Homeಮುಖಪುಟಏನಿದು ಫಿಲ್ಮ್ ಡೈರೆಕ್ಷನ್?

ಏನಿದು ಫಿಲ್ಮ್ ಡೈರೆಕ್ಷನ್?

- Advertisement -
- Advertisement -

| ರಾಜಶೇಖರ್ ಅಕ್ಕಿ |

ನಾನಾಗ ಹೈಸ್ಕೂಲಿನಲ್ಲಿದ್ದೆ, ಒಂದು ಸಿನೆಮಾ ನೋಡಿ ಬಂದ ನಂತರ ನನ್ನ ಒಬ್ಬ ಗೆಳೆಯ ಹೇಳಿದ್ದು, ‘ಪಿಚ್ಚರ್ ಅಷ್ಟು ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’. ಇದೇನಿದು? ಇದ್ಹೆಂಗೆ ಸಾಧ್ಯ? ಅಭಿನಯ ಅಂದ್ರೆ ಗೊತ್ತು, ಛಾಯಾಗ್ರಹಣ ಗೊತ್ತು, ಸಂಗೀತ ಗೊತ್ತು, ಈ ಡೈರೆಕ್ಷನ್ ಅಂದ್ರೇನು? ಸಿನೆಮಾಗಳನ್ನು ಇಷ್ಟು ಇಷ್ಟ ಪಡುವ ನನಗೆ ಈ ಡೈರೆಕ್ಷನ್ ಅನ್ನೋದೇನು ಎನ್ನೋದು ಗೊತ್ತೇ ಇಲ್ವಲ್ಲ? ನಾನು ಕಣ್ಣು ಪಿಳಿ ಪಿಳಿ ಬಿಟ್ಟು ನೋಡಿದೆ.

ಹಂಗಾದ್ರೆ ಚಲನಚಿತ್ರ ನಿರ್ದೇಶನ ಅಂದ್ರೇನು?
ಚಿತ್ರಕಥೆಯನ್ನು ತೆಗೆದುಕೊಂಡು ದೃಶ್ಯ ಮಾಧ್ಯಮಕ್ಕೆ ಇಳಿಸುವುದೇ ನಿರ್ದೇಶನ ಹಾಗೂ ಅದನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವ ಜವಾಬ್ದಾರಿ ಹೊತ್ತವನನ್ನು ನಿರ್ದೇಶಕ ಎನ್ನಬಹುದು. ಅಂದರೆ, ಸ್ಕ್ರಿಪ್ಟ್‍ಅನ್ನು ತೆಗೆದುಕೊಂಡು ಆಯಾ ದೃಶ್ಯಕ್ಕೆ ಬೇಕಾಗಿರುವ ಶಾಟ್‍ಗಳನ್ನು ಆಯ್ಕೆ ಮಾಡಿ ಶೂಟಿಂಗ್ ಮಾಡಿ ಸಂಕಲನ ಮಾಡಿದರೆ ಅದುವೇ ನಿರ್ದೇಶನ.

ಅಷ್ಟೇನಾ? ಹಂಗಂದ್ರೆ, ನನ್ನ ಗೆಳೆಯ ಹೇಳಿದ ಮಾತು, ಡೈರೆಕ್ಷನ್ ಮಸ್ತ್ ಇತ್ತು ಅಂದರೇನು? ನಿರ್ದೇಶನ ಮಸ್ತ್ ಆಗಲು ಏನೆಲ್ಲ ಮಾಡಬೇಕು? ಏನೆಲ್ಲ ಒಳಗೊಂಡಿರುತ್ತೆ ಈ ಚಲನಚಿತ್ರ ನಿರ್ದೇಶನ?

