Homeಕರ್ನಾಟಕಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಪಕ್ಷಾಂತರ ಪಿಡುಗಿನ ಇತಿಕಾಸ ಇಲ್ಲಿದೆ...

- Advertisement -
- Advertisement -

ಪಕ್ಷಾಂತರ ಎಂಬ ಅಸಹ್ಯವೂ, ಆಪರೇಷನ್ ಕಮಲ ಎಂಬ ಬಿಜೆಪಿ ದಂಧೆಯೂ…

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಹೊತ್ತಿನಲ್ಲಿ ಪಕ್ಷಾಂತರದ ಪಿಡುಗು ಬೆಳೆದ ಬಂದ ಅಸಹ್ಯ ಇತಿಹಾಸವನ್ನು ಇಲ್ಲಿ ನೀಡಿದ್ದೇವೆ.

ನಿನ್ನೆ (ಗುರುವಾರ) ಸದನದಲ್ಲಿ ಸಿದ್ದರಾಮಯ್ಯನವರು ವಿಶ್ವಾಸ ಮತದ ಮೇಲೆ ಮಾತನಾಡುತ್ತ, ಕ್ರಿಯಾಲೋಪ ಎತ್ತುವ ಮೊದಲು ಪಕ್ಷಾಂತರ ಪಿಡುಗಿನ ಇತಿಹಾಸದ ಒಂದು ವಿಲಕ್ಷಣ, ವಿಕೃತ ಪ್ರಸಂಗವನ್ನು ಜನರ ಎದರು ಇಟ್ಟರು. ‘ಒಂದೇ ದಿನದಲ್ಲಿ ಮೂರು ಬಾರಿ ವಿವಿಧ ಪಾರ್ಟಿಗಳಲ್ಲಿ ಕಾಣಿಸಿಕೊಂಡ ಗಯಾಲಾಲ್’ ಎಂಬ ಶಾಸಕನ ಕುರಿತು ಅವರು ಪ್ರಸ್ತಾಪಿಸಿದ್ದರು.

ಈ ಗಯಾಲಾಲ್‍ನ ಪ್ರಸಂಗವನ್ನು ಇಲ್ಲಿ ನೀಡುತ್ತಲೇ 60ರ ದಶಕದ ಅಂತ್ಯದಲ್ಲಿ ರಾಜಕಾರಣವು ಪಕ್ಷಾಂತರ ಪರ್ವದ ಕಾಲಘಟ್ಟವಾಗಿದ್ದ ಇತಿಹಾಸವನ್ನು ಮೆಲುಕು ಹಾಕೋಣ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ, ಸುಪ್ರಿಂಕೋರ್ಟಿನ ಅಭಯದಿಂದಾಗಿ ಸದನಕ್ಕೆ ಬರದೇ ಮುಂಬೈಯಲ್ಲಿರುವ ಶಾಸಕರ ಸ್ವೇಚ್ಛಾಚಾರದ ಹಿನ್ನೆಲೆಯಲ್ಲಿ ಇದನ್ನೆಲ್ಲ ಅರಿಯುವುದು ಅಗತ್ಯ ಎನಿಸುತ್ತದೆ.

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್
ಗಯಾಲಾಲ್ 15 ದಿನದ ಬಿರುಸಿನ ಚಟುವಟಿಕೆಯಲ್ಲಿ ಮೂರು ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಒಂದೇ ದಿನದ ಮುಂಜಾನೆ ಒಂದು ಪಕ್ಷದಲ್ಲಿದ್ದ ಅವರು ಅಂದು ಮತ್ತೆರಡು ಸಲ ಪಕ್ಷ ಬದಸಲಿಸುವ ಮೂಲಕ ಒಂದೇ ದಿನ ಮೂರು ಪಾರ್ಟಿಗಳಲ್ಲಿ ಕಾಣಿಸಿಕೊಂಡು ಪಕ್ಷಾಂತರದ ವಿಕೃತ ಇತಿಹಾಸದಲ್ಲಿ ‘ಮೈಲಿ(ಗೆ)ಗಲ್ಲು’ ಆಗಿ ಉಳಿದು ಬಿಟ್ಟಿದ್ದಾರೆ.

