Homeಕರ್ನಾಟಕಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಪಕ್ಷಾಂತರ ಪಿಡುಗಿನ ಇತಿಕಾಸ ಇಲ್ಲಿದೆ...

- Advertisement -
- Advertisement -

ಪಕ್ಷಾಂತರ ಎಂಬ ಅಸಹ್ಯವೂ, ಆಪರೇಷನ್ ಕಮಲ ಎಂಬ ಬಿಜೆಪಿ ದಂಧೆಯೂ…

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಹೊತ್ತಿನಲ್ಲಿ ಪಕ್ಷಾಂತರದ ಪಿಡುಗು ಬೆಳೆದ ಬಂದ ಅಸಹ್ಯ ಇತಿಹಾಸವನ್ನು ಇಲ್ಲಿ ನೀಡಿದ್ದೇವೆ.

ನಿನ್ನೆ (ಗುರುವಾರ) ಸದನದಲ್ಲಿ ಸಿದ್ದರಾಮಯ್ಯನವರು ವಿಶ್ವಾಸ ಮತದ ಮೇಲೆ ಮಾತನಾಡುತ್ತ, ಕ್ರಿಯಾಲೋಪ ಎತ್ತುವ ಮೊದಲು ಪಕ್ಷಾಂತರ ಪಿಡುಗಿನ ಇತಿಹಾಸದ ಒಂದು ವಿಲಕ್ಷಣ, ವಿಕೃತ ಪ್ರಸಂಗವನ್ನು ಜನರ ಎದರು ಇಟ್ಟರು. ‘ಒಂದೇ ದಿನದಲ್ಲಿ ಮೂರು ಬಾರಿ ವಿವಿಧ ಪಾರ್ಟಿಗಳಲ್ಲಿ ಕಾಣಿಸಿಕೊಂಡ ಗಯಾಲಾಲ್’ ಎಂಬ ಶಾಸಕನ ಕುರಿತು ಅವರು ಪ್ರಸ್ತಾಪಿಸಿದ್ದರು.

ಈ ಗಯಾಲಾಲ್‍ನ ಪ್ರಸಂಗವನ್ನು ಇಲ್ಲಿ ನೀಡುತ್ತಲೇ 60ರ ದಶಕದ ಅಂತ್ಯದಲ್ಲಿ ರಾಜಕಾರಣವು ಪಕ್ಷಾಂತರ ಪರ್ವದ ಕಾಲಘಟ್ಟವಾಗಿದ್ದ ಇತಿಹಾಸವನ್ನು ಮೆಲುಕು ಹಾಕೋಣ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ, ಸುಪ್ರಿಂಕೋರ್ಟಿನ ಅಭಯದಿಂದಾಗಿ ಸದನಕ್ಕೆ ಬರದೇ ಮುಂಬೈಯಲ್ಲಿರುವ ಶಾಸಕರ ಸ್ವೇಚ್ಛಾಚಾರದ ಹಿನ್ನೆಲೆಯಲ್ಲಿ ಇದನ್ನೆಲ್ಲ ಅರಿಯುವುದು ಅಗತ್ಯ ಎನಿಸುತ್ತದೆ.

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್
ಗಯಾಲಾಲ್ 15 ದಿನದ ಬಿರುಸಿನ ಚಟುವಟಿಕೆಯಲ್ಲಿ ಮೂರು ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಒಂದೇ ದಿನದ ಮುಂಜಾನೆ ಒಂದು ಪಕ್ಷದಲ್ಲಿದ್ದ ಅವರು ಅಂದು ಮತ್ತೆರಡು ಸಲ ಪಕ್ಷ ಬದಸಲಿಸುವ ಮೂಲಕ ಒಂದೇ ದಿನ ಮೂರು ಪಾರ್ಟಿಗಳಲ್ಲಿ ಕಾಣಿಸಿಕೊಂಡು ಪಕ್ಷಾಂತರದ ವಿಕೃತ ಇತಿಹಾಸದಲ್ಲಿ ‘ಮೈಲಿ(ಗೆ)ಗಲ್ಲು’ ಆಗಿ ಉಳಿದು ಬಿಟ್ಟಿದ್ದಾರೆ.

