ಎನ್ನಿಸಿಕೊಳ್ಳುವ ಹಂಬಲ, ಮಾಧವ್‌ಗೆ ಜನರನ್ನು ಕ್ರಾಂತಿಗೆ ಕರೆತರುವ ಹುಚ್ಚು. ಒಂದು ಕಡೆ ತಾತನ ಆಸೆ ಮತ್ತು ತಮ್ಮ ಜೀವನದ ಮಹತ್ವಾಕಾಂಕ್ಷೆ ಸನ್ನಿ, ಫಿರೋಜ್‌ರವರದು. ಎಲ್ಲರ ಪಾತ್ರ ಪೋಷಣೆಯಲ್ಲಿ Raj & DK ಜೋಡಿ ಎಚ್ಚರಿಕೆ ವಹಿಸಿದೆ. ಹಾಗಾಗಿಯೇ ಸಿರೀಸ್ ಎಲ್ಲಾ ಎಪಿಸೋಡ್‌ಗಳನ್ನು ನೋಡಿಸಿಕೊಳ್ಳುತ್ತದೆ.

ನಮ್ಮ ಪ್ರಧಾನಿಯವರು 2016ರಲ್ಲಿ ಖೋಟಾ ನೋಟುಗಳ ಜಾಲವನ್ನು ಮುರಿಯುತ್ತೇನೆಂದು ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇನೆಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯೀಕರಣ ಮಾಡಿದರು. ಆದರೆ ಖೋಟಾ ನೋಟುಗಳು ನಿಂತಿವೆಯೇ? ಭಯೋತ್ಪಾದನೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಈ ಸೀರಿಸ್ ನೋಡುವವರಿಗೆ ಎದುರಾಗುತ್ತದೆ. ಖೋಟಾ ನೋಟುಗಳ ಅಪಾಯದ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಒಂದು ವೇಳೆ ಖೋಟಾ ನೋಟು ವಹಿವಾಟು ನಡೆಸುವ ದೊಡ್ಡ ದಂಧೆಕೋರರು ಸಿಕ್ಕಿಬಿದ್ದರೆ ಆ ಕ್ರೆಡಿಟ್ ಅನ್ನು ತಮ್ಮ ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಹಪಾಹಪಿಯಲ್ಲಿ ಈ ಚಿತ್ರದಲ್ಲಿ ಮೂಡಿಬಂದಿದೆ.

ಚಿತ್ರದಲ್ಲಿ ಗುಜರಾತಿನ ಶಾಸಕ ಖೋಟಾ ನೋಟಿನ ದಂಧೆ ನಡೆಸುವುದು, ಬೇರೆ ದೇಶಗಳಿಂದ ಅಲ್ಲಿನ ಬಂದರುಗಳಿಗೆ ಖೋಟಾ ನೋಟುಗಳು ಬರುವುದು, ವಿರೋಧ ಪಕ್ಷದವರ ಮೇಲೆ ಸಿಬಿಐ ದಾಳಿ ನಡೆಸುವುದು ಮುಂತಾದ ಅಂಶಗಳನ್ನು ‘ಪ್ರಜ್ಞಾಪೂರ್ವಕವಾಗಿ’ ತಂದಿದ್ದಾರೆ ಅನ್ನಿಸುತ್ತದೆ.

ಕೊನೆ ಬಾಲ್‌ನಲ್ಲಿ 6 ರನ್ ಬೇಕಿದ್ದಾಗ ಆ ಶಾಟ್‌ನಲ್ಲಿ ಸರಿ, ತಪ್ಪು ಅಂತ ಇರೋಲ್ಲ, ಬರೀ ಬಾರಿಸಬೇಕು ಅಷ್ಟೇ.. ಒಂದು ಸಿಕ್ಸ್ ಹೋಗುತ್ತೆ ಇಲ್ಲ ಸೋಲ್ತಿವಿ ಅಷ್ಟೆ ಎನ್ನುತ್ತಾ ಎಂಥದ್ದೆ ಕೆಲಸಗಳಿಗೂ ಕೈ ಹಾಕಲು ಸಿದ್ದರಿರುವ ಸನ್ನಿ ಮತ್ತು ಫಿರೋಜ್‌ ತಮಗರಿವಿರದಂತೆಯೇ ಅಂತಾರಾಷ್ಟ್ರೀಯ ಖೋಟಾ ನೋಟಿನ ಮಾಫಿಯಾದ ಭಾಗವಾಗುತ್ತಾರೆ. ಮನ್ಸೂರ್ ದಲಾಲ್ ಮತ್ತು ಅವರು ಸೇರಿ ಭಾರತಕ್ಕೆ ಸಾವಿರಾರು ಕೋಟಿ ರೂ. ಖೋಟಾ ತರುವ ಪ್ರಯತ್ನ ಮಾಡುತ್ತಾರೆ. ಈ ಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆಯೇ ಅಥವಾ ಅವರನ್ನು ಹೀರೋ ಮೈಖಲ್ ಹಿಡಿದು ಎಡೆಮುರಿ ಕಟ್ಟುತ್ತಾರೆಯೇ ಎಂಬುದನ್ನು ನೀವು ಈ ವೆಬ್ ಸೀರಿಸ್ ನೋಡಿಯೇ ಅರ್ಥಮಾಡಕೊಳ್ಳಬೇಕು.

