Homeಮುಖಪುಟಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

- Advertisement -
- Advertisement -

ನಾವು ಪ್ರಪಂಚದ ಅತಿ ಪ್ರಾಮಾಣಿಕ ವ್ಯಕ್ತಿಯ ಫೋಟೊನಾ ಅತ್ಯಂತ ಭ್ರಷ್ಟ ವಸ್ತುವಿನ ಮೇಲೆ ಹಾಕಿದ್ದೀವಿ. ದುಡ್ಡನ್ನು ಉಳಿಸಿ ಯಾರಾದ್ರೂ ಶ್ರೀಮಂತರಾಗಿದ್ದಾರ? ಮರ್ಯಾದೆ ಅನ್ನುವುದು ಮಿಡಲ್ ಕ್ಲಾಸ್ ಜನರ ಕೈಗೆಟುಕದ ವಸ್ತು. ಅವರು ಇಡೀ ಜೀವನ ಸಾಲದಲ್ಲಿಯೇ ಮುಳುಗಿ ಸಾಲದಲ್ಲಿಯೇ ಸತ್ತು ಹೋಗುತ್ತದೆ. ಎಜುಕೇಶನ್ ಲೋನ್, ಕೆಲಸ ಸಿಕ್ಕರೆ ಬೈಕ್ ಲೋನ್, ಪ್ರಮೋಷನ್ ಸಿಕ್ಕರೆ ಕಾರ್ ಲೋನ್, ಮದುವೆ ಆದರೆ ಅದಕ್ಕೂ ಲೋನ್, ಆನಂತರ ಮಕ್ಕಳ ಎಜುಕೇಶನ್ ಲೋನ್, ಹೋಮ್ ಲೋನ್ ಹೀಗೆ… ಮದುವೆ ಮುರಿದು ಹೋದ್ರು ಲೋನ್ ಮಾತ್ರ ಮುಂದುವರೆಯುತ್ತಿರುತ್ತದೆ… ಒಟ್ನಲ್ಲಿ ನಾವು ಮಿಡಲ್ ಕ್ಲಾಸ್ ಅಲ್ಲ, ಬದಲಿಗೆ ಮಿಡಲ್ ಫಿಂಗರ್ ಕ್ಲಾಸ್…

ಹೀಗೆ ಬಹುತೇಕ ಜನರಿಗೆ ಅಪೀಲ್ ಆಗುವ ಡೈಲಾಗ್‌ಗಳ ಮೂಲಕ ಗಮನ ಸೆಳೆದ ವೆಬ್ ಸೀರಿಸ್ ಫರ್ಜಿ. ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್ ಇದಾಗಿದ್ದು, ಈ ಮೂಲಕ ವಿಜಯ್ ಸೇತುಪತಿ ಮತ್ತು ಶಾಹಿದ್ ಕಪೂರ್ ಭರ್ಜರಿಯಾಗಿ ಓಟಿಟಿ ಪ್ರವೇಶಿಸಿದ್ದಾರೆ. Raj & DK ಜೋಡಿ ಫ್ಯಾಮಿಲಿ ಮ್ಯಾನ್-1 ರಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಕಥಹಂದರ ಹೊಂದಿತ್ತು. ಫ್ಯಾಮಿಲಿ ಮ್ಯಾನ್ -2ರಲ್ಲಿ ಎಲ್‌ಟಿಟಿಇ ಸಂಘಟನೆಯ ಕುರಿತು ಚಿತ್ರಿಸಲಾಗಿತ್ತು. ಈಗ ಫರ್ಜಿಯಲ್ಲಿ ಖೋಟಾ ನೋಟುಗಳ ಕರಾಳ ಲೋಕ ತೆರೆದಿಡಲು ರಾಜ್ ಮತ್ತು ಡಿಕೆ ಜೋಡಿ ಯತ್ನಿಸಿದೆ.

