Homeಮುಖಪುಟಜಾಗತಿಕ ಹೂಡಿಕೆದಾರರ ಸಮಾವೇಶ: ರಾಜ್ಯ ಸರ್ಕಾರದ ಹಸಿಹಸಿ ಸುಳ್ಳುಗಳು ಮತ್ತು ವಾಸ್ತವಗಳು- ಶಿವಸುಂದರ್‌ ವಿಶ್ಲೇಷಣೆ

ಜಾಗತಿಕ ಹೂಡಿಕೆದಾರರ ಸಮಾವೇಶ: ರಾಜ್ಯ ಸರ್ಕಾರದ ಹಸಿಹಸಿ ಸುಳ್ಳುಗಳು ಮತ್ತು ವಾಸ್ತವಗಳು- ಶಿವಸುಂದರ್‌ ವಿಶ್ಲೇಷಣೆ

ಕರ್ನಾಟಕ ಪಡೆದ ಹೂಡಿಕೆ ಭರವಸೆ 10 ಲಕ್ಷ ಕೋಟಿ ರೂ.ಗಳೋ? ಕೇವಲ 1.5 ಲಕ್ಷ ಕೋಟಿ ರೂ.ಗಳೋ?

- Advertisement -
- Advertisement -
  1. GIM- ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ- ಕರ್ನಾಟಕ ಪಡೆದ ಹೂಡಿಕೆ ಭರವಸೆ 10 ಲಕ್ಷ ಕೋಟಿ ರೂ.ಗಳೋ? ಅಥವಾ ಕೇವಲ 1.5 ಲಕ್ಷ ಕೋಟಿ ರೂ.ಗಳೋ?
  2. GIMನಿಂದ ಸೃಷ್ಟಿಯಾಗುವ ಉದ್ಯೋಗಗಳು 6 ಲಕ್ಷವೋ? ಅಥವಾ ಕೆಲವೇ ಕೆಲ ಸಾವಿರವೋ? GIM ಭರವಸೆಗಳು ವಾಸ್ತವವಾಗಿ ಬದಲಾಗುವುದು ಶೇ. 80 ರಷ್ಟೋ ಅಥವಾ ಶೇ. 10ರಷ್ಟೊ?

ನಿನ್ನೆ ತಾನೇ ಮುಕ್ತಾಯವಾದ GIM (ಜಾಗತಿಕ ಹೂಡಿಕೆದಾರರ ಸಮ್ಮೇಳನ)ದಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಭರವಸೆಯನ್ನು ನೀಡಿದ್ದಾರೆ ಎಂದು ಘೋಷಿಸಿಕೊಂಡಿದೆ. ಈ ಭರವಸೆಗಳಲ್ಲಿ ಶೇ. 80ರಷ್ಟು ವಾಸ್ತವವಾಗುತ್ತದೆ ಎಂದೂ ಇದರಿಂದಾಗಿ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅದನ್ನೇ ಕಿಂಚಿತ್ತೂ ಪರಿಶೀಲಿಸದೆ ಮಾಧ್ಯಮಗಳು ಪ್ರಕಟಿಸುತ್ತಿವೆ. ಆದರೆ ಅಂಕಿ ಸಂಖ್ಯೆಗಳನ್ನು ಮತ್ತು ಭಾರತ ಹಾಗೂ ಜಗತ್ತಿನಲ್ಲಿರುವ ಹೂಡಿಕೆಯ ವಾತಾವರಣವನ್ನು ಗಮನಿಸಿದರೆ ಅವೆಲ್ಲಾ ಎಷ್ಟು ಸುಳ್ಳು ಎಂಬುದು ಗೊತ್ತಾಗುತ್ತದೆ.

ಸುಳ್ಳು- 1

ಹೇಳಿಕೆ – GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ 10 ಲಕ್ಷ ಕೋಟಿ ರೂ.

ವಾಸ್ತವ- GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ ಕೇವಲ 1.5 ಲಕ್ಷ ಕೋಟಿ ರೂ.

ಮಂತ್ರಿ ಮುರುಗೇಶ್ ನಿರಾಣಿಯವರೇ ನೀಡಿರುವ ಹೇಳಿಕೆಯ ಪ್ರಕಾರ 10 ಲಕ್ಷ ಕೋಟಿ ಭರವಸೆ ಬಂದಿರುವುದು GIM -ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ ಅಲ್ಲ.

