Homeಅಂಕಣಗಳುಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ.

- Advertisement -
- Advertisement -

ಕ್ರಿಕೆಟ್‌ನಲ್ಲಿ ಮೀಸಲಾತಿ ನಿಯಮ ಬಂದರೆ ಹೇಗಿರುತ್ತೆ?

* ದಲಿತ ಆಟಗಾರರಿಗೆ ಬೌಂಡರಿ ಲೈನ್ 15 ಗಜ ಕಡಿಮೆ ಇರುತ್ತೆ.

* ಬೌಂಡರಿಗಳನ್ನು ಸಿಕ್ಸರ್ ಎಂದು ಪರಿಗಣಿಸಲಾಗುತ್ತೆ.

* ಸಿಕ್ಸರ್‌ಗಳನ್ನು 8 ರನ್ ಎಂದು ಪರಿಗಣಿಸಲಾಗುತ್ತೆ.

* ದಲಿತ ಬೌಲರ್‌ಗಳಿಗೆ ಒಂದು ಓವರ್‌ನಲ್ಲಿ ಆರು ಬಾಲ್‌ಗಳ ಬದಲಾಗಿ ಐದು ಬಾಲ್‌ಗಳಿರುತ್ತವೆ.

* ದಲಿತ ಫೀಲ್ಡರ್‌ಗಳು ಪಿಚ್ ಕ್ಯಾಚ್ ಹಿಡಿಯಬಹುದು.

ಇಂತಹದ್ದೊಂದು SMS ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಹಲವರು ಆನಂದಿಸುತ್ತಿದ್ದಾರೆ ಕೂಡ. ಆದರೆ ಈ SMSನಲ್ಲಿ ಮೇಲ್ವರ್ಗದವರಿಗೆ ದಲಿತರ ಬಗ್ಗೆ, ಹಿಂದುಳಿದವರ ಬಗ್ಗೆ ಎಂತಹ ತಾತ್ಸಾರ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ SMSನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ’ದಲಿತರಲ್ಲಿ ಯಾವುದೇ ರೀತಿಯ ಪ್ರತಿಭೆ ಇಲ್ಲ; ಅವರಿಗೆ ಭಾರತದ ಕ್ರಿಕೆಟ್ ಟೀಮ್‌ನಲ್ಲಿ ಮೀಸಲಾತಿ ಕೊಟ್ಟು ಜಾಗ ಕಲ್ಪಿಸಿದರೂ ಅವರಿಗೆ ವಿಶೇಷ ರಿಯಾಯಿತಿಗಳನ್ನು ತೋರಿಸಬೇಕು’ ಎಂಬುದೇ ಆಗಿದೆ.

ಪರಿಸರಕ್ಕೂ, ಪ್ರತಿಭೆಗೂ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವು ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು, ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಇವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ-ಅಂದರೆ ಸಂವಿಧಾನಬಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ.

ಒಂದುಕ್ಷಣ ಶತಮಾನಗಳ ಕಾಲದಿಂದ ಈ ದೇಶವನ್ನು ಆಳುತ್ತಿರುವ ಮೇಲುಜಾತಿ ಮತ್ತು ಮೇಲುವರ್ಗದವರಲ್ಲೇ ಪ್ರತಿಭೆ ಇದೆ ಎಂದು ಭಾವಿಸೋಣ. ಅದು ಸತ್ಯವಾಗಿದ್ದರೆ ಯಾಕೆ ನಮ್ಮ ಈ ಬೃಹತ್ ದೇಶ ಬ್ರಿಟಿಷರ ವಶವಾಯಿತು? ಯಾಕೆ ಇವತ್ತು ಭಾರತ ಅತಿ ಭ್ರಷ್ಟ ರಾಷ್ಟ್ರಗಳಲ್ಲಿ ಒಂದಾಗಿದೆ? ಯಾಕೆ ಇಲ್ಲಿ ಇನ್ನೂ ಬಡತನ, ಅನಾರೋಗ್ಯ, ಹಸಿವು ತಾಂಡವವಾಡುತ್ತಿದೆ? ಇದಕ್ಕೆಲ್ಲ ಕಾರಣ ಮೇಲುಜಾತಿ, ಮೇಲುವರ್ಗದವರಲ್ಲಿ ಕಿಂಚಿತ್ತೂ ಪ್ರತಿಭೆ ಇಲ್ಲದಿರುವುದು ಎಂದು ತರ್ಕಿಸಬಹುದಲ್ಲವೇ? ತಾವೇ ಉತ್ತಮರು, ಪ್ರತಿಭಾವಂತರು ಎಂಬ ಮೇಲುವರ್ಗದವರ ಕಲ್ಪನೆ ಈ ವಾಸ್ತವಾಂಶಗಳ ಎದುರು ಇನ್ನು ಜೀವಂತವಾಗಿರುವುದೇ ಅವರ ಒಣ ತಿಮಿರಿಗೆ ಸಾಕ್ಷಿ.

