Homeಅಂಕಣಗಳುಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ.

- Advertisement -
- Advertisement -

ಕ್ರಿಕೆಟ್‌ನಲ್ಲಿ ಮೀಸಲಾತಿ ನಿಯಮ ಬಂದರೆ ಹೇಗಿರುತ್ತೆ?

* ದಲಿತ ಆಟಗಾರರಿಗೆ ಬೌಂಡರಿ ಲೈನ್ 15 ಗಜ ಕಡಿಮೆ ಇರುತ್ತೆ.

* ಬೌಂಡರಿಗಳನ್ನು ಸಿಕ್ಸರ್ ಎಂದು ಪರಿಗಣಿಸಲಾಗುತ್ತೆ.

* ಸಿಕ್ಸರ್‌ಗಳನ್ನು 8 ರನ್ ಎಂದು ಪರಿಗಣಿಸಲಾಗುತ್ತೆ.

* ದಲಿತ ಬೌಲರ್‌ಗಳಿಗೆ ಒಂದು ಓವರ್‌ನಲ್ಲಿ ಆರು ಬಾಲ್‌ಗಳ ಬದಲಾಗಿ ಐದು ಬಾಲ್‌ಗಳಿರುತ್ತವೆ.

* ದಲಿತ ಫೀಲ್ಡರ್‌ಗಳು ಪಿಚ್ ಕ್ಯಾಚ್ ಹಿಡಿಯಬಹುದು.

ಇಂತಹದ್ದೊಂದು SMS ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಹಲವರು ಆನಂದಿಸುತ್ತಿದ್ದಾರೆ ಕೂಡ. ಆದರೆ ಈ SMSನಲ್ಲಿ ಮೇಲ್ವರ್ಗದವರಿಗೆ ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ ಎಂತಹ ತಾತ್ಸಾರ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ SMSನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ’ದಲಿತರಲ್ಲಿ ಯಾವುದೇ ರೀತಿಯ ಪ್ರತಿಭೆ ಇಲ್ಲ; ಅವರಿಗೆ ಭಾರತದ ಕ್ರಿಕೆಟ್ ಟೀಮ್‌ನಲ್ಲಿ ಮೀಸಲಾತಿ ಕೊಟ್ಟು ಜಾಗ ಕಲ್ಪಿಸಿದರೂ ಅವರಿಗೆ ವಿಶೇಷ ರಿಯಾಯಿತಿಗಳನ್ನು ತೋರಿಸಬೇಕು’ ಎಂಬುದೇ ಆಗಿದೆ.

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಇವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ-ಅಂದರೆ ಸಂವಿಧಾನಬಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ.

ಒಂದುಕ್ಷಣ ಶತಮಾನಗಳ ಕಾಲದಿಂದ ಈ ದೇಶವನ್ನು ಆಳುತ್ತಿರುವ ಮೇಲುಜಾತಿ ಮತ್ತು ಮೇಲುವರ್ಗದವರಲ್ಲೇ ಪ್ರತಿಭೆ ಇದೆ ಎಂದು ಭಾವಿಸೋಣ. ಅದು ಸತ್ಯವಾಗಿದ್ದರೆ ಯಾಕೆ ನಮ್ಮ ಈ ಬೃಹತ್ ದೇಶ ಬ್ರಿಟಿಷರ ವಶವಾಯಿತು? ಯಾಕೆ ಇವತ್ತು ಭಾರತ ಅತಿ ಭ್ರಷ್ಟ ರಾಷ್ಟ್ರಗಳಲ್ಲಿ ಒಂದಾಗಿದೆ? ಯಾಕೆ ಇಲ್ಲಿ ಇನ್ನೂ ಬಡತನ, ಅನಾರೋಗ್ಯ, ಹಸಿವು ತಾಂಡವವಾಡುತ್ತಿದೆ? ಇದಕ್ಕೆಲ್ಲ ಕಾರಣ ಮೇಲುಜಾತಿ, ಮೇಲುವರ್ಗದವರಲ್ಲಿ ಕಿಂಚಿತ್ತೂ ಪ್ರತಿಭೆ ಇಲ್ಲದಿರುವುದು ಎಂದು ತರ್ಕಿಸಬಹುದಲ್ಲವೇ? ತಾವೇ ಉತ್ತಮರು, ಪ್ರತಿಭಾವಂತರು ಎಂಬ ಮೇಲುವರ್ಗದವರ ಕಲ್ಪನೆ ಈ ವಾಸ್ತವಾಂಶಗಳ ಎದುರು ಇನ್ನು ಜೀವಂತವಾಗಿರುವುದೇ ಅವರ ಒಣ ತಿಮಿರಿಗೆ ಸಾಕ್ಷಿ.

