Homeಅಂಕಣಗಳುಝಕಾತಿನಿಂದ ಬಡತನ ನಿರ್ಮೂಲನ ಯಾಕೆ ಸಾಧ್ಯವಾಗುತ್ತಿಲ್ಲ?

ಝಕಾತಿನಿಂದ ಬಡತನ ನಿರ್ಮೂಲನ ಯಾಕೆ ಸಾಧ್ಯವಾಗುತ್ತಿಲ್ಲ?

- Advertisement -
- Advertisement -

ಒಬ್ಬ ಮುಸಲ್ಮಾನನ ಐದು ಮೂಲಭೂತ ಕರ್ತವ್ಯಗಳಲ್ಲಿ ಝಕಾತ್ ಅರ್ಥಾತ್ ಕಡ್ಡಾಯ ದಾನ ನಾಲ್ಕನೆಯದು. ಆರ್ಥಿಕವಾಗಿ ಸಬಲನಿರುವವನು ತನ್ನ ವಾರ್ಷಿಕ ಆದಾಯ ಅಥವಾ ಉಳಿತಾಯದ ಶೇಕಡಾ ಎರಡೂವರೆಯಷ್ಟನ್ನು ಸಮಾಜದ ಬಡವರಿಗೆ ಕಡ್ಡಾಯವಾಗಿ ದಾನ ನೀಡಲೇಬೇಕು. ಅದು ಅದನ್ನು ನೀಡುವವನ ಔದಾರ್ಯವಲ್ಲ, ಬದಲಾಗಿ ಅದನ್ನು ಪಡೆಯುವವನ ಹಕ್ಕು. ನಾವು ಕಟ್ಟುವ ಇತರೆಲ್ಲಾ ತೆರಿಗೆಯಂತೆ ಬಡವರಿಗೆ ನೀಡಬೇಕಾದ ತೆರಿಗೆ. ಇಸ್ಲಾಮಿಕ್ ರಿಪಬ್ಲಿಕ್‍ನಲ್ಲಿ ಯಾರಾದರೂ ಝಕಾತ್ ನೀಡದಿದ್ದರೆ ಅದನ್ನು ಆತನಿಂದ ಕಸಿದುಕೊಡುವ ಹಕ್ಕು ಮತ್ತು ಜವಾಬ್ದಾರಿ ಪ್ರಭುತ್ವಕ್ಕಿದೆ.
ಈ ಝಕಾತಿನ ಮೂಲ ಉದ್ದೇಶ ಬಡತನ ನಿರ್ಮೂಲನೆ. ಇಂದು ಭಾರತದಾದ್ಯಂತ ಲಕ್ಷಾಂತರ ಮಂದಿ ಮಿಲಿಯಾಧೀಶ, ಬಿಲಿಯಾಧೀಶ ಮುಸ್ಲಿಮರಿದ್ದೂ ಮುಸ್ಲಿಂ ಸಮುದಾಯ ಇಂದಿಗೂ ಏಕೆ ಈ ದೇಶದ ಅತ್ಯಂತ ಬಡ ಸಮುದಾಯವಾಗಿದೆ? ಸಾಚಾರ್ ವರದಿಯ ದಟ್ಟ ದರಿದ್ರ ಸಮುದಾಯದ ಪಟ್ಟಿಯಲ್ಲಿ ಈ ಸಮುದಾಯದ ಹೆಸರೇಕೆ ಅಗ್ರ ಸ್ಥಾನದಲ್ಲಿದೆ? ಇದರರ್ಥವೇನು? ಯಾವ ಉದ್ದೇಶದಿಂದ ಇಸ್ಲಾಮ್ ಝಕಾತನ್ನು ಕಡ್ಡಾಯ ಮಾಡಿತೋ ಅದರ ಅದೇ ಯಾಕೆ ಬುಡಮೇಲಾಗಿದೆ? ಸಮಾಜದ ಎಲ್ಲಾ ಸಮುದಾಯಗಳಲ್ಲಿ ಕಂಡುಬರುವಂತೆ ಮುಸ್ಲಿಂ ಸಮುದಾಯದಲ್ಲೂ ಝಕಾತ್‍ನಂತ ಪದ್ಧತಿ ಇದ್ದಾಗ್ಯೂ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಲೇ ಇರೋದು ದುರಂತವೇ ಸರಿ.