ಅತ್ಯುತ್ತಮ ಚಿತ್ರ ಕಲಾವಿದ್ ಸನ್ನಿ (ಶಾಹಿದ್ ಕಪೂರ್) ಅವರ ಸ್ನೇಹಿತ ಕಂ ಸಹೋದರ ಫಿರೋಜ್ (ಭುವನ್ ಅರೋರಾ) ಜೊತೆ ಸೇರಿ ತನ್ನ ತಾತ ಮಾಧವ್‌ (ಅಮೋಲ್ ಪಾಲೇಕರ್) ರವರ ‘ಕ್ರಾಂತಿ ಪತ್ರಿಕೆ’ ಮತ್ತು ಪ್ರಿಂಟಿಂಗ್ ಪ್ರೆಸ್ ಅನ್ನು ಉಳಿಸಿಕೊಳ್ಳಲು ದಾರಿ ಕಾಣದಿದ್ದಾಗ ತನ್ನ ಪ್ರತಿಭೆ ಬಳಸಿ ಖೋಟಾ ನೋಟು ಮುದ್ರಿಸಲು ಮುಂದಾಗುತ್ತಾನೆ. ಮೊದಲು ಪ್ರೆಸ್ ಉಳಿಸಲು ಸಾಲ ತೀರಿಸುವುದಕ್ಕಾಗಿ, ಆನಂತರ ಮನೆ – ಕಾರು ಕೊಳ್ಳುವುದಕ್ಕಾಗಿ, ಆನಂತರ ಇದೇ ಕೊನೆ ಸಲ ಎಂದುಕೊಂಡು, ಆಮೇಲೆ ಸಂದರ್ಭದ ಒತ್ತಡಗಳಿಗೆ ಒಳಗಾಗಿ ಸನ್ನಿ ಮತ್ತು ಆತನ ಸ್ನೇಹಿತ ಅಂತಾರಾಷ್ಟ್ರೀಯ ಖೋಟಾ ನೋಟು ಜಾಲದ ಭಾಗವಾಗುವುದು, ಈ ಜಾಲ ಬೇಧಿಸಲು ಮೈಖಲ್ (ವಿಜಯ್ ಸೇತುಪತಿ) ಮತ್ತು ಅವರ ಸಹೋದ್ಯೋಗಿ ಮೇಘಾ (ರಾಶಿ ಖನ್ನಾ) ಮುಂದಾಗುವುದು ಇಡೀ 8 ಎಪಿಸೋಡ್‌ಗಳ ವೆಬ್‌ ಸಿರೀಸ್‌ನ ಎಳೆ. ಆದರೆ ಮನುಷ್ಯ ಕೇವಲ ಆಹಾರ-ಮೈಥುನಗಳಿಗಷ್ಟೇ ಬದುಕುವುದಿಲ್ಲವಲ್ಲ. ಹಾಗಾಗಿ ಪ್ರತಿಯೊಂದು ಪಾತ್ರಗಳಿಗೂ ಅವರದೇ ಆದ ಪ್ಯಾಷನ್‌ಗಳಿವೆ. ಮೈಖಲ್‌ಗೆ ಖೋಟಾ ನೋಟಿನ ಕಿಂಗ್ ಪಿನ್ ಮನ್ಸೂರ್ ದಲಾಲ್‌ (ಕೆ.ಕೆ ಮೆನನ್) ಮೇಲಿನ ವಯಕ್ತಿಕ ಹಗೆತನ, ಮೇಘಾಳಿಗೆ ತಾನೊಬ್ಬ ಪ್ರೊಫೆಷನಲ್ ಕೆಲಸಗಾರ್ತಿ ಎನ್ನಿಸಿಕೊಳ್ಳುವ ಹಂಬಲ, ಮಾಧವ್‌ಗೆ ಜನರನ್ನು ಕ್ರಾಂತಿಗೆ ಕರೆತರುವ ಹುಚ್ಚು. ಒಂದು ಕಡೆ ತಾತನ ಆಸೆ ಮತ್ತು ತಮ್ಮ ಜೀವನದ ಮಹತ್ವಾಕಾಂಕ್ಷೆ ಸನ್ನಿ, ಫಿರೋಜ್‌ರವರದು. ಎಲ್ಲರ ಪಾತ್ರ ಪೋಷಣೆಯಲ್ಲಿ Raj & DK ಜೋಡಿ ಎಚ್ಚರಿಕೆ ವಹಿಸಿದೆ. ಹಾಗಾಗಿಯೇ ಸಿರೀಸ್ ಎಲ್ಲಾ ಎಪಿಸೋಡ್‌ಗಳನ್ನು ನೋಡಿಸಿಕೊಳ್ಳುತ್ತದೆ.

