Homeಮುಖಪುಟಏನಿದು ಫಿಲ್ಮ್ ಡೈರೆಕ್ಷನ್?

ಏನಿದು ಫಿಲ್ಮ್ ಡೈರೆಕ್ಷನ್?

- Advertisement -
- Advertisement -

| ರಾಜಶೇಖರ್ ಅಕ್ಕಿ |

ನಾನಾಗ ಹೈಸ್ಕೂಲಿನಲ್ಲಿದ್ದೆ, ಒಂದು ಸಿನೆಮಾ ನೋಡಿ ಬಂದ ನಂತರ ನನ್ನ ಒಬ್ಬ ಗೆಳೆಯ ಹೇಳಿದ್ದು, ‘ಪಿಚ್ಚರ್ ಅಷ್ಟು ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’. ಇದೇನಿದು? ಇದ್ಹೆಂಗೆ ಸಾಧ್ಯ? ಅಭಿನಯ ಅಂದ್ರೆ ಗೊತ್ತು, ಛಾಯಾಗ್ರಹಣ ಗೊತ್ತು, ಸಂಗೀತ ಗೊತ್ತು, ಈ ಡೈರೆಕ್ಷನ್ ಅಂದ್ರೇನು? ಸಿನೆಮಾಗಳನ್ನು ಇಷ್ಟು ಇಷ್ಟ ಪಡುವ ನನಗೆ ಈ ಡೈರೆಕ್ಷನ್ ಅನ್ನೋದೇನು ಎನ್ನೋದು ಗೊತ್ತೇ ಇಲ್ವಲ್ಲ? ನಾನು ಕಣ್ಣು ಪಿಳಿ ಪಿಳಿ ಬಿಟ್ಟು ನೋಡಿದೆ.

ಹಂಗಾದ್ರೆ ಚಲನಚಿತ್ರ ನಿರ್ದೇಶನ ಅಂದ್ರೇನು?
ಚಿತ್ರಕಥೆಯನ್ನು ತೆಗೆದುಕೊಂಡು ದೃಶ್ಯ ಮಾಧ್ಯಮಕ್ಕೆ ಇಳಿಸುವುದೇ ನಿರ್ದೇಶನ ಹಾಗೂ ಅದನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವ ಜವಾಬ್ದಾರಿ ಹೊತ್ತವನನ್ನು ನಿರ್ದೇಶಕ ಎನ್ನಬಹುದು. ಅಂದರೆ, ಸ್ಕ್ರಿಪ್ಟ್‍ಅನ್ನು ತೆಗೆದುಕೊಂಡು ಆಯಾ ದೃಶ್ಯಕ್ಕೆ ಬೇಕಾಗಿರುವ ಶಾಟ್‍ಗಳನ್ನು ಆಯ್ಕೆ ಮಾಡಿ ಶೂಟಿಂಗ್ ಮಾಡಿ ಸಂಕಲನ ಮಾಡಿದರೆ ಅದುವೇ ನಿರ್ದೇಶನ.

ಅಷ್ಟೇನಾ? ಹಂಗಂದ್ರೆ, ನನ್ನ ಗೆಳೆಯ ಹೇಳಿದ ಮಾತು, ಡೈರೆಕ್ಷನ್ ಮಸ್ತ್ ಇತ್ತು ಅಂದರೇನು? ನಿರ್ದೇಶನ ಮಸ್ತ್ ಆಗಲು ಏನೆಲ್ಲ ಮಾಡಬೇಕು? ಏನೆಲ್ಲ ಒಳಗೊಂಡಿರುತ್ತೆ ಈ ಚಲನಚಿತ್ರ ನಿರ್ದೇಶನ?

