Homeಅಂತರಾಷ್ಟ್ರೀಯಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರು ಶಿಕ್ಷೆ ಪೂರೈಸಿದ ನಂತರವು ಮರುಬಂಧನ

ಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರು ಶಿಕ್ಷೆ ಪೂರೈಸಿದ ನಂತರವು ಮರುಬಂಧನ

- Advertisement -
- Advertisement -

ಹೊಸದಿಲ್ಲಿ: ಭಾರತದಲ್ಲಿನ  ಹೆಚ್ಚಿನ ರೋಹಿಂಗ್ಯಾ ನಿರಾಶ್ರಿತರನ್ನುಅವರು  ಶಿಕ್ಷೆಯನ್ನು ಪೂರೈಸಿದ ನಂತರವೂ ಬಂಧಿಸಲಾಗುತ್ತಿದೆ  ಎಂದು ಭಾರತದಲ್ಲಿನ ರೋಹಿಂಗ್ಯಾ ನಿರಾಶ್ರಿತ ಬಂಧಿತರೊಂದಿಗಿನ ಸಂಭಾಷಣೆಯನ್ನು ಆಧರಿಸಿದ ಕೆಲ ಅಧ್ಯಯನಗಳು ಕಂಡುಕೊಂಡಿವೆ.

ಯುಎಸ್-ನೋಂದಾಯಿತ ಎನ್ ಜಿಒ ಸಂಸ್ಥೆಯಾದ ದಿ ಆಜಾದಿ ಪ್ರಾಜೆಕ್ಟ್ ಮತ್ತು ನಿರಾಶ್ರಿತರಿಗಾಗಿ ಪ್ರತಿಪಾದಿಸುವ ಅಮೆರಿಕದ ಲಾಭರಹಿತ ಸಂಸ್ಥೆಯಾದ ರೆಫ್ಯೂಜೀಸ್ ಇಂಟರ್‌ನ್ಯಾಷನಲ್ ಗಳು ಈ ಅಧ್ಯಯನ  ನಡೆಸಿದ್ದು, ಇದು ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳಿಗೆ ಭಾರತವು ತನ್ನ ಬದ್ಧತೆಯನ್ನು ಅನುಸರಿಸಲು ವಿಫಲವಾಗಿದೆ ಎಂದು ಈ ಸಂಸ್ಥೆಗಳು ನಡೆಸಿದ ವರದಿ ಹೇಳಿದೆ.

ಭಾರತದಲ್ಲಿನ ನಿರಾಶ್ರಿತ ಬಂಧಿತರು, ಅವರ ಕುಟುಂಬಗಳು ಮತ್ತು ವಕೀಲರು ಮತ್ತು ಬಂಧನ ಕೇಂದ್ರಕ್ಕೆ ಭೇಟಿ ನೀಡಿ ಇವರುಗಳ ಸಂಭಾಷಣೆಯನ್ನು ಆಧರಿಸಿ ಈ ಸಂಸ್ಥೆಗಳು ಅಧ್ಯಯನ ನಡೆಸಿವೆ.

ಹೆಚ್ಚಿನ ರೋಹಿಂಗ್ಯಾ ನಿರಾಶ್ರಿತರನ್ನು ಶಿಕ್ಷೆಯನ್ನು ಪೂರೈಸಿದ ನಂತರವೂ ಬಂಧಿಸಲಾಗುತ್ತಿದೆ. ಭಾರತದಲ್ಲಿ, ಸುಮಾರು 22,500 ರೋಹಿಂಗ್ಯಾ ನಿರಾಶ್ರಿತರು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (UNHCR) ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಯುಎನ್‌ಹೆಚ್‌ಸಿಆರ್ ಅಂದಾಜಿನ ಪ್ರಕಾರ 676 ರೋಹಿಂಗ್ಯಾಗಳು ಭಾರತದಾದ್ಯಂತ ವಲಸೆ ಬಂಧನದಲ್ಲಿದ್ದಾರೆ. ಅದರಲ್ಲಿ 608 ನ್ಯಾಯಾಲಯದ ಪ್ರಕರಣಗಳು ಅಥವಾ ಶಿಕ್ಷೆಗಳು ಬಾಕಿ ಉಳಿದಿಲ್ಲ. ಬಂಧಿತರಲ್ಲಿ ಶೇ.50ರಷ್ಟು ಗರ್ಭಿಣಿ ಮಹಿಳೆಯರು, ಹಾಲುಣಿಸುವ ತಾಯಂದಿರು, ಮಕ್ಕಳು, ಅಂಗವಿಕಲರು ಮತ್ತು ವೃದ್ಧರು  ಎಂದು ಈ ವರದಿ ಹೇಳಿದೆ.

