Homeಮುಖಪುಟದೇಶದ ಶೇ.90ರಷ್ಟು ನೌಕರರ ತಿಂಗಳ ಸಂಬಳ 25000 ರುಪಾಯಿಗಳಿಗಿಂತ ಕಡಿಮೆ!

ದೇಶದ ಶೇ.90ರಷ್ಟು ನೌಕರರ ತಿಂಗಳ ಸಂಬಳ 25000 ರುಪಾಯಿಗಳಿಗಿಂತ ಕಡಿಮೆ!

- Advertisement -
- Advertisement -

ಮೊದಲಿಗೆ ಈ ಕೆಲವು ಅಂಕಿಅಂಶಗಳ ಬಗ್ಗೆ ಗಮನ ಹರಿಸೋಣ;

  • ಈ ದೇಶದಲ್ಲಿ ದುಡಿಯುತ್ತಿರುವ ಒಟ್ಟು 60 ಕೋಟಿ ಜನರಲ್ಲಿ 9 ಕೋಟಿ ಜನರ ತಿಂಗಳ ಸರಾಸರಿ ಆದಾಯ 5000 ರುಪಾಯಿಗಿಂತ ಕಡಿಮೆ!
  • 2019-20ರ ಒಟ್ಟು ವಾರ್ಷಿಕ ವೇತನದಲ್ಲಿ ಹೆಚ್ಚು ವೇತನ (ಮೇಲಿನ 1% ಜನ) ಪಡೆಯುವವರ (ಅಂದಾಜು 60 ಲಕ್ಷ ಜನ) ಪಾಲು ಶೇ.6.48!
  • ಅದೇ 2019-20ರ ಒಟ್ಟು ವಾರ್ಷಿಕ ವೇತನದಲ್ಲಿ ಅತ್ಯಂತ ಕಡಿಮೆ ವೇತನ (ಕೆಳಗಿನ 10% ಜನ) ಪಡೆಯುವರ (ಅಂದಾಜು 6 ಕೋಟಿ ಜನ) ಪಾಲು ಕೇವಲ ಕೇವಲ ಶೇ.1.71!
  • ಇದೇ ಸಮಯದಲ್ಲಿ, ಒಟ್ಟು ವಾರ್ಷಿಕ ವೇತನದಲ್ಲಿ ಹೆಚ್ಚು ಸಂಬಳ ಪಡೆಯುವ (ಮೇಲಿನ 10% ಜನ) ಗುಂಪಿನ (ಅಂದಾಜು 6 ಕೋಟಿ) ಜನರ ಪಾಲು ಶೇ.32.5!
  • 2017-18ರಿಂದ 2019-20ರ ನಡುವೆ ಕಡಿಮೆ ವೇತನ (ಕೆಳಗಿನ 50%) ಗುಂಪಿನ ಜನರ ವೇತನ ಶೇ.3.9ನಷ್ಟು ಹೆಚ್ಚಾಗಿದ್ದರೆ, ಹೆಚ್ಚು ವೇತನ ಗುಂಪಿನ (ಮೇಲಿನ 10% ) ಜನರ ವೇತನ ಶೇ.8.1ರಷ್ಟು ಹೆಚ್ಚಾಗಿದೆ.
  • ಅದೇ ಕಾಲಘಟ್ಟದಲ್ಲಿ ಹೆಚ್ಚು ವೇತನ (ಮೇಲಿನ 1%) ಗುಂಪಿನ ಮಂದಿಯ ವೇತನ ಶೇ.15ರಷ್ಟು ಹೆಚ್ಚಾಗಿದೆ!
  • ಇದಕ್ಕೆ ತದ್ವಿರುದ್ಧವಾಗಿ ಕಡಿಮೆ ವೇತನ (ಕೆಳಗಿನ 10%) ಗುಂಪಿನ ಮಂದಿಯ ವೇತನ ಶೇ.1ರಷ್ಟು ಇಳಿಕೆಯಾಗಿದೆ!

ಮೇಲಿನವು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಪರಿಷತ್ ಸಿದ್ಧಪಡಿಸಿ ಪ್ರಧಾನಿಗೆ ಸಲ್ಲಿಸಿರುವ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ಕುರಿತ ವರದಿಯಲ್ಲಿರುವ ಕೆಲ ಮುಖ್ಯ ಅಂಕಿಅಂಶಗಳು.