ಸರಳವಾಗಿ ಹೇಳಬೇಕೆಂದರೆ, ಕಥೆಯ, ಚಿತ್ರಕಥೆಯ, ಛಾಯಾಗ್ರಹಣದ, ಅಭಿನಯದ ಮತ್ತು ಸಂಕಲನದ ಆಳವಾದ ಜ್ಞಾನ ನಿರ್ದೇಶಕನಿಗಿರಬೇಕು, ಈ ಎಲ್ಲಾ ವಿಭಾಗಗಳಿಗೂ ನಿರ್ದೇಶಕನೇ ಜವಾಬ್ದಾರ. ಅಂದರೆ ನಿರ್ದೇಶಕ ಬರೀ ಸೂಪರ್‍ವೈಸರ್ ಆಗಿರಬೇಕಾ? ಅಥವಾ ಆಯಾ ದೃಶ್ಯಗಳಲ್ಲಿ ಯಾವ್ಯಾವ ಶಾಟ್ ಬೇಕು ಎಂದು ಛಾಯಾಗ್ರಾಹಕನಿಗೆ ಮತ್ತು ನಟರಿಗೆ ಹೇಳುವುದೇ ನಿರ್ದೇಶಕನ ಕೆಲಸ ಮತ್ತು ಇತರ ಕೆಲಸಗಳನ್ನೆಲ್ಲಾ ಮೇಲ್ವಿಚಾರಣೆ ಮಾಡುವುದು ಎಂದು ಅನ್ನಬಹುದಾ?

ಇರಲಿ, ನಿರ್ದೇಶಕನ ಕೆಲಸಗಳೇನು ಎಂದು ಸದ್ಯಕ್ಕೆ ನನಗೆ ತಿಳಿದಿರುವ ಕೆಲಸಗಳ ಪಟ್ಟಿ ಮಾಡುವ.
ಒಂದು, ಕಥೆಯ ಆಳ ಜ್ಞಾನ, ಕಥೆ ಹೇಗೆ ಕೆಲಸ ಮಾಡುವುದು ಎನ್ನುವುದರ ಸ್ಪಷ್ಟತೆ (ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ. ಲಿಂಕ್) ಈ ಕಥೆ ಏನು? ಈ ಕಥೆ ಏಕೆ? ಈ ಕಥೆಯೇ ಏಕೆ? ಈ ಕಥೆಗೆ ಈ ನಿರ್ದೇಶಕನೇ ಏಕೆ? ಈ ಕಥೆ ಇಂದೇಕೆ? ಮೊದಲು ಈ ಮೂಲಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ ನಂತರ ಈ ಕಥೆ ಯಾರದ್ದು, ಕಥೆಯ ಉದ್ದೇಶ ಏನು, ಕಥಾನಾಯಕಿಯ ಉದ್ದೇಶ ಏನು, ಕಥೆ ಎಲ್ಲೆಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ, ಚಿತ್ರಕಥೆಯಲ್ಲಿ ಬರೆದ ದೃಶ್ಯಗಳು ಕಥೆಯ ಆತ್ಮವನ್ನು ಬಿಂಬಿಸುತ್ತಿವೆಯೇ ಎನ್ನುವ ಹತ್ತಾರು ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕು.

ಮೇಲಿನ ಎಲ್ಲಾ ಅಂಶಗಳನ್ನು ಖಾತ್ರಿಪಡಿಸಿಕೊಂಡ ನಂತರ ಆಯಾ ದೃಶ್ಯಗಳಿಗೆ ಆಗತ್ಯವಿರುವ ಶಾಟ್‍ಗಳನ್ನು ಆಯ್ಕೆ ಮಾಡಬೇಕು. (ಇದರ ಬಗ್ಗೆ ಮುಂದಿನ ಪ್ಯಾರಾದಲ್ಲಿ). ಆ ದೃಶ್ಯಕ್ಕೆ ಆಯ್ಕೆ ಮಾಡಿದ ಶಾಟ್‍ಗಳು ಸಾಕೇ, ಇನ್ನೂ ಕಡಿಮೆ ಶಾಟ್‍ಗಳಲ್ಲಿ ಆ ದೃಶ್ಯದ ಸಾರವನ್ನು ಸೆರೆಹಿಡಿಯಬಹುದೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ ಅದರನುಗುಣವಾಗಿ ಚಿತ್ರೀಕರಣ ಮಾಡಬೇಕು. ಈ ಹಂತದಲ್ಲಿ ನಿರ್ದೇಶಕನಿಗೆ ತಾಂತ್ರಿಕ ಅಂಶಗಳ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಯಾವ ಕ್ಯಾಮರ ಬಳಸಬೇಕು, ಯಾವ ಲೆನ್ಸ್ ಬಳಸಬೇಕು, ಯಾವ ಕೋನ ಇಡಬೇಕು, ಶಾಟ್‍ನಲ್ಲಿ ಕ್ಯಾಮರ ಚಲನೆ ಇರಬೇಕೇ ಇತ್ಯಾದಿ ಪ್ರಶ್ನೆಗಳೊಂದಿಗೆ ಪರದೆಯಲ್ಲಿ ಕಾಣುವ ಎಲ್ಲಾ ವಸ್ತುಗಳು ಹೇಗಿರಬೇಕು ಎನ್ನುವುದನ್ನೂ ನಿರ್ದೇಶಕನೇ ನಿರ್ಧರಿಸಬೇಕು.