ಎಷ್ಟೋ ಮಂದಿ ಶ್ರೀಮಂತ ಮುಸ್ಲಿಮರು ಐದು ವಕ್ತ್ ನಮಾಝ್ ಮಾಡುತ್ತಾರೆ, ರಮಝಾನ್ ವೃತಾನುಷ್ಠಿಸುತ್ತಾರೆ, ಒಂದಲ್ಲ, ಎರಡಲ್ಲ ಮೂರುಮೂರು ಹಜ್ ನಿರ್ವಹಿಸುತ್ತಾರೆ. ಮಾವನ ಮನೆಗೆ ಹೋಗಿ ಬಂದಷ್ಟು ಸಲೀಸಾಗಿ ಬೇಕುಬೇಕೆಂದೆನಿಸಿದಾಗೆಲ್ಲಾ ಉಮ್ರಾ ನಿರ್ವಹಿಸಲು ಹೋಗುತ್ತಾರೆ. ಆದರೆ ಅವರು ಬಡವರ ಪಾಲಿನ ಹಕ್ಕಾದ ಝಕಾತನ್ನು ನೀಡದೇ ವಂಚಿಸುತ್ತಾರೆ. ಸಂಶಯವೇ ಬೇಡ. ಝಕಾತ್ ನೀಡದಾತ ಮಹಾ ಮೋಸಗಾರ!
ಬಡವರ ಪಾಲಿನ ಹಕ್ಕನ್ನು ನೀಡದೆ ಕೇವಲ ನಮಾಝ್, ಉಪವಾಸ, ಹಜ್ ಉಮ್ರಾ ನಿರ್ವಹಿಸಿದ ಮಾತ್ರಕ್ಕೆ ಅಂತವರು ಸಾತ್ವಿಕರು ಸಜ್ಜನರಾಗಿಬಿಡುವುದಿಲ್ಲ. ಝಕಾತ್‍ನ ಹೊರತಾಗಿ ಧರ್ಮ ಪಾಲನೆ ಪರಿಪೂರ್ಣವೆನಿಸದು. ಇದು ಝಕಾತ್ ನೀಡದ ವಂಚಕರ ಕತೆಯಾದರೆ, ಇನ್ನು ಝಕಾತ್ ನೀಡುವವರ ಕತೆ ಇನ್ನೊಂದು ವಿಧದ್ದು.
ಕೆಲವು ಶ್ರೀಮಂತರು ಝಕಾತ್ ಮಾತ್ರವಲ್ಲ ತಮ್ಮ ಬಳಿ ಕೈ ಚಾಚಿ ಬಂದವರನ್ನು ಯಾವತ್ತೂ ಖಾಲಿ ಕೈಯಲ್ಲಿ ಹಿಂದಿರುಗಿಸದೇ ಅವರಿಗೆ ಸ್ವದಕಾವನ್ನೂ ನೀಡುತ್ತಾರೆ. ಅಂದಹಾಗೆ, ಸ್ವದಕಾ ಎಂದರೆ ಅದು ಐಚ್ಚಿಕ ದಾನ. ಅದಕ್ಕೆ ನಿರ್ದಿಷ್ಟವಾಗಿ ಇಂತಿಷ್ಟೆಂದು ಲೆಕ್ಕವಿಲ್ಲ. ಎಷ್ಟು ಬೇಕಾದರೂ ನೀಡಬಹುದು. ಆದರೆ ಝಕಾತ್ ಹಾಗಲ್ಲ. ಅದನ್ನು ಪ್ರತೀ ವರ್ಷವೂ ತಮ್ಮ ಆಯವ್ಯಯದ ಲೆಕ್ಕಾಚಾರ ಮಾಡಿ, ಆದಾಯದ ಅಥವಾ ಉಳಿತಾಯದ ಎರಡೂವರೆ ಶೇಕಡಾವನ್ನು ಕಡ್ಡಾಯವಾಗಿ ಸಮಾಜದ ಬಡಬಗ್ಗರಿಗೆ ನೀಡಲೇಬೇಕು. ಕೆಲವ ಶ್ರೀಮಂತರು ಬಹಳ ಪರ್ಫೆಕ್ಟಾಗಿ ಝಕಾತ್ ನೀಡುತ್ತಾ ಬಂದರೂ ಅದರಿಂದ ಯಾರ ಬಡತನವೂ ನೀಗಿಲ್ಲ. ಯಾಕೆಂದರೆ ನೀಡುವವರು ಅದನ್ನು ನೀಡಬೇಕಾದ ಕ್ರಮದಲ್ಲಿ ನೀಡುತ್ತಿಲ್ಲ. ಆ ಕುರಿತಂತೆ ಸ್ವಲ್ಪ ಆಳವಾಗಿ ಅವಲೋಕಿಸಬೇಕಿರುವುದು ಕಾಲದ ಜರೂರು.
ಒಬ್ಬ ವ್ಯಕ್ತಿಯ ವಾರ್ಷಿಕ ಉಳಿತಾಯ ಒಂದು ಕೋಟಿಯೆಂದಿಟ್ಟುಕೊಳ್ಳೋಣ. ಅದರ ಲೆಕ್ಕಾಚಾರದ ಪ್ರಕಾರ ಆತ ವಾರ್ಷಿಕ ಎರಡೂವರೆ ಲಕ್ಷ ಝಕಾತ್ ನೀಡಬೇಕು. ಆತ ಎರಡೂವರೆ ಲಕ್ಷ ಝಕಾತ್ ನೀಡುತ್ತಾನೆ. ಅದನ್ನು ಹೇಗೆ ನೀಡುತ್ತಾನೆಂಬುವುದೇ ನಮ್ಮ ಮುಂದಿನ ಸವಾಲು. ಎರಡೂವರೆ ಲಕ್ಷವನ್ನು ಇನ್ನೂರೋ, ಮುನ್ನೂರೋ ಐನೂರೋ ಸಾವಿರವೋ ಮಂದಿಗೆ ಹಂಚಿ ನೂರು ರೂಪಾಯಿ, ಇನ್ನೂರು ರೂಪಾಯಿ, ಐನೂರು ರೂಪಾಯಿ, ಸಾವಿರ ರೂಪಾಯಿ, ಐದು ಸಾವಿರ , ಹತ್ತು ಸಾವಿರ ರೂಪಾಯಿಯಂತೆ ನೀಡುತ್ತಾನೆ. ಇವುಗಳಿಂದ ಯಾರ ಬಡತನವೂ ನೀಗುವುದಿಲ್ಲ. ಇದರಿಂದ ಕೆಲವರಿಗೆ ಒಂದು ದಿನಕ್ಕೆ ಎರಡು ಹೊತ್ತಿನ ಊಟ ಮಾಡಲು ಸಾಧ್ಯವಾದರೆ ಮತ್ತೆ ಕೆಲವರಿಗೆ ಅವರ ಕುಟುಂಬದ ಒಂದು ತಿಂಗಳು ಅಥವಾ ಎರಡು ತಿಂಗಳ ಖರ್ಚು ನಿಭಾಯಿಸಲು ಸಾಕಾಗುತ್ತದಷ್ಟೆ.