ನವ ಉದಾರವಾದಿ ಆರ್ಥಿಕ ನೀತಿಗಳು ವಿಶ್ವದಾದ್ಯಂತ ಅಸಮಾನತೆಯನ್ನು ಹೆಚ್ಚಿಸುತ್ತಲೇ ಇರುವುದು ಈಗ ಮನುಕುಲದ ಭೀಕರ ಸಮಸ್ಯೆಯಾಗಿ ಬಹುತೇಕ ಪರಿವರ್ತಿತವಾಗಿದೆ. ಭಾರತದಲ್ಲೂ ಕೂಡ ಈ ನವ ಆರ್ಥಿಕ ನೀತಿಗಳು ಶ್ರೀಮಂತರನ್ನು ಕಲ್ಪನೆಗೆ ನಿಲುಕದಷ್ಟು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಾ, ಬಡವರನ್ನು ಮತ್ತಷ್ಟು ಕಡುಭೀಕರ ಬಡತನದತ್ತ ತಳ್ಳುತ್ತ ಬಂದಿವೆ. ಇದು ಉಳ್ಳವರ ಮತ್ತು ಬಡವರ ಮಧ್ಯೆ ಭಾರೀ ಕಂದಕವನ್ನೇ ಸೃಷ್ಟಿಸಿದ್ದು, ಈಗಾಗಲೇ ಇದರ ಘೋರ ದುರಂತಗಳನ್ನು ನಾವು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ.

ಈ ವರ್ಷದ ಜನವರಿಯಲ್ಲಿ ಆಕ್ಸ್‌ಫಾಮ್‌ನವರ (Oxfam report) “ಅಸಮಾನತೆ ಕೊಲ್ಲುತ್ತದೆ” (Inequality kills) ಎಂಬ ವರದಿಯಲ್ಲಿ ಅತ್ಯಂತ ಸ್ಪಷ್ಟ ಅಂಕಿಅಂಶಗಳೊಂದಿಗೆ ಕೋವಿಡ್ ಕಾರಣಕ್ಕೆ ಭಾರತದಲ್ಲಿ (ವಿಶ್ವದ ಬೇರೆ ದೇಶಗಳಲ್ಲಿ ಕೂಡ) ಹೇಗೆ ಬಡವರೇ ಹೆಚ್ಚಾಗಿ ಸತ್ತರು ಎಂಬುದನ್ನು ಆಳವಾದ ಅಧ್ಯಯನದ ಮೂಲಕ ತೋರಿಸಲಾಗಿದೆ. ಮತ್ತು, ಹಾಗೆ ಬಡವರೇ ಹೆಚ್ಚಾಗಿ ಸಾಯಲು ಕೋವಿಡ್‌ಗಿಂತ ಅಸಮಾನತೆಯೇ ಹೇಗೆ ಮುಖ್ಯ ಕಾರಣವಾಗಿತ್ತು ಎಂಬುದನ್ನೂ ಆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅದೇ ವರದಿಯಲ್ಲಿ, ಕೋವಿಡ್ ಲಾಕ್‌ಡೌನ್‌ನಿಂದ ಇಡೀ ದೇಶದ ಆರ್ಥಿಕತೆ ತತ್ತರಿಸಿದ್ದಾಗಲೂ. ಗೌತಮ್ ಅದಾನಿಯವರ ಆಸ್ತಿ ಕೇವಲ ಒಂದೂವರೆ ವರ್ಷಗಳಲ್ಲಿ ಸಾವಿರಾರು ಕೋಟಿಗಳಷ್ಟು ಹೆಚ್ಚಾಗಿದ್ದು, ಭಾರತದಲ್ಲಿ ನೂರು ಜನ ಹೊಸಾ ಬಿಲಿಯನೇರುಗಳು ಸೃಷ್ಟಿಯಾಗಿದ್ದು ಮತ್ತು ಅದೇ ಒಂದೂವರೆ ವರ್ಷಗಳಲ್ಲಿ ಎಂಟೂವರೆ ಕೋಟಿಯಷ್ಟು ಭಾರತೀಯರು ಕಡುಬಡತನಕ್ಕೆ ಜಾರಿದ್ದನ್ನು ಅಧ್ಯಯನದ ಮೂಲಕ ತಿಳಿಸಲಾಗಿದೆ.

ಅಂದರೆ, ಇದು ಭಾರತ ಅಳವಡಿಸಿಕೊಂಡಿರುವ ಆರ್ಥಿಕ ನೀತಿಯ ಕಥೆಯನ್ನು ಹೇಳುತ್ತದೆ. ಹೇಗೆ ಇಡೀ ದೇಶ ಆರ್ಥಿಕವಾಗಿ ಹಿಂಜರಿದಾಗಲೂ ಅತಿ ಶ್ರೀಮಂತರು ಇನ್ನೂ ಶ್ರೀಮಂತರಾಗಲು ದೇಶದ ಆರ್ಥಿಕ ನೀತಿ ಪೂರಕವಾಗಿದೆ ಎಂದು Oxfam ವರದಿ ಸ್ಪಷ್ಟಪಡಿಸುತ್ತದೆ.

