Homeಕರ್ನಾಟಕಅಘೋಷಿತ ತುರ್ತುಪರಿಸ್ಥಿತಿಯಲ್ಲಿ "ಗಾಂಧಿ ಭಾರತ" ಅಗತ್ಯ

ಅಘೋಷಿತ ತುರ್ತುಪರಿಸ್ಥಿತಿಯಲ್ಲಿ “ಗಾಂಧಿ ಭಾರತ” ಅಗತ್ಯ

- Advertisement -
- Advertisement -

ಪ್ರಸ್ತುತ ಭಾರತದ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ಎಲ್ಲಿ ನೋಡಿದರಲ್ಲಿ ಹಿಂಸಾತ್ಮಕ ದೃಶ್ಯಾವಳಿಗಳನ್ನು ನೋಡುತ್ತಾ ಯುವಜನತೆಯನ್ನು ಒಕ್ಕಲೆಬ್ಬಿಸುತ್ತಿರುವ ಪ್ರಸ್ತುತ ಭಾರತದ ಹಲವು ದುಷ್ಟಶಕ್ತಿಗಳನ್ನು ನಿರ್ನಾಮಮಾಡಿ, ಅಹಿಂಸಾತ್ಮಕ ಸದ್ಭಾವನೆಗಳನ್ನು ಮೂಡಿಸಿಕೊಳ್ಳುವಲ್ಲಿ “ಗಾಂಧಿ ಭಾರತ” ದ ಕಾರ್ಯಕ್ರಮದ ಅತ್ಯಗತ್ಯವಾಗಿತ್ತು.‌

1924 ಡಿಸೆಂಬರ್ 26 ಮಹಾತ್ಮಗಾಂಧಿಯವರು ಅಧ್ಯಕ್ಷರಾಗಿದ್ದ ಸಮಯದಲ್ಲಿ, ರಾಷ್ಟ್ರೀಯ ಅಧಿವೇಶನವನ್ನು ಬೆಳಗಾವಿಯಲ್ಲಿ ನೆಡೆಸಿದ್ದಕ್ಕೆ ಇಂದಿಗೆ ನೂರು ವರ್ಷ ಪೂರೈಸುತ್ತಿವೆ. ಇದೊಂದು ಅಭೂತಪೂರ್ವ ಭಾಗ್ಯ ಕರ್ನಾಟಕದಾಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಯವರೆಗೂ ಮುಂಬೈ -ಕಲ್ಕತ್ತಾ -ದೆಹಲಿ ಪ್ರಾಂತ್ಯಗಳಲ್ಲಿ ಬಹಳ ದಕ್ಷತೆಯಿಂದ ರಾಜಕಾರಣದಲ್ಲಿ ಕಾಂಗ್ರೆಸ್ ನೆಲೆಯೂರಿದ್ದರೂ, ಅದು ದೇಶಾದ್ಯಂತ ವ್ಯಾಪಿಸಲು ಈ ಬೆಳಗಾವಿ ಅಧಿವೇಶನ ಹೊಸ ದಿಕ್ಸೂಚಿಯನ್ನು ನೀಡಿತು ಎಂದರೆ ತಪ್ಪಾಗಲಾರದು.

ಮಹಾತ್ಮ ಗಾಂಧಿಯವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರೊಬ್ಬ ಸಮಾಜ ಸುಧಾರಕರೂ ಆಗಿದ್ದರು.‌ ಹಾಗಾಗಿ ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕಾಂಗ್ರೆಸ್ಸನ್ನು ಕೇವಲ ರಾಜಕೀಯ ಪಕ್ಷವಾಗಿ ನೋಡದೆ, ಸಮಾಜ ಸುಧಾರಣೆಯ ಅಂಶಗಳನ್ನು ಅಳವಡಿಸಿದರು. ದೇಶದ ಪ್ರತಿ ಮನೆಮನೆಗೂ ಕಾಂಗ್ರೆಸ್ ಪಕ್ಷವನ್ನು ತಲುಪಿಸುವಲ್ಲಿ ಈ ಅಧಿವೇಶನ ಬಹುಮುಖ್ಯ ಪಾತ್ರವಹಿಸಿತು. ಅಂದಿನಿಂದ ಕಾಶ್ಮೀರದಿಂದ ಕನ್ಯಾಕುಮಾರಿಗೂ ಕಾಂಗ್ರೆಸ್  ಕಾರ್ಯಕರ್ತರು ತಮ್ಮನ್ನು ತಾವು ಸ್ವಾತಂತ್ರ್ಯ ಚಳುವಳಿಗೆ ಸಮರ್ಪಿಸಿಕೊಂಡರು.