ಈ ಪುಣ್ಯಾತ್ಮನ ಕಾರಣಕ್ಕೆ ‘ಆಯಾರಾಮ್ ಗಯಾರಾಮ್’ ಎಂಬ ನುಡಿಗಟ್ಟು ಚಾಲ್ತಿಗೆ ಬಂದು ಪಕ್ಷದಿಂದ ಪಕ್ಷ ಬದಲಿಸುವವರನ್ನು ವ್ಯಂಗ್ಯ ಮಾಡಲು ಈ ನುಡಿಗಟ್ಟು ಇನ್ನೂ ಬಳಕೆಯಲ್ಲಿದೆ. ‘ಆಯಾರಾಮ್ ಗಯಾರಾಮ್’ ಕುರಿತಾಗಿಯೇ ಬಂದ ಜೋಕುಗಳು, ಕಾರ್ಟೂನುಗಳಿಗೆ ಲೆಕ್ಕವಿಲ್ಲ!

1967ರಲ್ಲಿ ಒಂದು ದಿನ, ತಾನು ಹರ್ಯಾಣ ವಿಧಾನಸಭೆಗೆ ಶಾಸಕನಾಗಿ ಆರಿಸಿಬಂದಿದ್ದ ಕಾಂಗ್ರೆಸ್ ಪಕ್ಷದಿಂದ ಜನತಾ ಪಾರ್ಟಿಗೆ (ಉನೈಟೆಡ್ ಫ್ರಂಟ್ ಭಾಗವಾಗಿತ್ತು), ನಂತರ ಮತ್ತೆ ಸ್ವಲ್ಪ ತಾಸುಗಳಲ್ಲೇ ಮರಳಿ ತವರು ಪಕ್ಷ ಕಾಂಗ್ರೆಸ್‍ಗೆ…. ಕೇವಲ ಒಂಭತ್ತು ತಾಸುಗಳ ಅವಧಿಯಲ್ಲಿ ಮತ್ತೆ ಜನತಾ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಯಾಲಾಲ್ ಪಕ್ಷಾಂತರ ಪರ್ವ ಎಂಬ ಪದಕ್ಕೆ ಅನ್ವರ್ಥವಾಗಿ ಉಳಿದುಬಿಟ್ಟಿದ್ದಾರೆ.

ಆದರೆ, ಇಲ್ಲಿ ನಮ್ಮದೊಂದು ಪ್ರಶ್ನೆಯಿದೆ
ನಿನ್ನೆ ಸಿದ್ದರಾಮಯ್ಯರು ಪ್ರಸ್ತಾಪಿಸಿದಂತೆ ಬಹಳಷ್ಟು ಸದನಗಳಲ್ಲಿ ವಿಶ್ವಾಸಮತದ ಚರ್ಚೆ ನಡೆದಾಗ, ಪಕ್ಷಾಂತರದ ಆಟ ಸಾಗಿದಾಗ ಗಯಾಲಾಲ್ ಹೆಸರು ಪ್ರಸ್ತಾಪಿಸಿ ವ್ಯಂಗ್ಯ ಮಾಡಲಾಗುತ್ತದೆ, ಅದೇನೋ ಸರಿ. ಆದರೆ, ಅವತ್ತು ಗಯಾಲಾಲ್‍ರನ್ನು ಫುಟ್‍ಬಾಲ್‍ನಂತೆ ಆಟ ಆಡಿದ್ದು ಕಾಂಗ್ರೆಸ್ ಮತ್ತು ಜನತಾ ಪಾರ್ಟಿಗಳು.