ಕಾನೂನು ಸಹಾಯಕ್ಕೆ ಮತ್ತು UNHCR ನಂತಹ ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಬಹಳ ಸೀಮಿತ ಪ್ರವೇಶದಿಂದಾಗಿ ಅನೇಕ ರೋಹಿಂಗ್ಯಾ ನಿರಾಶ್ರಿತರನ್ನು ಒಂದು ದಶಕದಿಂದ ನಿರಂಕುಶವಾಗಿ ಬಂಧಿಸಲಾಗಿದೆ. ಇವರುಗಳ ಮೇಲೆ ಯಾವುದೇ ಕ್ರಿಮಿನಲ್ ಆರೋಪಗಳಿಲ್ಲದೆ ಇದ್ದರೂ ಸಹ ಈ ಬಂಧನಕ್ಕೆ ಅಂತ್ಯವಿಲ್ಲ ಎಂದು ವರದಿ ಎತ್ತಿ ತೋರಿಸಿದೆ.

ಈ ಬಂಧನ ಕೇಂದ್ರಗಳಲ್ಲಿರುವ ಮಕ್ಕಳಿಗೆ ಶಾಲೆಗೆ ಅಥವಾ ಆಟದ ಮೈದಾನಗಳಿಗೆ ಪ್ರವೇಶವಿಲ್ಲವಾಗಿದೆ. ಬಂಧನಕ್ಕೊಳಗಾದವರಲ್ಲಿ ಕೆಲವರು ತಮ್ಮ ಬಂಧನದ ಸಮಯದಲ್ಲಿ ಶಿಶುಗಳಾಗಿದ್ದರು ಮತ್ತು ಅವರು ಹೊರಗಿನ ಜೀವನವನ್ನು ಎಂದಿಗೂ ಅನುಭವಿಸುತ್ತಿಲ್ಲ.  ದೀರ್ಘಕಾಲದ ಹಸಿವು, ರುಚಿಕರವಲ್ಲದ ಆಹಾರ, ಕಳಪೆ ಪೋಷಣೆ, ಕಳಪೆ ನೈರ್ಮಲ್ಯ ವು ತಾತ್ಕಾಲಿಕ ಪಾರ್ಶ್ವವಾಯು ಸೇರಿದಂತೆ ತೀವ್ರ ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.

ಕುಟುಂಬಗಳನ್ನು ಪ್ರತ್ಯೇಕಿಸಬಾರದು ಎಂದು ಹೇಳುವ ಭಾರತದ ಮಾದರಿ ಬಂಧನ ಸಂಹಿತೆಯನ್ನು ಉಲ್ಲಂಘಿಸಿ, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಲಾಗಿದೆ. ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುವುದಕ್ಕೆ ಅನುಮತಿಸುತ್ತಿಲ್ಲ ಮತ್ತು ಮಕ್ಕಳನ್ನು ಅವರ ಪೋಷಕರಿಂದ ಬಲವಂತವಾಗಿ ಬೇರ್ಪಡಿಸಲಾಗಿದೆ ಎಂಬುದನ್ನು ವರದಿ ವಿವರಿಸುತ್ತದೆ.