ಈ ಪುಣ್ಯಾತ್ಮನ ಕಾರಣಕ್ಕೆ ‘ಆಯಾರಾಮ್ ಗಯಾರಾಮ್’ ಎಂಬ ನುಡಿಗಟ್ಟು ಚಾಲ್ತಿಗೆ ಬಂದು ಪಕ್ಷದಿಂದ ಪಕ್ಷ ಬದಲಿಸುವವರನ್ನು ವ್ಯಂಗ್ಯ ಮಾಡಲು ಈ ನುಡಿಗಟ್ಟು ಇನ್ನೂ ಬಳಕೆಯಲ್ಲಿದೆ. ‘ಆಯಾರಾಮ್ ಗಯಾರಾಮ್’ ಕುರಿತಾಗಿಯೇ ಬಂದ ಜೋಕುಗಳು, ಕಾರ್ಟೂನುಗಳಿಗೆ ಲೆಕ್ಕವಿಲ್ಲ!

1967ರಲ್ಲಿ ಒಂದು ದಿನ, ತಾನು ಹರ್ಯಾಣ ವಿಧಾನಸಭೆಗೆ ಶಾಸಕನಾಗಿ ಆರಿಸಿಬಂದಿದ್ದ ಕಾಂಗ್ರೆಸ್ ಪಕ್ಷದಿಂದ ಜನತಾ ಪಾರ್ಟಿಗೆ (ಉನೈಟೆಡ್ ಫ್ರಂಟ್ ಭಾಗವಾಗಿತ್ತು), ನಂತರ ಮತ್ತೆ ಸ್ವಲ್ಪ ತಾಸುಗಳಲ್ಲೇ ಮರಳಿ ತವರು ಪಕ್ಷ ಕಾಂಗ್ರೆಸ್‍ಗೆ…. ಕೇವಲ ಒಂಭತ್ತು ತಾಸುಗಳ ಅವಧಿಯಲ್ಲಿ ಮತ್ತೆ ಜನತಾ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಯಾಲಾಲ್ ಪಕ್ಷಾಂತರ ಪರ್ವ ಎಂಬ ಪದಕ್ಕೆ ಅನ್ವರ್ಥವಾಗಿ ಉಳಿದುಬಿಟ್ಟಿದ್ದಾರೆ.

ಆದರೆ, ಇಲ್ಲಿ ನಮ್ಮದೊಂದು ಪ್ರಶ್ನೆಯಿದೆ
ನಿನ್ನೆ ಸಿದ್ದರಾಮಯ್ಯರು ಪ್ರಸ್ತಾಪಿಸಿದಂತೆ ಬಹಳಷ್ಟು ಸದನಗಳಲ್ಲಿ ವಿಶ್ವಾಸಮತದ ಚರ್ಚೆ ನಡೆದಾಗ, ಪಕ್ಷಾಂತರದ ಆಟ ಸಾಗಿದಾಗ ಗಯಾಲಾಲ್ ಹೆಸರು ಪ್ರಸ್ತಾಪಿಸಿ ವ್ಯಂಗ್ಯ ಮಾಡಲಾಗುತ್ತದೆ, ಅದೇನೋ ಸರಿ. ಆದರೆ, ಅವತ್ತು ಗಯಾಲಾಲ್‍ರನ್ನು ಫುಟ್‍ಬಾಲ್‍ನಂತೆ ಆಟ ಆಡಿದ್ದು ಕಾಂಗ್ರೆಸ್ ಮತ್ತು ಜನತಾ ಪಾರ್ಟಿಗಳು.

