Homeಮುಖಪುಟಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

- Advertisement -
- Advertisement -

ನಾವು ಪ್ರಪಂಚದ ಅತಿ ಪ್ರಾಮಾಣಿಕ ವ್ಯಕ್ತಿಯ ಫೋಟೊನಾ ಅತ್ಯಂತ ಭ್ರಷ್ಟ ವಸ್ತುವಿನ ಮೇಲೆ ಹಾಕಿದ್ದೀವಿ. ದುಡ್ಡನ್ನು ಉಳಿಸಿ ಯಾರಾದ್ರೂ ಶ್ರೀಮಂತರಾಗಿದ್ದಾರ? ಮರ್ಯಾದೆ ಅನ್ನುವುದು ಮಿಡಲ್ ಕ್ಲಾಸ್ ಜನರ ಕೈಗೆಟುಕದ ವಸ್ತು. ಅವರು ಇಡೀ ಜೀವನ ಸಾಲದಲ್ಲಿಯೇ ಮುಳುಗಿ ಸಾಲದಲ್ಲಿಯೇ ಸತ್ತು ಹೋಗುತ್ತದೆ. ಎಜುಕೇಶನ್ ಲೋನ್, ಕೆಲಸ ಸಿಕ್ಕರೆ ಬೈಕ್ ಲೋನ್, ಪ್ರಮೋಷನ್ ಸಿಕ್ಕರೆ ಕಾರ್ ಲೋನ್, ಮದುವೆ ಆದರೆ ಅದಕ್ಕೂ ಲೋನ್, ಆನಂತರ ಮಕ್ಕಳ ಎಜುಕೇಶನ್ ಲೋನ್, ಹೋಮ್ ಲೋನ್ ಹೀಗೆ… ಮದುವೆ ಮುರಿದು ಹೋದ್ರು ಲೋನ್ ಮಾತ್ರ ಮುಂದುವರೆಯುತ್ತಿರುತ್ತದೆ… ಒಟ್ನಲ್ಲಿ ನಾವು ಮಿಡಲ್ ಕ್ಲಾಸ್ ಅಲ್ಲ, ಬದಲಿಗೆ ಮಿಡಲ್ ಫಿಂಗರ್ ಕ್ಲಾಸ್…

ಹೀಗೆ ಬಹುತೇಕ ಜನರಿಗೆ ಅಪೀಲ್ ಆಗುವ ಡೈಲಾಗ್‌ಗಳ ಮೂಲಕ ಗಮನ ಸೆಳೆದ ವೆಬ್ ಸೀರಿಸ್ ಫರ್ಜಿ. ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್ ಇದಾಗಿದ್ದು, ಈ ಮೂಲಕ ವಿಜಯ್ ಸೇತುಪತಿ ಮತ್ತು ಶಾಹಿದ್ ಕಪೂರ್ ಭರ್ಜರಿಯಾಗಿ ಓಟಿಟಿ ಪ್ರವೇಶಿಸಿದ್ದಾರೆ. Raj & DK ಜೋಡಿ ಫ್ಯಾಮಿಲಿ ಮ್ಯಾನ್-1 ರಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಕಥಹಂದರ ಹೊಂದಿತ್ತು. ಫ್ಯಾಮಿಲಿ ಮ್ಯಾನ್ -2ರಲ್ಲಿ ಎಲ್‌ಟಿಟಿಇ ಸಂಘಟನೆಯ ಕುರಿತು ಚಿತ್ರಿಸಲಾಗಿತ್ತು. ಈಗ ಫರ್ಜಿಯಲ್ಲಿ ಖೋಟಾ ನೋಟುಗಳ ಕರಾಳ ಲೋಕ ತೆರೆದಿಡಲು ರಾಜ್ ಮತ್ತು ಡಿಕೆ ಜೋಡಿ ಯತ್ನಿಸಿದೆ.

