Homeಕರ್ನಾಟಕಕಣ್ಮರೆಯಾಗಿದ್ದ ಸಮುದ್ರ ಹವಾಮಾನ ಯಂತ್ರ ಹುಡುಕಿ ತಂದ ಉತ್ತರ ಕನ್ನಡದ ಮೀನುಗಾರರು

ಕಣ್ಮರೆಯಾಗಿದ್ದ ಸಮುದ್ರ ಹವಾಮಾನ ಯಂತ್ರ ಹುಡುಕಿ ತಂದ ಉತ್ತರ ಕನ್ನಡದ ಮೀನುಗಾರರು

- Advertisement -
- Advertisement -

ಲಕ್ಷದ್ವೀಪದಲ್ಲಿ ಅಳವಡಿಸಲಾಗಿದ್ದ ಸಮುದ್ರ ಹವಾಮಾನದ ಮುನ್ಸೂಚನೆ ಕೊಡುವ ಅತ್ಯಾಧುನಿಕ ರಕ್ಷಣಾ ಸಂಶೋಧನಾ ಯಂತ್ರ (ಬೋಯ್) ಕಳೆದ ಅಕ್ಟೋಬರ್ 2ರಂದು ಕಾಣೆಯಾಗಿ ಆತಂಕ ಸೃಷ್ಟಿಯಾಗಿತ್ತು. ನಂತರ ಅದು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕಡಲಲ್ಲಿ ಕಾಣಿಸಿಕೊಂಡಿತ್ತಾದರು ಅದನ್ನು ದಡಕ್ಕೆ ತರಲು ನೌಕಾ ದಳ, ಕೋಸ್ಟ್ ಗಾರ್ಡ್ ಮತ್ತು ಕೇರಳ, ದಕ್ಷಿಣ ಕನ್ನಡದ ಮೀನುಗಾರರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ ಮಹಾರಾಷ್ಟ್ರದ ಮಾಲ್ವನ್ ಕಡಲಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಉತ್ತರ ಕನ್ನಡದ ಕುಮಟಾದ ನಾಲ್ವರು ಬೆಸ್ತರು ಬೋಯ್ ಅನ್ನು ಸುರಕ್ಷಿತವಾಗಿ ತಮ್ಮ ಬೋಟ್‌ನಲ್ಲಿ ಹಾಕಿಕೊಂಡು ಕಾರವಾರದ ಸಾಗರ ವಿಜ್ಞಾನ ಕೇಂದ್ರದ ಅಧಿಕಾರಿಗಳಿಗೆ ಕೊಟ್ಟಿದ್ದಾರೆ! ಅಲ್ಲಿಗೆ ರಾಷ್ರೀಯ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಲಕ್ಷದ್ವೀಪ ನಡುಗಡ್ಡೆಯ 15\69 ಅಕ್ಷಾಂಶ-ರೇಖಾಂಶದಲ್ಲಿ ಚೆನ್ನೈನ ರಾಷ್ಟ್ರೀಯ ಸಾಗರ ವಿಜ್ಞಾನ ಕೇಂದ್ರ ಬೋಯ್ ಸ್ಥಾಪಿಸಿತ್ತು. ಈ ಅತ್ಯಾಧುನಿಕ ಯಂತ್ರ ಸಾಗರದಲ್ಲಿನ ಗಾಳಿಯ ದಿಕ್ಕು, ವೇಗ, ಉಷ್ಣತೆ ಮತ್ತು ತೇವಾಂಶ ತಿಳಿಸುತ್ತದೆ; ಸಮುದ್ರ ಮಟ್ಟದ ಒತ್ತಡ ಮತ್ತು ನೀರಿನ ಡೌನ್ ವೆಲ್ಲಿಂಗ್ ಹೇಳುತ್ತದೆ. ನೀರಿನ ಮೇಲ್ಪದರದಿಂದ 500 ಮೀಟರ್ ಆಳದ ವರೆಗಿನ ನೀರಿನ ಉಷ್ಣತೆ ಮತ್ತು ಉಪ್ಪಿನಾಂಶವನ್ನು ಅಳೆಯುತ್ತದೆ. ನೀರಿನ ಒಳಹರಿವಿನ ದಿಕ್ಕನ್ನು 240 ಮೀಟರ್ ವರೆಗೆ ಅಳತೆ ಮಾಡಬಲ್ಲದು. ಈ ಮಾಹಿತಿಯನ್ನೆಲ್ಲ ಬೋಯ್ ತಾಸಿಗೊಮ್ಮೆ ಉಪಗ್ರಹದ ಮೂಲಕ ಚೆನ್ನೈನ ರಾಷ್ಟ್ರೀಯ ಸಾಗರ ವಿಜ್ಞಾನ ಕೇಂದ್ರಕ್ಕೆ ರವಾನಿಸುತ್ತದೆ. ಇಂಥ 12 ಯಂತ್ರಗಳನ್ನು ದೇಶದ ವಿವಿಧ ಸಮುದ್ರ ಪ್ರದೇಶದಲ್ಲಿ ಅಳವಡಿಸಲಾಗಿದ್ದು, ಸದ್ರಿ ನೆಟ್‌ವರ್ಕ್ ದೇಶದ ಮಹತ್ವದ ಸಾಗರ ಸ್ಥಿತಿ-ಗತಿ ಒದಗಿಸುತ್ತದೆ. ಬೋಯ್ ಸಿಗದಿದ್ದರೆ ದುರುಪಯೋಗವಾಗುವ ಭಯವಿತ್ತು. ಉತ್ತರ ಕನ್ನಡದ ಮೀನುಗಾರರ ಸಾಹಸದಿಂದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆವರಿಸಿದ್ದ ಆತಂಕ ದೂರಾದಂತಾಗಿದೆ.