ಇಡೀ ಅಖಂಡ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ ಗಾಂಧಿಯವರು, 18 ಬಾರಿ ಪ್ರವಾಸ ಮಾಡಿ, 122 ದಿನ ಕರ್ನಾಟಕದ ನೆಲದಲ್ಲಿ ಓಡಾಡಿದರು. ದೇಶದ ವಿವಿಧ ಜಾತಿ- ಧರ್ಮ- ಸಂಸ್ಕೃತಿ ಹಾಗೂ ಜನರ ಸಾಮಾಜಿಕ ಜೀವನವನ್ನು ಅಭ್ಯಾಸ ಮಾಡಿದ ಅವರು, “ಸ್ವಾತಂತ್ರ್ಯ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯಗಳಾಗಬೇಕೆಂದು” ಘೋಷಣೆ ಮಾಡುವುದರ ಮೂಲಕ‌ ಅಂದೇ ಬಹುತ್ವ ಭಾರತಕ್ಕೆ ನಾಂದಿ ಹಾಡಿದರು. ಇದಲ್ಲದೇ ಅಸ್ಪೃಶ್ಯತೆ ನಿವಾರಣೆ, ಹಿಂದೂ- ಮುಸ್ಲಿಂ ಭಾತೃತ್ವ, ಸ್ವದೇಶಿ ಖಾದಿ ಬಳಕೆ ಹೀಗೆ ಹತ್ತು ಹಲವಾರು ನಿರ್ಣಯಗಳನ್ನು ಜಾರಿಗೆ ತಂದರು.

ಇಂದು ಕಾಂಗ್ರೆಸ್ಸಿನ ರಾಷ್ರ್ಟೀಯ ಅಧಿವೇಶನ ನೂರು ವರ್ಷ ಹಿಂದೆ ನೆಡೆದ ಸ್ಥಳದಲ್ಲಿ ನೆಡೆಯುತ್ತಿರುವುದು ಕೂಡ ಒಂದು ಐತಿಹಾಸಿಕ.‌ ಇಂದು ರಾಷ್ಟ್ರೀಯ ಕಾಂಗ್ರೇಸ್  ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ  ಈ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಿರುವುದು ಕೂಡ ಮತ್ತೊಂದು ಮೈಲಿಗಲ್ಲು. ಕಾರಣ ನೂರು ವರ್ಷದ ಹಿಂದೆ ನೆಡೆದ ಸಭೆಯಲ್ಲಿ ದಲಿತರನ್ನು ಮುಖ್ಯವಾಹಿನಿಗೆ ತರಬೇಕೆಂದು ಅಂದಿನ ಸರ್ವಸಮ್ಮತದ ನಿರ್ಧಾರವಾಗಿತ್ತು.‌ ನೂರನೇ ವರ್ಷದ ಈ ದಿನದ ಅಧಿವೇಶನದಲ್ಲಿ ದಲಿತರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದದ್ದು ಕೂಡ ಅಭೂತಪೂರ್ವ ಕ್ಷಣವೆಂದರೆ ಅತಿಶಯೋಕ್ತಿ ಅಲ್ಲ.

ಹಾಗೆ ದೇಶದ ಆದರ್ಶ ಮಹಿಳೆ ಸೋನಿಯಾಗಾಂಧಿ , ಬಹುತ್ವ ಭಾರತದ ಭರವಸೆಯ ಜನನಾಯಕ ರಾಹುಲ್ ಗಾಂಧಿಯವರು, CWC ಸದಸ್ಯರು,ಸ್ರ್ತೀಶಕ್ತಿ ಬೆನ್ನೆಲುಬಾದ ಪ್ರಿಯಾಂಕಗಾಂಧಿ, ರಾಷ್ಟ್ರೀಯ ನಾಯಕರು, ಕರ್ನಾಟಕದ ಸೈದ್ಧಾತಿಕ ಮೇರುವ್ಯಕ್ತಿತ್ವದ ಜನನಾಯಕರಾದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಹಾಗೂ ಎಲ್ಲಾ ಸಚಿವ ಸಂಪುಟದ ಸದಸ್ಯರು, ಶಾಸಕರು,ಸಂಸದರು, ವಿಧಾನಪರಿಷತ್ತು ರಾಜ್ಯಸಭಾ ಸದಸ್ಯರು, ರಾಷ್ಟ್ರೀಯ ಹಾಗೂ ರಾಜ್ಯ ಪಧಾಧಿಕಾರಿಗಳು, ಸೇವಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಅಧಿವೇಶನದಲ್ಲಿ ಭಾಗಿಯಾದ ಎಲ್ಲರಿಗೂ ಶುಭಾಶಯಗಳು.