ನಮ್ಮ ಪ್ರಧಾನಿಯವರು 2016ರಲ್ಲಿ ಖೋಟಾ ನೋಟುಗಳ ಜಾಲವನ್ನು ಮುರಿಯುತ್ತೇನೆಂದು ಮತ್ತು ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇನೆಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯೀಕರಣ ಮಾಡಿದರು. ಆದರೆ ಖೋಟಾ ನೋಟುಗಳು ನಿಂತಿವೆಯೇ? ಭಯೋತ್ಪಾದನೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಈ ಸೀರಿಸ್ ನೋಡುವವರಿಗೆ ಎದುರಾಗುತ್ತದೆ. ಖೋಟಾ ನೋಟುಗಳ ಅಪಾಯದ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಒಂದು ವೇಳೆ ಖೋಟಾ ನೋಟು ವಹಿವಾಟು ನಡೆಸುವ ದೊಡ್ಡ ದಂಧೆಕೋರರು ಸಿಕ್ಕಿಬಿದ್ದರೆ ಆ ಕ್ರೆಡಿಟ್ ಅನ್ನು ತಮ್ಮ ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುವ ಹಪಾಹಪಿಯಲ್ಲಿ ಈ ಚಿತ್ರದಲ್ಲಿ ಮೂಡಿಬಂದಿದೆ.

ಚಿತ್ರದಲ್ಲಿ ಗುಜರಾತಿನ ಶಾಸಕ ಖೋಟಾ ನೋಟಿನ ದಂಧೆ ನಡೆಸುವುದು, ಬೇರೆ ದೇಶಗಳಿಂದ ಅಲ್ಲಿನ ಬಂದರುಗಳಿಗೆ ಖೋಟಾ ನೋಟುಗಳು ಬರುವುದು, ವಿರೋಧ ಪಕ್ಷದವರ ಮೇಲೆ ಸಿಬಿಐ ದಾಳಿ ನಡೆಸುವುದು ಮುಂತಾದ ಅಂಶಗಳನ್ನು ‘ಪ್ರಜ್ಞಾಪೂರ್ವಕವಾಗಿ’ ತಂದಿದ್ದಾರೆ ಅನ್ನಿಸುತ್ತದೆ.

ಕೊನೆ ಬಾಲ್‌ನಲ್ಲಿ 6 ರನ್ ಬೇಕಿದ್ದಾಗ ಆ ಶಾಟ್‌ನಲ್ಲಿ ಸರಿ, ತಪ್ಪು ಅಂತ ಇರೋಲ್ಲ, ಬರೀ ಬಾರಿಸಬೇಕು ಅಷ್ಟೇ.. ಒಂದು ಸಿಕ್ಸ್ ಹೋಗುತ್ತೆ ಇಲ್ಲ ಸೋಲ್ತಿವಿ ಅಷ್ಟೆ ಎನ್ನುತ್ತಾ ಎಂಥದ್ದೆ ಕೆಲಸಗಳಿಗೂ ಕೈ ಹಾಕಲು ಸಿದ್ದರಿರುವ ಸನ್ನಿ ಮತ್ತು ಫಿರೋಜ್‌ ತಮಗರಿವಿರದಂತೆಯೇ ಅಂತಾರಾಷ್ಟ್ರೀಯ ಖೋಟಾ ನೋಟಿನ ಮಾಫಿಯಾದ ಭಾಗವಾಗುತ್ತಾರೆ. ಮನ್ಸೂರ್ ದಲಾಲ್ ಮತ್ತು ಅವರು ಸೇರಿ ಭಾರತಕ್ಕೆ ಸಾವಿರಾರು ಕೋಟಿ ರೂ. ಖೋಟಾ ತರುವ ಪ್ರಯತ್ನ ಮಾಡುತ್ತಾರೆ. ಈ ಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆಯೇ ಅಥವಾ ಅವರನ್ನು ಹೀರೋ ಮೈಖಲ್ ಹಿಡಿದು ಎಡೆಮುರಿ ಕಟ್ಟುತ್ತಾರೆಯೇ ಎಂಬುದನ್ನು ನೀವು ಈ ವೆಬ್ ಸೀರಿಸ್ ನೋಡಿಯೇ ಅರ್ಥಮಾಡಕೊಳ್ಳಬೇಕು.

