Homeಮುಖಪುಟದೇಶದ ಶೇ.90ರಷ್ಟು ನೌಕರರ ತಿಂಗಳ ಸಂಬಳ 25000 ರುಪಾಯಿಗಳಿಗಿಂತ ಕಡಿಮೆ!

ದೇಶದ ಶೇ.90ರಷ್ಟು ನೌಕರರ ತಿಂಗಳ ಸಂಬಳ 25000 ರುಪಾಯಿಗಳಿಗಿಂತ ಕಡಿಮೆ!

- Advertisement -
- Advertisement -

ಮೊದಲಿಗೆ ಈ ಕೆಲವು ಅಂಕಿಅಂಶಗಳ ಬಗ್ಗೆ ಗಮನ ಹರಿಸೋಣ;

  • ಈ ದೇಶದಲ್ಲಿ ದುಡಿಯುತ್ತಿರುವ ಒಟ್ಟು 60 ಕೋಟಿ ಜನರಲ್ಲಿ 9 ಕೋಟಿ ಜನರ ತಿಂಗಳ ಸರಾಸರಿ ಆದಾಯ 5000 ರುಪಾಯಿಗಿಂತ ಕಡಿಮೆ!
  • 2019-20ರ ಒಟ್ಟು ವಾರ್ಷಿಕ ವೇತನದಲ್ಲಿ ಹೆಚ್ಚು ವೇತನ (ಮೇಲಿನ 1% ಜನ) ಪಡೆಯುವವರ (ಅಂದಾಜು 60 ಲಕ್ಷ ಜನ) ಪಾಲು ಶೇ.6.48!
  • ಅದೇ 2019-20ರ ಒಟ್ಟು ವಾರ್ಷಿಕ ವೇತನದಲ್ಲಿ ಅತ್ಯಂತ ಕಡಿಮೆ ವೇತನ (ಕೆಳಗಿನ 10% ಜನ) ಪಡೆಯುವರ (ಅಂದಾಜು 6 ಕೋಟಿ ಜನ) ಪಾಲು ಕೇವಲ ಕೇವಲ ಶೇ.1.71!
  • ಇದೇ ಸಮಯದಲ್ಲಿ, ಒಟ್ಟು ವಾರ್ಷಿಕ ವೇತನದಲ್ಲಿ ಹೆಚ್ಚು ಸಂಬಳ ಪಡೆಯುವ (ಮೇಲಿನ 10% ಜನ) ಗುಂಪಿನ (ಅಂದಾಜು 6 ಕೋಟಿ) ಜನರ ಪಾಲು ಶೇ.32.5!
  • 2017-18ರಿಂದ 2019-20ರ ನಡುವೆ ಕಡಿಮೆ ವೇತನ (ಕೆಳಗಿನ 50%) ಗುಂಪಿನ ಜನರ ವೇತನ ಶೇ.3.9ನಷ್ಟು ಹೆಚ್ಚಾಗಿದ್ದರೆ, ಹೆಚ್ಚು ವೇತನ ಗುಂಪಿನ (ಮೇಲಿನ 10% ) ಜನರ ವೇತನ ಶೇ.8.1ರಷ್ಟು ಹೆಚ್ಚಾಗಿದೆ.
  • ಅದೇ ಕಾಲಘಟ್ಟದಲ್ಲಿ ಹೆಚ್ಚು ವೇತನ (ಮೇಲಿನ 1%) ಗುಂಪಿನ ಮಂದಿಯ ವೇತನ ಶೇ.15ರಷ್ಟು ಹೆಚ್ಚಾಗಿದೆ!
  • ಇದಕ್ಕೆ ತದ್ವಿರುದ್ಧವಾಗಿ ಕಡಿಮೆ ವೇತನ (ಕೆಳಗಿನ 10%) ಗುಂಪಿನ ಮಂದಿಯ ವೇತನ ಶೇ.1ರಷ್ಟು ಇಳಿಕೆಯಾಗಿದೆ!

ಮೇಲಿನವು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಪರಿಷತ್ ಸಿದ್ಧಪಡಿಸಿ ಪ್ರಧಾನಿಗೆ ಸಲ್ಲಿಸಿರುವ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ಕುರಿತ ವರದಿಯಲ್ಲಿರುವ ಕೆಲ ಮುಖ್ಯ ಅಂಕಿಅಂಶಗಳು.

