Homeಕರ್ನಾಟಕಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಪಕ್ಷಾಂತರ ಪಿಡುಗಿನ ಇತಿಕಾಸ ಇಲ್ಲಿದೆ...

- Advertisement -
- Advertisement -

ಪಕ್ಷಾಂತರ ಎಂಬ ಅಸಹ್ಯವೂ, ಆಪರೇಷನ್ ಕಮಲ ಎಂಬ ಬಿಜೆಪಿ ದಂಧೆಯೂ…

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಹೊತ್ತಿನಲ್ಲಿ ಪಕ್ಷಾಂತರದ ಪಿಡುಗು ಬೆಳೆದ ಬಂದ ಅಸಹ್ಯ ಇತಿಹಾಸವನ್ನು ಇಲ್ಲಿ ನೀಡಿದ್ದೇವೆ.

ನಿನ್ನೆ (ಗುರುವಾರ) ಸದನದಲ್ಲಿ ಸಿದ್ದರಾಮಯ್ಯನವರು ವಿಶ್ವಾಸ ಮತದ ಮೇಲೆ ಮಾತನಾಡುತ್ತ, ಕ್ರಿಯಾಲೋಪ ಎತ್ತುವ ಮೊದಲು ಪಕ್ಷಾಂತರ ಪಿಡುಗಿನ ಇತಿಹಾಸದ ಒಂದು ವಿಲಕ್ಷಣ, ವಿಕೃತ ಪ್ರಸಂಗವನ್ನು ಜನರ ಎದರು ಇಟ್ಟರು. ‘ಒಂದೇ ದಿನದಲ್ಲಿ ಮೂರು ಬಾರಿ ವಿವಿಧ ಪಾರ್ಟಿಗಳಲ್ಲಿ ಕಾಣಿಸಿಕೊಂಡ ಗಯಾಲಾಲ್’ ಎಂಬ ಶಾಸಕನ ಕುರಿತು ಅವರು ಪ್ರಸ್ತಾಪಿಸಿದ್ದರು.

ಈ ಗಯಾಲಾಲ್‍ನ ಪ್ರಸಂಗವನ್ನು ಇಲ್ಲಿ ನೀಡುತ್ತಲೇ 60ರ ದಶಕದ ಅಂತ್ಯದಲ್ಲಿ ರಾಜಕಾರಣವು ಪಕ್ಷಾಂತರ ಪರ್ವದ ಕಾಲಘಟ್ಟವಾಗಿದ್ದ ಇತಿಹಾಸವನ್ನು ಮೆಲುಕು ಹಾಕೋಣ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ, ಸುಪ್ರಿಂಕೋರ್ಟಿನ ಅಭಯದಿಂದಾಗಿ ಸದನಕ್ಕೆ ಬರದೇ ಮುಂಬೈಯಲ್ಲಿರುವ ಶಾಸಕರ ಸ್ವೇಚ್ಛಾಚಾರದ ಹಿನ್ನೆಲೆಯಲ್ಲಿ ಇದನ್ನೆಲ್ಲ ಅರಿಯುವುದು ಅಗತ್ಯ ಎನಿಸುತ್ತದೆ.

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್
ಗಯಾಲಾಲ್ 15 ದಿನದ ಬಿರುಸಿನ ಚಟುವಟಿಕೆಯಲ್ಲಿ ಮೂರು ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಒಂದೇ ದಿನದ ಮುಂಜಾನೆ ಒಂದು ಪಕ್ಷದಲ್ಲಿದ್ದ ಅವರು ಅಂದು ಮತ್ತೆರಡು ಸಲ ಪಕ್ಷ ಬದಸಲಿಸುವ ಮೂಲಕ ಒಂದೇ ದಿನ ಮೂರು ಪಾರ್ಟಿಗಳಲ್ಲಿ ಕಾಣಿಸಿಕೊಂಡು ಪಕ್ಷಾಂತರದ ವಿಕೃತ ಇತಿಹಾಸದಲ್ಲಿ ‘ಮೈಲಿ(ಗೆ)ಗಲ್ಲು’ ಆಗಿ ಉಳಿದು ಬಿಟ್ಟಿದ್ದಾರೆ.

