Homeಮುಖಪುಟಜಾಗತಿಕ ಹೂಡಿಕೆದಾರರ ಸಮಾವೇಶ: ರಾಜ್ಯ ಸರ್ಕಾರದ ಹಸಿಹಸಿ ಸುಳ್ಳುಗಳು ಮತ್ತು ವಾಸ್ತವಗಳು- ಶಿವಸುಂದರ್‌ ವಿಶ್ಲೇಷಣೆ

ಜಾಗತಿಕ ಹೂಡಿಕೆದಾರರ ಸಮಾವೇಶ: ರಾಜ್ಯ ಸರ್ಕಾರದ ಹಸಿಹಸಿ ಸುಳ್ಳುಗಳು ಮತ್ತು ವಾಸ್ತವಗಳು- ಶಿವಸುಂದರ್‌ ವಿಶ್ಲೇಷಣೆ

ಕರ್ನಾಟಕ ಪಡೆದ ಹೂಡಿಕೆ ಭರವಸೆ 10 ಲಕ್ಷ ಕೋಟಿ ರೂ.ಗಳೋ? ಕೇವಲ 1.5 ಲಕ್ಷ ಕೋಟಿ ರೂ.ಗಳೋ?

- Advertisement -
- Advertisement -
  1. GIM- ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ- ಕರ್ನಾಟಕ ಪಡೆದ ಹೂಡಿಕೆ ಭರವಸೆ 10 ಲಕ್ಷ ಕೋಟಿ ರೂ.ಗಳೋ? ಅಥವಾ ಕೇವಲ 1.5 ಲಕ್ಷ ಕೋಟಿ ರೂ.ಗಳೋ?
  2. GIMನಿಂದ ಸೃಷ್ಟಿಯಾಗುವ ಉದ್ಯೋಗಗಳು 6 ಲಕ್ಷವೋ? ಅಥವಾ ಕೆಲವೇ ಕೆಲ ಸಾವಿರವೋ? GIM ಭರವಸೆಗಳು ವಾಸ್ತವವಾಗಿ ಬದಲಾಗುವುದು ಶೇ. 80 ರಷ್ಟೋ ಅಥವಾ ಶೇ. 10ರಷ್ಟೊ?

ನಿನ್ನೆ ತಾನೇ ಮುಕ್ತಾಯವಾದ GIM (ಜಾಗತಿಕ ಹೂಡಿಕೆದಾರರ ಸಮ್ಮೇಳನ)ದಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಭರವಸೆಯನ್ನು ನೀಡಿದ್ದಾರೆ ಎಂದು ಘೋಷಿಸಿಕೊಂಡಿದೆ. ಈ ಭರವಸೆಗಳಲ್ಲಿ ಶೇ. 80ರಷ್ಟು ವಾಸ್ತವವಾಗುತ್ತದೆ ಎಂದೂ ಇದರಿಂದಾಗಿ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅದನ್ನೇ ಕಿಂಚಿತ್ತೂ ಪರಿಶೀಲಿಸದೆ ಮಾಧ್ಯಮಗಳು ಪ್ರಕಟಿಸುತ್ತಿವೆ. ಆದರೆ ಅಂಕಿ ಸಂಖ್ಯೆಗಳನ್ನು ಮತ್ತು ಭಾರತ ಹಾಗೂ ಜಗತ್ತಿನಲ್ಲಿರುವ ಹೂಡಿಕೆಯ ವಾತಾವರಣವನ್ನು ಗಮನಿಸಿದರೆ ಅವೆಲ್ಲಾ ಎಷ್ಟು ಸುಳ್ಳು ಎಂಬುದು ಗೊತ್ತಾಗುತ್ತದೆ.

ಸುಳ್ಳು- 1

ಹೇಳಿಕೆ – GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ 10 ಲಕ್ಷ ಕೋಟಿ ರೂ.

ವಾಸ್ತವ- GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ ಕೇವಲ 1.5 ಲಕ್ಷ ಕೋಟಿ ರೂ.

ಮಂತ್ರಿ ಮುರುಗೇಶ್ ನಿರಾಣಿಯವರೇ ನೀಡಿರುವ ಹೇಳಿಕೆಯ ಪ್ರಕಾರ 10 ಲಕ್ಷ ಕೋಟಿ ಭರವಸೆ ಬಂದಿರುವುದು GIM -ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ ಅಲ್ಲ.

