Homeಕರ್ನಾಟಕಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ

ಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ

ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು.

- Advertisement -
- Advertisement -

ಆಕಾಶದಲ್ಲಿ ಮೋಡಗಳು ಸ್ವಚ್ಛಂದವಾಗಿ ತೇಲಾಡುವಾಗ ಅದರ ಮೇಲೊಮ್ಮೆ ಕೂರಬೇಕೆಂದು ಯಾರಿಗೆ ತಾನೇ ಅನಿಸುವುದಿಲ್ಲ. ಅಂತ ಬಯಕೆ ನಿಮಗೇನಾದರೂ ಬಂದಿದ್ದಲ್ಲಿ ಅದನ್ನು ನನಸಾಗಿಸುವ ಅವಕಾಶ ಈ ತಿಂಗಳಲ್ಲಿ ಲಭ್ಯವಿದೆ. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ.. ಬೆಂಗಳೂರಿನಿಂದ ಹೊರಡುವುದಿದ್ದರೆ ಅರ್ಧದಿನ ಸಮಯ ಹೊಂದಿಸಿಕೊಳ್ಳುವುದು.

ಈ ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆಯೇ ಬೈಕ್ ಅಥವಾ ಕಾರ್ ಹತ್ತಿ ಹೊರಟರೆ ನಂದಿಬೆಟ್ಟಕ್ಕೆ ಕೇವಲ ಒಂದೂವರೆ ಗಂಟೆಗಳ (63 ಕಿ.ಮೀ) ಪ್ರಯಾಣ. ನಾನು ಸೆಪ್ಟಂಬರ್ 8 ರಂದು ನನ್ನ ಬೈಕ್ ಹತ್ತಿ ಹೊರಟೆ. ಯಲಹಂಕ ಮೇಲಿಂದ ಪ್ರಯಾಣ ಬೆಳೆಸಿ ದೇವನಹಳ್ಳಿ ದಾಟಿದೊಡನೆ ಎಡಕ್ಕೆ ತಿರುಗಿದರೆ ನಿಮಗೆ ನಂದಿ ಬೆಟ್ಟ ಕಾಣಸಿಗುತ್ತದೆ. ರಸ್ತೆಯ ಎರಡೂ ಬದಿಗೂ ಹಸಿರು ಮರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೋಗುವ ರಸ್ತೆಯೇ ಚೆಂದ.

ಈ ಮೊದಲು ಬೆಳಿಗ್ಗೆ 5-6 ಗಂಟೆಗೇ ನಂದಿಬೆಟ್ಟಕ್ಕೆ ಪ್ರವೇಶವಿರುತ್ತಿತ್ತು. ಸುತ್ತಲು ಕಾವಳ ಮುತ್ತಿ 15-20 ಅಡಿ ದೂರದವರೆಗೆ ಮಾತ್ರ ಕಾಣುವಂತೆ ಮಂಜು ಆವರಿಸುತ್ತಿತ್ತು. ಆನಂತರ ನೀವು ಬೆಟ್ಟದ ತುದಿಯಲ್ಲಿ ಕುಳಿತು ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದಿತ್ತು. ಇನ್ನು ದಿನವಿಡೀ ಆ ದಟ್ಟ ಕಾನನದಲ್ಲಿ ಸುತ್ತಾಡಿ, ವಿರಮಿಸಿ, ಹೊಟ್ಟೆ ತುಂಬ ಊಟ ಮಾಡಿ ಸಂಜೆಗೆ ಸೂರ್ಯಾಸ್ತವನ್ನು ನೋಡಿ ವಾಪಸ್ ಬರಬಹುದಿತ್ತು. ಇವೆಲ್ಲವೂ ಅದ್ಭುತ ಅನುಭವ. ಆದರೆ ಈಗ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಆ ಅನುಭವಕ್ಕೆ ಅಡ್ಡಿಯಾಗಿದೆ. ಈಗ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶಾವಕಾಶವಿದೆ.

