Homeಅಂಕಣಗಳುಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

ಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 07/ ಜಾಗತಿಕ ಸಿನಿಮಾ/ ಗ್ರೀಸ್/ ಪಾನೋಸ್ ಕೌತ್ರಾಸ್

ಕ್ಸೇನಿಯಾ (2014): ಕ್ಸೇನಿಯಾ ಎಂದರೆ ಗ್ರೀಕ್ ಪುರಾಣಗಳ ಪ್ರಕಾರ ಅತಿಥಿದೇವೋಭವ. ದೂರದೂರಿನಿಂದ ಬಂದ ಎಲ್ಲರಿಗೂ ಅವರ ಕುರಿತಾಗಿ ಯಾವುದೇ ಪ್ರಶ್ನೆಗಳನ್ನು ಕೇಳದೆ, ಊಟ, ವಸತಿ ಮತ್ತು ರಕ್ಷಣೆಯನ್ನು ಒದಗಿಸಿಬೇಕು ಎಂಬ ಮತ್ತು ಅವರ ನಂಬಿಕೆಯ ಪ್ರಕಾರ ಅತಿಥಿಗಳ ರೂಪದಲ್ಲಿ ದೇವರೇ ಬಂದಿರಬಹುದೆಂಬ ಪದ್ದತಿ.

ತಾಯಿ ಅಲ್ಬೇನಿಯನ್, ತಂದೆ ಗ್ರೀಸಿಗ. ಅವರ ಇಬ್ಬರೂ ಮಕ್ಕಳು ಅತಿ ಸಣ್ಣವರಿದ್ದಾಗಲೇ ತಂದೆ ಅವರನ್ನು ಬಿಟ್ಟು ಗ್ರೀಸಿಗೆ ಬಂದುಬಿಟ್ಟಿರುತ್ತಾನೆ. ಅತಿಯಾದ ಮದ್ಯಪಾನದಿಂದ ತಾಯಿ ತೀರಿಕೊಂಡ ನಂತರ, ಹದಿನೈದು ವರ್ಷಗಳ ಸಲಿಂಗಿ ಬಾಲಕ (ಮಕ್ಕಳಲ್ಲಿ ಒಬ್ಬ) ಗ್ರೀಸಿಗೆ ಬರುತ್ತಾನೆ. ಈಗಾಗಲೇ ಅವನ ಅಣ್ಣ ಹತ್ತೊಂಬರ ಯುವಕ ಗ್ರೀಸಿನ ರೆಸ್ಟರೆಂಟೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ, ಇವರಿಬ್ಬರೂ ಸೇರಿ ತಂದೆಯನ್ನು ಹುಡುಕುವ ಪ್ರಯಾಣವೇ ಈ ಸಿನಿಮಾದ ಕಥಾನಕ.

ಹದಿನೈದು ವರ್ಷಗಳ ಸಲಿಂಗಿ ಹುಡುಗ ಅತಿ ಸಣ್ಣ ಮಗುವಿನಂತೆ ಸದಾ ಲಾಲಿಪಾಪ್ ಚೀಪುತ್ತಿರುತ್ತಾನೆ. ತನ್ನ ಹಾವ ಭಾವಗಳು ಮತ್ತು ತೊಡುವ ಬಟ್ಟೆಗಳಲ್ಲೇ ತನ್ನ ಲೈಂಗಿಕ ಮನೋಧರ್ಮವನ್ನು ಪ್ರದರ್ಶಿಸುತ್ತಿರುತ್ತಾನೆ. ಮೊದಮೊದಲು ಅಣ್ಣ ತನ್ನ ತಮ್ಮನ ನಡತೆಯಿಂದ ಮುಜುಗರಗೊಂಡರೂ, ಅವನನ್ನು ಪ್ರೀತಿಸುತ್ತಾನೆ.

ಕ್ಸೇನಿಯಾ (2014)

ಇವರಿಬ್ಬರ ತಾಯಿ ಉತ್ತಮ ಗಾಯಕಿಯಾಗಿರುತ್ತಾಳೆ. ಅವಳ ಧ್ವನಿ ಇವರಿಬ್ಬರಿಗೂ ಬಂದಿದೆ ಎಂದೆಣೆಸಿ, ಇಬ್ಬರೂ ಸೇರಿ ಟಿವಿ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲಲೇಬೇಕೆಂದುಕೊಳ್ಳುತ್ತಾರೆ. ಈ ಸ್ಪರ್ಧೆಯನ್ನು ಗೆದ್ದರೆ ಅವರಿಗೆ ದುಡ್ಡು ಸಿಗುತ್ತೆ ಹಾಗೂ ತಂದೆಯನ್ನು ಹುಡುಕಿ ಗ್ರೀಸಿನ ಪೌರತ್ವ ಪಡೆಯುವುದೇ ಮೂಲಗುರಿಯಾಗಿರುತ್ತದೆ.