ಇದರಿಂದ ಝಕಾತ್ ಪಡೆದವನ ಬಡತನ ನೀಗುವುದೂ ಇಲ್ಲ ಮತ್ತು ಆತ ಯಾವತ್ತೂ ಸ್ವಾವಲಂಭಿಯಾಗಲೂ ಸಾಧ್ಯವಿಲ್ಲ. ಈ ರೀತಿ ಝಕಾತ್ ಕೊಡುವುದು ತಪ್ಪು ಎಂದಲ್ಲ. ಆದರೆ ಝಕಾತಿನ ಉದ್ದೇಶಿತ ಗುರಿ ತಲುಪಲು ಸಾಧ್ಯವಿಲ್ಲ.
ಮೊನ್ನೆ ಈದ್ ಹಬ್ಬದ ಮರುದಿನ ಮಂಗಳೂರು ಮೂಲದ ಎರಡು ಸ್ಥಳೀಯ ಟಿವಿ ಚಾನೆಲ್ ಗಳಲ್ಲಿ ಒಂದು ಡಾಕ್ಯುಮೆಂಟರಿ ಪ್ರಸಾರವಾಯಿತು. ಅದು ದೇರಳಕಟ್ಟೆ ಸಮೀಪದ ಕನಕೂರು ಎಂಬ ಪ್ರದೇಶದ ಬಡ ರೋಗಿಯೊಬ್ಬರ ಕಣ್ಣೀರ ಕತೆ. ಕೂಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ ಒಮ್ಮೆ ಕೆಲಸ ಮಾಡುತ್ತಿದ್ದಾಗ ಗೋಡೆಯೊಂದರ ಮೇಲಿನಿಂದ ಬಿದ್ದು ಸೊಂಟಕ್ಕೆ ಪೆಟ್ಟಾಗಿತ್ತು. ವೈದ್ಯರ ಬಳಿ ಹೋದಾಗ ಆತನ ಡಿಸ್ಕ್ ಡಿಸ್‍ಲೊಕೇಟ್ ಆಗಿರುವುದಾಗಿ ತಿಳಿದು ಬಂತು. ಡಿಸ್ಕ್ ಡಿಸ್‍ಲೊಕೇಟ್ ಆದರೆ ಅದನ್ನು ಕೆಲವೊಮ್ಮೆ ಚಿಕಿತ್ಸೆ ಮತ್ತು ವ್ಯಾಯಾಮದ ಮೂಲಕ ಸರಿಪಡಿಸಬಹುದು, ಕೆಲವು ಕೇಸ್ ಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಡಿಸ್ಕನ್ನು ಯಥಾಸ್ಥಾನದಲ್ಲಿ ಲೊಕೇಟ್ ಮಾಡಿ ರೋಗಿಯನ್ನು ಗುಣಪಡಿಸಲು ಸಾಧ್ಯವಾದರೂ ಆತ ಮುಂದೆ ಶ್ರಮದ ಕೆಲಸ ಮಾಡುವುದು ಸುಲಭ ಸಾಧ್ಯವಲ್ಲ. ಹೊಟ್ಟೆ ಪಾಡೆಂದು ಶ್ರಮದ ಕೆಲಸಕ್ಕಿಳಿದರೆ ಪುನಃ ಆತನ ಡಿಸ್ಕಿಗೆ ಸಮಸ್ಯೆ ಬಾಧಿಸುವ ಸಾಧ್ಯತೆ ನಿಚ್ಚಳ. ಆದರೆ ನಾನು ಇಲ್ಲಿ ಹೇಳುತ್ತಿರುವ ವ್ಯಕ್ತಿಗೆ ಈಗಾಗಲೇ ಆಗಿರುವ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ನರಳುತ್ತಿದ್ದಾರೆ. ಇನ್ನೊಂದೆಡೆ ಸಂಸಾರದ ನೊಗದ ಭಾರ ಬೇರೆ ಇದೆ. ಅರ್ಧ ಕಟ್ಟಿದ ಗೋಡೆಗೆ ಅಧರ್ಂಬರ್ಧ ಸಿಮೆಂಟ್ ಶೀಟು, ಅಧರ್ಂಬರ್ಧ ತರ್ಪಾಲು ಹೊದಿಸಿ ದಿನದೂಡುತ್ತಿದ್ದಾರೆ. ಒಟ್ಟಿನಲ್ಲಿ ಗಾಳಿ ಬೀಸಿದರೆ ಹಾರಿ ಹೋಗುವ ತರ್ಪಾಲ್, ಮಳೆ ಬಂದರೆ ಕೊಳವಾಗುವ ಮನೆ… ಈದ್ ದಿನದಲ್ಲೂ ಹರಕಲು ಬಟ್ಟೆ ಧರಿಸಿದ ಅವರ ಮತ್ತು ಕುಟುಂಬದ ಮುಖದಲ್ಲಿ ಈದ್ ಹಬ್ಬದ ಸಂಭ್ರಮದ ಛಾಯೆ ಹೇಗೆ ತಾನೇ ಇರಲು ಸಾಧ್ಯ?