ನವ ಉದಾರವಾದಿ ಆರ್ಥಿಕ ನೀತಿಗಳು ವಿಶ್ವದಾದ್ಯಂತ ಅಸಮಾನತೆಯನ್ನು ಹೆಚ್ಚಿಸುತ್ತಲೇ ಇರುವುದು ಈಗ ಮನುಕುಲದ ಭೀಕರ ಸಮಸ್ಯೆಯಾಗಿ ಬಹುತೇಕ ಪರಿವರ್ತಿತವಾಗಿದೆ. ಭಾರತದಲ್ಲೂ ಕೂಡ ಈ ನವ ಆರ್ಥಿಕ ನೀತಿಗಳು ಶ್ರೀಮಂತರನ್ನು ಕಲ್ಪನೆಗೆ ನಿಲುಕದಷ್ಟು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಾ, ಬಡವರನ್ನು ಮತ್ತಷ್ಟು ಕಡುಭೀಕರ ಬಡತನದತ್ತ ತಳ್ಳುತ್ತ ಬಂದಿವೆ. ಇದು ಉಳ್ಳವರ ಮತ್ತು ಬಡವರ ಮಧ್ಯೆ ಭಾರೀ ಕಂದಕವನ್ನೇ ಸೃಷ್ಟಿಸಿದ್ದು, ಈಗಾಗಲೇ ಇದರ ಘೋರ ದುರಂತಗಳನ್ನು ನಾವು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ.

ಈ ವರ್ಷದ ಜನವರಿಯಲ್ಲಿ ಆಕ್ಸ್‌ಫಾಮ್‌ನವರ (Oxfam report) “ಅಸಮಾನತೆ ಕೊಲ್ಲುತ್ತದೆ” (Inequality kills) ಎಂಬ ವರದಿಯಲ್ಲಿ ಅತ್ಯಂತ ಸ್ಪಷ್ಟ ಅಂಕಿಅಂಶಗಳೊಂದಿಗೆ ಕೋವಿಡ್ ಕಾರಣಕ್ಕೆ ಭಾರತದಲ್ಲಿ (ವಿಶ್ವದ ಬೇರೆ ದೇಶಗಳಲ್ಲಿ ಕೂಡ) ಹೇಗೆ ಬಡವರೇ ಹೆಚ್ಚಾಗಿ ಸತ್ತರು ಎಂಬುದನ್ನು ಆಳವಾದ ಅಧ್ಯಯನದ ಮೂಲಕ ತೋರಿಸಲಾಗಿದೆ. ಮತ್ತು, ಹಾಗೆ ಬಡವರೇ ಹೆಚ್ಚಾಗಿ ಸಾಯಲು ಕೋವಿಡ್‌ಗಿಂತ ಅಸಮಾನತೆಯೇ ಹೇಗೆ ಮುಖ್ಯ ಕಾರಣವಾಗಿತ್ತು ಎಂಬುದನ್ನೂ ಆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅದೇ ವರದಿಯಲ್ಲಿ, ಕೋವಿಡ್ ಲಾಕ್‌ಡೌನ್‌ನಿಂದ ಇಡೀ ದೇಶದ ಆರ್ಥಿಕತೆ ತತ್ತರಿಸಿದ್ದಾಗಲೂ. ಗೌತಮ್ ಅದಾನಿಯವರ ಆಸ್ತಿ ಕೇವಲ ಒಂದೂವರೆ ವರ್ಷಗಳಲ್ಲಿ ಸಾವಿರಾರು ಕೋಟಿಗಳಷ್ಟು ಹೆಚ್ಚಾಗಿದ್ದು, ಭಾರತದಲ್ಲಿ ನೂರು ಜನ ಹೊಸಾ ಬಿಲಿಯನೇರುಗಳು ಸೃಷ್ಟಿಯಾಗಿದ್ದು ಮತ್ತು ಅದೇ ಒಂದೂವರೆ ವರ್ಷಗಳಲ್ಲಿ ಎಂಟೂವರೆ ಕೋಟಿಯಷ್ಟು ಭಾರತೀಯರು ಕಡುಬಡತನಕ್ಕೆ ಜಾರಿದ್ದನ್ನು ಅಧ್ಯಯನದ ಮೂಲಕ ತಿಳಿಸಲಾಗಿದೆ.

ಅಂದರೆ, ಇದು ಭಾರತ ಅಳವಡಿಸಿಕೊಂಡಿರುವ ಆರ್ಥಿಕ ನೀತಿಯ ಕಥೆಯನ್ನು ಹೇಳುತ್ತದೆ. ಹೇಗೆ ಇಡೀ ದೇಶ ಆರ್ಥಿಕವಾಗಿ ಹಿಂಜರಿದಾಗಲೂ ಅತಿ ಶ್ರೀಮಂತರು ಇನ್ನೂ ಶ್ರೀಮಂತರಾಗಲು ದೇಶದ ಆರ್ಥಿಕ ನೀತಿ ಪೂರಕವಾಗಿದೆ ಎಂದು Oxfam ವರದಿ ಸ್ಪಷ್ಟಪಡಿಸುತ್ತದೆ.