ಸರಳವಾಗಿ ಹೇಳಬೇಕೆಂದರೆ, ಕಥೆಯ, ಚಿತ್ರಕಥೆಯ, ಛಾಯಾಗ್ರಹಣದ, ಅಭಿನಯದ ಮತ್ತು ಸಂಕಲನದ ಆಳವಾದ ಜ್ಞಾನ ನಿರ್ದೇಶಕನಿಗಿರಬೇಕು, ಈ ಎಲ್ಲಾ ವಿಭಾಗಗಳಿಗೂ ನಿರ್ದೇಶಕನೇ ಜವಾಬ್ದಾರ. ಅಂದರೆ ನಿರ್ದೇಶಕ ಬರೀ ಸೂಪರ್‍ವೈಸರ್ ಆಗಿರಬೇಕಾ? ಅಥವಾ ಆಯಾ ದೃಶ್ಯಗಳಲ್ಲಿ ಯಾವ್ಯಾವ ಶಾಟ್ ಬೇಕು ಎಂದು ಛಾಯಾಗ್ರಾಹಕನಿಗೆ ಮತ್ತು ನಟರಿಗೆ ಹೇಳುವುದೇ ನಿರ್ದೇಶಕನ ಕೆಲಸ ಮತ್ತು ಇತರ ಕೆಲಸಗಳನ್ನೆಲ್ಲಾ ಮೇಲ್ವಿಚಾರಣೆ ಮಾಡುವುದು ಎಂದು ಅನ್ನಬಹುದಾ?

ಇರಲಿ, ನಿರ್ದೇಶಕನ ಕೆಲಸಗಳೇನು ಎಂದು ಸದ್ಯಕ್ಕೆ ನನಗೆ ತಿಳಿದಿರುವ ಕೆಲಸಗಳ ಪಟ್ಟಿ ಮಾಡುವ.
ಒಂದು, ಕಥೆಯ ಆಳ ಜ್ಞಾನ, ಕಥೆ ಹೇಗೆ ಕೆಲಸ ಮಾಡುವುದು ಎನ್ನುವುದರ ಸ್ಪಷ್ಟತೆ (ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ. ಲಿಂಕ್) ಈ ಕಥೆ ಏನು? ಈ ಕಥೆ ಏಕೆ? ಈ ಕಥೆಯೇ ಏಕೆ? ಈ ಕಥೆಗೆ ಈ ನಿರ್ದೇಶಕನೇ ಏಕೆ? ಈ ಕಥೆ ಇಂದೇಕೆ? ಮೊದಲು ಈ ಮೂಲಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ ನಂತರ ಈ ಕಥೆ ಯಾರದ್ದು, ಕಥೆಯ ಉದ್ದೇಶ ಏನು, ಕಥಾನಾಯಕಿಯ ಉದ್ದೇಶ ಏನು, ಕಥೆ ಎಲ್ಲೆಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ, ಚಿತ್ರಕಥೆಯಲ್ಲಿ ಬರೆದ ದೃಶ್ಯಗಳು ಕಥೆಯ ಆತ್ಮವನ್ನು ಬಿಂಬಿಸುತ್ತಿವೆಯೇ ಎನ್ನುವ ಹತ್ತಾರು ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕು.

ಮೇಲಿನ ಎಲ್ಲಾ ಅಂಶಗಳನ್ನು ಖಾತ್ರಿಪಡಿಸಿಕೊಂಡ ನಂತರ ಆಯಾ ದೃಶ್ಯಗಳಿಗೆ ಆಗತ್ಯವಿರುವ ಶಾಟ್‍ಗಳನ್ನು ಆಯ್ಕೆ ಮಾಡಬೇಕು. (ಇದರ ಬಗ್ಗೆ ಮುಂದಿನ ಪ್ಯಾರಾದಲ್ಲಿ). ಆ ದೃಶ್ಯಕ್ಕೆ ಆಯ್ಕೆ ಮಾಡಿದ ಶಾಟ್‍ಗಳು ಸಾಕೇ, ಇನ್ನೂ ಕಡಿಮೆ ಶಾಟ್‍ಗಳಲ್ಲಿ ಆ ದೃಶ್ಯದ ಸಾರವನ್ನು ಸೆರೆಹಿಡಿಯಬಹುದೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ ಅದರನುಗುಣವಾಗಿ ಚಿತ್ರೀಕರಣ ಮಾಡಬೇಕು. ಈ ಹಂತದಲ್ಲಿ ನಿರ್ದೇಶಕನಿಗೆ ತಾಂತ್ರಿಕ ಅಂಶಗಳ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಯಾವ ಕ್ಯಾಮರ ಬಳಸಬೇಕು, ಯಾವ ಲೆನ್ಸ್ ಬಳಸಬೇಕು, ಯಾವ ಕೋನ ಇಡಬೇಕು, ಶಾಟ್‍ನಲ್ಲಿ ಕ್ಯಾಮರ ಚಲನೆ ಇರಬೇಕೇ ಇತ್ಯಾದಿ ಪ್ರಶ್ನೆಗಳೊಂದಿಗೆ ಪರದೆಯಲ್ಲಿ ಕಾಣುವ ಎಲ್ಲಾ ವಸ್ತುಗಳು ಹೇಗಿರಬೇಕು ಎನ್ನುವುದನ್ನೂ ನಿರ್ದೇಶಕನೇ ನಿರ್ಧರಿಸಬೇಕು.

