Homeರಾಜಕೀಯಜಿಟಿಡಿ ಖಾತೆ ಗೋಳಾಟಕ್ಕೆ ಕೆ.ಎಸ್.ರಂಗಪ್ಪ ಕಾರಣ?

ಜಿಟಿಡಿ ಖಾತೆ ಗೋಳಾಟಕ್ಕೆ ಕೆ.ಎಸ್.ರಂಗಪ್ಪ ಕಾರಣ?

- Advertisement -
- Advertisement -

ಕುಮಾರಸ್ವಾಮಿಯವರ ಸರ್ಕಾರಕ್ಕೆ ಪರೀಕ್ಷೆಗಳೋ ಪರೀಕ್ಷೆಗಳು. ತಾವು ಮುಖ್ಯಮಂತ್ರಿಯಾಗುವ ಖಚಿತ ಭರವಸೆಯಿಂದ ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರ ರಚನೆಗೆ ಮುಂದಾದಾಗಿನಿಂದ ಖಾತೆ ಹಂಚಿಕೆಯವರೆಗೆ ಎಚ್‍ಡಿಕೆಗೆ ಒಂದಾದ ಮೇಲೆ ಒಂದು ಅಗ್ನಿಪರೀಕ್ಷೆಗಳು. ಖಾತೆ ಹಂಚಿಕೆಯ ನಂತರವೂ ಖಾತೆಗಳ ವಿಚಾರದಲ್ಲಿ ಅಸಮಾಧಾನಗೊಂಡವರನ್ನು ಸಮಾಧಾನ ಮಾಡುವ ಕೆಲಸ ಮುಂದುವರೆದೇ ಇತ್ತು. ಇದರಲ್ಲಿ ಹೆಚ್ಚು ಸುದ್ದಿಯಾಗಿದ್ದು ಜಿ.ಟಿ.ದೇವೇಗೌಡರಿಗೆ ನೀಡಲಾದ ಉನ್ನತ ಶಿಕ್ಷಣ ಖಾತೆ. ಸಾರ್ವಜನಿಕರಿಂದ ‘ಉನ್ನತ ಶಿಕ್ಷಣ ಖಾತೆ ಪಡೆದ ಏಳನೇ ತರಗತಿ ಶಾಸಕ’ ಎಂಬ ಟೀಕೆಗಳೇ ಜಿ.ಟಿ.ದೇವೇಗೌಡರನ್ನು ದೊಡ್ಡಗೌಡರ ಮನೆ ಮೆಟ್ಟಿಲೇರುವಂತೆ ಮಾಡಿತ್ತೆಂಬ ಸುದ್ದಿ ಹರಿದಾಡಿತ್ತು. ಜನ ತನ್ನ ಶೈಕ್ಷಣಿಕ ಅರ್ಹತೆಯನ್ನಿಟ್ಟುಕೊಂಡು ಗೇಲಿಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಅಥವಾ ತನಗೆ ಶೈಕ್ಷಣಿಕ ಅರ್ಹತೆಯಿಲ್ಲವೆಂಬ ಕೀಳರಿಮೆಯಿಂದಲೋ ಆ ಖಾತೆ ತನಗೆ ಬೇಡ; ಜನರೊಂದಿಗೆ ಒಡನಾಟ ಮಾಡುವಂತಹ, ಫೀಲ್ಡ್‍ನಲ್ಲಿ ಕೆಲಸ ಮಾಡುವಂತಹ ಖಾತೆ ಕೊಡಿ ಎಂದು ದೊಡ್ಡಗೌಡರಲ್ಲಿ ಅಹವಾಲು ಸಲ್ಲಿಸಿದ್ದರು ಎಂಬ ವಿವರಣೆಯೂ ಸುದ್ದಿಯಾಗಿತ್ತು. ಈ ಮಧ್ಯೆ, ಪತ್ರಕರ್ತರೊಡನೆ ಮಾತನಾಡುವ ಸಮಯದಲ್ಲಿ ‘ಸರಿ ಬಿಡಿ, ಈ ಖಾತೆಯನ್ನು ನಾನೇ ಇಟ್ಟುಕೊಳ್ತೀನಿ. ಆಗಬಹುದಾ?’ ಎಂದು ಪತ್ರಕರ್ತರನ್ನೇ ಕೇಳಿದ್ದರು. ಆದರೆ ಈಗ ಜಿಟಿಡಿ ಅದೇ ಖಾತೆಯಲ್ಲಿ ತೃಪ್ತರಾಗಲು ಕಾರಣವೇನು? ಎಂಬ ಪ್ರಶ್ನೆ ಏಳುತ್ತದೆ.
