Homeರಾಜಕೀಯಜಿಟಿಡಿ ಖಾತೆ ಗೋಳಾಟಕ್ಕೆ ಕೆ.ಎಸ್.ರಂಗಪ್ಪ ಕಾರಣ?

ಜಿಟಿಡಿ ಖಾತೆ ಗೋಳಾಟಕ್ಕೆ ಕೆ.ಎಸ್.ರಂಗಪ್ಪ ಕಾರಣ?

- Advertisement -
- Advertisement -

ಕುಮಾರಸ್ವಾಮಿಯವರ ಸರ್ಕಾರಕ್ಕೆ ಪರೀಕ್ಷೆಗಳೋ ಪರೀಕ್ಷೆಗಳು. ತಾವು ಮುಖ್ಯಮಂತ್ರಿಯಾಗುವ ಖಚಿತ ಭರವಸೆಯಿಂದ ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರ ರಚನೆಗೆ ಮುಂದಾದಾಗಿನಿಂದ ಖಾತೆ ಹಂಚಿಕೆಯವರೆಗೆ ಎಚ್‍ಡಿಕೆಗೆ ಒಂದಾದ ಮೇಲೆ ಒಂದು ಅಗ್ನಿಪರೀಕ್ಷೆಗಳು. ಖಾತೆ ಹಂಚಿಕೆಯ ನಂತರವೂ ಖಾತೆಗಳ ವಿಚಾರದಲ್ಲಿ ಅಸಮಾಧಾನಗೊಂಡವರನ್ನು ಸಮಾಧಾನ ಮಾಡುವ ಕೆಲಸ ಮುಂದುವರೆದೇ ಇತ್ತು. ಇದರಲ್ಲಿ ಹೆಚ್ಚು ಸುದ್ದಿಯಾಗಿದ್ದು ಜಿ.ಟಿ.ದೇವೇಗೌಡರಿಗೆ ನೀಡಲಾದ ಉನ್ನತ ಶಿಕ್ಷಣ ಖಾತೆ. ಸಾರ್ವಜನಿಕರಿಂದ ‘ಉನ್ನತ ಶಿಕ್ಷಣ ಖಾತೆ ಪಡೆದ ಏಳನೇ ತರಗತಿ ಶಾಸಕ’ ಎಂಬ ಟೀಕೆಗಳೇ ಜಿ.ಟಿ.ದೇವೇಗೌಡರನ್ನು ದೊಡ್ಡಗೌಡರ ಮನೆ ಮೆಟ್ಟಿಲೇರುವಂತೆ ಮಾಡಿತ್ತೆಂಬ ಸುದ್ದಿ ಹರಿದಾಡಿತ್ತು. ಜನ ತನ್ನ ಶೈಕ್ಷಣಿಕ ಅರ್ಹತೆಯನ್ನಿಟ್ಟುಕೊಂಡು ಗೇಲಿಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಅಥವಾ ತನಗೆ ಶೈಕ್ಷಣಿಕ ಅರ್ಹತೆಯಿಲ್ಲವೆಂಬ ಕೀಳರಿಮೆಯಿಂದಲೋ ಆ ಖಾತೆ ತನಗೆ ಬೇಡ; ಜನರೊಂದಿಗೆ ಒಡನಾಟ ಮಾಡುವಂತಹ, ಫೀಲ್ಡ್‍ನಲ್ಲಿ ಕೆಲಸ ಮಾಡುವಂತಹ ಖಾತೆ ಕೊಡಿ ಎಂದು ದೊಡ್ಡಗೌಡರಲ್ಲಿ ಅಹವಾಲು ಸಲ್ಲಿಸಿದ್ದರು ಎಂಬ ವಿವರಣೆಯೂ ಸುದ್ದಿಯಾಗಿತ್ತು. ಈ ಮಧ್ಯೆ, ಪತ್ರಕರ್ತರೊಡನೆ ಮಾತನಾಡುವ ಸಮಯದಲ್ಲಿ ‘ಸರಿ ಬಿಡಿ, ಈ ಖಾತೆಯನ್ನು ನಾನೇ ಇಟ್ಟುಕೊಳ್ತೀನಿ. ಆಗಬಹುದಾ?’ ಎಂದು ಪತ್ರಕರ್ತರನ್ನೇ ಕೇಳಿದ್ದರು. ಆದರೆ ಈಗ ಜಿಟಿಡಿ ಅದೇ ಖಾತೆಯಲ್ಲಿ ತೃಪ್ತರಾಗಲು ಕಾರಣವೇನು? ಎಂಬ ಪ್ರಶ್ನೆ ಏಳುತ್ತದೆ.
