Homeಅಂತರಾಷ್ಟ್ರೀಯಗಾಲ್ವಾನ್ ಸಂಘರ್ಷ ಚೀನಾದ ಪೂರ್ವ ಯೋಜಿತ ಕೃತ್ಯ: ಅಮೆರಿಕಾ ವರದಿ

ಗಾಲ್ವಾನ್ ಸಂಘರ್ಷ ಚೀನಾದ ಪೂರ್ವ ಯೋಜಿತ ಕೃತ್ಯ: ಅಮೆರಿಕಾ ವರದಿ

- Advertisement -
- Advertisement -

ಜೂನ್‌ 15 ರಂದು ಚೀನಾ ಮತ್ತು ಭಾರತೀಯ ಸೇನೆಯ ನಡುವೆ ಗಾಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಗೆ ಚೀನಾ ಸರ್ಕಾರ ಮೊದಲೇ ಯೋಜನೆ ರೂಪಿಸಿತ್ತು ಎಂದು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಕೆಯಾಗಿರುವ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ. ಈ ಯೋಜನೆಯಂತೆ ಅಲ್ಲಿ ಸಾಕಷ್ಟು ಸಾವುನೋವುಗಳನ್ನು ಉಂಟು ಮಾಡುವುದೇ ಅದರ ದುರುದ್ದೇಶವಾಗಿತ್ತೆಂದು ಅದು ಹೇಳಿದೆ.

ಮಂಗಳವಾರ ಪ್ರಕಟವಾದ ಈ ವರದಿಯಲ್ಲಿ, ತನ್ನ ನೆರೆಹೊರೆಯ ರಾಷ್ಟ್ರಗಳ ವಿರುದ್ಧ ಚೀನಾವು ಹಲವಾರು ವರ್ಷಗಳಿಂದ ಬೆದರಿಸುವ ಅಭಿಯಾನವನ್ನು ನಡೆಸುತ್ತಾ ಬಂದಿದ್ದು, ಜಪಾನ್‌, ಭಾರತ ಸೇರಿದಂತೆ ಆಗ್ನೇಯ ಏಷ್ಯಾದ ರಾಷ್ಟ್ರಗಳ ಜೊತೆ ಮಿಲಿಟರಿ ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚೀನಾ ಪ್ರಸ್ತಾಪಿತ ಒಪ್ಪಂದಕ್ಕೆ ಸಹಿ ಹಾಕಿದ 15 ರಾಷ್ಟ್ರಗಳು; ಹೊರಗುಳಿದ ಭಾರತ!

ಚೀನಾ-ಭಾರತದ ಸಂಬಂಧಗಳ ವಿಷಯದಲ್ಲಿ 2020 ಅತ್ಯಂತ ‘ಕೆಟ್ಟ ವರ್ಷ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಗಲ್ವಾನ್ ಸಂಘರ್ಷವು 1975ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಎರಡೂ ಕಡೆಯ ಸೈನಿಕರ ಸಾವು, ನೋವಿಗೆ ಕಾರಣವಾಗಿದೆಯೆಂದು ವರದಿ ತಿಳಿಸಿದೆ.

ಶಾಂತಿ ಕಾಲದಲ್ಲಿ ಚೀನಾ ಆಡಳಿತ ಪಕ್ಷವು ತನ್ನ ಸಶಸ್ತ್ರ ಪಡೆಗಳನ್ನು ಬೆದರಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ತೈವಾನ್ ಮತ್ತು ದಕ್ಷಿಣ ಚೀನಾ ಸಾಗರಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಸಮರಾಭ್ಯಾಸಗಳನ್ನು ನಡೆಸಿ ಭೀತಿ ಮೂಡಿಸಲು ಯತ್ನಿಸುತ್ತಿದೆ ಎಂದು ವರದಿ ಹೇಳಿದೆ.

ಚೀನಾದ ಆಕ್ರಮಣಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ‘ಅಮೆರಿಕ-ಚೀನಾ ಆಯೋಗ’ ಅಮೆರಿಕ ಕಾಂಗ್ರೆಸ್‌ಗೆ ವಿವರವಾದ ಈ ವರದಿಯನ್ನು ನೀಡಿದೆ. ಅಮೆರಿಕ ಮತ್ತು ಚೀನಾ ನಡುವಿನ ಭದ್ರತೆ ಮತ್ತು ವ್ಯಾಪಾರ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು 2000 ನೇ ಅಕ್ಟೋಬರ್‌ನಲ್ಲಿ ‘ಅಮೆರಿಕ-ಚೀನಾ ಆಯೋಗ’ವನ್ನು ರಚಿಸಲಾಗಿತ್ತು.

ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಈ ಸಂಘರ್ಷದಿಂದ ಭಾರತದ ಸುಮಾರು 20 ಯೋಧರು ಸಾವನ್ನಪ್ಪಿದ್ದರು. ಚೀನಾ ಕೂಡಾ ಸಾವು ನೋವುಗಳಾಗಿತ್ತು ಎಂದು ಒಪ್ಪಿಕೊಂಡಿದ್ದರೂ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿರಲಿಲ್ಲ.

ಇದನ್ನೂ ಓದಿ: ಚೀನಾ ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಎಂಬುದು ಸ್ಪಷ್ಟ: ಮೋಹನ್ ಭಾಗವತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...