ಜೆಡಿಎಸ್‍ನ ಆರಂಭದಿಂದಲೂ ಪಕ್ಷದ ಜೊತೆಯಲ್ಲಿದ್ದುಕೊಂಡು ಪಕ್ಷವನ್ನು ಬೆಳೆಸಲು ದುಡಿದಿದ್ದ ಜಿಟಿಡಿ 2004-05ರಲ್ಲಿ ಸಿದ್ದರಾಮಯ್ಯನವರ ಜೊತೆ ಸಖ್ಯವಿದ್ದರೂ, ಪಕ್ಷ ಬಿಟ್ಟು ಹೋಗಿರಲಿಲ್ಲ. ಆದರೆ ನಂತರ ಒಂದು ಅವಧಿಗೆ ಬಿಜೆಪಿಯ ಹೊಸ್ತಿಲು ತುಳಿದು ನಂತರ ವಾಪಸ್ಸು ಬಂದಿದ್ದರು. ಮೈಸೂರಿನ ಮಟ್ಟಿಗೆ ಪಕ್ಷದ ಪ್ರಭಾವಿ ನಾಯಕ, ಅಷ್ಟು ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು 27,000 ಮತಗಳ ಲೀಡ್‍ನಲ್ಲಿ ಮಣಿಸಿ, ‘ಜೈಂಟ್ ಕಿಲ್ಲರ್’ ಆಗಿದ್ದ ಗೌಡರನ್ನು ಮಂತ್ರಿಮಂಡಲದಿಂದ ಕಡೆಗಣಿಸುವುದು ಸಾಧ್ಯವಿರಲಿಲ್ಲ. ಸರ್ಕಾರ ಕ್ಯಾಪ್ಟನ್‍ಶಿಪ್ ಪಡೆದಿದ್ದ ಕುಮಾರಣ್ಣ ತನ್ನ ಕುಟುಂಬಕ್ಕೆ ಫಲವತ್ತಾದ ಖಾತೆಗಳನ್ನು ಪಡೆದುಕೊಂಡಿದ್ದರ ಜೊತೆಗೆ ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕರಿಗೂ ಮಂತ್ರಿಮಂಡಲದಲ್ಲಿ ಹೆಚ್ಚಿನ ಖಾತೆಗಳನ್ನು ಕೊಡಲೇಬೇಕಾಗಿತ್ತು. ಹಾಗೆ ನೋಡಿದರೆ ದೊಡ್ಡಗೌಡರು ಜಿಟಿಡಿಗೆ ಫಲವತ್ತಾದ ಖಾತೆಯನ್ನೇ ನೀಡಿದ್ದರು.