ಬದಲಿಗೆ GIMಗೆ ಮುಂಚೆ ಈ ವರ್ಷದ ಜನವರಿಯಿಂದ GIMವರೆಗೆ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ನೀಡಿರುವ ಭರವಸೆ 8,24,784 ಕೋಟಿ ರೂ.ಗಳು. GIM ಸಮ್ಮೇಳನದಲ್ಲಿ ನೀಡಲಾದ ಭರವಸೆ ಕೇವಲ 1,57,000 ಕೋಟಿ ರೂ.ಹಾಗೂ GIMನಲ್ಲಿ ಹೊಸದಾಗಿ ಎರಡೇ ಎರಡು ಹೊಸ ಭರವಸೆಗಳನ್ನು ಮಾತ್ರ ನೀಡಲಾಗಿದೆ.

ಹಳೆಯ ಹಾಗೂ ಹೊಸ ಭರವಸೆಗಳೆನ್ನೆಲ್ಲಾ ಒಟ್ಟು ಸೇರಿಸಿ ಬಿಜೆಪಿ ಸರ್ಕಾರ GIMನಿಂದ 9.81 ಲಕ್ಷ ಕೋಟಿ ರೂ. ಬಂಡವಾಳದ ಭರವಸೆ ಹರಿದು ಬಂದಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದೆ. ಮಾಧ್ಯಮಗಳು ಕಣ್ಣು ಮುಚ್ಚಿಕೊಂಡು ಅದನ್ನೇ ಪ್ರಕಟಿಸುತ್ತಿವೆ.

ಸರ್ಕಾರದ ಅಂಕಿಅಂಶಗಳ ವಿವರಗಳಿಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಕೋಷ್ಟಕವನ್ನು ನೋಡಿ: (ಲಿಂಕ್‌ ‘ಕ್ಲಿಕ್’ ಮಾಡಿ)

ಆದರೆ ಬಿಜೆಪಿ ಸರ್ಕಾರ GIM ನಿಂದಲೇ 5 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ ನಿರೀಕ್ಷಿಸಿತ್ತು. ಅಂದರೆ ಅವರ ನಿರೀಕ್ಷೆಯ ಶೇ. 25 ರಷ್ಟು ಭರವಸೆಗಳು ಕೂಡ GIMನಿಂದ ಬಂದಿಲ್ಲ. ಹಾಗಿದ್ದಲ್ಲಿ ಇದೊಂದು ಯಶಸ್ವಿ ಸಮ್ಮೇಳನ ಎಂದು ಬಿಜೆಪಿ ಹೇಳುವುದು, ಅದನ್ನೇ ಮಾಧ್ಯಮಗಳು ಬರೆಯುವುದು ಎಷ್ಟು ಹಾಸ್ಯಾಸ್ಪದವಾಗಿದೆಯಲ್ಲವೇ?

ಸುಳ್ಳು-2

ಹೇಳಿಕೆ- GIMನಲ್ಲಿ ಹೂಡಿಕೆದಾರರು ನೀಡುವ ಭರವಸೆಗಳಲ್ಲಿ ಈ ಬಾರಿ ಶೇ. 80 conversion ಆಗಿ ವಾಸ್ತವಕ್ಕೆ ಬರಲಿದೆ.

ವಾಸ್ತವ: ಈ ಬಾರಿಯ GIMನಲ್ಲಿ ನೀಡಲಾದ ಭರವಸೆಗಳಲ್ಲಿ ಶೇ. 10 ರಷ್ಟು conversion ಆದರೆ ಹೆಚ್ಚು.

ಉದಾಹರಣೆಗೆ ಸರ್ಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ:

– 2010ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ 3.94 ಲಕ್ಷ ಕೋಟಿಗೆ MoU ಆಯಿತೆಂದು ಬಿಜೆಪಿ ಕೊಚ್ಚಿಕೊಂಡರೂ ವಾಸ್ತವಕ್ಕೆ ಬಂದದ್ದು ಶೇ. 14 ಕ್ಕಿಂತ ಕಡಿಮೆ. ಅವೂ ಜಿಮ್‌ ಇಂದ ಬಂದವಲ್ಲ.