PC : TV9 Kannada

ಅಕ್ಟೋಬರ್ 2ರಂದು ಬೋಯ್ ಇದ್ದಕ್ಕಿದ್ದಂತೆ ಲಕ್ಷದ್ವೀಪದಿಂದ ಕಳಚಿಕೊಂಡು ಸಮುದ್ರ ಪಾಲಾಗಿತ್ತು. ಅ.5ರಂದು ಕೇರಳದ ಅರಬ್ಭೀ ಸಮುದ್ರದಲ್ಲಿ ತೇಲುತ್ತಿದ್ದ ಈ ಯಂತ್ರ ಅ.13ರಂದು ಕುಮಟಾದ ಧಾರೇಶ್ವರ ಕಡಲಲ್ಲಿ ಕಾಣಿಸಿಕೊಂಡಿತ್ತು. ಕೋಸ್ಟ್‌ಗಾರ್ಡ್ ಸಿಬ್ಬಂದಿ ದೂರದಿಂದಲೆ ನೋಡಿ ಇದನ್ನು ದಡಕ್ಕೆ ತರುವುದು ಕಷ್ಟವೆಂದು ವಾಪಸ್ಸಾಗಿತ್ತು. ದಕ್ಷಿಣ ಕನ್ನಡದ ಮೀನುಗಾರರ ಕಣ್ಣಿಗೂ ಬಿದ್ದಿದ್ದ ಬೋಯ್ ತರಲಾಗಿರಲಿಲ್ಲ. ಅ.14ರಂದು ಕಾರವಾರದ ಸೀ ಬರ್ಡ್ ನೌಕಾನೆಲೆಯ ಆಳ ಸಮುದ್ರ ಪ್ರದೇಶದಲ್ಲಿತ್ತು. ಆದರೆ ನೌಕಾ ಪಡೆಯವರಿಂದಲೂ ಈ ಅಮೂಲ್ಯ ಯಂತ್ರ ಹಿಡಿಯಲಾಗಿರಲಿಲ್ಲ! ಅ.16ರಂದು ಮಹಾರಾಷ್ಟ್ರದ ಮಾಲ್ವನ್ ಸಾಗರದಲ್ಲಿ ಬೋಯ್ ಇರುವುದು ಚೆನ್ನೈ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಗೆ ತಿಳಿದಿತ್ತು.