ಕುಲಪತಿಗಳನ್ನು ನೇಮಿಸುವ, ಡೀಮ್ಡ್ ಯೂನಿವರ್ಸಿಟಿಗಳ ಸ್ಥಾಪನೆ ಅನುಮತಿ ನೀಡುವುದರ ಜೊತೆಗೆ ಮೆಡಿಕಲ್ ಕಾಲೇಜುಗಳಿಗೂ ಸ್ವಾಯತ್ತತೆ ನೀಡುವ ಅಧಿಕಾರ ಉನ್ನತ ಶಿಕ್ಷಣ ಇಲಾಖೆಗೆ ಇದೆ. ವೃತ್ತಿಪರ ಉನ್ನತ ಶಿಕ್ಷಣದ ಖಾಸಗೀ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿದಾಗ ಒಳ್ಳೆ ‘ಫಲ’ವನ್ನೇ ಉನ್ನತ ಶಿಕ್ಷಣ ಖಾತೆ ನೀಡುತ್ತದೆ ಎಂಬುದು ಜಿಟಿಡಿಗೂ ತಿಳಿದಿತ್ತು. ಹಾಗಾಗಿ ಅಂತಹ ಖಾತೆಯನ್ನು ಸಾರ್ವಜನಿಕರ ಗೇಲಿಗೆ ನಾಚಿ ಬಿಟ್ಟುಬಿಡುವ ಮೂರ್ಖರಾಗಿರಲು ಸಾಧ್ಯವಿಲ್ಲ. ಅಸಲೀ ಸಂಗತಿ ಏನೆಂದರೆ, ಆ ಖಾತೆಯ ನಿರ್ವಹಣೆಗೆ ದೊಡ್ಡಗೌಡರು ಮಾಡಿದ್ದ ಮಾಸ್ಟರ್‍ಪ್ಲಾನ್ ಏನು ಎಂಬ ವಾಸನೆಯನ್ನು ಗ್ರಹಿಸಿದ್ದರಿಂದ ಜಿಟಿಡಿ ಆ ಖಾತೆಯನ್ನು ತಿರಸ್ಕರಿಸಿದ್ದರು.
ದೊಡ್ಡಗೌಡರ ಕುಟುಂಬದಲ್ಲಿ ಒಬ್ಬರಾದ ಮೈಸೂರಿನಲ್ಲಿ ಕಂಟ್ರಾಕ್ಟರ್ ರಂಗಪ್ಪ ಎಂದು ಹೆಸರಾಗಿರುವ ಉನ್ನತ ಶಿಕ್ಷಣದ ಮಾರಾಟಗಾರ ಎಂದೇ ಖ್ಯಾತಿ ಪಡೆದಿರುವ ಕೆ.ಎಸ್.ರಂಗಪ್ಪರನ್ನು ಉನ್ನತ ಶಿಕ್ಷಣ ಖಾತೆಗೆ ಸಲಹೆಗಾರನಾಗಿ ನೇಮಿಸಲು ದೊಡ್ಡಗೌಡರ ಮಾಸ್ಟರ್‍ಮೈಂಡ್ ಕೆಲಸ ಮಾಡಿತ್ತು. ಅವರ ಮೊಮ್ಮಗಳು ರಂಗಪ್ಪ ಅವರ ಸೊಸೆಯಾಗಿದ್ದು, ಆ ಕಾರಣಕ್ಕೇ ರಂಗಪ್ಪರನ್ನು ಚಾಮರಾಜ ಕ್ಷೇತ್ರದಲ್ಲಿ ವಾಸು ವಿರುದ್ದ ಕಣಕ್ಕಿಳಿಸಿದ್ದರು. ಆದರೆ ರಂಗಪ್ಪನವರ ಕೈಚಳಕವನ್ನು ನೋಡಿದ್ದ ಕ್ಷೇತ್ರದ ಜನ ತಮ್ಮ ಕೈಚಳಕ ತೋರಿ ಮೂರನೇ ಸ್ಥಾನ ಕಲ್ಪಿಸಿದರು.
