Homeಕರ್ನಾಟಕಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ

ಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ

ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು.

- Advertisement -
- Advertisement -

ಆಕಾಶದಲ್ಲಿ ಮೋಡಗಳು ಸ್ವಚ್ಛಂದವಾಗಿ ತೇಲಾಡುವಾಗ ಅದರ ಮೇಲೊಮ್ಮೆ ಕೂರಬೇಕೆಂದು ಯಾರಿಗೆ ತಾನೇ ಅನಿಸುವುದಿಲ್ಲ. ಅಂತ ಬಯಕೆ ನಿಮಗೇನಾದರೂ ಬಂದಿದ್ದಲ್ಲಿ ಅದನ್ನು ನನಸಾಗಿಸುವ ಅವಕಾಶ ಈ ತಿಂಗಳಲ್ಲಿ ಲಭ್ಯವಿದೆ. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ.. ಬೆಂಗಳೂರಿನಿಂದ ಹೊರಡುವುದಿದ್ದರೆ ಅರ್ಧದಿನ ಸಮಯ ಹೊಂದಿಸಿಕೊಳ್ಳುವುದು.

ಈ ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆಯೇ ಬೈಕ್ ಅಥವಾ ಕಾರ್ ಹತ್ತಿ ಹೊರಟರೆ ನಂದಿಬೆಟ್ಟಕ್ಕೆ ಕೇವಲ ಒಂದೂವರೆ ಗಂಟೆಗಳ (63 ಕಿ.ಮೀ) ಪ್ರಯಾಣ. ನಾನು ಸೆಪ್ಟಂಬರ್ 8 ರಂದು ನನ್ನ ಬೈಕ್ ಹತ್ತಿ ಹೊರಟೆ. ಯಲಹಂಕ ಮೇಲಿಂದ ಪ್ರಯಾಣ ಬೆಳೆಸಿ ದೇವನಹಳ್ಳಿ ದಾಟಿದೊಡನೆ ಎಡಕ್ಕೆ ತಿರುಗಿದರೆ ನಿಮಗೆ ನಂದಿ ಬೆಟ್ಟ ಕಾಣಸಿಗುತ್ತದೆ. ರಸ್ತೆಯ ಎರಡೂ ಬದಿಗೂ ಹಸಿರು ಮರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೋಗುವ ರಸ್ತೆಯೇ ಚೆಂದ.

ಈ ಮೊದಲು ಬೆಳಿಗ್ಗೆ 5-6 ಗಂಟೆಗೇ ನಂದಿಬೆಟ್ಟಕ್ಕೆ ಪ್ರವೇಶವಿರುತ್ತಿತ್ತು. ಸುತ್ತಲು ಕಾವಳ ಮುತ್ತಿ 15-20 ಅಡಿ ದೂರದವರೆಗೆ ಮಾತ್ರ ಕಾಣುವಂತೆ ಮಂಜು ಆವರಿಸುತ್ತಿತ್ತು. ಆನಂತರ ನೀವು ಬೆಟ್ಟದ ತುದಿಯಲ್ಲಿ ಕುಳಿತು ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದಿತ್ತು. ಇನ್ನು ದಿನವಿಡೀ ಆ ದಟ್ಟ ಕಾನನದಲ್ಲಿ ಸುತ್ತಾಡಿ, ವಿರಮಿಸಿ, ಹೊಟ್ಟೆ ತುಂಬ ಊಟ ಮಾಡಿ ಸಂಜೆಗೆ ಸೂರ್ಯಾಸ್ತವನ್ನು ನೋಡಿ ವಾಪಸ್ ಬರಬಹುದಿತ್ತು. ಇವೆಲ್ಲವೂ ಅದ್ಭುತ ಅನುಭವ. ಆದರೆ ಈಗ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಆ ಅನುಭವಕ್ಕೆ ಅಡ್ಡಿಯಾಗಿದೆ. ಈಗ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶಾವಕಾಶವಿದೆ.

ಆದರೂ ನೀವು ಮೇಘಗಳ ಜೊತೆಗೆ ನಿಂತು ಅವುಗಳ ಹಿಂಡನ್ನು ನೋಡಲು ಈಗಲೂ ಸಾಧ್ಯವಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ನೀವು ನಂದಿ ಬೆಟ್ಟದ ಮೇಲಿದ್ದರೆ ನಿಮ್ಮ ಕೆಳಗೆ ಮೋಡಗಳ ಹಿಂಡು ಚಲಿಸುವುದು ಗೋಚರಿಸುತ್ತದೆ. ಆ ಮೋಡಗಳ ಸಾಲು ಬಂದು ಬೆಟ್ಟಕ್ಕೆ ಢಿಕ್ಕಿ ಹೊಡೆದು ಮಾಯವಾಗುತ್ತವೆ. ಸಾಮಾನ್ಯವಾಗಿ ಎತ್ತರದ ಎಲ್ಲಾ ಗಿರಿ ಶಿಖರಗಳಲ್ಲಿಯೂ, ಚಳಿಗಾಲದಲ್ಲಿ ಈ ದೃಶ್ಯ ಸಾಮಾನ್ಯ. ಆದರೆ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಥರದ ಬಹಳ ಎತ್ತರದ ಬೆಟ್ಟಗಳಲ್ಲಿ ನಮ್ಮ ಸುತ್ತಲೂ ಮಂಜು ತುಂಬಿ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ.

ಇದನ್ನೂ ನೋಡಿ: Exploring Nandi Hills ಮೊಗೆದಷ್ಟು ನೀರು ನಂದಿ ಬೆಟ್ಟ.. ನಂದಿ ಬೆಟ್ಟಕ್ಕೆ ಬೈಕ್ ರೈಡಿಂಗ್

 

ಚಿಕ್ಕಬಳ್ಳಾಪುರ ಜಿಲ್ಲಾವ್ಯಾಪ್ತಿಗೆ ಬರುವ, ಚಿಕ್ಕಬಳ್ಳಾಪುರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ನೀವು ಎಷ್ಟು ಹೊತ್ತು ಇದ್ದರೂ ಬೇಸರಿಸದೆ ನೋಡಬಹುದಾದ ಸ್ಥಳಗಳಿವೆ. ನಂದಿ ಬೆಟ್ಟ ಸಮುದ್ರ ಮಟ್ಟದಿಂದ 5841 ಅಡಿ ಎತ್ತರದಲ್ಲಿರುವ ಗಿರಿ ಶಿಖರ. ಚೋಳರ ಕಾಲದಲ್ಲಿ ಇಲ್ಲಿ ಕೋಟೆಗಳನ್ನು, ದೇವಾಲಯಗಳನ್ನು ಕಟ್ಟಲಾಯಿತು. ನಂತರ ಟಿಪ್ಪು ಸುಲ್ತಾನನ ಕಾಲದಲ್ಲಿ ಅವನ್ನು ಮತ್ತಷ್ಟು ಭದ್ರಪಡಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. 1791ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು. ನಂತರ ಹಲವು ಬ್ರಿಟಿಷ್ ಅಧಿಕಾರಿಗಳು ಇಲ್ಲಿ ತಂಗುತ್ತಿದ್ದರು ಎನ್ನಲಾಗಿದೆ. ಆದರೆ ಇಂದು ಟಿಪ್ಪುವಿನ ಆ ಬೇಸಿಗೆ ಅರಮನೆ ಸರಿಯಾದ ಮೇಲ್ವೀಚಾರಣೆ ಮತ್ತು ನಿರ್ವಹಣೆ ಇಲ್ಲದ ಕಾರಣ ಅನಾಥವಾಗಿ ಬಿದ್ದಿದೆ. ಐತಿಹಾಸಿಕ ಮಹತ್ವ ಹೊಂದಿದ್ದ ಈ ಪಾರಂಪರಿಕ ತಾಣ ಪಾಳುಬಿದ್ದ ಮನೆಯ ರೀತಿ ಕಾಣುತ್ತಿದೆ. ಇನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದಕ್ಕಾಗಿ ಬಳಸುತ್ತಿದ್ದ ಟಿಪ್ಪು ಡ್ರಾಪ್ ಎಂಬ ದುರ್ಗಮ ಸ್ಥಳ ಇಂದು ಪ್ರವಾಸಿಸ್ಥಳವಾಗಿ ಬದಲಾವಣೆಯಾಗಿದೆ. ಇಲ್ಲಿಂದ ಕಡಿದಾದ ಆಳವನ್ನು ನೋಡಬಹುದು. ಬಂಡೆ ಮೇಲೆ ಕುಳಿತು ಮೋಡಗಳ ಹಿಂಡನ್ನು, ಅದರ ನೆರಳನ್ನು ಕಾಣಬಹುದು. ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತವನ್ನು ನೋಡಲು ಪ್ರಶಸ್ತವಾದ ಜಾಗ ಇದು.