ಸಿನಿಮಾದ ಮೊದಲ ಫ್ರೇಮಿನಿಂದಲೂ ಸಣ್ಣ ಮಗ ಅವನ ಜೊತೆಯಲ್ಲಿ ಮೊಲವೊಂದನ್ನು ಸಾಕುತ್ತಿರುವುದನ್ನು ತೋರಿಸುತ್ತಾರೆ. ಗ್ರೀಸಿನ ’ಗೇ’ಕ್ಲಬಿನಲ್ಲಿ ತಮ್ಮನ ಗಲಾಟೆಯಿಂದ ಅಣ್ಣ ಪೊಲೀಸ್ ಸ್ಟೇಷನ್ನಿಗೆ ಹೋಗಬೇಕಾಗುತ್ತದೆ. ಅಲ್ಲಿ ಪೊಲೀಸರು ವಲಸಿಗರ ಮೇಲೆ ವಿನಾ ಕಾರಣ ದೌರ್ಜನ್ಯ ನಡೆಸುವ ಮನಕಲಕುವ ದೃಶ್ಯವೂ ಇದೆ.

ಹಾಗೆಯೇ ತನ್ನ ತಮ್ಮನನ್ನು ನೋಡಿ ಕೆಲ ಹುಡುಗರು ಗೇಲಿ ಮಾಡಿದಾಗ, ಅವರಿಗೆ ಭಯಪಡದೇ ಧೈರ್ಯವಾಗಿ ಅವರೊಂದಿಗೆ ಜಗಳಕ್ಕೆ ಇಳಿಯುತ್ತಾನೆ. ಈ ಸಮಯದಲ್ಲಿ ತಮ್ಮ ಅವನ ಬ್ಯಾಗಿನಿಂದ ಪಿಸ್ತೂಲನ್ನ ಹೊರತೆಗೆದು ಹುಡುಗರತ್ತ ಗುಂಡು ಹಾರಿಸುತ್ತಾನೆ. ಇದರಿಂದ ಒಬ್ಬ ಹುಡುಗನೊಬ್ಬನಿಗೆ ಪೆಟ್ಟಾಗುತ್ತದೆ. ಈ ಭಯದಿಂದ ಇವರಿಬ್ಬರೂ ಕಾಡಿನಂತಿರುವ ಜಾಗದಲ್ಲಿ ಅವಿತು ಕುಳಿತಿರುತ್ತಾರೆ. ಇಲ್ಲಿ ಅಣ್ಣ-ತಮ್ಮಂದಿರ ನಡುವಿನ ಸಂಬಂಧ ಗಾಢವಾಗುತ್ತದೆ.

ತಮ್ಮನ ದೃಷ್ಟಿಕೋನದಿಂದ ಸಿನಿಮಾ ಕಥೆ ಚಿತ್ರಿತವಾಗುವಾಗ, ಜೀವಂತವಾಗಿರುವ ಮೊಲ ಕೇವಲ ಬೊಂಬೆ ಎಂಬುದನ್ನು ಕಾಣಬಹುದು. ಬಹುಶಃ ಹುಡುಗನ ಖುಷಿಯನ್ನು ಭ್ರಮೆಯೆಂದು ಸಂಕೇತಿವಾಗಿ ಬೊಂಬೆಯಲ್ಲಿ ನಿರ್ದೇಶಕ ತೋರಿಸುತ್ತಿದ್ದಾರೆ.

ಕೊನೆಗೆ ಅವರ ತಂದೆಯನ್ನು ಹುಡುಕಿ ಅವನ ಮುಂದೆ ಪಿಸ್ತೂಲನ್ನಿಟ್ಟು ಸತ್ಯಾಸತ್ಯತೆಗಳನ್ನು ಕೇಳಿದಾಗ, ಅವನಿಗೆ ಇಲ್ಲೊಂದು ಕುಟುಂಬವಿರುತ್ತದೆ. ತಮ್ಮನ ಉದ್ರೇಕವನ್ನು ಅಣ್ಣ ತಡೆದು ಸಮಾಧಾನ ಮಾಡಿ ಅಲ್ಲಿಂದ ಮುಂದೆ ಸಾಗುತ್ತಾ, ಅಲೆಮಾರಿಗಳಾಗಿ ಮುಂದೆ ಹೋಗುವುದರಲ್ಲಿ ಸಿನಿಮಾ ಅಂತ್ಯವಾಗುತ್ತದೆ.