ಭ್ರಷ್ಟಾತಿ ಭ್ರಷ್ಟ, ಫೇಕ್ ಸರ್ಟಿಫಿಕೇಟ್‍ಗಳ ಸರದಾರ ಎಂದು ಮೈಸೂರಿನಲ್ಲಿ ಹೆಸರಾಗಲು ಕಾರಣವಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್‍ಓಯು)ದ ಕುಲಸಚಿವರಾಗಿದ್ದ ರಂಗಪ್ಪ ವಿಶ್ವವಿದ್ಯಾನಿಲಯ ಹಲವು ಅವ್ಯವಹಾರಗಳ ಆರೋಪ ಹೊತ್ತುಕೊಂಡರು. 2009ರಲ್ಲಿ ಮುಕ್ತ ವಿವಿಯಲ್ಲಿ ಅಧಿಕಾರ ಹಿಡಿದ ನಂತರ ಕೆಎಸ್‍ಓಯುನಲ್ಲಿ ಉನ್ನತ ಹುದ್ದೆಗಳಿಂದ ಹಿಡಿದು ಅಟೆಂಡರ್‍ವರೆಗೂ ಒಕ್ಕಲಿಗರನ್ನೇ ತುಂಬಿಸಿಕೊಂಡರೆಂಬ ಆಪಾದನೆ ಹೊಂದಿದ್ದಾರೆ. ತಮ್ಮ ನಂತರದ ಕುಲಪತಿ ಎಂ.ಜಿ.ಕೃಷ್ಣನ್ ಹಾಗೂ ಇತರ 6 ಜನ ಸಂಗಡಿಗರ ಜೊತೆ ಸಿಬ್ಬಂದಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಕಮಿಷನ್ ಪಡೆದುಕೊಂಡರೆಂದೂ, ಅಡ್ಮಿಷನ್ನೇ ಆಗದವರಿಗೆ ಫೇಕ್ ಸರ್ಟಿಫಿಕೇಟ್‍ಗಳನ್ನು ಮಾರಿ ಖಜಾನೆ ತುಂಬಿಸಿಕೊಂಡರೆಂದೂ ವಿವಿ ವಲಯದಲ್ಲಿ ಚಾಲ್ತಿಯಲ್ಲಿದೆ. ಮುಕ್ತ ವಿವಿಯನ್ನೇ ಮುಕ್ತಗೊಳಿಸಿ ಬರಿದು ಮಾಡಿದ್ದಲ್ಲದೆ, ವಿವಿಯು ಸುಪ್ರೀಂ ಕೋರ್ಟ್‍ಗೆ ಅಲೆಯುವಂತೆ ಮಡಿದ ಹಿರಿಮೆಯೂ ಇವರಿಗೇ ಸಲ್ಲಬೇಕೆಂದು ಆ ವಿಚಾರದಲ್ಲಿ ಹೋರಾಟಕ್ಕಿಳಿದಿದ್ದವರ ಅನಿಸಿಕೆ.
ಅಲ್ಲಿಗೇ ನಿಲ್ಲದೇ 2013ರಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವ್ವಾಜ್‍ರೊಂದಿಗೆ ‘ಉತ್ತಮ ಒಡನಾಟ’ ಹೊಂದಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾದರು. ಕಾಂಚಾಣದ ಆಸೆ ತೀರದ ಕಂಟ್ರಾಕ್ಟರ್ ಹಾಸನದ ಹೇಮ ಗಂಗೋತ್ರಿ, ಮಂಡ್ಯದ ಪಿಜಿ ಸೆಂಟರ್ ಸೇರಿದಂತೆ ಮಾನಸಗಂಗೋತ್ರಿಯ ಕ್ಯಾಂಪಸ್‍ಗಳಲ್ಲಿ ಕಟ್ಟಡ ನಿರ್ಮಾಣ, ವಿವಿಯ ‘ಅಭಿವೃದ್ಧಿ ಕಾರ್ಯ’ಗಳು ನಡೆದವು. ಇದೂ ಹಗರಣವೇ ಆಯಿತು. ಇವರ ಭ್ರಷ್ಟಾಚಾರದ ಹಗರಣಗಳನ್ನು ಹೊರತಂದ ಸಾಹಿತಿ ಕೆ.ಎಸ್.ಭಗವಾನ್ ಮತ್ತು ಶಿವರಾಮುರವರು ಮೊಕದ್ದಮೆಗಳನ್ನು ಹೂಡಿ ಹೋರಾಟ ಆರಂಭಿಸಿದರು. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ರಂಗಪ್ಪ ಮತ್ತು 7 ಜನ ಸಂಗಡಿಗರ ವಿರುದ್ದ ಎಫ್‍ಐಆರ್ ಧಾಖಲಾಯಿತು. ಅಂದಿನ ಮೈಸೂರು ಸಿಟಿ ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದರವರು ಸಾರ್ವಜನಿಕ ಸೇವೆ ಸಲ್ಲಿಸಬೇಕಿದ್ದ ಸರ್ಕಾರಿ ನೌಕರನಿಂದ ವಿಶ್ವಾಸ ದ್ರೋಹ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 406 ಮತ್ತು 409ರ ಆಧಾರದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರು.
ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ಜೈಲಿನಲ್ಲಿ ಮುದ್ದೆ ಮುರಿಯಬೇಕಿದ್ದ, ಸರ್ಟಿಫಿಕೇಟ್ ಮಾರಾಟ ಮಾಡಿದರೆಂಬ ಆರೋಪ ಹೊತ್ತಿರುವ ರಂಗಪ್ಪ ಅದೇಗೋ ಹೊರಗಿದ್ದಾರÉ. ಕೋರ್ಟ್ ಕಟಕಟೆಯಲ್ಲಿ ನಿಂತಿರುವ ರಂಗಪ್ಪರಿಗೆ ಬೀಗರು ಎಂಬ ಮಮಕಾರದಿಂದ ದೊಡ್ಡಗೌಡರು ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದರು. ಒಂದುವೇಳೆ ಗೆದ್ದಿದ್ದರೆ, ಫಲವತ್ತಾದ ಹಣಕಾಸು, ಅಬಕಾರಿ, ಲೋಕೋಪಯೋಗಿ, ಇಂಧನ ಖಾತೆಗಳು ಮಕ್ಕಳಲ್ಲೂ, ಅಂಥದ್ದೇ ಲಾಭಭರಿತವಾದ ಸಾರಿಗೆ ಖಾತೆ ಬೀಗರಾದ ತಮ್ಮಣ್ಣರಿಗೂ ಕೊಟ್ಟಂತೆ, ಉನ್ನತ ಶಿಕ್ಷಣ ರಂಗಪ್ಪರಿಗೆ ಪ್ರಾಪ್ತವಾಗುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ತನ್ನ ಕುಟುಂಬದವರಿಗೆ, ಸಂಬಂಧಿಗಳಿಗೆ ವಿಧಾನಸೌಧದಲ್ಲಿ ಒಳ್ಳೊಳ್ಳೆ ಸ್ಥಾನಗಳನ್ನು ಕೊಟ್ಟು ಸಂತೃಪ್ತಿ ಪಡಿಸಿರುವ ಗೌಡರಿಗೆ ಎಲೆಕ್ಷನ್‍ನಲ್ಲಿ ಸೋತು ಚಾನ್ಸ್ ಕಳೆದುಕೊಂಡ ರಂಗಪ್ಪರಿಗೆ ಒಗ್ಗುವ ಸ್ಥಾನಕೊಡದೆ ಇರಲಾಗಲಿಲ್ಲ.
ರಂಗಪ್ಪರನ್ನು ಉನ್ನತ ಶಿಕ್ಷಣದ ಸಲಹೆಗಾರನಾಗಿ ನೇಮಿಸಲು ಅಪ್ಪ-ಮಕ್ಕಳು ನಿರ್ಧರಿಸಿದ್ದಾರೆಂಬ ವಾಸನೆಯನ್ನು ಗ್ರಹಿಸಿದ ಜಿ.ಟಿ.ದೇವೇಗೌಡರು ಮುನಿದೆದ್ದರು. ರಂಗಪ್ಪ ‘ಸಲಹೆಗಾರ’ರಾದರೆ ತನ್ನ ಫಲವತ್ತಾದ ಖಾತೆಯಲ್ಲಿನ ಫಸಲು ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ’ ರಂಗಪ್ಪರ ಪಾಲಾಗುತ್ತದೆ ಎಂದು ಅರ್ಥಮಾಡಿಕೊಂಡರು. ತನ್ನ ತಟ್ಟೆಗೆ ಮತ್ತೊಂದು ಕೈ ಬೀಳುವುದನ್ನು ತಪ್ಪಿಸಲು ಹಾಗೂ ಮೈಸೂರಿನಲ್ಲಿ ಕುಪ್ರಸಿದ್ಧವಾಗಿರುವ ರಂಗಪ್ಪರ ಪುರಾಣ ಇತಿಹಾಸವನ್ನು ನೋಡಿದ್ದರಿಂದ ಹೆದರಿಕೆಯೂ ಆಯಿತು. ಈತ ಇನ್ನೆಷ್ಟು ಹಗರಣಗಳನ್ನು ಮಾಡಿ ತನ್ನ ಹೆಸರನ್ನೂ ಎಲ್ಲಿ ಹಾಳುಮಾಡುತ್ತಾನೋ ಎಂದು ಚಿಂತಿಸಿದ ಜಿಟಿಡಿ ಸಾರ್ವಜನಿಕರು ಮಾಡಿದ ಗೇಲಿಯನ್ನು ದೊಡ್ಡದು ಮಾಡಿ ದೊಡ್ಡಗೌಡರಲ್ಲಿಗೆ ದೌಡಾಯಿಸಿದರು.