ಇತಿಹಾಸದಲ್ಲೂ ಅಷ್ಟೆ. ವೇದ, ಪುರಾಣ ಇತ್ಯಾದಿ ನಿರುಪಯುಕ್ತ ಜ್ಞಾನಗಳ ಭಂಡಾರಗಳಾಗಿದ್ದ ಬ್ರಾಹ್ಮಣಶಾಹಿ ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಮಾಡಿದ್ದೇನು? ಧೀರ ಯೋಧರಾದ ಕ್ಷತ್ರಿಯರು ಈ ದೇಶವನ್ನು ವಸಾಹತುಗಳಿಂದ ರಕ್ಷಿಸಿದ ಪರಿ ಎಂತಹದ್ದು? ಲೆಕ್ಕಾಚಾರದಲ್ಲಿ ನಿಸ್ಸೀಮರಾದ ವೈಶ್ಯರು ಇಲ್ಲಿನ ಜನರ ಸ್ವಾವಲಂಬನೆಗೆ ಕಡಿದಿದ್ದಾದರೂ ಏನನ್ನು? ವೇದಗಳ ಹೆಸರಲ್ಲಿ ಜನರ ಶೋಷಣೆ, ರಕ್ಷಣೆ ಹೆಸರಲ್ಲಿ ದಳ್ಳುರಿ, ವ್ಯವಹಾರದ ಹೆಸರಲ್ಲಿ ಜನರಿಗೆ ಮೋಸ ಇದೇ ಈ ಪ್ರತಿಭಾವಂತರ ಆಸಲಿ ಕೊಡುಗೆ!

ಪ್ರತಿಭೆ ದಕ್ಕುವುದು ಜಾತಿಯಿಂದ ಎಂಬುದಂತೂ ಶುದ್ಧ ಸುಳ್ಳು, ಬದಲಾಗಿ ಬೌದ್ಧಿಕ-ಭೌತಿಕ ಸಂಪನ್ಮೂಲಗಳನ್ನು ಪಡೆಯುವುದರಿಂದ ಪ್ರತಿಭೆ ಅರಳುತ್ತದೆ. ಆದರೆ ಹಿಂದೆ ಈ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಸಿಗದಂತೆ ನೋಡಿಕೊಳ್ಳುವುದಕ್ಕೆ ಜಾತಿವ್ಯವಸ್ಥೆ ಇದ್ದರೆ, ಇವತ್ತಿಗೂ ಆ ಜಾತಿವ್ಯವಸ್ಥೆಯ ’ಸ್ವಹಿತಾಸಕ್ತಿಗಳು’ ಇವೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇವತ್ತಿಗೂ ಮೀಸಲಾತಿಯ ಅವಕಾಶವನ್ನು ಪಡೆದು ಮೇಲೆ ಬಂದವರ ಪ್ರಮಾಣ ಅತಿಕಡಿಮೆ ಇದೆ. ಸರ್ಕಾರವೇನೋ ತನ್ನ ಕಚೇರಿಗಳಲ್ಲಿ, ಸಾರ್ವಜನಿಕ ಉದ್ಯಮಗಳಲ್ಲಿ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ಆಧಾರದ ಮೇಲೆ ಹುದ್ದೆಗಳನ್ನು ನೀಡುತ್ತೆ. ಆದರೆ ಈಗಲೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹುದ್ದೆಗಳು, ಸಾರ್ವಜನಿಕ ಉದ್ಯಮಗಳಲ್ಲಿ ಶೇ.80ರಷ್ಟು ಮೀಸಲು ಹುದ್ದೆಗಳು ಖಾಲಿ ಬಿದ್ದಿರುತ್ತ. ಅಂದರೆ ಏನರ್ಥ? ಆರ್ಥ ಇಷ್ಟೇ: ಮೀಸಲಾತಿ ಆಧಾರದ ಮೇಲೆ ಕೆಲಸ ನೀಡಬಹುದು, ಆದರೆ ಆ ಕೆಲಸಕ್ಕೆ ಸೇರಲು ಅವರಿಗೆ ಬೇಕಾದ ಶಿಕ್ಷಣವನ್ನು, ಆ ಶಿಕ್ಷಣವನ್ನು ಪಡೆಯುವಷ್ಟು ಸೌಲತ್ತುಗಳನ್ನು ಸರ್ಕಾರ ಅವರಿಗೆ ನೀಡಿಲ್ಲ. ಆದು ದಲಿತ, ಹಿಂದುಳಿದವರ ತಪ್ಪಲ್ಲ, ಬದಲಾಗಿ ವ್ಯವಸ್ಥೆ ಎಸಗಿರುವ ಘೋರ ಅಪರಾಧ. ಇದನ್ನು ಅರಿಯದ ಮೇಲುವರ್ಗ ಹಿಂದುಳಿದವರ ವಿರುದ್ಧ ಕೆಂಡ ಕಾರುತ್ತಿದೆ.