“ಬಂಡಾಯ ಮತ್ತು ಕ್ರಾಂತಿ ಪದಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಸೋತವರನ್ನು ಬಂಡಾಯಗಾರರು ಅಂತ ಕರೆಯುತ್ತಾರೆ. ಗೆದ್ದವರನ್ನು ಕ್ರಾಂತಿಕಾರಿ ಅನ್ನುತ್ತಾರೆ. ಆದರೆ ಯಾವಾಗಲೂ ಗೆದ್ದವರಷ್ಟೆ ಇತಿಹಾಸ ಬರೆಯುತ್ತಾರೆ. ಹಾಗಾಗಿ ನಾವು ಒಳಗಿನ ಕ್ರಾಂತಿನ ಶಾಶ್ವತವಾಗಿ ಜೀವಂತವಾಗಿ ಉಳಿಸಿಕೊಳ್ಳಬೇಕು” ಎಂಬ ಡೈಲಾಗ್ ಮಾಧವ್ ಹೇಳುತ್ತಿದ್ದರೆ, “ಪ್ರತಿಯೊಬ್ಬರಲ್ಲಿಯೂ ದುಷ್ಟತನವಿರುತ್ತದೆ, ಅದು ಹೊರಬರಲು ಸಮಯ ಕಾಯುತ್ತಿರುತ್ತದೆ” ಎನ್ನುವ ಮೂಲಕ ಸನ್ನಿ ತನ್ನ ಕೆಲಸಗಳಿಗೆ ಸಮರ್ಥನೆ ಕೊಟ್ಟುಕೊಳ್ಳುವಂತಹ ಡೈಲಾಗ್‌ಗಳು ಮನಸ್ಸಿನಲ್ಲಿ ಉಳಿಯುತ್ತವೆ.

ಮೈಖಲ್ ಹೆಂಡತಿ ಮತ್ತು ಕುಟುಂಬಕ್ಕೆ ಸಮಯ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುವುದು, ಅದಕ್ಕೆ ಕೆಲಸದ ಒತ್ತಡ ಮತ್ತು ದೇಶಭಕ್ತಿಯ ನೆಪ ಹೇಳುವುದು, ಸದಾ ಏನನ್ನಾದರೂ ಕುಡಿದಿರು ಎಂಬ ಬೋದಿಲೇರ್‌ರವರ ಆಶಯವನ್ನು ಅವರು ಈ ಚಿತ್ರದಲ್ಲಿ ಈಡೇರಿಸುತ್ತಾರೆ. ಒಟ್ಟಾರೆಯಾಗಿ Raj & DK ಜೋಡಿ ಒಮ್ಮೆ ನೋಡಬಹುದಾದ ವೆಬ್ ಸೀರಿಸ್ ಮೂಲಕ ಮತ್ತೆ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸೀಸನ್‌ಗಾಗಿ ಕಾಯುವಂತೆ ಮಾಡಿದ್ದಾರೆ. ಈ ವೆಬ್ ಸೀರಿಸ್ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಿಂದಿಯಲ್ಲಿ ತೆರೆಕಂಡಿರುವ ಈ ಸೀರೀಸ್‌ ಕನ್ನಡಕ್ಕೂ ಡಬ್‌ ಆಗಿದೆ.

ಇದನ್ನೂ ಓದಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...