ಇದರೊಂದಿಗೆ ಅಭಿನಯ. ನಟರ ಹಾವಭಾವದೊಂದಿಗೆ ಎಲ್ಲಾ ನಟರ ಚಲನೆಗಳನ್ನೂ ನಿರ್ದೇಶಕನೇ ನಿರ್ಧರಿಸಬೇಕು. (ಪಾತ್ರ ಸೃಷ್ಟಿಯಲ್ಲಿ ನಿರ್ದೇಶಕನ ಪಾತ್ರದ ಬಗ್ಗೆ ಈಗಾಗಲೇ ಬರೆದಿದ್ದೇನೆ.) ಚಿತ್ರೀಕರಣ ಮುಗಿಸಿದ ನಂತರ ಅತ್ಯಂತ ಮುಖ್ಯ ಅಂಗವಾದ ಸಂಕಲನದ ಪ್ರಕ್ರಿಯೆಯಲ್ಲಿ ಸಂಕಲನಕಾರಳೊಂದಿಗೆ ಸೇರಿ ಪ್ರೇಕ್ಷಕರಿಗೆ ಕೊನೆಯದಾಗಿ ಚಿತ್ರ ಹೇಗೆ ತಲುಪುವುದು ಎನ್ನುವ ಕೆಲಸ ಮುಗಿಸಬೇಕು. (ಸಂಕಲನದ ಬಗ್ಗೆ ಇನ್ನೊಂದು ಲೇಖನ ಬೇಕು.)

ಅಂದ್ರೆ? ಇಷ್ಟೇನಾ ನಿರ್ದೇಶನ ಅಂದರೆ?
ನಿರ್ದೇಶನದ ಬಗ್ಗೆ ಹಲವಾರು ಥಿಯರಿಗಳಿವೆ. ಅಂದ್ರೆ ತಾರ್ಕಾವ್‍ಸ್ಕಿ (Andrei Tarkovsky)ಎಂಬ ರಷಿಯಾದ ನಿರ್ದೇಶಕ ಸಿನೆಮಾ ಎನ್ನುವುದು ಸಮಯದಲ್ಲಿ ಕೆತ್ತನೆ (sculpting) ಮಾಡಿದಂತೆ ಎಂದು ಹೇಳಿ ಚಲನಚಿತ್ರ ಎಂದರೆ ಏನು, ಅದರ ಜೀವ ಎಂಥದ್ದು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಸ್ಟಾಕರ್, ಸೊಲಾರಿಸ್, ಮಿರರ್ ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದ ಇವರ ಸಿನೆಮಾಗಳಲ್ಲಿ ಆಧ್ಯಾತ್ಮ, ಕನಸು ಮುಂತಾದ ವಿಷಯಗಳನ್ನು ಸೆರೆಹಿಡಿಯುವ ಪ್ರಯತ್ನ ಕಾಣಿಸುತ್ತದೆ. ಇವರ ಚಿತ್ರಗಳಲ್ಲಿ ತುಂಬಾ ಉದ್ದದ ಶಾಟ್‍ಗಳು ಮತ್ತು ತುಂಬಾ ಕಡಿಮೆ ಕಟ್‍ಗಳು ಕಾಣಿಸುತ್ತವೆ. ಆದರೆ ಐಸೆನ್‍ಸ್ಟೈನ್ ಮತ್ತು ಡೇವಿಡ್ ಮ್ಯಾಮೆಟ್(ಇವರ ಬಗ್ಗೆ ಬರೆದಿದ್ದೇನೆ) ಮುಂತಾದವರು ಮೊಂಟಾಜ್ ಥಿಯರಿಯನ್ನು ಮುಂದಿಡುತ್ತಾರೆ. ಚಿತ್ರದಲ್ಲಿ ಮುಂದೇನಾಗುವುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಹಿಡಿದಿಡಬೇಕು, ಪ್ರತಿಯೊಂದು ದೃಶ್ಯವೂ ಕಥೆಯನ್ನು ಮುಂದೊಯ್ಯಬೇಕು, ಪ್ರತಿಯೊಂದು ದೃಶ್ಯದ ಉದ್ದೇಶ ಸ್ಪಷ್ಟವಾಗಿರಬೇಕು, ಸಂಭಾಷಣೆಯ ಪ್ರತಿಯೊಂದು ತುಣುಕು ಸಹ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಇತ್ಯಾದಿ.

