Homeಕರ್ನಾಟಕಗೌರಿ ಲಂಕೇಶ್ ನೆನಪು: ಹಲವರಿಂದ 'ಕಾವ್ಯ ನಮನ'

ಗೌರಿ ಲಂಕೇಶ್ ನೆನಪು: ಹಲವರಿಂದ ‘ಕಾವ್ಯ ನಮನ’

- Advertisement -
- Advertisement -

ಗೌರಿ ದಾರಿ

ತಮಂಧದ ಘನವು
ಜಗವ ಆವರಿಸುವಾಗ
ಲೋಕದುರಿಗೆ ತೆತ್ತುಕೊಂಡು..

ಬೇಯುತ್ತಾ ಬೇಯುತ್ತಾ
ಬೆಳಕಾದವಳಲ್ಲವೇ ಗೌರಿ…?

ಬಹಿರಂಗದ ಬೆಂಕಿಯಲ್ಲಿ
ಅಂತರಂಗದ ಹಿಮಕರಗಿದಾಗ
ಉಕ್ಕಿಹರಿದ ಮಮಕಾರದಲ್ಲಿ
ರೂಪುಗೊಂಡ
ರೂಹಲ್ಲವೇ ಗೌರಿ…?

ಹೊರಗಿನ ಬಿರುಗಾಳಿಗೆ
ಒಳಗಿನ ಸುಳಿಗಾಳಿಗೆ..

ಒಡಲ ಸೊಡರು ಆರದಂತೆ
ದೀಕ್ಷೆತೊಟ್ಟ
ದೀವಟಿಗೆಯಲ್ಲವೇ ಗೌರಿ?

ಸಿದ್ಧತೆಗೆ ತಕ್ಕಂತೆ
ಸಿದ್ಧಾಂತ ಹೊಸೆಯದೇ..

ಬೀದಿಯ ಜೊತೆ
ಬೆಸಗೊಂಡು
ಬೀದಿದೀಪವಾಗಿದ್ದಲ್ಲವೇ ಗೌರಿ?

ನಾನೆಂಬ ನಾಗರಕೆ
ಒಳದನಿಯ
ಪಿಸುಪುಂಗಿಯ ಕಾವಲಿಟ್ಟು…

ನಾನಳಿದು ತಾನುರಿದು
ನಮ್ಮೊಳಗೇ ನಾವಾಗಿ
ಸಿಕ್ಕವಳಲ್ಲವೇ ಗೌರಿ…?

ಕೆಂಪೊಳಗಿನ ನೀಲಿಯನ್ನು
ನೀಲಿಯೊಳಗಿನ ಕೆಂಪನ್ನು..

ಕಪ್ಪೊಳಗಿನ ಕೆಚ್ಚನ್ನು
ಬಿಳಿಯೊಳಗಿನ ಬಯಲನ್ನು..

ಅರಿತು ಕಲಿತು ಕಲೆತು
ಕಾಮನಬಿಲ್ಲಾದವಳಲ್ಲವೇ ಗೌರಿ…?

-ಶಿವಸುಂದರ್

——————————-

ಮೊನ್ನೆ ಮೊನ್ನೆಯಪ್ಪೇ
ನಮ್ಮ ಜೊತೆಯಿದ್ದ ಸಣಕಲು
ಗಟ್ಟಿಗಿತ್ತಿಯೊಬ್ಬಳನ್ನು
ಆಕೆ
ಬಡವರ, ಆದಿವಾಸಿಗಳ
ಅಲ್ಪಸಂಖ್ಯಾತರ, ಹಿಂದುಳಿದವರ
ದಲಿತರ ಪರವಾಗಿ ಮಾತನಾಡುತ್ತಾಳೆ
ಎನ್ನುವ ಕಾರಣಕ್ಕಾಗಿ ಕೊಲ್ಲಲಾಯಿತು
ಗುಂಡು ಹೊಡೆದು.

ಕೊಲೆಗಾರ ಅರೆಸ್ಟ್‌ ಆದಾಗ
ಅವನ ಮೋಬೈಲ್‌ ನಲ್ಲಿ ಸಿಕ್ಕವು
ಆಕೆಯ ಮೂರು ಸೆಲ್ಫಿಗಳು.