ಈ ಸಿನಿಮಾದಲ್ಲಿ ಹದಿಹರೆಯುವ ವಯಸ್ಸಿನಲ್ಲಿ ಕಾಣುವ ಸ್ಕಿಝೋಪ್ರೇನಿಯಾ, ಅಲ್ಬೇನಿಯನ್ ಮತ್ತು ಗ್ರೀಸ್ ದೇಶಗಳ ನಡುವಿನ ವಲಸಿಗರ ನೋವನ್ನು, ಸಮಾಜದಲ್ಲಿ ಗಾಢಾವಾಗಿರುವ ’ಹೋಮೊಫೋಬಿಯಾ’ವನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಅತಿಥಿದೇವೊಭವ ಎಂದು ಹೇಳಿದರೂ, ಬೇರೆ ಭಾಷೆಯವರು ಅಥವಾ ದೇಶದವರು ಬಂದೊಡನೆ ಅವರನ್ನು ಹೊರಗೆ ತಳ್ಳಲು ಮತ್ತು ಶತ್ರುಗಳಂತೆ ನೋಡುವ ದ್ವಂದ್ವ ಮತ್ತು ವಿರೋಧಾಭಾಸವನ್ನು ನಿರ್ದೇಶಕ ಕಟ್ಟಿಕೊಟ್ಟಿದ್ದಾನೆ.

ಸ್ಟ್ರೆಲ್ಲಾ (2009): ಸತತ ಹದಿನೈದು ವರ್ಷಗಳ ಜೈಲು ಶಿಕ್ಷೆಯ ನಂತರ ಹೊರ ಬಂದ ಯೊರ್ಗೊಸ್ ಐವತ್ತರ ಗಂಡಸ್ಸು. ಹೊರಗೆ ಬಂದು ಬದಲಾದ ಜಗತ್ತಿಗೆ ಹೊಂದಿಕೊಳ್ಳುತ್ತಾ, ತಿಳಿದವರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುವ ಸಮಯದಲ್ಲಿ, ಅವನು ತಂಗಿದ್ದ ಹೋಟಿಲಿನಲ್ಲಿ ಯುವ ಟ್ರಾನ್ಸ್‌ಜೆಂಡರ್ ಒಬ್ಬರ ಪರಿಚಯವಾಗುತ್ತದೆ. ಅವಳ ಸೌಂದರ್ಯಕ್ಕೆ ಮರುಳಾದ ಯೊರ್ಗೊಸ್ ಕೂಡಲೇ ಲೈಂಗಿಕ ಸಂಪರ್ಕವನ್ನು ಸಾಧಿಸುತ್ತಾನೆ. ಆ ಟ್ರಾನ್ಸ್‌ಜೆಂಡರ್ ಸ್ಟೆಲ್ಲಾ, ಆದರೆ ಅವಳ ಗೆಳತಿಯರೆಲ್ಲರೂ ಅವಳನ್ನು ಸ್ಟ್ರೆಲ್ಲಾ ಎಂದು ಕರೆಯುತ್ತಾರೆ, ಅದರರ್ಥ ಹುಚ್ಚಿ ಎಂದು.

ಹೀಗೆ ಯಾರು ಇಲ್ಲದ ಯೊರ್ಗೊಸ್ ಮತ್ತು ಸ್ಟೆಲ್ಲಾರ ಸಂಬಂಧ ಏರ್ಪಟ್ಟು, ಸ್ಟೆಲ್ಲಾ ಅವನನ್ನು ತನ್ನ ಮನೆಗೆ ಆಹ್ವಾನಿಸುತ್ತಾಳೆ. ಅವಳೊಂದಿಗೆ ತಂಗಲೂ ಅನುಮತಿಸುತ್ತಾಳೆ. ಸಮಯ ಕಳೆದಂತೆ ಯೊರ್ಗೊಸ್ ಹಳ್ಳಿಯಲ್ಲಿರುವ ಅವನ ಕುಟುಂಬವನ್ನು ನೋಡಲು ತೆರಳುತ್ತಾನೆ. ಅಲ್ಲಿನ ಹೆಂಡತಿ ತೀರಿಕೊಂಡ ವಿಷಯ ತಿಳಿಯುತ್ತದೆ. ಇದ್ದೊಬ್ಬ ಮಗ ಅಥೆನ್ಸಿನಲ್ಲಿ ಇರುವುದಾಗಿ ಮಾಹಿತಿ ಸಿಗುತ್ತದೆ. ಅಲ್ಲಿರುವ ಮನೆಯನ್ನು ಮಾರುವುದಾಗಿ ಗೆಳೆಯನ ಬಳಿ ಹೇಳಿ, ಗಿರಾಕಿ ಹುಡುಕಲು ತಿಳಿಸಿ ಅಥೆನ್ಸ್‌ಗೆ ಬರುತ್ತಾನೆ.