ಕುಮಾರಸ್ವಾಮಿ ಇಟ್ಟುಕೊಂಡಿರುವ ಹಣಕಾಸು ಅಥವಾ ಇಂಧನವನ್ನು ಕೊಡುವ ಪ್ರಶ್ನೆಯೇ ಇರಲಿಲ್ಲ. ತಮ್ಮಣ್ಣ ಅಥವಾ ಬಂಡೆಪ್ಪ ಕಾಶೆಂಪೂರ್ ಅವರ ಸಾರಿಗೆ ಅಥವಾ ಸಹಕಾರ ಕಿತ್ತುಕೊಂಡರೆ ಅವರು ಮುನಿಸಿಕೊಳ್ಳುತ್ತಾರೆ. ಹಾಗಾಗಿ ಇದೇ ಖಾತೆಯಲ್ಲಿ ಮುಂದುವರೆಯಿರಿ ಎಂಬ ಸೂಚನೆ ಬಂದಾಗ ಈ ಖಾತೆಯಲ್ಲಿಯೇ ಮುಂದುವರೆಸುವುದಾದರೆ, ತನಗೆ ಯಾವುದೇ ಸಲಹೆಗಾರರ ಅಗತ್ಯವಿಲ್ಲ ಎಂಬ ಸ್ಪಷ್ಟ ಅನಿಸಿಕೆಯನ್ನು ರವಾನಿಸಿದರು.
ಇದನ್ನು ಗೌಡರು ತಳ್ಳಿಹಾಕುವುದು ಕಷ್ಟವಿತ್ತು. ಜಿಟಿಡಿ ಮುನಿಸಿಕೊಳ್ಳುತ್ತಾ ಹೋದರೆ, ಅದಕ್ಕೆ ತಪ್ಪು ಅರ್ಥಗಳು ಬರುವ ಸಾಧ್ಯತೆಯಿತ್ತು. ಚಾಮುಂಡೇಶ್ವರಿ ಬಿಸಿ ಏರುವ ಮುನ್ನ ಸ್ವತಃ ಸಿದ್ದರಾಮಯ್ಯರಿಂದ ಆಹ್ವಾನವಿದ್ದರೂ, ಅವರೊಂದಿಗೆ ಹೋಗದೇ ಪಕ್ಷದಲ್ಲೇ ಉಳಿದಿದ್ದ ಜಿಟಿಡಿಗೆ ಇರುವ ಖಾತೆಗೂ ಕ್ಯಾತೆ ಇಟ್ಟರು ಎಂಬ ಆರೋಪ ಬೇಡವೆಂದು ತೀರ್ಮಾನಿಸಿದರು. ಜಿಟಿಡಿ ಉಳಿದುಕೊಂಡರು; ಈಗ ಸದ್ಯ ರಂಗಪ್ಪ ಸಹಾ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಸರ್ಕಾರ ಮುಂದುವರೆದರೆ ಅವರಿಗೆ ಪುನರ್ವಸತಿ ಕಲ್ಪಿಸುವುದರಲ್ಲಿ ಸಂಶಯವಿಲ್ಲ

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...