Homeಕರ್ನಾಟಕಗೌರಿ ಲಂಕೇಶ್ ನೆನಪು: ಹಲವರಿಂದ 'ಕಾವ್ಯ ನಮನ'

ಗೌರಿ ಲಂಕೇಶ್ ನೆನಪು: ಹಲವರಿಂದ ‘ಕಾವ್ಯ ನಮನ’

- Advertisement -
- Advertisement -

ಗೌರಿ ದಾರಿ

ತಮಂಧದ ಘನವು
ಜಗವ ಆವರಿಸುವಾಗ
ಲೋಕದುರಿಗೆ ತೆತ್ತುಕೊಂಡು..

ಬೇಯುತ್ತಾ ಬೇಯುತ್ತಾ
ಬೆಳಕಾದವಳಲ್ಲವೇ ಗೌರಿ…?

ಬಹಿರಂಗದ ಬೆಂಕಿಯಲ್ಲಿ
ಅಂತರಂಗದ ಹಿಮಕರಗಿದಾಗ
ಉಕ್ಕಿಹರಿದ ಮಮಕಾರದಲ್ಲಿ
ರೂಪುಗೊಂಡ
ರೂಹಲ್ಲವೇ ಗೌರಿ…?

ಹೊರಗಿನ ಬಿರುಗಾಳಿಗೆ
ಒಳಗಿನ ಸುಳಿಗಾಳಿಗೆ..

ಒಡಲ ಸೊಡರು ಆರದಂತೆ
ದೀಕ್ಷೆತೊಟ್ಟ
ದೀವಟಿಗೆಯಲ್ಲವೇ ಗೌರಿ?

ಸಿದ್ಧತೆಗೆ ತಕ್ಕಂತೆ
ಸಿದ್ಧಾಂತ ಹೊಸೆಯದೇ..

ಬೀದಿಯ ಜೊತೆ
ಬೆಸಗೊಂಡು
ಬೀದಿದೀಪವಾಗಿದ್ದಲ್ಲವೇ ಗೌರಿ?

ನಾನೆಂಬ ನಾಗರಕೆ
ಒಳದನಿಯ
ಪಿಸುಪುಂಗಿಯ ಕಾವಲಿಟ್ಟು…

ನಾನಳಿದು ತಾನುರಿದು
ನಮ್ಮೊಳಗೇ ನಾವಾಗಿ
ಸಿಕ್ಕವಳಲ್ಲವೇ ಗೌರಿ…?

ಕೆಂಪೊಳಗಿನ ನೀಲಿಯನ್ನು
ನೀಲಿಯೊಳಗಿನ ಕೆಂಪನ್ನು..

ಕಪ್ಪೊಳಗಿನ ಕೆಚ್ಚನ್ನು
ಬಿಳಿಯೊಳಗಿನ ಬಯಲನ್ನು..

ಅರಿತು ಕಲಿತು ಕಲೆತು
ಕಾಮನಬಿಲ್ಲಾದವಳಲ್ಲವೇ ಗೌರಿ…?

-ಶಿವಸುಂದರ್

——————————-

ಮೊನ್ನೆ ಮೊನ್ನೆಯಪ್ಪೇ
ನಮ್ಮ ಜೊತೆಯಿದ್ದ ಸಣಕಲು
ಗಟ್ಟಿಗಿತ್ತಿಯೊಬ್ಬಳನ್ನು
ಆಕೆ
ಬಡವರ, ಆದಿವಾಸಿಗಳ
ಅಲ್ಪಸಂಖ್ಯಾತರ, ಹಿಂದುಳಿದವರ
ದಲಿತರ ಪರವಾಗಿ ಮಾತನಾಡುತ್ತಾಳೆ
ಎನ್ನುವ ಕಾರಣಕ್ಕಾಗಿ ಕೊಲ್ಲಲಾಯಿತು
ಗುಂಡು ಹೊಡೆದು.

ಕೊಲೆಗಾರ ಅರೆಸ್ಟ್‌ ಆದಾಗ
ಅವನ ಮೋಬೈಲ್‌ ನಲ್ಲಿ ಸಿಕ್ಕವು
ಆಕೆಯ ಮೂರು ಸೆಲ್ಫಿಗಳು.