ಮೊನ್ನೆ, ಮೀಸಲಾತಿಯನ್ನು ವಿರೋಧಿಸುವ ಆಧ್ಯಾಪಕಿಯೊಬ್ಬರು (ಅವರೂ ಮೇಲ್ಜಾತಿ ಲಿಂಗವಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ) ತಮ್ಮ ಭಂಡ ವಾದವನ್ನು ಮಂಡಿಸುತ್ತಾ “ನಾವ್ಯಾಕ್ರಿ ಅವರಿಗೆ ಬಿಟ್ಟುಕೊಡಬೇಕು? ಪ್ರತಿಭೆ ಇದ್ದರೆ ಅವರೇ ಮುಂದೆ ಬರುತ್ತಾರೆ” ಎಂದರು. ಅಷ್ಟೇ ಅಲ್ಲ “ವಿಶ್ವೇಶ್ವರಯ್ಯ ಬಡವರಾಗಿದ್ದರೂ ಬೀದಿದೀಪದ ಅಡಿ ಓದುತ್ತಾ ಮುಂದೆ ಬರಲಿಲ್ಲವೇ?” ಅಂತ ಪ್ರಶ್ನಿಸಿದರು. “ನಿಮಗೆ ಉತ್ತರವಾಗಿ ನಮ್ಮ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಹಾಗೂ ಅಬ್ದುಲ್ ಕಲಾಂರವರ ಉದಾಹರಣೆ ನೀಡಬಲ್ಲೆ. ಈ ದಲಿತ, ಮುಸ್ಲಿಮರಲ್ಲೂ ಪ್ರತಿಭೆ ಇದ್ದದ್ದಕ್ಕೇ ಅವರು ಮುಂದೆ ಬಂದಿದ್ದು. ಆದರೆ ಆ ವರ್ಗದವರಲ್ಲಿ ಪ್ರತಿಭೆ ಇಲ್ಲ ಅಂತ ಹೇಗೆ ಹೇಳುತ್ತೀರಿ? ಸೂಕ್ತ ಅವಕಾಶಗಳನ್ನು ನೀಡಿದರೆ, ಲಕ್ಷಾಂತರ ನಾರಾಯಣ್‌ಗಳೂ, ಕಲಾಂಗಳೂ ಬೆಳಕಿಗೆ ಬರುತ್ತಾರೆ. ಮೇಲುಜಾತಿಯವರ ಆಳ್ವಿಕೆಯಲ್ಲಿ ಈ ದೇಶ ಉದ್ಧಾರ ಆಗಿದ್ದು ಅಷ್ಟಕಷ್ಟೇ. ಈಗ ಇವರಿಗೆ ಅವಕಾಶ ಕೊಟ್ಟು ನೋಡೋಣ. ಆವರಾದರೂ ಈ ದೇಶವನ್ನು ಉಳಿಸಬಹುದು” ಅಂದೆ. “ನಾವ್ಯಾಕೆ ಕೊಡಬೇಕು” ಎಂದು ಹೇಳಿದ್ದ ಅವರಲ್ಲಿ “ನಾವು” ಎಂಬ ಸರ್ವಾಧಿಕಾರಿ ಧೋರಣೆ ಮತ್ತು “ಕೊಡಬೇಕು” ಎಂಬ ಪದದಲ್ಲಿ ಅಸಡ್ಡೆ ಎಷ್ಟಿತ್ತೆಂದರೆ ಅವರೊಂದಿಗೆ ವಾದ ಮಾಡುವುದೂ ನಿರರ್ಥಕ ಎನ್ನಿಸಿ ಸುಮ್ಮನಾದೆ.