ಆದರೆ, Oxfam ವರದಿಯನ್ನು ತಿರಸ್ಕರಿಸಿದ ಒಕ್ಕೂಟ ಸರ್ಕಾರ ಈಗ ತನ್ನದೇ ವರದಿಯಲ್ಲಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅಸಮಾನತೆ ಜಾಸ್ತಿಯಾಗುತ್ತಲೇ ಬಂದಿರುವುದನ್ನು ಒಪ್ಪಿಕೊಂಡಿದೆ.
ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಪರಿಷತ್ ತನ್ನ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ವರದಿಯಲ್ಲಿ ಅಸಮಾನತೆ ಜಾಸ್ತಿಯಾಗುತ್ತಿರುವದನ್ನು ಒಪ್ಪಿಕೊಂಡಿರುವುದಷ್ಟೇ ಅಲ್ಲದೆ, ಇದರ ಅಪಾಯಗಳನ್ನೂ ಗುರುತಿಸಿದೆ.

ಯಾವುದೇ ಸಮಾಜದಲ್ಲಿ ಹೆಚ್ಚುತ್ತಿರುವ ಈ ಅಸಮಾನತೆಯ ತಣ್ಣನೆಯ ಕ್ರೌರ್ಯ ಏನು ಎಂಬುದು ‘Inequality kills ( ಅಸಮಾನತೆ ಕೊಲ್ಲುತ್ತದೆ) ಎನ್ನುವ ಈ ಒಂದೇಒಂದು ಪದಗುಚ್ಚದ ಮೂಲಕ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಸದ್ಯದ ಆರ್ಥಿಕ ನೀತಿಯೊಳಗೆ ಈ ಅಸಮಾನತೆಯನ್ನು ಒಂದು ಮಟ್ಟಿಗೆ ಕಡಿಮೆ ಮಾಡಲು ಇರುವ ದಾರಿಯೆಂದರೆ ಸಮಾಜ ಕಲ್ಯಾಣ (Social welfare scheme) ಕಾರ್ಯಕ್ರಮಗಳಿಗೆ ಹೆಚ್ಚುಹೆಚ್ಚು ಹಣ ಒದಗಿಸುವುದು ಮತ್ತು ದೈನಂದಿನ ಬಳಕೆ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡುವುದು.

ಆದರೆ, ನಮ್ಮ ದೇಶದ ದುರಂತವನ್ನು ಈ ಕಾಲಾನುಕ್ರಮದ ಮೂಲಕ ಅರ್ಥ ಮಾಡಿಕೊಳ್ಳಬಹುದು;

1) ಕಳೆದ ಜನವರಿಯಲ್ಲಿ Oxfam ವರದಿ ಬರುತ್ತದೆ.

2) ಆ ವರದಿಯಲ್ಲಿ ಸ್ಪಷ್ಟವಾಗಿ ಕೋವಿಡ್ ವೇಳೆಯಲ್ಲಿ ದೇಶದೊಳಗೆ ಅಸಮಾನತೆ ಮತ್ತಷ್ಟು ಹೆಚ್ಚಾಗಿರುವುದನ್ನು ತೋರಿಸಲಾಗಿರುತ್ತದೆ.

3) ಇದಕ್ಕೆ ಒಂದು ಮಟ್ಟದ ಪ್ರಮುಖ ಪರಿಹಾರವೆಂದರೆ ಸೋಷಿಯಲ್ ವೆಲ್‌ಫೇರ್ ಸ್ಕೀಮ್‌ಗಳಿಗೆ ಹೆಚ್ಚಿನ ಅನುದಾನ ಕೊಡುವುದೆಂದೂ ಹೇಳಲಾಗಿರುತ್ತದೆ.

ಆದರೆ, ಒಕ್ಕೂಟ ಸರ್ಕಾರ ಈ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಟಿನಲ್ಲಿ ಅತ್ಯಂತ ಅಮಾನವೀಯವಾಗಿ ಸೋಷಿಯಲ್ ವೆಲ್‌ಫೇರ್ ಸ್ಕೀಮ್‌ಗಳಿಗೆ ಕಳೆದ ವರ್ಷಕ್ಕಿಂತಲೂ ಕಡಿಮೆ ಹಣ ನಿಗದಿಪಡಿಸುತ್ತದೆ. ಅಂದರೆ, ಈ ದೇಶದಲ್ಲಿ ಅಸಮಾನತೆ ಕಡಿಮೆ ಮಾಡುವ ಯಾವ ಅಶಾಭಾವನೆಯನ್ನೂ ಈ ಬಜೆಟ್ ಹುಟ್ಟುಹಾಕುವುದಿಲ್ಲ.

ಈಗ ಸರ್ಕಾರದ ಸಮಿತಿಯ ವರದಿಯೇ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿರುವುದಾಗಿ ಹೇಳಿರುವುದನ್ನಾದರೂ ಒಕ್ಕೂಟ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಅಸಮಾನತೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ.

ಇಲ್ಲವಾದಲ್ಲಿ, ಈ ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಕುಸಿಯುವ ಅಪಾಯವಿದೆ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.


ಇದನ್ನೂ ಓದಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...