ಇತಿಹಾಸದಲ್ಲೂ ಅಷ್ಟೆ. ವೇದ, ಪುರಾಣ ಇತ್ಯಾದಿ ನಿರುಪಯುಕ್ತ ಜ್ಞಾನಗಳ ಭಂಡಾರಗಳಾಗಿದ್ದ ಬ್ರಾಹ್ಮಣಶಾಹಿ ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮಾಡಿದ್ದೇನು? ಧೀರ ಯೋಧರಾದ ಕ್ಷತ್ರಿಯರು ಈ ದೇಶವನ್ನು ವಸಾಹತುಗಳಿಂದ ರಕ್ಷಿಸಿದ ಪರಿ ಎಂತಹದ್ದು? ಲೆಕ್ಕಾಚಾರದಲ್ಲಿ ನಿಸ್ಸೀಮರಾದ ವೈಶ್ಯರು ಇಲ್ಲಿನ ಜನರ ಸ್ವಾವಲಂಬನೆಗೆ ಕಡಿದಿದ್ದಾದರೂ ಏನನ್ನು? ವೇದಗಳ ಹೆಸರಲ್ಲಿ ಜನರ ಶೋಷಣೆ, ರಕ್ಷಣೆ ಹೆಸರಲ್ಲಿ ದಳ್ಳುರಿ, ವ್ಯವಹಾರದ ಹೆಸರಲ್ಲಿ ಜನರಿಗೆ ಮೋಸ ಇದೇ ಈ ಪ್ರತಿಭಾವಂತರ ಆಸಲಿ ಕೊಡುಗೆ!

ಪ್ರತಿಭೆ ದಕ್ಕುವುದು ಜಾತಿಯಿಂದ ಎಂಬುದಂತೂ ಶುದ್ಧ ಸುಳ್ಳು, ಬದಲಾಗಿ ಬೌದ್ಧಿಕ-ಭೌತಿಕ ಸಂಪನ್ಮೂಲಗಳನ್ನು ಪಡೆಯುವುದರಿಂದ ಪ್ರತಿಭೆ ಅರಳುತ್ತದೆ. ಆದರೆ ಹಿಂದೆ ಈ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಸಿಗದಂತೆ ನೋಡಿಕೊಳ್ಳುವುದಕ್ಕೆ ಜಾತಿವ್ಯವಸ್ಥೆ ಇದ್ದರೆ, ಇವತ್ತಿಗೂ ಆ ಜಾತಿವ್ಯವಸ್ಥೆಯ ’ಸ್ವಹಿತಾಸಕ್ತಿಗಳು’ ಇವೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇವತ್ತಿಗೂ ಮೀಸಲಾತಿಯ ಅವಕಾಶವನ್ನು ಪಡೆದು ಮೇಲೆ ಬಂದವರ ಪ್ರಮಾಣ ಅತಿಕಡಿಮೆ ಇದೆ. ಸರ್ಕಾರವೇನೋ ತನ್ನ ಕಚೇರಿಗಳಲ್ಲಿ, ಸಾರ್ವಜನಿಕ ಉದ್ಯಮಗಳಲ್ಲಿ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ಆಧಾರದ ಮೇಲೆ ಹುದ್ದೆಗಳನ್ನು ನೀಡುತ್ತೆ. ಆದರೆ ಈಗಲೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹುದ್ದೆಗಳು, ಸಾರ್ವಜನಿಕ ಉದ್ಯಮಗಳಲ್ಲಿ ಶೇ.80ರಷ್ಟು ಮೀಸಲು ಹುದ್ದೆಗಳು ಖಾಲಿ ಬಿದ್ದಿರುತ್ತ. ಅಂದರೆ ಏನರ್ಥ? ಆರ್ಥ ಇಷ್ಟೇ: ಮೀಸಲಾತಿ ಆಧಾರದ ಮೇಲೆ ಕೆಲಸ ನೀಡಬಹುದು, ಆದರೆ ಆ ಕೆಲಸಕ್ಕೆ ಸೇರಲು ಅವರಿಗೆ ಬೇಕಾದ ಶಿಕ್ಷಣವನ್ನು, ಆ ಶಿಕ್ಷಣವನ್ನು ಪಡೆಯುವಷ್ಟು ಸೌಲತ್ತುಗಳನ್ನು ಸರ್ಕಾರ ಅವರಿಗೆ ನೀಡಿಲ್ಲ. ಆದು ದಲಿತ, ಹಿಂದುಳಿದವರ ತಪ್ಪಲ್ಲ, ಬದಲಾಗಿ ವ್ಯವಸ್ಥೆ ಎಸಗಿರುವ ಘೋರ ಅಪರಾಧ. ಇದನ್ನು ಅರಿಯದ ಮೇಲುವರ್ಗ ಹಿಂದುಳಿದವರ ವಿರುದ್ಧ ಕೆಂಡ ಕಾರುತ್ತಿದೆ.