ಸ್ಟ್ರೆಲ್ಲಾ (2009)

ಇತ್ತ ಸ್ಟೆಲ್ಲಾಳ ಜೊತೆ ಸಂಬಂಧ ಮಾನಸಿಕವಾಗಿ ಮತ್ತು ದೈಹಿಕವಾಗಿ ಗಾಢವಾಗುತ್ತದೆ. ಸ್ಟೆಲ್ಲಾ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡು ಹಣ ಸಂಪಾದಿಸುತ್ತಿರುತ್ತಾಳೆ, ಜೊತೆಗೆ ಮಂಗಳಮುಖಿಯರೆಲ್ಲ ಸೇರಿ, “ಡ್ರ್ಯಾಗ್-ಶೋ” ನಡೆಸುತ್ತಿರುತ್ತಾರೆ. ಅಂದರೆ ಗಾಯನಕೂಟ. ಇವೆಲ್ಲವನ್ನು ನೋಡಿ ಸ್ಟೆಲ್ಲಾ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.

ಆದರೆ ವಾಪಾಸ್ ಹಳ್ಳಿಯಲ್ಲಿರುವ ಮನೆಯನ್ನು ಮಾರುವ ಸಲುವಾಗಿ ಗಿರಾಕಿಯೊಂದಿಗೆ ಮಾತಾಡಿದಾಗ, ಅವನ ಕಾಣದ ಮಗನ ಕುರಿತಾಗಿ ಮಾಹಿತಿ ಕೇಳಿ ಅಘಾತಕ್ಕೊಳಾಗುತ್ತಾನೆ. ಅದು ಅವನ ಮಗನೇ ಸ್ಟೆಲ್ಲಾಳಾಗಿರುವುದು! ಸ್ಟೆಲ್ಲಾ ಒಪ್ಪಿಕೊಳ್ಳುತ್ತಾಳೆ.

ಯೊರ್ಗೊಸ್ ತನ್ನ ಮಗ ಚಿಕ್ಕವನಿದ್ದಾಗ ಮಾವನೊಬ್ಬ ಅವನೊಂದಿಗೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ನೋಡಿ, ಮಾವನನ್ನು ಕೊಂದು ಜೈಲಿಗೆ ಹೋಗಿರುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳದೆ ತನ್ನಲ್ಲೇ ಮುಚ್ಚಿಟ್ಟುಕೊಂಡಿರುತ್ತಾನೆ. ಕೊನೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಸ್ವತಃ ತಾನೇ ಮಗನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದರ ಕುರಿತು ನೈತಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡು, ಅಪರಾಧಿ ಮನೋಭಾವದಿಂದ ಸ್ಟೆಲ್ಲಾಳಿಂದ ದೂರವಾಗಿಬಿಡುತ್ತಾನೆ.

ಕೆಲ ಕಾಲದ ನಂತರ ಯೊರ್ಗೊಸ್ ಸ್ಟೆಲ್ಲಾಳನ್ನು ಭೇಟಿಯಾಗಿ ಅವಳನ್ನು ಅದೇ ಸ್ಥಿತಿಯಲ್ಲಿ ಒಪ್ಪಿಕೊಳ್ಳುತ್ತಾನೆ. ಕೊನೆಗೆ ಹೊಸ ವರ್ಷದ ಸಂಭ್ರಮದಲ್ಲಿ ಯೊರ್ಗೊಸ್‌ನ ಜೈಲಿನ ಗೆಳೆಯ, ಸ್ಟೆಲ್ಲಾ ಮತ್ತು ಅವಳ ಗೆಳತಿಯರೆಲ್ಲ ಸೇರಿ ಸಂಭ್ರಮಿಸುವುದನ್ನು ತೋರಿಸುವುದರ ಮೂಲಕ ಸಿನಿಮಾದ ಅಂತ್ಯವಾಗುತ್ತದೆ.