ಬದಲಿಗೆ GIMಗೆ ಮುಂಚೆ ಈ ವರ್ಷದ ಜನವರಿಯಿಂದ GIMವರೆಗೆ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ನೀಡಿರುವ ಭರವಸೆ 8,24,784 ಕೋಟಿ ರೂ.ಗಳು. GIM ಸಮ್ಮೇಳನದಲ್ಲಿ ನೀಡಲಾದ ಭರವಸೆ ಕೇವಲ 1,57,000 ಕೋಟಿ ರೂ.ಹಾಗೂ GIMನಲ್ಲಿ ಹೊಸದಾಗಿ ಎರಡೇ ಎರಡು ಹೊಸ ಭರವಸೆಗಳನ್ನು ಮಾತ್ರ ನೀಡಲಾಗಿದೆ.

ಹಳೆಯ ಹಾಗೂ ಹೊಸ ಭರವಸೆಗಳೆನ್ನೆಲ್ಲಾ ಒಟ್ಟು ಸೇರಿಸಿ ಬಿಜೆಪಿ ಸರ್ಕಾರ GIMನಿಂದ 9.81 ಲಕ್ಷ ಕೋಟಿ ರೂ. ಬಂಡವಾಳದ ಭರವಸೆ ಹರಿದು ಬಂದಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದೆ. ಮಾಧ್ಯಮಗಳು ಕಣ್ಣು ಮುಚ್ಚಿಕೊಂಡು ಅದನ್ನೇ ಪ್ರಕಟಿಸುತ್ತಿವೆ.

ಸರ್ಕಾರದ ಅಂಕಿಅಂಶಗಳ ವಿವರಗಳಿಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಕೋಷ್ಟಕವನ್ನು ನೋಡಿ: (ಲಿಂಕ್‌ ‘ಕ್ಲಿಕ್’ ಮಾಡಿ)

ಆದರೆ ಬಿಜೆಪಿ ಸರ್ಕಾರ GIM ನಿಂದಲೇ 5 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ ನಿರೀಕ್ಷಿಸಿತ್ತು. ಅಂದರೆ ಅವರ ನಿರೀಕ್ಷೆಯ ಶೇ. 25 ರಷ್ಟು ಭರವಸೆಗಳು ಕೂಡ GIMನಿಂದ ಬಂದಿಲ್ಲ. ಹಾಗಿದ್ದಲ್ಲಿ ಇದೊಂದು ಯಶಸ್ವಿ ಸಮ್ಮೇಳನ ಎಂದು ಬಿಜೆಪಿ ಹೇಳುವುದು, ಅದನ್ನೇ ಮಾಧ್ಯಮಗಳು ಬರೆಯುವುದು ಎಷ್ಟು ಹಾಸ್ಯಾಸ್ಪದವಾಗಿದೆಯಲ್ಲವೇ?

ಸುಳ್ಳು-2

ಹೇಳಿಕೆ- GIMನಲ್ಲಿ ಹೂಡಿಕೆದಾರರು ನೀಡುವ ಭರವಸೆಗಳಲ್ಲಿ ಈ ಬಾರಿ ಶೇ. 80 conversion ಆಗಿ ವಾಸ್ತವಕ್ಕೆ ಬರಲಿದೆ.

ವಾಸ್ತವ: ಈ ಬಾರಿಯ GIMನಲ್ಲಿ ನೀಡಲಾದ ಭರವಸೆಗಳಲ್ಲಿ ಶೇ. 10 ರಷ್ಟು conversion ಆದರೆ ಹೆಚ್ಚು.

ಉದಾಹರಣೆಗೆ ಸರ್ಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ:

– 2010ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ 3.94 ಲಕ್ಷ ಕೋಟಿಗೆ MoU ಆಯಿತೆಂದು ಬಿಜೆಪಿ ಕೊಚ್ಚಿಕೊಂಡರೂ ವಾಸ್ತವಕ್ಕೆ ಬಂದದ್ದು ಶೇ. 14 ಕ್ಕಿಂತ ಕಡಿಮೆ. ಅವೂ ಜಿಮ್‌ ಇಂದ ಬಂದವಲ್ಲ.