ಅಂದರೆ, ಈ ಎರಡೂ ಥಿಯರಿಗಳು ಒಂದಕ್ಕೊಂದು ವಿರುದ್ಧದ ಥಿಯರಿಗಳಾ? ದೃಶ್ಯದ ಉದ್ದೇಶ ಸ್ಪಷ್ಟವಾದರೆ ಸಾಕಲ್ವಾ, ಅದಕ್ಕೆ ಜೀವ ತುಂಬೋದು ಅಂದರೆ ಏನು?

ಕಥೆಗಳ ಆಧಾರದ ಮೇಲೆ ಅದರ ಹಿಂದಿರಬೇಕಾದ ಥಿಯರಿ ನಿರ್ಧಾರವಾಗಬೇಕೆ? ಅಥವಾ ನಿರ್ದೇಶಕ ಒಂದೇ ಥಿಯರಿಗೆ ಬದ್ಧವಾಗಬೇಕೆ?
1999ರಲ್ಲಿ ಪೋಸ್ಟ್‍ಮೆನ್ ಇನ ದ ಮೌಂಟನ್ಸ್ ಎನ್ನುವ ಚಿತ್ರ ಬಂತು. ಅದರಲ್ಲಿಯ ಮೊದಲ ದೃಶ್ಯ; ತಂದೆ ಮಗ ಇಬ್ಬರೂ ಮಾರನೆಯ ದಿನ ಬೆಳಗ್ಗೆ ತಮ್ಮ ಪ್ರವಾಸಕ್ಕೆ ಹೊರಡಲಿದ್ದಾರೆ, ಹಾಗಾಗಿ ರಾತ್ರಿ ದೀಪದ ಬೆಳಕಿನಲ್ಲಿ ನಕ್ಷೆಗಳನ್ನು, ಇತರ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ತಂದೆ ಮಗ ಒಂದು ಊರಿಗೆ ಬೆಳ್ಳಂಬೆಳಗ್ಗೆ ಬಂದು ಮುಟ್ಟುತ್ತಾರೆ. ಈ ದೃಶ್ಯಗಳನ್ನು ನೋಡುತ್ತಿರುವಾಗ ಒಬ್ಬ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅಲ್ಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ ನಿರ್ದೇಶಕ ಹೋ ಜಿಯಾಂಗಿ? ಅದನ್ನು ಮಾಡಲು ಹೇಗೆ ಸಾಧ್ಯವಾಯಿತು?