ಇದರೊಂದಿಗೆ ಅಭಿನಯ. ನಟರ ಹಾವಭಾವದೊಂದಿಗೆ ಎಲ್ಲಾ ನಟರ ಚಲನೆಗಳನ್ನೂ ನಿರ್ದೇಶಕನೇ ನಿರ್ಧರಿಸಬೇಕು. (ಪಾತ್ರ ಸೃಷ್ಟಿಯಲ್ಲಿ ನಿರ್ದೇಶಕನ ಪಾತ್ರದ ಬಗ್ಗೆ ಈಗಾಗಲೇ ಬರೆದಿದ್ದೇನೆ.) ಚಿತ್ರೀಕರಣ ಮುಗಿಸಿದ ನಂತರ ಅತ್ಯಂತ ಮುಖ್ಯ ಅಂಗವಾದ ಸಂಕಲನದ ಪ್ರಕ್ರಿಯೆಯಲ್ಲಿ ಸಂಕಲನಕಾರಳೊಂದಿಗೆ ಸೇರಿ ಪ್ರೇಕ್ಷಕರಿಗೆ ಕೊನೆಯದಾಗಿ ಚಿತ್ರ ಹೇಗೆ ತಲುಪುವುದು ಎನ್ನುವ ಕೆಲಸ ಮುಗಿಸಬೇಕು. (ಸಂಕಲನದ ಬಗ್ಗೆ ಇನ್ನೊಂದು ಲೇಖನ ಬೇಕು.)

ಅಂದ್ರೆ? ಇಷ್ಟೇನಾ ನಿರ್ದೇಶನ ಅಂದರೆ?
ನಿರ್ದೇಶನದ ಬಗ್ಗೆ ಹಲವಾರು ಥಿಯರಿಗಳಿವೆ. ಅಂದ್ರೆ ತಾರ್ಕಾವ್‍ಸ್ಕಿ (Andrei Tarkovsky)ಎಂಬ ರಷಿಯಾದ ನಿರ್ದೇಶಕ ಸಿನೆಮಾ ಎನ್ನುವುದು ಸಮಯದಲ್ಲಿ ಕೆತ್ತನೆ (sculpting) ಮಾಡಿದಂತೆ ಎಂದು ಹೇಳಿ ಚಲನಚಿತ್ರ ಎಂದರೆ ಏನು, ಅದರ ಜೀವ ಎಂಥದ್ದು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಸ್ಟಾಕರ್, ಸೊಲಾರಿಸ್, ಮಿರರ್ ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದ ಇವರ ಸಿನೆಮಾಗಳಲ್ಲಿ ಆಧ್ಯಾತ್ಮ, ಕನಸು ಮುಂತಾದ ವಿಷಯಗಳನ್ನು ಸೆರೆಹಿಡಿಯುವ ಪ್ರಯತ್ನ ಕಾಣಿಸುತ್ತದೆ. ಇವರ ಚಿತ್ರಗಳಲ್ಲಿ ತುಂಬಾ ಉದ್ದದ ಶಾಟ್‍ಗಳು ಮತ್ತು ತುಂಬಾ ಕಡಿಮೆ ಕಟ್‍ಗಳು ಕಾಣಿಸುತ್ತವೆ. ಆದರೆ ಐಸೆನ್‍ಸ್ಟೈನ್ ಮತ್ತು ಡೇವಿಡ್ ಮ್ಯಾಮೆಟ್(ಇವರ ಬಗ್ಗೆ ಬರೆದಿದ್ದೇನೆ) ಮುಂತಾದವರು ಮೊಂಟಾಜ್ ಥಿಯರಿಯನ್ನು ಮುಂದಿಡುತ್ತಾರೆ. ಚಿತ್ರದಲ್ಲಿ ಮುಂದೇನಾಗುವುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಹಿಡಿದಿಡಬೇಕು, ಪ್ರತಿಯೊಂದು ದೃಶ್ಯವೂ ಕಥೆಯನ್ನು ಮುಂದೊಯ್ಯಬೇಕು, ಪ್ರತಿಯೊಂದು ದೃಶ್ಯದ ಉದ್ದೇಶ ಸ್ಪಷ್ಟವಾಗಿರಬೇಕು, ಸಂಭಾಷಣೆಯ ಪ್ರತಿಯೊಂದು ತುಣುಕು ಸಹ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಇತ್ಯಾದಿ.