“ಬಂಡಾಯ ಮತ್ತು ಕ್ರಾಂತಿ ಪದಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಸೋತವರನ್ನು ಬಂಡಾಯಗಾರರು ಅಂತ ಕರೆಯುತ್ತಾರೆ. ಗೆದ್ದವರನ್ನು ಕ್ರಾಂತಿಕಾರಿ ಅನ್ನುತ್ತಾರೆ. ಆದರೆ ಯಾವಾಗಲೂ ಗೆದ್ದವರಷ್ಟೆ ಇತಿಹಾಸ ಬರೆಯುತ್ತಾರೆ. ಹಾಗಾಗಿ ನಾವು ಒಳಗಿನ ಕ್ರಾಂತಿನ ಶಾಶ್ವತವಾಗಿ ಜೀವಂತವಾಗಿ ಉಳಿಸಿಕೊಳ್ಳಬೇಕು” ಎಂಬ ಡೈಲಾಗ್ ಮಾಧವ್ ಹೇಳುತ್ತಿದ್ದರೆ, “ಪ್ರತಿಯೊಬ್ಬರಲ್ಲಿಯೂ ದುಷ್ಟತನವಿರುತ್ತದೆ, ಅದು ಹೊರಬರಲು ಸಮಯ ಕಾಯುತ್ತಿರುತ್ತದೆ” ಎನ್ನುವ ಮೂಲಕ ಸನ್ನಿ ತನ್ನ ಕೆಲಸಗಳಿಗೆ ಸಮರ್ಥನೆ ಕೊಟ್ಟುಕೊಳ್ಳುವಂತಹ ಡೈಲಾಗ್‌ಗಳು ಮನಸ್ಸಿನಲ್ಲಿ ಉಳಿಯುತ್ತವೆ.

ಮೈಖಲ್ ಹೆಂಡತಿ ಮತ್ತು ಕುಟುಂಬಕ್ಕೆ ಸಮಯ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುವುದು, ಅದಕ್ಕೆ ಕೆಲಸದ ಒತ್ತಡ ಮತ್ತು ದೇಶಭಕ್ತಿಯ ನೆಪ ಹೇಳುವುದು, ಸದಾ ಏನನ್ನಾದರೂ ಕುಡಿದಿರು ಎಂಬ ಬೋದಿಲೇರ್‌ರವರ ಆಶಯವನ್ನು ಅವರು ಈ ಚಿತ್ರದಲ್ಲಿ ಈಡೇರಿಸುತ್ತಾರೆ. ಒಟ್ಟಾರೆಯಾಗಿ Raj & DK ಜೋಡಿ ಒಮ್ಮೆ ನೋಡಬಹುದಾದ ವೆಬ್ ಸೀರಿಸ್ ಮೂಲಕ ಮತ್ತೆ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸೀಸನ್‌ಗಾಗಿ ಕಾಯುವಂತೆ ಮಾಡಿದ್ದಾರೆ. ಈ ವೆಬ್ ಸೀರಿಸ್ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಿಂದಿಯಲ್ಲಿ ತೆರೆಕಂಡಿರುವ ಈ ಸೀರೀಸ್‌ ಕನ್ನಡಕ್ಕೂ ಡಬ್‌ ಆಗಿದೆ.

ಇದನ್ನೂ ಓದಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...