ಈ ವರ್ಗದ ಧಿಮಾಕು ಎಂತಹದ್ದೆಂದರೆ, ಅವರಿಗಿಂತಲೂ ಆಪಾರ ಸಂಖ್ಯೆಯಲ್ಲಿರುವ ಹಿಂದುಳಿದವರು ಮತ್ತು ದಲಿತರಿಂದ ತೆರಿಗೆ ಪಡೆಯುವ ಸರ್ಕಾರ ಅವರಿಗೆ ತನ್ನ ಶಾಲಾ, ಕಾಲೇಜುಗಳಲ್ಲಿ ಮೀಸಲಾತಿ ನೀಡಿದರೆ ವಿರೋಧಿಸುತ್ತಾರೆ. “ಪ್ರತಿಭೆ ಇಲ್ಲದವರಿಗೆ ಇಲ್ಲಿ ಯಾಕೆ ಜಾಗ?” ಎಂದು ಕೆಂಡ ಕಾರುತ್ತಾರೆ. ಆದರೆ, ಅವರ ವರ್ಗಕ್ಕೇ ಸೇರಿರುವ ಜನ ಬಡವರ ಭೂಮಿ ದೋಚಿ, ಸರ್ಕಾರದ ಸವಲತ್ತುಗಳನ್ನು ಪಡೆದು ಕ್ಯಾಪಿಟೇಶನ್ ಕಾಲೇಜಿನ ಹೆಸರಲ್ಲಿ ಪ್ರತಿಭೆ ಇಲ್ಲದ ಹಣವಂತರಿಗೆ ಸೀಟು ಕೊಡುವುದನ್ನು ಒಮ್ಮೆಯೂ ಪ್ರಶ್ನಿಸುವುದಿಲ್ಲ. “ಏನ್ರೀ, ಪ್ರತಿಭೆ ಇಲ್ಲದವರೆಲ್ಲ ಈ ಶಿಕ್ಷಣ ಅಂಗಡಿಗಳಲ್ಲಿ ಡಾಕ್ಟರ್‌ರರೂ, ಇಂಜಿನಿಯರೂ ಆಗ್ತಿದ್ದಾರಲ್ರಿ?” ಎಂದು ಪ್ರತಿಭಟಿಸುವುದೂ ಇಲ್ಲ.

ಇಲ್ಲಿ ಕರ್ನಾಟಕದ ರಾಜಕೀಯ ವಲಯದಲ್ಲಿನ ಒಂದೆರಡು ಉದಾಹರಣೆಗಳನ್ನು ಕೊಡಬಹುದು, ಎಲ್ಲರಿಗೂ ಗೊತ್ತಿರುವಂತೆ ಈ ರಾಜ್ಯ ಹೆಚ್ಚು ಲಿಂಗಾಯತ, ಹಲವು ಒಕ್ಕಲಿಗ, ಎರಡು ಬ್ರಾಹ್ಮಣ ಮತ್ತು ಕೆಲವು ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲೆಲ್ಲಾ ಸಾಮಾಜಿಕ ನ್ಯಾಯಕ್ಕಾಗಿ ದಕ್ಷತೆಯಿಂದ ದುಡಿದವರೆಂದರೆ ಹಿಂದುಳಿದ ವರ್ಗದ ದೇವರಾಜ ಅರಸು ಮತ್ತು ವೀರಪ್ಪ ಮೊಯ್ಲಿ ಮಾತ್ರ. ಹಾಗೆಯೇ ರಾಮಕೃಷ್ಣ ಹೆಗಡೆ ಅಧಿಕಾರಾವಧಿಗೆ ವರ್ಚಸ್ಸು ತಂದು ಕೊಟ್ಟವರು ಮುಸ್ಲಿಮರಾಗಿದ್ದ ನಜೀರ್ ಸಾಬರು. ಮಿಕ್ಕಂತೆ ಎಲ್ಲಾ ಮೇಲುವರ್ಗದ, ಮೇಲುಜಾತಿಯ ಮುಖ್ಯಮಂತ್ರಿಗಳು ಮಾಡಿದ್ದು ಬರೀ ತೌಡು ಕುಟ್ಟುವ ಕೆಲಸ!

ಆದ್ದರಿಂದ, ಹಿಂದುಳಿದ-ದಲಿತ ಜಾತಿಗಳಿಗೆ ಪ್ರತಿಭೆ ಇಲ್ಲ ಎಂದು ಹೇಳುವುದು ಎಷ್ಟು ಸುಳ್ಳೋ, ಹಾಗೆಯೇ ಈ ದೇಶದಲ್ಲಿ ಜಾತಿ ಆಧಾರದಲ್ಲಿ ಸಾಮಾಜಿಕ ಆರ್ಥಿಕ ವಂಚನೆ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ. ಮೀಸಲಾತಿ ಎಂಬ ಸಾಧನದ ಮೂಲಕ ಈ ಜಾತಿ ಆಧಾರಿತ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನ ಇದೆಯೇ ಹೊರತು ಪ್ರತಿಭೆ ಇಲ್ಲದಿದ್ದರೂ ನೀಡುವ ವಿಶೇಷ ಸವಲತ್ತೇನಲ್ಲ.

(ಇದು ಮೇ 17, 2016ರಂದು ಗೌರಿ ಲಂಕೇಶ್‌ರವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ)


ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...