ಇದೇ ದೇರಳಕಟ್ಟೆ ಪರಿಸರದಲ್ಲಿ ವಾರ್ಷಿಕ ಒಂದು ಕೋಟಿ ಉಳಿತಾಯವಿರುವ ಕನಿಷ್ಠ ಐದು ಮನೆಗಳು ಮತ್ತು ವರ್ಷಕ್ಕೆ ಕನಿಷ್ಠ ಐದು ಕೋಟಿ ಉಳಿತಾಯವಿರುವ ಎರಡು ಮಂದಿ ಶ್ರೀಮಂತ ಮುಸ್ಲಿಮರಾದರೂ ಇದ್ದಾರೆ. ಹದಿನೈದು ಕೋಟಿಗೆ ಎಷ್ಟು ಝಕಾತ್ ಆಗುತ್ತದೆಂದು ನೀವೇ ಲೆಕ್ಕ ಹಾಕಿ. ಮೂವತ್ತೇಳೂವರೆ ಲಕ್ಷ ರೂಪಾಯಿ.. ಇನ್ನು ಅದಕ್ಕಿಂತ ಕಡಿಮೆ ಝಕಾತ್ ನೀಡಬಹುದಾದ ಕುಟುಂಬಗಳ ಲೆಕ್ಕ ಹಾಕಿದರೆ ದೇರಳಕಟ್ಟೆ ಪ್ರದೇಶವೊಂದರಲ್ಲೇ ಕನಿಷ್ಠ ಒಂದು ಕೋಟಿ ರೂಪಾಯಿಗಳಷ್ಟಾದರೂ ಝಕಾತ್ ಜನರೇಟ್ ಆಗುತ್ತದೆ.
ಇಷ್ಟು ಝಕಾತ್ ಸಂದಾಯವಾಗಬೇಕಾದ ಒಂದು ಊರಿನಲ್ಲಿ ಮನೆಮಠ ಇಲ್ಲದೇ ದಿನದ ಪಾಡಿಗೆ ಬವಣೆಪಡುವವರಿದ್ದಾರೆಂದರೆ ಏನರ್ಥ? ಒಂದೋ ಆ ಊರಿನ ಶ್ರೀಮಂತ ಮುಸ್ಲಿಮರು ಸರಿಯಾಗಿ ಝಕಾತ್ ನೀಡುತ್ತಿಲ್ಲ, ಅಥವಾ ಅವರ ಝಕಾತ್ ಅರ್ಹರಿಗೆ ತಲುಪಬೇಕಾದ ರೀತಿಯಲ್ಲಿ ತಲುಪುತ್ತಿಲ್ಲ. ಯಾರು ಝಕಾತ್ ನೀಡುತ್ತಾರೆ ಮತ್ತು ನೀಡುವುದಿಲ್ಲ ಎಂಬುದಕ್ಕಿಂತ ಅರ್ಹರಿಗೆ ಅರ್ಹ ರೀತಿಯಲ್ಲಿ ಅದು ತಲುಪುತ್ತಿದೆಯೋ, ಇಲ್ಲವೋ ಎಂದು ನಾವಿಂದು ಚರ್ಚಿಸಬೇಕಿದೆ.