ಒಂದರಲ್ಲಿ ಆಕೆ,
ಬಡವರೊಂದಿಗೆ ಧರಣಿ ಕೂತಿದ್ದಳು
ಮನುಷ್ಯರ ಆಹಾರದ ಹಕ್ಕಿಗಾಗಿ,
ಇನ್ನೊಂದರಲ್ಲಿ, ಸ್ವಚ್ಛ ಮಾಡುತ್ತಿದ್ದಳು
ಬುಡನ್‌ ಸೂಫಿಯ ಹಾದಿಯಲ್ಲಿ ಹಾಕಲಾಗಿದ್ದ
ಕಲ್ಲು ಮುಳ್ಳುಗಳನ್ನು ಕಿತ್ತು,

ಮೂರನೇಯದರಲ್ಲಿ
ಟಾರ್ಚ್‌ ಹಿಡಿದುಕೊಂಡು ನಿಂತಿದ್ದಳು
ಮುಚ್ಚಿದ ದೇವರ ಮನೆಯ ಬಾಗಿಲಲ್ಲಿ,

ಹಟಮಾರಿ ಹೆಂಗಸು
ಸುಮ್ಮನಿರಬೇಕಿತ್ತು ಮಮ್ಮಲ ಮರುಗಿದರು
ಕೆಲವು ಸಂತ ಗಂಡಸರು,

ಆದರೆ ಹೆಣ್ಣು ಮನಸ್ಸಿಗೆ
ಇದೆಲ್ಲ ಎಷ್ಟು ಅಸಹನೀಯ ಎನ್ನುವುದಕ್ಕೆ
ಸತ್ಯ ಪ್ರಮಾಣದಂತಿವೆ
ಅವಳ ಉದ್ದಿಗ್ನ ಸಿಗರೇಟಿನ
ಅಶಾಂತ ಬೂದಿಯಲ್ಲಿ
ಇನ್ನೂ ಉರಿಯುತ್ತಿರುವ, ಆರುತ್ತಿರುವ
ಸ್ಪಷ್ಟ, ಅಸ್ಪಷ್ಟ ದನಿಗಳು.

