Homeಎಕಾನಮಿಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಅಸಮಾನತೆ ನಿವಾರಣೆಗಾಗಿ ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು.

- Advertisement -
- Advertisement -

ಆಫ್ರಿಕಾ ಖಂಡದ ಅಮೇರಿಕದವನೊಬ್ಬ ಹೀಗೆ ಬರೆದುಕೊಂಡಿದ್ದಾನೆ, ನನಗೆ ಅವಮಾನ ಮತ್ತು ದ್ವೇಷ ತಿಳಿದಿರಲಿಲ್ಲ. ಅದನ್ನು ತಿಳಿಯಲು ಶಾಲೆಗೆ ಹೋಗಬೇಕಾಯಿತು. ಸಿಮೋನ್ ಡಿ ಬೋವಾ ನಾನು ಮಹಿಳೆಯಾಗಿ ಹುಟ್ಟಲಿಲ್ಲ, ಆದರೆ ಆಗಲ್ಪಟ್ಟೆ ಎಂದಿದ್ದರು. ಸಮಾಜ ವ್ಯಕ್ತಿ ಮತ್ತು ವ್ಯಕ್ತಿತ್ವದ ಸೃಷ್ಟಿಗೆ ನೀಡುವ ಅಪಾರವಾದ ಸಕಾರಾತ್ಮಕ ಅಥವ ನಕಾರಾತ್ಮಕ ಕೊಡುಗೆಯನ್ನು ಈ ಹೇಳಿಕೆಗಳಲ್ಲಿ ಕಾಣಬಹುದು.

ಥಾಮಸ್ ಪಿಕೆಟಿ

ಈ ಶತಮಾನದ ಅತಿ ಹೆಚ್ಚು ಪ್ರಭಾವಿಸಿದ ಅರ್ಥಶಾಸ್ರಜ್ಞರನ್ನಾಗಿ ಥಾಮಸ್ ಪಿಕೆಟಿಯವರನ್ನು ಗುರುತಿಸುತ್ತಾರೆ. ಅವರ ಕ್ಯಾಪಿಟಲ್ ಇನ್ ದಿ 21ನೇ ಶತಮಾನದ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ಅವರ ಇತ್ತೀಚಿನ ಪುಸ್ತಕ ಕ್ಯಾಪಿಟಲ್ ಅಂಡ್ ಐಡಿಯಾಲಜಿ ಕೂಡಾ ಅದೇ ಮಟ್ಟದಲ್ಲಿ ಜಗತ್ತಿನಾದ್ಯಂತ ಚರ್ಚೆ ಆಗುತ್ತಿರುವ ಪುಸ್ತಕ. 1039 ಪುಟದ ಈ ಪುಸ್ತಕ ಒತ್ತಿ ಹೇಳುವುದು ಆರ್ಥಿಕ ಅಸಮಾನತೆಗೆ ಸಾಮಾಜಿಕ, ಸಾಂಸ್ಥಿಕ, ಸೈದ್ಧಾಂತಿಕ ಮತ್ತು ರಾಜಕೀಯ ಆಯಾಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು.

ಕಾರ್ಲ್ ಮಾರ್ಕ್ಸ್ ನ ವರ್ಗ ಸಂಘರ್ಷದ ಹೊರತಾಗಿ, ಸಾಮಾಜಿಕ ಆಯಾಮಗಳಾದ ಜಾತಿ, ಲಿಂಗ, ಬಣ್ಣ, ಧಾರ್ಮಿಕ ಸಂಘಟನೆಗಳು ವ್ಯಕ್ತಿಯನ್ನು ಕೃತಕವಾಗಿ ಮೇಲಿನ ಸ್ಥರದಲ್ಲಿಟ್ಟು ಬಹುಜನರನ್ನು ಹತ್ತಿಕ್ಕಿ ಹತೋಟಿಯಲ್ಲಿಡುವ ಕಾರ್ಯವನ್ನು ಪಿಕೆಟಿ ಐತಿಹಾಸಿಕವಾಗಿ ವಿಸ್ತರಿಸುತ್ತಾ ಹೋಗುತ್ತಾರೆ. ಅಂಕಿ ಅಂಶಗಳಿಲ್ಲದೆ ಪಿಕೆಟಿ ಏನನ್ನೂ ಹೇಳಹೋಗುವುದಿಲ್ಲ. ನಮ್ಮಲ್ಲಿ ಹೀಗೆ ಹೇಳುವುದುಂಟು, ದತ್ತಾಂಶಗಳನ್ನು ನೀಡಿದರೆ ನನ್ನ ದಿಕ್ಕು ಬದಲಿಸುತ್ತೇನೆ ಎಂದು. ಇದಕ್ಕೆ ತಕ್ಕಂತೆ ಪಿಕೆಟಿ ಅನೇಕ ದೇಶಗಳ ಮತ್ತು ಸಾಮ್ರಾಜ್ಯಗಳ ಆಡಳಿತ, ಶ್ರೇಣೀಕೃತ ವರ್ಗ, ಕಾನೂನು ಮತ್ತು ತೆರಿಗೆಗಳ ಮೂಲಕ ಹೇಗೆ ಆರ್ಥಿಕ ಅಸಮಾನತೆಯನ್ನು ಉಂಟುಮಾಡಿವೆ ಎನ್ನುವುದನ್ನು ವಿಸ್ತರಿಸುತ್ತಾರೆ.