ಸ್ವಾತಂತ್ರ್ಯಾ ನಂತರ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಅಧಿಕಾರ ಹಿಡಿಯುತ್ತಲೇ ಬಂದಿದ್ದ ಕಾಂಗ್ರೆಸ್‍ಗೆ 1967ರಲ್ಲಿ ಜನ ದೊಡ್ಡ ಪಾಠವನ್ನೇ ಕಲಿಸಿದ್ದರು. ಅಧಿಕಾರ ಉಂಡೂ ಉಂಡೂ ಮೈಯುಂಡು ಬಿಟ್ಟಿದ್ದ ಕಾಂಗ್ರೆಸ್ ಆಗ ಚಡಪಡಿಸತೊಡಗಿತ್ತು. ಅದರ ಪರಿಣಾಮವಾಗಿಯೇ ದೇಶಾದ್ಯಂತ ಕಾಂಗ್ರೆಸ್ ಬೇರೆ ಚಿಹ್ನೆಗಳಿಂದ ಗೆದ್ದವರನ್ನು ಬೇಟೆಯಾಡಿ, ಅವಕಾಶವಾದಿ ರಾಜಕಾರಣದ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸಂಚು ಮಾಡಿತ್ತು. ಅದರ ಪರಿಣಾಮವಾಗಿ ಹಲವು ಕಡೆ ಕಾಂಗ್ರೆಸ್ ಪಕ್ಷವೇ ಹೋಳಾಗಿತ್ತು.

1967: ವಿ.ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಪೆಟ್ಟು
1967ರಲ್ಲಿ 16 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಎಂಟು ರಾಜ್ಯಗಳಲ್ಲಿ ಬಹುಮತ ಕಳೆದುಕೊಂಡಿತ್ತು ಮತ್ತು ಏಳರಲ್ಲಿ ಸರ್ಕಾರ ರಚಿಸಲು ವಿಫಲವಾಗಿತ್ತು. ಕಾಂಗ್ರೆಸ್‍ಗೆ ಅದು ಮರ್ಮಾಘಾತದ ವಿಷಯವೇ ಆಗಿತ್ತು. ಆ ಸಂದರ್ಭವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅಡಿಯಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗಕ್ಕೆ ನಾಂದಿ ಹಾಡಿತು. ಇದು ದೊಡ್ಡ ಪ್ರಮಾಣದ ಪಕ್ಷಾಂತರವನ್ನೂ ಉದ್ಘಾಟನೆ ಮಾಡಿತು.

1967-71ರ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ 142 ಪಕ್ಷಾಂತರಗಳು ಮತ್ತು ವಿವಿಧ ರಾಜ್ಯ ವಿಧಾನಸಭೆಗಳಲ್ಲಿ 1969 ಪಕ್ಷಾಂತರ ಪ್ರಕರಣಗಳು ಸಂಭವಿಸಿಬಿಟ್ಟವು! ಇದೆ ದೇಶ ಕಂಡ ಅಸಹ್ಯ ಪಕ್ಷಾಂತರ ಪರ್ವದ ಕಾಲಾವಧಿ. ಇದರ ಪರಿಣಾಮವಾಗಿ 32 ಸರ್ಕಾರಗಳು ಲಗಾಟಿ ಹೊಡೆದವು ಮತ್ತು 212 ಪಕ್ಷಾಂತರಿಗಳಿಗೆ ಸಚಿವ ಸ್ಥಾನಗಳು ಲಭಿಸಿದ್ದವು! (ಕಳೆದ ಶುಕ್ರವಾರ ಈ ಅಂಕಿಅಂಶಗಳನ್ನು ಸ್ಪೀಕರ್ ರಮೇಶಕುಮಾರ್ ಸದನದಲ್ಲಿ ಉಲ್ಲೇಖಿಸಿದ್ದರು).

ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಬುಡಮೇಲಾಯಿತು. ಕಾಂಗ್ರೆಸ್‍ನ ಭಿನ್ನಮತೀಯರ ಗುಂಪು ವಿಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಈ ಕಾಲಾವಧಿಯಲ್ಲಿಯೇ ಗಯಾಲಾಲ್ ಪ್ರಸಂಗ ನಡೆದಿತ್ತಷ್ಟೇ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುದೊಡ್ಡ ಬಹುಮತ ಸಿಕ್ಕಿ, ರಾಜೀವ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾದರು. ಅಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆಂದು ಪ್ರಸ್ತಾಪ ಮಾಡಿದ್ದರು. 1985ರಲ್ಲಿ ಪಕ್ಷಾಂತರ ಕಾಯ್ದೆ ಜಾರಿಗೆ ಬಂತು. ಆಗ ಮೂರನೇ ಒಂದು ಭಾಗದಷ್ಟು ಕಡಿಮೆ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋದಲ್ಲಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅಥವಾ ರಾಜ್ಯಸಭಾ ಮತ್ತು ವಿಧಾನಪರಿಷತ್ತು ಅಧ್ಯಕ್ಷರು ಅವರನ್ನು ಅನರ್ಹಗೊಳಿಸಬಹುದು ಎಂಬ ನಿಯಮವನ್ನು ತಂದು ಸಂವಿಧಾನದ 10ನೇ ಶೆಡ್ಯುಲ್‍ನಲ್ಲಿ ಸೇರಿಸಲಾಯಿತು. ಹೀಗೆ ಒಂದು ಸಾಂವಿಧಾನಿಕ ತಿದ್ದುಪಡಿಯನ್ನೇ ತರಲಾಯಿತು.