-2012ರಲ್ಲಿ ನಡೆದ GIMನಲ್ಲಿ 6.77 ಲಕ್ಷ ಕೋಟಿ MoUಗಳಾದರೂ ವಾಸ್ತವಕ್ಕೆ ಬಂದದ್ದು ಶೇ. 8ಕ್ಕಿಂತ ಕಡಿಮೆ

– 2016 ರಲ್ಲಿ 3.05 ಲಕ್ಷ ಕೋಟಿಗೆ MoU ಆದರೂ ವಾಸ್ತವಕ್ಕೆ ಬಂದದ್ದು ಶೇ. 15 ಕ್ಕಿಂತ ಕಡಿಮೆ.

GIMಗಳಲ್ಲಿ ಹೂಡಿಕೆದಾರರು ಘೋಷಣೆ ಮಾಡಿದ ಮೇಲೆ ಅದರ ಬಗ್ಗೆ ಸರ್ಕಾರ ಅವರ ಜೊತೆ MoU ಮಾಡಿಕೊಳ್ಳುವುದು ಮೊದಲನೇ ಹಂತ. ಅವುಗಳಿಗೆ ಸರ್ಕಾರದ ಉನ್ನತ ಸಮಿತಿಯು ಕಾನೂನಾತ್ಮಕ ಅನುಮೋದನೆ ಪಡೆಯುವುದು (Approval) ಎರಡನೇ ಹಂತ. ಇವೆರಡು ಹಂತ ದಾಟಲು 5-6 ತಿಂಗಳುಗಳು ಬೇಕು. ಆದರೂ ಇವೆರೆಡೂ ಸರ್ಕಾರಕ್ಕೆ, ಸುಳ್ಳು ಹೇಳುವವರಿಗೆ ಸುಲಭದ ಹಂತಗಳೇ. ಮೂರನೇ ಹಂತ ಜಮೀನು, ಸೈಟು, ರಿಯಾಯತಿ ಒಪ್ಪಂದ. ಅದಾದ ನಂತರ ನಾಲ್ಕನೇ ಹಂತ. ಅಲ್ಲಿ ಹಂತ ಹಂತದ ಹೂಡಿಕೆ, ನಿರ್ಮಾಣ ಮತ್ತು ಉತ್ಪಾದನೆ. ಈ ಕೊನೆ ಎರಡು ಹಂತಗಳ ತನಕ ಶೇ. 80 ರಷ್ಟು MoUಗಳು ಬರುವುದೇ ಇಲ್ಲ. ಏಕೆಂದರೆ, GIMನಲ್ಲಿ ಹೂಡಿಕೆ ಭರವಸೆ ನೀಡುವ ಬಂಡವಾಳಿಗರು ಹೂಡಿಕೆ ಮಾಡುವುದು ಅವರ ಲಾಭ ಖಾತರಿಯಾಗಿದ್ದರೆ ಮತ್ತು ಲಾಭದ ದರ ಹೆಚ್ಚಿದ್ದರೆ ಮಾತ್ರ. ಜಗತ್ತಿನ ಇತರೆಡೆಗಳಲ್ಲಿ ಇದಕ್ಕಿಂತ ಹೆಚ್ಚು ಲಾಭದ ಮತ್ತು ಕಾನೂನಿನ ತೊಡಕುಗಳು ಇಲ್ಲವಾದರೆ ಇಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿದ್ದರೂ ಬೇರೆಡೆಗೆ ಹಾರುತ್ತವೆ.

ಅದಲ್ಲದೆ, ಇದೀಗ ಕೋವಿಡ್ ನಂತರದಲ್ಲಿ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ (Recession) ವಾತಾವರಣವಿದೆ. ದೇಶಿಯ ಮಾರುಕಟ್ಟೆಯಲ್ಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆಯ ಕುಸಿತವಿದೆ. ಏಕೆಂದರೆ ಜನರಲ್ಲಿ ಕೊಳ್ಳುವ ಶಕ್ತಿಯಿಲ್ಲ.