ಹತ್ಯಾಕಾಂಡದಿಂದ ಬದುಕುಳಿದ ಜನಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಗೌರವಯುತವಾದ ಆಶ್ರಯವನ್ನು ಭಾರತ ಸರ್ಕಾರವು ಒದಗಿಸಬೇಕು. ಅತ್ಯಂತ ದುರ್ಬಲ ರೋಹಿಂಗ್ಯಾ ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಹೆಚ್ಚಿನ ರೋಹಿಂಗ್ಯಾಗಳ ಅನಿಯಂತ್ರಿತ ಬಂಧನವನ್ನು ಕೊನೆಗೊಳಿಸಬೇಕು ಎಂದು ವರದಿ ಶಿಫಾರಸು ಮಾಡುತ್ತದೆ.

ಭಾರತವು ರೋಹಿಂಗ್ಯಾಗಳ ಕಾನೂನು ಸ್ಥಿತಿಯನ್ನು ಸ್ಪಷ್ಟಪಡಿಸಬೇಕು., 1946ರ ಕಾಯಿದೆಯನ್ನು ಪರಿಷ್ಕರಿಸಬೇಕು ಮತ್ತು ನಿರಾಶ್ರಿತರ ಬಗೆಗಿನ ಅದರ ನೀತಿಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಎಂಬುದನ್ನು ಖಚಿತಪಡಿಸಬೇಕು.  ಕಾನೂನುಬಾಹಿರವಾಗಿ ಬಂಧಿತರಾಗಿರುವ ರೋಹಿಂಗ್ಯಾ ನಿರಾಶ್ರಿತರನ್ನು ಬಿಡುಗಡೆ ಮಾಡಲು ಮತ್ತು ಬಂಧನ ಕೇಂದ್ರಗಳಲ್ಲಿ ಉತ್ತಮ ಸೌಲಭ್ಯಕ್ಕೆ ಮತ್ತು ಅವರ ಕುಟುಂಬಗಳ ಸಮ್ಮೀಲನಕ್ಕೆ ಅನುಮತಿಸುವಂತೆ ಭಾರತ ಸರಕಾರಕ್ಕೆ ಆಜಾದಿ ಪ್ರಾಜೆಕ್ಟ್ ಮತ್ತು ರೆಫ್ಯೂಜೀಸ್ ಇಂಟರ್‌ನ್ಯಾಷನಲ್ ಒತ್ತಾಯಿಸಿವೆ .

ಭಾರತದಲ್ಲಿನ ರೋಹಿಂಗ್ಯಾ ನಿರಾಶ್ರಿತರಿಗೆ ವಿದೇಶಿಯರ ಕಾಯಿದೆ 1946 ಮತ್ತು 1980ರ ಪಾಸ್‌ಪೋರ್ಟ್ ಕಾಯಿದೆಯ ನಿಯಮ 6ರ ಸೆಕ್ಷನ್ 14 (ಎ) (ಬಿ) ಅಡಿಯಲ್ಲಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ವರದಿಯು ಸೂಚಿಸುವಂತೆ, ಎರಡನೆಯದನ್ನು 1985ರಲ್ಲಿ ಬಿಟ್ಟುಬಿಡಲಾಗಿದೆ. ಭಾರತದ ಸ್ವಂತ ಕಾನೂನಿನ ಅಡಿಯಲ್ಲಿ, ರೋಹಿಂಗ್ಯಾ ನಿರಾಶ್ರಿತರ ಅನಿರ್ದಿಷ್ಟ ಬಂಧನವು ಕಾನೂನುಬಾಹಿರವಾಗಿದೆ ಮತ್ತು ಅನಿಯಂತ್ರಿತವಾಗಿದೆ ಎಂದು ವರದಿ ಹೇಳಿದೆ.

ಗಡ್ಡಧಾರಿ ಮುಸ್ಲಿಂ ವಿದ್ಯಾರ್ಥಿಗೆ ನರ್ಸಿಂಗ್ ಪರೀಕ್ಷೆ ನಿಷೇಧಿಸಿದ ಪರೀಕ್ಷಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...