-2012ರಲ್ಲಿ ನಡೆದ GIMನಲ್ಲಿ 6.77 ಲಕ್ಷ ಕೋಟಿ MoUಗಳಾದರೂ ವಾಸ್ತವಕ್ಕೆ ಬಂದದ್ದು ಶೇ. 8ಕ್ಕಿಂತ ಕಡಿಮೆ

– 2016 ರಲ್ಲಿ 3.05 ಲಕ್ಷ ಕೋಟಿಗೆ MoU ಆದರೂ ವಾಸ್ತವಕ್ಕೆ ಬಂದದ್ದು ಶೇ. 15 ಕ್ಕಿಂತ ಕಡಿಮೆ.

GIMಗಳಲ್ಲಿ ಹೂಡಿಕೆದಾರರು ಘೋಷಣೆ ಮಾಡಿದ ಮೇಲೆ ಅದರ ಬಗ್ಗೆ ಸರ್ಕಾರ ಅವರ ಜೊತೆ MoU ಮಾಡಿಕೊಳ್ಳುವುದು ಮೊದಲನೇ ಹಂತ. ಅವುಗಳಿಗೆ ಸರ್ಕಾರದ ಉನ್ನತ ಸಮಿತಿಯು ಕಾನೂನಾತ್ಮಕ ಅನುಮೋದನೆ ಪಡೆಯುವುದು (Approval) ಎರಡನೇ ಹಂತ. ಇವೆರಡು ಹಂತ ದಾಟಲು 5-6 ತಿಂಗಳುಗಳು ಬೇಕು. ಆದರೂ ಇವೆರೆಡೂ ಸರ್ಕಾರಕ್ಕೆ, ಸುಳ್ಳು ಹೇಳುವವರಿಗೆ ಸುಲಭದ ಹಂತಗಳೇ. ಮೂರನೇ ಹಂತ ಜಮೀನು, ಸೈಟು, ರಿಯಾಯತಿ ಒಪ್ಪಂದ. ಅದಾದ ನಂತರ ನಾಲ್ಕನೇ ಹಂತ. ಅಲ್ಲಿ ಹಂತ ಹಂತದ ಹೂಡಿಕೆ, ನಿರ್ಮಾಣ ಮತ್ತು ಉತ್ಪಾದನೆ. ಈ ಕೊನೆ ಎರಡು ಹಂತಗಳ ತನಕ ಶೇ. 80 ರಷ್ಟು MoUಗಳು ಬರುವುದೇ ಇಲ್ಲ. ಏಕೆಂದರೆ, GIMನಲ್ಲಿ ಹೂಡಿಕೆ ಭರವಸೆ ನೀಡುವ ಬಂಡವಾಳಿಗರು ಹೂಡಿಕೆ ಮಾಡುವುದು ಅವರ ಲಾಭ ಖಾತರಿಯಾಗಿದ್ದರೆ ಮತ್ತು ಲಾಭದ ದರ ಹೆಚ್ಚಿದ್ದರೆ ಮಾತ್ರ. ಜಗತ್ತಿನ ಇತರೆಡೆಗಳಲ್ಲಿ ಇದಕ್ಕಿಂತ ಹೆಚ್ಚು ಲಾಭದ ಮತ್ತು ಕಾನೂನಿನ ತೊಡಕುಗಳು ಇಲ್ಲವಾದರೆ ಇಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿದ್ದರೂ ಬೇರೆಡೆಗೆ ಹಾರುತ್ತವೆ.

ಅದಲ್ಲದೆ, ಇದೀಗ ಕೋವಿಡ್ ನಂತರದಲ್ಲಿ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ (Recession) ವಾತಾವರಣವಿದೆ. ದೇಶಿಯ ಮಾರುಕಟ್ಟೆಯಲ್ಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆಯ ಕುಸಿತವಿದೆ. ಏಕೆಂದರೆ ಜನರಲ್ಲಿ ಕೊಳ್ಳುವ ಶಕ್ತಿಯಿಲ್ಲ.