IMF ನೀಡಿರುವ ಮುನ್ಸೂಚನೆಯ ಪ್ರಕಾರ ಇನ್ನು ಎರಡು ಮೂರು ವರ್ಷಗಳು ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳಲ್ಲೂ ಬೇಡಿಕೆಯ ಕುಸಿತ ಮತ್ತು ಅದರಿಂದಾಗಿ ಆರ್ಥಿಕ ಅನಾರೋಗ್ಯವಿರುತ್ತದೆ. ಅರ್ಥಾತ್ ಹೂಡಿಕೆಯ ಮೇಲೆ ಲಾಭವು ಖಾತರಿಯಲ್ಲ.

ಹೀಗಾಗಿ ಕೇವಲ ಲಾಭದ ದುರಾಸೆ ಮಾತ್ರ ಇರುವ ಈ ಹೂಡಿಕೆದಾರರು ಎಲ್ಲಿಯೂ ಉತ್ಸಾಹದಿಂದ ಹೂಡಿಕೆ ಮಾಡುತ್ತಿಲ್ಲ. ಭಾರತದಲ್ಲಂತೂ ಮೊನ್ನೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸರ್ಕಾರವು ಎಷ್ಟೆಲ್ಲಾ ಉತ್ತೇಜನ ನೀಡಿದರೂ (PLI- Production Linked Incentives)ನಮ್ಮ ದೇಶದ ಬಂಡವಾಳಿಗರು ಹೂಡಿಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ನಿರುತ್ಸಾಹದ ಛಾಯೆ ಈ ಬಾರಿಯ GIM ಮೇಲೂ ಬಿದ್ದಿರುವುದು ಸ್ಪಷ್ಟ. ಏಕೆಂದರೆ ಕನಿಷ್ಠ ಪಕ್ಷ ಕಳೆದ GIMಗಳಲ್ಲಿ 3 ಲಕ್ಷ ಕೋಟಿ, 7 ಲಕ್ಷ ಕೋಟಿ ಮತ್ತು 4 ಲಕ್ಷ ಕೋಟಿ ರೂ.ಗಳಷ್ಟು ಭರವಸೆಯಾದರೂ ಬಂದಿದ್ದವು.

ಆದರೆ ಈ ಬಾರಿ ಭರವಸೆ ಬಂದಿರುವುದೇ ಅವುಗಳ ಕಾಲು ಭಾಗ- ಕೇವಲ 1.5 ಲಕ್ಷ ಕೋಟಿ ಮಾತ್ರ. ಇದು ಇಂದು ಜಗತ್ತಿನಲ್ಲಿರುವ Investors Confidence – ಹೂಡಿಕೆದಾರರ ವಿಶ್ವಾಸಕ್ಕೆ ಒಂದು ಸಂಕೇತವಾಗಿದ್ದಲ್ಲಿ, ಈ ಬಾರಿಯ GIMನ conversion ದರ ಕೂಡ ಹಿಂದಿನ GIMಗಳ ಕಾಲು ಭಾಗ ಅರ್ಥಾತ್ ಶೇ. 5 ಕ್ಕಿಂತ ಜಾಸ್ತಿ ಆಗಲಾರದು. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ! 1. 5 ಲಕ್ಷ ಕೋಟಿ ರೂ.ಗಳಲ್ಲ.

ಸುಳ್ಳು-3

ಹೇಳಿಕೆ – GIM ನಿಂದಾಗಿ 6 ಲಕ್ಷ ಉದ್ಯೋಗಳು ಸೃಷ್ಟಿಯಾಗುತ್ತದೆ.

ವಾಸ್ತವ: 6 ಲಕ್ಷವಿರಲಿ 6 ಸಾವಿರ ಉದ್ಯೋಗವೂ ಸೃಷ್ಟಿಯಾಗದು.

ಸರ್ಕಾರದ ಪ್ರಕಾರ, “GIM ನಿಂದಾಗಿ 5 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಈಗ 9.82 ಲಕ್ಷ ಕೋಟಿಯಾಗಿದೆ. ಆದ್ದರಿಂದ ಮೊದಲು ಅಂದುಕೊಂಡಂತೆ GIMನಿಂದ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.”