ಸಿಡ್ನಿ ಲುಮೆಟ್ ಅವರ ಚಿತ್ರ ದಿ ವರ್ಡಿಕ್ಟ್ ನೋಡುವಾಗ ಅದೊಂದು ವಿದ್ಯುತ್ ಪ್ರವಹಿಸುತ್ತಿರುವ ತಂತಿ ಎಂತಲೇ ಭಾಸವಾಯಿತು. ಪ್ರತಿಯೊಂದು ದೃಶ್ಯವೂ ಜೀವಂತವಾಗಿದೆ; ಅದರದೇ ಬಿಗಿತ, ಟೆನ್ಷನ್ ಹೊಂದಿದೆ. ಆ ಬಿಗಿತ ಪ್ರೇಕ್ಷಕನನ್ನು ಒಂದುಕ್ಷಣವೂ ಬಿಡುವುದಿಲ್ಲ. ಹಿನ್ನಲೆ ಸಂಗೀತ ಇಲ್ಲದೇ ಅಷ್ಟು ಟೆನ್ಷನ್ ತಂದಿಡುತ್ತಾರೆ. ಅದನ್ನು ಹೇಗೆ ಮಾಡಲು ಸಾಧ್ಯವಾಯಿತು?

ನಾವು ಚಿಕ್ಕವರಿದ್ದಾಗ ಒಂದು ಮಾಡ್ತಿದ್ವಿ. ಯಾರೋ ಸಿನೆಮಾ ನೋಡಿ ಬಂದಕೂಡಲೇ, ಅವರನ್ನು ಸ್ಟೋರಿ ಹೇಳು ಎಂದು ಪೀಡಿಸುತ್ತಿದ್ವಿ. ಅನೇಕ ಸಲ ಅವರು ಆ ಚಿತ್ರದ ಸಂಪೂರ್ಣ ಸ್ಟೋರಿಯನ್ನು ಕಣ್ಣಿಗೆ ಕಾಣುವ ಹಾಗೆ ಹೇಳುತ್ತಿದ್ದರು. (ಮಕ್ಕಳಷ್ಟೇ ಅಲ್ಲ, ವಯಸ್ಕರೂ ಇದನ್ನು ಮಾಡುತ್ತಿದ್ದರು.) ಅಂದರೆ, ಸಿನೆಮಾ ಎಂದರೆ ಕಥೆ ಎಂದಾಯಿತಲ್ಲ?

ಫಾರೆಸ್ಟ್ ಗಂಪ್, ಕಾಸ್ಟ್ ಅವೇ ಮುಂತಾದ ಚಿತ್ರಗಳು ಎಲ್ಲರಿಗೂ ಇಷ್ಟವಾಗಿದ್ದರೂ ಆ ಚಿತ್ರಗಳ ನಿರ್ದೇಶಕ ಯಾರು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅದೇಕೆ?

ನಿರ್ದೇಶನದ ವಿಷಯಕ್ಕೆ ಬಂದಾಗ ಇನ್ನೂ ಇಂತಹ ನೂರಾರು ಪ್ರಶ್ನೆಗಳು ಎದುರಾಗುತ್ತವೆ. ಲೇಖಕನ ತಲೆಯಲ್ಲಿ ಬಿತ್ತಿದ ಕಥೆಯೆನ್ನುವ ಬೀಜ ಮೊಳಕೆಯೊಡೆದು, ಚಿಗುರಿ, ಗಿಡವಾಗಿ, ಮರವಾಗಿ ಹೂ ಹಣ್ಣು ಕೊಡುವ ಪ್ರಕ್ರಿಯೆ ಇದು; ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯವರು ಪೋಷಿಸುತ್ತ ಹೋಗುತ್ತಾರೆ. ನಮಗೆ ಹಣ್ಣು ರುಚಿಕರವಾಗಿರಬೇಕು ಅಷ್ಟೇ.

ಅಂದಹಾಗೆ, ‘ಪಿಚ್ಚರ್ ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’ ಎಂದು ಹೇಳಿದ ನನ್ನ ಹೈಸ್ಕೂಲಿನ ಆ ಗೆಳೆಯ ಡಬ್ಬಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...