ಈ ಪುಣ್ಯಾತ್ಮನ ಕಾರಣಕ್ಕೆ ‘ಆಯಾರಾಮ್ ಗಯಾರಾಮ್’ ಎಂಬ ನುಡಿಗಟ್ಟು ಚಾಲ್ತಿಗೆ ಬಂದು ಪಕ್ಷದಿಂದ ಪಕ್ಷ ಬದಲಿಸುವವರನ್ನು ವ್ಯಂಗ್ಯ ಮಾಡಲು ಈ ನುಡಿಗಟ್ಟು ಇನ್ನೂ ಬಳಕೆಯಲ್ಲಿದೆ. ‘ಆಯಾರಾಮ್ ಗಯಾರಾಮ್’ ಕುರಿತಾಗಿಯೇ ಬಂದ ಜೋಕುಗಳು, ಕಾರ್ಟೂನುಗಳಿಗೆ ಲೆಕ್ಕವಿಲ್ಲ!

1967ರಲ್ಲಿ ಒಂದು ದಿನ, ತಾನು ಹರ್ಯಾಣ ವಿಧಾನಸಭೆಗೆ ಶಾಸಕನಾಗಿ ಆರಿಸಿಬಂದಿದ್ದ ಕಾಂಗ್ರೆಸ್ ಪಕ್ಷದಿಂದ ಜನತಾ ಪಾರ್ಟಿಗೆ (ಉನೈಟೆಡ್ ಫ್ರಂಟ್ ಭಾಗವಾಗಿತ್ತು), ನಂತರ ಮತ್ತೆ ಸ್ವಲ್ಪ ತಾಸುಗಳಲ್ಲೇ ಮರಳಿ ತವರು ಪಕ್ಷ ಕಾಂಗ್ರೆಸ್‍ಗೆ…. ಕೇವಲ ಒಂಭತ್ತು ತಾಸುಗಳ ಅವಧಿಯಲ್ಲಿ ಮತ್ತೆ ಜನತಾ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಯಾಲಾಲ್ ಪಕ್ಷಾಂತರ ಪರ್ವ ಎಂಬ ಪದಕ್ಕೆ ಅನ್ವರ್ಥವಾಗಿ ಉಳಿದುಬಿಟ್ಟಿದ್ದಾರೆ.

ಆದರೆ, ಇಲ್ಲಿ ನಮ್ಮದೊಂದು ಪ್ರಶ್ನೆಯಿದೆ
ನಿನ್ನೆ ಸಿದ್ದರಾಮಯ್ಯರು ಪ್ರಸ್ತಾಪಿಸಿದಂತೆ ಬಹಳಷ್ಟು ಸದನಗಳಲ್ಲಿ ವಿಶ್ವಾಸಮತದ ಚರ್ಚೆ ನಡೆದಾಗ, ಪಕ್ಷಾಂತರದ ಆಟ ಸಾಗಿದಾಗ ಗಯಾಲಾಲ್ ಹೆಸರು ಪ್ರಸ್ತಾಪಿಸಿ ವ್ಯಂಗ್ಯ ಮಾಡಲಾಗುತ್ತದೆ, ಅದೇನೋ ಸರಿ. ಆದರೆ, ಅವತ್ತು ಗಯಾಲಾಲ್‍ರನ್ನು ಫುಟ್‍ಬಾಲ್‍ನಂತೆ ಆಟ ಆಡಿದ್ದು ಕಾಂಗ್ರೆಸ್ ಮತ್ತು ಜನತಾ ಪಾರ್ಟಿಗಳು.