ಅತ್ಯುತ್ತಮ ಚಿತ್ರ ಕಲಾವಿದ್ ಸನ್ನಿ (ಶಾಹಿದ್ ಕಪೂರ್) ಅವರ ಸ್ನೇಹಿತ ಕಂ ಸಹೋದರ ಫಿರೋಜ್ (ಭುವನ್ ಅರೋರಾ) ಜೊತೆ ಸೇರಿ ತನ್ನ ತಾತ ಮಾಧವ್‌ (ಅಮೋಲ್ ಪಾಲೇಕರ್) ರವರ ‘ಕ್ರಾಂತಿ ಪತ್ರಿಕೆ’ ಮತ್ತು ಪ್ರಿಂಟಿಂಗ್ ಪ್ರೆಸ್ ಅನ್ನು ಉಳಿಸಿಕೊಳ್ಳಲು ದಾರಿ ಕಾಣದಿದ್ದಾಗ ತನ್ನ ಪ್ರತಿಭೆ ಬಳಸಿ ಖೋಟಾ ನೋಟು ಮುದ್ರಿಸಲು ಮುಂದಾಗುತ್ತಾನೆ. ಮೊದಲು ಪ್ರೆಸ್ ಉಳಿಸಲು ಸಾಲ ತೀರಿಸುವುದಕ್ಕಾಗಿ, ಆನಂತರ ಮನೆ – ಕಾರು ಕೊಳ್ಳುವುದಕ್ಕಾಗಿ, ಆನಂತರ ಇದೇ ಕೊನೆ ಸಲ ಎಂದುಕೊಂಡು, ಆಮೇಲೆ ಸಂದರ್ಭದ ಒತ್ತಡಗಳಿಗೆ ಒಳಗಾಗಿ ಸನ್ನಿ ಮತ್ತು ಆತನ ಸ್ನೇಹಿತ ಅಂತಾರಾಷ್ಟ್ರೀಯ ಖೋಟಾ ನೋಟು ಜಾಲದ ಭಾಗವಾಗುವುದು, ಈ ಜಾಲ ಬೇಧಿಸಲು ಮೈಖಲ್ (ವಿಜಯ್ ಸೇತುಪತಿ) ಮತ್ತು ಅವರ ಸಹೋದ್ಯೋಗಿ ಮೇಘಾ (ರಾಶಿ ಖನ್ನಾ) ಮುಂದಾಗುವುದು ಇಡೀ 8 ಎಪಿಸೋಡ್‌ಗಳ ವೆಬ್‌ ಸಿರೀಸ್‌ನ ಎಳೆ. ಆದರೆ ಮನುಷ್ಯ ಕೇವಲ ಆಹಾರ-ಮೈಥುನಗಳಿಗಷ್ಟೇ ಬದುಕುವುದಿಲ್ಲವಲ್ಲ. ಹಾಗಾಗಿ ಪ್ರತಿಯೊಂದು ಪಾತ್ರಗಳಿಗೂ ಅವರದೇ ಆದ ಪ್ಯಾಷನ್‌ಗಳಿವೆ. ಮೈಖಲ್‌ಗೆ ಖೋಟಾ ನೋಟಿನ ಕಿಂಗ್ ಪಿನ್ ಮನ್ಸೂರ್ ದಲಾಲ್‌ (ಕೆ.ಕೆ ಮೆನನ್) ಮೇಲಿನ ವಯಕ್ತಿಕ ಹಗೆತನ, ಮೇಘಾಳಿಗೆ ತಾನೊಬ್ಬ ಪ್ರೊಫೆಷನಲ್ ಕೆಲಸಗಾರ್ತಿ ಎನ್ನಿಸಿಕೊಳ್ಳುವ ಹಂಬಲ, ಮಾಧವ್‌ಗೆ ಜನರನ್ನು ಕ್ರಾಂತಿಗೆ ಕರೆತರುವ ಹುಚ್ಚು. ಒಂದು ಕಡೆ ತಾತನ ಆಸೆ ಮತ್ತು ತಮ್ಮ ಜೀವನದ ಮಹತ್ವಾಕಾಂಕ್ಷೆ ಸನ್ನಿ, ಫಿರೋಜ್‌ರವರದು. ಎಲ್ಲರ ಪಾತ್ರ ಪೋಷಣೆಯಲ್ಲಿ Raj & DK ಜೋಡಿ ಎಚ್ಚರಿಕೆ ವಹಿಸಿದೆ. ಹಾಗಾಗಿಯೇ ಸಿರೀಸ್ ಎಲ್ಲಾ ಎಪಿಸೋಡ್‌ಗಳನ್ನು ನೋಡಿಸಿಕೊಳ್ಳುತ್ತದೆ.