ವಿಜಯನಗರ ಸಾಮ್ರಾಜ್ಯದಲ್ಲಿ ಬ್ರಾಹ್ಮಣ ಕ್ಷತ್ರಿಯ ವರ್ಣಗಳ ಒಡಂಬಡಿಕೆ, ಬ್ರಾಹ್ಮಣರಿಗೆ ಭೂದಾನಗಳನ್ನು ಮಾಡಿದ್ದು ಹಾಗೂ ಪುದುಕೊಟ್ಟೆಯಲ್ಲಿ ಕಲಾರ್ಸ್ ದಲಿತರು ಪಟ್ಟಕ್ಕೇರಿದ ಮೇಲೇ ಅವರನ್ನು ಕ್ಷತ್ರಿಯ ವರ್ಣಕ್ಕೆ ಸೇರಿಸಲು ಬ್ರಾಹ್ಮಣ ವರ್ಗದ ಮುದ್ರೆಯ ಅವಶ್ಯಕತೆ ಉಂಟುಮಾಡಿ, ಆ ಪಟ್ಟಕ್ಕಾಗಿ ಬ್ರಾಹ್ಮಣರು ಗಿಟ್ಟಿಸಿಕೊಂಡ ಭೂಮಿ ಮತ್ತು ಗಳಿಸಿದ ಸಂಪತ್ತನ್ನು ವಿವರಿಸುತ್ತಾನೆ. ಶಿವಾಜಿ ಮಹರಾಜ ಕೂಡಾ ಇದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಬೇಕಾದ ಪ್ರಸಂಗವು ಬರುತ್ತದೆ. ಈ ರೀತಿ ಆರ್ಥಿಕ ಮುಗ್ಗಟ್ಟಿಗೆ ಅಸಮಾನತೆಗೆ ಸಾಮಾಜಿಕ ಆಯಾಮ ಹೇಗೆ ಕಾರಣ ಎಂದು ಗಣನೀಯವಾಗಿ ಪರಿಗಣಿಸಿ ವಿವರಿಸುತ್ತಾರೆ ಪಿಕೆಟಿ.

ಇಂದಿಗೂ ಸಹ ರಾಜಕಾರಣ, ರಾಜ್ಯ ಮತ್ತು ಕೈಗಾರಿಕೋದ್ಯಮಿಗಳು ಹೇಗೆ ಪರಸ್ಪರ ತಮ್ಮ ತಮ್ಮನ್ನು ಭದ್ರಪಡಿಸಿಕೊಳ್ಳಲು ತಮಗೆ ಬೇಕಾದ ಕಾನೂನು ಮತ್ತು ನಿಯಮಾವಳಿಗಳನ್ನು ಆಗ್ಗಿಂದಾಗ್ಗೆ ರೂಪಿಸಿಕೊಳ್ಳುತ್ತಾರೆ (Regulated regulate regulators)ಎಂಬುದನ್ನು ವಿವರಿಸುತ್ತಾರೆ. ಇದೇ ಸಮಯದಲ್ಲಿ ಈ ಪ್ರಸಂಗ ನೆನಪಾಗುತ್ತದೆ: ಹಿಂದೊಮ್ಮೆ ಆಯವ್ಯಯದ ಮುಂಗಡ ಪತ್ರ ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲೇ ಅಂಬಾನಿ ಮನೆಯಲ್ಲಿ ರೇಡ್ ಆದಾಗ ಸಿಕ್ಕಿಬಿತ್ತು. ಆಗ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇದು ಹಣಕಾಸು ಸಚಿವಾಲಯ ಅಂಬಾನಿಗೆ ಮೊದಲೇ ಕೊಟ್ಟಿದ್ದೋ ಅಥವಾ ಅಂಬಾನಿಯೇ ಕೊಟ್ಟ ಪ್ರತಿಯೋ ಎಂದು ಬರೆದಿದ್ದರು. ನ್ಯೂಯಾರ್ಕರ್ ನಿಯತಕಾಲಿಕದ ಕಾರ್ಟೂನ್ ಒಂದು ಹೀಗೆ ಹೇಳುತ್ತದೆ., ಉದ್ಯೋಗಪತಿಗೆ ಒಬ್ಬ ಕೇಳುತ್ತಾನೆ, ನೀವು ಟೀಂ ಪ್ಲೇಯರ್ರೇ?ಎಂದು. ಆತ ಹೇಳುತ್ತಾನೆ, ಇಲ್ಲ, ನಾನು ಟೀಂ ಓನರೆಂದು. ನಮ್ಮ ಕ್ರಿಕೆಟ್ ಟೀಂಗೂ ಇದನ್ನು ಹೋಲಿಸಬಹುದು.