ಅಂದರೆ, ಈ ಎರಡೂ ಥಿಯರಿಗಳು ಒಂದಕ್ಕೊಂದು ವಿರುದ್ಧದ ಥಿಯರಿಗಳಾ? ದೃಶ್ಯದ ಉದ್ದೇಶ ಸ್ಪಷ್ಟವಾದರೆ ಸಾಕಲ್ವಾ, ಅದಕ್ಕೆ ಜೀವ ತುಂಬೋದು ಅಂದರೆ ಏನು?

ಕಥೆಗಳ ಆಧಾರದ ಮೇಲೆ ಅದರ ಹಿಂದಿರಬೇಕಾದ ಥಿಯರಿ ನಿರ್ಧಾರವಾಗಬೇಕೆ? ಅಥವಾ ನಿರ್ದೇಶಕ ಒಂದೇ ಥಿಯರಿಗೆ ಬದ್ಧವಾಗಬೇಕೆ?
1999ರಲ್ಲಿ ಪೋಸ್ಟ್‍ಮೆನ್ ಇನ ದ ಮೌಂಟನ್ಸ್ ಎನ್ನುವ ಚಿತ್ರ ಬಂತು. ಅದರಲ್ಲಿಯ ಮೊದಲ ದೃಶ್ಯ; ತಂದೆ ಮಗ ಇಬ್ಬರೂ ಮಾರನೆಯ ದಿನ ಬೆಳಗ್ಗೆ ತಮ್ಮ ಪ್ರವಾಸಕ್ಕೆ ಹೊರಡಲಿದ್ದಾರೆ, ಹಾಗಾಗಿ ರಾತ್ರಿ ದೀಪದ ಬೆಳಕಿನಲ್ಲಿ ನಕ್ಷೆಗಳನ್ನು, ಇತರ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ತಂದೆ ಮಗ ಒಂದು ಊರಿಗೆ ಬೆಳ್ಳಂಬೆಳಗ್ಗೆ ಬಂದು ಮುಟ್ಟುತ್ತಾರೆ. ಈ ದೃಶ್ಯಗಳನ್ನು ನೋಡುತ್ತಿರುವಾಗ ಒಬ್ಬ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅಲ್ಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ ನಿರ್ದೇಶಕ ಹೋ ಜಿಯಾಂಗಿ? ಅದನ್ನು ಮಾಡಲು ಹೇಗೆ ಸಾಧ್ಯವಾಯಿತು?