ಆದರೂ ನೀವು ಮೇಘಗಳ ಜೊತೆಗೆ ನಿಂತು ಅವುಗಳ ಹಿಂಡನ್ನು ನೋಡಲು ಈಗಲೂ ಸಾಧ್ಯವಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ನೀವು ನಂದಿ ಬೆಟ್ಟದ ಮೇಲಿದ್ದರೆ ನಿಮ್ಮ ಕೆಳಗೆ ಮೋಡಗಳ ಹಿಂಡು ಚಲಿಸುವುದು ಗೋಚರಿಸುತ್ತದೆ. ಆ ಮೋಡಗಳ ಸಾಲು ಬಂದು ಬೆಟ್ಟಕ್ಕೆ ಢಿಕ್ಕಿ ಹೊಡೆದು ಮಾಯವಾಗುತ್ತವೆ. ಸಾಮಾನ್ಯವಾಗಿ ಎತ್ತರದ ಎಲ್ಲಾ ಗಿರಿ ಶಿಖರಗಳಲ್ಲಿಯೂ, ಚಳಿಗಾಲದಲ್ಲಿ ಈ ದೃಶ್ಯ ಸಾಮಾನ್ಯ. ಆದರೆ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಥರದ ಬಹಳ ಎತ್ತರದ ಬೆಟ್ಟಗಳಲ್ಲಿ ನಮ್ಮ ಸುತ್ತಲೂ ಮಂಜು ತುಂಬಿ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ.

ಇದನ್ನೂ ನೋಡಿ: Exploring Nandi Hills ಮೊಗೆದಷ್ಟು ನೀರು ನಂದಿ ಬೆಟ್ಟ.. ನಂದಿ ಬೆಟ್ಟಕ್ಕೆ ಬೈಕ್ ರೈಡಿಂಗ್

 

ಚಿಕ್ಕಬಳ್ಳಾಪುರ ಜಿಲ್ಲಾವ್ಯಾಪ್ತಿಗೆ ಬರುವ, ಚಿಕ್ಕಬಳ್ಳಾಪುರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ನೀವು ಎಷ್ಟು ಹೊತ್ತು ಇದ್ದರೂ ಬೇಸರಿಸದೆ ನೋಡಬಹುದಾದ ಸ್ಥಳಗಳಿವೆ. ನಂದಿ ಬೆಟ್ಟ ಸಮುದ್ರ ಮಟ್ಟದಿಂದ 5841 ಅಡಿ ಎತ್ತರದಲ್ಲಿರುವ ಗಿರಿ ಶಿಖರ. ಚೋಳರ ಕಾಲದಲ್ಲಿ ಇಲ್ಲಿ ಕೋಟೆಗಳನ್ನು, ದೇವಾಲಯಗಳನ್ನು ಕಟ್ಟಲಾಯಿತು. ನಂತರ ಟಿಪ್ಪು ಸುಲ್ತಾನನ ಕಾಲದಲ್ಲಿ ಅವನ್ನು ಮತ್ತಷ್ಟು ಭದ್ರಪಡಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. 1791ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು. ನಂತರ ಹಲವು ಬ್ರಿಟಿಷ್ ಅಧಿಕಾರಿಗಳು ಇಲ್ಲಿ ತಂಗುತ್ತಿದ್ದರು ಎನ್ನಲಾಗಿದೆ. ಆದರೆ ಇಂದು ಟಿಪ್ಪುವಿನ ಆ ಬೇಸಿಗೆ ಅರಮನೆ ಸರಿಯಾದ ಮೇಲ್ವೀಚಾರಣೆ ಮತ್ತು ನಿರ್ವಹಣೆ ಇಲ್ಲದ ಕಾರಣ ಅನಾಥವಾಗಿ ಬಿದ್ದಿದೆ. ಐತಿಹಾಸಿಕ ಮಹತ್ವ ಹೊಂದಿದ್ದ ಈ ಪಾರಂಪರಿಕ ತಾಣ ಪಾಳುಬಿದ್ದ ಮನೆಯ ರೀತಿ ಕಾಣುತ್ತಿದೆ. ಇನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದಕ್ಕಾಗಿ ಬಳಸುತ್ತಿದ್ದ ಟಿಪ್ಪು ಡ್ರಾಪ್ ಎಂಬ ದುರ್ಗಮ ಸ್ಥಳ ಇಂದು ಪ್ರವಾಸಿಸ್ಥಳವಾಗಿ ಬದಲಾವಣೆಯಾಗಿದೆ. ಇಲ್ಲಿಂದ ಕಡಿದಾದ ಆಳವನ್ನು ನೋಡಬಹುದು. ಬಂಡೆ ಮೇಲೆ ಕುಳಿತು ಮೋಡಗಳ ಹಿಂಡನ್ನು, ಅದರ ನೆರಳನ್ನು ಕಾಣಬಹುದು. ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತವನ್ನು ನೋಡಲು ಪ್ರಶಸ್ತವಾದ ಜಾಗ ಇದು.