ಸ್ವಾತಂತ್ರ್ಯಾ ನಂತರ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಅಧಿಕಾರ ಹಿಡಿಯುತ್ತಲೇ ಬಂದಿದ್ದ ಕಾಂಗ್ರೆಸ್‍ಗೆ 1967ರಲ್ಲಿ ಜನ ದೊಡ್ಡ ಪಾಠವನ್ನೇ ಕಲಿಸಿದ್ದರು. ಅಧಿಕಾರ ಉಂಡೂ ಉಂಡೂ ಮೈಯುಂಡು ಬಿಟ್ಟಿದ್ದ ಕಾಂಗ್ರೆಸ್ ಆಗ ಚಡಪಡಿಸತೊಡಗಿತ್ತು. ಅದರ ಪರಿಣಾಮವಾಗಿಯೇ ದೇಶಾದ್ಯಂತ ಕಾಂಗ್ರೆಸ್ ಬೇರೆ ಚಿಹ್ನೆಗಳಿಂದ ಗೆದ್ದವರನ್ನು ಬೇಟೆಯಾಡಿ, ಅವಕಾಶವಾದಿ ರಾಜಕಾರಣದ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸಂಚು ಮಾಡಿತ್ತು. ಅದರ ಪರಿಣಾಮವಾಗಿ ಹಲವು ಕಡೆ ಕಾಂಗ್ರೆಸ್ ಪಕ್ಷವೇ ಹೋಳಾಗಿತ್ತು.

1967: ವಿ.ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಪೆಟ್ಟು
1967ರಲ್ಲಿ 16 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಎಂಟು ರಾಜ್ಯಗಳಲ್ಲಿ ಬಹುಮತ ಕಳೆದುಕೊಂಡಿತ್ತು ಮತ್ತು ಏಳರಲ್ಲಿ ಸರ್ಕಾರ ರಚಿಸಲು ವಿಫಲವಾಗಿತ್ತು. ಕಾಂಗ್ರೆಸ್‍ಗೆ ಅದು ಮರ್ಮಾಘಾತದ ವಿಷಯವೇ ಆಗಿತ್ತು. ಆ ಸಂದರ್ಭವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅಡಿಯಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗಕ್ಕೆ ನಾಂದಿ ಹಾಡಿತು. ಇದು ದೊಡ್ಡ ಪ್ರಮಾಣದ ಪಕ್ಷಾಂತರವನ್ನೂ ಉದ್ಘಾಟನೆ ಮಾಡಿತು.

1967-71ರ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ 142 ಪಕ್ಷಾಂತರಗಳು ಮತ್ತು ವಿವಿಧ ರಾಜ್ಯ ವಿಧಾನಸಭೆಗಳಲ್ಲಿ 1969 ಪಕ್ಷಾಂತರ ಪ್ರಕರಣಗಳು ಸಂಭವಿಸಿಬಿಟ್ಟವು! ಇದೆ ದೇಶ ಕಂಡ ಅಸಹ್ಯ ಪಕ್ಷಾಂತರ ಪರ್ವದ ಕಾಲಾವಧಿ. ಇದರ ಪರಿಣಾಮವಾಗಿ 32 ಸರ್ಕಾರಗಳು ಲಗಾಟಿ ಹೊಡೆದವು ಮತ್ತು 212 ಪಕ್ಷಾಂತರಿಗಳಿಗೆ ಸಚಿವ ಸ್ಥಾನಗಳು ಲಭಿಸಿದ್ದವು! (ಕಳೆದ ಶುಕ್ರವಾರ ಈ ಅಂಕಿಅಂಶಗಳನ್ನು ಸ್ಪೀಕರ್ ರಮೇಶಕುಮಾರ್ ಸದನದಲ್ಲಿ ಉಲ್ಲೇಖಿಸಿದ್ದರು).

ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಬುಡಮೇಲಾಯಿತು. ಕಾಂಗ್ರೆಸ್‍ನ ಭಿನ್ನಮತೀಯರ ಗುಂಪು ವಿಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಈ ಕಾಲಾವಧಿಯಲ್ಲಿಯೇ ಗಯಾಲಾಲ್ ಪ್ರಸಂಗ ನಡೆದಿತ್ತಷ್ಟೇ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುದೊಡ್ಡ ಬಹುಮತ ಸಿಕ್ಕಿ, ರಾಜೀವ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾದರು. ಅಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆಂದು ಪ್ರಸ್ತಾಪ ಮಾಡಿದ್ದರು. 1985ರಲ್ಲಿ ಪಕ್ಷಾಂತರ ಕಾಯ್ದೆ ಜಾರಿಗೆ ಬಂತು. ಆಗ ಮೂರನೇ ಒಂದು ಭಾಗದಷ್ಟು ಕಡಿಮೆ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋದಲ್ಲಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅಥವಾ ರಾಜ್ಯಸಭಾ ಮತ್ತು ವಿಧಾನಪರಿಷತ್ತು ಅಧ್ಯಕ್ಷರು ಅವರನ್ನು ಅನರ್ಹಗೊಳಿಸಬಹುದು ಎಂಬ ನಿಯಮವನ್ನು ತಂದು ಸಂವಿಧಾನದ 10ನೇ ಶೆಡ್ಯುಲ್‍ನಲ್ಲಿ ಸೇರಿಸಲಾಯಿತು. ಹೀಗೆ ಒಂದು ಸಾಂವಿಧಾನಿಕ ತಿದ್ದುಪಡಿಯನ್ನೇ ತರಲಾಯಿತು.