ಒಂದು ಕೋಟಿ ಝಕಾತ್ ಮೊತ್ತವನ್ನು ಎಷ್ಟೋ ಸಾವಿರ ಜನಕ್ಕೆ ತಲುಪಿಸುವುದರಿಂದ ಯಾರ ಬಡತನವೂ ನೀಗುವುದಿಲ್ಲ. ಬದಲಾಗಿ ವ್ಯಕ್ತಿಯೊಬ್ಬರಿಗೆ ಎರಡೂವರೆ ಲಕ್ಷ ರೂಪಾಯಿಯಂತೆ ವರ್ಷಕ್ಕೆ ಇಪ್ಪತ್ತು ಮಂದಿಗೆ ನೀಡಿದರೆ ಅವರು ಯಾವುದಾದರೂ ವ್ಯಾಪಾರ ವಹಿವಾಟು ಪ್ರಾರಂಭಿಸಿ ಸ್ವಾವಲಂಬಿಯಾಗಲು ಸಾಧ್ಯ. ಅಥವಾ ಒಬ್ಬ ದುಡಿಯುವ ವ್ಯಕ್ತಿಗೆ ಒಂದು ಆಟೋ ರಿಕ್ಷಾ ತೆಗೆದುಕೊಟ್ಟರೆ, ಒಂದು ಟೆಂಪೋ ತೆಗೆದುಕೊಟ್ಟರೆ ಆತ ಸ್ವಾವಲಂಬಿಯಾಗಿ ಯಾರಿಗೂ ಕೈಚಾಚದೇ ಬದುಕಲು ಸಾಧ್ಯ. ಒಬ್ಬನಿಗೆ ವ್ಯಾಪಾರ ಮಾಡಲು ಮೂಲಬಂಡವಾಳ ನೀಡಿದರೆ ಆತನೂ ಸ್ವಾವಲಂಭಿಯಾಗಲು ಸಾಧ್ಯ. ಈ ರೀತಿ ಝಕಾತಿನ ಸಮರ್ಪಕ ಹಂಚಿಕೆಯಾದರೆ ಒಮ್ಮೆ ಝಕಾತ್ ಪಡಕೊಂಡು ಸ್ವಾವಲಂಭಿಯಾಗಿ ಮುಂದೆ ಕೆಲವೇ ವರ್ಷಗಳಲ್ಲಿ ಆತನೂ ಝಕಾತ್ ನೀಡಲು ಅರ್ಹನಾಗಬಹುದು. ಇಲ್ಲಿ ದೇರಳಕಟ್ಟೆ ಎಂಬ ಊರು ಉದಾಹರಣೆ ಮಾತ್ರ. ಎಲ್ಲಾ ಊರುಗಳ ಕತೆಯೂ ಇಷ್ಟೆ.
ಇನ್ನು ಕೆಲವರು ಝಕಾತ್ ನೀಡುವ ವಿಧಾನವೇ ತೀರಾ ಅವೈಜ್ಞಾನಿಕವಾಗಿರುತ್ತದೆ ಮತ್ತು ಅದು ವಾಸ್ತವದಲ್ಲಿ ಝಕಾತ್ ಅನ್ನಿಸಿಕೊಳ್ಳುವುದಿಲ್ಲ. ನನಗೆ ತಿಳಿದಂತೆ ಕೆಲವು ಮಧ್ಯಮ ವರ್ಗದ ಝಕಾತ್ ನೀಡುವವರು ರಮಝಾನ್ ತಿಂಗಳಲ್ಲಿ ಝಕಾತ್‍ಗೆಂದೇ ಒಂದಿಷ್ಟು ದುಡ್ಡು ಲೆಕ್ಕ ಮಾಡಿ ತೆಗೆದಿಟ್ಟು ಮನೆಬಾಗಿಲಿಗೆ, ಕಚೇರಿ ಬಾಗಿಲಿಗೆ ಯಾಚಿಸುತ್ತಾ ಬಂದವರಿಗೆ ಹತ್ತೊ, ಇಪ್ಪತ್ತೊ ನೀಡುತ್ತಾ ರಮಝಾನ್ ಮುಗಿಯುವುದರೊಳಗೆ ಆ ದುಡ್ಡನ್ನು ದಾನ ಮಾಡಿ ಮುಗಿಸುತ್ತಾರೆ. ವಾಸ್ತವದಲ್ಲಿ ಇದು ಝಕಾತ್ ಆಗುವುದೇ ಇಲ್ಲ. ಇದು ಸ್ವದಕಾ (ಐಚ್ಚಿಕ ದಾನವಾಗುತ್ತದೆ) ಎನಿಸಿಕೊಳ್ಳುತ್ತದೆ.