ಆದರೆ, Oxfam ವರದಿಯನ್ನು ತಿರಸ್ಕರಿಸಿದ ಒಕ್ಕೂಟ ಸರ್ಕಾರ ಈಗ ತನ್ನದೇ ವರದಿಯಲ್ಲಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅಸಮಾನತೆ ಜಾಸ್ತಿಯಾಗುತ್ತಲೇ ಬಂದಿರುವುದನ್ನು ಒಪ್ಪಿಕೊಂಡಿದೆ.
ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಪರಿಷತ್ ತನ್ನ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ವರದಿಯಲ್ಲಿ ಅಸಮಾನತೆ ಜಾಸ್ತಿಯಾಗುತ್ತಿರುವದನ್ನು ಒಪ್ಪಿಕೊಂಡಿರುವುದಷ್ಟೇ ಅಲ್ಲದೆ, ಇದರ ಅಪಾಯಗಳನ್ನೂ ಗುರುತಿಸಿದೆ.

ಯಾವುದೇ ಸಮಾಜದಲ್ಲಿ ಹೆಚ್ಚುತ್ತಿರುವ ಈ ಅಸಮಾನತೆಯ ತಣ್ಣನೆಯ ಕ್ರೌರ್ಯ ಏನು ಎಂಬುದು ‘Inequality kills ( ಅಸಮಾನತೆ ಕೊಲ್ಲುತ್ತದೆ) ಎನ್ನುವ ಈ ಒಂದೇಒಂದು ಪದಗುಚ್ಚದ ಮೂಲಕ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಸದ್ಯದ ಆರ್ಥಿಕ ನೀತಿಯೊಳಗೆ ಈ ಅಸಮಾನತೆಯನ್ನು ಒಂದು ಮಟ್ಟಿಗೆ ಕಡಿಮೆ ಮಾಡಲು ಇರುವ ದಾರಿಯೆಂದರೆ ಸಮಾಜ ಕಲ್ಯಾಣ (Social welfare scheme) ಕಾರ್ಯಕ್ರಮಗಳಿಗೆ ಹೆಚ್ಚುಹೆಚ್ಚು ಹಣ ಒದಗಿಸುವುದು ಮತ್ತು ದೈನಂದಿನ ಬಳಕೆ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡುವುದು.

ಆದರೆ, ನಮ್ಮ ದೇಶದ ದುರಂತವನ್ನು ಈ ಕಾಲಾನುಕ್ರಮದ ಮೂಲಕ ಅರ್ಥ ಮಾಡಿಕೊಳ್ಳಬಹುದು;

1) ಕಳೆದ ಜನವರಿಯಲ್ಲಿ Oxfam ವರದಿ ಬರುತ್ತದೆ.

2) ಆ ವರದಿಯಲ್ಲಿ ಸ್ಪಷ್ಟವಾಗಿ ಕೋವಿಡ್ ವೇಳೆಯಲ್ಲಿ ದೇಶದೊಳಗೆ ಅಸಮಾನತೆ ಮತ್ತಷ್ಟು ಹೆಚ್ಚಾಗಿರುವುದನ್ನು ತೋರಿಸಲಾಗಿರುತ್ತದೆ.

3) ಇದಕ್ಕೆ ಒಂದು ಮಟ್ಟದ ಪ್ರಮುಖ ಪರಿಹಾರವೆಂದರೆ ಸೋಷಿಯಲ್ ವೆಲ್‌ಫೇರ್ ಸ್ಕೀಮ್‌ಗಳಿಗೆ ಹೆಚ್ಚಿನ ಅನುದಾನ ಕೊಡುವುದೆಂದೂ ಹೇಳಲಾಗಿರುತ್ತದೆ.

ಆದರೆ, ಒಕ್ಕೂಟ ಸರ್ಕಾರ ಈ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಟಿನಲ್ಲಿ ಅತ್ಯಂತ ಅಮಾನವೀಯವಾಗಿ ಸೋಷಿಯಲ್ ವೆಲ್‌ಫೇರ್ ಸ್ಕೀಮ್‌ಗಳಿಗೆ ಕಳೆದ ವರ್ಷಕ್ಕಿಂತಲೂ ಕಡಿಮೆ ಹಣ ನಿಗದಿಪಡಿಸುತ್ತದೆ. ಅಂದರೆ, ಈ ದೇಶದಲ್ಲಿ ಅಸಮಾನತೆ ಕಡಿಮೆ ಮಾಡುವ ಯಾವ ಅಶಾಭಾವನೆಯನ್ನೂ ಈ ಬಜೆಟ್ ಹುಟ್ಟುಹಾಕುವುದಿಲ್ಲ.

ಈಗ ಸರ್ಕಾರದ ಸಮಿತಿಯ ವರದಿಯೇ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿರುವುದಾಗಿ ಹೇಳಿರುವುದನ್ನಾದರೂ ಒಕ್ಕೂಟ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಅಸಮಾನತೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ.

ಇಲ್ಲವಾದಲ್ಲಿ, ಈ ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಕುಸಿಯುವ ಅಪಾಯವಿದೆ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.


ಇದನ್ನೂ ಓದಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...