ಒಂದರಲ್ಲಿ ಆಕೆ,
ಬಡವರೊಂದಿಗೆ ಧರಣಿ ಕೂತಿದ್ದಳು
ಮನುಷ್ಯರ ಆಹಾರದ ಹಕ್ಕಿಗಾಗಿ,
ಇನ್ನೊಂದರಲ್ಲಿ, ಸ್ವಚ್ಛ ಮಾಡುತ್ತಿದ್ದಳು
ಬುಡನ್‌ ಸೂಫಿಯ ಹಾದಿಯಲ್ಲಿ ಹಾಕಲಾಗಿದ್ದ
ಕಲ್ಲು ಮುಳ್ಳುಗಳನ್ನು ಕಿತ್ತು,

ಮೂರನೇಯದರಲ್ಲಿ
ಟಾರ್ಚ್‌ ಹಿಡಿದುಕೊಂಡು ನಿಂತಿದ್ದಳು
ಮುಚ್ಚಿದ ದೇವರ ಮನೆಯ ಬಾಗಿಲಲ್ಲಿ,

ಹಟಮಾರಿ ಹೆಂಗಸು
ಸುಮ್ಮನಿರಬೇಕಿತ್ತು ಮಮ್ಮಲ ಮರುಗಿದರು
ಕೆಲವು ಸಂತ ಗಂಡಸರು,

ಆದರೆ ಹೆಣ್ಣು ಮನಸ್ಸಿಗೆ
ಇದೆಲ್ಲ ಎಷ್ಟು ಅಸಹನೀಯ ಎನ್ನುವುದಕ್ಕೆ
ಸತ್ಯ ಪ್ರಮಾಣದಂತಿವೆ
ಅವಳ ಉದ್ದಿಗ್ನ ಸಿಗರೇಟಿನ
ಅಶಾಂತ ಬೂದಿಯಲ್ಲಿ
ಇನ್ನೂ ಉರಿಯುತ್ತಿರುವ, ಆರುತ್ತಿರುವ
ಸ್ಪಷ್ಟ, ಅಸ್ಪಷ್ಟ ದನಿಗಳು.