ಆದರೆ ಈಗಾಗಲೇ ನೋಡಿದಂತೆ GIMನಲ್ಲಿ ಹೂಡಿಕೆಯ ಭರವಸೆ ಬಂದಿರುವುದು 9.82 ಲಕ್ಷ ಕೋಟಿಯಲ್ಲ. ಕೇವಲ 1. 5 ಲಕ್ಷ ಕೋಟಿ. ಹಾಗೂ ಆರ್ಥಿಕ ಹಿಂದ್ಸರಿತದಿಂದಾಗಿ ಅದರ Conversion ಶೇ. 5-10ನ್ನು ಮೀರುವುದು ಕಷ್ಟ. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ಹೂಡಿಕೆ.

ಹೀಗಾಗಿ ಸರಳ ಗಣಿತದ ಪ್ರಕಾರವೂ ಉದ್ಯೋಗ ಸೃಷ್ಟಿಯಾಗುವುದು ಕೆಲವು ಸಾವಿರಗಳನ್ನು ಮೀರುವುದಿಲ್ಲ. ಆದರೆ ಈ ಹೂಡಿಕೆಗಳು ಕೂಡ ಕಾರ್ಮಿಕರನ್ನು ಹೆಚ್ಚಾಗಿ ಕೇಳದ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತದೆ. ಸರ್ಕಾರವು ಈ ಉದ್ದೇಶಕ್ಕೆ 50,000 ಎಕರೆ ರೈತರ ಜಮೀನನ್ನು ಕಸಿಯುವುದಾಗಿ ಹೇಳಿದೆ. ಇವತ್ತು ಒಂದು ಎಕರೆ ಜಮೀನಿನ ಮೇಲೆ ಆರೆಂಟು ಜನರ ಜೀವನೋಪಾಯ ನಡೆಯುತ್ತದೆ ಎಂದು ಲೆಕ್ಕ ಹಿಡಿದರೂ…

ಇದನ್ನೂ ಓದಿರಿ: 7 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: BJP 4, RJD, TRS, ಶಿವಸೇನೆ ತಲಾ ಒಂದು ಕ್ಷೇತ್ರಗಳಲ್ಲಿ ಮುನ್ನಡೆ

ಈ ಹೂಡಿಕೆಗಳು 2 ಲಕ್ಷಕ್ಕೂ ಹೆಚ್ಚು ರೈತಾಪಿಯ ಉದ್ಯೋಗ -ಜೀವನ ಕಸಿದು, ಕೆಲವು ಸಾವಿರ ಮೇಲ್ವರ್ಗದ ಸುಶಿಕ್ಷಿತ ತಂತ್ರಜ್ಞರಿಗೆ ಉದ್ಯೋಗ ಸೃಷ್ಟಿಸಬಹುದು. ಹೀಗಾಗಿ ಒಟ್ಟು ಲೆಕ್ಕದಲ್ಲಿ GIMಇಂದ ಉದ್ಯೋಗ ಸೃಷ್ಟಿಯಾಗುವುದಕ್ಕಿಂತ ನಷ್ಟವಾಗುವುದೇ ಹೆಚ್ಚು.

ಒಟ್ಟಾರೆಯಾಗಿ GIM ಎಂಬುದು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಚುನಾವಣೆಗೆ ಮುನ್ನ ಬಿಜೆಪಿಯು ಜನರಲ್ಲಿ ಪ್ರಗತಿ-ಅಭಿವೃದ್ಧಿಯ ಭ್ರಾಂತಿ ಮೂಡಿಸುತ್ತದೆ. ಆದ್ದರಿಂದ ಈ GIM ಎಂಬುದು ತನ್ನ ಭ್ರಷ್ಟಾಚಾರ ಹಾಗೂ ತಾನು ಮೂಡಿಸಿರುವ ಸಾಮಾಜಿಕ ಅಸ್ಥಿರತೆ, ಆರ್ಥಿಕ ದುಸ್ಥಿತಿ, ನಿರುದ್ಯೋಗ ಇತ್ಯಾದಿಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರವು ನಡೆಸಿದ ಒಂದು ಚುನಾವಣಾ GIMMICK ಹೊರತು ಮತ್ತೇನು ಅಲ್ಲ ಎಂಬುದು ಸ್ಪಷ್ಟ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...