ಜೆಡಿಎಸ್‍ನ ಆರಂಭದಿಂದಲೂ ಪಕ್ಷದ ಜೊತೆಯಲ್ಲಿದ್ದುಕೊಂಡು ಪಕ್ಷವನ್ನು ಬೆಳೆಸಲು ದುಡಿದಿದ್ದ ಜಿಟಿಡಿ 2004-05ರಲ್ಲಿ ಸಿದ್ದರಾಮಯ್ಯನವರ ಜೊತೆ ಸಖ್ಯವಿದ್ದರೂ, ಪಕ್ಷ ಬಿಟ್ಟು ಹೋಗಿರಲಿಲ್ಲ. ಆದರೆ ನಂತರ ಒಂದು ಅವಧಿಗೆ ಬಿಜೆಪಿಯ ಹೊಸ್ತಿಲು ತುಳಿದು ನಂತರ ವಾಪಸ್ಸು ಬಂದಿದ್ದರು. ಮೈಸೂರಿನ ಮಟ್ಟಿಗೆ ಪಕ್ಷದ ಪ್ರಭಾವಿ ನಾಯಕ, ಅಷ್ಟು ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು 27,000 ಮತಗಳ ಲೀಡ್‍ನಲ್ಲಿ ಮಣಿಸಿ, ‘ಜೈಂಟ್ ಕಿಲ್ಲರ್’ ಆಗಿದ್ದ ಗೌಡರನ್ನು ಮಂತ್ರಿಮಂಡಲದಿಂದ ಕಡೆಗಣಿಸುವುದು ಸಾಧ್ಯವಿರಲಿಲ್ಲ. ಸರ್ಕಾರ ಕ್ಯಾಪ್ಟನ್‍ಶಿಪ್ ಪಡೆದಿದ್ದ ಕುಮಾರಣ್ಣ ತನ್ನ ಕುಟುಂಬಕ್ಕೆ ಫಲವತ್ತಾದ ಖಾತೆಗಳನ್ನು ಪಡೆದುಕೊಂಡಿದ್ದರ ಜೊತೆಗೆ ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕರಿಗೂ ಮಂತ್ರಿಮಂಡಲದಲ್ಲಿ ಹೆಚ್ಚಿನ ಖಾತೆಗಳನ್ನು ಕೊಡಲೇಬೇಕಾಗಿತ್ತು. ಹಾಗೆ ನೋಡಿದರೆ ದೊಡ್ಡಗೌಡರು ಜಿಟಿಡಿಗೆ ಫಲವತ್ತಾದ ಖಾತೆಯನ್ನೇ ನೀಡಿದ್ದರು.