ಮೊನ್ನೆ, ಮೀಸಲಾತಿಯನ್ನು ವಿರೋಧಿಸುವ ಆಧ್ಯಾಪಕಿಯೊಬ್ಬರು (ಅವರೂ ಮೇಲ್ಜಾತಿ ಲಿಂಗವಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ) ತಮ್ಮ ಭಂಡ ವಾದವನ್ನು ಮಂಡಿಸುತ್ತಾ “ನಾವ್ಯಾಕ್ರಿ ಅವರಿಗೆ ಬಿಟ್ಟುಕೊಡಬೇಕು? ಪ್ರತಿಭೆ ಇದ್ದರೆ ಅವರೇ ಮುಂದೆ ಬರುತ್ತಾರೆ” ಎಂದರು. ಅಷ್ಟೇ ಅಲ್ಲ “ವಿಶ್ವೇಶ್ವರಯ್ಯ ಬಡವರಾಗಿದ್ದರೂ ಬೀದಿದೀಪದ ಅಡಿ ಓದುತ್ತಾ ಮುಂದೆ ಬರಲಿಲ್ಲವೇ?” ಅಂತ ಪ್ರಶ್ನಿಸಿದರು. “ನಿಮಗೆ ಉತ್ತರವಾಗಿ ನಮ್ಮ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಹಾಗೂ ಅಬ್ದುಲ್ ಕಲಾಂರವರ ಉದಾಹರಣೆ ನೀಡಬಲ್ಲೆ. ಈ ದಲಿತ, ಮುಸ್ಲಿಮರಲ್ಲೂ ಪ್ರತಿಭೆ ಇದ್ದದ್ದಕ್ಕೇ ಅವರು ಮುಂದೆ ಬಂದಿದ್ದು. ಆದರೆ ಆ ವರ್ಗದವರಲ್ಲಿ ಪ್ರತಿಭೆ ಇಲ್ಲ ಅಂತ ಹೇಗೆ ಹೇಳುತ್ತೀರಿ? ಸೂಕ್ತ ಅವಕಾಶಗಳನ್ನು ನೀಡಿದರೆ, ಲಕ್ಷಾಂತರ ನಾರಾಯಣ್‌ಗಳೂ, ಕಲಾಂಗಳೂ ಬೆಳಕಿಗೆ ಬರುತ್ತಾರೆ. ಮೇಲುಜಾತಿಯವರ ಆಳ್ವಿಕೆಯಲ್ಲಿ ಈ ದೇಶ ಉದ್ಧಾರ ಆಗಿದ್ದು ಅಷ್ಟಕಷ್ಟೇ. ಈಗ ಇವರಿಗೆ ಅವಕಾಶ ಕೊಟ್ಟು ನೋಡೋಣ. ಆವರಾದರೂ ಈ ದೇಶವನ್ನು ಉಳಿಸಬಹುದು” ಅಂದೆ. “ನಾವ್ಯಾಕೆ ಕೊಡಬೇಕು” ಎಂದು ಹೇಳಿದ್ದ ಅವರಲ್ಲಿ “ನಾವು” ಎಂಬ ಸರ್ವಾಧಿಕಾರಿ ಧೋರಣೆ ಮತ್ತು “ಕೊಡಬೇಕು” ಎಂಬ ಪದದಲ್ಲಿ ಅಸಡ್ಡೆ ಎಷ್ಟಿತ್ತೆಂದರೆ ಅವರೊಂದಿಗೆ ವಾದ ಮಾಡುವುದೂ ನಿರರ್ಥಕ ಎನ್ನಿಸಿ ಸುಮ್ಮನಾದೆ.