ನಮ್ಮ ಪ್ರಧಾನಿಯವರು 2016ರಲ್ಲಿ ಖೋಟಾ ನೋಟುಗಳ ಜಾಲವನ್ನು ಮುರಿಯುತ್ತೇನೆಂದು ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇನೆಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯೀಕರಣ ಮಾಡಿದರು. ಆದರೆ ಖೋಟಾ ನೋಟುಗಳು ನಿಂತಿವೆಯೇ? ಭಯೋತ್ಪಾದನೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಈ ಸೀರಿಸ್ ನೋಡುವವರಿಗೆ ಎದುರಾಗುತ್ತದೆ. ಖೋಟಾ ನೋಟುಗಳ ಅಪಾಯದ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಒಂದು ವೇಳೆ ಖೋಟಾ ನೋಟು ವಹಿವಾಟು ನಡೆಸುವ ದೊಡ್ಡ ದಂಧೆಕೋರರು ಸಿಕ್ಕಿಬಿದ್ದರೆ ಆ ಕ್ರೆಡಿಟ್ ಅನ್ನು ತಮ್ಮ ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಹಪಾಹಪಿಯಲ್ಲಿ ಈ ಚಿತ್ರದಲ್ಲಿ ಮೂಡಿಬಂದಿದೆ.

ಚಿತ್ರದಲ್ಲಿ ಗುಜರಾತಿನ ಶಾಸಕ ಖೋಟಾ ನೋಟಿನ ದಂಧೆ ನಡೆಸುವುದು, ಬೇರೆ ದೇಶಗಳಿಂದ ಅಲ್ಲಿನ ಬಂದರುಗಳಿಗೆ ಖೋಟಾ ನೋಟುಗಳು ಬರುವುದು, ವಿರೋಧ ಪಕ್ಷದವರ ಮೇಲೆ ಸಿಬಿಐ ದಾಳಿ ನಡೆಸುವುದು ಮುಂತಾದ ಅಂಶಗಳನ್ನು ‘ಪ್ರಜ್ಞಾಪೂರ್ವಕವಾಗಿ’ ತಂದಿದ್ದಾರೆ ಅನ್ನಿಸುತ್ತದೆ.

ಕೊನೆ ಬಾಲ್‌ನಲ್ಲಿ 6 ರನ್ ಬೇಕಿದ್ದಾಗ ಆ ಶಾಟ್‌ನಲ್ಲಿ ಸರಿ, ತಪ್ಪು ಅಂತ ಇರೋಲ್ಲ, ಬರೀ ಬಾರಿಸಬೇಕು ಅಷ್ಟೇ.. ಒಂದು ಸಿಕ್ಸ್ ಹೋಗುತ್ತೆ ಇಲ್ಲ ಸೋಲ್ತಿವಿ ಅಷ್ಟೆ ಎನ್ನುತ್ತಾ ಎಂಥದ್ದೆ ಕೆಲಸಗಳಿಗೂ ಕೈ ಹಾಕಲು ಸಿದ್ದರಿರುವ ಸನ್ನಿ ಮತ್ತು ಫಿರೋಜ್‌ ತಮಗರಿವಿರದಂತೆಯೇ ಅಂತಾರಾಷ್ಟ್ರೀಯ ಖೋಟಾ ನೋಟಿನ ಮಾಫಿಯಾದ ಭಾಗವಾಗುತ್ತಾರೆ. ಮನ್ಸೂರ್ ದಲಾಲ್ ಮತ್ತು ಅವರು ಸೇರಿ ಭಾರತಕ್ಕೆ ಸಾವಿರಾರು ಕೋಟಿ ರೂ. ಖೋಟಾ ತರುವ ಪ್ರಯತ್ನ ಮಾಡುತ್ತಾರೆ. ಈ ಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆಯೇ ಅಥವಾ ಅವರನ್ನು ಹೀರೋ ಮೈಖಲ್ ಹಿಡಿದು ಎಡೆಮುರಿ ಕಟ್ಟುತ್ತಾರೆಯೇ ಎಂಬುದನ್ನು ನೀವು ಈ ವೆಬ್ ಸೀರಿಸ್ ನೋಡಿಯೇ ಅರ್ಥಮಾಡಕೊಳ್ಳಬೇಕು.