IMF ನೀಡಿರುವ ಮುನ್ಸೂಚನೆಯ ಪ್ರಕಾರ ಇನ್ನು ಎರಡು ಮೂರು ವರ್ಷಗಳು ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳಲ್ಲೂ ಬೇಡಿಕೆಯ ಕುಸಿತ ಮತ್ತು ಅದರಿಂದಾಗಿ ಆರ್ಥಿಕ ಅನಾರೋಗ್ಯವಿರುತ್ತದೆ. ಅರ್ಥಾತ್ ಹೂಡಿಕೆಯ ಮೇಲೆ ಲಾಭವು ಖಾತರಿಯಲ್ಲ.

ಹೀಗಾಗಿ ಕೇವಲ ಲಾಭದ ದುರಾಸೆ ಮಾತ್ರ ಇರುವ ಈ ಹೂಡಿಕೆದಾರರು ಎಲ್ಲಿಯೂ ಉತ್ಸಾಹದಿಂದ ಹೂಡಿಕೆ ಮಾಡುತ್ತಿಲ್ಲ. ಭಾರತದಲ್ಲಂತೂ ಮೊನ್ನೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸರ್ಕಾರವು ಎಷ್ಟೆಲ್ಲಾ ಉತ್ತೇಜನ ನೀಡಿದರೂ (PLI- Production Linked Incentives)ನಮ್ಮ ದೇಶದ ಬಂಡವಾಳಿಗರು ಹೂಡಿಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ನಿರುತ್ಸಾಹದ ಛಾಯೆ ಈ ಬಾರಿಯ GIM ಮೇಲೂ ಬಿದ್ದಿರುವುದು ಸ್ಪಷ್ಟ. ಏಕೆಂದರೆ ಕನಿಷ್ಠ ಪಕ್ಷ ಕಳೆದ GIMಗಳಲ್ಲಿ 3 ಲಕ್ಷ ಕೋಟಿ, 7 ಲಕ್ಷ ಕೋಟಿ ಮತ್ತು 4 ಲಕ್ಷ ಕೋಟಿ ರೂ.ಗಳಷ್ಟು ಭರವಸೆಯಾದರೂ ಬಂದಿದ್ದವು.

ಆದರೆ ಈ ಬಾರಿ ಭರವಸೆ ಬಂದಿರುವುದೇ ಅವುಗಳ ಕಾಲು ಭಾಗ- ಕೇವಲ 1.5 ಲಕ್ಷ ಕೋಟಿ ಮಾತ್ರ. ಇದು ಇಂದು ಜಗತ್ತಿನಲ್ಲಿರುವ Investors Confidence – ಹೂಡಿಕೆದಾರರ ವಿಶ್ವಾಸಕ್ಕೆ ಒಂದು ಸಂಕೇತವಾಗಿದ್ದಲ್ಲಿ, ಈ ಬಾರಿಯ GIMನ conversion ದರ ಕೂಡ ಹಿಂದಿನ GIMಗಳ ಕಾಲು ಭಾಗ ಅರ್ಥಾತ್ ಶೇ. 5 ಕ್ಕಿಂತ ಜಾಸ್ತಿ ಆಗಲಾರದು. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ! 1. 5 ಲಕ್ಷ ಕೋಟಿ ರೂ.ಗಳಲ್ಲ.

ಸುಳ್ಳು-3

ಹೇಳಿಕೆ – GIM ನಿಂದಾಗಿ 6 ಲಕ್ಷ ಉದ್ಯೋಗಳು ಸೃಷ್ಟಿಯಾಗುತ್ತದೆ.

ವಾಸ್ತವ: 6 ಲಕ್ಷವಿರಲಿ 6 ಸಾವಿರ ಉದ್ಯೋಗವೂ ಸೃಷ್ಟಿಯಾಗದು.

ಸರ್ಕಾರದ ಪ್ರಕಾರ, “GIM ನಿಂದಾಗಿ 5 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಈಗ 9.82 ಲಕ್ಷ ಕೋಟಿಯಾಗಿದೆ. ಆದ್ದರಿಂದ ಮೊದಲು ಅಂದುಕೊಂಡಂತೆ GIMನಿಂದ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.”