-ಚಿದಂಬರ ನರೇಂದ್ರ

————————————–

ಗೌರಿ ಎಂಬ ಬೆಳಕು

ಆಗಾಗ ಅಂದುಕೊಳ್ಳುತ್ತೇನೆ
“ನಾನು ಮೊದಲು ಹೀಗಿರಲಿಲ್ಲ”
ಭಯವಿತ್ತು, ಭವಿಷ್ಯದ ಅಳುಕಿತ್ತು.
“ಜೋಕೆ, ಪ್ರಭುತ್ವ ನಿನ್ನ ಮುಕ್ಕಿ ತಿನ್ನುತ್ತೆ
ನೀನು ಬೆಳೆಯದಂತೆ ತುಳಿತಾರೆ,
ಜೈಲಿಗೆ ಹಾಕಿಸ್ತಾರೆ, ಕೊಲ್ತಾರೆ,
ಕಿರುಕುಳ ಕೊಡ್ತಾರೆ..ʼ
ತರಹೇವಾರಿ ಜನ ಹೇಳಿದ್ದು ಬುದ್ಧಿಮಾತೋ
ಬೆದರಿಸಿ ಬಾಯಿ ಮುಚ್ಚಿಸುವ ಸಂಚೋ-
ಎರಡೂ ಹೌದು.
ನಾನಂತೂ ಬಾಯಿ ತೆರೆಯದೆ ಇದ್ದೆ-
“ಮೊದಲು ನಾನು ಹೀಗಿರಲಿಲ್ಲ”
“ನೀನು ಪತ್ರಕರ್ತ
ಭಟ್ಟಂಗಿಗಳು, ಭಕ್ತರೇ ತುಂಬಿರುವ ವೃತ್ತಿಯಲ್ಲಿ
ನೀನು ಶೋಷಿತರ ಹುಡುಗ.
ದಲಿತ, ಮುಸ್ಲಿಂ, ಒಬಿಸಿ, ಆದಿವಾಸಿ ಎನ್ನಬೇಡ,
ಸಂಘಿಗಳ ಟೀಕಿಸಬೇಡ,
ನಿನ್ನ ಮೇಲೆ ಕಣ್ಣಿಡ್ತಾರೆ,
ತಳಿಯುತ್ತಾರೆ”
-ಅಬ್ಬಾ, ಎಷ್ಟೊಂದು ಮಾತು!
ಒಡಲಕಿಚ್ಚು ದಹಿಸುವಾಗ
ಹೊಟ್ಟೆಪಾಡಿಗೆ ಮುಚ್ಚಿಟ್ಟುಕೊಂಡೆ.
ಹೀಗೊಂದು ದಿನ ಗೌರಿಯಮ್ಮ ಸಿಕ್ಕಳು
ಅವಳಿಗೆ ತಾಕಿದ ಗುಂಡು
ನನ್ನೆದೆಯ ಹೊಕ್ಕು ನಾನು ಸಾಯಲಿಲ್ಲ
ಹುಟ್ಟಿದೆ, ಸಿಡಿದೆ,
ಚಿಮ್ಮಿದ ರಕ್ತ ಶಾಹಿಯಾಗಿ ಹೊಮ್ಮಿತ್ತು
ಗಟಾರದ ಕೊಚ್ಚೆ ನೀರ
ಭಾರೀ ಮಳೆಯೊಂದು ಕೊಚ್ಚಿತ್ತು
‘ನಾನುಗೌರಿ’ಯಾದೆ.
ಭವಿಷ್ಯದ ಭಯವೇ? ಯಾರ ಭವಿಷ್ಯ?
ದೇಶವಿರದೆ, ಪ್ರೀತಿಯಿರದೆ ಭವಿಷ್ಯವುಂಟೆ?
ಇರದುದ ಉಳಿಸಲು, ಆತಂಕ ಕರಗಿ
ಸತ್ಯದ ದಾರಿಯೊಂದು ತೆರೆದಿತ್ತು.
ಅರೆಹೊಟ್ಟೆ ಅಳುಕಲಿಲ್ಲ
ಅದಕೇಕೆ ಅಂಜಲಿ?
ನುಡಿ ಸತ್ಯ ನುಡಿ
ಹೊರಡು ನಿನ್ನ ಹಾದಿ ಇದುವೆ.
ಗೌರಿ ಎಂಬ ಬೆಳಕು ತೆರೆದಿತ್ತು
‘ನಾನುಗೌರಿ’ಯಾದಾಗ
ಎಷ್ಟೊಂದು ಧೈರ್ಯ!
ನಾನು ಏನೆಂದು ತಿಳಿದಾಯ್ತು.
ಬೆದರಿಸಿದವರು ಬೆಚ್ಚಿದರು
ಚುಚ್ಚಿದವರು ಕೊಚ್ಚಿ ಹೋದರು
ಗೌರಿ ಎಂದರೆ ಪ್ರೇಮದ ಸುಡುಸುಡು ಪಂಜು
ಗೌರಿ ಎಂದರೆ ಪ್ರಭುತ್ವಕ್ಕೆ ಸಿಡಿಮದ್ದು
ಗೌರಿ ಎಂದರೆ ನಿರ್ಭೀತ ಮಮತೆ
ಗೌರಿ ಸಾಯಲಿಲ್ಲ
ಕೊಂದವರೆದುರು ಹುಟ್ಟಿದಳು
ನಮ್ಮೆಲ್ಲರೆದೆರಲಿ.
ಆಲವ ಕಡಿಯ ಬಂದವರೆದುರು
ಸಹಸ್ರಾರು ಬೇರು
ಕಾಂಡ ಲಯವಾಗಿ ಹಬ್ಬಿದ ಬಿಳಲ ಕಂಡು
ಕೊಡಲಿಗಳಿಗೆ ಕಂಪನ.
‘ನಾನುಗೌರಿ’.
ಬೆಳಕು ತೆರೆದಾಗ
ಭಯವೇಕೆ?
‘ನಾವೆಲ್ಲ ಗೌರಿ’
ನೊಂದುಬೆಂದು ತಂಗಾಳಿ.

– ಯತಿರಾಜ್ ಬ್ಯಾಲಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...