ಬೋಯ್ ಕಡಲಲ್ಲಿ ಕಣ್ಣು ತಪ್ಪಿಸಿ ಓಡಾಡಿಕೊಂಡಿರವುದನ್ನು ಚೆನ್ನೈ ಎನ್‌ಐಓಟಿ ಅರಬ್ಬೀ ಸಮುದ್ರದಂಚಿನಲ್ಲಿರುವ ಸಾಗರ ವಿಜ್ಞಾನ ಕೇಂದ್ರಗಳಿಗೆ ತಿಳಿಸಿ, ಅದನ್ನು ದಂಡೆಗೆ ತರುವ ಪ್ರಯತ್ನ ಮಾಡುವಂತೆ ಹೇಳಿತ್ತು. ಕಾರವಾದ ಸಾಗರ ವಿಜ್ಞಾನ ಸಂಸ್ಥೆ ಮುಖ್ಯಸ್ಥ ಜಗನ್ನಾಥ ರಾಠೋಡ್ ಈ ಮಾಹಿತಿಯನ್ನು ಮೀನುಗಾರಿಕಾ ಇಲಾಖೆ ಮತ್ತು ಮೀನುಗಾರರ ವಾಟ್ಸ್‌ಪ್ ಗ್ರೂಪ್‌ಗಳಿಗೆ ಹಂಚಿಕೊಂಡಿದ್ದರು. ಮಾಲ್ವನ್ ಕಡಲಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಕಾರವಾರದ ಮೂಲದ ಬೋಟ್‌ನಲ್ಲಿದ್ದ ಕುಮಟಾದ ರಾಜು ಅಂಬಿಗ, ಚಂದ್ರು ಅಂಬಿಗ, ಗೋಪಾಲ್ ಅಂಬಿಗ ಮತ್ತು ಗಿರೀಶ್ ಅಂಬಿಗ ದೊಡ್ಡ ಗಾತ್ರದ ಬೋಯ್ ತಮ್ಮೆದುರು ತೇಲುತ್ತಿರುವುದನ್ನು 18ರಂದು ಕಾರವಾರ ಸಾಗರ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಠೋಡ್‌ರಿಗೆ ಪೋನ್ ಮಾಡಿ ಹೇಳಿದ್ದಾರೆ. ಅದರ ಮಹತ್ವ ತಿಳಿಸಿದ ರಾಠೋಡ್ ಹೇಗಾದರೂ ಮಾಡಿ ದಂಡೆಗೆ ತನ್ನಿರಿ ಎಂದಿದ್ದಾರೆ.

ಆ ನಾಲ್ಕು ಬೆಸ್ತರು ಮೀನುಗಾರಿಕೆ ನಿಲ್ಲಿಸಿ ದೇಶದ ಮಹತ್ವದ ಬೋಯ್ ಹಿಡಿಯಲು ಪ್ರಯತ್ನಿಸಿದ್ದಾರೆ. ಮಹಾರಾಷ್ಟ್ರದ ಮೀನುಗಾರರ ನೆರವಿಂದ ಬೃಹತ್ ಬೋಯ್ ಬೋಟಿಗೆ ಹಾಕಿಕೊಂಡಿದ್ದಾರೆ. ರಾತ್ರಿ ವೇಳೆಗೆ ಕಾರವಾರದ ಸಾಗರ ವಿಜ್ಞಾನ ಸಂಸ್ಥೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಉತ್ತರ ಕನ್ನಡದ ಮೀನುಗಾರರ ಈ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ!


ಇದನ್ನೂ ಓದಿ: ಕಾರವಾರದಲ್ಲಿ ಹವಳ ದ್ವೀಪದ ಗಿಡುಗ ಕಡಲಾಮೆ ಕಳೇಬರ ಪತ್ತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...