ಭಾರತದೇಶ ಸಾಮಾಜಿಕ ಚಲನಶೀಲತೆಯಲ್ಲಿ ಅತ್ಯಂತ ಕಳಪೆ ಸ್ಥಾನವನ್ನು ಹೊಂದಿದೆ. ಕಳೆದ ವರ್ಷ 82 ದೇಶಗಳಲ್ಲಿ 76ನೇ ಸ್ಥಾನವನ್ನು ಪಡೆದಿತ್ತು. ಅತ್ಯಂತ ಕೆಳಮಟ್ಟದ ಈ ಸ್ಥಾನಕ್ಕೆ ನಮ್ಮಲ್ಲಿನ ಜಾತಿ, ವರ್ಣಬೇಧ ನೀತಿ, ಆರ್ಥಿಕ ಅಸಮಾನತೆ ಕಾರಣ. ಇವೆಲ್ಲವೂ ಸಾಮಾಜಿಕ ಮುಗ್ಗಟ್ಟಿನ ಚಕ್ರವ್ಯೂಹದಿಂದ ಹೊರಕ್ಕೆ ದಾಟಿ ಹೋಗದಂತೆ ತಡೆಗೋಡೆ ಹಾಕಿ ನೋಡಿಕೊಳ್ಳುತ್ತವೆ. ಸೋಶಿಯಲ್ ಮೊಬಿಲಿಟಿ ಇಂಡೆಕ್ಸ್ ಎಂದು ಹೇಳುವ ಈ ಸಾಮಾಜಿಕ ಚಲನಶೀಲತೆಗೆ ನಮ್ಮ ಸಾಂಸ್ಥಿಕ ಸಂಘಟನೆಗಳು, ಧರ್ಮ ಮತ್ತು ಜಾತಿ ವ್ಯವಸ್ಥೆ ಬಲಿಷ್ಟ ತಡೆಗೋಡೆಗಳಾಗಿ ನಿಂತಿವೆ. ಆರ್ಥಿಕ ಅಸಮಾನತೆ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಗತಿ. ವಿಪರ್ಯಾಸವೆಂದರೆ ಕೊರೊನ ಮಹಾಮಾರಿಯ ಕಾಲದಲ್ಲೂ ಬಿಲಿಯನೇರ್‌ಗಳ ಆಸ್ತಿ ಕೊರೋನ ಸೋಂಕು ಮತ್ತು ಸಾವನ್ನು ಮೀರಿ ಬೆಳೆಯುತ್ತಿದೆ. ಅಮೇರಿಕಾದ ಪ್ರಜಾಪ್ರಭುತ್ವವನ್ನು,‘by the 1%, of the 1%, for the 1%’  ಎನ್ನುವುದುಂಟು. ಆಸ್ತಿ ತೆರಿಗೆಯನ್ನು ಸಮಗ್ರವಾಗಿ ಅನುಸ್ಠಾನಗೊಳಿಸಿದ್ದಲ್ಲಿ ಆರ್ಥಿಕ ಅಸಮಾನತೆಯನ್ನು ಹೇಗೆ ತಡೆಗಟ್ಟಬಹುದು ಎನ್ನುವುದನ್ನು ಪಿಕೆಟಿ ಅನೇಕ ಉದಾಹರಣೆಗೊಳೊಂದಿಗೆ ವಿವರಿಸುತ್ತಾನೆ. ಫ್ರಾನ್ಸ್ ದೇಶದಲ್ಲಿ 19ನೇ ಶತಮಾನದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬರುವ ಆಸ್ತಿಯ ಮೇಲೆ ಹಾಕಿದ ಕನಿಷ್ಟ ತೆರಿಗೆಯಿಂದ ಹೇಗೆ ಅಸಮಾನತೆಯನ್ನು ಹಿಂದಿಕ್ಕಲು ಸಾಧ್ಯವಾಯಿತೆಂದು ವಿವರಿಸುತ್ತಾನೆ. ಇಂದಿನ ಈ 1% ಪ್ರಜಾಪ್ರಭುತ್ವವನ್ನು ತಡೆಗಟ್ಟಲು ಪಿಕೆಟಿ ಪಿಸುಮಾತಿಗೆ ಕಿವಿಗೊಡುವುದೇ ಲೇಸು.


ಇದನ್ನೂ ಓದಿ: ಭಾರತದಲ್ಲಿ ಧರ್ಮಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರಿತ್ತಿದ್ದೇವೆಯೇ? : ಬಿ. ಶ್ರೀಪಾದ ಭಟ್

460 ಕೋಟಿ ಜನರು ಹೊಂದಿರುವ ಒಟ್ಟು ಆಸ್ತಿ ಕೇವಲ 2000 ಜನರ ಕೈಯಲ್ಲಿದೆ! ದಾವೋಸ್‌ನಲ್ಲಿ ‘ಆಕ್ಸ್‌ಫಾಮ್’ ವರದಿ

ಕೊರೊನ ಸಮಯದ ಮತ್ತು ಕೊರೊನೋತ್ತರ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಮಾಡುತ್ತಿರುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...