ಇದು ಪಕ್ಷಾಂತರವನ್ನು ಕಡಿಮೆ ಮಾಡಿತೆ ಅಥವಾ ತಡೆಗಟ್ಟಿತೆ ಎಂದು ನೋಡುವುದಾದರೆ ಅದು ಹಾಗೆ ಆಗಲಿಲ್ಲ. ಬದಲಿಗೆ ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಸೇರಿ ವಲಸೆ ಹೊಗಲಿಕ್ಕೆ ಆರಂಭ ಮಾಡಿದರು. ನಂತರ 2003ರಲ್ಲಿ ಅಟಲ್ ಬಿಹಾರಿ ವಾಜಪೆಯಿ ಪ್ರಧಾನಮಂತ್ರಿಯಾಗಿದ್ದಾಗ ಪುನಃ ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆಗೆ ಬಂತು. ಆಗ ಮೂರನೆ ಒಂದು ಭಾಗವಲ್ಲ, ಮೂರನೆ ಎರಡು ಭಾಗದಷ್ಟು ಶಾಸಕರು ಸಂಸದರು ಪಕ್ಷಾಂತರ ಮಾಡಿದ್ದಲ್ಲಿ ಅದನ್ನು ವಿಲೀನ ಎಂದು ಪರಿಗಣಿಸಲಾಗುತ್ತದೆ. ಹಾಗೆ ವಿಲೀನ ಮಾಡಿದಾಗ ಹಳೆ ಪಕ್ಷದಲ್ಲಿ ಉಳಿಯುವವರು ಅವರ ಪಾಡಿಗೆ ಇರುತ್ತಾರೆ ಮತ್ತು ಪಕ್ಷಾಂತರ ಮಾಡಿದವರೂ ಸಹ ಅನರ್ಹರಾಗುವುದಿಲ್ಲ ಎಂಬ ತಿದ್ದುಪಡಿಯನ್ನು ಸಂವಿಧಾನದ 91ನೇ ತಿದ್ದುಪಡಿ ಮಾಡಿ ಮುಂದಿಡಲಾಯಿತು.

2008ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೆ ಅಣಕಿಸುವಂತೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂಬ ಹೇಸಿಗೆ ರಾಜಕಾರಣ ಶುರುವಾಗಿತು. ಅಂದರೆ ಅವರು ಕೋಟಿ ಕೋಟಿ ಹಣ ಮತ್ತು ಮಂತ್ರಿಗಿರಿಯ ಆಸೆಗೆ ಮೊದಲು ಅವರು ತಮ್ಮ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಇನ್ನೊಂದು ಪಕ್ಷವನ್ನು ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಯಾಗುವುದು. ಅದನ್ನು ಉದ್ಘಾಟಿಸಿದ ಬಿಜೆಪಿಯೇ ಈಗ ಮತ್ತೆ 15 ಶಾಸಕರನ್ನು ಮುಂಬೈಯಲ್ಲಿ ‘ಹಿಡಿದಿಟ್ಟು’ ಅಧಿಕಾರದ ಹಪಾಹಪಿಯಲ್ಲಿ ತೊಳಲಾಡುತ್ತಿದೆ, ಇನ್ನೊಂದು ಕಡೆ ಅರ್ಜೆಂಟಾಗಿ ಅಧಿಕಾರ ಸಿಗಲಿದೆ ಎಂಬ ಆಶೆಯಲ್ಲಿ ಖುಷಿ ಅನುಭವಿಸುತ್ತಿದೆ…..

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...