ಈ ವರ್ಗದ ಧಿಮಾಕು ಎಂತಹದ್ದೆಂದರೆ, ಅವರಿಗಿಂತಲೂ ಆಪಾರ ಸಂಖ್ಯೆಯಲ್ಲಿರುವ ಹಿಂದುಳಿದವರು ಮತ್ತು ದಲಿತರಿಂದ ತೆರಿಗೆ ಪಡೆಯುವ ಸರ್ಕಾರ ಅವರಿಗೆ ತನ್ನ ಶಾಲಾ, ಕಾಲೇಜುಗಳಲ್ಲಿ ಮೀಸಲಾತಿ ನೀಡಿದರೆ ವಿರೋಧಿಸುತ್ತಾರೆ. “ಪ್ರತಿಭೆ ಇಲ್ಲದವರಿಗೆ ಇಲ್ಲಿ ಯಾಕೆ ಜಾಗ?” ಎಂದು ಕೆಂಡ ಕಾರುತ್ತಾರೆ. ಆದರೆ, ಅವರ ವರ್ಗಕ್ಕೇ ಸೇರಿರುವ ಜನ ಬಡವರ ಭೂಮಿ ದೋಚಿ, ಸರ್ಕಾರದ ಸವಲತ್ತುಗಳನ್ನು ಪಡೆದು ಕ್ಯಾಪಿಟೇಶನ್ ಕಾಲೇಜಿನ ಹೆಸರಲ್ಲಿ ಪ್ರತಿಭೆ ಇಲ್ಲದ ಹಣವಂತರಿಗೆ ಸೀಟು ಕೊಡುವುದನ್ನು ಒಮ್ಮೆಯೂ ಪ್ರಶ್ನಿಸುವುದಿಲ್ಲ. “ಏನ್ರೀ, ಪ್ರತಿಭೆ ಇಲ್ಲದವರೆಲ್ಲ ಈ ಶಿಕ್ಷಣ ಅಂಗಡಿಗಳಲ್ಲಿ ಡಾಕ್ಟರ್‌ರರೂ, ಇಂಜಿನಿಯರೂ ಆಗ್ತಿದ್ದಾರಲ್ರಿ?” ಎಂದು ಪ್ರತಿಭಟಿಸುವುದೂ ಇಲ್ಲ.

ಇಲ್ಲಿ ಕರ್ನಾಟಕದ ರಾಜಕೀಯ ವಲಯದಲ್ಲಿನ ಒಂದೆರಡು ಉದಾಹರಣೆಗಳನ್ನು ಕೊಡಬಹುದು, ಎಲ್ಲರಿಗೂ ಗೊತ್ತಿರುವಂತೆ ಈ ರಾಜ್ಯ ಹೆಚ್ಚು ಲಿಂಗಾಯತ, ಹಲವು ಒಕ್ಕಲಿಗ, ಎರಡು ಬ್ರಾಹ್ಮಣ ಮತ್ತು ಕೆಲವು ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲೆಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ದಕ್ಷತೆಯಿಂದ ದುಡಿದವರೆಂದರೆ ಹಿಂದುಳಿದ ವರ್ಗದ ದೇವರಾಜ ಅರಸು ಮತ್ತು ವೀರಪ್ಪ ಮೊಯ್ಲಿ ಮಾತ್ರ. ಹಾಗೆಯೇ ರಾಮಕೃಷ್ಣ ಹೆಗಡೆ ಅಧಿಕಾರಾವಧಿಗೆ ವರ್ಚಸ್ಸು ತಂದು ಕೊಟ್ಟವರು ಮುಸ್ಲಿಮರಾಗಿದ್ದ ನಜೀರ್ ಸಾಬರು. ಮಿಕ್ಕಂತೆ ಎಲ್ಲಾ ಮೇಲುವರ್ಗದ, ಮೇಲುಜಾತಿಯ ಮುಖ್ಯಮಂತ್ರಿಗಳು ಮಾಡಿದ್ದು ಬರೀ ತೌಡು ಕುಟ್ಟುವ ಕೆಲಸ!

ಆದ್ದರಿಂದ, ಹಿಂದುಳಿದ-ದಲಿತ ಜಾತಿಗಳಿಗೆ ಪ್ರತಿಭೆ ಇಲ್ಲ ಎಂದು ಹೇಳುವುದು ಎಷ್ಟು ಸುಳ್ಳೋ, ಹಾಗೆಯೇ ಈ ದೇಶದಲ್ಲಿ ಜಾತಿ ಆಧಾರದಲ್ಲಿ ಸಾಮಾಜಿಕ ಆರ್ಥಿಕ ವಂಚನೆ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ. ಮೀಸಲಾತಿ ಎಂಬ ಸಾಧನದ ಮೂಲಕ ಈ ಜಾತಿ ಆಧಾರಿತ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನ ಇದೆಯೇ ಹೊರತು ಪ್ರತಿಭೆ ಇಲ್ಲದಿದ್ದರೂ ನೀಡುವ ವಿಶೇಷ ಸವಲತ್ತೇನಲ್ಲ.

(ಇದು ಮೇ 17, 2016ರಂದು ಗೌರಿ ಲಂಕೇಶ್‌ರವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ)


ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...