ಸ್ವಾತಂತ್ರ್ಯ ಭಾರತದ ನಂತರ ಈ ದೇಶಕ್ಕೆ ” ಗಾಂಧಿ ಭಾರತ” ಎಂದು ಹೆಸರಿಡಬೇಕು ಎಂದು ಸಮಾಜವಾದಿ ಲೋಹಿಯಾ ಅವರ ಅಪೇಕ್ಷೆಯಾಗಿತ್ತು. ಈ ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿಸಿ ಸ್ವತಂತ್ರ ತಂದುಕೊಟ್ಟ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಅದೆಷ್ಟು ಮುಖ್ಯವೋ, ಸ್ವಾತಂತ್ರ್ಯ ನಂತರದ ಭಾರತದ ಭವಿಷ್ಯಕ್ಕಾಗಿ ನಿರ್ಮಾಣವಾದ ಅಂಬೇಡ್ಕರ್ ನೇತೃತ್ವದ ಸಂವಿಧಾನ ಅಷ್ಟೇ ಮುಖ್ಯ. ಸ್ವಾತಂತ್ರ್ಯ ಮತ್ತು ಸಂವಿಧಾನ ಒಂದು ನಾಣ್ಯದ ಎರಡು ಮುಖಗಳಂತೆ. ಭಾರತದ ಸಂವಿಧಾನ ಈ ದೇಶದ ಉದ್ದಗಲಕ್ಕೂ ಹರಿಯುವ ಮಹಾನದಿಯಾದರೆ, ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಸಂವಿಧಾನಶಿಲ್ಪಿ ಅಂಬೇಡ್ಕರ್ ಎರಡು ದಡಗಳು..

ಹೀಗಾಗಿ ಇಂದಿನ ರ್ಯಾಲಿಗೆ ” ಜೈ ಬಾಪೂ – ಜೈ ಭೀಮ್- ಜೈ ಸಂವಿಧಾನ್ ” ಹೆಸರು ಬಹಳ ಅರ್ಥಪೂರ್ಣವಾಗಿದೆ. ಮನುವಾದಿಗಳನ್ನು ನಿರ್ನಾಮ ಮಾಡಲು ಈ ಮೂರು ವಾಕ್ಯಗಳು ನಮ್ಮ ಕಾಂಗ್ರೆಸ್ಸಿನ  ಮುಂದಿನ ಘೋಷಣೆಗಳಾಗಬೇಕು.

“ಗಾಂಧಿ, ಭಾರತದ ಆತ್ಮವಾದರೆ- ಅಂಬೇಡ್ಕರ್ ದೇಶವೆಂಬ ದೇಹದಲ್ಲಿ ಹರಿದಾಡುವ ರಕ್ತ” ಇತಿಹಾಸದಲ್ಲಿ‌ ಆದ ಹಲವು ಕಹಿಘಟನೆಗಳನ್ನು ಮರೆತು, ನಮ್ಮ ಮುಂದಿನ ಭವಿಷ್ಯದ ಬಹುತ್ವಭಾರತಕ್ಕಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರದು.

ಒಂದು ವರ್ಷದ ” ಗಾಂಧಿ ಭಾರತ” ದ ರೂಪರೇಷೆಗಳು ವಿಭಿನ್ನವಾಗಿರಲಿ ಹಾಗೂ ಈ ಸುದಿನ ಅರ್ಥಪೂರ್ಣವಾಗಿ ಮುಂದಿನ ಭಾರತದ ನಿರ್ಮಾಣಕ್ಕೆ ಭದ್ರ ಭವಿಷ್ಯ ನಿರ್ಮಾಣ ಮಾಡುವ ಐತಿಹಾಸಿಕ ನಿರ್ಣಯಗಳು ಹೊರಹೊಮ್ಮಲಿ ಎಂದು ಆಶಿಸೋಣ.‌

ಕಾಂಗ್ರೆಸ್ಸಿನ ಬೆಳಗಾವಿ ಮಹಾಧಿವೇಶನಕ್ಕೆ 100ರ ಸಂಭ್ರಮ: ಕುವೆಂಪು ಆತ್ಮಕತೆಯಲ್ಲಿದೆ ಇದರ ಕುರಿತ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...