ಆದರೆ ಈಗಾಗಲೇ ನೋಡಿದಂತೆ GIMನಲ್ಲಿ ಹೂಡಿಕೆಯ ಭರವಸೆ ಬಂದಿರುವುದು 9.82 ಲಕ್ಷ ಕೋಟಿಯಲ್ಲ. ಕೇವಲ 1. 5 ಲಕ್ಷ ಕೋಟಿ. ಹಾಗೂ ಆರ್ಥಿಕ ಹಿಂದ್ಸರಿತದಿಂದಾಗಿ ಅದರ Conversion ಶೇ. 5-10ನ್ನು ಮೀರುವುದು ಕಷ್ಟ. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ಹೂಡಿಕೆ.

ಹೀಗಾಗಿ ಸರಳ ಗಣಿತದ ಪ್ರಕಾರವೂ ಉದ್ಯೋಗ ಸೃಷ್ಟಿಯಾಗುವುದು ಕೆಲವು ಸಾವಿರಗಳನ್ನು ಮೀರುವುದಿಲ್ಲ. ಆದರೆ ಈ ಹೂಡಿಕೆಗಳು ಕೂಡ ಕಾರ್ಮಿಕರನ್ನು ಹೆಚ್ಚಾಗಿ ಕೇಳದ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತದೆ. ಸರ್ಕಾರವು ಈ ಉದ್ದೇಶಕ್ಕೆ 50,000 ಎಕರೆ ರೈತರ ಜಮೀನನ್ನು ಕಸಿಯುವುದಾಗಿ ಹೇಳಿದೆ. ಇವತ್ತು ಒಂದು ಎಕರೆ ಜಮೀನಿನ ಮೇಲೆ ಆರೆಂಟು ಜನರ ಜೀವನೋಪಾಯ ನಡೆಯುತ್ತದೆ ಎಂದು ಲೆಕ್ಕ ಹಿಡಿದರೂ…

ಇದನ್ನೂ ಓದಿರಿ: 7 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: BJP 4, RJD, TRS, ಶಿವಸೇನೆ ತಲಾ ಒಂದು ಕ್ಷೇತ್ರಗಳಲ್ಲಿ ಮುನ್ನಡೆ

ಈ ಹೂಡಿಕೆಗಳು 2 ಲಕ್ಷಕ್ಕೂ ಹೆಚ್ಚು ರೈತಾಪಿಯ ಉದ್ಯೋಗ -ಜೀವನ ಕಸಿದು, ಕೆಲವು ಸಾವಿರ ಮೇಲ್ವರ್ಗದ ಸುಶಿಕ್ಷಿತ ತಂತ್ರಜ್ಞರಿಗೆ ಉದ್ಯೋಗ ಸೃಷ್ಟಿಸಬಹುದು. ಹೀಗಾಗಿ ಒಟ್ಟು ಲೆಕ್ಕದಲ್ಲಿ GIMಇಂದ ಉದ್ಯೋಗ ಸೃಷ್ಟಿಯಾಗುವುದಕ್ಕಿಂತ ನಷ್ಟವಾಗುವುದೇ ಹೆಚ್ಚು.

ಒಟ್ಟಾರೆಯಾಗಿ GIM ಎಂಬುದು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಚುನಾವಣೆಗೆ ಮುನ್ನ ಬಿಜೆಪಿಯು ಜನರಲ್ಲಿ ಪ್ರಗತಿ-ಅಭಿವೃದ್ಧಿಯ ಭ್ರಾಂತಿ ಮೂಡಿಸುತ್ತದೆ. ಆದ್ದರಿಂದ ಈ GIM ಎಂಬುದು ತನ್ನ ಭ್ರಷ್ಟಾಚಾರ ಹಾಗೂ ತಾನು ಮೂಡಿಸಿರುವ ಸಾಮಾಜಿಕ ಅಸ್ಥಿರತೆ, ಆರ್ಥಿಕ ದುಸ್ಥಿತಿ, ನಿರುದ್ಯೋಗ ಇತ್ಯಾದಿಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರವು ನಡೆಸಿದ ಒಂದು ಚುನಾವಣಾ GIMMICK ಹೊರತು ಮತ್ತೇನು ಅಲ್ಲ ಎಂಬುದು ಸ್ಪಷ್ಟ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....