ಸ್ವಾತಂತ್ರ್ಯಾ ನಂತರ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಅಧಿಕಾರ ಹಿಡಿಯುತ್ತಲೇ ಬಂದಿದ್ದ ಕಾಂಗ್ರೆಸ್‍ಗೆ 1967ರಲ್ಲಿ ಜನ ದೊಡ್ಡ ಪಾಠವನ್ನೇ ಕಲಿಸಿದ್ದರು. ಅಧಿಕಾರ ಉಂಡೂ ಉಂಡೂ ಮೈಯುಂಡು ಬಿಟ್ಟಿದ್ದ ಕಾಂಗ್ರೆಸ್ ಆಗ ಚಡಪಡಿಸತೊಡಗಿತ್ತು. ಅದರ ಪರಿಣಾಮವಾಗಿಯೇ ದೇಶಾದ್ಯಂತ ಕಾಂಗ್ರೆಸ್ ಬೇರೆ ಚಿಹ್ನೆಗಳಿಂದ ಗೆದ್ದವರನ್ನು ಬೇಟೆಯಾಡಿ, ಅವಕಾಶವಾದಿ ರಾಜಕಾರಣದ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸಂಚು ಮಾಡಿತ್ತು. ಅದರ ಪರಿಣಾಮವಾಗಿ ಹಲವು ಕಡೆ ಕಾಂಗ್ರೆಸ್ ಪಕ್ಷವೇ ಹೋಳಾಗಿತ್ತು.

1967: ವಿ.ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಪೆಟ್ಟು
1967ರಲ್ಲಿ 16 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಎಂಟು ರಾಜ್ಯಗಳಲ್ಲಿ ಬಹುಮತ ಕಳೆದುಕೊಂಡಿತ್ತು ಮತ್ತು ಏಳರಲ್ಲಿ ಸರ್ಕಾರ ರಚಿಸಲು ವಿಫಲವಾಗಿತ್ತು. ಕಾಂಗ್ರೆಸ್‍ಗೆ ಅದು ಮರ್ಮಾಘಾತದ ವಿಷಯವೇ ಆಗಿತ್ತು. ಆ ಸಂದರ್ಭವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅಡಿಯಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗಕ್ಕೆ ನಾಂದಿ ಹಾಡಿತು. ಇದು ದೊಡ್ಡ ಪ್ರಮಾಣದ ಪಕ್ಷಾಂತರವನ್ನೂ ಉದ್ಘಾಟನೆ ಮಾಡಿತು.

1967-71ರ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ 142 ಪಕ್ಷಾಂತರಗಳು ಮತ್ತು ವಿವಿಧ ರಾಜ್ಯ ವಿಧಾನಸಭೆಗಳಲ್ಲಿ 1969 ಪಕ್ಷಾಂತರ ಪ್ರಕರಣಗಳು ಸಂಭವಿಸಿಬಿಟ್ಟವು! ಇದೆ ದೇಶ ಕಂಡ ಅಸಹ್ಯ ಪಕ್ಷಾಂತರ ಪರ್ವದ ಕಾಲಾವಧಿ. ಇದರ ಪರಿಣಾಮವಾಗಿ 32 ಸರ್ಕಾರಗಳು ಲಗಾಟಿ ಹೊಡೆದವು ಮತ್ತು 212 ಪಕ್ಷಾಂತರಿಗಳಿಗೆ ಸಚಿವ ಸ್ಥಾನಗಳು ಲಭಿಸಿದ್ದವು! (ಕಳೆದ ಶುಕ್ರವಾರ ಈ ಅಂಕಿಅಂಶಗಳನ್ನು ಸ್ಪೀಕರ್ ರಮೇಶಕುಮಾರ್ ಸದನದಲ್ಲಿ ಉಲ್ಲೇಖಿಸಿದ್ದರು).

ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಬುಡಮೇಲಾಯಿತು. ಕಾಂಗ್ರೆಸ್‍ನ ಭಿನ್ನಮತೀಯರ ಗುಂಪು ವಿಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಈ ಕಾಲಾವಧಿಯಲ್ಲಿಯೇ ಗಯಾಲಾಲ್ ಪ್ರಸಂಗ ನಡೆದಿತ್ತಷ್ಟೇ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುದೊಡ್ಡ ಬಹುಮತ ಸಿಕ್ಕಿ, ರಾಜೀವ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾದರು. ಅಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆಂದು ಪ್ರಸ್ತಾಪ ಮಾಡಿದ್ದರು. 1985ರಲ್ಲಿ ಪಕ್ಷಾಂತರ ಕಾಯ್ದೆ ಜಾರಿಗೆ ಬಂತು. ಆಗ ಮೂರನೇ ಒಂದು ಭಾಗದಷ್ಟು ಕಡಿಮೆ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋದಲ್ಲಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅಥವಾ ರಾಜ್ಯಸಭಾ ಮತ್ತು ವಿಧಾನಪರಿಷತ್ತು ಅಧ್ಯಕ್ಷರು ಅವರನ್ನು ಅನರ್ಹಗೊಳಿಸಬಹುದು ಎಂಬ ನಿಯಮವನ್ನು ತಂದು ಸಂವಿಧಾನದ 10ನೇ ಶೆಡ್ಯುಲ್‍ನಲ್ಲಿ ಸೇರಿಸಲಾಯಿತು. ಹೀಗೆ ಒಂದು ಸಾಂವಿಧಾನಿಕ ತಿದ್ದುಪಡಿಯನ್ನೇ ತರಲಾಯಿತು.