ಮತ್ತೆ ಕೆಲವರು ಮಸೀದಿಗೆ ದಾನ ನೀಡಿದ ದುಡ್ಡನ್ನು ಝಕಾತಾಗಿ ಸ್ವಯಂ ಪರಿಗಣಿಸುವುದೂ ಇದೆ. ಇದು ಕೂಡಾ ಝಕಾತ್ ಆಗುವುದಿಲ್ಲ. ಝಕಾತಿನ ಹಕ್ಕುದಾರರಿಗೆ ತಲುಪಿದರೆ ಮಾತ್ರ ಝಕಾತ್ ಆಗುತ್ತದೆ. ಸಮಾಜದ ಬಡವರು ಝಕಾತಿನ ಹಕ್ಕುದಾರರೇ ಹೊರತು ಮಸೀದಿ ಯಾವತ್ತೂ ಝಕಾತಿನ ಹಕ್ಕುದಾರ ಅಲ್ಲ.
ನನಗೆ ತಿಳಿದ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಕಚೇರಿಯಲ್ಲಿ ಝಕಾತ್ ಬಾಕ್ಸ್ ಇಟ್ಟು ಪ್ರತಿದಿನ ಅದಕ್ಕೆ ದುಡ್ಡು ಹಾಕುತ್ತಾರೆ ಮತ್ತು ಪ್ರತಿದಿನ ಯಾಚಿಸಿ ಬರುವವರಿಗೆ ಅದರಿಂದಲೇ ನೀಡುತ್ತಾರೆ. ಅದು ವ್ಯಕ್ತಿಯೊಬ್ಬನ ಹಸಿವು ನೀಗಿಸಬಹುದು. ಅಥವಾ ಆತನ ಒಂದು ಪುಟ್ಟ ಸಮಸ್ಯೆ ಪರಿಹರಿಸಬಹುದು. ಇಂತಹದ್ದನ್ನು ಝಕಾತ್ ನಿಧಿಯಿಂದ ತೆಗೆಯುವುದಕ್ಕಿಂತ ಸ್ವದಕಾ ಎಂಬ ನೆಲೆಯಲ್ಲಿ ಕೊಡಬೇಕು ಅಥವಾ ಕೊಡದಿರಲೂಬಹುದು. ಆದರೆ ಝಕಾತ್ ಕೊಡಲೇಬೇಕು ಅದು ಕಡ್ಡಾಯ. ಅದನ್ನು ಸಮರ್ಪಕ ರೀತಿಯಲ್ಲಿ ಹಂಚಿಕೆ ಮಾಡಬೇಕು. ಆಗ ಮಾತ್ರ ಸ್ವಾವಲಂಭಿ ಸಮುದಾಯ ಮತ್ತು ಬಡತನ ಮುಕ್ತ ಸಮುದಾಯ ರೂಪಿಸಲು ಸಾಧ್ಯ.