ಕುಲಪತಿಗಳನ್ನು ನೇಮಿಸುವ, ಡೀಮ್ಡ್ ಯೂನಿವರ್ಸಿಟಿಗಳ ಸ್ಥಾಪನೆ ಅನುಮತಿ ನೀಡುವುದರ ಜೊತೆಗೆ ಮೆಡಿಕಲ್ ಕಾಲೇಜುಗಳಿಗೂ ಸ್ವಾಯತ್ತತೆ ನೀಡುವ ಅಧಿಕಾರ ಉನ್ನತ ಶಿಕ್ಷಣ ಇಲಾಖೆಗೆ ಇದೆ. ವೃತ್ತಿಪರ ಉನ್ನತ ಶಿಕ್ಷಣದ ಖಾಸಗೀ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿದಾಗ ಒಳ್ಳೆ ‘ಫಲ’ವನ್ನೇ ಉನ್ನತ ಶಿಕ್ಷಣ ಖಾತೆ ನೀಡುತ್ತದೆ ಎಂಬುದು ಜಿಟಿಡಿಗೂ ತಿಳಿದಿತ್ತು. ಹಾಗಾಗಿ ಅಂತಹ ಖಾತೆಯನ್ನು ಸಾರ್ವಜನಿಕರ ಗೇಲಿಗೆ ನಾಚಿ ಬಿಟ್ಟುಬಿಡುವ ಮೂರ್ಖರಾಗಿರಲು ಸಾಧ್ಯವಿಲ್ಲ. ಅಸಲೀ ಸಂಗತಿ ಏನೆಂದರೆ, ಆ ಖಾತೆಯ ನಿರ್ವಹಣೆಗೆ ದೊಡ್ಡಗೌಡರು ಮಾಡಿದ್ದ ಮಾಸ್ಟರ್‍ಪ್ಲಾನ್ ಏನು ಎಂಬ ವಾಸನೆಯನ್ನು ಗ್ರಹಿಸಿದ್ದರಿಂದ ಜಿಟಿಡಿ ಆ ಖಾತೆಯನ್ನು ತಿರಸ್ಕರಿಸಿದ್ದರು.
ದೊಡ್ಡಗೌಡರ ಕುಟುಂಬದಲ್ಲಿ ಒಬ್ಬರಾದ ಮೈಸೂರಿನಲ್ಲಿ ಕಂಟ್ರಾಕ್ಟರ್ ರಂಗಪ್ಪ ಎಂದು ಹೆಸರಾಗಿರುವ ಉನ್ನತ ಶಿಕ್ಷಣದ ಮಾರಾಟಗಾರ ಎಂದೇ ಖ್ಯಾತಿ ಪಡೆದಿರುವ ಕೆ.ಎಸ್.ರಂಗಪ್ಪರನ್ನು ಉನ್ನತ ಶಿಕ್ಷಣ ಖಾತೆಗೆ ಸಲಹೆಗಾರನಾಗಿ ನೇಮಿಸಲು ದೊಡ್ಡಗೌಡರ ಮಾಸ್ಟರ್‍ಮೈಂಡ್ ಕೆಲಸ ಮಾಡಿತ್ತು. ಅವರ ಮೊಮ್ಮಗಳು ರಂಗಪ್ಪ ಅವರ ಸೊಸೆಯಾಗಿದ್ದು, ಆ ಕಾರಣಕ್ಕೇ ರಂಗಪ್ಪರನ್ನು ಚಾಮರಾಜ ಕ್ಷೇತ್ರದಲ್ಲಿ ವಾಸು ವಿರುದ್ದ ಕಣಕ್ಕಿಳಿಸಿದ್ದರು. ಆದರೆ ರಂಗಪ್ಪನವರ ಕೈಚಳಕವನ್ನು ನೋಡಿದ್ದ ಕ್ಷೇತ್ರದ ಜನ ತಮ್ಮ ಕೈಚಳಕ ತೋರಿ ಮೂರನೇ ಸ್ಥಾನ ಕಲ್ಪಿಸಿದರು.