-ಚಿದಂಬರ ನರೇಂದ್ರ

————————————–

ಗೌರಿ ಎಂಬ ಬೆಳಕು

ಆಗಾಗ ಅಂದುಕೊಳ್ಳುತ್ತೇನೆ
“ನಾನು ಮೊದಲು ಹೀಗಿರಲಿಲ್ಲ”
ಭಯವಿತ್ತು, ಭವಿಷ್ಯದ ಅಳುಕಿತ್ತು.
“ಜೋಕೆ, ಪ್ರಭುತ್ವ ನಿನ್ನ ಮುಕ್ಕಿ ತಿನ್ನುತ್ತೆ
ನೀನು ಬೆಳೆಯದಂತೆ ತುಳಿತಾರೆ,
ಜೈಲಿಗೆ ಹಾಕಿಸ್ತಾರೆ, ಕೊಲ್ತಾರೆ,
ಕಿರುಕುಳ ಕೊಡ್ತಾರೆ..ʼ
ತರಹೇವಾರಿ ಜನ ಹೇಳಿದ್ದು ಬುದ್ಧಿಮಾತೋ
ಬೆದರಿಸಿ ಬಾಯಿ ಮುಚ್ಚಿಸುವ ಸಂಚೋ-
ಎರಡೂ ಹೌದು.
ನಾನಂತೂ ಬಾಯಿ ತೆರೆಯದೆ ಇದ್ದೆ-
“ಮೊದಲು ನಾನು ಹೀಗಿರಲಿಲ್ಲ”
“ನೀನು ಪತ್ರಕರ್ತ
ಭಟ್ಟಂಗಿಗಳು, ಭಕ್ತರೇ ತುಂಬಿರುವ ವೃತ್ತಿಯಲ್ಲಿ
ನೀನು ಶೋಷಿತರ ಹುಡುಗ.
ದಲಿತ, ಮುಸ್ಲಿಂ, ಒಬಿಸಿ, ಆದಿವಾಸಿ ಎನ್ನಬೇಡ,
ಸಂಘಿಗಳ ಟೀಕಿಸಬೇಡ,
ನಿನ್ನ ಮೇಲೆ ಕಣ್ಣಿಡ್ತಾರೆ,
ತಳಿಯುತ್ತಾರೆ”
-ಅಬ್ಬಾ, ಎಷ್ಟೊಂದು ಮಾತು!
ಒಡಲಕಿಚ್ಚು ದಹಿಸುವಾಗ
ಹೊಟ್ಟೆಪಾಡಿಗೆ ಮುಚ್ಚಿಟ್ಟುಕೊಂಡೆ.
ಹೀಗೊಂದು ದಿನ ಗೌರಿಯಮ್ಮ ಸಿಕ್ಕಳು
ಅವಳಿಗೆ ತಾಕಿದ ಗುಂಡು
ನನ್ನೆದೆಯ ಹೊಕ್ಕು ನಾನು ಸಾಯಲಿಲ್ಲ
ಹುಟ್ಟಿದೆ, ಸಿಡಿದೆ,
ಚಿಮ್ಮಿದ ರಕ್ತ ಶಾಹಿಯಾಗಿ ಹೊಮ್ಮಿತ್ತು
ಗಟಾರದ ಕೊಚ್ಚೆ ನೀರ
ಭಾರೀ ಮಳೆಯೊಂದು ಕೊಚ್ಚಿತ್ತು
‘ನಾನುಗೌರಿ’ಯಾದೆ.
ಭವಿಷ್ಯದ ಭಯವೇ? ಯಾರ ಭವಿಷ್ಯ?
ದೇಶವಿರದೆ, ಪ್ರೀತಿಯಿರದೆ ಭವಿಷ್ಯವುಂಟೆ?
ಇರದುದ ಉಳಿಸಲು, ಆತಂಕ ಕರಗಿ
ಸತ್ಯದ ದಾರಿಯೊಂದು ತೆರೆದಿತ್ತು.
ಅರೆಹೊಟ್ಟೆ ಅಳುಕಲಿಲ್ಲ
ಅದಕೇಕೆ ಅಂಜಲಿ?
ನುಡಿ ಸತ್ಯ ನುಡಿ
ಹೊರಡು ನಿನ್ನ ಹಾದಿ ಇದುವೆ.
ಗೌರಿ ಎಂಬ ಬೆಳಕು ತೆರೆದಿತ್ತು
‘ನಾನುಗೌರಿ’ಯಾದಾಗ
ಎಷ್ಟೊಂದು ಧೈರ್ಯ!
ನಾನು ಏನೆಂದು ತಿಳಿದಾಯ್ತು.
ಬೆದರಿಸಿದವರು ಬೆಚ್ಚಿದರು
ಚುಚ್ಚಿದವರು ಕೊಚ್ಚಿ ಹೋದರು
ಗೌರಿ ಎಂದರೆ ಪ್ರೇಮದ ಸುಡುಸುಡು ಪಂಜು
ಗೌರಿ ಎಂದರೆ ಪ್ರಭುತ್ವಕ್ಕೆ ಸಿಡಿಮದ್ದು
ಗೌರಿ ಎಂದರೆ ನಿರ್ಭೀತ ಮಮತೆ
ಗೌರಿ ಸಾಯಲಿಲ್ಲ
ಕೊಂದವರೆದುರು ಹುಟ್ಟಿದಳು
ನಮ್ಮೆಲ್ಲರೆದೆರಲಿ.
ಆಲವ ಕಡಿಯ ಬಂದವರೆದುರು
ಸಹಸ್ರಾರು ಬೇರು
ಕಾಂಡ ಲಯವಾಗಿ ಹಬ್ಬಿದ ಬಿಳಲ ಕಂಡು
ಕೊಡಲಿಗಳಿಗೆ ಕಂಪನ.
‘ನಾನುಗೌರಿ’.
ಬೆಳಕು ತೆರೆದಾಗ
ಭಯವೇಕೆ?
‘ನಾವೆಲ್ಲ ಗೌರಿ’
ನೊಂದುಬೆಂದು ತಂಗಾಳಿ.

– ಯತಿರಾಜ್ ಬ್ಯಾಲಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...