ಟಿಪ್ಪು ಸುಲ್ತಾನ್ ಕಟ್ಟಿಸಿದ್ದ ಬೇಸಿಗೆ ಅರಮನೆ

ಯೋಗ ನಂದೀಶ್ವರ ಸ್ವಾಮಿ ದೇವಾಲಯ, ಗವಿ ವೀರಭದ್ರಸ್ವಾಮಿ ದೇವಾಲಯ, ನೆಲ್ಲಿಕಾಯಿ ಬಸವಣ್ಣ ದೇವಾಲಯ ಸೇರಿ ಹಲವು ದೇವಾಲಯಗಳು ಬೆಟ್ಟದಲ್ಲಿವೆ. ನಂದಿ ಬೆಟ್ಟದಲ್ಲಿನ ಇತರ ಆಕರ್ಷಣೆಯೆಂದರೆ ಬೆಟ್ಟದ ಮೇಲಿಂದ ಸುತ್ತಲಿನ ವಿಹಂಗಮ ನೋಟ. ನೋಡಲು ಹಲವು ವ್ಯೂ ಪಾಯಿಂಟ್‌ಗಳು ಇಲ್ಲಿವೆ. ತೋಟಗಾರಿಕೆ ಇಲಾಖೆಯ ಕೈತೋಟಗಳು, ದೊಡ್ಡ ದೊಡ್ಡ ಮರಗಳು ಇಲ್ಲಿವೆ. ಇಲ್ಲಿ ಹುಟ್ಟುವ ಪಾಲರ್ ಮತ್ತು ಅರ್ಕಾವತಿ ನದಿಮೂಲಗಳ ವೀಕ್ಷಣೆ ಮುದನೀಡುತ್ತವೆ.

ದೂರದ ಊರಿಂದ ಬರುವವರು ರಾತ್ರಿಯೇ ಬಂದು ಇಲ್ಲಿ ಉಳಿದು ಬೆಳಿಗ್ಗೆ ಬೆಟ್ಟಕ್ಕೆ ಬರಬಹುದು. ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಮಂದಿರ ಮತ್ತು ಹೋಟೆಲ್‌ಗಳಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವೆಜ್ ಮತ್ತು ನಾನ್‌ವೆಜ್ ಹೋಟೆಲ್ ಒಂದನ್ನು ತೆರೆದಿದೆ. ಇದು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು ಹೊರಗಿನಿಂದ ನೀರು, ತಿಂಡಿ ತರಲು ಅವಕಾಶವಿಲ್ಲ. ನಂದಿ ಬೆಟ್ಟದಲ್ಲಿಯೇ ತಿಂಡಿ ತಿನಿಸುಗಳು ಲಭ್ಯವಿದ್ದು ಕೋತಿಗಳ ಸಂಖ್ಯೆ ಹೆಚ್ಚಿರುವುದರಿಂದ ನೀವು ತಿಂದು ಅವುಗಳಿಗೂ ಕೊಡಬಹುದು. ಕೋತಿಗಳ ಸಂಗಡ ಸಣ್ಣ ಮಕ್ಕಳಿಗೆ ಹಬ್ಬವಾಗುವುದಂತೂ ನಿಜ.

ನಂದಿಬೆಟ್ಟದ ಪಕ್ಕದಲ್ಲಿಯೇ ಸ್ಕಂದಗಿರಿ ಮತ್ತು ಚನ್ನಗಿರಿ ಎಂಬ ಇನ್ನೆರಡು ಸುಂದರ ಬೆಟ್ಟಗಳಿವೆ. ಚಿಕ್ಕಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ಭೋಗ ನಂದೀಶ್ವರ ದೇವಾಲಯವಿದೆ. ಒಟ್ಟಿನಲ್ಲಿ ಅರ್ಧದಿನ ಅಥವಾ ದಿನವಿಡೀ ಕಳೆಯಲು ಇದು ಪ್ರಶಸ್ತ ಸ್ಥಳವಾಗಿದೆ.


ಇದನ್ನೂ ಓದಿ: ಜಗತ್‌ ಪ್ರಸಿದ್ಧ ಪ್ರತಿರೋಧದ ಹಾಡು! – ರೈತರ ಹೋರಾಟದಲ್ಲೂ ಪ್ರತಿಧ್ವನಿಸಿದ ‘ಬೆಲ್ಲಾ ಚಾವ್’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...