ಭ್ರಷ್ಟಾತಿ ಭ್ರಷ್ಟ, ಫೇಕ್ ಸರ್ಟಿಫಿಕೇಟ್‍ಗಳ ಸರದಾರ ಎಂದು ಮೈಸೂರಿನಲ್ಲಿ ಹೆಸರಾಗಲು ಕಾರಣವಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್‍ಓಯು)ದ ಕುಲಸಚಿವರಾಗಿದ್ದ ರಂಗಪ್ಪ ವಿಶ್ವವಿದ್ಯಾನಿಲಯ ಹಲವು ಅವ್ಯವಹಾರಗಳ ಆರೋಪ ಹೊತ್ತುಕೊಂಡರು. 2009ರಲ್ಲಿ ಮುಕ್ತ ವಿವಿಯಲ್ಲಿ ಅಧಿಕಾರ ಹಿಡಿದ ನಂತರ ಕೆಎಸ್‍ಓಯುನಲ್ಲಿ ಉನ್ನತ ಹುದ್ದೆಗಳಿಂದ ಹಿಡಿದು ಅಟೆಂಡರ್‍ವರೆಗೂ ಒಕ್ಕಲಿಗರನ್ನೇ ತುಂಬಿಸಿಕೊಂಡರೆಂಬ ಆಪಾದನೆ ಹೊಂದಿದ್ದಾರೆ. ತಮ್ಮ ನಂತರದ ಕುಲಪತಿ ಎಂ.ಜಿ.ಕೃಷ್ಣನ್ ಹಾಗೂ ಇತರ 6 ಜನ ಸಂಗಡಿಗರ ಜೊತೆ ಸಿಬ್ಬಂದಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಕಮಿಷನ್ ಪಡೆದುಕೊಂಡರೆಂದೂ, ಅಡ್ಮಿಷನ್ನೇ ಆಗದವರಿಗೆ ಫೇಕ್ ಸರ್ಟಿಫಿಕೇಟ್‍ಗಳನ್ನು ಮಾರಿ ಖಜಾನೆ ತುಂಬಿಸಿಕೊಂಡರೆಂದೂ ವಿವಿ ವಲಯದಲ್ಲಿ ಚಾಲ್ತಿಯಲ್ಲಿದೆ. ಮುಕ್ತ ವಿವಿಯನ್ನೇ ಮುಕ್ತಗೊಳಿಸಿ ಬರಿದು ಮಾಡಿದ್ದಲ್ಲದೆ, ವಿವಿಯು ಸುಪ್ರೀಂ ಕೋರ್ಟ್‍ಗೆ ಅಲೆಯುವಂತೆ ಮಡಿದ ಹಿರಿಮೆಯೂ ಇವರಿಗೇ ಸಲ್ಲಬೇಕೆಂದು ಆ ವಿಚಾರದಲ್ಲಿ ಹೋರಾಟಕ್ಕಿಳಿದಿದ್ದವರ ಅನಿಸಿಕೆ.
ಅಲ್ಲಿಗೇ ನಿಲ್ಲದೇ 2013ರಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವ್ವಾಜ್‍ರೊಂದಿಗೆ ‘ಉತ್ತಮ ಒಡನಾಟ’ ಹೊಂದಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾದರು. ಕಾಂಚಾಣದ ಆಸೆ ತೀರದ ಕಂಟ್ರಾಕ್ಟರ್ ಹಾಸನದ ಹೇಮ ಗಂಗೋತ್ರಿ, ಮಂಡ್ಯದ ಪಿಜಿ ಸೆಂಟರ್ ಸೇರಿದಂತೆ ಮಾನಸಗಂಗೋತ್ರಿಯ ಕ್ಯಾಂಪಸ್‍ಗಳಲ್ಲಿ ಕಟ್ಟಡ ನಿರ್ಮಾಣ, ವಿವಿಯ ‘ಅಭಿವೃದ್ಧಿ ಕಾರ್ಯ’ಗಳು ನಡೆದವು. ಇದೂ ಹಗರಣವೇ ಆಯಿತು. ಇವರ ಭ್ರಷ್ಟಾಚಾರದ ಹಗರಣಗಳನ್ನು ಹೊರತಂದ ಸಾಹಿತಿ ಕೆ.ಎಸ್.ಭಗವಾನ್ ಮತ್ತು ಶಿವರಾಮುರವರು ಮೊಕದ್ದಮೆಗಳನ್ನು ಹೂಡಿ ಹೋರಾಟ ಆರಂಭಿಸಿದರು. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ರಂಗಪ್ಪ ಮತ್ತು 7 ಜನ ಸಂಗಡಿಗರ ವಿರುದ್ದ ಎಫ್‍ಐಆರ್ ಧಾಖಲಾಯಿತು. ಅಂದಿನ ಮೈಸೂರು ಸಿಟಿ ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದರವರು ಸಾರ್ವಜನಿಕ ಸೇವೆ ಸಲ್ಲಿಸಬೇಕಿದ್ದ ಸರ್ಕಾರಿ ನೌಕರನಿಂದ ವಿಶ್ವಾಸ ದ್ರೋಹ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 406 ಮತ್ತು 409ರ ಆಧಾರದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರು.
ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ಜೈಲಿನಲ್ಲಿ ಮುದ್ದೆ ಮುರಿಯಬೇಕಿದ್ದ, ಸರ್ಟಿಫಿಕೇಟ್ ಮಾರಾಟ ಮಾಡಿದರೆಂಬ ಆರೋಪ ಹೊತ್ತಿರುವ ರಂಗಪ್ಪ ಅದೇಗೋ ಹೊರಗಿದ್ದಾರÉ. ಕೋರ್ಟ್ ಕಟಕಟೆಯಲ್ಲಿ ನಿಂತಿರುವ ರಂಗಪ್ಪರಿಗೆ ಬೀಗರು ಎಂಬ ಮಮಕಾರದಿಂದ ದೊಡ್ಡಗೌಡರು ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದರು. ಒಂದುವೇಳೆ ಗೆದ್ದಿದ್ದರೆ, ಫಲವತ್ತಾದ ಹಣಕಾಸು, ಅಬಕಾರಿ, ಲೋಕೋಪಯೋಗಿ, ಇಂಧನ ಖಾತೆಗಳು ಮಕ್ಕಳಲ್ಲೂ, ಅಂಥದ್ದೇ ಲಾಭಭರಿತವಾದ ಸಾರಿಗೆ ಖಾತೆ ಬೀಗರಾದ ತಮ್ಮಣ್ಣರಿಗೂ ಕೊಟ್ಟಂತೆ, ಉನ್ನತ ಶಿಕ್ಷಣ ರಂಗಪ್ಪರಿಗೆ ಪ್ರಾಪ್ತವಾಗುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ತನ್ನ ಕುಟುಂಬದವರಿಗೆ, ಸಂಬಂಧಿಗಳಿಗೆ ವಿಧಾನಸೌಧದಲ್ಲಿ ಒಳ್ಳೊಳ್ಳೆ ಸ್ಥಾನಗಳನ್ನು ಕೊಟ್ಟು ಸಂತೃಪ್ತಿ ಪಡಿಸಿರುವ ಗೌಡರಿಗೆ ಎಲೆಕ್ಷನ್‍ನಲ್ಲಿ ಸೋತು ಚಾನ್ಸ್ ಕಳೆದುಕೊಂಡ ರಂಗಪ್ಪರಿಗೆ ಒಗ್ಗುವ ಸ್ಥಾನಕೊಡದೆ ಇರಲಾಗಲಿಲ್ಲ.
ರಂಗಪ್ಪರನ್ನು ಉನ್ನತ ಶಿಕ್ಷಣದ ಸಲಹೆಗಾರನಾಗಿ ನೇಮಿಸಲು ಅಪ್ಪ-ಮಕ್ಕಳು ನಿರ್ಧರಿಸಿದ್ದಾರೆಂಬ ವಾಸನೆಯನ್ನು ಗ್ರಹಿಸಿದ ಜಿ.ಟಿ.ದೇವೇಗೌಡರು ಮುನಿದೆದ್ದರು. ರಂಗಪ್ಪ ‘ಸಲಹೆಗಾರ’ರಾದರೆ ತನ್ನ ಫಲವತ್ತಾದ ಖಾತೆಯಲ್ಲಿನ ಫಸಲು ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ’ ರಂಗಪ್ಪರ ಪಾಲಾಗುತ್ತದೆ ಎಂದು ಅರ್ಥಮಾಡಿಕೊಂಡರು. ತನ್ನ ತಟ್ಟೆಗೆ ಮತ್ತೊಂದು ಕೈ ಬೀಳುವುದನ್ನು ತಪ್ಪಿಸಲು ಹಾಗೂ ಮೈಸೂರಿನಲ್ಲಿ ಕುಪ್ರಸಿದ್ಧವಾಗಿರುವ ರಂಗಪ್ಪರ ಪುರಾಣ ಇತಿಹಾಸವನ್ನು ನೋಡಿದ್ದರಿಂದ ಹೆದರಿಕೆಯೂ ಆಯಿತು. ಈತ ಇನ್ನೆಷ್ಟು ಹಗರಣಗಳನ್ನು ಮಾಡಿ ತನ್ನ ಹೆಸರನ್ನೂ ಎಲ್ಲಿ ಹಾಳುಮಾಡುತ್ತಾನೋ ಎಂದು ಚಿಂತಿಸಿದ ಜಿಟಿಡಿ ಸಾರ್ವಜನಿಕರು ಮಾಡಿದ ಗೇಲಿಯನ್ನು ದೊಡ್ಡದು ಮಾಡಿ ದೊಡ್ಡಗೌಡರಲ್ಲಿಗೆ ದೌಡಾಯಿಸಿದರು.