ಸಿಡ್ನಿ ಲುಮೆಟ್ ಅವರ ಚಿತ್ರ ದಿ ವರ್ಡಿಕ್ಟ್ ನೋಡುವಾಗ ಅದೊಂದು ವಿದ್ಯುತ್ ಪ್ರವಹಿಸುತ್ತಿರುವ ತಂತಿ ಎಂತಲೇ ಭಾಸವಾಯಿತು. ಪ್ರತಿಯೊಂದು ದೃಶ್ಯವೂ ಜೀವಂತವಾಗಿದೆ; ಅದರದೇ ಬಿಗಿತ, ಟೆನ್ಷನ್ ಹೊಂದಿದೆ. ಆ ಬಿಗಿತ ಪ್ರೇಕ್ಷಕನನ್ನು ಒಂದುಕ್ಷಣವೂ ಬಿಡುವುದಿಲ್ಲ. ಹಿನ್ನಲೆ ಸಂಗೀತ ಇಲ್ಲದೇ ಅಷ್ಟು ಟೆನ್ಷನ್ ತಂದಿಡುತ್ತಾರೆ. ಅದನ್ನು ಹೇಗೆ ಮಾಡಲು ಸಾಧ್ಯವಾಯಿತು?

ನಾವು ಚಿಕ್ಕವರಿದ್ದಾಗ ಒಂದು ಮಾಡ್ತಿದ್ವಿ. ಯಾರೋ ಸಿನೆಮಾ ನೋಡಿ ಬಂದಕೂಡಲೇ, ಅವರನ್ನು ಸ್ಟೋರಿ ಹೇಳು ಎಂದು ಪೀಡಿಸುತ್ತಿದ್ವಿ. ಅನೇಕ ಸಲ ಅವರು ಆ ಚಿತ್ರದ ಸಂಪೂರ್ಣ ಸ್ಟೋರಿಯನ್ನು ಕಣ್ಣಿಗೆ ಕಾಣುವ ಹಾಗೆ ಹೇಳುತ್ತಿದ್ದರು. (ಮಕ್ಕಳಷ್ಟೇ ಅಲ್ಲ, ವಯಸ್ಕರೂ ಇದನ್ನು ಮಾಡುತ್ತಿದ್ದರು.) ಅಂದರೆ, ಸಿನೆಮಾ ಎಂದರೆ ಕಥೆ ಎಂದಾಯಿತಲ್ಲ?

ಫಾರೆಸ್ಟ್ ಗಂಪ್, ಕಾಸ್ಟ್ ಅವೇ ಮುಂತಾದ ಚಿತ್ರಗಳು ಎಲ್ಲರಿಗೂ ಇಷ್ಟವಾಗಿದ್ದರೂ ಆ ಚಿತ್ರಗಳ ನಿರ್ದೇಶಕ ಯಾರು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅದೇಕೆ?

ನಿರ್ದೇಶನದ ವಿಷಯಕ್ಕೆ ಬಂದಾಗ ಇನ್ನೂ ಇಂತಹ ನೂರಾರು ಪ್ರಶ್ನೆಗಳು ಎದುರಾಗುತ್ತವೆ. ಲೇಖಕನ ತಲೆಯಲ್ಲಿ ಬಿತ್ತಿದ ಕಥೆಯೆನ್ನುವ ಬೀಜ ಮೊಳಕೆಯೊಡೆದು, ಚಿಗುರಿ, ಗಿಡವಾಗಿ, ಮರವಾಗಿ ಹೂ ಹಣ್ಣು ಕೊಡುವ ಪ್ರಕ್ರಿಯೆ ಇದು; ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯವರು ಪೋಷಿಸುತ್ತ ಹೋಗುತ್ತಾರೆ. ನಮಗೆ ಹಣ್ಣು ರುಚಿಕರವಾಗಿರಬೇಕು ಅಷ್ಟೇ.

ಅಂದಹಾಗೆ, ‘ಪಿಚ್ಚರ್ ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’ ಎಂದು ಹೇಳಿದ ನನ್ನ ಹೈಸ್ಕೂಲಿನ ಆ ಗೆಳೆಯ ಡಬ್ಬಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...