ಟಿಪ್ಪು ಸುಲ್ತಾನ್ ಕಟ್ಟಿಸಿದ್ದ ಬೇಸಿಗೆ ಅರಮನೆ

ಯೋಗ ನಂದೀಶ್ವರ ಸ್ವಾಮಿ ದೇವಾಲಯ, ಗವಿ ವೀರಭದ್ರಸ್ವಾಮಿ ದೇವಾಲಯ, ನೆಲ್ಲಿಕಾಯಿ ಬಸವಣ್ಣ ದೇವಾಲಯ ಸೇರಿ ಹಲವು ದೇವಾಲಯಗಳು ಬೆಟ್ಟದಲ್ಲಿವೆ. ನಂದಿ ಬೆಟ್ಟದಲ್ಲಿನ ಇತರ ಆಕರ್ಷಣೆಯೆಂದರೆ ಬೆಟ್ಟದ ಮೇಲಿಂದ ಸುತ್ತಲಿನ ವಿಹಂಗಮ ನೋಟ. ನೋಡಲು ಹಲವು ವ್ಯೂ ಪಾಯಿಂಟ್‌ಗಳು ಇಲ್ಲಿವೆ. ತೋಟಗಾರಿಕೆ ಇಲಾಖೆಯ ಕೈತೋಟಗಳು, ದೊಡ್ಡ ದೊಡ್ಡ ಮರಗಳು ಇಲ್ಲಿವೆ. ಇಲ್ಲಿ ಹುಟ್ಟುವ ಪಾಲರ್ ಮತ್ತು ಅರ್ಕಾವತಿ ನದಿಮೂಲಗಳ ವೀಕ್ಷಣೆ ಮುದನೀಡುತ್ತವೆ.

ದೂರದ ಊರಿಂದ ಬರುವವರು ರಾತ್ರಿಯೇ ಬಂದು ಇಲ್ಲಿ ಉಳಿದು ಬೆಳಿಗ್ಗೆ ಬೆಟ್ಟಕ್ಕೆ ಬರಬಹುದು. ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಮಂದಿರ ಮತ್ತು ಹೋಟೆಲ್‌ಗಳಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವೆಜ್ ಮತ್ತು ನಾನ್‌ವೆಜ್ ಹೋಟೆಲ್ ಒಂದನ್ನು ತೆರೆದಿದೆ. ಇದು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು ಹೊರಗಿನಿಂದ ನೀರು, ತಿಂಡಿ ತರಲು ಅವಕಾಶವಿಲ್ಲ. ನಂದಿ ಬೆಟ್ಟದಲ್ಲಿಯೇ ತಿಂಡಿ ತಿನಿಸುಗಳು ಲಭ್ಯವಿದ್ದು ಕೋತಿಗಳ ಸಂಖ್ಯೆ ಹೆಚ್ಚಿರುವುದರಿಂದ ನೀವು ತಿಂದು ಅವುಗಳಿಗೂ ಕೊಡಬಹುದು. ಕೋತಿಗಳ ಸಂಗಡ ಸಣ್ಣ ಮಕ್ಕಳಿಗೆ ಹಬ್ಬವಾಗುವುದಂತೂ ನಿಜ.

ನಂದಿಬೆಟ್ಟದ ಪಕ್ಕದಲ್ಲಿಯೇ ಸ್ಕಂದಗಿರಿ ಮತ್ತು ಚನ್ನಗಿರಿ ಎಂಬ ಇನ್ನೆರಡು ಸುಂದರ ಬೆಟ್ಟಗಳಿವೆ. ಚಿಕ್ಕಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ಭೋಗ ನಂದೀಶ್ವರ ದೇವಾಲಯವಿದೆ. ಒಟ್ಟಿನಲ್ಲಿ ಅರ್ಧದಿನ ಅಥವಾ ದಿನವಿಡೀ ಕಳೆಯಲು ಇದು ಪ್ರಶಸ್ತ ಸ್ಥಳವಾಗಿದೆ.


ಇದನ್ನೂ ಓದಿ: ಜಗತ್‌ ಪ್ರಸಿದ್ಧ ಪ್ರತಿರೋಧದ ಹಾಡು! – ರೈತರ ಹೋರಾಟದಲ್ಲೂ ಪ್ರತಿಧ್ವನಿಸಿದ ‘ಬೆಲ್ಲಾ ಚಾವ್’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...