“ಬಂಡಾಯ ಮತ್ತು ಕ್ರಾಂತಿ ಪದಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಸೋತವರನ್ನು ಬಂಡಾಯಗಾರರು ಅಂತ ಕರೆಯುತ್ತಾರೆ. ಗೆದ್ದವರನ್ನು ಕ್ರಾಂತಿಕಾರಿ ಅನ್ನುತ್ತಾರೆ. ಆದರೆ ಯಾವಾಗಲೂ ಗೆದ್ದವರಷ್ಟೆ ಇತಿಹಾಸ ಬರೆಯುತ್ತಾರೆ. ಹಾಗಾಗಿ ನಾವು ಒಳಗಿನ ಕ್ರಾಂತಿನ ಶಾಶ್ವತವಾಗಿ ಜೀವಂತವಾಗಿ ಉಳಿಸಿಕೊಳ್ಳಬೇಕು” ಎಂಬ ಡೈಲಾಗ್ ಮಾಧವ್ ಹೇಳುತ್ತಿದ್ದರೆ, “ಪ್ರತಿಯೊಬ್ಬರಲ್ಲಿಯೂ ದುಷ್ಟತನವಿರುತ್ತದೆ, ಅದು ಹೊರಬರಲು ಸಮಯ ಕಾಯುತ್ತಿರುತ್ತದೆ” ಎನ್ನುವ ಮೂಲಕ ಸನ್ನಿ ತನ್ನ ಕೆಲಸಗಳಿಗೆ ಸಮರ್ಥನೆ ಕೊಟ್ಟುಕೊಳ್ಳುವಂತಹ ಡೈಲಾಗ್‌ಗಳು ಮನಸ್ಸಿನಲ್ಲಿ ಉಳಿಯುತ್ತವೆ.

ಮೈಖಲ್ ಹೆಂಡತಿ ಮತ್ತು ಕುಟುಂಬಕ್ಕೆ ಸಮಯ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುವುದು, ಅದಕ್ಕೆ ಕೆಲಸದ ಒತ್ತಡ ಮತ್ತು ದೇಶಭಕ್ತಿಯ ನೆಪ ಹೇಳುವುದು, ಸದಾ ಏನನ್ನಾದರೂ ಕುಡಿದಿರು ಎಂಬ ಬೋದಿಲೇರ್‌ರವರ ಆಶಯವನ್ನು ಅವರು ಈ ಚಿತ್ರದಲ್ಲಿ ಈಡೇರಿಸುತ್ತಾರೆ. ಒಟ್ಟಾರೆಯಾಗಿ Raj & DK ಜೋಡಿ ಒಮ್ಮೆ ನೋಡಬಹುದಾದ ವೆಬ್ ಸೀರಿಸ್ ಮೂಲಕ ಮತ್ತೆ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸೀಸನ್‌ಗಾಗಿ ಕಾಯುವಂತೆ ಮಾಡಿದ್ದಾರೆ. ಈ ವೆಬ್ ಸೀರಿಸ್ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಿಂದಿಯಲ್ಲಿ ತೆರೆಕಂಡಿರುವ ಈ ಸೀರೀಸ್‌ ಕನ್ನಡಕ್ಕೂ ಡಬ್‌ ಆಗಿದೆ.

ಇದನ್ನೂ ಓದಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...