ಪಾನೋಸ್ ಕೌತ್ರಾಸ್: ಪಾನೋಸ್‌ರ ಸಿನಿಮಾಗಳು ಮುಕ್ತವಾಗಿ LGBT ಸಮುದಾಯದವರ ಬದುಕನ್ನು ಕಟ್ಟಿಕೊಡುತ್ತವೆ. ನಗ್ನವಾಗಿ ನಟ ನಟಿಯರನ್ನು ಚಿತ್ರಿಸಿದರೂ, ಅದು ಅವರ ನಡುವಿನ ಅನ್ಯೋನ್ಯತೆ ಮತ್ತು ಪ್ರೀತಿಯನ್ನು ಪ್ರೇಕ್ಷಕರಿಗೆ ದಾಟಿಸಲು ಮಾತ್ರ.

ನಿರ್ದೇಶಕರ ಪ್ರಕಾರ ಸಮಾಜದಲ್ಲಿರುವ ’ಹೋಮೊಪೋಬಿಯಾ’ವನ್ನು ಹೊರಹಾಕಿ, ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್ ಮುಂತಾದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಎಲ್ಲರಂತೆ ಸಹಜವಾಗಿ ಕಾಣಬೇಕೆಂಬುದೇ ಇವರ ಸಿನಿಮಾಗಳ ಮೂಲ ಧ್ಯೇಯ.

ಪಾನೋಸ್ ಕೌತ್ರಾಸ್

ಪಾನೋಸ್‌ರ ಸಿನಿಮಾಗಳು ಬದುಕಿನ ಸಹಜತೆಯನ್ನು ಚಿತ್ರಿಸುತ್ತಾ, ಪಾತ್ರಗಳು ನಮ್ಮಲ್ಲಿ ಒಂದಾಗಿಬಿಡುತ್ತಾರೆ. ಸಹಜವಾದ ಕಷ್ಟಗಳು, ಸಂಬಂಧಗಳಲ್ಲಿನ ಸಂಕೀರ್ಣತೆಗೆ ಕನ್ನಡಿ ಹಿಡಿದು ಎಲ್ಲ ಪ್ರೇಕ್ಷಕರೂ ಸಿನಿಮಾ ಜೊತೆಗೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗಿಸುತ್ತಾರೆ.

ಇವರ ಸಿನಿಮಾಗಳಲ್ಲಿ LGBT ಸಮುದಾಯದ ನೋವು ನಲಿವಿನ ಜೊತೆಗೆ, ಗ್ರೀಸಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗಳನ್ನು ಅತಿ ಸ್ಫುಟವಾಗಿ ಹಿಡಿದಿಟ್ಟಿದ್ದಾರೆ. ಬಣ್ಣಗಳ ಮೂಲಕವೇ ಕಥೆ ಅಥವಾ ಪಾತ್ರಗಳ ಕುರಿತು ಹೇಳುವುದು, ಪಾತ್ರಗಳು ಸದಾ ಕಿರಿದಾದ ಜಾಗಗಳಲ್ಲಿ ವ್ಯವಹರಿಸುವುದು ವಿಶೇಷ.

ಪಾನೋಸ್ ತನ್ನೆಲ್ಲಾ ಸಿನಿಮಾಗಳಿಗೂ ಕಥೆ ಬರೆದಿದ್ದು, ಮೂರು ಸಿನಿಮಾಗಳಲ್ಲಿ ನಿರ್ಮಾಪಕನಾಗಿಯೂ ತೊಡಗಿಸಿಕೊಂಡಿದ್ದಾನೆ. ಹಾಗೂ ಕೆಲ ಸಿನಿಮಾಗಳಲ್ಲಿ ಕ್ಯಾಮಿಯೋ/ಸಣ್ಣ ಪಾತ್ರವಾಗಿ ಕಾಣಿಸಿಕೊಳ್ಳುವುದರ ಮೂಲಕ ನಟನೆಯನ್ನೂ ಮಾಡಿರುವುದು ವಿಶೇಷ.


ಇದನ್ನೂ ಓದಿ: ಪಿಕೆ ಟಾಕೀಸ್: ಬಹುತ್ವ ಮತ್ತು ಸಹಬಾಳ್ವೆಯೇ ನಮ್ಮ ಮುಂದಿರುವ ಏಕೈಕ ದಾರಿಯೆನ್ನುವ ಸಿತೋಸ್ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...