ಈ ನಿಟ್ಟಿನಲ್ಲಿ ಸಮುದಾಯದ ಉಲಮಾ ಮತ್ತು ಉಮರಾ ವರ್ಗಕ್ಕೆ ಮಹತ್ತರವಾದ ಜವಾಬ್ದಾರಿಯಿದೆ. ಎಲ್ಲಾ ಜಮಾಅತ್‍ನ ಉಸ್ತಾದರುಗಳು ಶ್ರೀಮಂತ ಮುಸ್ಲಿಮರಿಗೆ ಈ ವಿಚಾರವನ್ನು ಮನದಟ್ಟು ಮಾಡಿ ಕೊಡುವ ಕೆಲಸ ಮಾಡಬೇಕು. ಮತ್ತು ಪ್ರತೀ ಜಮಾಅತ್ ವ್ಯಾಪ್ತಿಯಲ್ಲಿ ಬಡವರ ಗಣತಿ ಮಾಡಿ ಝಕಾತ್‍ಗೆ ಅರ್ಹರಾದವರ ಪಟ್ಟಿ ತಯಾರಿಸಿ ಒಬ್ಬೊಬ್ಬ ವ್ಯಕ್ತಿಗೆ ಒಬ್ಬೊಬ್ಬನ ಸಂಕಷ್ಟ ನೀಗಿಸುವ ಹೊಣೆ ಜಮಾಅತ್ ನೀಡಬೇಕು. ಅಥವಾ ಇಂತಿಷ್ಟು ಮಂದಿ ಶ್ರೀಮಂತರ ಗುಂಪು ಮಾಡಿ ಅವರಿಗೆ ಓರ್ವ ಬಡವನನ್ನು ಬಡತನ ಮುಕ್ತವಾಗಿಸುವ ಹೊಣೆ ವಹಿಸಬೇಕು…
ಈ ನೆಲೆಯಲ್ಲಿ ಚಿಂತಿಸಿ ಸಮುದಾಯ ಮುಂದಡಿಯಿಟ್ಟರೆ ಬಡತನ ನಿರ್ಮೂಲನ ನಮಗೊಂದು ಸವಾಲೇ ಆಗದು…

– ಇಸ್ಮತ್ ಫಜೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ಎರಡು ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ ಬೀದಿ ನಾಯಿ: ಚಿಕಿತ್ಸೆಗಾಗಿ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತ ಗಾಯಾಳುಗಳು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಎರಡು ಗಂಟೆಗಳಲ್ಲಿ ಕನಿಷ್ಠ 40 ಜನರನ್ನು ಕಚ್ಚಿದ್ದು, ರೇಬೀಸ್ ವಿರುದ್ಧ ಲಸಿಕೆ ಪಡೆಯಲು ಸಂತ್ರಸ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ...

ಇರಾನ್‌ಗೆ ಶಸ್ತ್ರಾಸ್ತ್ರ ಕಳುಹಿಸುವುದಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಿರಾಕರಿಸಿದ್ದಾರೆ: ಡೊನಾಲ್ಡ್‌ ಟ್ರಂಪ್

"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿರಾಕರಿಸಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಚೀನಾ ಇರಾನ್‌ಗೆ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳ ನಂತರ ಅಮೆರಿಕದ...

‘ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು’: ಮಾಯಾವತಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಉದ್ದೇಶಿತ ಶೇಕಡಾ 33ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಬೇಕೆಂದು ಬಹುಜನ ಸಮಾಜ...

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...

ಉತ್ತರ ಪ್ರದೇಶ| ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೋಳಿ ಹಬ್ಬದಂದು ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಮೂವರು ಯುವಕರ...

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...

ಶಿಕೋಪುರ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣ; ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ಹರಿಯಾಣದ ಶಿಕೋಪುರದಲ್ಲಿ ನಡೆದ ವಿವಾದಾತ್ಮಕ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಬುಧವಾರ ದೆಹಲಿ ನ್ಯಾಯಾಲಯವು ಪರಿಗಣಿಸಿದೆ....

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ‌ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನತೆ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ನಡೆ ಗಾಯಕ್ಕೆ ಮುಲಾಮು...