ಕುಮಾರಸ್ವಾಮಿ ಇಟ್ಟುಕೊಂಡಿರುವ ಹಣಕಾಸು ಅಥವಾ ಇಂಧನವನ್ನು ಕೊಡುವ ಪ್ರಶ್ನೆಯೇ ಇರಲಿಲ್ಲ. ತಮ್ಮಣ್ಣ ಅಥವಾ ಬಂಡೆಪ್ಪ ಕಾಶೆಂಪೂರ್ ಅವರ ಸಾರಿಗೆ ಅಥವಾ ಸಹಕಾರ ಕಿತ್ತುಕೊಂಡರೆ ಅವರು ಮುನಿಸಿಕೊಳ್ಳುತ್ತಾರೆ. ಹಾಗಾಗಿ ಇದೇ ಖಾತೆಯಲ್ಲಿ ಮುಂದುವರೆಯಿರಿ ಎಂಬ ಸೂಚನೆ ಬಂದಾಗ ಈ ಖಾತೆಯಲ್ಲಿಯೇ ಮುಂದುವರೆಸುವುದಾದರೆ, ತನಗೆ ಯಾವುದೇ ಸಲಹೆಗಾರರ ಅಗತ್ಯವಿಲ್ಲ ಎಂಬ ಸ್ಪಷ್ಟ ಅನಿಸಿಕೆಯನ್ನು ರವಾನಿಸಿದರು.
ಇದನ್ನು ಗೌಡರು ತಳ್ಳಿಹಾಕುವುದು ಕಷ್ಟವಿತ್ತು. ಜಿಟಿಡಿ ಮುನಿಸಿಕೊಳ್ಳುತ್ತಾ ಹೋದರೆ, ಅದಕ್ಕೆ ತಪ್ಪು ಅರ್ಥಗಳು ಬರುವ ಸಾಧ್ಯತೆಯಿತ್ತು. ಚಾಮುಂಡೇಶ್ವರಿ ಬಿಸಿ ಏರುವ ಮುನ್ನ ಸ್ವತಃ ಸಿದ್ದರಾಮಯ್ಯರಿಂದ ಆಹ್ವಾನವಿದ್ದರೂ, ಅವರೊಂದಿಗೆ ಹೋಗದೇ ಪಕ್ಷದಲ್ಲೇ ಉಳಿದಿದ್ದ ಜಿಟಿಡಿಗೆ ಇರುವ ಖಾತೆಗೂ ಕ್ಯಾತೆ ಇಟ್ಟರು ಎಂಬ ಆರೋಪ ಬೇಡವೆಂದು ತೀರ್ಮಾನಿಸಿದರು. ಜಿಟಿಡಿ ಉಳಿದುಕೊಂಡರು; ಈಗ ಸದ್ಯ ರಂಗಪ್ಪ ಸಹಾ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಸರ್ಕಾರ ಮುಂದುವರೆದರೆ ಅವರಿಗೆ ಪುನರ್ವಸತಿ ಕಲ್ಪಿಸುವುದರಲ್ಲಿ ಸಂಶಯವಿಲ್ಲ

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...