ಇದು ಪಕ್ಷಾಂತರವನ್ನು ಕಡಿಮೆ ಮಾಡಿತೆ ಅಥವಾ ತಡೆಗಟ್ಟಿತೆ ಎಂದು ನೋಡುವುದಾದರೆ ಅದು ಹಾಗೆ ಆಗಲಿಲ್ಲ. ಬದಲಿಗೆ ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಸೇರಿ ವಲಸೆ ಹೊಗಲಿಕ್ಕೆ ಆರಂಭ ಮಾಡಿದರು. ನಂತರ 2003ರಲ್ಲಿ ಅಟಲ್ ಬಿಹಾರಿ ವಾಜಪೆಯಿ ಪ್ರಧಾನಮಂತ್ರಿಯಾಗಿದ್ದಾಗ ಪುನಃ ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆಗೆ ಬಂತು. ಆಗ ಮೂರನೆ ಒಂದು ಭಾಗವಲ್ಲ, ಮೂರನೆ ಎರಡು ಭಾಗದಷ್ಟು ಶಾಸಕರು ಸಂಸದರು ಪಕ್ಷಾಂತರ ಮಾಡಿದ್ದಲ್ಲಿ ಅದನ್ನು ವಿಲೀನ ಎಂದು ಪರಿಗಣಿಸಲಾಗುತ್ತದೆ. ಹಾಗೆ ವಿಲೀನ ಮಾಡಿದಾಗ ಹಳೆ ಪಕ್ಷದಲ್ಲಿ ಉಳಿಯುವವರು ಅವರ ಪಾಡಿಗೆ ಇರುತ್ತಾರೆ ಮತ್ತು ಪಕ್ಷಾಂತರ ಮಾಡಿದವರೂ ಸಹ ಅನರ್ಹರಾಗುವುದಿಲ್ಲ ಎಂಬ ತಿದ್ದುಪಡಿಯನ್ನು ಸಂವಿಧಾನದ 91ನೇ ತಿದ್ದುಪಡಿ ಮಾಡಿ ಮುಂದಿಡಲಾಯಿತು.

2008ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೆ ಅಣಕಿಸುವಂತೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂಬ ಹೇಸಿಗೆ ರಾಜಕಾರಣ ಶುರುವಾಗಿತು. ಅಂದರೆ ಅವರು ಕೋಟಿ ಕೋಟಿ ಹಣ ಮತ್ತು ಮಂತ್ರಿಗಿರಿಯ ಆಸೆಗೆ ಮೊದಲು ಅವರು ತಮ್ಮ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಇನ್ನೊಂದು ಪಕ್ಷವನ್ನು ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಯಾಗುವುದು. ಅದನ್ನು ಉದ್ಘಾಟಿಸಿದ ಬಿಜೆಪಿಯೇ ಈಗ ಮತ್ತೆ 15 ಶಾಸಕರನ್ನು ಮುಂಬೈಯಲ್ಲಿ ‘ಹಿಡಿದಿಟ್ಟು’ ಅಧಿಕಾರದ ಹಪಾಹಪಿಯಲ್ಲಿ ತೊಳಲಾಡುತ್ತಿದೆ, ಇನ್ನೊಂದು ಕಡೆ ಅರ್ಜೆಂಟಾಗಿ ಅಧಿಕಾರ ಸಿಗಲಿದೆ ಎಂಬ ಆಶೆಯಲ್ಲಿ ಖುಷಿ ಅನುಭವಿಸುತ್ತಿದೆ…..

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...