ಇದು ಪಕ್ಷಾಂತರವನ್ನು ಕಡಿಮೆ ಮಾಡಿತೆ ಅಥವಾ ತಡೆಗಟ್ಟಿತೆ ಎಂದು ನೋಡುವುದಾದರೆ ಅದು ಹಾಗೆ ಆಗಲಿಲ್ಲ. ಬದಲಿಗೆ ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಸೇರಿ ವಲಸೆ ಹೊಗಲಿಕ್ಕೆ ಆರಂಭ ಮಾಡಿದರು. ನಂತರ 2003ರಲ್ಲಿ ಅಟಲ್ ಬಿಹಾರಿ ವಾಜಪೆಯಿ ಪ್ರಧಾನಮಂತ್ರಿಯಾಗಿದ್ದಾಗ ಪುನಃ ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆಗೆ ಬಂತು. ಆಗ ಮೂರನೆ ಒಂದು ಭಾಗವಲ್ಲ, ಮೂರನೆ ಎರಡು ಭಾಗದಷ್ಟು ಶಾಸಕರು ಸಂಸದರು ಪಕ್ಷಾಂತರ ಮಾಡಿದ್ದಲ್ಲಿ ಅದನ್ನು ವಿಲೀನ ಎಂದು ಪರಿಗಣಿಸಲಾಗುತ್ತದೆ. ಹಾಗೆ ವಿಲೀನ ಮಾಡಿದಾಗ ಹಳೆ ಪಕ್ಷದಲ್ಲಿ ಉಳಿಯುವವರು ಅವರ ಪಾಡಿಗೆ ಇರುತ್ತಾರೆ ಮತ್ತು ಪಕ್ಷಾಂತರ ಮಾಡಿದವರೂ ಸಹ ಅನರ್ಹರಾಗುವುದಿಲ್ಲ ಎಂಬ ತಿದ್ದುಪಡಿಯನ್ನು ಸಂವಿಧಾನದ 91ನೇ ತಿದ್ದುಪಡಿ ಮಾಡಿ ಮುಂದಿಡಲಾಯಿತು.

2008ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೆ ಅಣಕಿಸುವಂತೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂಬ ಹೇಸಿಗೆ ರಾಜಕಾರಣ ಶುರುವಾಗಿತು. ಅಂದರೆ ಅವರು ಕೋಟಿ ಕೋಟಿ ಹಣ ಮತ್ತು ಮಂತ್ರಿಗಿರಿಯ ಆಸೆಗೆ ಮೊದಲು ಅವರು ತಮ್ಮ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಇನ್ನೊಂದು ಪಕ್ಷವನ್ನು ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಯಾಗುವುದು. ಅದನ್ನು ಉದ್ಘಾಟಿಸಿದ ಬಿಜೆಪಿಯೇ ಈಗ ಮತ್ತೆ 15 ಶಾಸಕರನ್ನು ಮುಂಬೈಯಲ್ಲಿ ‘ಹಿಡಿದಿಟ್ಟು’ ಅಧಿಕಾರದ ಹಪಾಹಪಿಯಲ್ಲಿ ತೊಳಲಾಡುತ್ತಿದೆ, ಇನ್ನೊಂದು ಕಡೆ ಅರ್ಜೆಂಟಾಗಿ ಅಧಿಕಾರ ಸಿಗಲಿದೆ ಎಂಬ ಆಶೆಯಲ್ಲಿ ಖುಷಿ ಅನುಭವಿಸುತ್ತಿದೆ…..

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...